Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಮ್ಮವರು

ನಮ್ಮವರು ನಮ್ಮವರು
ಕಷ್ಟ ಬಂದಾಗ ನಗುವರಿವರು
ಸುಖ ಬಂದಾಗ ಕುಣಿವರಿವರು
ಎದುರಿಗೆ ಕಂಡು
ಕದ ಹಾಕಿದವರು
ಸಿಹಿ ತಿಂಡಿ ಬಡಿಸಿ
ಕಹಿಯನ್ನು ಅರೆದವರಿವರು.
ನೋಡಲು ಏನು ಅರಿಯದವರು
ಬಹಳ ಬೇಗ ಬಡ್ಡಿ ಕೊಡೆಂದರು.
ಯಾರಿವರು ನಮ್ಮ ವರು
ಹುಷಾರ್ ಹಾಸ್ಯವೇ
ನಮ್ಮವರು , ನಮಗೆ ಅರಿಯದವರು

ಆದಿತ್ಯ

- Aditya Hegde

15 Sep 2017, 03:13 pm

ಪ್ರೀತಿಯ ಚಿಗುರು

( ಪ್ರೀತಿಯ ಚಿಗುರು)

ದೇಹವೆಂಬ ಭೂಮಿಯಲ್ಲಿ
ಮನಸ್ಸು ಎಂಬ ಉಳುಮೆ ಮಾಡಿ
ಕನಸು ಎಂಬ‌ ಬೀಜವನ್ನು ಬಿತ್ತಿ.
ಹ್ರುದಯವೆಂಬ ಮೊಳಕೆ ಯೊಡೆಯಲು
ಉಸಿರು ಎಂಬ ಮಳೆಹನಿಯನ್ನು
ಸುರಿಸು ನೀನು.

ಗಿಡವಾಗಿ ಬೇಳೆದ ಪ್ರೀತಿ.
ಮರವಾಗಿ.
ಜೀವ ಜೆಂತುಗಳಿಗೆ ಉಸಿರನ್ನು ಧಾರೆಯಾಗಿ .
ಪ್ರೀತಿಯ ನೆಲೆಯನ್ನು ಶಾಶ್ವತವಾಗಿ. ಹರಡುವೆ ನೀ ಇನ್ನು .

ನಿನಗಾಗಿ‌ ನಾನು ಧರೆಯಲ್ಲಿ ಇನ್ನು
ಪ್ರಕ್ರುತಿಯಾಗಿ ಜನಿಸಿ .
ನಿನ್ನ ಉಸಿರಲ್ಲಿ ಲೀನವಾಗಿರುವ ಪ್ರೀತಿಯೆಂಬ ಜಗತ್ತನ್ನು ನನ್ನೊಳಗೆ
ಲೀನ ವಾಗಿಸಿ ಮನದೊಳಗೆ ಅದಕ್ಕೆ ಅರಮನೆಯನ್ನು ನಿರ್ಮಿಸಿ
ಪ್ರೀತಿಯೆಂಬ ಲೊಕದಲ್ಲಿ ಓಟ್ಟಾಗಿ ಜೀವಿಸುವೆವು ನಾವು
ಸದಾ ...ಸದಾ....ಹಸಿರು ಇದೆ ನಮ್ಮೆಲ್ಲರ ಉಸಿರು......

(ನೆನಪಿನ ನಾವಿಕ ಸಂತೋಷ್)

- ಸಂತೋಷ್//ಜೀತು

15 Sep 2017, 01:34 pm

ಹೊಳ..... [ಮನಸ್ಸು]

ಅಂದು ನಾ ಬಡತನದ ಸುಳಿಯಲ್ಲಿ......
ಸಿಲುಕಿ ನಲುಗುವಾಗ ಆ ಸುಳಿಯಿಂದ......
ಬಿಡಿಸಿ ಅದರಿಂದ ಹೊರಗೆ ತಂದಾಗ
ನಾ... ಮೆಚ್ಚಿದ್ದೆ ಅವನ ಮನಸ್ಸಿನ
ಹೃದಯವಂತಿಕೆಯ.............

ಸಂಸಾರದ ದೋಣಿ ಸಾಗಿಸಲು.........
ನಾ .... ಹೆಣಗುತ್ತಿರುವಾಗ ಅಂದು ಅವನು
ಕೈಗೆ ಭಲ ನೀಡಿ ಸಹಕರಿಸಿದಾಗ.....
ನಾ..... ಒಪ್ಪಿಕೊಂಡಿದ್ದೆ ಅವನ ಮನಸ್ಸಿನ
ಗುಣವಂತಿಕೆಯ.................

ನನಗೆ ಗೊತ್ತಿಲ್ಲದೆ ಮನಸ್ಸು ಸಾಗುತ್ತಿತ್ತು
ಅವನ....... ಮನಸ್ಸಿನೆಡೆಗೆ.........
ಅದರ ವೇಗ ......ತಡೆಯಲಾರದೆ. ನೀಡಿದ್ದೆ
ನನ್ನ............... ಮನಸ್ಸ ಅವನಿಗೆ

ಜೋಡಿ ಹಕ್ಕಿಯ..ಹಾಗೆ ಅಲ್ಲಿಂದ ಇಲ್ಲಿಗೆ
ಇಲ್ಲಿಂದ ಅಲ್ಲಿಗೆ ಹಾರುತ್ತಿತ್ತು..... ಮನಸ್ಸು
ಆ ದ್ಯಾವ......ದುರುಳ ಮುನ್ಸೂಚನೆಗೊ
........ ತಿಳಿಯದು

ಅವನ ಮನಸ್ಸಿನ ನಂಬಿಕೆಗೆ .........
ಕುರುಡಗಿತ್ತೇನೋ ಅಂದು ನನ್ನ ಮನಸ್ಸು
ಅವನಿಗೆ ಬೇಕಾದ್ದನ್ನ ಪಡೆದುಕೊಂಡು.......
ಕೈ ಬಿಟ್ಟಿದ್ದ ನನ್ನ ಮನಸ್ಸನ್ನ..ನಡು ಬೀದಿಯಲ್ಲಿ

ಅಂದೆ ಅರಿವಾದದ್ದು...........ನನಗೆ
ನಾ ಕಂಡದ್ದು ಅವನ ಹೊರಮನಸ್ಸ..........ನ್ನ
ಹೊರತು ಅವನ ಹೊಳ ಮನಸ್ಸನ್ನಲ್ಲ......ವೆಂದು



ಮಂಜು

- ಮಂಜು

14 Sep 2017, 10:00 pm

ಯೌವನ

ಒಲವು ಗೆಲುವಿನ ಸಾಗರದಲಿ ತೆಲತಾ
ನಯನಗಳು ಒಂದನ್ನೊಂದು ಕೂಡತಾ
ಮನಸಿನ ಮೂಲಕವೇ ಮಾತಾಡತಾ
ಎದೆಗೂಡಿನ ಹಾಡು ಆಲಿಸುತಾ
ಪ್ರೇಮ ಪ್ರಪಂಚದಲಿ ತೆಲಾಡತಾ
ಕನಸಿನಲ್ಲಿ ಕಲ್ಪನೆಯ ಕೆತ್ತುತಾ
ಭಾವನೆಗಳಿಗೆ ಪುಷ್ಟಿ ನೀಡತಾ
ಮೌನದಲ್ಲೆ ಮಗ್ನವಾಗತಾ
ವಿರಹಗಳಿಗೆ ವೇದನೆ ಪಡುತಾ
ಅರೆ ಪ್ರಜ್ಞಾವ್ಯವಸ್ಥೆಯಲ್ಲಿರುತಾ
ತನುವಿಗೆ ಶಿಕ್ಷೆ ಕೊಡತಾ
ಕಣ್ಣಾಮುಚ್ಚಾಲೇ ಆಡತಾ
ಭಯ ಅಭಯ ಒಡಮೂಡಿಸಿಕೊಳ್ಳತಾ
ಸಂಶಯ ಸಲ್ಲಾಪದಲಿ ಕಾಲುಜಾರುತಾ
ಸಂಯಮ ತಾಳ್ಮೆ ಕಳೆದುಕೊಳ್ಳತಾ
ಮೋಹ ಮಾಯೆಗೆ ಬೀಳತಾ
ಆಲಸ್ಯತನದಿಂದಿರುತಾ
ಸ್ವಾರ್ಥತೆ ಮೈಗೂಡಿಸಿಕೊಳ್ಳುತಾ
ಹೊಸ ಹೊಸ ಅನುಭವ ಪಡೆಯುತಾ
ಕಿಶೋರ್ ಪಾಠ ಕಲೆಯುತಾ
ಬೇಕು ಬೇಡಗಳನ್ನು ಎದುರಿಸುತಾ
ಸ್ವಾಭಿಮಾನ ಬೆಳಸಿಕೊಳ್ಳುತಾ
ಸ್ವತಂತ್ರತೆಯಿಂದಿರಲು ಪ್ರಯತ್ನಿಸುತಾ
ತಪ್ಪು ಒಪ್ಪುಗಳಿಗೆ ಹಿರೇಉಳ್ಳಿಗೇರಿ ಕರೆಮ್ಮಳನ್ನು ನೆನೆಯುತಾ
ಗುರಿಕಡೆ ಸಾಗುವುದೇ ಯೌವನ

- MB

14 Sep 2017, 09:22 pm

ಎಸ್ ಎಸ್

ಕಣ್ಣಂಚಿನಲಿ ಕೊರೆಯುವ
ಕೋಲ್ಮಿಂಚಿನಂತ ಕುಡಿನೋಟ
ಕಣ್ಣುಬ್ಬಲಿ ಹೊಳೆಯುವ
ಕಾಡಿಗೆಯ ಕಿರುನೋಟ
ಕಣ್ಕುಕ್ಕಿ ಕಾಡುತ್ತಿದೆ ಎನ್ನ ಮನವಾ!

ಬೈತಲೆಯ ಬಯಲಲ್ಲಿ
ಭಿನ್ನಾಣದ ಬಿರುದಾವಳಿ
ಮಸ್ತಕದ ಮಧ್ಯೆದಲಿ
ಸಂಸ್ಕೃತಿಯ ಸಿಂಧೂರಾವಳಿ
ನನ್ನೊಕ್ಕು ಬೇಡುತ್ತಿದೆ ನಿನ್ನ ಮನವಾ!!

---- ಚೌಡಪ್ಪ.ಪಿ
ಗಂಗಮ್ಮನಹಳ್ಳಿ.

- Chowdappa P

14 Sep 2017, 08:27 pm

ನಿನಗಾಗಿ

ನಿನಗಾಗಿ ಬರೆದೆನು ಕವಿತೆ
ಅದರಲಿ ನನ್ನನೇ ಮರೆತೆ
ಹೃದಯದ ಪಟ್ಟದರಸಿ ನಾನು
ನನ್ನಾಸೆ ಅರೆಯಲಾರೆ ನೀನು

ಕುರುಡು ಕನಸಿಗೂ ನಿನ್ನದೇ
ನೆನಪಿನ ಚಟುವಟಿಕೆ
ನೀ ಬರಲು ಸನಿಹದಲಿ
ಎದೆಯಲಿ ನೂರಾರು ಬಯಕೆ

ಪ್ರೀತಿ ಬಯಸಿದ ಹೃದಯವೀಗ
ತಪ್ಪು ಮಾಡಿದೆ
ಅರಸಿ ಹೋದ ಮನಸಿಗೀಗ
ಕಳೆದುಹೋಗಿದೆ

ಭಾವತುಂಬಿ ಹೇಳಿದ
ಮಾತೀಗ ಮೌನವಾಗಿದೆ
ಇಷ್ಟಪಡುವ ಮನಸ್ಸು
ಹೇಳದೆ ದೂರವಾಗಿದೆ

ಕಂಗಳು ಕಂಬನಿಯ
ಮುಚ್ಚಿಡದೇ ಬೆದರಿವೆ
ಸದ್ದಿಲ್ಲದೆ ಕೆನ್ನೆ ಮೇಲೆ
ಕಣ್ಣೀರು ಜಾರೀ ಹೋಗಿವೆ

ಸಾಗುವ ದಾರಿಗೆ ನೆರಳು
ಕೂಡ ಮರೆತು ಹೋಗಿದೆ
ನೀನಿಲ್ಲದ ಕ್ಷಣ ಉಹಿಸಿಕೊಂಡು
ನೊಂದ ಬದುಕು ಶೂನ್ಯ ವಾಗಿದೆ

ಮಾನಸಾ ಎಪಿ..

- ಮಾನಸಾ ಎಪಿ

14 Sep 2017, 02:05 pm

ಸಾಕು ನಿಲ್ಲೆ

ಸಾಕು ನಿಲ್ಲೆ ಕಣ್ಣೀರೆ ಆಯಾಸವೆಂಬುದೇ
ಬರೆದಿಲ್ಲವೇ ಆ ಸೃಷ್ಟಿಕರ್ತ ನಿನ್ನ
ಹಣೆಬರಹದಲ್ಲಿ...........

ಸಾಕು ನಿಲ್ಲೆ ಕಣ್ಣೀರೆ ಎಷ್ಟು ಭಾರ ಹೊತ್ತಿರುವೆ
ನೀನು ನಿನ್ನಲ್ಲಿ ಇಳಿಸಿಕೊಳ್ಳಲು ನನ್ನ ಕಣ್ಣೆ
ಆಸೆರೆಯಾಯಿತೆ ನಿನಗೇ...............

ಕಾರವೊಂದು ಬೇಕಲ್ಲವೇ ನಿನಗೆ ನನ್ನ ದಿನನಿತ್ಯ
ನೋಡಲು ಬರುವೆ ಯಾರಿಲ್ಲವೆಂದು ನನಗೆ
ನಾನಿರುವೆಂದು ಬರುವೇ...............

ಹಿಂದೋದ ನೋವು ಮುಂದಿರುವ ನಲಿವು
ಈಗಿರುವ ಮೌನವ ನಿನ್ನಂತೆ ತಿಳಿದಿಲ್ಲ ನಾನು
ನಿನ್ನಂತೆ ನನ್ನ..............

ತಡವಾಗಿ ಬರಬಹುದು ನಗುವು
ಮಾತಿಲ್ಲದೆ ಮಲಗಿದೆ ಮನವು........

ಕೂಗುವಷ್ಟು ಶ್ರಮವಿಲ್ಲದೆ
ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ನನ್ನಲ್ಲೆ
ನೀನಿರುವೆಂದು ಕಾಣಿಸುವೆ ನನಗೆ
ಅಳುವೇ..................

- ಚುಕ್ಕಿ

13 Sep 2017, 09:11 pm

ನೆನಪುಗಳ ಕಲ್ಪನೆಯಲ್ಲಿ

ನೆನಪುಗಳ ಕಲ್ಪನೆಯಲ್ಲಿ

ಮೊದಲು ನೋಡಿದ ನೋಟದಲ್ಲಿ
ತಡಿಯದಾಗದ ಸಂತೋಷದಲ್ಲಿ
ಅರಿಯದ ಮನದಲ್ಲಿ
ನಿನ್ನದೆ ಪ್ರತಿ ಮೌನದಲ್ಲಿ

ಕನಸಿನ ನಾಯಕತ್ವದಲ್ಲಿ
ಹೃದಯದಾಳದಲ್ಲಿ
ಪ್ರತಿ ಉಸಿರಿನ ಕಣದಲ್ಲಿ
ನೀ ಚಿಗುರಿದಿಯಲ್ಲಿ

ಪ್ರೀತಿಯ ದಡದಲ್ಲಿ
ತೆಲಿಸಿದೆ ಸಾಗರದಲ್ಲಿ
ಸಾಗಿದ ದಿನದಲ್ಲಿ
ನೀನೇ ಮಿಡಿದೆಯಲ್ಲಿ

ಮರೆಯದಾದಿ ಮನದಾಳದಲ್ಲಿ
ನುಡಿಸದಾದಿ ಎದೆಯಾಳದಲ್ಲಿ
ನರನಾಡಿಯಾದಿ ನನ್ನ ದೇಹದಲ್ಲಿ / ಓ ಗೆಳತಿ
ನೀ ಹಿರೇಉಳ್ಳಿಗೇರಿ ಕರೆಮ್ಮಳ ಆಶೀರ್ವಾದಿಂದ ನೆನಪಲ್ಲೆ ಉಳಿದೆ ಬದುಕಲ್ಲಿ

- MB

13 Sep 2017, 08:30 pm

ತಲ್ಲಣ

ಧರೆಯ ಮನದ ತಲ್ಲಣಕೆ
ಸೋನೆ ಮಳೆಯ ಸಿಂಚನ
ಪ್ರೀತಿಯ ತುಂಬಿದ ಮನಕೆ
ಭಾವನೆಗಳೆ ಒಲವ ಹೂರಣ
ಸವಿ ಸಿಹಿ ಮಾತುಗಳೆ
ಮಧುರ ಮನದ ತೋರಣ...

#ಮಾನಸಾ #ಎಪಿ

- ಮಾನಸಾ ಎಪಿ

13 Sep 2017, 07:35 pm

ಜೋರಾದ ಮಳೆ.......

ಜೋರಾದ ಮಳೆಯೇ...ನೀನ್ಯಾಕೆ ಹೀಗೆ ಬರುವೆ......
ಧರಗಿಳಿದು ಬಂದೆ ....ಒಂದೇ ಕ್ಷಣದಲ್ಲೆ ಬರುವೆ.....
ಕರೆಯದೆ ಬರುವೆ.... ನಿಲದೇ ಹೋಗುವೆ....
ಗುಡುಗ ಜೊತೆ ಇರುವೆ.... ಒಂದೇ ಜಾಗದಲ್ಲಿ ನಿಲ್ಲದೆ ಬರುವೆ.....
ಹನಿ ಹನಿಯಾಗಿ ಬರುವೆ....ಸಾಗರದ ಹಾಗೆ ನಿಲುವೇ....
ತಂಪಾದ ವಾತಾವರಣ ಕಲ್ಪಿಸಿದೆ....
ಜೋರಾದ ಗಾಳಿ ಬಿಸಿದೆ

- Ajay

13 Sep 2017, 06:53 pm