Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಾಡುವುದೇತಕೆ

ಕಾಡುತಿರುವೆ ಏತಕೆ ಗೆಳತಿ
ಕಾಡುತಿರುವೆ ಏತಕೆ
ಪ್ರೀತಿ ದೂರಾದ ಮೇಲು ಕಾಡುತ್ತಿರುವೆ ಏತಕೆ
ಕಾಟ ಕೊಡುವುದೇತಕೆ ಗೆಳತಿ ಮರೆಯಬೇಕೆಂದಿರುವ ಹೃದಯಕ್ಕೆ
ನಿನ್ನ ಮರೆತೆನೆಂದು ಮನ ಬಯಸಿದೆ ಕಾಣದ ಕಡಲಿಗೆ

- ವಿನೋಬ ಕೋಟೆ

20 Sep 2017, 04:20 pm

ನೆನಪಿನ ತೀರದಲ್ಲಿ

ನೆನಪಿನ ತೀರದಲ್ಲಿ ನೀನೆಂದೂ ನನ್ನವಳು…
ಕಾರಣ..
ನಿನ್ನ ನೆನಪಲ್ಲೇ ನಾನು ಜೀವಿಸುತ್ತೇನೆ..
ಅಲ್ಲ..!!
ನೀ ನೆನಪಾಗೋ ವೇಳೆ ಮಾತ್ರ
ನಾನು ಜೀವಿಸುತ್ತೇನೆ..!!

- ವಿನೋಬ ಕೋಟೆ

19 Sep 2017, 10:06 pm

ಕಾಯುತ್ತಿರು ಗೆಳತಿ

ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ,
ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ …
ಮರೆಯದೆ ತರುವೆ!ಎಂದೂ ಬಾಡದ ಕವಿತೆಗಳೆಂಬ ಮಲ್ಲಿಗೆ..!!

- ವಿನೋಬ ಕೋಟೆ

19 Sep 2017, 10:03 pm

ಅರಳು ಮಲ್ಲಿಗೆ, ಹೊಂಟೆ ಎಲ್ಲಿಗೆ ?

ಅರಳು ಮಲ್ಲಿಗೆ
ನೀ ಹೊರಟೆ ಎಲ್ಲಿಗೆ ?
ಘಮವು ಚೆಲ್ಲಿದೆ,
ಮಾತಾಡು ಮೆಲ್ಲಗೆ.

ಕಪ್ಪು ಹೊದ್ದಂತೆ ಹರಡಿದ ತಲೆ ಕೂದಲ
ಮೋಡ ರಾಶಿಯನ್ನು ಬಾಚಿ
ನೀಳ ಜಡೆಯನು ಹೆಣೆದು
ತುದಿಗೆ ರಬ್ಬರು ಬಿಗಿದು,
ಹಚ್ಚಿರುವೆಯೇನೋ ಕಣ್ಗಪ್ಪು
ಕೊಂಚವೇ ತೀಡಿ ಹುಬ್ಬು.

ಮಾತಿನ ಮಲ್ಲಿಗೆ
ಕಿರು ಆಭರಣಗಳ ಪೋಷಾಕು
ಕಿವಿಯಲಿ ಅಲುಗಾಡುವ ಲೋಲಾಕು.
ಬಂಗಾರದ ಕತ್ತಿನ ಚಿತ್ತಾರದ ರವಿಕೆ
ಬೆನ್ನು ಬಿಗಿದ ಕಿರು ದಾರಗಳ ಕುಣಿಕೆ
ಕುರಿಂಜಿ ಹೂಗಳ ಜಲಪಾತ
ಸುರಿದಂತೆ ರೇಷ್ಮೆ ಸೀರೆ ನೆರಿಗೆ

ಒಪ್ಪ ಓರಣಗೊಂಡ ಮುಗ್ದ ಮೊಗ
ಮುಡಿದ ಮಲ್ಲಿಗೆಯ ಜೊತೆಗೇ
ಹರಡಿದೆ ಮುಗುಳು ನಗೆ.
ಹೊರಟಿರುವೆ ಎಲ್ಲಿಗೆ ?
ಓ ಅರಳು ಮಲ್ಲಿಗೆ.

- ಶ್ರೀಗೋ.

19 Sep 2017, 03:01 pm

ಕವನದ ಹುಡುಕಾಟ....

ಮುದ್ದಾಗಿ ಬರೆದ ಕವನವೊಂದು
ಸದ್ದಿಲ್ಲದೇ ಕಾಣೆಯಾಗಿದೆ ಇಂದು...
ನಾ ಹುಡುಕಹೊರಟಿರುವೆನು
ಕಾಣದಿಹ ಬೆಳಕಿನಲ್ಲಿ...
ನನ್ನ ಹೃದಯದ ಮಾತುಗಳನು
ಮೌನದಲ್ಲಿ ಬರೆದಿರುವೆನು....
ಕವಿತೆಯಾಗಿ ಓದುವ ಮುನ್ನವೇ..
ಬೀಸುವ ತಂಗಾಳಿಯಂತೆ
ಮರೆಯಾಗಿ ಹೋಗಿದೆ
ನನಗೊಂದು ಮಾತು ಹೇಳದೆ!

- ಪ್ರಿಯಾಂಕ

19 Sep 2017, 12:39 pm

ಮನುಜನ ದುರಾಸೆ

*ಮನುಜನ ದುರಾಸೆ*
ಧರೆಯೊಡಲು ಬೆಂಕಿ ಉಗುಳುವಂತೆ
ಮಾಡುವಿಯಲ್ಲ ಕಟುಕ ಮನುಜನೆ
ಆಸೆಯೆಂಬ ಕುದುರೆಗೆ ಲಗಾಮಿಲ್ಲಾ
ದುರಾಸೆಯ ಓಟಕೆ ಬಲಿಯಾಗುವೆಯಲ್ಲ

ಎಷ್ಟು ಸಾರಿ ಕ್ಷಮಿಸಬೇಕು ನಿನ್ನ
ಸಹನೆಯ ಕೆರಳಿಸಬೇಡ ನನ್ನ
ನಡುಕ ಹುಟ್ಟಿ ಹೆದರಿಸಿ ಮನುಜನನ್ನ
ಭೂಕಂಪನ ಮಾಡಿಸುವೆ ಕೆರಳಿಸಿ ನನ್ನ

ಪರಿಸರ ಹಾಳು ಮಾಡುತಿರುವೆ
ನಗರೀಕರಣದ ನೆಪವ ಹೂಡಿ
ಗಿಡಗಳ ಮಾರಣ ಹೋಮ ನಡೆಸುತಿರುವೆ
ಮನ್ನಿಸೆನು ಎಂದಿಗೂ ಕ್ಷಮೆಯ ನೀಡಿ

ಪವಿತ್ರ ನೀರನ್ನು ಕಲುಷಿತ ಮಾಡುತಿರುವೆ
ಕಾರ್ಖಾನೆಗಳ ಕೊಳಕುನೀರ ಕಡಲಿಗೆ ಬಿಡುತಿರುವೆ
ಮುಂದೊಂದು‌ ದಿನ ನೀರಿಗಾಗಿ ಪರಿತಪಿಸಬೇಕಾದೀತು
ಪಶ್ಚಾತ್ತಾಪ ಪಡಬೇಕಾದೀತು ಎಚ್ಚರ ಮನುಜನೆ

ಪದೆಪದೆ ತಪ್ಪನು ಮಾಡದಿರು ಎಂದಿಗೂ
ಪ್ರಕೃತಿ ನಾಶಗೊಳಿಸದಿರು ಎಂದೆಂದಿಗೂ
ನಿನ್ನಿಂದ ನೀನೆ ಆಗುತಿರುವೆ ದುರುಳ
ಕೊನೆಗೆ ಏನು ಉಳಿಯದು ಮರುಳ
ಅಸ್ಥಿ ಪಂಜರವಾಗಿ ಮಣ್ಣಲಿ ಮಣ್ಣಾಗುವೆ

*ಶಿವಕುಮಾರ ಕರನಂದಿ*

- shivakumar k

19 Sep 2017, 11:13 am

ಮಳೆಹನಿ

ನಿನ್ನೆ ಕಂಡ ಕನಸಿನಲಿ
ನಿನ್ನ ಹೆಜ್ಜೆ ಗುರುತಿದೆ
ಸುಳಿವು ಹಿಡಿದು ನಡೆಯುತಿರೆ
ಕಳೆದು ಬಿಡುವ ಭಯವಿದೆ

ದೂರದಾರಿ ಸಾಗಲಿದೆ
ದಣಿವ ಮಣಿಸಿ ಮೊದಲಲೇ
ತೆಂಕಣದ ಗಾಳಿಯೇ ತಂಗಾಳಿ ಸೂಸು
ರವಿ ನಿನ್ನ ಕಾಂತಿಯ ಹಿಡಿದಿಡುವೆಯಾ ತುಸು

ಹೆಜ್ಜೆ-ಗೆಜ್ಜೆ ನಾದವಿದೆ
ಹಾದಿ-ಬೀದಿ ನಗುತಿದೆ
ರಾತ್ರಿ ಹನಿಸಿದ ಮಳೆ ಹನಿಯಲಿ
ಚೆಲುವೆ ಬಿಂಬ ಮೂಡಿದೆ

ನಿನ್ನ ಊರ ನಭಕೆ ಇಂದು
ಕಾರ್ಮೋಡದ ಕವಿತೆಯೇನು?
ಸುರಿ ಮಳೆಗೆ ಹೆಜ್ಜೆ ಮಾಸಿದೆ
ಕೊಡೆ ಹಿಡಿದು ಬರುವೆಯೇನು?

ಪ್ರೇಮಪುತ್ರ ಭೀಮೇಶ್

- ಪ್ರೇಮಪುತ್ರ...ಭೀಮೇಶ್

18 Sep 2017, 10:44 pm

ಸಿರಿವಂತ

ಕರುನಾಡಿನ ಜನಕೆಲ್ಲ ಸಂಪತಿಗೆ ಸಂಪತಕುಮಾರ
ಬಾಲ್ಯ ಬದುಕಿನಲ್ಲಿ ಸಿನಿವಂಶಕೆ ವಂಶವೃಕ್ಷಕಾ
ಯಾರ ಹಂಗಿಲದೇ ಹಗಲಿರುಳು ದುಡಿದ ಸಿನಿರಾಯ
ಮೋಹಕ ರಂಗಭೂಮಿಯ ಸ್ನೇಹಕ್ಕೆ ದಿಗ್ಗಜ

ಮರೆಯಲಾಗದ ಮಾಣಿಕ್ಯ..ಚಾಣಕ್ಯ...
ಕರುಣೆಗೆ ಇವ ಕನ್ನಡದ ನಾಡಿನ ಸಿರಿವಂತ
ಸೋತಾಗ ಎಬ್ಬಿಸೋ ಭಿಚ್ಚು ಮನಸಿನ ಸಾಮ್ರಾಟ
ಆಧ್ಯಾತ್ಮ ಮನದ ಮನೆಯ ಅಂಗಳದ ಸಾಹುಕಾರ
ಯುವಜನಕೆಲ ಇತ ಸಹಕರಿಸೋ ಹೃದಯವಂತ

ಕರುನಾಡಿನ ವರ್ಧನ ..ವಿಷ್ಣುವರ್ಧನಾ..

ಹತ್ತೂರು ಸುತ್ತಿದರು ಇವಂತೆ ಸಿಗದ ವಿರಪ್ಪನಾಯಕ
ದೇಶಪ್ರೇಮದೊಳು ಚಿತ್ರೋದ್ಯಮದ ಸುರಪ್ಪನಾಯಕ
ಕಳ್ಳರ ಮನಸ್ಸನ್ನು ಕರಗಿಸೋ ಅಮರನಾಥ
ದ್ವಿಪಾತ್ರದ ಚಿತ್ರದಲ್ಲಿ ಇವನೇ ದ್ವಿಗವಿಜಯ

ಇವರೇ ನನ್ನೆದೆಯ ಸಾಹುಕಾರ..ಯಜಮಾನ

✍✍✍ಪ್ರದೀಪ✍✍✍

- ಪ್ರದೀಪ.ಮ.ಪಾಡಮುಖೆ

18 Sep 2017, 10:26 pm

ಅಲೆಮಾರಿಯ ಸ್ವಗತ

ನಾನೊಬ್ಬ ಅಲೆಮಾರಿ
ನನಗಿಲ್ಲವೇ ದಾರಿ.
ಬದುಕಲಿ ಬಹುದೂರ ಬಂದಿರುವೆ
ಮರೆಯಲಾದೀತೆ ಗುರಿ..
ಯಾವ ಊರ ಭುವಿಯು ಇಂದು
ಯನಗೆ ಹಾಸಿಗೆಯಾಗುವುದೋ?
ಯಾವ ಋಣದ ಫಲವನುಂಡು ಇಂದು
ಯನ್ನ ಹಸಿವು ತಣಿವುದೋ?
ಹಾಡೊಂದ ಹಾಡುವೆನು ಹಾಡುತ ಸಾಗುವೆನು
ಯಾವ ಸುಳಿಯು ಸುತ್ತ ಸುತ್ತಿ
ಕತ್ತು ಹಿಸುಕಿ ಕೊಲ್ಲವುದೋ
ಯಾರು ಬಲ್ಲರು?
ಸಾಗಿದ ಹಾದಿಯಲಿ ಎದುರುಗಾಣುತಿರುವೆ
ಕಿಕ್ಕಿರಿದ ಜನಜಂಗುಳಿ
ಮರೆತಿರುವೆ
ನಾ ತುಳಿದ ಹಾದಿ ಹೊಸತೆಂದು..
ನನಗೆ ನಾನೇ, ನಾನು ನಾನೇ
ನನಗ್ಯಾರಿಹರು ಸರಿಸಾಟಿ

ಭೀಮೇಶ್. ಎಪ್.ಡಿ

- ಪ್ರೇಮಪುತ್ರ...ಭೀಮೇಶ್

18 Sep 2017, 07:35 pm

ಪ್ರೀತಿ ಔಷಧ

ನೀಲಿ ಕಂಗಳಿನವಳೇ!!
ಸಾಕ್ಷಿಯಾಗಿದವೆ, ಸಾವಿರ
ಬಣ್ಣದ ಹೂಗುಚ್ಛ,
ಹಚ್ಚ ಹಸಿರ ತೋರಣ!!
ಆಗುತಿರಲು ಪ್ರೀತಿ ನವೀಕರಣ!!
ಮನದ ದೂರವಾಣಿಯಲಿ
ನಿನ್ನ ನಗುವಿನ ಸತತ ರಿಂಗಣ!!


ತಡ ಇನ್ನಿಲ್ಲ!! ಅನುವಾದಿಸಲು
ಬರುವೆನು ಅನುರಾಗದ
ಅನುಭಾವವೆಲ್ಲವನೂ,
ಬಡಿತಗಳೊಳಗಿನ ಮಿಡಿತಗಳೆಲ್ಲವೂ
ನಿನಗಾಗಿ ತುಡಿದ ಪರಿಭಾವವನು!!

- ಶಾಫಿ

18 Sep 2017, 05:30 pm