ಆಕಾಶದಷ್ಟು ಪ್ರೀತಿ ಇದೆ ಅನ್ನೋ ಎದೆಯಲ್ಲಿ
ಎಳ್ಳಷ್ಟು ಪ್ರೀತಿ ಇಲ್ದೇ ಇರಬಹುದು
ಎಳ್ಳಷ್ಟು ಪ್ರೀತಿ ಇಲ್ಲ ಅನ್ನೋ ಎದೆಯಲ್ಲಿ
ಆಕಾಶದಷ್ಟು ಪ್ರೀತಿ ಇರಬಹುದು
ಆ ಬಾನಲ್ಲಿ ಒಮ್ಮೆ ಅಮವಾಸೆ ಬಂತು ಅಂತ
ಚಂದ್ರನ ಜಾಗ ಬದಲಾಯಿಸಬಾರದು
ಅಮವಾಸೆ ಬಂದ ಮೇಲೆನೆ ಹುಣ್ಣಿಮೆ ಬರೋದು
ನಿನಗಾಗಿ ಕಾದೆ ಬರದೇನೆ ಹೋದೆ
ಪ್ರೀತಿಗಾಗಿ ಕಾದೆ ಸಿಗದೇನೆ ಹೋದೆ
ನಿನ್ನ ಹೆಸರ ಹಿಂದೆ ನನ್ನ ಹೆಸರ ಬರೆದೆ
ನೀ ದೂರ ಹೋದೆ ನನ್ನ ಬಿಟ್ಟು ಹಿಂದೆ
ಆಸೆಗಳ ಬುಟ್ಟಿ ನಾ ದಿನವು ಕಟ್ಟಿ
ಮನದಲ್ಲಿ ನಾನು ಪೂಜಿಸಿದೆ ನಿನ್ನ
ನಿನ್ನಿಂದ ತೂತಾದ ಹೃದಯವನು ನೆಚ್ಚಿ
ಇನ್ಯಾರ ಪ್ರೀತಿ ನಾ ಮಾಡ್ಲಿ ಚಿನ್ನ
ನಾ ದಿನವು ಕಾದದ್ದು ಬರಿ ಒಂದು ಕನಸೇ
ನಿನಗಾಗಿ ಕಾದಿದ್ದ ನೆನಪುಗಳು ಸೊಗಸೆ
ನೆನಪನ್ನು ನೆನಪಿಸುತ ನೆಪವಾಯ್ತು ಜೀವನ
ನನ್ನ ಕಣ್ಣೀರಿನ ನೋವಿಗೆ ನೀನಾದೆ ಕಾರಣ
ನನದೊಂದೇ ಆಶಯ ನೀನೆಲ್ಲೆ ಹೋದರೂ
ಯಾರೊಂದಿಗಿದ್ದರು ಸುಖವಾಗಿರು
ಕೊನೆಯಾಗಿದೆ ಇಂದು ನನ್ನ ಪ್ರೀತಿ ಕಥನ
ಇದೋ ಈ ಕವನಕೆ ಕಣ್ಣೀರಿನ ವಿರಾಮ...
ಭಾರತ2 ಇದು ನಮ್ಮ ಭಾರತ ಸ್ವಾತಂತ್ರ್ಯ ಭಾರತ|
ವೀರಧೀರಾಳಿದ ಭಾರತ ಸ್ವಾತಂತ್ರ್ಯ ಭಾರತ||ಪ||
ಬಾಪೂಜಿ,ನೇತಾಜಿ ಬೆಳಗಿದ ಭಾರತ|
ನೆಹರು,ಅಂಬೇಡ್ಕರ್ ಬೆಳಸಿದ ಭಾರತ||
ವಿಶ್ವೇಶ್ವರಯ್ಯ,ರಾಧಾಕೃಷ್ಣನ್ ನಿರ್ಮಿಸಿದ ಭಾರತ|
ವಿವೇಕಾನಂದ, ಅಬ್ದುಲ್ ಕಲಾಂರ ಕನಸ್ಸಿನ ಭಾರತ||
ಇದೇ ಸ್ವಾತಂತ್ರ್ಯ ಭಾರತ ಇದೇ ನಮ್ಮ ಭಾರತ||೧||
ಭಗತ್ ಸಿಂಗ್,ಆಜಾದ್ ಉಸಿರುಕೊಟ್ಟ ಭಾರತ|
ರಾಜಾದಿರಾಜ ಭರತನು ಹೆಸರುಕೊಟ್ಟ ಭಾರತ||
ಸುಲ್ತಾನ,ರಜಪೂತರು ಆಳಿದ ಭಾರತ|
ಸರ್ವ ಜಾತಿ-ಧರ್ಮಗಳು ಬಾಳಿದ ಭಾರತ||
ಇದೇ ಸ್ವಾತಂತ್ರ್ಯ ಭಾರತ ಇದೇ ನಮ್ಮ ಭಾರತ||೨||
ದೇಶಭಕ್ತರ ರಕ್ತ ಕಣಕಣ ಚೆಲ್ಲಿ ಪಡೆದ ಸ್ವಾತಂತ್ರ್ಯ ಭಾರತ|
ಪಾಶ್ಚಿಮಾತ್ಯರನ್ನು ಹೊರಗಟ್ಟಿ ಮೆಟ್ಟಿನಿಂತ ಭಾರತ||
ನಮ್ಮೆಲ್ಲರಿಗೂ ನೆಮ್ಮದಿಯ ಬದುಕುಕೊಟ್ಟ ಭಾರತ|
ವಿಶ್ವವೇ ತಲೆಬಾಗಿ ವಂದಿಸುವ ಪುಣ್ಯಭೂಮಿ ಭಾರತ||
ಇದೇ ಸ್ವಾತಂತ್ರ್ಯ ಭಾರತ ಇದೇ ನಮ್ಮ ಭಾರತ||೩||
ನೀ ಬಿಟ್ಟು ಹೋಗುವಾಗ
ಅಸ್ಪಷ್ಟತಯ ನೋಟ ಕಣ್ಣುಗಳಿಗೆ |
ಕಣ್ಣ ಹನಿಗಳು ನೋಡಲು ನಿನ್ನ ನಿಂತಿವೆ ಹೊರಗೆ
ನೀನೊಮ್ಮೆ ನೋಡು ತಿರುಗಿ |
ಅವಕಾಶ ಕೊಡಲು ಹನಿಯೂ ಜಾರಿ
ನೋಡಲಿ ಕಣ್ಣುಗಳು ಕೊನೆಯ ಬಾರಿ
ನಿನ್ನ ಮೋರೆಯ ನೆನಪಿಸಲು ಸಾರಿ ಸಾರಿ