Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅವಳು ಮುಡಿದ ಮಲ್ಲೆ ಮೊಗ್ಗು
ಅವಳ ಕೊರಳ ಸೇರುವ ಬಯಕೆಯಿಂದ
ಮೆಲ್ಲಗೆ ಅವಳ ಮುಡಿಯಿಂದ ಜಾರಿತು!!
ಮುಡಿಯಿಂದ ಜಾರಿದ ಮೊಗ್ಗು
ಅವಳ ಕೊರಳ ಸೇರದೇ
ಹರಿವ ನೀರಿನಲ್ಲಿ ಬಿದ್ದು ಹೋಯಿತು!!
ಹರಿವ ನೀರಿನಲ್ಲಿ ತೇಲುತ್ತಿದ್ದ ಆ ಮೊಗ್ಗು
ಅವಳಿಂದ ದೂರಾದರೂ
ಅವಳ ಕೊರಳ ಸೆಳೆತ ದೂರಾಗಲಿಲ್ಲ!!
ಹರಿವ ನೀರಿನೊಡನೆ ಬಳುಕಿ ಸಾಗರ ಸೇರಿ
ಅಲ್ಲಿ ಕಪ್ಪೇ ಚಿಪ್ಪಿನಲ್ಲಿ ಸ್ಥಾನ ಪಡೆದು
ಅವಳಿಗಾಗಿ ಹಂಬಲಿಸಿ ತಪವ ಗೈದಿತು!!
ತಪಸ್ಸಿಗೆ ದೊರೆತ ವರದಂತೆ ಆ ಮೊಗ್ಗು
ಮುತ್ತಾಗಿ ಯಾರದೋ ಕೈ ಸೇರಿ
ಮುತ್ತಿನ ಹಾರದಲ್ಲಿ ಬೆರೆತು ನಳ ನಳಿಸಿತು!!
ಆ ಮುತ್ತಿನ ಹಾರ ಅವಳನ್ನು ಆಕರ್ಷಿಸಿ
ಕೊರಳನ್ನು ಅಲಂಕರಿಸುವ ಒಡವೆಯಾಗಿ
ಮರಳಿ ಅವಳನ್ನು ಸೇರಿ ಸಂಭ್ರಮಿಸಿತು!!
- ಪಿ.ಜಿ.ಜ್ಯೋತಿ
01 Sep 2017, 09:39 am
ಬರೆಯುವ ಮುನ್ನ ನಾ ಅದ್ದಿದ್ದೆ ಚೆಲುವೆ
ಅಕ್ಷರಗಳ ನಿನ್ನಾ ನಗೆಯ ಹೊಳೆಯಲಿ.....
ನೀ ನೋಡು,,ನ ನಿನ್ನಂತೆ ನಗುತಿಹುದು
ಬ ಬಳುಕಿಹುದು,ಕ ಕುಣಿಯುತಿಹುದು...
ಬಿತ್ತಿದ್ದೆ ಭಾವಗಳ ನಿನ್ನೆದೆಯ ಅಂಗಳದಿ
ನೋಡಲ್ಲಿ ಆ ನನ್ನ ಕವಿತೆ ಮೊರೆದಿಹುದು
ಭಾವ ಸಾಗರದ ಬಹು ಸುಂದರ ಅಲೆಗಳ......
ನಾ ನಿನಗಾಗಿ ಕಟ್ಟಿದ್ದೆ ಬಣ್ಣ ಬಣ್ಣದ ಕನಸ
ನನ್ನೆದೆಯ ಬಾಂದಣದ ಆ ಬಿಳಿ ಬೆಳಕಿನಲಿ......
ನೋಡಲ್ಲಿ ಮೂಡಿಹುದು ನಿನಗಾಗಿ ಒಲವ
ಕಾಮನ ಬಿಲ್ಲು ಬಹು ಬಣ್ಣಗಳ ತಾ ಹೊತ್ತು.....
- ಅನಾಮಿಕ..........
01 Sep 2017, 06:59 am
ಭಾವನೆಗಳು ಅಲೆಗಳಂತೆ
ದಾರಿಯುದ್ದಕು ಬೇರೆಬೇರೆ
ಬದುಕಿನ ನಿಯಮಗಳು
ಜೀವನಕ್ಕೆ ಬೇರೆಬೇರೆ
ಮನದ ಕಣ್ಣಿಗೆ ಆಸೆಗಳು ಬೇರೆಬೇರೆ
ನಿನ್ನಲೆ ಎಲ್ಲಾ ಏನೆಲ್ಲ ಇಲ್ಲ
ಜಗದೊಳಗೆ ನಿನ್ನೊಳಗೆ ಬೇರೆಬೇರೆ
ನೀನು ನೀನಾಗಿರು ನಿನ್ನೊಳಗೆಂದು ಬೇರೆಬೇರೆ.
- nageshwarh
01 Sep 2017, 12:09 am
ಹುಟ್ಟುವ ಮುಂಚೆಯೆ ಹೇಳಿದ್ದ
ಭವಿಷ್ಯಕಾರನೊಬ್ಬ .....ವಿಶ್ವವನ್ನೇ
ವಿಸ್ಮಯಗೊಳಿಸುವ ಮಗು ಜನಿಸುತ್ತದೆಂದು
ಅದನ್ನ ಸುಳ್ಳು ಮಾಡಲಿಲ್ಲ ..... ಅಲೆಗ್ಸಾಂಡರ್
ಚಿಕ್ಕ ವಯಸ್ಸಿನಲ್ಲೇ ಕೈಗೋಂಡಿದ್ದ
ವಿಶ್ವ ......ದಂಡಯಾತ್ರೆಯನ್ನ
ಇವನ ದಾಳಿಗೆ ....ತತ್ತರಿಸಿದ್ದರು
ರಾಜಾಧಿ ರಾಜರುಗಳೇಲ್ಲ
ಮೂವತ್ತರ ವಯಸ್ಸಿಗೆ ಸಾಧಿಸಿದ್ದ
ಯಾರು ಉಹಿಸಲಾಗದನ್ನ
ಜಯೀಸಿದ್ದ ವಿಶಾಲವಾದ......
.....ಇಡೀ ಪ್ರಪಂಚವನ್ನ
ಸೃಷ್ಟಿಸಿದ್ದ ...... ಇತಿಹಾಸವನ್ನ
ತನ್ನ ಸ್ವಾರ್ಥ ಇಷ್ಟಾರ್ಥಗಳಿಗಾಗಿ
ಬಳಿ ಕೊಟ್ಟಿದ್ದ ಸಾವಿರಾರು... ಜನರನ್ನ
ಅವರೆಲ್ಲರ ಶಾಪ ಬಿಡಲಿಲ್ಲ ಇವನನ್ನ ಸುತ್ತುವರೆದಿತ್ತು ಮಾರಕ ರೋಗ
ಅಲೆಗ್ಸಾಂಡರ್ನನ್ನ
ಸಮೀಪಿಸುತ್ತಿತ್ತು .. ಸಾವು ಅವನನ್ನ
ಇದನರಿತ ಅವ ಕರೆದಿದ್ದ ಸೇನಾಧಿಪತಿಯನ್ನ
ಹೇಳಿದ್ದ ಎಲ್ಲರು ತಿಳಿಯ ಬೇಕಾದ.....
ಮೂರು ಹಿತ ..... ನುಡಿಗಳನ್ನ
ನಾ ಸತ್ತ ನಂತರ ವೈದ್ಯರೆ ಹೊರಬೇಕು
ನನ್ನ........ ಶವವನ್ನ
ಅವರು ತಡೆಯಲಾರರು ಸಾವು .....
ಅನ್ನೋ ..... . ಬ್ರಹ್ಮಸ್ತ್ರವನ್ನ
ನನ್ನ ಶವಹೋಗುವ ದಾರಿಯಲ್ಲಿ
ಚೆಲ್ಲಬೇಕು. ನಾ ಗೆದ್ದ ಸಂಪತ್ತನೆಲ್ಲ
ಮಣ್ಣಿನಿಂದ ಬಂದದ್ದು ಮಣ್ಣಿಗೆ ಹೊರತು
ನಮಗೆಂದು... ದಕ್ಕಲ್ಲ
ಶವ ಪೆಟ್ಟಿಗೆಯಿಂದ ಹೊರಗಿರಿಸಬೇಕು ಕೈಗಳನ್ನ
ಬರುವಾಗ ಬರಿ ಕೈಯಲ್ಲಿ ಬಂದೆ.......
ಹೋಗುವಾಗಲೂ ಬರಿ ಕೈಯಲ್ಲೇ ಹೋಗುವೆ
ಎಂದು ಪ್ರಪಂಚಕ್ಕೆ ತಿಳಿಯಲಿ ........ ಎಂದು
ಇಡಿ ವಿಶ್ವವನ್ನ ಗೆದ್ದ ಅಲೆಗ್ಸಾಂಡರ್.....
ಕೊಂಡ್ಯ್ಲಿಲಿಲ್ಲ.......... ಏನನ್ನು
❄ಮಂಜು❄
- ಮಂಜು
31 Aug 2017, 11:25 pm
ಹೃದಯಯೆಂಬ... ರಾಜ್ಯದಲ್ಲಿ
ಪ್ರೀತಿಯನ್ನ ರಾಜಧಾನಿ... ಮಾಡಿ
ನ ಅವಳಿಗಾಗಿ ಕಟ್ಟೀದ್ದೇನೆ ಪುಟ್ಟ
....ಅರಮನೆ!
ಅವಳ ನೆನಪನ್ನ ಪಾಯವಾಗಿಸಿ
ಮನಸ್ಸನ್ನವನ್ನ ಇಟ್ಟಗೆಯಾಗಿಸಿ
ನಾನೊಬ್ಬನೇ... ಕಟ್ಟೀದ್ದೇನೆ
ಮುತ್ತಿನ.... ಅರಮನೆ!
ಅವಳ ಗೆಜ್ಜೇ ಸದ್ದನ್ನೇ.. ಮನೆಯ
ದೇವರ..... ಗಂಟೆಯನ್ನಗಿಸಿ
ಕಣ್ಣೋಟವನ್ನ .... ಮನೆಯ
..... ದೀಪವನ್ನಗಿಸಿ
ಅವಳಿಗೋಸ್ಕರ ನಿರ್ಮಿಸಿದ್ದೇನೆ
ಚಂದದ ....... ಅರಮನೆ!
ಅವಳ ಪ್ರವೇಶಕ್ಕಾಗಿ .. ಏಣಿಸುತ್ತಿದ್ದೇನೆ
....... ದಿನಗಣನೆ
----------- ಮಂಜು ಯಾದವ್
- ಮಂಜು
31 Aug 2017, 09:41 pm
ನೀನು ನಿಂತ ಈ ನೆಲ
ನನ್ನ ಪ್ರೇಮ ದೇಗುಲ
ಪ್ರೀತಿ ಬೆಳೆಸಿದ ಹೊಲ
ಕಣ್ಣಲ್ಲಿ ವರ್ಣದ ಹಾಲಾಹಲ
ಮನಸ್ಸು ಉಕ್ಕಿಸುವುದು ಜೀವಜಲ
ಹೃದಯ ಕಂಪಿಸುವುದು ಉಜ್ವಲ
ಪ್ರಕೃತಿ ಸೌಂದರ್ಯಕ್ಕೆ ಅಮಲ
ಅದು ಹೊಳೆಯುವುದು ಮಲಮಲ
ಬೇಡದೆ ಕೊಡುವುದು ಫಲ
ಕುಳಿತು ಹೋದ ಜಾಗ ಕೂತುಹಲ
ಅದು ಆತ್ಮ ತೃಪ್ತಿ ನೀಡಿವ ಶಕ್ತಿಯ ಜಾಲ
ಕಲ್ಪನೆಗಳನ್ನು ಭೀತ್ತರಿಸುವ ಸ್ವರ್ಗಸ್ವರ್ಗದ ಬಾಗಿಲ
ಅಂಧದ ಶೃಂಗಾರದ ಕಾಲ
ಎಲ್ಲೆಡೆಯೂ ಆಕರ್ಷಣೆಯೇ ಮೇಲ
ದೇಹ ಹೊಂದಾಣಿಕೆ ಬಲಾಬಲ
ಸಮಾಜ ಒಂದು ಇಂದ್ರ ಜಾಲ
ಕೊಡುವುದು ಶಿಕ್ಷೆಯ ಸಾಲ(ಮದುವೆ)
ಸಾಲ ತೀರಿಸಲು ಆಗಬೇಕು ಸಬಲ
ನೀನು ಕಸ್ತೂರಿ ಪರಿಮಳ ಕಲ್ಪ
ಪಡೆಯಲು ನಾನು ಅಲ್ಪ
ಮನಸ್ಸು ಬದಲಾಯಿಸು ಸ್ವಲ್ಪ
ನೀ ಉದ್ಯಾನದಲಿ ಅರಳಿದ ಕಮಲ
ನಾ ನೀರು ಎರೆಯಲು ಅಬಲ
ನಿನ್ನದೆ ದಾರಿಯಲಿ ಇರು ನಿಶ್ಚಲ
ನಿನಗೆ ಸಂಬಂಧಗಳ ಬಳ್ಳಿಯ ಸಾಲುಸಾಲ
ನೀನು ಅವರದೆ ಒಂದು ಕೋಲ
ಅದನ್ನು ಬಿಸಲು ಅವರು ಪ್ರಬಲ
ನಿನಗೆ ನಾನಲ್ಲ ಸಮಬಲ
ಅದಕ್ಕೆಲ್ಲ ಬೇಕು ಧೈವಬಲ
ನಾವೆಲ್ಲ ಹಿರೇಉಳ್ಳಿಗೇರಿ ಕರೆಮ್ಮ ಆಡಿಸುವ ಗೊಂಬೆಗಳೆಲ್ಲ
- MB
31 Aug 2017, 09:17 pm
ಕಾಗದದ ದೋಣಿ ಮಾಡಲೇನು ಸವಿಗನಸಿನ ಮಮತೆ ತುಂಬಿ ನಮ್ಮ ಸ್ನೇಹದ ನಿರ್ಮಲ ನೀಲಿ ಬಣ್ಣ ಹಚ್ಚಲೇನು...............
ಜೀವನದ ಸಾಗರದಲ್ಲಿ ನಂಬಿಕೆ ಎಂಬ ನಾವಿಕನ ಜೊತೆಗೆ ಉಲ್ಲಾಸದಿ ಸಾಗೋಣವೇ ಹರುಷದ ತೀರ ಸೇರಲೆಂದು.................
ಇರುವ ನೋವು ನನ್ನಲ್ಲಿನ ಬೆವರಾಗಲಿ ಇಳಿದು ನನ್ನ ಶ್ರಮದ ಫಲ ನಿನ್ನಲ್ಲಿನ ಕೋಟಿ ತಾರೆಗಳ ಬೆಳಕು ತುಂಬಲಿ................
ನಗುವಿನ ಆಟದಲ್ಲಿ ಚೆಲುವಿನ ಚೆಂಡು ಹಿಡಿದು ಕಾಣೆಯಾದ ನಿನ್ನ ಮುಸಿಮುಸಿ ನಗುವನ್ನು ಮತ್ತೆ ಕರೆತರುವ ವರೆಗೆ ಆಡೋಣವೇ ಮಕ್ಕಳಾಗಿ ಸ್ನೇಹಿತ.................
- ಚುಕ್ಕಿ
31 Aug 2017, 09:03 pm
ಕೈತುತ್ತು ತಿನ್ನಿಸಿ
ಜೋಗುಳ ಪದ ಹಾಡಿ
ಮಲಗೆಂದು ಹೇಳುತ
ತಾನು ನಿದ್ರಿಸಳು ನನ್ನಮ್ಮ!
ಜಗತ್ತಿನ ಎಲ್ಲಾ ಸಂತಸವು
ತನ್ನ ಮಗುವಿಗೆ ಮೀಸಲಿರಿಸೆಂದು
ಅರೆಬಿರಿದ ಗೋಡೆಯ ಬದಿಯಲ್ಲಿ
ದುಃಖವ ಅಡಗಿರಿಸುವಳು ಕಂಬನಿಯಲ್ಲಿ!
ಸಾಗದ ನೀರಿಗಿಂತಲೂ ಆಳ
ನಿನ್ನ ಮಮತೆಯ ಮಡಿಲು
ಅಪ್ಪುಗೆಯ ಸವಿಯಲ್ಲಿದೆ
ನಿನ್ನ ಅಕ್ಕರೆಯ ಸವಿಮುತ್ತುಗಳು!
ನಿನ್ನ ಕಣ್ಗಳಲ್ಲಿ ಕಾಣುವ
ಹೊಂಗನಸುಗಳು ಹೇಳುತ್ತಿವೆ ಇಂದು
ನೀ ಸಾಗುವ ಹಾದಿಯಲ್ಲಿ
ನಗುವಿನ ಹೆಜ್ಜೆಗಳಿವೆ ಎಂದು!
ಸಾವಿರ ಜನುಮವಿದ್ದರೂ
ನಾ ಬಯಸುವೆ ಎಂದೆಂದು
ನಿನ್ನ ಮಡಿಲಲ್ಲಿ ಮಗುವಾಗಿ
ನಿನ್ನ ನಗುವನ್ನು ನೋಡುವಾಸೆ!
- ಪ್ರಿಯಾಂಕ
31 Aug 2017, 08:17 pm
ಸಿಗರೇಟಿನಂತೆ
ನಾನು ಮೌನವಾಗಿ ನೋವನ್ನು ಸೇದುತ್ತಿದ್ದೆ
ಕೊಡವಿದ ಬೂದಿಯಿಂದ
ಕೆಲವು ಕವಿತೆಗಳು ಉದುರಿದವು...
- ಅನಾಮಿಕ..........
31 Aug 2017, 09:44 am
ಮೌನದ ಕಡಲುಗಳು
ಕಾಣಸಿಗದ ಹೆಜ್ಜೆಗಳು
ನನಸಾಗದ ಕನಸುಗಳು
ಸರಿದುಹೋದ ಹಾದಿಗಳು!
ಕ್ಷಣಿಕ ಮಾತುಗಳು
ಮಾತಾಡದ ಮೌನಗಳು
ನೋವಿನ ಸಾಲುಗಳು
ಅರ್ಥವಿರದ ಪದಗಳು!
ಜಾರುವ ಕಂಬನಿಗಳು
ಸೋಲದ ಮನಸುಗಳು
ಜೊತೆಗಿರದ ಸಂಬಂಧಗಳು
ಮುಖವಾಡದ ಸಂಬಂಧಗಳು!
ಜಗದ ನಿಯಮಗಳು
ಬದಲಾಗದ ಸಮಸ್ಯೆಗಳು
ಮನುಷ್ಯನ ಅತಿಆಸೆಗಳು
ಮುಗಿಯಲಾರದ ಸಮಸ್ಯೆಗಳು!
ಪ್ರಿಯಾಂಕ✍
- ಪ್ರಿಯಾಂಕ
30 Aug 2017, 09:51 pm