ಬೀಸುವ ತಂಗಾಳಿ ತಂದಿದೆ ಅವಳ ಮುಂಗುರುಳ ನೆನೆಪ
ಸುಡುವ ಸೂರ್ಯನಿಗೆ ಹೋಲಿಸಬಹುದೇನೊ ಅವಳ ಕೋಪ
ಆ ಶಶಿಯೂ ಕೊಂಚ ಮೌನಿ ಕಂಡರೆ ಅವಳ ಕಣ್ಣ ಹೊಳಪ
ಅವಳು ನನ್ನೊಲವ ಸೇರಿದ ಮೇಲೆ ನನ್ನೊಳಗೆ ನಾನಿರುವುದೆ ಅಪರೂಪ
ಅವಳು ನನ್ನೆದೆಗೆ ತಂದ ಪ್ರೀತಿಯ ಮಾಯೆ
ಉಳಿಸಿದೆ ನನ್ನಲಿನ್ನೂ ಅವಳ ನೆನಪಿನ ಛಾಯೆ
ಮರೆಯಬೇಕೆಂದರೂ ಮರೆಯಾಗದ ಅವಳ ನೆನಪು
ಮತ್ತೆ ಮತ್ತೆ ಮುಖಾಮುಖಿಯಾಗಿ ಅಳಿಸುತಿದೆ ಮುಖದ ಒಳಪು
ನೋಡಲಾಗದೆ ಅವಳ ಮನಸಿಗೆ ಚಡಪಡಿಕೆ
ಬೇಡವೆಂದರು ಮತ್ತೆ ಮತ್ತೆ ಕಾಡುವವು ಮಾತುಗಳ ಒಡಂಬಡಿಕೆ
ಅವಳ ನೆನಪೆಂದೂ ನನ್ನಲಿ ಅಮರ
ಅವಳ ನೆನೆದಾಗಲೆಲ್ಲ ಅನಿಸುವುದು ಯಾರೊ ಹೊತ್ತೊಯ್ದಂತೆ ಉಸಿರ
ಅವಳ ನೆನಪೆ ನನಗೀಗ ಮಾರಕ
ಅವಳ ನೆನಪೆ ನನ್ನುಸಿರಿಗೀಗ ವಾಹಕ
ಅವಳ ನೆನಪೆ ನನ್ನ ಬದುಕ ಹಿಡಿದಿಟ್ಟಿರುವ ಜಾತಕ
ನಾನು ಅವಳ ನೆನಪೊಳಗೆ ಕಳೆದೋಗಿರುವ ಅಮಾಯಕ
ಅವಳ ಕುಡಿ ಹುಬ್ಬು ಕಣ್ಣೊಟ ಆಚೆ ಕಾಡಿಗೆಯ ಬೊಟ್ಟೊಂದು ಇಡಲೆನು......
ಅವಳ ಹಾಲ ಗಲ್ಲದ ಮೇಲೆ ಹಲ್ಲು ಮುಡದಂತೆ ಮುತ್ತೊಂದು ಕೊಡಲೇನು .....
ಸಂಪಿಗೆಯಂತಹ ನಾಸಿಕಕಗೆ ಮುತ್ತಿನಂತಹ ನತ್ತೊಂದು ಇಡಲೇನು.....
ಅವಳ ವಿಶಾಲವಾದ ಹಣೆಯ ಮೇಲೆ ಸಿಂಧೂರ ತಿಲಕವ ಇಡಲೆನು .. .
ನಿನ್ನ ಮನಸಿನಾಚೆಯಲ್ಲಿ ಇರೊ ನನ್ನ ಪ್ರೀತಿಯನ್ನು ಹೆಳುವೆಯಾ ಏನೆಂಬುದು ನಾಳೆ .......
ಕೋಪದಲಿ ಸುಂದರ ಚೆಲುವೆ ನನ್ನವಳು..
ಮುನಿಸಿದಳು ನನ್ನ ನೋಡಿ ಮತ್ತವಳು..
ಕೋಪದಲಿ ಮುದ್ದಿಸಲು ಇಚ್ಚಿಸಿತು ಅವಳನು ನನ್ನ ಮನವು...
ಮುದ್ದಿಸುವಾಗ ಆಕೆ ತುಸು ನಾಚಿದಳು..
ಆಹಾ..! ಅದೆಂತಾ ಅದ್ಬುತ ಕ್ಷಣಗಳು...
ಅಡಿದ ಮಾತು ತಪ್ಪು ಅಗಬಹುದು ನಾಲಿಗೆ ರೂಪದಿ,
ನೋಡಿದ ಬಾವನೆ ತಪ್ಪು ಅಗಬಹುದು ವ್ಯಕ್ತಿಯ ಗುಣದಿ,
ಕಣ್ಣಿನ ನೋಟ ಮಂಜು ಅಗಬಹುದು ದೃಷ್ಟಿ ರೂಪದಿ,
ಕನಸಿನಲ್ಲಿ ಬಂದ ಕನಸು ಅಳಿಸುವುದು ಮನದಿ.
ಮನಸ್ಸಿನ ಮಾತು, ಬಾವನೆ, ನೋಟ, ಕನಸು ಕಾಣಿಸದೆ.....
ಬೆಪ್ಪುತಕ್ಕಡಿ ಬೆಪ್ಪುತಕ್ಕಡಿ ...
ಏನು ಮಾಡುತಿರುವೆ ಎಂದು ಕೇಳಿತು ಕಪ್ಪು ಕರಡಿ...
ನನಗಿದೆ ದೊಡ್ಡ ಸರಕಾರಿ ಹುದ್ದೆ
ಭ್ರಷ್ಟರ ಮೈಯನ್ನೆಲ ಮಾಡಿಬಿಡುವೆನು ಒದ್ದೆ
ನಾ ದೇಶ ಕಾಯುವೆನು
ಬಡತನವ ತೊಲಗಿಸುವೆನು
ಜಾತಿ ಮತ ಧರ್ಮ ಮೀರಿ ಸಮಾಜ ಕಟ್ಟುವೆನು
ಎಲ್ಲರ ನೋವುಗಳ ನಿರ್ಮೂಲನೆ ಮಾಡುವೆನು
ಎಂದಿತು ಬೀಗುತ ಅಭಿಮಾನದಲಿ ಬೆಪ್ಪುತಕ್ಕಡಿ
ಬೆಪ್ಪುತಕ್ಕಡಿ ಮಾತಕೇಳಿ ಗಹಗಹಿಸಿ ಹೇಳಿತು ಕಪ್ಪು ಕರಡಿ..
ಈ ಸರಕಾರ ನನ್ನದು
ವೋಟು ಹಾಕುವವರೆಗಷ್ಟೆ ಜನರು ನಾಯಕರು
ಆಮೇಲೆನಿದ್ದರು ನಮಗವರು ಸೇವಕರು
ನಾನೆಳಿದ್ದ ಕೇಳಬೇಕದವನು ನೀನು
ಸಾರ್ವಭೌಮನು ಈ ಸರಕಾರಕ್ಕೆ ನಾನು
ಮಾತು ಕೇಳದಿದ್ದರೆ ನೀನು, ಮಾಡುವೆನು ಊರಿಂದೂರಿಗೆ ಎತ್ತಂಗಡಿ
ಆಗಲು ಜಗ್ಗದಿದ್ದರೆ ನಿನಗೆಲ್ಲಿರುವುದು ಭೂಮಿಯ ಮೇಲೆ ಜಾಗ ಬೆಪ್ಪುತಕ್ಕಡಿ
ಭ್ರಷ್ಟತನವೆ ಮೈಯಲೆಲ್ಲ ತುಂಬಿ ನಾನಾಗಿರುವೆನು ಕಪ್ಪುಕರಡಿ
ಮೋಸ ಮಾಡಿ ಟೋಪಿ ಹಾಕಿ ದುಡ್ಡು ಮಾಡಿ ಅನ್ಯರ ಕಾಡಿ ಮೋಜು ಮಾಡಲು ರಾಜಕೀಯವೆ ದೊಡ್ಡ ಗರಡಿ
ಯಾರು ಹಾಕುವರು ಈ ನಾಗಲೋಟಕೆ ಲಗಾಮು ಆಗಲೆ ದೇಶವನೆ ಆಕ್ರಮಿಸಾಗಿದೆ ನಮ್ಮಂತವರೆ ಎಲ್ಲೆಲ್ಲೂ ಹರಡಿ
ಸುಮ್ಮನೆ ಹೇಳಿದಷ್ಟು ಕೇಳಬೇಕು, ಹೇಳಿದಷ್ಟು ಮಾಡಬೇಕು ಸಂಬಳ ಪಡೆಯಬೇಕು, ಕೆಲಸವಿಲ್ಲದಿದ್ದರೆ ಕೈ ಕಟ್ಟಿ ಕುಳಿತಿರಬೇಕು ಛಾವಣಿಯ ಅಡಿ