Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗೆದ್ದಲಿಗೆ ಇದ್ದಿಲಿನ ಆಸರೆ

ಬೆಂಕಿಯಲಿ ದಹಿಸಿದ ಮರವೊಂದು
ಕಪ್ಪಾಗಿ ನೆಲಕ್ಕುರುಳಿತ್ತು ಇದ್ದಿಲಾಗಿ!!
ಅದೆಸ್ಟೋ ಕಾಲ ಯಾರಿಗೂ ಬೆಡವಾಗಿ
ಬಿದ್ದಲ್ಲೇ ಇದ್ದಿತ್ತು ಏಕಾಂಗಿಯಾಗಿ!!

ಗುಂಪಿದ ದೂರಾದ‌ ಗೆದ್ದಲು ಹುಳುವೊಂದು
ತುಂಬು ಗರ್ಭಿಣಿಯಾಗಿ ಅಲೆದಿತ್ತು ಆಸರೆಗಾಗಿ!!
ಇದ್ದಿಲನು ಕಂಡು ಗೆದ್ದಲು ಬಳಿಬಂದು
ಕೈ ಮುಗಿದು ಆಸರೆಯ ಬೇಡಿತ್ತು ಇದ್ದಿಲಲ್ಲಿ!!

ಗೆದ್ದಲನು ಕಂಡು ಇದ್ದಿಲು ಮನ ಕರಗಿ
ಆಸರೆಯ ನೀಡಿತ್ತು ಒಂಟಿ ಹುಳುವೆಂದು!!
ಇದ್ದಿಲಿನ ಆಸರೆಯಲ್ಲಿ ಗೆದ್ದಲು ಮೊಟ್ಟೆ ಇಟ್ಟು
ಸಂತಾನ ಬೆಳೆಸಿತ್ತು ಬಲು ಸಂತಸದಿಂದ!!

ಗೆದ್ದಲಿನ ಸಂತಾನ ಬಳ್ಳಿಯಂತೆ ಹಬ್ಬಿ
ಸುತ್ತುವರಿದು ಆವರಿಸಿತ್ತು ಇದ್ದಿಲನ್ನು!!
ಚೂರು ಬೆಳಕನು ಕೋರಿ ಇದ್ದಿಲು ಬೇಡಿದರೂ
ಕೇಳದೇ ಗುಡುಕಟ್ಟಿ ಗೆದ್ದಲು ನಲಿದಾಡಿದವು!!

ಇದ್ದಿಲಿನ ಸಹಾಯವನ್ನು ಮರೆತಿರುವ ಗೆದ್ದಲು
ಕೃತಜ್ನತೆಯ ತೋರದೇ ಮೆರೆದಾಡಿದವು!!
ಇದ್ದಿಲನ್ನು ಕೊರೆವ ಆಟವಟಡಿತು ಗೆದ್ದಲು
ಮಣ್ಣಲ್ಲಿ ಮಣ್ಣಾಗಿ ಅಸುನೀಗಿತು ಇದ್ದಿಲು!!

- ಪಿ.ಜಿ.ಜ್ಯೋತಿ

17 Aug 2017, 07:51 pm

ಇದ್ದೀತು...

ಇದ್ದರೂ ಇದ್ದೀತು
ಕಡಿಮೆ ಬೆಲೆಗೆ ಊಟ ದೊರೆತರೆ
ಜನ ಅಗಬಹುದೇನೋ
ಸೋಮಾರಿಗಳು !

ಪುರಾವೆ ಬೇಕೆಂದರೆ,
ಪಾರ್ಲಿಮೆಂಟಿನ ಕ್ಯಾಂಟೀನಿನಲಿ
ಕಡಿಮೆ ಬೆಲೆಗೆ ಊಟ ತಿಂಡಿ
ಸಿಗುತ್ತಿರುವುದರಿಂದಲೇ
ಆಗಿಲ್ಲವೇ ನಿಧಾನ
ಸರ್ಕಾರದ ಕೆಲಸಗಳು !!

- ಶ್ರೀಗೋ.

17 Aug 2017, 07:31 pm

ಕಪ್ಪು ಬಿಳುಪಿನ ಮನಸ್ಸು ಅಲ್ಲ

ಒ ಮನಸ್ಸೆ ಕಪ್ಪು ಎಂದು ಕಡೆಗಣಿಸದಿರು!
ಕಾಮನಬಿಲ್ಲು ನಾಚುವ ಮನಸ್ಸಿನ ಬಣ್ಣ‌ ನಿನ್ನದು.
ನಿನ್ನ ಕಣ್ಣ್ ಅಂಚಿನ ಬಿಳುಪ ನೋಡು!!
ಬಿಳಿ ಎಂದು ಕಡೆಗಣಿಸದಿರು ನಿನ್ನ ಕಣ್ಣ ಒಳಗಿನ ಬಿಳುಪಿಗೆ ನಾಟ್ಯವಾಡುವ ದೃಷ್ಟಿಯ ಹೊಳಪೆ ಕಾರಣ... ಭಾವನೆಗಳ ವ್ಯಕ್ತಪಡಿಸು..

ರಾಜೇಶ್

- ರಾಜೇಶ್

17 Aug 2017, 07:01 pm

ಒಲವು

ಮರಳಿನಲ್ಲಿ ಬರೆದ ನಿನ್ನ ಹೆಸರನು
ತುಂತುರು ಹನಿಗಳು
ಅಳಿಸಿಕೊಂಡು ಹೋಗಿದೆ ಹುಡುಗಿ
ಮಳೆಯ ಹನಿಗೇನು ಗೊತ್ತು
ನನ್ನ ನಿನ್ನ ಪ್ರೇಮ್ ಕಹಾನಿ
ನನ್ನ ಹೃದಯದಲ್ಲಿ ನಿನ್ನ ನೆನಪಿದೆ
ಸಾಕಲ್ಲವೇ ನನ್ನ ನಲ್ಲೆ!

- ಪ್ರಿಯಾಂಕ

17 Aug 2017, 06:10 pm

ಕೊನೆ ಅಸೆ..

ಮೌನದಲಿ ಮರೆಯಾದ ಕಣ್ಣ ಹನಿಗಳ ಕೂಡಿಡುವ ಆಸೆ ನನ್ನದು
ಕ್ಷಮಿಸಿಬಿಡು ನನ್ನ ಕಣ್ಣಿಂದ ಹನಿಯು ಜಾರಿದರೆ!
ನಂಬಿಕೆಯ ಉಸಿರ ಕೊಡು ನನ್ನ ಅನುಮಾನಿಸದಲೇ
ಸಾದ್ಯವಾಗದಿದ್ದರೆ ಸಾವಕೊಡು ಈ ಗಳಿಗೆಯಲೇ!!
ಸಾವ ಕೊಡುವ ಮುನ್ನ ನನ್ನ ಕೊನೆಯಾಸೆಯ ಕೇಳು!!!
ನನ್ನ ನಂಬಿಕೆಯ ಉಳಿಸಲಾದರೂ ನನ್ನ ಗೆಳೆತಿ...

- ರಾಜೇಶ್

17 Aug 2017, 04:25 pm

ಪಾಠ

ಕನಸಿನಲ್ಲಿ ಕಂಡಂತೆ ದುಃಖದ ಮನದಲ್ಲಿ.
ಜೀವನದ ಹೋರಾಟದ ದಾರಿಯಲ್ಲಿ.
ಅಕರ್ಷಣೆಯ ಸ್ನೇಹ. ಪ್ರೀತಿಯೆಂಬ.
ಸೇತುವೆಯಲ್ಲಿ ಜೀವನ ಪೂರ್ತಿ ಜೊತೆ ಇರುವ.
ಇಲ್ಲ ಜೀವನ ಪೂರ್ತಿ ಒಳ್ಳೆಯ ಪಾಠ ಕಲಿಯುವೆ.

ರಾಜೇಶ್.

- ರಾಜೇಶ್

17 Aug 2017, 11:41 am

ಮನಸಿನ ಮೌನ

ಅವನ ನೋಡಿದಾಗ ಮನಸಿನ ಮೌನ
ಹೊರಬಂದು ನನ್ನನ್ನು ಆವರಿಸಿ
ಮಾತನಾಡದೇ ಬರೀ ನೋಟದಲ್ಲೇ
ನಡೆಸಿತೇ ಮೌನದ ಚಳುವಳಿ!!

ಆವನ ಆಣತಿಗಾಗಿ ಕಾದು ಕುಳಿತ
ಈ ಮನದ ಮೌನದ ಅಪೇಕ್ಷೆಯು
ಅವನು ಆಡುವ ಸವಿ ನುಡಿಗಳ ಜೊತೆ
ಬೆರೆಯ ಬೇಕು ಎ‌ನ್ನುವುದು ಅಷ್ಟೇ!!

ಈ ನನ್ನ ನೋಟವನ್ನು ಅವನು
ಕಂಡೂ ಕಾಣದಂತೆ ನಟಿಸಿ ಹೊರಟ
ಆದರೂ ಈ ನನ್ನ ಮೌನದ ಹಿಂದಿನ
ಸಂಭಾಷಣೆ ಅವನಿಗಾಗೇ ಕಾದಿದೆ!!

- ಪಿ.ಜಿ.ಜ್ಯೋತಿ

17 Aug 2017, 11:26 am

ಸ್ವಾರ್ಥಲೋಕ

ಮೌನ ಮಾತನ್ನು ಬಂದಿಸುತ್ತಿದೆ
ನಿಶಬ್ದ ಮನಸನ್ನು ಉಸಿರಾಡಂತೆ ಕಟ್ಟಿ ಹಾಕುತ್ತಿದೆ............

ಕನಸು ನನಸನ್ನು ನೋಯಿಸಿ ಬದುಕುತ್ತಿದೆ ನಿಜವಾದರೆ ನಾನು ಕನಸಾಗಿ ಉಳಿಯುವುದಿಲ್ಲ ನಿನ್ನಲ್ಲಿ ಎಂದು..................

ಭೂಲೋಕವಲ್ಲವಿದು ಸ್ವಾರ್ಥಲೋಕ
ಅವರಸಕ್ಕೆ ಮನುಶ್ಯರು ಕೆಲಸವಿದ್ದರೆ ಮಾತುಗಳು....................

ಸಿಹಿ ಜೇನಿಗಿಂತ ಸವಿಯಾದ ಮಾತುಗಳು ಮನದಲ್ಲಿ ಎಂದಿಗೂ ತೊಳೆಯಲಾಗದ
ಕಲ್ಮಶ ಸುಟ್ಟರು ಹೋಗುವುದಿಲ್ಲ ಈ ಸ್ವಾರ್ಥ ಜನರಲ್ಲಿ...................

ಮಣ್ಣಿಗಿಲ್ಲದ ಸ್ವಾರ್ಥ ಗಾಳಿಗಿಲ್ಲದ ಸ್ವಾರ್ಥ
ನೀರಿಗಿಲ್ಲದ ಸ್ವಾರ್ಥ ಅವುಗಳ ಮೇಲೆ
ಆಧರಿತವಾಗಿ ಬದುಕುವ ಈ ಅನ್ಯಾಯದ ಪಾಪಿ ಜನರಿಗೆತಕೆ ಎಂದು ತಿಳಿಯಲ್ಲ ನನಗೆ..............

ಒಬ್ಬರ ಸಂತೋಷ ನೋಡಲಾರರು
ತಾವೆಂದು ಸಂತೋಷವಾಗಿರಲಾರರು
ಮಾತು ಬಾರದ ಲೋಕವೊಂದಿದ್ದರೆ ಎಷ್ಟು ಚಂದ ಆಗೇನಾದರು ಇದ್ದಲ್ಲಿ ಯಾವ ಮನುಷ್ಯನು ಜೀವಂತವಾಗಿ ಸತ್ತ ಮನಸ್ಸಿನೊಡನೆ ಬದುಕುವ ಪರಿಸ್ಥಿತಿ ಬರಲಾರದು ಎಂದಿಗೂ..............

- ಚುಕ್ಕಿ

17 Aug 2017, 11:02 am

ಗಲ್ಲದ ಮೇಲಿ‌ನ ಕಪ್ಪು ಮಚ್ಚೆ

ಬೆಳ್ಳಗಿನ ಮೊಗದಲ್ಲೊಂದು
ಗಲ್ಲದ ಮೇಲಿನ ಕಪ್ಪು ಮಚ್ಚೆ!!
ಹುಣ್ಣಿಮೆಯ ಚಂದಿರನಿಗೆ
ದೃಷ್ಟಿಯ ಬೊಟ್ಟು ಇಟ್ಟಂತೆ!!

ವಿಪರೀತವಾದ ಆ ಸೌಂದರ್ಯ
ಅಪರೂಪದ ಸೃಷ್ಟಿಯ ವೈಭವ!!
ಮೊಗದಲ್ಲಿನ ಆ ಕಪ್ಪು ಮಚ್ಚೆಯ
ವಿವರಿಸಲು ಪದಗಳೇ ಸಾಲದು!!

ಚಂದಿರನ ಕಾಂತಿಯ ಚಲುವಿಗೆ
ಚಂದವು ಈ ಗಲ್ಲದ ಕಪ್ಪು ಮಚ್ಚೆ!!
ಅಂದವಾದ ರೂಪವ ಆಳುವ
ಸುಂದರ ಈ ಗಲ್ಲದ ಕಪ್ಪು ಮಚ್ಚೆ!!

ಸಲ್ಲದು ಯಾರ ಚಂದದ ರೂಪ
ತಡೆವುದು ಎಲ್ಲ ದೃಷ್ಟಿಯ ಕೂಪ!!
ಅಂದವ ಕಾಯುವ ಕಾವಲು ತಂತ್ರ
ದೃಷ್ಟಿ ಬೊಟ್ಟಿದು ನುಡಿಸಿತು ಮಂತ್ರ!!

- ಪಿ.ಜಿ.ಜ್ಯೋತಿ

17 Aug 2017, 10:56 am

ಸೂರ್ಯ ನಲಿದು ಬರಲು

ಕತ್ತಲು ಮೆಲ್ಲ ಸರಿಯುತಿದೆ
ಬೆಳಕು ಎಲ್ಲೆಡೆ ಪಸರಿಸುತಿದೆ
ಹಕ್ಕಿಯ ಗಾನವು ಸ್ವಾಗತ ಕೋರಿ
ಮೂಡಣದಿ ಉಷೆಯ ಕರೆಯಿತು

ಹೊನ್ನತೇರಿನಲಿ ರಾಜ ಗಾಂಭೀರ್ಯದಲಿ
ರವಿ ತೇಲಿಬಂದ ಆಗಸದಲ್ಲಿ
ಜಗವೆಲ್ಲ ಝಘಮಗಘಿಸಿತು
ಬೆಳ್ಳಂಬೆಳಕು ಈಗಾಯ್ತು

ಬಿರಿದ ಮೊಗ್ಗು ದಳ ಬಿಚ್ಚಿ
ದುಂಬಿ ಮಧುಹೀರಿತು ಝೇಂಕರಿಸಿ
ಬೀಸೋ ತಂಗಾಳಿ ಚಾಮರ ಬೀಸಿ
ಮೆಲ್ಲ ಜಗದ ತಲೆ ನೇವರಿಸಿತು

ಸಾಗರದ ನೀರಿಗೆ ಹೊಂಬಣ್ಣ ಚೆಲ್ಲಿ
ಎಲೆಯ ಮೇಲೆಲ್ಲಾ ಇಬ್ಬನಿ ಹರಡಿ
ಹರಿವ ನೀರಿನ ನಿನಾದಕೆ ಮರುಳಾಗಿ
ಸೂರ್ಯ ನಲಿದು ಬರಲು ಹಗಲಾಯ್ತು

ನಿಸರ್ಗದ ಈ ವಿದ್ಯಮಾನ
ಕವಿಗಾಯಿತು ಚೇತನ
ಕಲ್ಪನೆಯ ಕೂಸು ಹಡೆದವನ
ಬರಹದಲ್ಲಿ ಸುಂದರ ಕವನ ಜನಿಸಿತು

0537ಎಎಂ17082017

*ಅಮುಭಾವಜೀವಿ*

- ಅಮುಭಾವಜೀವಿ (ಅಪ್ಪಾಜಿ ಎ ಮುಸ್ಟೂರು )

17 Aug 2017, 05:58 am