Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹುಟ್ಟಿದ ಕ್ಷಣ ಬೆಳಕು ನೊಡುವ ಆಸೆ
ಎಳೆಯ ಪ್ರಾಯದಲಿ ಸ್ನೆಹಿತರೊಂದಿಗೆ ಕೂಡಿ ಆಯಾಸಗುವಷ್ಟು ಆಡುವ ಆಸೆ
ಹದಿ ಹರಯದಲ್ಲಿ ಹೆಳಿಕೊಳ್ಳದ ಆಸೆ
ಪ್ರೌಡಯುದಲಿ ಚಲದ ಗುರಿಯ ತಲುಪುವ ಆಸೆ
ಮದುವೆಯನಂತರ ಮಕ್ಕಳ ಜೊತೆ ಬೆಳಯುವ ಆಸೆ
ಮುಪ್ಪಾದಾಗ ಹೊಸ ಪೀಳಿಗೆಯರೊಂದಿಗೆ ಬೆರೆಯುವ ಆಸೆ
ಇ ಆಸೆಯನ್ನು ಹುದುಗಿಸಿದವನು ಯಾರು ಯಲ್ಲಿಹನು, ಕಾಲಚಕ್ರದಲಿ ಅಳವಡಿಸಿ ಬೆಕಂತೆ
ಮಾರ್ಪಡಿಸಿ ಜೀವನಕ್ಕೆ ಒಲವನ್ನು ಬೆಲೆಯನ್ನು ತುಂಬಿ ಸಾತ್ಕರಿಸಿ ಬದುಕನ್ನು ಒಂದು ಕತೆಯಾಗಿಸಿರುವನು. ನಾ ಒಲ್ಲೆ ಇವನ ...
ಆದರೂ ಆಸೆ ಅತ್ಯವಶ್ಯಕ... ನಾ ಹೊಗೊಲ್ಲೆ ಇದರ ಮೂಲ ಜಾಡಿಡಿದು..
ಮಧುರ
- ಮದನ್
29 Aug 2017, 04:56 am
ಆಗುತಿದೆ ಬರಿದು..
ಪ್ರಕೃತಿಯ ಮಡಿಲು..
ಕಟ್ಟಡಗಳು ಮೇಲೇದ್ದು..
ಮರಗಿಡಗಳ ಕಡಿದು..
ನದಿಕೆರೆಗಳ ಒತ್ತಿಒತ್ತಿ..
ಹಸಿರು ಜಾಗಗಳ ನುಂಗಿ..
ಒಂದಿಷ್ಟು ಜಾಗ ಬಿಡದಂಗೆ..
ನುಂಗುತ ಎಲ್ಲವನು ತಿಮಿಲಿನಂಗೆ..
ಎಲ್ಲವೂ ನಶಿಸಿ ಪ್ರಕೃತಿಯ ಅಳಿಸಿ
ಮಾಡುತಿಹರು ಭೂಮಿಯನು..
ಒಂದು ಮರುಭೂಮಿಯಂಗೆ....
ಮೂಕ ಪ್ರಾಣಿಪಕ್ಷಿಗಳಿಗಿಲ್ಲ..
ಜೀವಿಸಲು ಜಾಗ..
ವೇದನೆ ನುಂಗಿ..
ಮಾಡುತಿವೆ ಪ್ರಾಣತ್ಯಾಗ..
ಕಂಡರೂ ತಿಳಿದರೂ
ಕುರುಡನಾಗಿಹನು
ಈ ಮನುಜ ಕೂಡ....
ಮರೆತು ತನಗಿತ್ತ ಸ್ಥಾನಮಾನ..
ತನಗೆ ತಾನೆ ತರುತಿಹನು ಅವಸಾನ..
ಪ್ರಕೃತಿ ವಿಕೋಪಕ್ಕಿಲ್ಲ ಯಾರು ಸಮಾನ..
ಆಗುವುದು ಮನುಜನ ಬಲಿದಾನ..
ಕೊನೆಗೆ ತನಗೆ ತಾನೆ ಕೊಡಲಿ ಆಗುತಾನ....
- KR Sreekamala
28 Aug 2017, 10:23 pm
ನೀ ಯಾಕೆ ಇಂಗಾಡ್ತೀ ಚಿನ್ನ
ಈ ಮುನಿಸು ಯಾಕೆ ನಿಂಗೆ ರನ್ನ
ಆಗುಂಬೆಗ್ ಕರ್ಕೊಂಡ್ ಹೋಗ್ತೀನಿ ಚಿನ್ನ
ಬೆಳ್ಗಿನ್ ಸೂರ್ಯನ್ ತೋರಿಸ್ತೀನಿ... ರನ್ನ
ಶಿವಮೊಗ್ಗಕ್ ಹೋಗೋಣ ...ಚಿನ್ನ
ಜೊಗದ್ಗುಂಡಿ ನೋಡೋಣ ... ರನ್ನ
ಮೈಸೂರ್ಗೆ ಹೋಗೋಣ ...ಚಿನ್ನಾ
ಮಲ್ಲಿಗೆ ಹೂವ್ ಮುಡಿಸ್ತೀನಿ.... ರನ್ನ
ಧಾರವಡಕ್ ಹೋಗೋಣ ...ಚಿನ್ನ
ಬೆಣ್ಣೆ ...ದೋಸೆ ಕೋಡ್ಸ್ತಿನಿ.....ರನ್ನ
ಅಯಾಯ್ಯೊ... ಇನ್ನು ನಿನ್ ಮುನಿಸು
ಹೋಗಿಲ್ವ ......
ಸರಿ....
ಬೆಂಗಳೂರಿಗ್.. ಹೋಗೋಣ ... ಚಿನ್ನ
ಅಲ್ಲಿ ..ಸಿನಿಮಾ.. ನೋಡೋಣ....
ಬೇಗ ಹೋಗೋಣ.......ಮುನ್ನ
ನೀ... ಹತ್ತು.... ಬಸ್ಸನ್ನ!
-------- ಮಂಜು..
- ಮಂಜು
28 Aug 2017, 09:27 pm
ಸ್ವಪ್ನಗಳೊಳ್ ನಗ್ನ ಸತ್ಯ್ಐತಣ್ಣ..
ಆಕೆ ಎಚ್ಚರ ಕೊಟ್ಠಾಳು ನೊಡ್..
ನಿ ಅತಿ ಆಸೆಯೊಳ್ ದುಃಖೋಳ್ ಕಷ್ಟೋಳ್ ಯ
ನಿ ತ್ರಪ್ತಿಯೊಳ್ ಅಸೂಯೆಯೊಳ್ ದರ್ಪಯೊಳ್ ಯ
ನಿ ಬೂತ ಭವಿಷ್ಯ ಕಾಲ ಯೊಚನೆಯೊಳ್ ಅಡಗಿಹು..
ಎಚ್ಚರಗೊಳ್..ಎಚ್ಚರಗೊಳ್...ಸ್ವಪ್ನಗಳೊಳ್ ಅಡಗಿಹದು ನಗ್ನ ಸತ್ಯ್ಐತಣ್ಣ
--- ಮದನ್
- ಮದನ್
28 Aug 2017, 08:00 pm
ಸಾಗುವದಾರಿ ಏರಳಿತದ ಪ್ರಶ್ನೆ
ಸಾದನೆಯ ದಾರಿ ಉತ್ತರದ ರೇಖೆ
ನಂಬಿಕೆ ಇಲ್ಲಿ ನಿನ್ನೊಳಗೆ
ಸಾವಿರ ಪ್ರಶ್ನೆಗಳು ಅದರೊಳಗೆ
ಗುರಿಯೊಂದಿರಲಿ ಮನದೊಳಗೆ
ಸಾಧನೆಯ ಹೆಜ್ಜೆ ಹಾಕು ಸಮಾಜದೊಳಗೆ
- nageshwarh
28 Aug 2017, 07:40 pm
ಮಳೆಗೋಸ್ಕರ ರೈತ ಕಾಯಲು
ಮುಂದಿದ್ದ ಬರಗಾಲ ಕಾಡಲು
ಮತ್ತೆ ಮತ್ತೆ ಮೋಡ ನೋಡಲು
ಹಿಂಜರಿಕೆ ಏನನ್ನೂ ಮಾಡಲು
ಕಾದು ಕಾದು ಹೆಚ್ಚಾಯ್ತು ರೈತನ ಗೋಳು
ರಾಜಕೀಯದಲ್ಲಿ ಬೆಲೆ ಇಲ್ಲದಂತಾಯಿತು ರೈತನ ಬಾಳು
ಯಾಕೆಂದ್ರೆ ಇವರು ದುಡ್ಡು ತಿನ್ನುವ ಹುಳುಗಳು
ರೈತನಿಗು ಸಿಗಲಿಲ್ಲ ಅನ್ನದ ಕಾಳು
ಬೇಸತ್ತು ಹೊರಟ ಆ ಕೊನೆಯ ಕ್ಷಣಗಳು
ರೈತ ಸತ್ತಾಗ,ಮೋಡ ನೋಡ್ತಿದ್ವು ಕಣ್ಗಳು
ಮುಷ್ಟಿಯಲ್ಲಿ ಮಣ್ಣು ಹಿಡಿದಿದ್ವು ಕೈಗಳು....
- Yashwanth
28 Aug 2017, 07:21 pm
ಹೋ.....ಬೆಟ್ಟ ನೀನೇಕೆ ಇಷ್ಟು ದೂರ!
ನ... ಒಮ್ಮೆ ನೋಡಬೇಕು ನಿನ್ನ ಹತ್ತಿರದಿಂದ
ಏನು ಮಾಡಲಿ...ನ... ಒಬ್ಬ ಅಂಗವಿಕಲ
ಏಳಲಾರೆ ..... ನ ...ಕುಂತ್ತಲಿಂದ
ಎಲ್ಲ ಕೇಳುವರು ಬೆಟ್ಟ ಚಂದ... ಉಂಟಾ
ನ.. ಎನ. ಹೇಳಲಯ್ಯಾ ನೋಡದೆ ನಿನ್ನ
ಒಮ್ಮೆ ...... ಬಾ ನನ್ನ ಅತ್ತೀರ
ನಾ.... ನೋಡುವೆನು. ನಿನ್ನ
ಎಲ್ಲರಿಗೂ... ಹೇಳುವೆನು
ನೀ............. ಚೆನ್ನ
---------- ಮಂಜು'
- ಮಂಜು
28 Aug 2017, 06:30 pm
ಅವಳ ನೆತ್ತಿಯ ಇಳಿಜಾರಿನಿಂದ
ಇಳಿದು ಬಂದ ಚಿನ್ನದ ಬೊಟ್ಟು!!
ಶೋಭಿಸುತ್ತಲಿ ಇರುವುದು
ಅವಳ ಹಣೆಯ ಮೇಲೆ ಹೊಳೆದು!!
ಸಿಂಧೂರ ಬಿಂದುಗೆಯ ಜೊತೆಯಲ್ಲಿ
ಬೀಗುತಿಹುದು ಈ ನೆತ್ತಿಯ ಬೊಟ್ಟು!!
ಸುಂದರಿಗೆ ಸಿಂಗಾರದ ಆಭರಣವು
ಧರಿಸಿರುವ ಈ ಬೈತಲೆ ಬೊಟ್ಟು!!
ಚಂದೊಳ್ಳಿ ಚೆಲುವೆಯ ಅಂದದ ಗುಟ್ಟು
ತನ್ನೊಳಗೆ ಅಡಗಿಸಿದೆ ಬೈತಲೆ ಬೊಟ್ಟು!!
ನೆತ್ತಿಯ ಮೇಲಿಂದ ಹಣೆಯ ವರೆಗೂ
ಅದರದೇ ಸಾಮ್ರಾಜ್ಯ ಅದು ಇರುವ ವರೆಗೂ!!
- ಪಿ.ಜಿ.ಜ್ಯೋತಿ
28 Aug 2017, 05:40 pm
ವಿರಹದಲ್ಲಿ ಬೆಂದಿದ್ದರೂ
ಅವಳನ್ನೇ ಕಾದಿರುವೆ!!
ಅವಳು ಒಮ್ಮೆ ಬರಲು ಇಲ್ಲಿ
ನನ್ನ ಮನವು ಚಿಗುರುವುದು!!
ಬಾಳಿನಲ್ಲಿ ಸಿಹಿಯ ಕೊಡುವ
ಸಕ್ಕರೆಯ ಗೊಂಬೆ ಅವಳು!!
ನಗುವಿನ ಸ್ವರ್ಗವ ಧರೆಗೆ
ನನಗಾಗಿ ತಂದವಳು ಅವಳು!!
ಅಕ್ಕರೆಯ ಮಾತನು ಆಡಿ
ನನ್ನ ಹೃದಯ ಸೇರಿದವಳು!!
ಅವಳಿಲ್ಲದ ಪ್ರತಿ ಗಳಿಗೆ
ನಶ್ವರವು ಈ ನನ್ನ ಬದುಕು!!
- ಪಿ.ಜಿ.ಜ್ಯೋತಿ
28 Aug 2017, 04:02 pm
ದೂರೀ ದೂರೀ ಕಂದಮ್ಮ
ಜೋಗುಳವ ತೂಗಿಹನು ಚಂದ ಮಾಮ!!
ಲಾಲಿ ಲಾಲಿ ಕಂದಮ್ಮ
ಸುವ್ವಾಲಿ ಹಾಡಿಹನು ಚಂದ ಮಾಮ!!
ತಂಗಾಳಿ ತಲೆದೂಗಿ ಬಂತು
ಮನೆಯ ಅಂಗಳದಿ ನಿನ್ನ ಕಾದು ನಿಂತು!!
ಹುಣ್ಣಿಮೆಯೇ ಧರೆಗಿಳಿದು ಬಂತು
ನಿನ್ನ ನಿದಿರೆಯಲಿ ಕನಸಾಗಲು ಎಂದು!!
ಇರುಳಲ್ಲಿ ಹೊಳೆಯುವ ಬೆಳಕು
ಕಂದ ನೀನಾದೆ ಈ ನಮ್ಮ ಮನೆಗೆ!!
ನಿನ್ನ ನಗುವಲ್ಲಿಯೂ ನಿನ್ನ ಅಳುವಲ್ಲಿಯೂ
ಜೊತೆಯಾಗುವ ಆಣೆಯ ನಾ ಇಡುವೆ!!
- ಪಿ.ಜಿ.ಜ್ಯೋತಿ
28 Aug 2017, 02:43 pm