Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿಂತ ಹೃದಯ...

ಮಾತಲ್ಲಿ ಹೇಳಲಾಗದೆ..ಮೌನವು
ನಿನಗಾಗಿ ಬರೆದ ಪ್ರೇಮ ಕವನ
ಮರೆತ ನೋವುಗಳು
ನೆನಪುಗಳಾಗಿ ಮರಿಕಳಿಸುತ್ತಿದೆ,
ಒಲವಿನ ಕ್ಷಣಗಳ
ಮರೆಯಲಾಗದೆ ನೆನಪಾಗುತ್ತಿದೆ..
ನಿನ್ನ ನೆನೆದಾಗ ಮನಸ್ಸು
ಹೂವಿನಂತೆ ಅರಳುತ್ತದೆ,
ನಿನ್ನ ಕಂಡ ಕ್ಷಣದಲ್ಲಿ
ನಿಂತ ಹೃದಯದ ಬಡಿತವು
ಮತ್ತೆ ಮಿಡಿಯುತ್ತಿದೆ,

- Pb

08 Sep 2017, 12:32 am

ಸುಂದರ ಸಂಜೆಯಲ್ಲಿ

ಸುಂದರ ಸಂಜೆಯಲ್ಲಿ ತುಂತುರು ಮಳೆಯಲ್ಲಿ
ತಿಂಗಳ ಬೆಳಕಿನಲ್ಲಿ ತಂಗಾಳಿಯ ಜೊತೆಯಲ್ಲಿ!!
ಎಳೆ ಹುಲ್ಲ ಹಾಸಿಗೆಯ ಮೇಲೆ ನಾ ಕುಳಿತು‌ ಕಾದಿರುವೆನು ಗೆಳೆಯ ನಿನ್ನನು ಇಲ್ಲಿ ಇಂದು!!

ನಸುನಗುತಲೇ ನೀನು ನನ್ನ ಎದುರಿಗೆ ಬರವಾಗ
ಈ ನಸುಕಿನಲ್ಲಿ ಅದುವೇ ನನಗೆ ಶುಭ ಯೋಗ!!
ಬದುಕಲ್ಲಿ ಎಲ್ಲವೂ ಹೊಸತಾಗಿದೆ ಗೆಳೆಯ
ನೀನು ಹೀಗೆಯೇ ನನ್ನ ಜೊತೆಯಲ್ಲಿ ಇರುವಾಗ!!

ಈ ಸುಂದರ ಸಂಜೆಯಲ್ಲಿ ನಿನ್ನ ಆಗಮನವು
ತಿಂಗಳ ಬೆಳಕಿನಲ್ಲಿ ಚಂದಿರನು ಬಂದಂತೆ!!
ಈ ನನ್ನ ಹೃದಯ ಮಂದಿರದ ಗರ್ಭಗುಡಿಯ
ಒಳಗೆ ನೇಲೆಸಲು ನೀ ಬಂದು‌ ನಿಂತೆ ದೇವರಂತೆ!!

- ಪಿ.ಜಿ.ಜ್ಯೋತಿ

07 Sep 2017, 10:12 pm

ಹೂವಿನ ಅನುರಾಗ

ಆ ದುಂಬಿಗೆ ನೀ ಅದರದಿ
ಮಧುವನು ನೀಡಲು ಸುಂದರ!!
ಓ ಹೂವೆ ನಿನ್ನ ನಗುವನು ಕಂಡು
ಮರುಳಾಗಿಹನೇ ಆ ಚಂದಿರ!!

ಬಾಡದೇ ನೀನು ಅರಳಿರೆ ಜೇನು
ಸಕ್ಕರೆ ತುಂಬಿದ ಗಡಿಗೆಯು!!
ಆ ಚಂದಿರನ ಮೋಹದಿ ನೀನು
ದುಂಬಿಯನ್ನು ತೊರೆಯವೆಯೇನು!!

ಚಂದಿರನನ್ನು ಸೇರುವ ಬಯಕೆ
ಬರಿದಾದ ಇರುಳಿನ ಕನಸು!!
ದುಂಬಿಯ ಒಡನಾಟದ ಸಲಿಗೆ
ದಿನ ನಿತ್ಯವೂ ಬದುಕಲಿ ಸೊಗಸು!!

ಚಂದಿರನ ಮೇಲಿನ ಅನುರಾಗ
ಕರಗುವುದು ಹಗಲಿನಲ್ಲಿ!!
ದುಂಬಿಯ ಜೊತೆಗಿನ ಪರಾಗ
ಇರುವುದು ನಿನ್ನಯ ಜೊತೆಯಲ್ಲಿ!!

- ಪಿ.ಜಿ.ಜ್ಯೋತಿ

07 Sep 2017, 10:10 pm

ಭೂಮಿಯ ಸಂತೆಲಿ

ಈ ಭೂಮಿಯ ಸಂತೆಲಿ
ಒಬ್ಬಂಟಿಯು ನಾನಿಲ್ಲ!!
ಒಬ್ಬಂಟಿಗೆ ಒಂಟಿತನವೇ
ಸಂಗಾತಿಯ ನೆನಪಲ್ಲಿ!!

ಸಂಭ್ರಮವು ಸಡಗರವು
ಸಂಬಂಧದ ನಡುವಲ್ಲಿ!!
ಅಡಗಿರುವ ಮನಸೊಂದು
ಅಳಿತಿಹುದು ನಿನ್ನ ನೆನೆದು!!

ಈ ಅಲೆಮಾರಿ ಬದುಕೀಗ
ಅಲೆದಿಹುದು ನಿನಗಾಗಿ!!
ನೀ ಸಿಗದೇ ಇರಲು ನನಗೆ
ನಿನ್ನ ನೆನಪೇ ಸಂಗಾತಿ!!

ಹುಡುಕಾಟದ ನಶೆಯಲ್ಲಿ
ಮರೆತಿರುವ ಬದುಕೆಲ್ಲಿ!!
ಕಳೆದು ಹೋದ ನಕಾಶೆಯು
ದೊರಕದಂತ ಹತಾಶೆಯು!!

- ಪಿ.ಜಿ.ಜ್ಯೋತಿ

07 Sep 2017, 10:09 pm

ಬಾಲ ಕಾರ್ಮಿಕರು ಇವರು

ಹೊಟ್ಟೇ ಪಾಡಿಗಾಗಿ ಶಾಲೆಯನ್ನು ತೊರೆದವರು
ಕೂಲಿ ಕೆಲಸಕ್ಕೆ ಅಣಿಯಾಗಿ ನಿಂತರು!!
ವಿದ್ಯೆ ಎಂಬ ಮಂತ್ರ ಪಠಿಸುತ್ತಿದ್ದವರು
ದುಡಿಮೆ ಎಂಬ ತಂತ್ರಕ್ಕೆ ಸಿಲುಕಿದರು!!

ಪುಸ್ತಕದ ಮೇಲಿರುವ ಮೋಹವನ್ನು ತ್ಯಜಿಸಿ
ಕ್ಷಣ ಮಾತ್ರದ ಹಸಿವನ್ನು ನೀಗಿಸಲು ಬಂದವರು!!
ದುಡಿಮೆಯ ಸವಾಲನ್ನು ಎದುರಿಸುತ್ತ
ಅನಿವಾರ್ಯ ಬಾಲ ಕಾರ್ಮಿಕರಾದವರು ಅವರು!!

ಬಳಪವನ್ನು ಹಿಡಿಯುತ್ತಿದ್ದ ಆ ಮುದ್ದು ಕೈಯಲ್ಲಿ
ಬದುಕಿನ ಭಾರವ ಹೊರಲಾರದೇ ಹೊತ್ತವರು!!
ಹೆತ್ತವರ ಪಾಲಿನ ಆಸರೆಯ ಕನಸು ಇವರು
ಶಾಲೆಯಿಂದ ದೂರಾಗಿ ಅನುಭವದಿ ಕಲಿತವರು!!

ದಿನ ಕೂಲಿಯಲ್ಲಿ ಬಾಲ್ಯವನ್ನು ಕಳೆದವರು
ಚಿಣ್ಣರ ಲೋಕದಿ ದೂರಾದ ಕಣ್ಣಿನವರು!!
ಕನಸಿನ ಲೋಕಕ್ಕೆ ತಾವೇ ಗೋಡೆ ಕಟ್ಟಿ
ಕಷ್ಟದಲ್ಲಿ ಇಷ್ಟ ಇಲ್ಲದೇ ಬಾಲಕಾರ್ಮಿಕರಾದರು!!

- ಪಿ.ಜಿ.ಜ್ಯೋತಿ

07 Sep 2017, 10:08 pm

ದಾರಿ ತೋರು ಗೆಳೆಯ

ನಿನ್ನ ನೆನಪು ಎಂಬ ಸಣ್ಣ ಸಂತೆಯಲ್ಲಿ
ಕಾಣೆಯಾದ ಪುಟ್ಟ ಮಗುವಿನಂತೆ ನಾನು!!
ನನ್ನನ್ನೇ ನಾ ಮರೆತು ನಿಂತಿದ್ದರೂ ಅಲ್ಲಿ
ನಾ ಹುಡುಕುತ್ತಲಿ ಇರುವುದು ನಿನ್ನನ್ನೇ!!

ಕಾಣದ ನಿನ್ನನ್ನು ಹಂಬಲಿಸಿ ಹಂಬಲಿಸಿ
ಅಳುತ್ತಲಿ ಇರುವ ಪುಟ್ಟ ಮನಸ್ಸು ನನ್ನದು!!
ಈ ನನ್ನ ಮನದ ಅಳುವಿನ ದನಿ ಕೇಳಿ
ನೀ ಒಮ್ಮೆ ನನ್ನ ಎದುರು ಬಂದು ನಿಲ್ಲು ಸಾಕು!!

ಅದು ಯಾವ ತಪ್ಪಿಗೆ ನನಗೆ ಈ ಶಿಕ್ಷೆ
ಯಾವ ತಪ್ಪಿಗೆ ನನ್ನನ್ನು ದಿಕ್ಕರಿಸಿ ಹೋದೆ ನೀ!!
ನಿನ್ನ ನೆನಪುಗಳ ಸುಳಿಯಲ್ಲಿ ಸಿಲುಕಿ
ಒದ್ದಾಡುತ್ತಲಿ ಇರುವ ಒಂಟಿ ಬದುಕು ನನ್ನದು!!

ನೀ ಬಿಟ್ಟು ಹೂದ ನಿನ್ನ ನೆನಪಿನ ಸಂತೆಯಲ್ಲಿ
ದಿಕ್ಕು ಅರಿಯದೇ ನಿಂತಿರುವೆನು ನಾನು!!
ನೀ ಒಮ್ಮೆ ಮರಳಿ ಇಲ್ಲಿಗೆ ಬಂದು
ನನ್ನ ಕೈ ಹಿಡಿದು ದಾರಿ ತೋರು ಗೆಳೆಯ!!

- ಪಿ.ಜಿ.ಜ್ಯೋತಿ

07 Sep 2017, 10:06 pm

ಆಸೆಯ ಹೂ ಬಳ್ಳಿ

ಅವಳ ನೋಟದಿಂದ
ಮೂಡಿ ಬಂತು ಆಸೆಯ ಬಳ್ಳಿ!!
ಆಸೆ ಬಳ್ಳಿಯಿಂದ
ಸಾಲು ಕನಸ ಹೂಗಳು ಅರಳಿ!!
ನನ್ನನ್ನು ಕರೆಯಿತೇ
ಸನಿಹ ಪರಿಮಳವನ್ನು ಬೀರಿ!!
ನಾ ಮನಸೋತು
ಸಾಗಿದೆನು ಅದರ ಬಳಿಯಲ್ಲಿ!!
ನನ್ನ ನೋಡಿದೊಡನೆ
ನಾಚಿತು ಆ ಆಸೆಯ ಹೂ ಬಳ್ಳಿ!!
ನಾ ಸ್ಪರ್ಷಿಸಲು
ಬಾಡಿತು ಆ ಬಳ್ಳಿ ನನ್ನ ಕೈಯಲ್ಲಿ!!

- ಪಿ.ಜಿ.ಜ್ಯೋತಿ

07 Sep 2017, 10:05 pm

ಪ್ರೀತಿ

ಪ್ರೀತಿ ಅರಳಿರುವ ಹೂವಿನಂತೆ
ಸ್ವಾದ ತುಂಬಿದ ಜೇನಿನಂತೆ!!
ಪ್ರೀತಿ ರಸ ಬಾಳೆಯ ಹಣ್ಣಿನಂತೆ
ಗುಟುಕು ನೀಡುವ ಹಕ್ಕಿಯಂತೆ!!

ಪ್ರೀತಿ ನಿಶ್ಯಬ್ದದ ಆಣತಿಯಂತೆ
ಅಂತರಂಗದ ಭಾವನೆಯಂತೆ!!
ಪ್ರೀತಿ ಸೃಷ್ಟಿಯ ಭಾಗವಂತೆ
ಸೌಂದರ್ಯದ ರಾಶಿಯಂತೆ!!

ಪ್ರೀತಿ ಅಮೃತದ ಬಿಂದುವಂತೆ
ಸಂಜೀವಿನಿ ಮಂತ್ರದಂತೆ!!
ಪ್ರೀತಿ ನಿರಾಕಾರ ರೂಪಿಯಂತೆ
ನಾನಾರ್ಥದ ಭಾವವಂತೆ!!

ಪ್ರೀತಿ ನಮ್ಮೆಲ್ಲರ ಜೀವವಂತೆ
ಜೀವನಕ್ಕೆ ದಾರಿಯಂತೆ!!
ಪ್ರೀತಿ ಪರಮಾತ್ಮನ ಆತ್ಮವಂತೆ
ಆ ಆತ್ಮಕ್ಕೆ ತೋರುವ ಭಕ್ತಿಯಂತೆ!!

- ಪಿ.ಜಿ.ಜ್ಯೋತಿ

07 Sep 2017, 10:03 pm

ಗೌರಿ...

ದಿಟ್ಟೆ ಹೆಣ್ಣು ಗೌರಿ
ಸೇರಿದಳು‌ ಗೋರಿ
ಬೆದರಿಕೆಗೆ ಬಗ್ಗದ ಹೋರಾಟಗಾರ್ತಿ
ಬಂದು ಹೊತ್ತೊಯ್ದಿದೆ ಅವಳ ಸಾವಿನ ಸರತಿ
ಲೇಖನಿಯ ಬರಹ ಖಡ್ಗಕ್ಕಿಂತ ಹರಿತ
ಆ ಬರವಣಿಗೆಯೆ ಕೊಟ್ಟಿತವಳಿಗೆ ಗುಂಡಿನ ಹಿರಿತ

ದುಷ್ಟ ಶಕ್ತಿಗಳ ಕೈ ಮೇಲಾಯಿತು
ಗುಂಡಿನ ಮೊರೆತ ಕೇಳಿಯೆ ಬಿಟ್ಟಿತು
ಸುಳ್ಳು ಮೋಸ ದ್ವೇಷ ಕೆಟ್ಟ ಶಕ್ತಿ ಗೆದ್ದೆ ಬಿಟ್ಟಿತು
ಕಾಣದ ಕೈ ಮೋಸದಾಟ ಆಡಿಯಾಯಿತು‌
ಮುಗ್ಧ ಜೀವ ಸಾವಿನ ಮನೆ ಸೇರಿತು
ನ್ಯಾಯ ನಿಷ್ಠೆ ಹೋರಾಟ ಮಣ್ಣ‌ ಪಾಲಾಯಿತು

ಜನ ಜೀವನಕ್ಕಾಗಿ ಹೋರಾಟ
ಆಯಿತವಳಿಗೆ ಸಾವು ಬದುಕಿನೊಂದಿಗೆ ಆಟ
ನಕ್ಸಲರ ಮನಸನ್ನೆ ಕರಗಿಸಿದವಳು
ಸಮಾಜದೊಳಗೇ ಇರುವ ರಾಕ್ಷಸರನ್ನು ಮರೆತಳು
ಮನುಷ್ಯ ಮುಖದವರು ವ್ಯಾಘ್ರ ರೂಪ ತಾಳಿದರು
ಜೀವಕೆ ಬೆಲೆಯೆ ಇರದೆ ಕಾದು‌ ಇರುಳಲಿ ಕೊಂದರು

ತೆಗೆದರೇನಂತೆ ಜೀವ, ಮಣ್ಣಾದರೇನು ದೇಹ
ನಿಲ್ಲದು ನ್ಯಾಯ ನೀತಿ ಬದುಕಿಗಾಗಿನ ಹೋರಾಟದ ದಾಹ
ಸುಧಾರಕಿ, ಹುಟ್ಟು ಹೋರಾಟಗಾರ್ತಿ, ವಿಚಾರವಾದಿ
ನಿರಂತರ ಸಮಾಜದಲಿ ಸವೆಸಿ ಹೋದರು ಬದುಕಿನ ಹಾದಿ
ಬದುಕಿಗಾಗಿನ ಹೋರಾಟಕೆ ಇಂತವರೇ ಗುರುವಿನ ರೀತಿ
ಈ ಸಾವು, ಉಳಿದವರ ನ್ಯಾಯಕ್ಕಾಗಿ ಹೋರಾಡಬೇಕು ದೂರತಳ್ಳಿ ಭೀತಿ

ಬೇಕಿಲ್ಲ ಹೋರಟದಲ್ಲಿ ಜೀವ ಕಳೆದುಕೊಂಡವರಿಗಾಗಿ ಅಶ್ರುತರ್ಪಣ
ಮಾಡಿಕೊಳ್ಳಬೇಕಾಗಿದೆ ನಮ್ಮನ್ನು ಸಮಾಜ ಸುಧಾರಣೆಗಾಗಿ ಅರ್ಪಣ
ಈ ಸಾವಿನಿಂದಾಗಿ ಹುಟ್ಟಿದರೆ ಹೋರಾಟಕ್ಕಾಗಿ ಒಂದು ಬಣ
ಆಗಲೇ‌ ಆ ಜೀವದ ತ್ಯಾಗಕ್ಕೆ ನಿಜವಾದ ಅರ್ಥ‌ ಸಿಗುವುದೆಂದು ತಿಳಿಯಬೇಕು ನಮ್ಮ ಮನ

- ಶ್ರೀಕಾವ್ಯ

07 Sep 2017, 05:12 pm

ಬೆಳಕಿನ ಹುಡುಕಾಟ....

ಬಿಡಿಸಿದಷ್ಟು ಬಿಡಿಸಲಾಗದ
ಸಮಸ್ಯೆಗಳ ಬದುಕು...
ಎಲ್ಲಿ ನೋಡಿದರಲ್ಲಿ
ಕಗ್ಗತ್ತಲೆಯ ತುಣುಕು....
ಆ ಕತ್ತಲಲ್ಲಿ
ತೊಳೆಯಲಾರದಷ್ಟು ಕೊಳಕು....
ಅದ ತೊಳೆಯಲು ನಾ
ಹುಡುಕುತ್ತಿರುವೆ ಬೆಳಕು...

- ಪ್ರಿಯಾಂಕ

07 Sep 2017, 05:01 pm