Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪರಿಹಾರ

ಜಗತ್ತಿನ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಅಗತ್ಯ ಇಲ್ಲ,
ನಮ್ಮ ನಮ್ಮ ಪ್ರಶ್ನೆಗೆ ಉತ್ತರ ಕಂಡುಕೊಂಡಲ್ಲಿ ಜಗತ್ತು ಅರ್ಥವಾಗುತ್ತೆ ಅತೀ ಸರಳವಾಗಿ

- ಎಸ್.ಬಿ

22 Aug 2017, 09:40 am

ಮಿಂಚಿ ಮರೆಯಾದೆ

ಮುಖದ ತುಂಬೆಲ್ಲ ಚೆಲುವೆ
ಸುಂದರ ಕಾಂತಿ!!
ಹಣೆಯ ಬೊಟ್ಟು ಸ್ವಾಗತಿಸಿ
ಕರೆಯಿತು ನನ್ನ!!
ಮುಗುತಿಯ ಹೊಳಪು
ಸೆಳೆಯಿತು ಕಣ್ಣ!!
ಸೆಳೆಯಿತು ಮನವ
ಆ ನಿನ್ನ ನಯನ!!
ಮುಂಗುರುಳು ಬೆಸೆಯಿತು
ಹೊಸ ಪ್ರೇಮದ ನಂಟ!!
ಸೌಂದರ್ಯ ರಾಶಿ ನೋಡಿ
ನಾ ಮರುಳಾಗಿ ಹೋದೆ!!
ಕಣ್ಣ ಮುಚ್ಚಿ ತೆರೆಯುವುದರೊಳಗೆ
ನೀ ಹೇಗೆ ಮಿಂಚಿ ಮರೆಯಾದೆ!!

- ಹೆಚ್.ಜಿ.ದಿನೇಶ್

21 Aug 2017, 08:33 pm

ಗಾಳಿ ಹೇಳುತ್ತಿದೆ.............

ಗಾಳಿ ಹೇಳುತ್ತಿದೆ ಮನಸೇ
ಮೆಲ್ಲಗೆ ನೆನೆಯೇ ನಿನ್ನವನ ಎಂದು............

ನೆನ್ನೆಯ ಅವನಿಲ್ಲದ ಕನಸನ್ನು ನಾಳೆಗೆ ನೆನೆಯದಿರು ನೋವಾಗಿ ಎಂದು...............

ನುಡಿವ ಮುನ್ನ ಒಂದು ಮಾತು ನೂರುಬಾರಿ ನೆನೆಯದಿರೆ ಅವನ ನಗುವನ್ನು ಎಂದು........

ಗಾಳಿ ಹೇಳುತ್ತಿದೆ ಮನಸೇ
ಮೆಲ್ಲಗೆ ನೆನೆಯೇ ನಿನ್ನವನ ಎಂದು............

ನೆನೆ ನೆನೆದು ನಿನ್ನನ್ನು ನೀನೇ ಮರೆಯುವ ಹಾಗೆ ಮತ್ತೆ ಮತ್ತೆ ನೆನೆಯದಿರೆ ಅವನನ್ನು ನಿನ್ನ ನೆನಪಲ್ಲೆ ನಿರಂತರ ಬಂಧಿಸುವ ಹಾಗೆ ನೆನೆಯದಿರೆ ಎಂದು...

ಕರಗಿದ ನಸುಗೆಂಪು ನಾಚಿಕೆಯಂತೆ ನಿನ್ನಲ್ಲೇ ಉಳಿದಿರುವ ವರೆಗೂ ಕರೆ ಕರೆದು ಅವನ ಹೆಸರ ಉಸಿರಾಟ ವೇಗದೊಂದಿಗೆ ನೆನೆಯದಿರೆ ಎಂದು....

ಗಾಳಿ ಹೇಳುತ್ತಿದೆ ಮನಸೇ
ಮೆಲ್ಲಗೆ ನೆನೆಯೇ ನಿನ್ನವನ ಎಂದು...............

- ಚುಕ್ಕಿ

21 Aug 2017, 07:30 pm

ಮೌನ

ಹೃದಯದ ಮಾತುಗಳು
ನಿನ್ನ ಸೇರುವ ತವಕದಲಿ
ಪ್ರೀತಿಯೆಂಬ ಸಾಗರದಲಿ
ನಿನ್ನ ನೆನಪಿನ ದೋಣಿಯಲಿ
ಸಾಗುತಿದೆ ಮೌನದಲಿ!

- ಪ್ರಿಯಾಂಕ

21 Aug 2017, 06:36 pm

ಹಿಂಗಾರು

ಹಿಗ್ಗಿ-ಹಿಗ್ಗಿ ಬರಿತಿದೆ
ಹಿಂಗಾರು.....
ಸುಗ್ಗಿ-ಸುಗ್ಗಿ ತರುತಿದೆ
ಬಂಗಾರು......
ಬೆಳೆವ ಬೆಳಯ ನೋಡಿ
ನಲಿಯುತಿದೆ ನಮ್ಮೂರು....


ನೀ ಬಂದು ಹೊಣಗಿಹೋದ
ಗರಿಕೆ ಬೇರು ಚಿಗುರುತಿದೆ
ನಲಿ-ನಲಿಯುತ, ಖುಷಿ-ಖುಷಿಯಲಿ
ತರು-ಲತೆಗಳು ಮೈನೆರೆಯುತಿವೆ
ಮರುಜೀವ ಪಡೆದ
ಸಡಗರ,ಸಂಭ್ರಮದಲಿ

ಶ್ರಾವಣಮಾಸವು ಕಳೆಕಟ್ಟಿದೆ
ನಿನ್ನ ಆಗಮನದ ಆನಂದದಲಿ
ವರನೀಡಿದಳು ತಾಯಿ
ಮಹಾಲಕ್ಷ್ಮಿಯಂದು
ವಿಘ್ನನಿವಾರಕ ವಿನಾಯಕನು
ಬೀದಿ-ಬೀದಿಗು ಬರುತಿಹನಿಂದು


ಶಾರಧ

- ಶಕುಂತಲಾ

21 Aug 2017, 02:21 pm

ಮರುಕಳಿಸಿದ ವೇದನೆ

ಮಳೆರಾಯ ಇಳೆಗೆ
ಜಾರಿದಾಗ
ಕಂಬನಿಯು ಕೆನ್ನೆಗೆ
ತಾಗಿತಾಗ
ಅಗಲಿದ ಇನಿಯನ
ನೆನಪಾಯಿತಾಗ
ಮನೆಯ ಮಾಲಿಕನು
ಮನೆಯ ತೊರೆ ಎಂದಾಗ


ಹಸುಗೂಸುಗಳ ಅಂಗೈಯಲ್ಲಿಟ್ಟು
ದೂರಾದೆ ನೀ ನನ್ನ ಬಿಟ್ಟು
ನಿನ್ನ-ನನ್ನವರು ನೆರವಾಗಿ
ವರವಾಗಲಿಲ್ಲ ನನ್ನಬಾಳಿಗೆ
ಆಸರೆಯಾದವರಿಗೆ
ನಾನೇನೆನ್ನಲಿ ಅವರ ಮಾತಿಗೆ
ಕಂಬನಿದಾರೆಯ ಕೊಡವದೆ
ನಡೆದೆನು ಬೀರುತ
ಬಲವಂತದ ಹುಸಿನಗೆ



ಶಾರಧ

- ಶಕುಂತಲಾ

21 Aug 2017, 01:55 pm

ಹರಸಿರಿ ನನ್ನ ಹರಸಿರಿ

ಹರಸಿರಿ ನನ್ನ ಹರಸಿರಿ
ಹಸಿರೆಲೆಗಳೇ ನನ್ನ ಹರಸಿರಿ!!
ಹರಸಿರಿ ನನ್ನ ಹರಸಿರಿ
ನಗುವ ಹೂಗಳೇ ಹರಸಿರಿ!!

ಹುಸಿ ನುಡಿಯನು ನಾನಾಡೆನು
ಹೊಸ ಬದುಕು ನನ್ನ ಕರೆದಿದೆ!!
ಹಸಿರಾಗಿರೋ ಈ ಬಾಳಿಗೆ
ಹೊಸ ಚಿಗುರ ಅರ್ಪಣೆ ಕಾದಿದೆ!!

ಗಿಡ ಮರಗಳೇ ಗಿರಿ ವನಗಳೇ
ನನ್ನ ತವರು ಊರ ಸಿರಿಗಳೇ!!
ನಾ ಬಯಸಿದ ವನ ಪುಷ್ಪವೇ
ನೀ ಏರು ಬಾ ನನ್ನ ಶಿರವನು!!

ಓ ಗಿಣಿಗಳೇ ಅರೆ ಗಿಣಿಗಳೇ
ಈ ಬನವು ನಿಮ್ಮದು ಕಾಯಿರಿ!!
ನಾ ಸಾಗುವೆ ಬಹು ದೂರಕೆ
ನೀವು ನನ್ನ ಹರಸಿ ಕಳುಹಿರಿ!!

- ಪಿ.ಜಿ.ಜ್ಯೋತಿ

21 Aug 2017, 08:45 am

ಬೂದಿ ಮುಸುಕಿದ ಕೆಂಡ

ಬೂದಿ ಮುಸುಕಿದ ಕೆಂಡವೇ
ನಾ ನಿನ್ನ ಅರಿಯಲಾರದೇ ಹೋದೆ!!
ಗೆಳೆತನವ ಬೆಸೆಯ ನಾ ಬಂದು
ನಡುವಿನ ಬಿಸಿಯಲ್ಲಿ ನಿಂತುಬಿಟ್ಟೆ!!

ತಡೆಯಲಾರದ ಶಾಖ ಸುಡುತಿಹುದು
ಮಿತಿ ಮೀರಿ‌ ನನ್ನಯ ಪಾದ!!
ಮತಿ ಭ್ರಮಣೆ ಆಯಿತೇ ನನಗೇ
ಯಾಕಾಗಿ ನಾನು ಇಲ್ಲಿ ಬಂದು ನಿಂತೆ!!

ಓಡಿ ಹೋಗುವುದಾದರೂ ಎಲ್ಲಿ
ಸುತ್ತಲೂ ಹರಡಿಹುದು ಬಿಸಿ ಕೆಂಡ!!
ಓಡುವ ಬರದಲ್ಲಿ ಮುಗ್ಗರಿಸಿ ಬಿದ್ದರೆ
ಮೈಯೆಲ್ಲ ಆಗುವುದು ಸುಟ್ಟ ಗಾಯ!!

ಉಳಿದಿರುವುದು ಒಂದೇ ದಾರಿ
ನಾನು ನಿಂತಿರುವಲ್ಲೇ ನಿಲ್ಲಬೇಕು!!
ನೋವಿಂದ ಕಣ್ಣೀರ ಸುರಿಸಿ ನಾ
ಉರಿಯುವ ಕೆಂಡವ ಆರಿಸಬೇಕು!!

- ಪಿ.ಜಿ.ಜ್ಯೋತಿ

21 Aug 2017, 08:32 am

ಒಳಮನಸ್ಸು

ಮನಸ್ಸೋಂದು ಚಂಚಲಗಾರ
ಅತ್ತಿತ್ತ ಚಲಿಸುವದೆ ಆಚಾರ
ಚಂದ ಕಂಡಲ್ಲೇ ಇರಿಸುವದು ನಜರ

ಭಾವನೆಗಳನ್ನು ಹೆಣೆಯುವ ಮೋಹಗಾರ
ಮಲಗಿದರು ಇರುವುದು ಸದಾ ಎಚ್ಚರ
ಕಲ್ಪನೆಗಳನ್ನು ಕೆತ್ತುವುದು ಹಜಾರ

ಹೃದಯಗಳ ಸಂಗಮಕ್ಕೆ ನಾಂದಿ ಹಾಡುವ ಮಾಯಾಗಾರ
ಯಾವಾಗಲೂ ಮಾಡುವುದು ವಿಚಾರ
ಬೇಕು ಬೇಡಗಳನ್ನು ನಿರ್ಧರಿಸುವ ಬಜಾರ್

ನೆಲೆ ಮುಟ್ಟಲಾಗದ ಆಳವಾದ ಸಾಗರ
ಒಮ್ಮೊಮ್ಮೆ ಹಿಡಿಯುವುದು ಗ್ರಹಚಾರ
ಹಿಡಿಸದಿದ್ದಕ್ಕೆ ಆಗುವುದು ಬೇಜಾರ

ತನ್ನಲ್ಲೇ ಮಾತಾಡಿಕೊಳ್ಳುವ ಮೌನಗಾರ
ಪ್ರೇಮ ಸೇಳೆತದಲ್ಲಿರುವದು ಅಗೋಚರ
ಹಿರೇಉಳ್ಳಿಗೇರಿ ಕರೆಮ್ಮ ಪಕೃತಿಯಲ್ಲಿ ಇದೊಂದು ಚಮತ್ಕಾರ

- MB

20 Aug 2017, 11:13 pm

ಚುಕ್ಕಿ..

ಓ ಗಗನ ಚುಕ್ಕಿ
ನೀ ಎಕೆ ನನ್ನ ನೋಡಿ ನಕ್ಕಿ
ನನ್ನ ಬಾಳಿಗೊಂದು ಬಣ್ಣದ ಹಕ್ಕಿ
ಹಾರಿ ಹೊಗದಿರು ನನ್ನ ನೆತ್ತಿ ಕುಕ್ಕಿ
ಜೋತೆ ಬರುವೆ ಎಂದು ಕಾಯುವೆ
ಎಳು ಹೆಜ್ಜೆ ಹಾಕಿ..

- ಮಾರುತಿ..

20 Aug 2017, 10:40 pm