Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಾ......... ಜನಿಸಿದ.
.............ಆ ಊರು
ಸಹೃದಯಗಳ ಬೀಡು
ನಿಸ್ಕಲ್ಮಶ ಮನಸುಗಳ ...ನೆಲೆಯೂರು
ಸ್ವಚನದದ ಈ ನಾಡು
ಮಲ್ಲಿಗೆಯ ಹೊರಬಿಡು
ಸಾಹಿತ್ಯದ.......ಮಲೆನಾಡು
ಕವಿಗಳ ತವರೂರು......
ಪಂಪದಿಗಳು ಉದ್ಭವಿಸಿದ
ಈ ನಾಡು ಕೋಗಿಲೆಯ ತವರೂರು
ಬಾಯಾರಿದವರಿಗೆ ಎಳೆನೀರು
ನೀಡುವ .. ಕಲ್ಪತರು ನಾಡು
ಹಸಿದವರಿಗೆ ... ಹೋಳಿಗೆ ನೀಡುವ
ಅನ್ನಪೂರ್ಣೇಶ್ವರಿಯ ... ನಾಡು
ಎಲ್ಲರನ್ನು ತನ್ನ ಮಕ್ಕಳಂತೆ
ಸ್ವಾಗತಿಸುವ ......ಸಕ್ಕರೆಯ ನಾಡು
ಶಿಲ್ಪಕಲೆಗಳ ..... ನೆಲೆಬಿಡು
ಚಿನ್ನದಗಣಿಗಳ ....ಹೊನಲು
ಸಿಪಾಯಿಗಳ........ತವರು
ಸ್ವಾತಂತ್ರದ... ಬಾಗಿಲನ್ನು ...ಮೊದಲಿಗೆ
ತಟ್ಟಿದ ....ವೀರರ........ ನಾಡು
ಜಾಸ್ನಿ ರಾಯಣ್ಣದಿಗಳ....ಮೆಟ್ಟಿದ
ಶರ್ಯ್ರದ..... ಜನ್ಮ ನಾಡು
ಅದೇ ........ನನ್ನ ನಾಡು
ನಾ ಹುಟ್ಟಿದ.... ಆ ಊರು
ಎಲ್ಲರ ಪ್ರೀತಿಯ..... ನಾಡು
ಅದೇ ನನ್ನ ........... ಕರುನಾಡು
------ ಕನ್ನಡಿಗ... ಮಂಜು
- ಮಂಜು
28 Aug 2017, 11:00 am
ಬುಡ ಬುಡಿಸಿ ಬರುತಿರುವ
ಬುಡ ಬುಡಿಕೆ ಮಾಮ!!
ನೀ ಬಂದು ನುಡಿಯೋ
ನನ್ನ ತವರಿನ ಕ್ಷೇಮ!!
ತವರೂರ ಮನೆಯಲ್ಲಿ
ನನ್ನ ತಾಯಿ ತಂದೆ ಕ್ಷೇಮ!!
ಅಣ್ಣ ತಮ್ಮಂದಿರ ಸರಿ
ಬಾಂಧವ್ಯ ಕ್ಷೇಮ!!
ಬುಡ ಬುಡಿಸಿ ಬರುತಿರುವ
ಬುಡ ಬುಡಿಕೆ ಮಾಮ!!
ನೀ ಹೋಗಿ ವರಿಸೋ
ನನ್ನ ಹೆತ್ತವರ ಕಣ್ಣ!!
ನೀ ಚಿನ್ನದ ಮಾತಾಡು
ಆತಂಕ ಅಳಿಸು!!
ನನ್ನ ಕ್ಷೇಮವನ್ನು ತಿಳಿಸಿ
ನೀ ಸಂತಸದಿ ಹರಸು!!
ನನ್ನ ಅಣ್ಣ ನನ್ನ ತಮ್ಮ
ಇಬ್ಬರೂ ನನ್ನ ಕಣ್ಣು!!
ಒಳ್ಳೆಯ ನುಡಿ ನುಡಿದು
ಹುರಿದುಂಬಿಸು ನಡೆ!!
ನೀ ನಡೆವ ಹಾದಿಯಲಿ
ಹೂವು ಚೆಲ್ಲಿರಲಿ!!
ಹಿತವಾದ ಮಾತಿನಲಿ
ಸಿಹಿತನ ಇರಲಿ!!
ಹಿತವನ್ನು ನೀ ನುಡಿದು
ಹಿಂದಿರುಗುವಾಗ
ಹಾಲು ಸಕ್ಕರೆಯ ಹಂಚೋ
ಸಂಭ್ರಮವ ನೋಡ!!
ಬುಡು ಬುಡಿಸಿ ಬರುತಿರುವ
ಬುಡ ಬುಡಿಕೆ ಮಾಮ!!
ನನ್ನ ತವರೂರ ನೀ ಕಂಡು
ಹಿಂದಿರುಗು ಮಾಮ!!
- ಪಿ.ಜಿ.ಜ್ಯೋತಿ
28 Aug 2017, 10:12 am
ರಜೆಯ ಮಜಾ ಮುಗಿಯಿತು ಇಂದಿಗೆ
ಹೋಗಬೇಕು ಡ್ಯೂಟಿಗೆ ಎಂದಿನಂತೆ
ಸುರಿಯುವ ಜಿಟಿಜಿಟಿ ಮಳೆಗೆ ಹೊರಹೋಗಲು ಮನಸ್ಸಿಲ್ಲ,
ಹೋಗದಿದ್ರೆ ಬೇರೆ ಉಪಾಯವಿಲ್ಲ
ಜೀವನವೇ ಒಂದು ತಿರುಗೊ ಚಕ್ರ
ರಜೆ ಸಿಕ್ಕಾಗ ಮಜಾ ಮಾಡಬೇಕು, ಡ್ಯೂಟಿ ಬಂದಾಗ ಸಜೆಯಲ್ಲಿದ್ದಾಂಗೆ ಇರಬೇಕು
ದುಡಿಯುವವರ ಹಣೆಬರಹವಿದು
- ಎಸ್.ಬಿ
28 Aug 2017, 10:00 am
ಜೊತೆಯಾಗಿ ನಿಲ್ಲದೆ ಆಸರೆ ತೋರದೆ
ಬದುಕಿನ ಪಯಣದಲ್ಲಿ ಯಾರು ನನ್ನವರು
ಬಾಂದವ್ಯ ಬೆಸಯದೆ ಬದುಗಳ್ಯಾರು ನನ್ನವರು
ಸ್ವಾರ್ಥ ಬಯಸದೆ ನಿಸ್ವಾರ್ಥದಿಂದಯಿರುವವರು
ಯಾರು ನನ್ನವರು ನಮಗಾಗಿ ಬಂದವರು
ಆಸರೆ ಕಷ್ಟಕ್ಕಾಗಲಿಲ್ಲ
ಸೋತಾಗ ಬಲ ತುಂಬಿದವರಲ್ಲ
ಯಾರು ನನ್ನವರು ಜೊತೆಯಾಗಿ ಬಂದವರು
ಹುಟ್ಟುವಾಗೊಂದೆ ಸಾಯುವಾಗೊಂದೆ
ನಡುವೆ ಬರುವ ಸಂಬಂದಗಳು ಸಂಬಂಧಿಕರು
ನಿಜವಾಗಲಿಲ್ಲ ಯಾರು ನನ್ನವರು.
- nageshwarh
28 Aug 2017, 09:57 am
ಇಂದು ಈ ಸುಂದರ ಸಂಜೆಯಲ್ಲಿ
ತಿಂಗಳ ಬೆಳಕಿನಲ್ಲಿ ತಂಗಾಳಿ ಸವಿಯುತ್ತ
ಹುಲ್ಲು ಹಾಸಿಗೆಯ ಮೇಲೆ ಕುಳಿತು
ನನ್ನವನ ಬರುವಿಗಾಗಿ ಕಾಯುತ್ತಿರುವೆ!!
ಅವನಿಗೇಕೋ ಇಂದು ನನ್ನ ನೆನಪಿಲ್ಲ
ನೆನಪಿದ್ದರೂ ಹುಸಿ ಮನಿಸೇ
ಬರದೇ ನನ್ನನ್ನು ಕಾಡಿಸುತ್ತಿರುವನೇ
ಇಲ್ಲಾ ನನ್ನನ್ನು ಪರೀಕ್ಷಿಸುತ್ತಿರುವನೇ!!
ಆಕಾಶದ ತುಂಬ ಅಲ್ಲಲ್ಲಿ ಮುಸುಕಿರುವ
ಮೋಡವು ಏನನ್ನೋ ಮರೆಮಾಚುತ್ತಿದೆ
ಯಾರದೋ ಹೊಳಪು ಮರೆಯಲ್ಲಿ ನಿಂತು
ನನ್ನನ್ನು ಕದ್ದು ನೋಡುತ್ತಿರುವಂತಿದೆ!!
ಅದೋ ಅಲ್ಲಿ ಮೇಲೆ ದೂರದಲ್ಲಿ
ನಕ್ಷತ್ರಗಳ ಸಾಲಿನಲ್ಲಿ ನಿಂತು ಅವನು
ಇಲ್ಲಿಯೇ ಇಣುಕಿ ನೋಡುತ್ತ ನಿಂತಿರುವ
ಬಾ ಎಂದು ಕೈ ಚಾಚಿ ನನ್ನ ಕರೆದಿರುವ!!
- ಪಿ.ಜಿ.ಜ್ಯೋತಿ
28 Aug 2017, 09:43 am
ನೀನಿಟ್ಟ ಚುಕ್ಕಿ
ಬಾನಂಗಳದಲಿ ತೇಲಿಹೋಗಿದೆ...
ಮೋಡದ ಮರೆಯಲ್ಲಿ....
ನಾ ಹೇಗೆ ಹುಡುಕಲಿ
ಆ ಬೆಳ್ಳಕ್ಕಿ ಸಾಲಿನಲಿ...
ಆದರೂ ಹುಡುಕುವೆ
ವ್ಯರ್ಥ ಪ್ರಯತ್ನದಲಿ...
ಬಿಡಲಾರೆ ಎಂದಿಗೂ
ನನ್ನೀ ಜನುಮದಲಿ....
- ಪ್ರಿಯಾಂಕ
28 Aug 2017, 08:17 am
ಜೀವನದಲ್ಲಿ ನೀನು ಮಾದರಿಯಂತೆ ಬಾಳು
ಭೂಮಿತಾಯಿಯ ಋಣ ಅಪಾರ ಅದುವೆ
ನಿನ್ನ ಜೀವನದ್ಯೇಯದ ಆಚಾರ
ನಂಬಿಕೆ ನಿನ್ನಲ್ಲಿ ಅಪಾರ
ಹೂಸಿಯಾಗದಿರಲಿ ನಿರಂತರ
- nageshwarh
27 Aug 2017, 10:07 pm
ನನ್ನ ಹೃದಯ ಬಡಿತಗಳನ್ನು
ಒಂದು ಕ್ಷಣ ನಿಲ್ಲಿಸುವಂತೆ
ಬಂದು ಹೋಗುವ ............ ಕನಸೇ
ನೀ ಏಕೆ ಹೀಗೆ ............
ನೀ ಬರೀ ಸುಳ್ಳಿನ ಸರಮಾಲೆ
ಸತ್ಯವನ್ನೇ ನುಂಗುವ ಶವ್ರ್ಯಕ್ಕೇ...
ನಾ . ಏನು ತಾನೇ ಹೇಳಲಿ..
ಒಂದು ಬಾರಿ ಖುಷಿಯ ಹೊನಲು
ಹೊತ್ತು ತರುವೆ.........
ಹಾಗೆಯೇ ಆತಂಕದ ಭಯದ ಅಲೆಗಳನ್ನು
ಕರೆತರುವೆ...........
ರಾತ್ರಿಯಲ್ಲಿ ನೀ ಹೆಚ್ಚಾಗಿ ಬರುವೆ
ನಕ್ಷತ್ರಗಳ ನಡುವಿನ .. ಚಂದಿರನಂತೆ
ಕತ್ತಲ ನಡುವಲ್ಲಿ ಹೋಂಬೆಳಕಂತೆ...
ಕೆಲವು ಯಶಸ್ಸಿಗೆ ನೀ ಸ್ಪುರ್ತೀಯಂತೆ
ಅದರೆ ಅಲವು ಗೊಂದಲಗಳಿಗು
ನೀ ಕಾರಣನಂತೆ..........
ಆದರು ನೀ ನನಗೆ ಅವಷ್ಯಕನಂತೆ
ಏಕೆಂದರೆ ........
ನೀ ನನ್ನ ಹೃದಯದ ಬಾಗವಂತೆ.........
......ಮಂಜು
- ಮಂಜು
27 Aug 2017, 09:59 pm
ಅಮರ ಪ್ರೇಮಿಗಳು ನಾವಂದು
ನೀ ಬಿಟ್ಟು ದೂರ ಹೋದೆ ಯಾಕಿಂದು
ನನ್ನ ನೋಡಿ ನಗುತ್ತಿದ್ದಾರೆ ಜನರಿಂದು
ನೀ ಇರದೇ ಹೇಗಿರಲಿ ನಾನಿಂದು
ನಿನ್ನ ನೆನಪಲ್ಲಿ ಸಾಯುತ್ತಿದೆ ಮನವಿಂದು
ಯಾವ ಜನ್ಮದ ಶಿಕ್ಷೆಯೋ ನನಗಿಂದು!
- ಪ್ರಿಯಾಂಕ
27 Aug 2017, 02:48 pm
ಹಣದ ದಾಹದ ಎದುರು
ಪ್ರೀತಿ ವಾತ್ಸಲ್ಯದ ನುಡಿಗಳು
ಬಹುದೂರ.
ತನ್ನವರನ್ನೆ ಕಳೆದುಕೊಳ್ಳಲು
ತಯಾರಾಗಿ ನಿಂತ
ಈ ಹಾಳು
ಮನುಜನ ಕಣ್ಣಿಗೆ
ಹಣವು ಮಾತ್ರವೇ
ಗೋಚರಿಸುವುದು!
ಶ್ರೀಮಂತರ ಹುಚ್ಚು ಮೋಹಕ್ಕೆ
ಎಲ್ಲೆಲ್ಲಿಯೂ ನಡೆಯುತ್ತಿದೆ
ರಕ್ತದ ದಾಹ.
ಕೂಡಿಟ್ಟ ಹಣವ ಕರಗಿಸಲು
ಹೆಣಗಾಡುತ್ತಿದ್ದರೂ
ಇವರ ಆಸೆಯ ದಾಹ
ಎಂದೂ ಕರಗದು!
ಕೊನೆಯಿರದ ಇವರ
ಅತಿ ಆಸೆಗಳಿಗೆ
ಅದೆಷ್ಟು ಕುಟುಂಬಗಳು
ಬಲಿಯಾಗಬೇಕಿದೆಯೋ?
ಪ್ರಿಯಾಂಕ✍
- ಪ್ರಿಯಾಂಕ
27 Aug 2017, 02:43 pm