Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮರೆತೆನೆಂದರು ಮರೆಯದು ಈ ಮಾಯೆ
ಎದೆಯ ಗೂಡಲಿ ನೀಬಿಟ್ಟು ಹೋದ
ನೆನಪುಗಳ ಛಾಯೆ
ಹೃದಯ ಅಂಚಿಪೆಟ್ಟಿಗೆಗೆ
ಕಳಿಸಿರುವೆ ಒಲವಿನ ಓಲೆ
ಪ್ರೀತಿಯ ಹಣತೆ ಹಚ್ಚಲು
ನೀಡುವೆಯಾ ಸವಿ ಒಪ್ಪಿಗೆ
ಆರಾಧನೆ ಆರೈಕೆಯಲು ನಿನ್ನ
ಮಧುರ ಪ್ರೀತಿಯೆ ಹಿತ ನನಗೆ
ಬರಡಾದ ಬದುಕಿಗೆ ಬಣ್ಣ ತುಂಬಿಸಲು
ಬಾ ನೀನು ಕಾಮನಬಿಲ್ಲಿನ ಹಾಗೆ
ನಾನೇ ನೀನಾಗಿರುವಾಗ ಎದೆಯಾಳದಲಿ
ಹೊಮ್ಮಲಿ ಒಲವ ಭಾವಗೀತೆ
ಮನದ ರಥದಲ್ಲಿ ಕೂತು ಸದ್ದಿಲ್ಲದೇ
ಸಾಗಲಿ ಒಲವ ಮೆರವಣಿಗೆ
*ಮಾನಸಾ ಎಪಿ..*
- ಮಾನಸಾ ಎಪಿ
10 Sep 2017, 05:51 am
ಭಾವನೆಗಳ ಅಡಿ ನಿಂತಿತ್ತು ,ಆಸೆ ಕಾಣದ ಮನಸೊಂದು ಒಡೆದು ನೀ ಹೋಗುವಾ ಮನಸೆಕೆ .....
ಕಾದು ಕುಳಿತ ಹೃದಯವ ನೀ ಅರಿಯದೆ ಹೋದೆ ...ಮನಸಿನ ಕಣ್ಕನ್ನಡಿಯ ಒಡೆದು ನೀ ನಗುತ್ತಿರುವೆ.......
ಸಹಾಯದ ಮನವಿಟ್ಟು ನೀ ದೂರವಾಗುವ ನಿರ್ಧಾರವೇಕೆ ........
- Acchu love
09 Sep 2017, 11:34 pm
ಹಸಿರು ಸಮೃದ್ಧದ ಪ್ರಕರ
ತೊಟ್ಟಿದ್ದು ಅದೆ ಉಡುಗೆಯ ಆಕಾರ
ಇದೋ ಪ್ರಾಯ ಕಾಲದ ಸಡಗರ
ನಯನಗಳ ಪ್ರಾಧಿಕಾರ
ಹೃದಯಗಳ ಅಧಿಕಾರ
ಮನಸ್ಸುಗಳ ಸಾರ್ವಭೌಮಾಧಿಕಾರ
ಪ್ರಣಯ ಕನಸುಗಳ ಮನೋಹರ
ಕಲ್ಪನೆ ಚಿತ್ರಗಳ ಮಧುರ
ವಿರಹ ನೋವಿನ ಭ್ರಮರ
ಚೆಲುವು ತೋರುವ ಮಾಯಾಮರ
ಆಕರ್ಷಣೆಯ ಮಿಲನ ಜ್ವರ
ಹಿರೇಉಳ್ಳಿಗೇರಿ ಕರೆಮ್ಮ ಹೆಣ್ಣು ಗಂಡಿನ ಪ್ರಕೃತಿ ಸಮರ
- MB
09 Sep 2017, 09:01 pm
ಬೆಳದಿಂಗಳಿಗೆ
ಕಾವಲಾಗಿದ್ದ
ಚಂದ್ರ,
ಮರೆಯಾದ ಮೇಲೆ
ನಕ್ಷತ್ರದ ಮೌನದ
ಬೆಳಕಿಗೆ
ಸ್ತಬ್ಧವಾಯಿತು
ಕಡಲು....
- ಪ್ರಿಯಾಂಕ
09 Sep 2017, 08:21 pm
ಒಲುಮೆ ತುಂಬಿದ ಕಂಗಳಲಿ
ಕನಸಿನ ಕವಿತೆಯನು
ಹೃದಯದಲಿ ಕೆತ್ತಿಸಿ
ಭಗ್ನ ಪ್ರೇಮಿಯಂತೆ
ನಿನಗಾಗಿ ಕಾದಿರುವೆನು!
ಪ್ರೀತಿ ಎಂಬ ಸಾಗರದಲಿ
ನಿನ್ನ ನೆನಪಿನ ದೋಣಿಯಲಿ
ಮುಳುಗಿಯೂ ತೇಲಲಾಗದ
ನಡುವಿನ ಪ್ರೀತಿಯಲಿ
ನೀ ಬಂದೆ ಬರುವೆ ಎನ್ನುವ
ನಿರೀಕ್ಷೆಯ ಜೊತೆಯಲ್ಲಿ
ಸಾಗುತ್ತಿದೆ ನನ್ನೀ ಪಯಣ!
ನೆನಪಿನಂಗಳದ ಈ ಪಯಣದಲಿ
ಮುಗ್ದ ಮನಸಿನ ಸಾಹಿತಿಯಾಗಿ
ನಾ ಕಾಣದ ಹಾದಿಯಲ್ಲಿ
ಕಾಣಸಿಗದ ನಿನ್ನಯ
ಹೆಜ್ಜೆಗುರುತನು
ಅರಸಿ ಬಂದಿರುವೆನು
ಸಿಗುವೆಯಾ?
- ಪ್ರಿಯಾಂಕ
09 Sep 2017, 07:37 pm
ಗಗನತಾರೆ ನಿನ್ನ ನೋಡಿ ಮನಸು ಮೆಚ್ಚಿದೆ
ರಾಜಕೀಯ ವಲಯದಲ್ಲಿ ಅವಿನೀತಿಯ ಖಂಡಿಸಲೆಂದು ಹೋರಟ ನಿನ್ನ ಉಸಿರ ಲೇಖನ
ರಚಿಸಿದೆ ನಾವೆಂದಿಗೂ ಮರೆಯದಂತ ನಿನ್ನ ಜೀವನ ಶಾಸನ......................
ಗೌರಿಯಾಗಿ ಭುವಿಸೇರಿದೆ ಅಮರಳಾಗಿ ನನ್ನ ಮನಸೇರಿದೆ ಬೆದರಿಕೆಗಳಿಗೆ ಹಿಂಜರಿಯದೆ ಲೇಖವೆಂಬ ಖಡ್ಗವಿಡಿದು ವೀರನಾರಿಯಂತೆ ಹೋರಾಡಿದೆ ಅಕ್ರಮಗಳ ವಿರುದ್ಧ.........
ಇಲ್ಲದಿರಬಹುದು ನೀನಿಂದು ಈ ದುರ್ಜನರ ಮಧ್ಯದಲ್ಲಿ ಆದರೆ ನಿನ್ನ ನೋವಿಗೂ ನಲಿವಿಗೂ ಸ್ಪಂದಿಸಿದ ನಿನ್ನ ಪ್ರತಿಯೊಂದು ಹೆಜ್ಜೆಗುರುತಿಗೆ ಮಣ್ಣಾಗಿ ನಿನ್ನ ಹಿಂಬಾಲಿಸಿದ ಅಭಿಮಾನಿಗಳ ಹೃದಯದಲ್ಲಿ ನೀನೆಂದಿಗೂ ಜೀವಂತ............
ಕೊಂದಿರಬಹುದು ಒಂದು ಕಿಡಿಗೇಡಿಯ ಗುಂಡೇಟು ನಿನ್ನನ್ನು ಏಡಿಯಾದ ಗುಂಡು ನಿನ್ನ ಕಣ್ತಪ್ಪಿ ನಿನ್ನ ಶರೀರವ ಸೇರಿದೆ ಆದರೆ ಪರಿಶುದ್ಧ ಆತ್ಮವನ್ನಲ್ಲ ಎದೆಂದಿಗೂ ಅಜರಾಮರ ಗೌರಿ........
- ಚುಕ್ಕಿ
09 Sep 2017, 03:17 pm
ಹೇಳಲಾಗದ ಮಾಂತೊದ ಹೇಳಲು
ಚಡಪಡಿಸುತ್ತಿದೆ ಈ ಗುಂಡಿಗೆ
ಜಗದೋಳಗೆ ಏನೇ ನಡೆದರು
ಗೊತ್ತಾಗದು ಈಗ ನನಗೆ
ನೀ ಆಶಾಕಿರಣವಾಗು ನನ್ನ ಈ ಬಾಳಿಗೆ
ನಿನ್ನ ನೋವೆಲ್ಲ ಇರಲಿ ನನಗೆ
ನಗು ನಗುತ ಇರು ನೀ ಎಂದು ಹೀಗೆ
ನನ್ನ ಪ್ರೇಯಸಿಗೆ ನನ್ನ ಈ ನುಡಿ
ಮನೋಜ್...........
- manoj
09 Sep 2017, 01:14 pm
ದೇವನೊಬ್ಬ
ನೆಪಮಾತ್ರ
ಒಲವಾಡಿಸುತಿದೆ
ನೂರಾರು ಪಾತ್ರ
ಅದಕ್ಕೆಂದೆ ನಾ
ಬರುತಿರುವೆ ನಿನ್ನ ಹತ್ರ
ಭೇಟಿಯಾಗೋಣ
ನಿನ್ನೆಲ್ಲ ಬಿಗುಮಾನ
ಬಿಂಕವ ಮರೆತ್ರ
ಜೊತೆಯಾದರೆ ಬದುಕೆ
ಜೀವನ ಚೈತ್ರ..!!!
ಮಾನಸಾ ಎಪಿ...
- ಮಾನಸಾ ಎಪಿ
09 Sep 2017, 07:14 am
ಅಮ್ಮ ಈ ನಿನ್ನ ಕರುಳಕುಡಿ
ಇಡೀ ಜೀವನವೆ ನಿನಗಾಗಿ ಮುಡಿ
ಸಂಸಾರ ತ್ಯಜಿಸಿದ ತ್ಯಾಗಮಯಿ
ಜೀವನದುದ್ದಕ್ಕು ಉಂಡದ್ದು ಬಲು ಕಹಿ!
ಪಿತೃ - ವಾತ್ಸಲ್ಯವು ಸೆಳೆಯಲು
ಸಮಾಜ ಸೇವೆಯ ಕಡೆಗೆ
ದಿಟ್ಟತನದಿ ಉಳಿಯಲು
ಅನಂತಚಕ್ರದಿಂದ ಹೊರಗೆ!
ನಿನ್ನ ಬೆನ್ನೆಲುಬಾಗಿ ನಿಂತವಳು
ಈ ಹೆಮ್ಮೆಯ ನಾರಿ
ಎಡ-ಬಲ ಪಂತಗಳ ಎಡಮುರಿಕಟ್ಟಿದಳು
ಸೈರಿಸದೆ ತೋರಿದರು ಸಾವಿನ ದಾರಿ!
ಕೆಟ್ಟಕುಳಗಳ ಹುಟ್ಟಡಗಿಸಲಾಗಲಿಲ್ಲ
ದಿಟ್ಟ ಮಹಿಳೆಯ ಉಳಿಸಿಕೊಳ್ಳಲಾಗಲಿಲ್ಲ
ನ್ಯಾಯಕ್ಕೆ ಸೆಡ್ಡುಹೊಡೆದಿಹರು ಭ್ರಷ್ಟರೆಲ್ಲ ದಂಡಿಸುವಷ್ಟರಲ್ಲಿ ಎಲ್ಲ ಇಹಲೋಕತೊರೆವರಲ್ಲ!
ಯಾರದೋ ಸೇಡು ,ಯಾವುದೋ ಜಾಡು
ನಿನ್ನ ಮಕ್ಕಳ ರಕ್ಷಣೆಗಾಗಿ ಸವಿಸಿದಳು ಜೋಡು
ಅವಳು ಸೇರಲಾಗಲಿಲ್ಲ ಇರುಳಲ್ಲಿ ತನ್ನ ಗೂಡು
ಜರೂರಿನಲ್ಲಿ ಗುಂಡಿಟ್ಟವನು ದೌಡು!
ರಕ್ತದ ಮಡುವಿನಲ್ಲಿ ಮಿಂದೆದ್ದಳು
ನೇತ್ರಗಳ ನಿನ್ನಲ್ಲೆ ಬಿಟ್ಟೋದಳು
ಬಲಿದಾನದಲ್ಲೆ ಬಲಿಯಾದಳು
ನಯನದಿಂದ ಎಂದೆಂದು ನಮ್ಮ ನೋಡುವಳು!
ಅಮ್ಮ ಕನ್ನಡಾಂಬೆ ನಿನಗಾಗಿ
ತನ್ನ ಉಸಿರ ನೀಡಿದ ತ್ಯಾಗಿ
ಅಮರಳಾದಳು ನಮ್ಮಮ್ಮ ಗೌರಿ
ದುಷ್ಡರ ಪಾಲಿಗೆ ನೀನಾಗು ಮಾರಿ!
ಜೈ ಭಾರತಾಂಬೆ!
ಜೈ ಕನ್ನಡಾಂಬೆ!
ಶಾರಧ
- ಶಕುಂತಲಾ
08 Sep 2017, 05:43 pm
ನೋವುಗಳು ಮೀರಿವೆ ಅವುಗಳ ಎಲ್ಲೆ
ಕಣ್ಣೀರಿಗೆ ಹೇಳಿ ಬಿಡಲೆ ನಾ ನಿನ್ನ ಒಲ್ಲೆ
ಅತ್ತಷ್ಟು ನಿಲ್ಲದು ಸುರಿವ ಕಣ್ಣೀರ ಸಾಲು
ಮತ್ತಷ್ಟು ಸೇರುವುದು ನೋವಿಗೇನೆ ಪಾಲು
ಸಾಧ್ಯವೇ ನೋವಲ್ಲಿಯೂ ನಗಲು
ದೂರಾಗುವುದೆ ನೋವಿನ ಅಳಲು
ಕಾಣುವುದೆ ನೆಮ್ಮದಿಯ ಹಗಲು
ಕಳೆಯಲಾಗುವುದೆ ಕಣ್ಣೀರಿಲ್ಲದೆ ಇರುಳು
ನಿಂತಲ್ಲೂ ಕುಂತಲ್ಲೂ ಕಣ್ಣೀರದೆ ಧ್ಯಾನ
ಮನಸ ಅಪ್ಪಿ ನಿಂತಿದೆ ಎಡಬಿಡದೆ ಮೌನ
- ಶ್ರೀಕಾವ್ಯ
08 Sep 2017, 02:55 pm