Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮರೆತರು ಮರೆಯಲಾಗದ ನೆನಪು

ಮರೆತರು ಮರೆಯಲಾಗದ ನೆನಪು,ಸುಟ್ಟರೂ ಸುಡದಿರುವ ಕನಸು,ಕೊಂದರು ಸಾಯದ ಮನಸ್ಸು,ಇದಕ್ಕೆ ಕರಣ ನೀನ್ನ ಪ್ರೀತಿ,ಕೆಲವೊಮ್ಮೆ ಹೇಳದೆ ಕೇಳದೆ ಬಂದೆ,ಹೋಗುವಾಗ ಕಣ್ಣೀರಿನ ಜೋತೆಗೆ ಜೀವನವನ್ನೇ ಕೊಂದೆ....ಪ್ರೀತಿ ನೀ ಶಾಶ್ವತನಾ...??

- Manju...

23 Aug 2017, 11:07 pm

ಮನಸಿಗೆ ಸಂಗಾತಿ‌ಯ ಹುಡುಕುತಿರುವೆ...

ಮನಸಿಗೆ ಸಂಗಾತಿಯ ಹುಡುಕುತಿರುವೆ
ಜೀವವಿರುವುದೊ, ಇಲ್ಲದ್ದೊ
ಹುಡುಗನೊ‌, ಹುಡುಗಿಯೊ
ಅಂದ ಚೆಂದದ ಮಗುವೊ
ಬಣ್ಣ ಕಳೆದ ಅಂದವಿರದ ಪ್ರಾಣಿಯೊ
ಅಜ್ಜನೊ‌, ಅಜ್ಜಿಯೊ
ಕುರಿಯೊ ,ಕೋಳಿಯೊ
ಕಾಗೆಯೊ,ಗಿಳಿಯೊ
ಕೋತಿಯೊ, ನಾಯಿಯೊ
ಮರವೊ ,ಗಿಡವೊ
ಗೊಂಬೆಯೊ ಇಲ್ಲ ‌ಮರದ ಕೊಂಬೆಯೊ
ಪಾತಾಳಲೋಕದ್ದೊ, ಆಕಾಶಕಾಯದ್ದೊ
ದೇವರಾದ ಕಲ್ಲೊ, ಕಲ್ಲಾಗಿರುವ ದೇವರೊ
ಮನಸಿಗೆ ಸಂಗಾತಿಯ ಹುಡುಕುತಿರವೆ
ಮನಸಾರೆ ನಗುವಾಗ ನಗುತಿರುವೆನೆಂದು
ಅಳಬೇಕೆನಿಸಿದಾಗ ಅಳಬೇಕೆಂದು
ಕಷ್ಟದೊಳಗೆ ಕಷ್ಟವೆಂದು
ಸುಖದೊಳಗೆ ಸುಖವೆಂದು
ಕೋಪದೊಳು ಕೋಪ ತೋರಿ
ಹರುಷದೊಳು ಹರುಷ ತೋರಿ
ಮನಸಿನ ಲೋಕವ ಮುಖದಲಿ ಮರೆಸದೆ
ಮುಖದ ಭಾವವು ನನ್ನನೆ ಆವರಿಸಿದಂತೆ
ನಾನು ನಾನಾಗಿ, ನನ್ನೊಳಗಿನ ಭಾವಕೆ ಬಣ್ಣ ಹಚ್ಚದೆ
ಜಗಕೆ ನಾನು ನಟನೆಯ ತೋರದೆ
ಹೊರಗಿನ ನಾನು, ಒಳಗಿನ ನಾನು ಒಂದೆ ಎಂಬಂತೆ ಇರಲು
ಮನಸಿಗೆ ಸಂಗಾತಿಯ ಹುಡುಕುತಿರುವೆ...

- ಶ್ರೀಕಾವ್ಯ

23 Aug 2017, 09:53 pm

ಪ್ರೀತಿ

ಅರಿಯದ ಸ್ನೇಹ
ಮರೆಯದ ಪ್ರೀತಿ
ಹರಿದು ಹೋಗುವ ಹಾಳೆಯ ಮೇಲೆ
ಏನೆಂದು ಬರೆಯಲಿ ಹೇಳು
ಗೆಳತಿ..........

- krishna

23 Aug 2017, 06:51 pm

ಚಿರವಾಗಲಿ ಈ ಸ್ನೇಹ

ಮೊಗ್ಗಾಗಿ ಬಂದ ಸ್ನೇಹ ,ಹೂವಾಗಿ ಅರಳಲಿ
ಹನಿಯಾಗಿ ಬಂದ ಪ್ರೀತಿ ,ಹೊಳೆಯಾಗಿ ಹರಿಯಲಿ
ಅರಿಯದೆ ಬಂದ ಸ್ನೇಹ ಮರೆಯದೆ ಚಿರವಾಗಿ ಉಳಿಯಲಿ..............

- Acchu love

23 Aug 2017, 01:53 pm

ನಂಬಿಕೆ

ಪ್ರಪಂಚದಲ್ಲಿ ಅತಿ ದುಬಾರಿ
ವಸ್ತು ಅಂದ್ರೆ ನಂಬಿಕೆ ಅದನ್ನು
ಗಳಿಸಲು ಎಷ್ಟೋ ವರ್ಷಗಳೇ
ಬೇಕು.ಆದರೆ ಅದನ್ನು
ನಾಶಗೊಳಿಸಲು ಕೆಲವೇ ಕ್ಷಣ
ಸಾಕು....

- ಅಂಜಲಿ

23 Aug 2017, 12:23 pm

ಹೇಳುವುದಾದರು ಏನು ಎಂಬುದು?????

ಮನಸಿನ ತುಂಬಾ ಕಷ್ಟಗಳ ಸುರಿಮಳೆ ತುಂಬಿರುವಾಗ..... ನಗು ಮುಖವ ನಾ ಹೇಗೆ ದರಿಸಲಿ......
ಈ ಕಂಗಳಲ್ಲಿ ಕನಸುಗಳ ಬದಲು ಕಣ್ಣೀರೆ ತುಂಬಿರುವಾಗ ....ನಾ ಇನ್ನು ಹೇಳುವುದಾದರು ಏನು........

- Acchu love

23 Aug 2017, 11:47 am

ಪ್ರೇಮದ ಬಯಕೆ

ಒಂಟಿ ಜನುಮಕೆ ತೀರದು
ಈ ನಮ್ಮ‌ ಪ್ರೇಮದ ಬಯಕೆಯು!!
ನೂರು ಜನುಮವು ಸಾಲದು
ಈ ಜೋಡಿ ಬದುಕು ಸಾಗಲು!!

ಕ್ಷಣ ಮಾತ್ರಕೆ ನೀ ಮರೆಯಾದರೂ
ಏನೋ ತಲ್ಲಣ ಈ ‌ನನ್ನ ಜೀವಕೆ!!
ನೀನು ಬಳಿಯೇ ಇದ್ದರೂ
ಸನಿಹ ಸಾಲದು ಈ ತನುವಿಗೆ!!

ನಾನು ನಿನ್ನನು ಕಂಡ ಆ ದಿನ
ನನನ್ನೇ ನಾ ಮರೆತಿರುವ ಸುದಿನ!!
ನಿನ್ನ‌ಒಡನೆ ಬೆರೆತರೂ ಕಡಿಮೆಯೇ
ಸಾಲದೂ ಈ ಜೀವಕೆ!!

ನೀನು ಇಲ್ಲದ ಈ ಜೀವನ
ನಾನು ನೇನೆಯೆನೂ ಅರೆ ಕ್ಷಣವೂ!!.
ಓ ಜೀವದ ಸಂಗಾತಿಯೇ
ನನ್ನ ದೇಹಕೆ ನೀ ಪ್ರಾಣವು!!

- ಪಿ.ಜಿ.ಜ್ಯೋತಿ

23 Aug 2017, 10:43 am

ಮೇಘದೂತನ ಪ್ರೀತಿ ಹಾಳೆ

ಮೇಘದೂತ ತಂದುಕೊಟ್ಟ
ಪ್ರೀತಿ ಎಂಬ ಹಾಳೆ ಮೇಲೆ
ನಿನ್ನ ಹೆಸೆರ‌ ನಾನು ಬರೆಯಲೇ
ಈ ಪ್ರೀತಿಯನ್ನು ಜಗಕೆ ಸಾರಲೇ!!

ಈ ಗುಡುಗು ಈ ಮಿಂಚು
ತಂದಂತ ಮಳೆ ಹನಿಯು
ನನ್ನೋಳಗೆ ಜಿನುಗಿ ಜಿನುಗಿ
ಹಿತವಾಗಿ ತಂಪು ನೀಡಿದೆ!!

ಎದೆಯೊಳಗೆ ಮಿಡಿದು ಮಿಡಿದು
ಮನದೊಳಗೆ ಹಾರಿ ಕುಣಿದು
ಹೊಸದಾದ ಭಾವವೊಂದು
ಜೀವ ಎತ್ತು ನಗುತ ಕುಳಿತಿದೆ!!

ನನ್ನೊಳಗೆ ಚಿಗುರಿ ಕುಳಿತ
ಆಸೆ ಇಂದು ಭಾರವಾಗಿ
ನನ್ನನ್ನು ಮೌನಗೊಳಿಸಿ
ನಿನ್ನನ್ನು ಸೇರು ಎಂದಿದೆ!!

- ಪಿ.ಜಿ.ಜ್ಯೋತಿ

23 Aug 2017, 10:06 am

ಮುಂಜಾನೇ ಮಾತು

- Gopal

23 Aug 2017, 10:02 am

ಅದ್ಭುತ ಸುಂದರಿ...

ಹುಣ್ಣಿಮೆಯ ಚಂದಿರನಿಗೆಕೋ
ಬೆಳದಿಂಗಳ ಕೊರತೆಯಿದೆಯಂತೆ,
ಮೊಗದ ಅಂದವ ಸಾಲ ಕೊಡುವೆಯಾ ಗೆಳತಿ,
ಮರುಪಾವತಿಗೆ ಚಂದಿರನೇ ಬಂದು ನಿನ್ನ ಮನೆಮುಂದಿನ ಬೀದಿದೀಪವಾಗುವನಂತೆ...

ಸಾಗರದ ಅಲೆಗಳಿಗೆಕೋ ಸರದಿಯ ದ್ವಂದ್ವವಿದೆಯಂತೆ,
ಶಾಂತತೆಯ ಕಳಿಸಿ ಕೊಡುವೆಯಾ ಗೆಳತಿ,
ದಿನವೆಲ್ಲವೂ ನಿನ್ನ ಮುಂಗುರುಳ ತುದಿಯಲ್ಲೇ ಅವಿತು ಮೊಗದ ಮೇಲೆ ಹರಿಯುವವಂತೆ..

ಮುತ್ತುರತ್ನಗಳ ಹೊಳಪೆಲ್ಲವೂ ಕಳೇಗುಂದಿದೆಯಂತೆ,
ನಿನ್ನ ಮಾತುಗಳನ್ನೇ ಧಾರೆಯೆರೆಯುವೆಯಾ ಗೆಳತಿ,
ಮರುಉತ್ತರಿಸದೆ ಬಿಂಕಬಿಟ್ಟು ನೀ ನಡೆವ ದಾರಿಗೆ ಹಾಸಾಗಿ ಸಾಲ ತೀರಿಸುವುದಂತೆ..

ಬೆಟ್ಟ ಶಿಕರಗಳಿಗೆಕೋ ಮೌನದ ದೂಷವಿದೆಯಂತೆ,
ಮೌನದ ಅಂಚನ್ನು ತುಸು ನೀಡುವೆಯಾ ಗೆಳತಿ,
ಈ ಕಾಣಿಕೆ ಅರಿತು ನೀ ಎಲ್ಲೇ ಹೋದರು ತಂಗಾಳಿ ಬೀಸಿ,ನೆರಳು ಧನ್ಯವಾದ ತಿಳಿಸುವುದಂತೆ...

ನದಿ ಕಲ್ಯಾಣಿಗಳಿಗೆಕೋ ಪವಿತ್ರತೆಯ ದೋಷವಿದೆಯಂತೆ,
ನಿನ್ನ ಪಾದದ ದನಿಯ ಸ್ಪರ್ಶಿಸುವೆಯಾ ಗೆಳತಿ,
ಪ್ರತಿಯಾಗಿ ನೀ ಎಲ್ಲೇ ನಡೆದರು ಪಾದ ತೊಳೆದು ಸತ್ಕರಿಸುವುದಂತೆ....

ಭುವಿಯ ಗುಣಗಳಿಗೆಕೋ ಕ್ಷಮೆಯ ಮರೆವಿದೆಯಂತೆ,
ನಿನ್ನ ಕ್ಷಮೆಯ ಕಣವನು ಉದಿರಿಸೆ ಗೆಳತಿ,
ನಿನ್ನ ಕ್ಷಮೆಯ ಉದಾರತೆಗೆ ತನ್ನ ಸ್ಥಾನ ಮರೆತ ಭುವಿ ವಂದಿಸುವುದಂತೆ...

ಎಲ್ಲಾ ದೇವರುಗಳಿಗೆಕೋ ನಂಬಿಕೆಯ ಕೊರತೆಯಿದೆಯಂತೆ,
ಒಂದು ದಿನದ ನಂಬಿಕೆಯ ಪಾಠ ಹೇಳುವೆಯಾ ಗೆಳತಿ,
ನಿನ್ನ ಪಾಠಕ್ಕೆ ನಂಬಿಕೆಯ ಪದಕ್ಕೆ ನಿನ್ನ ಹೆಸರನ್ನೇ ಅನುಮೋದಿಸಲು ಆಜ್ಞೆ ಮಾಡುತ್ತವಂತೆ.

ತಾರೆ ಪ್ರಕೃತಿ ಮಳೆ ಸಿರಿಯು ಕೋರಿಕೆಯನ್ನು ನೀ ನೀಗಿಸ ಬೇಕಂತೆ ಗೆಳತಿ,
ಸರದಿಯಲ್ಲಿ ನಿಂತು ಕೈ ಮುಗಿದು ಬೇಡುತ್ತವಂತೆ ನೀ ಎಂದೂ ನಗು ಹೊತ್ತ ಮೊಗದಲ್ಲಿ ಸುಮ್ಮನೆ ನಡೆದಾಡ ಬಾರದಂತೆ...

-ಅರೆಯೂರು ಚಿ.ಸುರೇಶ್

- ಅರೆಯೂರು ಚಿ. ಸುರೇಶ್

23 Aug 2017, 09:53 am