Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅರಗಿಣಿಯ ಮಾತು

ಅರಗಿಣಿಯ ಕಂಠದಿಂದ
ಹೊರಬಂದ ಸವಿ ಮಾತೊಂದು
ಹಿತ ನೀಡಿ ಮುದಗೊಳಿಸಿತು ನನ್ನ
ಅದು ನುಡಿದಿರುವ ಮಾತು ಬಲು ಚೆನ್ನ!!

ಹೆದರಿ ಹೆದರಿ ನುಡಿಯದೇ ಗಿಣಿಯು
ನೇರವಾಗಿ ನುಡಿಯುವಾಗ
ಮಾತು ಮರೆತ ಮೌನಿಯಂತೆ
ಬೆರಗಾಗಿ ಹೋದೆ ನಾನು ಅದ ಕೇಳುತ!!

ಬಿಂಕದ ಬಿಗುಮಾನ ಚೆನ್ನ
ವಯ್ಯಾರದ ವರೆಸೆಯು ಚೆನ್ನ
ಅಪರೂಪವಾದ ಈ ಅರಗಿಣಿಯು
ಸೊಕ್ಕಿ ನುಡಿಯುವ ಮಾತು ಬಲು ಚೆನ್ನ!!

ಮೋಹದಿಂದ ನೋಡುತ ನನ್ನ
ಮಾತನಾಡಿ ಕಾಡುವ ಗಿಣಿಯು
ಹೆಗಲೇರಿ ಕುಳಿತ ಪರಿ ಚೆನ್ನ
ನನ್ನ ಮಾತಿಂದ ಸೆಳೆದ ಪರಿ ಚೆನ್ನ!!.

- ಪಿ.ಜಿ.ಜ್ಯೋತಿ

20 Aug 2017, 08:54 am

ನೆನಪೆಂಬ ಕೈಪಿಡಿ

ನೆನಪೆಂಬ ಕೈಪಿಡಿಯಲ್ಲಿ
ಬರೀ ನಿನ್ನದೇ ಬರವಣಿಗೆ!!
ಓದಿದರೂ ತೀರದ ಪುಟಗಳ
ಸಾಲು ಸಾಲು ಮೆರವಣಿಗೆ!!

ಅಚ್ಚರಿಯ ವಿಷಯವದು
ನೀ ನನ್ನ ಪ್ರೀತಿಸಿದ ಬಗೆ!!
ಪ್ರೀತಿಸಿಯೂ ದೂರವಾದೆ
ಒಂದು ಮಾತೂ ಹೇಳದ ಹಾಗೆ!!

ಕೊನೆವರೆಗೂ ಕಾದಿಡುವೆ
ನಿನ್ನ ನೆನಪಿನ ಈ ಕೈಪಿಡಿಯ!!
ಮತ್ತೆ ಕಾದಿವೆ ಅಸಂಖ್ಯ
ಪುಟಗಳು ನಿನ್ನ ಬರವಣಿಗೆಗೆ!!

ಎಂದಾದರೂ ಒಂದೊಮ್ಮೆ
ಬರೆಯುವ ಮನಸು ಮಾಡು!!
ಬರೆದು ಪೂರ್ಣಗೊಳಿಸಿ
ಈ ಕೈಪಿಡಿಗೆ ಒಂದು ಅರ್ಥ ತಾ!!

- ಪಿ.ಜಿ.ಜ್ಯೋತಿ

20 Aug 2017, 08:42 am

ಬರಹ

"ಹೆಚ್ಚು ಬರೆದಳಲ್ಲ
ನಿಚ್ಚ ಬರೆದವಳಲ್ಲ
ಮೆಚ್ಚಿಸಲು ಬರೆಯುವಭ್ಯಾಸವಿಲ್ಲ
ಇಚ್ಚೆಗೆದೆಯೊಪ್ಪಿ ಬಗೆ
ಬಿಚ್ಚಿದರೆ ಕಣ್ಗೆ ಮಯ್
ಎಚ್ಚು ವಂದದಿ ತಿದ್ದಿ ತೀಡಿ ಬರೆವೆ

- Anitha

19 Aug 2017, 09:35 pm

ಕನಸಿನ ಹುಡುಗಿ

ನೀನು ಕನಸಿನ ಹುಡುಗಿ
ನನ್ನೆದುರು ನೀ ನಿಂತರೂ
ನಾ ಮಾತ್ರ ನಿನ್ನೆದುರು ಮೌನಿ....
ನನ್ನ ಕನಸಿನಲ್ಲಿ ಬಂದು
ಮುದ್ದು ಮಾತಿಂದ
ನನ್ನ ಹೃದಯವ ಕದ್ದರೂ...
ನೀನೆ ನನ್ನ ಹೃದಯದರಸಿ ಎನ್ನಲು
ಭಯವಾಗುತ್ತಿದೆ ಕಣೆ ಹುಡುಗಿ.....!

- ಪ್ರಿಯಾಂಕ

19 Aug 2017, 08:47 pm

ಮೌನದ ಮಾತು...!!

ಮೌನ ಮುದುಗಿತು ನಿಟ್ಟುಸಿರ ಶಾಖಕೆ ಪಯಣ ಸಾಗಿದೆ ಪರಿಕಲ್ಪನೆಯ ಪಥಕೆ..
ಸಾಕ್ಷಿಗಿದೆ ಮುಗಿದ ಮಳೆಯ ನೀರಿನ ಶಬ್ಧ
ಪರಿವಿಲ್ಲದ ಸುಖ ಕಣ್ಣೀರಿನ ವಿರುದ್ಧ...

ನನ್ನೀ ಭಾವಗಳ ಸಾಮ್ರಾಜ್ಯದ ಬೀದಿಯಲ್ಲಿ
ಸದ್ದಿಲ್ಲದೇ ಸೇರ್ಪಡೆಗೊಂಡ ನಿನ್ನೀ ಭಾವನೆಯಲ್ಲಿ....!!
ಮೌನ ಮಾತಿನ ನಡುವೆ ಚೂರಾಗಿದೆ ಕನಸುಗಳ ಹೃದಯ
ಸ್ವಾರ್ಥ ಸಾಧನೆಯಲ್ಲಿ ಭಾವನೆಗಳಿಗೆಲ್ಲಿದೆ ಬೆಲೆ.??

ಮಳೆಹನಿಯ ಸುರಿಸಿದ ಮುಗಿಲಿಗೂ ಬೇಸರವಂತೆ
ಒಡೆದ ಹೃದಯವು ಬಹಳ ಗಟ್ಟಿಯಂತೆ ...
ದನಿಯಿಲ್ಲದೆ ನೀಡಿದ ಮಾತಿನ ಉತ್ತರಕ್ಕೆ
ಮನವಿಲ್ಲದೆ ನೀಡಿದ ಮೌನದ ಪ್ರತ್ಯುತ್ತರ...!!!

- Nootana Hebbar

19 Aug 2017, 07:58 pm

ಹೃದಯದರಮನೆ

ನನ್ನನು ಏಕಾಂಗಿಯಾಗಿಸಿ
ಬಹುದೂರ
ಸಾಗಿರುವೆಯಲ್ಲ ನೀನು!
ನೀ ನನ್ನ ದೂರಮಾಡಿದರೂ
ದಿನವೂ ನನಗೆ
ತಾಳಲಾಗದಷ್ಟು ಹೃದಯಬೇನೆ!

ಕಣ್ಣಿಂದ ಮರೆಯಾದ ಮೇಲೆ
ಮನಸ್ಸಿಂದ ದೂರಾಗಲು
ನೆಪವೇಕೆ?
ಒಪ್ಪಿಕೊಂಡ ಹೃದಯದಲ್ಲೀಗ
ನೀಬಿಟ್ಟು ಹೋದಂತಹ
ಸಿಹಿನೆನಪುಗಳು ಕಾಡುತ್ತಿವೆ!

ಉಸಿರಿನ ಕಣಕಣದಲ್ಲಿ
ಸೂಚನೆ ಇಲ್ಲದ
ನಿನ್ನದೇ ಯೋಚನೆ.
ನಿನ್ನ ನೆನಪಿನಂಗಳದಲ್ಲಿ
ಹುಸಿಕನಸಿನ ಜೊತೆಯಲ್ಲಿ
ಮತ್ತೆ ನಿನಗಾಗಿ ಕಾಯುತ್ತಿದೆ
ನನ್ನ ಈ ಪ್ರೀತಿಯ
ಹೃದಯದರಮನೆ!

- ಪ್ರಿಯಾಂಕ

19 Aug 2017, 07:29 pm

ಮಳೆ

ಧೋ ಎನ್ನುವ ಮಳೆ ಸದ್ದು ಛತ್ರಿಯಿಲ್ಲದೆ ಮನಗಳಿಗೆ ಓಡುವ ಮಕ್ಕಳ ಹೆಜ್ಜೆ ಸದ್ದು
ತಿಳಿನಿರ ತಂಪಲ್ಲಿ ಸ್ನಾನ ಮಾಡುವ ಎಲೆಗಳ ಸದ್ದು ಕೇಳುತ್ತಿರುವ ನನ್ನ ಮನಕೆ ಆ ಮಳೆಯಲ್ಲಿ
ನೆನೆಯುವ ಆಸೆಯೇ ಮುದ್ದು..................

ಚಪ್ಪರದ ಮೇಲಿಂದ ಜಾರುತ್ತಿದೆ ನೂರು ಹನಿಗಳು ಟಪ್ ಟಪ್ ಸದ್ದು ಮಾಡುತ್ತಾ
ಮಿಂಚಿಲ್ಲದ ಸೋನೆಯಿದು ಗುಡುಗಿಲ್ಲದ ಮುಂಗಾರಿನ ಅಬ್ಬರಕ್ಕೆ ಮನಸೋತ ಕ್ಷಣವಿದು...............

ಸೂರ್ಯನ ಕಣ್ಣುಮುಚ್ಚಿ ರಾತ್ರಿಯ ಕತ್ತಳನ್ನು
ಸಾಲವಾಗಿ ಕರೆತಂದ ಹಿಂಗಾರು ಮಳೆಬಿಲ್ಲಿನ ಸವಿ ಸೋಜಿಗದ ಸುಂದರದ ಕಾರುಬಾರು........

- ಚುಕ್ಕಿ

19 Aug 2017, 04:23 pm

ಬಾ ಬೇಗ

ಮತ್ತೆ ಮಳೆಯಾಗಿದೆ ಮನದಲ್ಲಿ. ಮನದಿ ಕಾಮನಬಿಲ್ಲು ಕಾಣತೊಡಗಿದೆ.
ಮಂಜುಗಡ್ಡೆ ಭೂಮಿ ಸೇರೊ ಮುನ್ನ. ಮನೆಯೆಂಬ ಜೇನುಗೂಡು ಹನಿಯ ಹಂಬಲಿಸಿದೆ. ಬಾ ಒಡತಿ
ಬಾಳ ಮನದಿ ಕತ್ತಲು ಕವಿಯೊ ಮುನ್ನ ಬಾ ಬೇಗ ಒಡತಿ...

ರಾಜೇಶ್..

- ರಾಜೇಶ್

19 Aug 2017, 12:23 pm

ಭರತ

ಭರತನೆ ನೀನು ಮರೆತೆಯಾ ನಿನ್ನನೆ?
ಮುಸುಕಿನ ಭ್ರಮೆಯಲಿ ಮರೆತೆಯಾ ನಿನ್ನನೆ?

ವೀರರ ಶೂರರ ಗತವೂ ನಿನ್ನದು
ರಾಮ ಕೃಷ್ಣರ ವಂಶವು‌ ನಿನ್ನದು
ಶಕ್ತಿಯ ಯುಕ್ತಿಯ ಪುತ್ರನು‌ ನೀನು
ರಾಣಾ‌ ಶಿವಾಜಿಯ ವಂಶಜ‌ ನೀನು !೧!

ಚಾಣಕ್ಯನ ಚಾಣಾಕ್ಷತನವೂ ನೀನೆ
ಆರ್ಯಭಟನ‌ ಜ್ಞಾನವೂ ನೀನೆ
ಸ್ವಾಮಿ ವಿವೇಕರ ಅಧ್ಯಾತ್ಮವು ನೀನೆ
ಶಂಕರ ಮಧ್ವರ ಆತ್ಮವು ನೀನೆ !೨!

ಬಸವರ-ಅಕ್ಕನ ವಚನಾಮೃತ ನೀನು
ಪುರಂದರ ಕನಕರ ಗಾನಾಮೃತ ನೀನು
ಭೀಮರಾವರ ಭವಿಷ್ಯವು ನೀನು
ರಾಮನ್ನರು ಕಂಡ ಬೆಳಕಿನ ಕೀರಣವು‌ ನೀನೆ !೩!

ಬುದ್ಧನ ಶಾಂತಿಯ ತತ್ವವು ನೀನೆ
ತತ್ವವ ಪೂಜಿಪ ಭಕ್ತನು ನೀನೆ
ಸಮಾಜದಿ ಬರುವ ಮಹಿಷಾಸುರರಿಗೆ,
ದುರ್ಗಾಮಾತೆಯ ಕ್ರೋಧವು ನೀನೆ !೪!

- Sindhur

19 Aug 2017, 07:41 am

ಧಾರವಾಹಿ

ಕಣ್ಣಿಗೆ ಕಾಣುವ ಕಥೆಗಳೆಲ್ಲಾ ಕಿರುತೆರೆಯಲ್ಲಿ ನಿಜದಂತೆ ತೋರಿಸುವವರು ನಮ್ಮ ಸಮಯ ವ್ಯಾಪಾರವ್ಯೆಕ್ತರು ಧಾರವಾಹಿಯ ರೂಪದಲ್ಲಿ..............

ಇರುವ ಬುದ್ಧಿಯನ್ನೆಲ್ಲಾ ಬದಿಗಿಟ್ಟು ಕೆಲಸಗಳಿಗೆ ನೂರು ಕಾರಣ ಹೇಳಿ ಕೈಕಟ್ಟು ಕೈಯಲ್ಲಿ ಜೀವವಿಲ್ಲದ ರಿಮೋಟನ್ನು ಕುರಿಸಿಟ್ಟು ಕುರುವರು ನಮ್ಮ ಹೆಂಗಸರು ಗಂಡಂದಿರ ಹೊಟ್ಟೆಗಳಿಗೆ ಕಾಫಿ ನೀರನ್ನು ಕೊಟ್ಟು..........

ನಾಯಕ ನಟಿ ನಟರ ಕಣ್ಣೀರಿಗೆ ಇವರ ಮನಸು ಕಣ್ಣೀರು ಸುರಿಸುತ್ತದೆ ಅವರ ವೈರಿಗಳ ಮೂತಿಗಳಿಗೆ ಬೈಗೊಳದ ಮಳೆ ಸುರಿಯುತ್ತದೆ...........

ನೋಡುವರು ಬಿಡುವಿಲ್ಲದೆ ಕಣ್ಣು ಬಿಟ್ಟುಕೊಂಡು ತಮ್ಮ ಮನೆಯ ಕಷ್ಟಗಳು ಮರೆಯಲೆಂದು ಧಾರವಹಿಗಳಲ್ಲಿನ ಕಥೆಯಲ್ಲಿ ಸುಳ್ಳು ಕಷ್ಟಗಳನ್ನು...............

ಹೊರಗೋದರು ಅದೇ ಪುರಾಣ ಆ ಧಾರವಾಹಿಯಲ್ಲಿ ಅವಳು ಅಂತಹವಳು ಅಯ್ಯೋ ಪಾಪು ನಮ್ಮವರೆಂದು ನಗೆಯ ಮಾತು ಕೇಳಿದವರಿಗೆ ಯಾರ ಬಗ್ಗೆ ಇವರ ಮಾತೆಂದು ತಿಳಿಯದವರಿಗೆ ನಿಜವೆಂದು ನಂಬಿದರೆ...............

ಬೆಳ್ಳಿತೆರೆಯ ಸೆದೆಬಡಿದು ತಾವಿಂದು ಅಗ್ರ ಸ್ಥಾನ ಪಡೆದಿರುವವರರು ಕಿರುತೆರೆಯ ಕುಲಂಕುಶ ನಿರ್ದೇಶಕರು................

- ಚುಕ್ಕಿ

18 Aug 2017, 11:33 pm