Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚುಕ್ಕಿ

ನೀನಿಟ್ಟ ಚುಕ್ಕಿ
ಬಾನಂಗಳದಲಿ ತೇಲಿಹೋಗಿದೆ...
ಮೋಡದ ಮರೆಯಲ್ಲಿ....
ನಾ ಹೇಗೆ ಹುಡುಕಲಿ
ಆ ಬೆಳ್ಳಕ್ಕಿ ಸಾಲಿನಲಿ...
ಆದರೂ ಹುಡುಕುವೆ
ವ್ಯರ್ಥ ಪ್ರಯತ್ನದಲಿ...
ಬಿಡಲಾರೆ ಎಂದಿಗೂ
ನನ್ನೀ ಜನುಮದಲಿ....

- ಪ್ರಿಯಾಂಕ

28 Aug 2017, 08:17 am

ವರಸೆ

ಜೀವನದಲ್ಲಿ ನೀನು ಮಾದರಿಯಂತೆ ಬಾಳು
ಭೂಮಿತಾಯಿಯ ಋಣ ಅಪಾರ ಅದುವೆ
ನಿನ್ನ ಜೀವನದ್ಯೇಯದ ಆಚಾರ
ನಂಬಿಕೆ ನಿನ್ನಲ್ಲಿ ಅಪಾರ
ಹೂಸಿಯಾಗದಿರಲಿ ನಿರಂತರ

- nageshwarh

27 Aug 2017, 10:07 pm

ಕನಸು......

ನನ್ನ ಹೃದಯ ಬಡಿತಗಳನ್ನು
ಒಂದು ಕ್ಷಣ ನಿಲ್ಲಿಸುವಂತೆ
ಬಂದು ಹೋಗುವ ............ ಕನಸೇ
ನೀ ಏಕೆ ಹೀಗೆ ............

ನೀ ಬರೀ ಸುಳ್ಳಿನ ಸರಮಾಲೆ
ಸತ್ಯವನ್ನೇ ನುಂಗುವ ಶವ್ರ್ಯಕ್ಕೇ...
ನಾ . ಏನು ತಾನೇ ಹೇಳಲಿ..

ಒಂದು ಬಾರಿ ಖುಷಿಯ ಹೊನಲು
ಹೊತ್ತು ತರುವೆ.........
ಹಾಗೆಯೇ ಆತಂಕದ ಭಯದ ಅಲೆಗಳನ್ನು
ಕರೆತರುವೆ...........

ರಾತ್ರಿಯಲ್ಲಿ ನೀ ಹೆಚ್ಚಾಗಿ ಬರುವೆ
ನಕ್ಷತ್ರಗಳ ನಡುವಿನ .. ಚಂದಿರನಂತೆ
ಕತ್ತಲ ನಡುವಲ್ಲಿ ಹೋಂಬೆಳಕಂತೆ...

ಕೆಲವು ಯಶಸ್ಸಿಗೆ ನೀ ಸ್ಪುರ್ತೀಯಂತೆ
ಅದರೆ ಅಲವು ಗೊಂದಲಗಳಿಗು
ನೀ ಕಾರಣನಂತೆ..........

ಆದರು ನೀ ನನಗೆ ಅವಷ್ಯಕನಂತೆ
ಏಕೆಂದರೆ ........
ನೀ ನನ್ನ ಹೃದಯದ ಬಾಗವಂತೆ.........



......ಮಂಜು

- ಮಂಜು

27 Aug 2017, 09:59 pm

ಪ್ರೇಮಿ ನಾನು...

ಅಮರ ಪ್ರೇಮಿಗಳು ನಾವಂದು
ನೀ ಬಿಟ್ಟು ದೂರ ಹೋದೆ ಯಾಕಿಂದು
ನನ್ನ ನೋಡಿ ನಗುತ್ತಿದ್ದಾರೆ ಜನರಿಂದು
ನೀ ಇರದೇ ಹೇಗಿರಲಿ ನಾನಿಂದು
ನಿನ್ನ ನೆನಪಲ್ಲಿ ಸಾಯುತ್ತಿದೆ ಮನವಿಂದು
ಯಾವ ಜನ್ಮದ ಶಿಕ್ಷೆಯೋ ನನಗಿಂದು!

- ಪ್ರಿಯಾಂಕ

27 Aug 2017, 02:48 pm

ಹಣದ ದಾಹ

ಹಣದ ದಾಹದ ಎದುರು
ಪ್ರೀತಿ ವಾತ್ಸಲ್ಯದ ನುಡಿಗಳು
ಬಹುದೂರ.
ತನ್ನವರನ್ನೆ ಕಳೆದುಕೊಳ್ಳಲು
ತಯಾರಾಗಿ ನಿಂತ
ಈ ಹಾಳು
ಮನುಜನ ಕಣ್ಣಿಗೆ
ಹಣವು ಮಾತ್ರವೇ
ಗೋಚರಿಸುವುದು!
ಶ್ರೀಮಂತರ ಹುಚ್ಚು ಮೋಹಕ್ಕೆ
ಎಲ್ಲೆಲ್ಲಿಯೂ ನಡೆಯುತ್ತಿದೆ
ರಕ್ತದ ದಾಹ.
ಕೂಡಿಟ್ಟ ಹಣವ ಕರಗಿಸಲು
ಹೆಣಗಾಡುತ್ತಿದ್ದರೂ
ಇವರ ಆಸೆಯ ದಾಹ
ಎಂದೂ ಕರಗದು!
ಕೊನೆಯಿರದ ಇವರ
ಅತಿ ಆಸೆಗಳಿಗೆ
ಅದೆಷ್ಟು ಕುಟುಂಬಗಳು
ಬಲಿಯಾಗಬೇಕಿದೆಯೋ?


ಪ್ರಿಯಾಂಕ✍

- ಪ್ರಿಯಾಂಕ

27 Aug 2017, 02:43 pm

ಮಾಯೆ....

ಪ್ರೀತಿಯೊಂದು ಮಾಯೆ..
ಪಸರಿಸಿದೆ ಎಲ್ಲಡೆ
ತನ್ನ ಛಾಯೆ.....

ಅಮರ ಪ್ರೇಮದಿಂದ
ಅರಳಿದೆ ಜೀವಜಗತ್ತು...
ಎಷ್ಟು ಪ್ರೇಮಿಗಳು
ಇರುವರು ನಸುನಗುತ್ತ....

- ಪ್ರಿಯಾಂಕ

27 Aug 2017, 11:31 am

ಜೊತೆಯಾಗಿ......

ಸಾಗುತ್ತಿರುವ ನನ್ನೀ ಪಯಣದಲಿ
ಜೊತೆಯಾದವಳು ನನ್ನೀ ಮಡದಿ.
ಬಿಸಿಲು-ಮಳೆ, ಚಳಿ-ಗಾಳಿಯನ್ನದೇ
ಬಹುದೂರ ನಡೆದೆವು ಸಂತಸದಿ!

ಬಟ್ಟೆ ಮಾಸಿದರೂ, ಚಪ್ಪಲಿ ಸವೆದರೂ
ನಮ್ಮ ಪ್ರೀತಿಗಿಲ್ಲ ಯಾವುದೇ ಕೊರತೆ.
ಹಸಿವು ಬಾಯಾರಿಕೆಯಿಂದ ಕಂಗೆಟ್ಟರೂ
ಯಾರೂ ಕೇಳೊರಿಲ್ಲ ನಮ್ಮ ಕತೆ!

ಊರೂರು ಸುತ್ತಿ ಬಿಕ್ಷೆಯ ಬೇಡಿ
ದಣಿವಾರಿಸಲು ನಮಗಿಲ್ಲ ಸ್ವಂತಮನೆ.
ದೇವಸ್ಥಾನದ ಜಗುಲಿ, ಪಾಳು ಕಟ್ಟಡಗಳು
ಅದೇ ನಮ್ಮ ಪ್ರೀತಿಯ ಅರಮನೆ.

ಸಾವಿನಲ್ಲೂ ಒಂದಾಗಿಸು ಓ ದೇವರೇ,
ನನ್ನ ಬಿಟ್ಟು ಅವಳಿಗಿಲ್ಲ ಬೇರೆ ಆಸರೆ!
ನಿನ್ನ ನಂಬಿದ ಭಕ್ತ ನಾನು
ನಮಗಿಲ್ಲ ಬೇರೆ ತೊಂದರೆ!

ಪ್ರಿಯಾಂಕ✍

- ಪ್ರಿಯಾಂಕ

27 Aug 2017, 11:23 am

ನಿನ್ನನು

ನಾಚುತ್ತ ಕಾದ ಚೆಲುವೆಯ ನಿರೀಕ್ಷೆಗೆ ಮನ ತಣಿಸುವ ಒಡೆಯನ ಆಗಮನ ಆದ ಕ್ಷಣ ಮನದಲ್ಲಿ ಚಿಗುರಿತೆ ವಸಂತದ ಮಂಜಿನ ಹನಿಗಳ ಆವರಣ..................

ನೋಡುವಲ್ಲಿ ಚೆಲುವೆಯ ಸೊಗಸು ಮರೆಯಾದ ನನ್ನ ನಗುವಿಗೆ ಸಿಕ್ಕಿದಂತಾಯಿತು ಹೊಸದಾದ ಸೊಬಗು.................

ಯಾರಗೆಂದು ಈ ನನ್ನ ಜೀವ ಉಸಿರಾಡುವುದು ಪ್ರತಿಯೊಂದು ನಿಮಿಷ ನೀನೇ ನೀನೇ ಎಂದು ತಿಳಿಸುವುದು ನನ್ನ ಹೃದಯ ಬಡಿತ ನಿನ್ನ ಕಂಡ ತಕ್ಷಣ ಬಡಿತ ಹೆಚ್ಚಾಗಿ ನಿನ್ನ ಸನಿಹ ಸೇರುವ ಆಸೆಯಾಗಿ...............

ನಿಂತೆ ನಾನು ನೆನೆಯುತ್ತಾ ನಿನ್ನ
ನಾಚಿ ನಿರಾದೆ ನಾನು ನಿನ್ನ ಚೆಲುವ ಸ್ಮರಿಸುತ್ತಾ..................

ಕನಸಲ್ಲಿನ ನನ್ನ ಮನಸ್ಸಿನ ರಾಜ್ಯಕ್ಕೆ ನನ್ನ ಪ್ರೀತಿಯ ಆಹ್ವಾನ ನಿನಗಿಂದು ಕದ ತಟ್ಟುವ ಮುನ್ನವೇ ತೆರೆದಿಡುವೆನು ಮನಸ್ಸನ್ನು ಗುಟ್ಟಾಗಿ ಬಚ್ಚಿಡುವೆ ನನ್ನ ಹೃದಯಾದಲ್ಲಿ ನಿನ್ನನ್ನು...........

- ಚುಕ್ಕಿ

27 Aug 2017, 11:22 am

ಬರಿದಾಯಿತು ಬದುಕು

ಅಂದು ಬಂದುಗಳೆಲ್ಲ
ಬಂದು ಹೋಗುವ ಮನೆಯು
ಬರಿದಾಯಿತೇ ಇಂದು
ನೀನು ಇಲ್ಲದೇ!!

ನೊಂದು ನುಡಿದರು ಎಲ್ಲ
ವಿಧವೆಯು ನಾನೆಂದು
ಗಂಡನಿಲ್ಲದ ನನಗೆ
ಯಾರು ಗತಿಯೆಂದು!!

ಬಂದು ಬಳಗದವರೆಲ್ಲ
ಮರಳಿ ಹೋದರು ಮನೆಗೆ
ಮರುಗಿದರೂ ಯಾರೂ ಇಲ್ಲ
ನನ್ನಯ ಜೊತೆಗೆ!!

ಇದ್ದೊಂದು ಕರುಳ ಬಳ್ಳಿಯೂ
ಉದರದ ಒಳಗೆ ಕರಗಿತು
ನಿನ್ನ ಸಾವಿನ ಆಗಾತ
ನನ್ನನು ಆವರಿಸಿದಾಗ!!

ತವರಿಂದ ನಾ ದೂರ
ಗಂಡನ ಮನೆಗೂ ಭಾರ
ಯಾರಿಗೂ ಬೇಡವಾಯಿತೇ
ಈ ‌ನನ್ನ ಬದುಕು!!

- ಪಿ.ಜಿ.ಜ್ಯೋತಿ

27 Aug 2017, 10:58 am

ಅಮೃತದ ಹನಿ

ಅವಳ ಅದರದಿ ದೊರೆತ
ಅಮೃತದ ಹನಿಯೊಂದು
ಮರು ಜೀವ ನೀಡಿತೇ
ನನ್ನಯ ಈ ಹೃದಯಕೆ!!

ಮೊದಲನೆಯ ಪ್ರೇಮವ
ಕಳೆದುಕೊಂಡು ಬದುಕಿನಲಿ
ಜೀವಂತ ಶವದ ಹಾಗೆ
ಇದ್ದೆನು ಒಂಟಿಯಾಗಿ!!

ಬರೆವಸೆಯೇ ಇಲ್ಲದ
ಬದುಕಿನೊಳು ಅವಳು
ಬರವಸೆಯ ತುಂಬಿದಳು
ಹೊಸ ಬೆಳಕಾಗಿ ಬಂದು!!

ಅವಳ ಆಗಮನದಿ
ಈ ‌ನನ್ನ ಹೃದಯವು
ಮರು ಮಿಡಿಯಿತು
ಹೊಸ ಪ್ರೇಮದ ಹುರುಪಿನಲಿ!!

- ಪಿ.ಜಿ.ಜ್ಯೋತಿ

27 Aug 2017, 10:16 am