Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆತ್ಮಹತ್ಯೆ

ಕೊನೆಯಿಲ್ಲದ ನೋವಿಗೆ
ಪರಿಹಾರ ಇಲ್ಲದ ಸಮಸ್ಯೆಗೆ
ಹುಡುಕುವ ಕೊನೆಯದಾರಿ

- ಎಸ್.ಬಿ

29 Aug 2017, 10:55 pm

ಹುಟ್ಟು ಸಾವಿನ ಮದ್ಯೆ....

ಹುಟ್ಟಿನಿಂದ..... ಶುರುವಾದ
ಜೀವನ ಎನ್ನುವ ಪಯಣ
ಅದು ತಲುಪಿದ್ದು ಸಾವು
ಅನ್ನೋ ಕೊನೆಯ ... ದಡವನ್ನ!

ಮದ್ಯದಲ್ಲಿ ಅಂತ..ಅಂತವಾಗಿ
ಖಾಲಿಯಾದದ್ದೇ..... ವಯಸ್ಸು
ಒಂದೊಂದು ಅಂತದಲ್ಲೂ ..ಇತ್ತು
ಸುಖ ದುಃಖಗಳ ... ಪರಿಪಾಟು

ಹುಟ್ಟು ಎಂಬ ಬೀಜದಿಂದ
ಬಾಲ್ಯವಾಗಿ ಮೊಳಕೆಹೊಡೆದು
ಯವ್ವನ ಎಂಬ ಕಂಡವಾಗಿ ಬೆಳೆದು
ಮಧ್ಯ ವಯಸ್ಸಿನ ಹೆಮ್ಮರವಾಗಿ ನಿಂತು

ಅಲವರಿಗೆ ನೆರಳು ನೀಡಿ.......
ಕೆಲವರ ಕೆಂಗಣ್ಣಿಗೆ ಗುರಿಯಾಗಿ
ಬಂದ ಬಿರುಗಾಳಿಗಳನ್ನ ತಡೆದುಕೊಂಡು

ಕೊನೆಗೆ ಮುಪ್ಪು ಅನ್ನೋ ಬಲೆಯಲ್ಲಿ
ಸಿಲುಕಿ ..ಎಲ್ಲವನ್ನು ಕಳೆದು ಕೊಂಡು
ಉಪಯೋಗಕ್ಕೆ ಅರ್ಹನಲ್ಲ ಎನಿಸಿಕೊಂಡು
ಸಾವು ಅನ್ನೋ ಪ್ರವಾಹದಲ್ಲಿ ಸಿಲುಕಿ

ಈಜಲಾರದೆ ವಿಧಿಗೆ ತಲೆಬಾಗಿ
ಆತ್ಮಗಳ ಲೋಕ ಸೇರುವುದಸ್ಟೇ.
.........ಜೀವನ!


-------- ಮಂಜು

- ಮಂಜು

29 Aug 2017, 09:14 pm

ತಾಯಿಯ ಮನ.....

ಅವನು ಹುಟ್ಟಿದ ಆ ಸುದಿನ
ನಾ... ಹೆತ್ತ ನೋವನ್ನು ಮರೆಸಿತ್ತು
ಆ ಕ್ಷಣ
ಖುಷಿಗೆ ಪಾರವೇ ಇಲ್ಲಾ ಆ ದಿನ
ನನ್ನ ಮನೆಯ ರಾಜಕುಮಾರ ಹುಟ್ಟಿದ ದಿನ
ಅವನು ಮೊದಲ ತೊದಲು ನುಡಿಯಲ್ಲಿ
ಅಮ್ಮ ಎಂದ ಆ... ಕ್ಷಣ
ಮೊದಲು.. ಶಾಲೆಗೆ ಹೊರಟ
....... ಆ ದಿನ
ನನ್ನ ಬಿಟ್ಟು ಕ್ಷಣವೂ ಇರಲಾರದೆ
ಅತ್ತ ...... ಆ ಕ್ಷಣ
ಮೊಟ್ಟ ಮೊದಲು ನನ್ನ ಬಿಟ್ಟು
ಸೈನ್ಯಕ್ಕೆ...ಬಹುದೂರ ಹೊರಟ
ಆ ದಿನ
ನನಗೆ ಗೊತ್ತಿಲ್ಲದೆ ನೋವು ಕಣ್ಣಿನಿಂದ
ನೀರಾಗಿ ಹರಿದಿತ್ತು..... ಆ ದಿನ
ಅವನಿಗಾಗಿ ಬಾಗಿಲಲ್ಲಿ ಕಾಯುತ್ತ ...
ಕುಂತ .... ಈ ತಾಯಿಯ ಮನ
ಆದರೂ ನನ್ನ ಮಗ ಯೋಧನೆಂದು
ಗರ್ವ ಪಡುವ ನನ್ನ ಮನ......
ಅವನು ಬಂದನು ಒಂದು ದಿನ....
ಆತ್ಮವಿಲ್ಲದ ಶರೀರದೊಂದಿಗೆ... ಆ ದಿನ
ಆ ದಿನ ನನ್ನ ಹೃದಯಕ್ಕೇ... ಸಿಡಿಲು
ಬಡಿದ ದಿನ
ಅವನ ಪಡೆದದಕ್ಕೇ ಹೆಮ್ಮೆ ಪಡುವೆ
ಈ ದಿನ............
ಅವನು ಅರ್ಪಿಸಿದ್ದ .. ನನ್ನ ದೇಶಕ್ಕಾಗಿ
ತನ್ನ........ ಪ್ರಾಣ
ಅವನ ನೆನಪು ಮಾತ್ರ ಉಳಿದಿದೆ...
ನನಗೆ ...... ಈ ದಿನ

"ಇಂದು ದೇಶವೇ ನೆನೆವುದು ನನ್ನ ಮಗನ"


ಮಂಜು ಯಾದವ್

- ಮಂಜು

29 Aug 2017, 08:45 pm

ಸಿಹಿ ನೆನಪುಗಳು....

ಬಾಲ್ಯದ ನೆನಪುಗಳು ಇಂದಿಗೂ
ಹಚ್ಚಹಸಿರಾಗಿವೆ ಮನಸಿನ ಪುಟದಲಿ.
ಲಗೋರಿ,ಚಿನ್ನಿದಾಂಡು,
ಮರಕೋತಿಯಾಟಗಳು
ಮರೆಯಾಗಿವೆ ಇಂದು
ಮರೆತೋದ ಆಟಗಳೀಗ,
ನೆನಪಿನಂಗಳದಿ ಬಂದು ಕುಳಿತಿದೆ.
ನಾವಂದು ಮಾಡಿದ ತುಂಟಾಟಗಳು
ಸಹಪಾಠಿಯೊಂದಿಗೆ ಜಗಳವಾಡಿ
ಮೊದಲಸಲ ಮೇಷ್ಟ್ರರ ಕೈಯಿಂದ
ಏಟು ತಿಂದು ಅತ್ತಾಗ
ಗುಂಪು ಕಟ್ಟಿ ಮುಗ್ದ ಮಾತುಗಳಿಂದ
ಸಮಾಧಾನಪಡಿಸಿದ ಗೆಳತಿಯರು.
ತಪ್ಪಾಗಿ ಮಗ್ಗಿ ಹೇಳಿದ ತಪ್ಪಿಗೆ
ಬೆಂಚಿನ ಮೇಲೆ ನಿಲ್ಲಿಸಿದಾಗ
ನಿಂತುಕೊಂಡೆ ನಿದ್ದೆಮಾಡಿ
ಎಲ್ಲರ ನಗುವಿಗೆ ನಾ ಕಾರಣಳಾಗಿ
ಬೆಪ್ಪನಂತೆ ನಾನು ನಕ್ಕಿದ
ಆ ಕ್ಷಣವ ನೆನೆದು
ತುಟಿಯಂಚಿನಲಿ ಮಂದಹಾಸವೊಂದು ತೇಲಿಹೋಗಿದೆ.
ಎಷ್ಟೊಂದು ಸುಂದರವಾಗಿದೆ
ಬಾಲ್ಯದ ನೆನಪುಗಳು
ಒಮ್ಮೊಮ್ಮೆ ನೋವನ್ನು ಮರೆಸುವ ಒೌಷಧವೇ
ಬಾಲ್ಯದ ಆದಿನಗಳ ನೆನಪುಗಳು!

ಪ್ರಿಯಾಂಕ✍

- ಪ್ರಿಯಾಂಕ

29 Aug 2017, 12:57 pm

ನಿನ್ನ ನಗುವಲ್ಲಿ

ಬಾಳ ಬೆಳದಿಯಿಂಗಳಾದೆ ನನ್ನಲ್ಲಿ ನೀನು
ಪ್ರೀತಿಯ ಧಾರೆ ಪ್ರೀತಿಸುವೆನು ನಿನ್ನ
ನಿನ್ನಮಾತುಗಳು ನಿದ್ದೆಯ ಕೆಡಿಸಿದೆ
ಮನಸಲ್ಲಿ ಬಂಧನವಾಗಿದೆ
ಬಾಳ ಜೊತೆಗಾತಿ ಪ್ರೀತಿಯ ಸಂಗಾತಿ
ಪ್ರೀತಿಸುವೆನು ನಿನ್ನ ಮನಸಾರೆ ಗೆಳತಿ

- nageshwarh

29 Aug 2017, 09:05 am

ಆಸೆ

ಹುಟ್ಟಿದ ಕ್ಷಣ ಬೆಳಕು ನೊಡುವ ಆಸೆ

ಎಳೆಯ ಪ್ರಾಯದಲಿ ಸ್ನೆಹಿತರೊಂದಿಗೆ ಕೂಡಿ ಆಯಾಸಗುವಷ್ಟು ಆಡುವ ಆಸೆ

ಹದಿ ಹರಯದಲ್ಲಿ ಹೆಳಿಕೊಳ್ಳದ ಆಸೆ

ಪ್ರೌಡಯುದಲಿ ಚಲದ ಗುರಿಯ ತಲುಪುವ ಆಸೆ

ಮದುವೆಯನಂತರ ಮಕ್ಕಳ ಜೊತೆ ಬೆಳಯುವ ಆಸೆ

ಮುಪ್ಪಾದಾಗ ಹೊಸ ಪೀಳಿಗೆಯರೊಂದಿಗೆ ಬೆರೆಯುವ ಆಸೆ

ಇ ಆಸೆಯನ್ನು ಹುದುಗಿಸಿದವನು ಯಾರು ಯಲ್ಲಿಹನು, ಕಾಲಚಕ್ರದಲಿ ಅಳವಡಿಸಿ ಬೆಕಂತೆ
ಮಾರ್ಪಡಿಸಿ ಜೀವನಕ್ಕೆ ಒಲವನ್ನು ಬೆಲೆಯನ್ನು ತುಂಬಿ ಸಾತ್ಕರಿಸಿ ಬದುಕನ್ನು ಒಂದು ಕತೆಯಾಗಿಸಿರುವನು. ನಾ ಒಲ್ಲೆ ಇವನ ...

ಆದರೂ ಆಸೆ ಅತ್ಯವಶ್ಯಕ... ನಾ ಹೊಗೊಲ್ಲೆ ಇದರ ಮೂಲ ಜಾಡಿಡಿದು..

ಮಧುರ

- ಮದನ್

29 Aug 2017, 04:56 am

ಪ್ರಕೃತಿ...

ಆಗುತಿದೆ ಬರಿದು..
ಪ್ರಕೃತಿಯ ಮಡಿಲು..
ಕಟ್ಟಡಗಳು ಮೇಲೇದ್ದು..
ಮರಗಿಡಗಳ ಕಡಿದು..
ನದಿಕೆರೆಗಳ ಒತ್ತಿಒತ್ತಿ..
ಹಸಿರು ಜಾಗಗಳ ನುಂಗಿ..
ಒಂದಿಷ್ಟು ಜಾಗ ಬಿಡದಂಗೆ..
ನುಂಗುತ ಎಲ್ಲವನು ತಿಮಿಲಿನಂಗೆ..
ಎಲ್ಲವೂ ನಶಿಸಿ ಪ್ರಕೃತಿಯ ಅಳಿಸಿ
ಮಾಡುತಿಹರು ಭೂಮಿಯನು..
ಒಂದು ಮರುಭೂಮಿಯಂಗೆ....

ಮೂಕ ಪ್ರಾಣಿಪಕ್ಷಿಗಳಿಗಿಲ್ಲ..
ಜೀವಿಸಲು ಜಾಗ..
ವೇದನೆ ನುಂಗಿ..
ಮಾಡುತಿವೆ ಪ್ರಾಣತ್ಯಾಗ..
ಕಂಡರೂ ತಿಳಿದರೂ
ಕುರುಡನಾಗಿಹನು
ಈ ಮನುಜ ಕೂಡ....

ಮರೆತು ತನಗಿತ್ತ ಸ್ಥಾನಮಾನ..
ತನಗೆ ತಾನೆ ತರುತಿಹನು ಅವಸಾನ..
ಪ್ರಕೃತಿ ವಿಕೋಪಕ್ಕಿಲ್ಲ ಯಾರು ಸಮಾನ..
ಆಗುವುದು ಮನುಜನ ಬಲಿದಾನ..
ಕೊನೆಗೆ ತನಗೆ ತಾನೆ ಕೊಡಲಿ ಆಗುತಾನ....

- KR Sreekamala

28 Aug 2017, 10:23 pm

ಅವಳ ಮುನಿಸು....ಸಿನಿಮಾ ತನಕ

ನೀ ಯಾಕೆ ಇಂಗಾಡ್ತೀ ಚಿನ್ನ
ಈ ಮುನಿಸು ಯಾಕೆ ನಿಂಗೆ ರನ್ನ

ಆಗುಂಬೆಗ್ ಕರ್ಕೊಂಡ್ ಹೋಗ್ತೀನಿ ಚಿನ್ನ
ಬೆಳ್ಗಿನ್ ಸೂರ್ಯನ್ ತೋರಿಸ್ತೀನಿ... ರನ್ನ

ಶಿವಮೊಗ್ಗಕ್ ಹೋಗೋಣ ...ಚಿನ್ನ
ಜೊಗದ್ಗುಂಡಿ ನೋಡೋಣ ... ರನ್ನ

ಮೈಸೂರ್ಗೆ ಹೋಗೋಣ ...ಚಿನ್ನಾ
ಮಲ್ಲಿಗೆ ಹೂವ್ ಮುಡಿಸ್ತೀನಿ.... ರನ್ನ

ಧಾರವಡಕ್ ಹೋಗೋಣ ...ಚಿನ್ನ
ಬೆಣ್ಣೆ ...ದೋಸೆ ಕೋಡ್ಸ್ತಿನಿ.....ರನ್ನ

ಅಯಾಯ್ಯೊ... ಇನ್ನು ನಿನ್ ಮುನಿಸು
ಹೋಗಿಲ್ವ ......
ಸರಿ....

ಬೆಂಗಳೂರಿಗ್.. ಹೋಗೋಣ ... ಚಿನ್ನ
ಅಲ್ಲಿ ..ಸಿನಿಮಾ.. ನೋಡೋಣ....

ಬೇಗ ಹೋಗೋಣ.......ಮುನ್ನ
ನೀ... ಹತ್ತು.... ಬಸ್ಸನ್ನ!

-------- ಮಂಜು..

- ಮಂಜು

28 Aug 2017, 09:27 pm

ಸ್ವಪ್ನಗಳೊಂದಿಗೆ

ಸ್ವಪ್ನಗಳೊಳ್ ನಗ್ನ ಸತ್ಯ್ಐತಣ್ಣ..

ಆಕೆ ಎಚ್ಚರ ಕೊಟ್ಠಾಳು ನೊಡ್..

ನಿ ಅತಿ ಆಸೆಯೊಳ್ ದುಃಖೋಳ್ ಕಷ್ಟೋಳ್ ಯ

ನಿ ತ್ರಪ್ತಿಯೊಳ್ ಅಸೂಯೆಯೊಳ್ ದರ್ಪಯೊಳ್ ಯ

ನಿ ಬೂತ ಭವಿಷ್ಯ ಕಾಲ ಯೊಚನೆಯೊಳ್ ಅಡಗಿಹು..

ಎಚ್ಚರಗೊಳ್..ಎಚ್ಚರಗೊಳ್...ಸ್ವಪ್ನಗಳೊಳ್ ಅಡಗಿಹದು ನಗ್ನ ಸತ್ಯ್ಐತಣ್ಣ
--- ಮದನ್

- ಮದನ್

28 Aug 2017, 08:00 pm

ಬದುಕಿನ ಸುಳ್ಳುಗಳು

ಸಾಗುವದಾರಿ ಏರಳಿತದ ಪ್ರಶ್ನೆ
ಸಾದನೆಯ ದಾರಿ ಉತ್ತರದ ರೇಖೆ
ನಂಬಿಕೆ ಇಲ್ಲಿ ನಿನ್ನೊಳಗೆ
ಸಾವಿರ ಪ್ರಶ್ನೆಗಳು ಅದರೊಳಗೆ
ಗುರಿಯೊಂದಿರಲಿ ಮನದೊಳಗೆ
ಸಾಧನೆಯ ಹೆಜ್ಜೆ ಹಾಕು ಸಮಾಜದೊಳಗೆ

- nageshwarh

28 Aug 2017, 07:40 pm