Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗುರಿ

ಅಂದು,ಮುಂದೆ ಗುರಿ ಹಿಂದೆ ಗುರು
ಸಾಗುತಲಿತ್ತು ಧೀರರ ದಂಡು!!!

ಇಂದು,ಮುಂದೆ ಗುರಿಯೂ ಇಲ್ಲ ಹಿಂದೆ ಗುರುವೂ
ಇಲ್ಲ ಸಾಗುತಲಿದೆ ಕುರಿಗಳ ದಂಡು!!!

- ಶಾಫಿ

24 Sep 2017, 09:25 pm

ಶ್ಯಾಮನ ನೆನಪಲಿ.....

ಆ ಶ್ಯಾಮನ‌ ನೆನಪಲಿ‌
ನನ್ನನೆ‌ ಮರೆತಿರುವ ನಾನು ರಾಧೆ
ಅವನ‌ ಪ್ರೀತಿಯ ಮೋಡಿಯಲಿ
ಬಂಧಿಯಾಗಿ‌‌ ನಾ ಕರಗಿ ನೀರಾದೆ

ಕೊಳಲನೂದುತಿರಲವನು ಬಲು ಮೋಹಕ
ನೆನೆಯುತಿರಲವನ‌ ನನ್ನೊಳಗೆ ಏನೊ ಪುಳಕ
ಅವನ‌ ಪ್ರೇಮದೊಳಗೆ‌ ಎಲ್ಲವೂ ಭಾವುಕ‌
ಕನಸಿನ‌‌ ಲೋಕಕ್ಕೆಲ್ಲ‌ ಅವನೆ‌ ನಾಯಕ

ಸನಿವಿರಲು ಅವನದು ಅತಿ ತುಂಟತನ
ದೂರ ಸರಿದರವನು ತಾಳಲಾರೆ ಒಂಟಿತನ
ನನ್ನ ಬಾಳ ತುಂಬೆಲ್ಲ ಅವನದೆ ಕಥನ
ಅವನಿಲ್ಲದೆ ಸಾಗುವುದೆ ಈ ಬಾಳಯಾನ

- ಶ್ರೀಕಾವ್ಯ

24 Sep 2017, 08:43 pm

ಹಕ್ಕಿಧರ್ಮ

ಹಕ್ಕಿ ಧರ್ಮ
---------------

ಕಾಣದ ಕಣ್ಣಿನ ಆಳದಲ್ಲಿ ಮಿನುಗುವ ನಕ್ಷತ್ರವು
ಹೂಮಾಲೆಯಾಗಿ ಕೊರಳೊಳು ಮಿನುಗಲು
ನೆನಪಾಯಿತು ನನಗೆ ಸಾವಿರ ಸ್ತಂಬಗಳ ಕಂಬಸಾಲು
ಅದು ಧ್ವನಿ ಪೂರ್ಣ ಕವಿತೆಯ ತಾಜಾ ಬಾಬತ್ತು.

ಮಲಗಿದ ಕಣ್ಣುಗಳು ಏನನ್ನೋ ಕಾಣುತ್ತಲಿದ್ದವು
ಹೃದಯ ಇನ್ನೇನನ್ನೋ ಬಡಬಡಿಸುತ್ತಲಿತ್ತು
ಸಾವಿರಾರು ಮೈಲಿ ಸಾಗಿ ಬಂದ ಮನಸ್ಸು
ಭಾವೋದ್ವೇಗದ ಬುದ್ಧಿ ನೆನೆಪಿಸಿಕೊಂಡ ಹಾಡು.

ಸಾವಿರ ಹೃದಯಗಳ ಅರಮನೆಯಲ್ಲಿ ಅರಳಿ
ಜನರ ಮಾತಾಗಿತ್ತು ಸಂತೆ ನಡುಬೀದಿಯಲ್ಲಿ
ಇಬ್ಬನಿಯಂತೆ ಜೀವ ಸಾರ್ಥಕತೆಯನ್ನು ಸಾರಿ
ಬಿದ್ದ ಮಳೆಯಂತೆ ತನ್ನ ಕಾರ್ಯವನ್ನು ನೀಗಿ

ಧನ್ಯತೆಯ ಭಾವದಲ್ಲಿ ನಿರಾಳ ಆಸ್ವಾದನೆ
ನನ್ನ ಅನಾಹತ ಚಕ್ರದ ಧ್ವನಿ ನನಗೆ ಕೇಳಿದಂತೆ
ಪದೋನ್ಮತ್ತ ಸುವಿಶಾಲ ಆಳ ಸಾಗರದಂತೆ
ಕನಸಲ್ಲಿ ಬರೆದಂತೆ ಕವಿತೆಯೊಂದ ಕನವರಿಸಿದೆ.

ಅಂದು ಮುಂಜಾನೆಯ ವೇಗ
ತಡವಾಯಿತೇನೋ ಎಂದೆ,ಎದ್ದು ಬೇಗ
ಅಸತ್ಯ ರಾತ್ರಿಯ ಕಾವ್ಯನಶೆಯ ಮೆಲುಕು ತಳುಕುಹಾಕುತ್ತಲಿತ್ತು .ಮನ ಸುಮ್ಮನೆ ಹಾಡುತ್ತಿತ್ತು

ಹಾಡಲು ಹೊರಟೆ ಬಹುರೂಪಿಗಳಂತೆ
ಗೀಚಲು ಹೊರಟೆ ಕಬ್ಬಿಗರಂತೆ
ಗಿಡಗಂಟೆಗಳಂತೆ ನನ್ನ ಕವಿತೆ.
ಹಾಡಿಬಿಟ್ಟಿದ್ದವು ಹಕ್ಕಿಗಳು ಆಗಲೇ.

ಎದ್ದು ನಾನು ಬರೆಯುವ ಹೊತ್ತಿಗೆ........

----ಸುರೇಶ ಜಕಾತಿ.ಜಮಖಂಡಿ
8746086658

- ಸುರೇಶ ಜಕಾತಿ.ಜಮಖಂಡಿ

24 Sep 2017, 06:08 pm

ಬದುಕು

ಹುಟ್ಟು ಸಾಧನೆಯ ಜೊತೆಯಲ್ಲಿ
ಕಲಿಕೆ ಮನಸುಗಳ ಜೊತೆಯಲ್ಲಿ
ಗುಣ ಭಾವನೆಗಳ ಜೊತೆಯಲ್ಲಿ
ವಿವೇಕ ಗುರುಗಳ ಜೊತೆಯಲ್ಲಿ
ಬದುಕಿನ ಪಯಣ ಸಮಯದ ಜೊತೆಯಲ್ಲಿ

- nageshwarh

24 Sep 2017, 04:58 pm

ಪರದಾಟ...

ತುಸು ನಗೆಯ ನಕ್ಕು
ಅವಳಾದಳು ನನ್ನ ಸಂಗಾತಿ...
ಕಸಿದುಕೊಂಡಲು ನನ್ನೆಲ್ಲಾ ಹಕ್ಕು
ಕೇಳೊರಿಲ್ಲಾ ಯಾರು ನನ್ನ ಗತಿ...

- ಪ್ರಿಯಾಂಕ

24 Sep 2017, 04:09 pm

ಅಂದು-ಇಂದು....

ಕೊಳೆತು ನಾರಿದ ಸಮಾಜವ
ಬದಲಿಸುವ ಬಯಕೆ ಅಂದು
ಕೊಳೆತ ಕೆಸರಲೆ ಹೊರಳಾಡುವ
ಸಾಮರಸ್ಯದ ಜೀವನ ಇಂದು

ಸೋಲೆ ಇಲ್ಲದ ಸರದಾರಳು
ನಾನೆಂಬ ಅಹಂ ಅಂದು
ಸೋಲಿನ ಸರಮಾಲೆಯ ದರಿಸಿದವಳು
ಸಂದರ್ಭದ ಕೈಗೊಂಬೆ ನಾನಿಂದು

ದೂರದ ಶಿಖರವ ಮುಟ್ಟಲು
ಕ್ಷಣಿಕ ಸುಖವ ತ್ಯಜಿಸಿದೆನಂದು
ನಿಖಟ ಗಿರಿಯ ಮುಟ್ಟಲಾಗದೆ
ಪರಿತಪಿಸುತಿರುವೆನು ಇಂದು




ಶಾರಧ

- ಶಕುಂತಲಾ

23 Sep 2017, 11:15 pm

ಸೋಲೆ....... ಗೆಲುವು:-------

ಸೋಲನ್ನೆಂದಿಗೂ ನಿ ದೂಷಿಸಬೇಡ
ಅದೇ ನಿನ್ನ ಗೆಲುವಿಗೆ ಪ್ರೇರೇಪಿಸುವ ಅಸ್ತ್ರ
ಕೊನೆಗೆ... ಅದೇ ನೀಡುವುದು ನಿನಗೆ
ಗೆಲುವಿನ ಉಡುಗೊರೆಯ

ಓದು ನೀ ಸೋತು ಗೆದ್ದವರ ನೀತಿ ಕಥೆಗಳ
ತಿಳಿಯುವುದು ನಿನಗೆ ಸೋಲಿನ ಕಾರಣಗಳ
ಅವರ ಸೋಲಿನ ಕಾರಣಗಳ ತೆಗೆದುಕೊ
ನಿ......................ಸ್ಫೂರ್ತಿಯಾಗಿ

ಎಂದಿಗೂ ನೀ ಗೆದ್ದು ಸೋಲವಂತಗಾಗ ಬೇಡ
ಅದೆಂದಿಗೂ ನಿನಗೆ ಉಚಿತವಲ್ಲ
ಗೆದ್ದು ಸೋತ ಆ ನೋವು ಮತ್ತೆ ಗೆಲ್ಲುವವರೆಗೆ
ಬಾದಿಸುವುದು... ಬೆನ್ನತ್ತಿದ ಬೇತಾಳದಂತೆ

ಎಲ್ಲಾ ಸಾಧಕರು ಸೋಲುಂಡು ಗೆದ್ದವರೆ
ಸೋಲೆ....... ಕೊನೆಯಲ್ಲ
ಸೋಲು ಕತ್ತಲಾದರೆ ಗೆಲುವು ಹಗಲು
ಕತ್ತಲೋದ ಮೇಲೆ ಗೆಲುವೆನ್ನ ಹಗಲು
ಬರಲೇಬೇಕು

ಸೋಲೆ.........ಗೆಲುವಿನ ಸ್ಫೂರ್ತಿ

:--- ಮಂಜು

- ಮಂಜು

23 Sep 2017, 09:30 pm

ನೆನಪು.....

ಸುರಿಯುವ ಮಳೆಹನಿಗಳಲ್ಲಿ
ಬೀಸುವ ತಂಗಾಳಿಯಲ್ಲಿ
ಸಾಗರದ ಅಲೆಗಳಲ್ಲಿ
ನಿನ್ನ ಪ್ರೀತಿಯ ಮಾತುಗಳು
ತೇಲಿಹೋಗಿವೆ ನಿನ್ನ ನೆನಪಿನಲ್ಲಿ!

ಪ್ರಿಯಾಂಕ✍

- ಪ್ರಿಯಾಂಕ

23 Sep 2017, 06:41 pm

ಒಲವು

ಕನಸು ಕಾಣುತಲಿರುವೆ ಒಲವೇ..
ಕನಸಲ್ಲಿ ನೀನೊಮ್ಮೆ ಬರಬಾರದೆ...
ಸನಿಹ ನೀನಿರದೆ ಕಣ್ಣೀರು ಜಿನುಗಿದೆ..
ಮೌನ ಮನಸು ಹಠವ ಮಾಡುತ್ತಿದೆ..
ಬಳಿ ಬಂದು ನೀನೊಮ್ಮೆ ನಿಲ್ಲಬಾರದೆ...

ಪ್ರಿಯಾಂಕ✍

- ಪ್ರಿಯಾಂಕ

23 Sep 2017, 11:30 am

ಸೈನಿಕ

ಹಗಲು ರಾತ್ರಿಗಳು
ದೇಶದ ಪ್ರೀತಿಗೆ..
ಮನಸು ಮುರಿಯುವುದು
ವೈರಿಗಳ ಅಟ್ಟಹಾಸಕೆ!

ಬಿಸಿಲು-ಮಳೆ, ಚಳಿ-ಗಾಳಿಯಲ್ಲೂ
ವೀರಯೋಧರ ಸೆಣಸಾಟ..
ಸಾವಲ್ಲೂ ನೋವಲ್ಲೂ
ಎಚ್ಚರ ತಪ್ಪದ ಹೋರಾಟ!

ಪ್ರತಿ ದೇಹದ ಉಸಿರಿನಲ್ಲಿ
ಬೆರೆತುಹೋಗಿದೆ ಕನ್ನಡಭಿಮಾನ..
ದುಷ್ಟ ವೈರಿಗಳ ಮೋಸದಿಂದ
ಮಣ್ಣಾದ ಹೆಮ್ಮೆಯ ಕನ್ನಡಿಗ!

ಪ್ರತಿ ಜೀವದ ಎದೆಬಡಿತ
ದೇಶದ ಮೇಲಿನ ಅಭಿಮಾನ..
ದೇಶ ಕಾಯೋ ಸೈನಿಕ
ನಿಮಗಿದೋ ನಮ್ಮ ನಮನ!

ಪ್ರಿಯಾಂಕ✍.

- ಪ್ರಿಯಾಂಕ

22 Sep 2017, 07:13 pm