ಪ್ರೀತಿಯಲಿ
ಸೂರ್ಯನ ಎಳೆಬಿಸಿಲ ತಂಪು
ಚಂದ್ರನ ಬೆಳಕಿನ ಇಂಪು
ಕೋಪದಲಿ
ಮಧ್ಯಾನ್ಹದ ಬಿಸಿಲ ಧಗೆ
ಒಲವಿನಲಿ
ಹಣೆಗೆ ಹೂಮುತ್ತಿನಲಿ ಶೃಂಗರಿಸಿ
ಜಗವ ಮರೆಸುವ
ಶೃಂಗಾರದಲಿ
ತೋಳಿನಲಿ ಬಳಸಿ
ತುಟಿಗೆ ತುಟಿ ಬೆಸೆದು
ಮನ ಮೂಕವಾಗಿಸುವ
ಅವನೆಂದರೆ ನನ್ನವನು
ನನ್ನಲ್ಲೇ ಅವನು ..!
ಅಂದು,
ಬಾಗಿಲ ಬಳಿ ನಿಂತು
ಅದೆಷ್ಟೋ ಹೊತ್ತಿನಿಂದ
ಕಾಯುತ್ತಿದ್ದೆವು ಅಮ್ಮ ತರುವ
ಮುದ್ದಾದ ಗೊಂಬೆಗಳಿಗೆ
ಅಲಂಕಾರ ಮಾಡಿ ಆಟ ಆಡಲು!
ಇಂದು,
ಮುಚ್ಚಿಕೊಂಡಿರುವ ಬಾಗಿಲು
ಸ್ವಾಗತವನ್ನು ಕೋರುತ್ತಿವೆ
ತಂದ ಬೊಂಬೆಗಳು
ಮನೆಯ ಅಂದವನ್ನು ಹೆಚ್ಚಿಸಲು
ಉಪಯೋಗವಾಗುತ್ತಿವೆ!
ಕಾಲ ಬದಲಾಗಿದೆ...ಆದರೆ
ತಾಯಿ ಪ್ರೀತಿ ಮಾತ್ರ
ಬದಲಾಗದೆಂದು!
ಅವಳಿಂದ ನಾನು
ಅವಳಿಗಾಗಿ ನಾ ಏನ ನೀಡಬಲ್ಲೆನು..
ಅವಳಿತ್ತಲು ನನಗೆ ಜನ್ಮವನ್ನ
ಯಮ ಯಾತನೆಯ ನೊವನುಂಡು..
ಅವಳಿತ್ತಲು ಅವಳ.ರಕ್ತದಿಂದ
ಬಸಿದ ಎದೆ ಹಾಲನ್ನ
ಅವಳು ಕಲಿಸಿದಳು ಮೊದಲಿಗೆ
ಅಂಬೆಗಾಲು ಇಟ್ಟು ನಡೆವುದನ್ನ
ಅವಳು ಕಲಿಸಿದಳು ಮೊದಲ
ತೊದಲು ನುಡಿಗಳನ್ನ
ಅವಳರಿತಳು ನನ್ನ ಮೊದಲ
ಅನ್ನದ ಹಸಿವನ್ನ......
ಅವಳಿಟ್ಟು ಬೆಳೆಸಿದಲು
ಕೈ ತುತ್ತನ್ನ
ಅವಳು ನಮಗಾಗಿ ಸವೆಸಿದಳು
ತನ್ನ ಜೀವನವನ್ನ
ಅವಳು ಸಾವಿರ ಜನ್ಮವೆತ್ತರು ಅವಳ
ಪ್ರೀತಿ ಕಡಿಮೆಯಾಗುವುದಿಲ್ಲ
ಏಕೆಂದರೆ ಅವಳು ಕಣ್ಣಿಗೆ
ಕಾಣುವ ...... ದೇವರಲ್ಲವೆ!
ಊರುಗೋಲು
--------------------------------------
ನಾನು ಬರೆಯಲು ಹೋದಾಗಲೊಮ್ಮೆ
ಅವಳದ್ದೇ ಹೆಸರು ಹಾಳೆಯ ಮೇಲೆ
ಪ್ರೀತಿ,
ತುಂಬಿದ ಪಾತ್ರೆಯಲ್ಲಿ
ಬಿದ್ದ ನೊನದಂತೆ ನಾನಾದೆ
ಮನವ ಕದ್ದಳು, ಬರೆಯುವ ಮೊದಲೇ.
ಕನಸು ಅವಳೋ? ಕನಸಲ್ಲಿ ಅವಳೋ ?
ನಾ ತಿಳಿಯೇ? ಆದರೂ
ನಾನಾಗಿದ್ದೇನೆ ಅವಳಿಗೆ
ಪ್ರೀತಿಯ ಊರುಗೋಲು.
ಹೇಳಲು ಹೋದಾಗಲೊಮ್ಮೆ
ಕಾಡುವವು,ಮನ ಕಲಕುವವು
ಕಣ್ಣು ನೋಟದಲ್ಲಿ ಬಚ್ಚಿಟ್ಟ
ಸಾವಿರಾರು ಕಥೆಗಳು.
ಅವಳಿಗೆ ಇನ್ನೂ ತಿಳಿದಿಲ್ಲ
ಕದ್ದ ನಿಜವಾದ ಕಳ್ಳ ನಾನೆಂದು
ಕದ್ದ ಮಾಲು ಮನಸ್ಸು
ಇನ್ನೂ ಹಾಯಾಗಿ ನಿದ್ರಿಸುತ್ತಿದೆ
ಬೆಳಗಿನಜಾವದ ನಿದ್ರೆಯಲ್ಲಿ .
---- ಸುರೇಶ. ಜಕಾತಿ.ಜಮಖಂಡಿ.
8746086658
ಮಾತು ಮೌನವಾಗಿದೆ
ನೀ.... ಮನ ಸೇರಿದ ಕ್ಷಣದಿಂದ....||
ಮುಗುಳ್ನಗೆಯೇ ಮಾತಾಗಿದೆ
ನೀ ಎದುರು ಬಂದ ಗಳಿಗೆಯಿಂದ||
ನೋಡಿದಷ್ಟು ನೋಡಬೇಕೆನಿಸುತಿದೆ
ಆ ನಿನ್ನ ನಗೆಯನ್ನ ....ನನ್ನೀ ಈ ನಯನದಿಂದ||
ಕಟ್ಟೀರುವರು...ಕಪ್ಪು ಬಟ್ಟೆಯ
ನ್ಯಾಯ... ದೇವತೆಯ ಕಣ್ಣಿಗೆ
ಮಾಡುವ ತಪ್ಪು ಕಾಣದಿರಲೆಂದೆ
ಹುಟ್ಟು ಹಾಕಿವರು. ಸುಳ್ಳು ಸಾಕ್ಷಿಗಳ
ತಪ್ಪೇ ಗೆಲ್ಲಲೆಂದು
ಸುಳ್ಳನ್ನೇ ಸತ್ಯವಾಗಿಸಲು ಮಾನವೀಯತೆಯನ್ನೇ.
...... ಬಲಿ ಕೊಡುತಿಹರು
ಕೆಟ್ಟ ಪುಂಡಾಟಿಕೆಯ ಜನರೇ ಗೆಲ್ಲುತಿಹರು
ಈ.... ಸಮಾಜದಲ್ಲಿ
ಸಾಮಾನ್ಯ ಪ್ರಜೆಯ ನೊಂದ ಕೂಗು
ಕೇಳಲು
ಯಾವ ವಿಷ್ಣು. ಶಿವರು ಅವತಾರವೆತ್ತಲಿಲ್ಲ
ಈ ಕಲಿಯುಗದಲ್ಲಿ
ನ್ಯಾಯ........... ಎಲ್ಲಿದೆ?