Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಿರುಕು

ಮತ್ತೆ ಬರುವೆನೆಂದುಕೊಳ್ಳಬೇಡ
ನಿನ್ನ ಬಾಳಿನಲಿ
ಒಂದು ಭಾರಿ ಬಾಗಿಲು ಮುಚ್ಚಿದ ಮೇಲೆ
ಅದು ಬರೀ ಕತ್ತಲು
ನೀ ಅಂದುಕೊಳ್ಳಬಹುದು ನಾ ಸರಿ ಹೋಗಬಹುದೆಂದು
ಮನ ಹೇಳಿ ಆಗಿದೆ ದೂರ ಸರಿದು ಬಿಡು ಎಂದು
ಇನ್ನೆಲ್ಲಿದೆ ನಾವಿಬ್ಬರು ಜೊತೆಯಾಗುವ
ಸಂಭವ....?!!

- ಎಸ್.ಬಿ

01 Sep 2017, 10:43 pm

ಶುಭ ರಾತ್ರಿ...

ಮಲಗು ನಿ ಮಲಗು
ತುಂಬ ಧಣಿದಿರುವೆ..
ಮೆಲುಕು ಹಾಕು ನಿನ್ನ ಸರಿತಪ್ಪುಗಳ
ಕನಸುಕಾಣು ನಾಳಿನ ಗುರಿಯ
........... ಕಡೆಗೆ
ನಾಳೆ ಬರುವ ನನ್ನ ಸ್ನೇಹಿತ.. ಹಗಲು
ಕೈ ಜೋಡಿಸುವ ನೀ ಗುರಿಯೆಡೆಗೆ
............ ಸಾಗಲು!

ಶುಭವಾಗಲಿ.... ನಾಳಿನ ದಿನ ನಿಮಗೆ


--------ಮಂಜು

- ಮಂಜು

01 Sep 2017, 10:28 pm

ಮರ್ಯಾದೆ.....

ನಾ ಕಟ್ಟಿದ ಮನೆಯಲ್ಲೇ
ನನಗಿಲ್ಲ ........ ಮರ್ಯಾದೆ
ನನ್ನೂಟ್ಟೀಗೆ ಸಪ್ತಪದಿ .. ತುಳಿದವಳು
ಕೊಡಲಿಲ್ಲ ನನಗೆ ...... ಮರ್ಯಾದೆ
ನಾ ಜನ್ಮ ಕೊಟ್ಟ ಮಗನು
ನೀಡಲಿಲ್ಲ ....... ಮರ್ಯಾದೆ
ನಾ ತಂದ....... ಸೂಸೆಯು
ಕೊಡಲಿಲ್ಲ ನನಗೆ .....ಮರ್ಯಾದೆ
ನನ್ನ ಪುಟ್ಟ .... ಮಮ್ಮೋಗನು
ಕೊಡಲಿಲ್ಲ...... ಮರ್ಯಾದೆ
ಹೊರಗಿನವರ ..... ಮರ್ಯಾದೆಯ
ನಾ ಎಲ್ಲಿ ಇಟ್ಟು ಕೊಳ್ಳಲಯ್ಯ
.........ಅಂತರಂಗ


.. ಮಂಜು

- ಮಂಜು

01 Sep 2017, 08:08 pm

ಚಂದ ಮಾಮ

ಚಂದ ಮಾಮ ಚಕ್ಕುಲಿ ಮಾಮ
ಅಂಬರ ಏರಿ ಬಂದಿರುವ!!
ಮೋಡದ ಮರೆಯಲ್ಲಿ ಕಣ್ಣಾ ಮುಚ್ಚಾಲೆ
ಆಡುತ ಇರುಳನು ಕಳೆದಿರುವ!!

ತಾರೆಯ ಬಳಗದಿ ಅವನದೇ ಸರಿಗಮ
ನೊರೆ ಹಾಲಿನಲಿ ಮಿಂದಿರುವ!!
ನಕ್ಕರೆ ಹುಣ್ಣಿಮೆ ಬೆಳಕದು ಸುರಿವುದು
ನಗುತಿರು ನೀನು ಓ ಮಾಮ!!

ಅರಳುವ ಮಲ್ಲಿಗೆ ಮೆಲ್ಲ ಮೆಲ್ಲಗೆ
ಅರಳಿ ನಿಂತಿಹುದು ಓ ಮಾಮ!!
ತಂಗಾಳಿಯು ತಲೆದೂಗುತ ಕರೆದಿದೆ
ನೀ ಇಲ್ಲಿ ಬಾರೋ ಓ ಮಾಮ!!

- ಪಿ.ಜಿ.ಜ್ಯೋತಿ

01 Sep 2017, 10:04 am

ಬಚ್ಚಿಟ್ಟ ಮನಸು

ಬಚ್ಚಿಟ್ಟ ಮನಸಿನಲ್ಲಿ
ನೀ ಬಂದ ಮೇಲೆ ಸ್ವಾರ್ಥ!!
ಕೂಡಿಟ್ಟ ಆಸೆಗಳೆಲ್ಲ
ನಿನಗಾಗಿಯೇ ತಾನೇ ಸ್ವಂತ!!

ಈ ಬಾಳಿನ ಸರಿಗಮದಲ್ಲಿ
ನಿನ್ನದೇ ರಾಗ ತಾಳ!!
ಈ ಬದುಕಿನ ಸಮಾಗಮಕ್ಕೆ
ಇದುವೇ ಗಟ್ಟಿ ಮೇಳ!!

ನೀ ಇರಲು ಜೊತೆಯಲ್ಲಿ
ನಾ ಇಲ್ಲ ನನ್ನಲ್ಲಿ!!
ನಿನ್ನ ನಗುವಿನ ಜೊತೆಯಲ್ಲಿ
ಮಗುವಾದೆನು ನಾನಲ್ಲಿ!!

ಈ ಹಗಲು ಈ ಇರುಳು
ಎಲ್ಲಾನೂ ಸೊಗಸು!!
ಪ್ರತಿ ಗಳಿಗೆ ನಿನ್ನ ಜೊತೆಗೆ
ಸಂಭ್ರಮಿಸಿದೆ ಈ ಮನಸು!!

- ಪಿ.ಜಿ.ಜ್ಯೋತಿ

01 Sep 2017, 09:56 am

ಅವಳು ಮುಡಿದ ಮಲ್ಲೆ ಮೊಗ್ಗು

ಅವಳು ಮುಡಿದ ಮಲ್ಲೆ ಮೊಗ್ಗು
ಅವಳ ಕೊರಳ ಸೇರುವ ಬಯಕೆಯಿಂದ
ಮೆಲ್ಲಗೆ ಅವಳ ಮುಡಿಯಿಂದ ಜಾರಿತು!!

ಮುಡಿಯಿಂದ ಜಾರಿದ ಮೊಗ್ಗು
ಅವಳ ಕೊರಳ ಸೇರದೇ
ಹರಿವ ನೀರಿನಲ್ಲಿ ಬಿದ್ದು ಹೋಯಿತು!!

ಹರಿವ ನೀರಿನಲ್ಲಿ ತೇಲುತ್ತಿದ್ದ ಆ ಮೊಗ್ಗು
ಅವಳಿಂದ ದೂರಾದರೂ
ಅವಳ ಕೊರಳ ಸೆಳೆತ ದೂರಾಗಲಿಲ್ಲ!!

ಹರಿವ ನೀರಿನೊಡನೆ ಬಳುಕಿ ಸಾಗರ ಸೇರಿ
ಅಲ್ಲಿ ಕಪ್ಪೇ ಚಿಪ್ಪಿನಲ್ಲಿ ಸ್ಥಾನ ಪಡೆದು
ಅವಳಿಗಾಗಿ ಹಂಬಲಿಸಿ ತಪವ ಗೈದಿತು!!

ತಪಸ್ಸಿಗೆ ದೊರೆತ ವರದಂತೆ ಆ ಮೊಗ್ಗು
ಮುತ್ತಾಗಿ ಯಾರದೋ ಕೈ ಸೇರಿ
ಮುತ್ತಿನ ಹಾರದಲ್ಲಿ ಬೆರೆತು ನಳ ನಳಿಸಿತು!!

ಆ ಮುತ್ತಿನ ಹಾರ ಅವಳನ್ನು ಆಕರ್ಷಿಸಿ
ಕೊರಳನ್ನು ಅಲಂಕರಿಸುವ ಒಡವೆಯಾಗಿ
ಮರಳಿ ಅವಳನ್ನು ಸೇರಿ ಸಂಭ್ರಮಿಸಿತು!!

- ಪಿ.ಜಿ.ಜ್ಯೋತಿ

01 Sep 2017, 09:39 am

ನಿನ್ನೇದೆಯ ಅಂಗಳದಿ

ಬರೆಯುವ ಮುನ್ನ ನಾ ಅದ್ದಿದ್ದೆ ಚೆಲುವೆ
ಅಕ್ಷರಗಳ ನಿನ್ನಾ ನಗೆಯ ಹೊಳೆಯಲಿ.....

ನೀ ನೋಡು,,ನ ನಿನ್ನಂತೆ ನಗುತಿಹುದು
ಬ ಬಳುಕಿಹುದು,ಕ ಕುಣಿಯುತಿಹುದು...

ಬಿತ್ತಿದ್ದೆ ಭಾವಗಳ ನಿನ್ನೆದೆಯ ಅಂಗಳದಿ
ನೋಡಲ್ಲಿ ಆ ನನ್ನ ಕವಿತೆ ಮೊರೆದಿಹುದು
ಭಾವ ಸಾಗರದ ಬಹು ಸುಂದರ ಅಲೆಗಳ......

ನಾ ನಿನಗಾಗಿ ಕಟ್ಟಿದ್ದೆ ಬಣ್ಣ ಬಣ್ಣದ ಕನಸ
ನನ್ನೆದೆಯ ಬಾಂದಣದ ಆ ಬಿಳಿ ಬೆಳಕಿನಲಿ......

ನೋಡಲ್ಲಿ ಮೂಡಿಹುದು ನಿನಗಾಗಿ ಒಲವ
ಕಾಮನ ಬಿಲ್ಲು ಬಹು ಬಣ್ಣಗಳ ತಾ ಹೊತ್ತು.....

- ಅನಾಮಿಕ..........

01 Sep 2017, 06:59 am

ಪ್ರಶ್ನೆಗಳು.....ಉತ್ತರ ಸಿಗದಾಗ

ಭಾವನೆಗಳು ಅಲೆಗಳಂತೆ
ದಾರಿಯುದ್ದಕು ಬೇರೆಬೇರೆ
ಬದುಕಿನ ನಿಯಮಗಳು
ಜೀವನಕ್ಕೆ ಬೇರೆಬೇರೆ
ಮನದ ಕಣ್ಣಿಗೆ ಆಸೆಗಳು ಬೇರೆಬೇರೆ
ನಿನ್ನಲೆ ಎಲ್ಲಾ ಏನೆಲ್ಲ ಇಲ್ಲ
ಜಗದೊಳಗೆ ನಿನ್ನೊಳಗೆ ಬೇರೆಬೇರೆ
ನೀನು ನೀನಾಗಿರು ನಿನ್ನೊಳಗೆಂದು ಬೇರೆಬೇರೆ.

- nageshwarh

01 Sep 2017, 12:09 am

ಅಲೆಗ್ಸಾಂಡರ್...

ಹುಟ್ಟುವ ಮುಂಚೆಯೆ ಹೇಳಿದ್ದ
ಭವಿಷ್ಯಕಾರನೊಬ್ಬ .....ವಿಶ್ವವನ್ನೇ
ವಿಸ್ಮಯಗೊಳಿಸುವ ಮಗು ಜನಿಸುತ್ತದೆಂದು
ಅದನ್ನ ಸುಳ್ಳು ಮಾಡಲಿಲ್ಲ ..... ಅಲೆಗ್ಸಾಂಡರ್

ಚಿಕ್ಕ ವಯಸ್ಸಿನಲ್ಲೇ ಕೈಗೋಂಡಿದ್ದ
ವಿಶ್ವ ......ದಂಡಯಾತ್ರೆಯನ್ನ
ಇವನ ದಾಳಿಗೆ ....ತತ್ತರಿಸಿದ್ದರು
ರಾಜಾಧಿ ರಾಜರುಗಳೇಲ್ಲ

ಮೂವತ್ತರ ವಯಸ್ಸಿಗೆ ಸಾಧಿಸಿದ್ದ
ಯಾರು ಉಹಿಸಲಾಗದನ್ನ
ಜಯೀಸಿದ್ದ ವಿಶಾಲವಾದ......
.....ಇಡೀ ಪ್ರಪಂಚವನ್ನ
ಸೃಷ್ಟಿಸಿದ್ದ ...... ಇತಿಹಾಸವನ್ನ

ತನ್ನ ಸ್ವಾರ್ಥ ಇಷ್ಟಾರ್ಥಗಳಿಗಾಗಿ
ಬಳಿ ಕೊಟ್ಟಿದ್ದ ಸಾವಿರಾರು... ಜನರನ್ನ
ಅವರೆಲ್ಲರ ಶಾಪ ಬಿಡಲಿಲ್ಲ ಇವನನ್ನ ಸುತ್ತುವರೆದಿತ್ತು ಮಾರಕ ರೋಗ
ಅಲೆಗ್ಸಾಂಡರ್ನನ್ನ

ಸಮೀಪಿಸುತ್ತಿತ್ತು .. ಸಾವು ಅವನನ್ನ
ಇದನರಿತ ಅವ ಕರೆದಿದ್ದ ಸೇನಾಧಿಪತಿಯನ್ನ
ಹೇಳಿದ್ದ ಎಲ್ಲರು ತಿಳಿಯ ಬೇಕಾದ.....
ಮೂರು ಹಿತ ..... ನುಡಿಗಳನ್ನ

ನಾ ಸತ್ತ ನಂತರ ವೈದ್ಯರೆ ಹೊರಬೇಕು
ನನ್ನ........ ಶವವನ್ನ
ಅವರು ತಡೆಯಲಾರರು ಸಾವು .....
ಅನ್ನೋ ..... . ಬ್ರಹ್ಮಸ್ತ್ರವನ್ನ

ನನ್ನ ಶವಹೋಗುವ ದಾರಿಯಲ್ಲಿ
ಚೆಲ್ಲಬೇಕು. ನಾ ಗೆದ್ದ ಸಂಪತ್ತನೆಲ್ಲ
ಮಣ್ಣಿನಿಂದ ಬಂದದ್ದು ಮಣ್ಣಿಗೆ ಹೊರತು
ನಮಗೆಂದು... ದಕ್ಕಲ್ಲ

ಶವ ಪೆಟ್ಟಿಗೆಯಿಂದ ಹೊರಗಿರಿಸಬೇಕು ಕೈಗಳನ್ನ
ಬರುವಾಗ ಬರಿ ಕೈಯಲ್ಲಿ ಬಂದೆ.......
ಹೋಗುವಾಗಲೂ ಬರಿ ಕೈಯಲ್ಲೇ ಹೋಗುವೆ
ಎಂದು ಪ್ರಪಂಚಕ್ಕೆ ತಿಳಿಯಲಿ ........ ಎಂದು

ಇಡಿ ವಿಶ್ವವನ್ನ ಗೆದ್ದ ಅಲೆಗ್ಸಾಂಡರ್.....
ಕೊಂಡ್ಯ್ಲಿಲಿಲ್ಲ.......... ಏನನ್ನು


❄ಮಂಜು❄

- ಮಂಜು

31 Aug 2017, 11:25 pm

ಪ್ರೀತಿಯ ... ಅರಮನೆ

ಹೃದಯಯೆಂಬ... ರಾಜ್ಯದಲ್ಲಿ
ಪ್ರೀತಿಯನ್ನ ರಾಜಧಾನಿ... ಮಾಡಿ
ನ ಅವಳಿಗಾಗಿ ಕಟ್ಟೀದ್ದೇನೆ ಪುಟ್ಟ
....ಅರಮನೆ!
ಅವಳ ನೆನಪನ್ನ ಪಾಯವಾಗಿಸಿ
ಮನಸ್ಸನ್ನವನ್ನ ಇಟ್ಟಗೆಯಾಗಿಸಿ
ನಾನೊಬ್ಬನೇ... ಕಟ್ಟೀದ್ದೇನೆ
ಮುತ್ತಿನ.... ಅರಮನೆ!

ಅವಳ ಗೆಜ್ಜೇ ಸದ್ದನ್ನೇ.. ಮನೆಯ
ದೇವರ..... ಗಂಟೆಯನ್ನಗಿಸಿ
ಕಣ್ಣೋಟವನ್ನ .... ಮನೆಯ
..... ದೀಪವನ್ನಗಿಸಿ
ಅವಳಿಗೋಸ್ಕರ ನಿರ್ಮಿಸಿದ್ದೇನೆ
ಚಂದದ ....... ಅರಮನೆ!

ಅವಳ ಪ್ರವೇಶಕ್ಕಾಗಿ .. ಏಣಿಸುತ್ತಿದ್ದೇನೆ
....... ದಿನಗಣನೆ


----------- ಮಂಜು ಯಾದವ್

- ಮಂಜು

31 Aug 2017, 09:41 pm