Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಪಂಡಿತನಿಗೂ ಇಲ್ಲ ಪಾಮರನಿಗೂ ಇಲ್ಲ
ಯಾರಿಗೂ ಏನೇನೂ ಕೊನೆವರೆಗೆ ಉಳಿದಿಲ್ಲ!!
ನೀ ಇರುವವರೆಗೆ ನಿನ್ನದಾಗಿರುವುದು ಎಲ್ಲ
ನೀ ಸತ್ತ ಮೇಲೆ ಪರರ ಸ್ವಾಧೀನವಾಯಿತಲ್ಲ!!
ಬೇಕು ಎನ್ನುವ ನೀನು ಗಳಿದಸಿದ್ದೇ ಎಲ್ಲ
ಉಳಿಸಿಕೊಳ್ಳಲು ನಿನ್ನ ನಿನಗೆ ನೇ ತಿಳಿದಿಲ್ಲ!!
ಏಕೆ ಹೀಗೆ ಎಂಬ ಪ್ರಶ್ನೆಗೆ ಉತ್ತರ ನಿನ್ನಲಿಲ್ಲ
ಆದರೂ ನನ್ನದು ಎಂಬ ಹಠವ ನೀ ಬಿಡಲಿಲ್ಲ!!
ನಾನೂ ನನ್ನದು ಎಂಬುದು ಎಂದೂ ನಿನ್ನದಲ್ಲ
ಮಾಡಿರುವ ಪಾಪ ಪುಣ್ಯಗಳ ಲೆಕ್ಕ ನಿನ್ನಲಿಲ್ಲ!!
ಬದುಕಿದ್ದಾಗ ನೆಮ್ಮದಿಯ ನೀ ಕಾಣಲಿಲ್ಲ
ಸತ್ತಾಗ ಬೇಕೆಂದರೂ ಯಾರೂ ನಿನ್ನ ಜೊತೆ ಇಲ್ಲ!!
- ಪಿ.ಜಿ.ಜ್ಯೋತಿ
22 Aug 2017, 04:08 pm
ಪ್ರೀತಿಯಾಯಿತು ನಿನ್ನ ಹೆಸರು ನನ್ನ
ಹೃದಯದ ಬದಿಯಲ್ಲಿ ಪ್ರಿಯಾ'-'***
ಪರಿಚಯದ ಆದಿಯಲ್ಲೇ ನನ್ನೊಳಗೆ ನಾ
ತಿಳಿಯದ ತಳಮಳ ನಿನ್ನ ನೋಟಕೆ ನಾಚಿ
ನಿಂತ ಪ್ರೀಮಿ ನಾನೇನಾ ಎಂದು
ಪ್ರಿಯಾ'-'***
ನಿನ್ನಲ್ಲಿನ ಪ್ರೀತಿಯ ಹಾವಭಾವಗಳನ್ನು ನನ್ನಲ್ಲಿ ಚಿಗುರಿಸಿದ ಹೊಸತನವ ಭಾವನೆಗಳೊಡನೆ
ಸಮ್ಮಿಲನ ಗೊಳಿಸೋಣ ಪ್ರೇಮ ಯುಗದ ಪ್ರಾರಂಭಕ್ಕಾಗಿ ಪ್ರಿಯಾ'-'***
- ಚುಕ್ಕಿ
22 Aug 2017, 02:10 pm
ಮೇರು ಕವಿಗಳ
ಶೈಲಿಯ ಸವಿಯ
ನಾ ಪಡೆವೆನೆ
ಅದರ ಒಂದಿನಿತು
ಇಂದಲ್ಲ-ನಾಳೆ?
ಒಂದು ಪದದಿ ಎನಿತು
ಅರ್ಥ ಹೊಕ್ಕಿಹುದು
ಶೋಧಿಸಿದಷ್ಟು
ವಿಸ್ತಾರವಾಗಿಹುದು!
ಪದಪುಂಜಗಳ ಮಾಲೆಯ
ಪೋಣಿಸುವರು
ಪ್ರಕೃತಿ ವರ್ಣನೆಯ
ಮೇರೆ ಮೀರುವರು!
ಸಹೃದಯನ ಮನದಲ್ಲಿ
ನವರಸಗಳ ಹರಿಸುವರು
ತಾಯಿ ಶಾರದಾಂಭೆಯ
ಕರುಳಕುಡಿಗಳಿವರು!
ಶಾರಧ
- ಶಕುಂತಲಾ
22 Aug 2017, 02:01 pm
ನಾ ಅರಳಿಸಿದ ಹೂವನ್ನ
ಕೂಡಬಹುದು ದುಂಬಿಯೊಂದು
ನನ್ನಲ್ಲಿಯ ಸಿಹಿಯನ್ನ ಹೀರಿ
ಕಟ್ಟಬಹುದು ಜೇನು ಸಿಹಿಗೂಡೊಂದು
ಓ ಆಕಳೆ ನೀ ಬಂದು ಉಣ್ಣದಿದ್ದರೆ !
ನಾ ಕೊಡುವ ಹೂವೊಂದು
ಸೇರಬಹುದು ಸರಸ್ವತಿಯ ಪಾದುಕೆಗೆ
ಸೇರಬಹುದು ಸೌಭಾಗ್ಯವತಿಯ
ಅಂದದ ಮುಡಿಗೆ
ಓ ಆಕಳೆ ನೀ ವರವನಿತ್ತರೆ!
ಅಸಾಧಾರಣ ವ್ಯಕ್ತಿಯ ಅಭಿನಂದನೆಯಲ್ಲಿ
ನಾ ಪಾಲುದಾರಳಾಗಬಹುದು
ಮಹಾನ್ ಚೇತನಗಳ ಕೊರಳನ್ನು
ನಾ ಅಲಂಕರಿಸಬಹುದು
ಓ ಆಕಳೆ ನೀ ದಯೆತೋರಿದರೆ!
- ಶಕುಂತಲಾ
22 Aug 2017, 01:19 pm
ಕಲ್ಪನೆ ಕವನದ
ತೋರಿಕೆಯ ತಡಿಕೆ
ಕವಿಯ ಅನುಭವವೆ
ಕವನದ ಆತ್ಮ
ಕಲ್ಪನೆಯು ಪದಗಳ
ಅಲಂಕಾರ
ಅನುಭವವು ಕವನದ
ಆಧಾರಸ್ತಂಭ
ಬರಿಯ ಕಲ್ಪನೆಯಿಂದ
ಕವನ ಅಪೂರ್ಣ
ಅನುಭವದಿಂದ ಹೊಮ್ಮಿದ
ಕವನವೇ ಪೂರ್ಣ
ಕವನವು ಕವಿಯ
ನೋವು-ನಲಿವಿನ ಪ್ರತೀಕ
ಅನುಭವದಿಂದ ಉದಯಿಸಿದ
ಕವನವು ಅಜರಾಮರ
ಶಾರಧ
- ಶಕುಂತಲಾ
22 Aug 2017, 12:40 pm
ಭಾವನೆಗಳ ಗೂಡಲ್ಲಿ ನೆಮ್ಮದಿಯ ತಾಣವಿರುವುದು ಸಂಬಂಧ
ಮನಸ್ಸುಗಳ ಬೆಸುಗೆಯಲ್ಲಿ ಒಂದಾಗಿರುವುದೆ ಸಂಬಂಧ
ಕಶ್ಟ ಸುಕದಲ್ಲಿ ಹೆಜ್ಜೆಹಾಕುತ
ಒಟ್ಟಾಗಿ ಬದುಕುವುದೆ ಸಂಬಂಧ
ಸಂಬದಗಳ ನೋವುಕಶ್ಟ ಗಳಿಗೆ
ಸ್ಪಂದಿಸುವುದೇ ಸಂಬಂಧ
ಬದುಕಿಗೆ ಮೂಲಾಧಾರ ಸಂಬಂಧಳು
- nageshwarh
22 Aug 2017, 12:34 pm
ಕಟ್ಟುತಿರುವೆ ಕನಸಿನ
ಕೋಟೆ......
ವ್ಯರ್ಥವಾದೀತು
ಜೋಕೆ.....
ತಿಂಗಳನ ಅಂಗೈಯಲ್ಲಿ
ಹಿಡಿದ ಕನಸು.......
ಬೆಳ್ಳಿಯ ಅಂಗಳಲ್ಲಿ
ಹಾರಿದ ಕನಸು.....
ಉಳಿಯುವುದು ಎಲ್ಲ
ಬರಿಯ ಕನಸಾಗಿಯೆ...
ಕಣ್ಣೆದುರಿನ ಕಾಯಕ
ಕೈಹಿಡಿದ ಕನಸು
ಮನದ ಬಯಕೆಗಳೆಲ್ಲ
ಫಲಿಸಿದ ಕನಸು
ಬರುವೆನೆನ್ನುತ ಎಲ್ಲ
ಕೈಜಾರಿತು ಕನಸಾಗಿಯೆ!
ಕನಸಿನ ಮೂಲ ಕಲ್ಪನೆ
ಕಲ್ಪನೆಯ ಮೂಲ ಬಯಕೆ
ನನ್ನ ಬಯಕೆ- ಕಲ್ಪನೆಗಳೆಲ್ಲ
ನನಸಾಗದೆ ಕನಸಾಗಿಯೆ ಕರಗುತಿಹವಲ್ಲ!
ಮನದ ತಳಮಳಕೆ ನೀನೆ ಒಡತಿಯಲ್ಲ!
ಕನಸು-ನನಸಾಗಲು ಮಾರ್ಗವ ತೋರು!
ಈ ಬರಡಾದ ಬಾಳಲ್ಲಿ ಕಿರು ನಗೆ ಬೀರು!
ಶಾರಧ
- ಶಕುಂತಲಾ
22 Aug 2017, 12:24 pm
ಮಾತು ಪರಿಕಲ್ಪನೆ ನಡೆತೆ ನಮ್ಮೊಳಗೆ
ಸ್ನೇಹ ಪ್ರೀತಿ ವಾತ್ಸ್ಲಲ್ಲ್ಯಾ ನಮ್ಮೊಳಗೆ
ನಿಸ್ವಾರ್ಥ ಭಾವನೆಗಳ ಸಂಬದ ನಮ್ಮೊಳಗೆ
ಶಾಂತಿ ಸಂಯಮ ಗುರಿ ನಮ್ಮೊಳಗೆ
ನಯ ವಿನಯ ವಿಶಾಲತೆ ನಮ್ಮೊಳಗೆ
ಬದುಕಿಗೆ ಪ್ರಬುದ್ದತೆ ನಮ್ಮೊಳಗೆ.
- nageshwarh
22 Aug 2017, 11:55 am
ನೋವಿಗೂ ಒಂದು ಕವನ
ನಲಿವಿಗೂ ಒಂದು ಕವನ
ಎಲ್ಲ ಭಾವಕ್ಕೂ ಒಂದು ಕವನ
ಬರೆಯುವವನು ಕವಿಯು!!
ಕವಿಯ ಮನಸಿನ ಭಾವನೆ
ಅದ್ಭುತವಾದ ಒಂದು ಕಲ್ಪನೆ!!
ಸುಂದರ ಯೋಚನೆಯ ಜೊತೆ
ಅತಿ ಸುಂದರ ಆಲೋಚನೆ!!
ಕವನ ಬರೆಯಲು ಕುಳಿತ
ಕವಿಯ ದೃಷ್ಟಿಯು ಅನಂತ!!
ಮರು ಭೂಮಿಯಲ್ಲಿಯೂ
ಕಂಡನು ಅವನು ವಸಂತ!!
ಒಂದು ಸನಿಹದ ದಾರಿಗೆ
ಗಾವುದ ದೂರದ ಬರವಣಿಗೆ!!
ಗಾವುದ ದೂರದ ಕಲ್ಪನೆಯಿಂದ
ಸಾಲು ಕವನಗಳ ಮೆರವಣಿಗೆ!!
ಕವಿಯೇ ಕವನಗಳ ಜನಕ
ಕವನವೇ ಆತನ ಭವ್ಯ ಲೋಕ!!
ಕವಿಯ ಅಂತರಂಗದ ಭಾಷೆಯೇ
ಒಂದು ಸುಂದರ ಕವನ!!
- ಪಿ.ಜಿ.ಜ್ಯೋತಿ
22 Aug 2017, 10:32 am
ಮರೆತು ಬಿಡು ಎಂದಾಕ್ಷಣ
ಮರೆತು ಬಿಡಲೇ ನಿನ್ನ ನಾನು!!
ಹಿಂದಿರುಗಿ ನೋಡದೇನೇ
ಸಾಗಿ ಬಿಡಲೇ ಮುಂದೆ ನಾನು!!
ಏತಕೆ ಹೀಗೆ ಈ ಹೃದಯ
ನಿನ್ನನೇ ಬಯಸಿ ನಿಂತಿಹುದು!!
ಮರುಗಲೇನೇ ನಿನ್ನ ನೆನೆದು
ಕರುಣೆ ತೋರಿ ಮರಳಿ ಬಾರೆ!!
ತಿಳಿಯದೇ ನಾನು ಇಂದು
ಮಾಡಿರುವ ತಪ್ಪೇನು ತಿಳಿಸು!!
ಮರೆಯುವ ಶಿಕ್ಷೆಯ ಹೊರತು
ಬೇರೊಂದು ಶಿಕ್ಷೆಯ ನೀ ವಿಧಿಸು!!
ಸಾಕು ಗೆಳತಿ ಈ ಮರೆವ ಆಟ
ಇರೆನು ನಾನೂ ನಿನ್ನ ಅಗಲಿ!!
ಕ್ಷಮಿಸು ನನ್ನ ಮನದ ಒಡತಿ
ಬೇಕು ನೀನೂ ನನ್ನ ಮನಕೆ!!
- ಪಿ.ಜಿ.ಜ್ಯೋತಿ
22 Aug 2017, 10:20 am