ನೀನಿಟ್ಟ ಚುಕ್ಕಿ
ಬಾನಂಗಳದಲಿ ತೇಲಿಹೋಗಿದೆ...
ಮೋಡದ ಮರೆಯಲ್ಲಿ....
ನಾ ಹೇಗೆ ಹುಡುಕಲಿ
ಆ ಬೆಳ್ಳಕ್ಕಿ ಸಾಲಿನಲಿ...
ಆದರೂ ಹುಡುಕುವೆ
ವ್ಯರ್ಥ ಪ್ರಯತ್ನದಲಿ...
ಬಿಡಲಾರೆ ಎಂದಿಗೂ
ನನ್ನೀ ಜನುಮದಲಿ....
ಅಮರ ಪ್ರೇಮಿಗಳು ನಾವಂದು
ನೀ ಬಿಟ್ಟು ದೂರ ಹೋದೆ ಯಾಕಿಂದು
ನನ್ನ ನೋಡಿ ನಗುತ್ತಿದ್ದಾರೆ ಜನರಿಂದು
ನೀ ಇರದೇ ಹೇಗಿರಲಿ ನಾನಿಂದು
ನಿನ್ನ ನೆನಪಲ್ಲಿ ಸಾಯುತ್ತಿದೆ ಮನವಿಂದು
ಯಾವ ಜನ್ಮದ ಶಿಕ್ಷೆಯೋ ನನಗಿಂದು!
ಹಣದ ದಾಹದ ಎದುರು
ಪ್ರೀತಿ ವಾತ್ಸಲ್ಯದ ನುಡಿಗಳು
ಬಹುದೂರ.
ತನ್ನವರನ್ನೆ ಕಳೆದುಕೊಳ್ಳಲು
ತಯಾರಾಗಿ ನಿಂತ
ಈ ಹಾಳು
ಮನುಜನ ಕಣ್ಣಿಗೆ
ಹಣವು ಮಾತ್ರವೇ
ಗೋಚರಿಸುವುದು!
ಶ್ರೀಮಂತರ ಹುಚ್ಚು ಮೋಹಕ್ಕೆ
ಎಲ್ಲೆಲ್ಲಿಯೂ ನಡೆಯುತ್ತಿದೆ
ರಕ್ತದ ದಾಹ.
ಕೂಡಿಟ್ಟ ಹಣವ ಕರಗಿಸಲು
ಹೆಣಗಾಡುತ್ತಿದ್ದರೂ
ಇವರ ಆಸೆಯ ದಾಹ
ಎಂದೂ ಕರಗದು!
ಕೊನೆಯಿರದ ಇವರ
ಅತಿ ಆಸೆಗಳಿಗೆ
ಅದೆಷ್ಟು ಕುಟುಂಬಗಳು
ಬಲಿಯಾಗಬೇಕಿದೆಯೋ?
ನೋಡುವಲ್ಲಿ ಚೆಲುವೆಯ ಸೊಗಸು ಮರೆಯಾದ ನನ್ನ ನಗುವಿಗೆ ಸಿಕ್ಕಿದಂತಾಯಿತು ಹೊಸದಾದ ಸೊಬಗು.................
ಯಾರಗೆಂದು ಈ ನನ್ನ ಜೀವ ಉಸಿರಾಡುವುದು ಪ್ರತಿಯೊಂದು ನಿಮಿಷ ನೀನೇ ನೀನೇ ಎಂದು ತಿಳಿಸುವುದು ನನ್ನ ಹೃದಯ ಬಡಿತ ನಿನ್ನ ಕಂಡ ತಕ್ಷಣ ಬಡಿತ ಹೆಚ್ಚಾಗಿ ನಿನ್ನ ಸನಿಹ ಸೇರುವ ಆಸೆಯಾಗಿ...............
ನಿಂತೆ ನಾನು ನೆನೆಯುತ್ತಾ ನಿನ್ನ
ನಾಚಿ ನಿರಾದೆ ನಾನು ನಿನ್ನ ಚೆಲುವ ಸ್ಮರಿಸುತ್ತಾ..................
ಕನಸಲ್ಲಿನ ನನ್ನ ಮನಸ್ಸಿನ ರಾಜ್ಯಕ್ಕೆ ನನ್ನ ಪ್ರೀತಿಯ ಆಹ್ವಾನ ನಿನಗಿಂದು ಕದ ತಟ್ಟುವ ಮುನ್ನವೇ ತೆರೆದಿಡುವೆನು ಮನಸ್ಸನ್ನು ಗುಟ್ಟಾಗಿ ಬಚ್ಚಿಡುವೆ ನನ್ನ ಹೃದಯಾದಲ್ಲಿ ನಿನ್ನನ್ನು...........