Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಂಬರದಲ್ಲಿ ಚಂದಿರ

ಚಂದಿರನೋರ್ವನು
ಅಂಬರದಲ್ಲಿ
ಹುಣ್ಣಿಮೆ ನಗು ಚೆಲ್ಲಿ!!

ಬೆಳಕನು ಬೀರಿದ
ಬಾನಿನ ತುಂಬ
ರಾತ್ರಿಯ ತಂಪಲ್ಲಿ!!

ಇರುಳನ ಹಂಗನು
ತೊರೆಯುವ ಚಂದಿರ
ಮೂಡಿದ ಬಾನಲ್ಲಿ!!

ರಾತ್ರಿಯ ಕಳೆಯಲು
ನೇಸರ ಉದಿಸಲು
ಚಂದಿರನ ಸುಳಿವೆಲ್ಲಿ!!

- ಪಿ.ಜಿ.ಜ್ಯೋತಿ

23 Aug 2017, 09:35 am

ಜ್ಞಾನ ದೇಗುಲದೊಳು

ಜ್ಞಾನ ದೇಗುಲದೊಳು ಅಜ್ಞಾನ ನೀಗಿಸಿ
ಹರಸು ನಮ್ಮ ಶಾರದಮ್ಮ!!
ಲೋಕ ಮಾತೆ ಪೂಜ್ಯ ಧಾತೆ
ನಮ್ಮನೆಲ್ಲ ಹರಸುವಾತೆ!!
!!ಜ್ಞಾನ ದೇಗುಲದೊಳು ತಾಯಿ
ಜ್ಞಾನ ದೇಗುಲದೊಳು!!

ಗಂಗೆ ತುಂಗೆ ತೀರದಲ್ಲಿ
ತಾಯಿ ಶಾರದೆ ಪಾಠವಿಲ್ಲಿ!!
ವೇದ ಮಂತ್ರದ ಬೋಧನೆಯನ್ನು
ಆಲಿಸಿ ಕಲಿತ ಹರುಷವಿಲ್ಲಿ!!
!!ಜ್ಞಾನ ದೇಗುಲದೊಳು ತಾಯಿ
ಜ್ಞಾನ ದೇಗುಲದೊಳು!!

ವಿದ್ಯೆ ಎಂಬ ದಾರಿಯಲ್ಲಿ
ಕೈಯ ಹಿಡಿದು ನಡೆಸುವಾಕೆ!!
ನಮ್ಮ ಮನದ ಶ್ರದ್ಧೆಯಲ್ಲಿ
ತಾನೇ ಬಂದು ನೆಲೆಸುವಾಕೆ!!
!!ಜ್ಞಾನ ದೇಗುಲದೊಳು ತಾಯಿ
ಜ್ಞಾನ ದೇಗುಲದೊಳು!!

ವಿದ್ಯೆಯಲ್ಲಿ ಜ್ಞಾನ ಇಟ್ಟು
ಅಜ್ಞಾನವನ್ನು ಕಳೆಯುವವಳು!!
ಸುಜ್ಞಾನದ ದೀಪ ಹಚ್ಚಿ
ನಮ್ಮ ಬದುಕ ಬೆಳಗುವವಳು!!
‌‌‌ ‌‌ !!ಜ್ಞಾನ ದೇಗುಲದೊಳು ತಾಯಿ
ಜ್ಞಾನ ದೇಗುಲದೊಳು!!

- ಪಿ.ಜಿ.ಜ್ಯೋತಿ

23 Aug 2017, 09:18 am

ತಾಯಿ ಭಾರತೀ

ಹೊಕ್ಕಳ ಬಂಧವಿಲ್ಲ
ಹೆತ್ತವಳು ಇವಳಲ್ಲ
ಹೊತ್ತು ನಮ್ಮ ಸಲಹುತಿಹಳು
ಭಾರತೀ ತಾಯಿ ಭಾರತೀ!!

ಮೂರು ಬಣ್ಣ ನೂರು ಕಣ್ಣು
ನಮ್ಮ ಅಣ್ಣ ನಮ್ಮ ತಮ್ಮ
ಬಾಂಧವ್ಯ ಬೆಸೆದಿಹಳು
ಭಾರತೀ ತಾಯಿ ಭಾರತೀ!!

ಜಾತಿ ಬೇರೆ ಆದರೇನು
ಕುಲವೊಂದೇ ನಮ್ಮದು
ನೆಮ್ಮದಿಯ ಬದುಕು ಕೊಟ್ಟ
ಭಾರತೀ ತಾಯಿ ಭಾರತೀ!!

ಬಣ್ಣ ಕೊಟ್ಟು ಭಾಷೆ ಕೊಟ್ಟು
ಮಡಿಲಿನಲ್ಲಿ ಜಾಗ ಕೊಟ್ಟು
ಮಮತೆಯಿಂದ ಸಲಹುತಿಹಳು
ಭಾರತೀ ತಾಯಿ ಭಾರತೀ!!

- ಪಿ.ಜಿ.ಜ್ಯೋತಿ

23 Aug 2017, 08:35 am

ತನುವಿನ ಕೋಟೆ

ನಲ್ಮೆಯ ಗೆಳೆಯ ಪ್ರೀತಿಯ ಇನಿಯ
ಮುಗಿಲೆತ್ತರದ ಪ್ರೇಮ ನಮ್ಮದು!!
ಬಿಸಿ ನೆತ್ತರು ಪ್ರತೀ ಕ್ಷಣವೂ
ಅದನ್ನು ಸರಾಗವಾಗಿ ಬಿಂಬಿಸುತ್ತಿರುವುದು!!

ನನ್ನ ತನುವಿನ ಕೋಟೆಯನ್ನು
ಆಳುತ್ತಿರುವ ಏಕೈಕ ದೊರೆ ನೀನು!!
ನಿನ್ನ ಆಗಮನದ ನಂತರ ಈ ಬದುಕಿನಲ್ಲಿ
ತುಂಬಿಹುದು ಬರೀ ಸಂಭ್ರಮದ ಕ್ಷಣಗಳೇ!!

ಹೃದಯ ಕೋಣೆಯ ನಾಲ್ಕು ಬಾಗಿಲ
ಒಳಗೆ ಇರುವುದು ನಿನ್ನಯ ಆಲಯ!!
ಯಾವ ಬಾಗಿಲನ್ನು ನೀ ತೆರೆದರೂ
ಸುತ್ತಿಯೇ ಬರಬೇಕು ನನ್ನ ನರ ನಾಡಿಯ!!

ಪ್ರತೀ ಕ್ಷಣವೂ ನೀ ನನ್ನ ತನುವಿನೊಳಗೆ
ಸಂಚರಿಸಿ ನನ್ನಲ್ಲಿ ಜೀವ ಕಳೆ ತುಂಬು!!
ಅರೆ ಕ್ಷಣ ನೀನು ಮರೆಯಾದರೂ
ಈ ಕೋಟೆ ಸದ್ದಿಲ್ಲದೇ ಸಮಾಧಿಯಾದೀತು!!

- ಪಿ.ಜಿ.ಜ್ಯೋತಿ

23 Aug 2017, 08:33 am

ಮೇಘ.....

ಬರಡು ಭೂಮಿಯ ಮಧ್ಯೆ
ಆಗಸದತ್ತ ಮುಖಮಾಡಿ,
ಒಬ್ಬಂಟಿಯಾಗಿ ಕುಳಿತಿದ್ದಾನೆ
ಬಾರದ ಮೇಘರಾಜನಿಗಾಗಿ ಕಾದು!

ಮೇಘರಾಜನ ಭೂಸ್ಪರ್ಶಕೆ
ಹಸಿರಾಗಿರಲು ಬರಡು ಭೂಮಿಗಳು,
ಹರುಷವುಕ್ಕಿಸಿವೆ ರೈತನ ಮೊಗದಲಿ
ಕೃತಜ್ಞತೆಯ ಬಿಂದುವೊಂದು!


ವಾಯುದೇವನ ಆರ್ಭಟಕೆ
ಧೂಳಿಪಟವಾಗಿವೆ ಗುಡಿಸಲುಗಳು,
ಮೇಘರಾಜನಿಗೆ ಪೈಪೋಟಿಯಂತೆ
ಗುಡುಗು-ಮಿಂಚುಗಳ ಸೆಣಸಾಟ!

ಮೇಘರಾಜನ ರೌದ್ರನರ್ತನಕೆ
ಕೊಚ್ಚಿಹೋಗುತ್ತಿವೆ ಫಸಲುಗಳು,
ಭರವಸೆಗಳ ಹೊತ್ತ ರೈತನ ಕಂಗಳು
ಕಣ್ಣೀರಧಾರೆಯನು ಸುರಿಸುತ್ತಲಿವೆ!

ಮತ್ತೆ ಮೊರೆಹೋಗುತ್ತಿದ್ದಾನೆ
ಕಾಣದ ದೇವರ ಬಳಿ ಇಂದು,
ಮೇಘರಾಜನ ಅಟ್ಟಹಾಸವನು
ಸಾಕು ಮಾಡೆಂದು!

- ಪ್ರಿಯಾಂಕ

23 Aug 2017, 08:12 am

ಮನ್ನಿಸು

ನಿನ್ನ ಮನದ ಬಯಕೆಯ
ನಾ ಅರಿಯದಾದೆ
ನಿನ್ನ ಒಲವ ಬಯಸದೆ
ಅರೆಕಾಲ ದೂರಾದೆ
ಒಮ್ಮೆ ಮನ್ನಿಸೆಯ,ಓ ಇನಿಯ?

ಹಾಲ ಬೆಳದಿಂಗಳಲು
ಕಗ್ಗತ್ತಲೆಯಲಿ ನಾ ಅಲೆದೆ
ಶಶಿಗೆ ಕಾರ್ಮೋಡ ಕವಿದಿರಲು
ಅಶಾಶ್ವತವೆಂದು ತಿಳಿಯದಾದೆ
ನನ್ನನೊಮ್ಮೆ ಮನ್ನಿಸೆಯ,ಓ ನಲ್ಲನೆ?

ಅನಂತಚಕ್ರದಲ್ಲಿ ಬಂದಿಯಾಗಲು
ಬೆದರಿದೆನಂದು
ಸಂಸಾರ ಸಾಗರದಲ್ಲಿ
ಮಿಂದೆದ್ದಿಹೆನಿಂದು
ನಿನ್ನವಳೆ ನಾನೆಂದು ಅರಿವೆಯ,ಓ ಗೆಳೆಯ?

ಸಾಧನೆಯ ಮರೀಚಿಕೆಯಲ್ಲಿ
ಸಾಧಿಸುವ ಛಲದಿಂದ
ವಿರಹದ ಬೆಗೆಯಲ್ಲಿ
ಬೆಂದೆ ನೀ ನನ್ನಿಂದ
ಒಮ್ಮೆ ಮನ್ನಿಸೆಯ ,ಓ ಇನಿಯ?



ಶಾರಧ

- ಶಕುಂತಲಾ

23 Aug 2017, 03:11 am

ಕವನ........✏

ಬಂದಿ ನಾನು ನನ್ನೊಳಗೆ ಪದಗಳ ರೂಪದಲ್ಲಿ
ಮುಂದೊಂದು ದಿನದಂದು ಕೃತಿಯಾದರು ಉಸಿರಲ್ಲೇ ಉಳಿಯುತ್ತೆ ಮನಸಲ್ಲೇ ಕುತಿರುತ್ತೆ ನನ್ನ ಕವನ ನನಗಾಗಿ.....................

ಕವನ ನನ್ನ ಕನಸಾಗಿ ಕೈಹಿಡಿದಿಲ್ಲ ಅಂದು ನಿದ್ದೆಯಿಂದೆದ್ದು ಮರೆತರೆ ಮರೆಯಾಗಲು ಇಂದು ನನ್ನ ಕಣ್ಣಿರಲ್ಲಿ ಒನ್ನೊಂದು ಅಕ್ಷರವೂ ಮಿಂದು ಪದಗಳಾಗಿ ಕಾಣುತ್ತಿದೆ ನಿಮ್ಮ ನಯನಕೆ ಇಂದು.......................

ಕಲೆದೋದ ಕಹಿ ದಿನಗಳ ನನ್ನಲ್ಲಿ ನೆನೆಯಲು
ಮತ್ತೆ ಅವನ್ನು ಮರೆಯಲು ನಿನ್ನ ನೆರವು ಬೇಕಾಗಿದೆ ಕವನ ನಿನ್ನ ಅಕ್ಕರೆ ನನಗಿಂದು ಅತ್ಯವಶ್ಯಕವಾಗಿದೆ ಕವನ..................

- ಚುಕ್ಕಿ

22 Aug 2017, 10:29 pm

ಜಾರಿರಲು ಕಣ್ಣ ಹನಿಗಳು

ಜಾರಿರಲು ಕಣ್ಣ ಹನಿಗಳು
ಸೇರಿಹೋಗಿವೆ ಉಳಿದೋದ ಮಾತುಗಳು
ತಂಪಾದ ಗಾಳಿಗೂ‌ ಅನಿಸಿದೆ ಕೊಂಚ ಕಂಪನ
ಆಗಿರಲು ನೋವಿನ ಬಿಸಿಯುಸಿರಿನ ಸಿಂಚನ

ಮೈ ಸೋಕಿದ ತಂಪು ಗಾಳಿಯೂ
ತಂದಿದೆ ಎದೆ ಸುಡುವ ನೋವುಗಳ ನೆನಪಿನ ಹಾವಳಿಯ
ಹಕ್ಕಿಗಳ ಕಲರವು ಕಾಡಿದೆ‌ ಮನಸ
ಏನನೊ ಹೇಳಲು ಹವಣಿಸಿ ಮೌನವಾದಂತೆ

ಎಲ್ಲಿಂದಲೊ ಬೀಸಿ‌ ಬಂದ ತಂಗಾಳಿಯು
ಕದ್ದು ಹೋಗಲು ಯತ್ನಿಸಿದಂತನಿಸುತಿದೆ ನನ್ನುಸಿರ
ಸೂರ್ಯನು‌ ಮಂಕಾಗುತಿರುವನು ಕತ್ತಲೆಯ ನೆನೆಪಿಸಿ
ಬೆಳಕು ಕೊಡಲು ಆಗುವುದೇನು ಆ ಶಶಿಗೂ ಕೊಂಚ ಕಸಿವಿಸಿ

ಚುಕ್ಕಿ ತಾರೆಗಳು ಕಾಣಲು ಸಿಗದೆ ಬೇಕಂತಲೆ‌ ಮರೆಯಾದಂತೆ
ಮಾತಿಗೆ ಶುರುವಿಟ್ಟಿದ್ದ ಮರಗಿಡಗಳು ಸ್ಥಬ್ಧವಾದಂತೆ
ದೃಷ್ಟಿ ನೆಟ್ಟಲೆಲ್ಲ ನೀರವ ಮೌನ ಆವರಿಸಿದಂತೆ
ಮನಸೊಳಗೆ ತುಂಬಿರಲು ಮೌನ ಬೆಳಕಿನ ಕಿಂಡಿಯೇ ಇರದ ಕತ್ತಲೆಯಂತೆ

- ಶ್ರೀಕಾವ್ಯ

22 Aug 2017, 10:00 pm

ಮನಸ್ಸೆಕೋ ಸರಿಯಿಲ್ಲ

ಬಿಡುವು ನೀಡದೆ ಸುರಿಯುವ
ಜಡಿಮಳೆಗೆ ಮನಸ್ಸೆಕೋ ಮಂಕಾಗಿದೆ
ಕಳೆದೊದ ನೆನಪುಗಳು ಅದೇಕೋ
ಪದೇಪದೇ ಕಾಡುತಿದೆ
ಕಣ್ಣೀರ ಹನಿಯೊಂದು ಹೇಳದೆಕೇಳದೆ
ಕೆನ್ನೆ ಮೇಲೆ ಜಾರುತಿದೆ
ಭಾರವಾದ ಮನಸಿಗೆ
ತಲೆಬಾಗಿದ ಗಲ್ಲಕ್ಕೆ ಕೈ ಆಧಾರವಾಗಿದೆ
ಮಳೆ ಹನಿಗಳಂತೆ ಕೆದಕುತಿದೆ ಹಳೆ ನೆನಪುಗಳ
ಈ ಬಿರುಮಳೆ,

- ಎಸ್.ಬಿ

22 Aug 2017, 09:03 pm

ಬದಲಾವಣೆ

ಸಲಿಗೆ ಎಂದೂ ನನ್ನ ದೌರ್ಬಲ್ಯವಲ್ಲ
ಎಲ್ಲರೊಂದಿಗೆ ಜೊತೆಗೂಡಿ ಬಾಳ ಬೇಕೆಂಬುವುದೇ ನನ್ನ ಬದುಕಿನ ಕೌಶಲ್ಯ
ಸಲಿಗೆಯಿಂದ ಶಿಖರವೇರಿ ನಕಾರತ್ಮವ ನೀ ತೋರಿದರೂ ಅದಕ್ಕಿದೆ ಇಲ್ಲಿ ಪರಿಹಾರ
ಸಂಬಂಧ-ಸಲಿಗೆಯನು ಬೇರ್ಪಡಿಸಿ
ಇರುವೆನು ಒಂಟಿಯಾಗಿ, ಸುಲಿಗೆಗಾರರ ಬದಿಗೆ ಸರಿಸಿ, ಸಲಿಗೆಗಾರರ ದೂರ ಸರಿಸಿ

- ಎಸ್.ಬಿ

22 Aug 2017, 08:34 pm