Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕೆಂಪು ಗುಲಾಬಿ

ಅರಳು ಮಲ್ಲಗೆಯಂತೆ ಅರಳಿನಿಂತಿರುವೆ ಚಂದ್ರಮುಖಿಯಂತೆ ರೂಪ ತುಂಬಿಕೊಂಡಿರುವೆ ನೀ ಯಾವ ಊರ ಚಲುವೆ ನಾ ಹೇಳುವೆ ತೋಟದ ತೊಪ್ಪಲಲ್ಲಿ ಬೆಳೆದು ನಿಂತಿರುವ ಕೆಂಪು ಗುಲಾಬಿಯೇ
ಮಧುಸೂಧನ ಗೌಡ

- madhusudhanagowda@gmail.com

25 Sep 2017, 10:42 pm

ಏಕಾಂತ

ಮನಸು ಬಯಸುತಿದೆ ಏಕಾಂತ
ತಿಳಿಯದಾಗಿದೆ ನನಗೂ‌ ಏಕಂತ
ಎಲ್ಲಾದರು ಓಡಿ ಹೋಗಿಬಿಡಬೇಕೆಂಬಂತ ಧಾವಂತ
ಈ ಭಾವ ಒಳಗೆ ಆಗಿಬಿಡುವುದೇನೊ ಅನಂತ

ಎಂದಿಗೂ ಬಿಡಲಾರೆ ನಿನ್ನ ಎಂದಪ್ಪಿದೆ ಈಗೀಗ
ಬೇಡವೆನಿಸುತ್ತದೆ ಈ ಏಕಾಂತ ಆಗಾಗ
ಇದರಿಂದ ಬಿಡುಗಡೆ ಸಿಗುವುದು ಯಾವಾಗ
ಹೇಗೆ ಹೇಳವುದು ಇದರ ಮಡಿಲಲಿ‌ದ್ದಾಗ ಆಗುವ ಆವೇಗ

ಈ ಏಕಾಂತದು ಪ್ರತಿ ಬಾರಿ ಬೇರೆ ಬೇರೆ ವೇಷ
ಕೆಲವೊಮ್ಮೆ ಎದೆಯೊಳಗೆ ಎಂಥದೊ ಆವೇಶ
ಸತ್ತು‌‌ ಪುನರ್ಜನ್ಮ ಪಡೆದಂತನಿಸುವುದು ಒಂದು ನಿಮಿಷ
ಒಮ್ಮೆ ಅದರಲೆ ಖುಷಿಯ ಕಂಡು ಮನಸಾಗುವುದು ಹರುಷ

ನನ್ನೊಳಗೆ ಇದೆಂದೂ ಬಿಟ್ಟು ಬಿಡದ ಮಾಯೆ
ಆಗಾಗ ತೋರಿ ಹೋಗುವುದು ತನ್ನ ಛಾಯೆ
ಮತ್ತೆ ಮತ್ತೆ ಕಾಡಿದಾಗ ಸತ್ತಾಂತಾದರು ನಾ ಸಾಯೆ
ಏಕಾಂತವೆ ನೀನಾದರೂ ಬಂದು ನೀನೆನೆಂದೂ ಹೇಳಲಾರೆಯೆ ?

- ಶ್ರೀಕಾವ್ಯ

25 Sep 2017, 08:47 pm

ನಾ ದೇಶ ಕಾಯೋ ಯೋಧ ಗೆಳತಿ

ನಾ ದೇಶ ಕಾಯೋ ಯೋಧ ಗೆಳತಿ‌
ನೀ‌ನು ಯಾಕೆ ಹಿಂಗೆ ನನ್ನ ತಡೆಯುತಿ
ನೀನೇನೆ ಎಂದೂ ನನ್ನ ಉಸಿರಿಗೊಡತಿ
ನಾನಿಂದು ಹೋಗದಿದ್ದರೆ ಎಷ್ಟೋ ಮುಗ್ಧ ಜೀವ ಮಣ್ಣಾಗುತೈತಿ

ನೀನಿರಲು ಸನಿಹ ಬರದಿರಬಹುದೇನೊ ನನಗೆ ವಿರಹ
ನಾನಿಂದು ಹೋಗದೆ ಅಳಿಸಿ ಹೋದರೆ ಜೀವಗಳ ಹಣೆಬರಹ
ನಾನಿಲ್ಲಿ ಕೊರಗಿ‌ ಕರಗಿ ಮಣ್ಣ ಸೇರುವೆ ಸೋತವನ‌ ತರಹ
ಆಗ ನೀ‌‌ ನಗುತ ಬಾಳಲಾಗುವುದೆ ನನ್ನ ಜೊತೆ ಮಾಡಿ ಕಲಹ

ನಿನ್ನೊಲವ ಪ್ರೇಮದ ರಕ್ಷೆ ಇದ್ದರೆ ನನ್ನೀ ಜೀವಕೆ ಚಿನ್ನ
ಹೇಗೆ ಕರೆದೊಯ್ಯುವನೆ ಜವರಾಯ ನಿನ್ನಿಂದ ದೂರ ನನ್ನ
ನಾ ಬಂದು ಮತ್ತೊಮ್ಮೆ ನಿನ್ನ ಸೇರುವ ಮುನ್ನ
ಗೆದ್ದು ಬಾರೊ ಗೆಳೆಯ ನಿನಗಾಗೆ ಕಾದಿರುವೆನೆಂದು ಹಾರೈಸಿ ಕಳಿಸೆ ನನ್ನ

ನಾ‌ ಬಂದೆ ಬರುತೀನಿ ಬಂದು ನಿನ್ನ ಸೇರುತೀನಿ‌
ಬರದಿದ್ದರೆ ಕೊರಗದಿರು ಕಣ್ಣೀರ ಜಾರಿಸದಿರು
ವೀರ ಮರಣ ನನ್ನವ‌ನದೆಂದು ಹೆಮ್ಮಯಲಿ ಬದುಕಿರು
ಗೆದ್ದು ಬರಲಿ‌ ನನ್ನಿನಿಯ ಎಂದು ದೇವರ ಬೇಡುತಿರು ನೀ

- ಶ್ರೀಕಾವ್ಯ

25 Sep 2017, 08:33 pm

ಯಾರೇ ನೀನು...!!

ಕನಸಾಗಿ ಬಂದವಳು ನನಸಾಗುವ ಮುಂಚೆನೇ ಮಾಯವಾದಳು..
ಪದೇ ಪದೇ ಕಾಡುವ ಅವಳ ಕಣ್ಣುಗಳು ನನ್ನ ಹೃದಯ ದೋಚಿತ್ತು..
ನಾನು ಓದುವ ಪುಸ್ತಕದಲ್ಲೂ ಅವಳದೇ ಕಾಡುವ ಮುಗುಳ್ನಗೆ..

- ನಮಿತ ಗಟ್ಟಿ

25 Sep 2017, 08:33 pm

ವಿಶ್ವಮಾನವನಾಗು..

ವಿಶ್ವಮಾನವ

ಏನಾದರು ಸಾಧಿಸಬೇಕೆಂಬುದು ಎಲ್ಲರ ಹಂಬೋಣ
ಏನು ಸಾಧಿಸಬೇಕೆಂದು ತಿಳಿಯದೇ ಹೈರಾಣ..!!!
ಭಿತ್ತಿದ ಬೀಜವ ಮೊಳಕೆಯೊಡೆಯಲು ಬಿಡದೇ
ಕಿತ್ತು ಕಿತ್ತು ಬೇರೆಡೆ ಭಿತ್ತುತ್ತ ಹೊದೆಡೆ ಫಸಲು ಬರುವುದೇ!!
ಇಟ್ಟ ಹೆಜ್ಜೆಯ ಬದಲಿಸುತ, ಮರಳಿ ಬದಲಿಸುತ ಸಾಗಿದೊಡೆ
ಹರಿ ಮೆಚ್ಚುವನೆನು..!!!!
ಇಟ್ಟ ಗುರಿಯು ತಪ್ಪಿದರೂ ಚಿಂತೆಯಿಲ್ಲ..
ಗುರಿ ಬದಲಿಸುತ ಚಿಂತೆಯ ಚಿತೆ ಏರಿ
ವೃಥಾ ಕಾಲಹರಣಕ್ಕಿಂತ...
ಪ್ರಯತ್ನನಿಸಿದೆನೆಂಬ ಆತ್ಮ ತೃಪ್ತಿ ಸಾಕು.

ಬದುಕು ಶುರುವಾದಾಗ ಸಾವಿನ ಭಯ
ಸಾವು ಸಮೀಪಿಸಿದಾಗ ಬದುಕಿನ ಆಸೆ
ಇದ್ದಾಗ ಉಣಬೇಕು, ಉಡಬೇಕು ಕಾಯಕ ಮಾಡಬೇಕು
ಇಲ್ಲದಾಗ ಶಿವನಿಚ್ಚೆ ಎಂದು ಮೂಟೆ ಕಟ್ಟುತಿರಬೇಕು

ಆರಂಭದ ಪಯಣ ಹೆತ್ತ ತಾಯಿಯ ಒಡಲಲ್ಲಿ
ಅಂತ್ಯದ ನಿಲುಗಡೆ ಹೊತ್ತ ಭೂ ತಾಯಿಯ ಮಡಿಲಲ್ಲಿ
ಎಲ್ಲರನ್ನು ಮೆಚ್ಚಿಸಲು ಹೊರಟ ನೀ ಮೆಚ್ಚಿಸಿದ್ದೇನು
ನಾನು ನನದೆಂದು ಬಡಿದಾಡಿ ಹೋರಾಡಿದವನಿಗೆ ಸಿಕಿದ್ದೇನು

ನಿನ್ನೆ ಮರೆಯುವರು ಮುಂದೆ ನಿನ್ನ ಪೀಳಿಗೆಯವರು
ಯಾರಿಗಾಗಿ ದುಡಿದೆ ನೀ ನಿದ್ದೆಗೆಟ್ಟು, ಕಷ್ಟಪಟ್ಟು
ಅಳಿಲು ಸೇವೆಯ ಮಾಡು ನೀ ನಿನ್ನವರಿಗೆ, ನೆರೆಹೊರೆಯವರಿಗೆ, ಕುಲಭಾಂಧವರಿಗೆ, ಸಮಾಜಸೇತುವೆಗೆ
ಉಳಿಯುವೆ ನೀನು
ವಿಶ್ವಮಾನವನಾಗಿ, ಮುಂದಿನ ಪೀಳಿಗೆಗಾಗಿ

- ರಾಘವ್ ರಾಕೇಶ್ ( ನೀನು )

- ರಾಘವ್ ರಾಕೇಶ್

25 Sep 2017, 05:26 pm

ಹೆಣ್ಣು ಮಗುವಿಗಾಗಿ ಒಂದು ದಿನ

#ಹ್ಯಾಪಿ #ಡಾಟರ್ಸ #ಡೇ

#ಅವಳೆಂದರೆ...

ಮುದ್ದು ಬಂಗಾರಿ
ನನ್ನೊಲವಿನ ಸಿಂಗಾರಿ
ತೊದಲ ಮಾತಲಿ
ಅಮ್ಮಾ ಎನಲು
ಹೊಮ್ಮಿತು ಮನದಲಿ
ಸಂತಸದ ಹೊನಲು
ಪುಟ್ಟ ಹೆಜ್ಜೆಯನ್ನು ಇಟ್ಟು
ತುಂಟಾಟ ಮಾಡಲು
ಬಾಲಕೃಷ್ಣನ ಸೊಬಗು
ನನ್ನಾಸೆಯ ಕವಲೊಡೆದ ದಿನ
ಶಿಕ್ಷಣಕೂ ಸೈ ನೃತ್ಯಕೂ ಸೈ
ಅನಾರೊಗ್ಯದಿ ಬಳಲಿದಾಗ
ಮತ್ತೊಮ್ಮೆ ಅಮ್ಮನ ಆರೈಕೆ
ಅವಳ ಕಣ್ಣಲ್ಲಿ ಕಂಡೆ
ಹೆಣ್ಣೆಂದರೆ ಮೂಗು ಮುರಿಯವ
ಜನರೇ ಹೆಚ್ಚು ಜಗದಲಿ
ಹೆಣ್ಣಿರದಿದ್ದರೆ ಎಲ್ಲಿಂದ
ಸಿಗುತ್ತಿತ್ತು
ಕವಿಕಾವ್ಯಕೆ ಸ್ಪೂರ್ತಿ
ಸೌಂದರ್ಯಕೆ ಪ್ರತೀತಿ
#ಹೆಣ್ಣನ್ನು #ಗೌರವಿಸಿ #ಆದರಿಸಿ

#ಮಾನಸಾ #ಎಪಿ

- ಮಾನಸಾ ಎಪಿ

24 Sep 2017, 11:50 pm

ನಿನಗ್ಯಾರು ಕೊಟ್ಟರೆಂದು

ಕೆಳಗೆ ಬೀಳದ ಹೃದಯ ಕೇಳುತ್ತಿದೆ ನನ್ನನ್ನು ನನ್ನ
ಮೊದಲ ಉಸಿರು ನಿನಗೆ ತಿಳಿದು ಶುರುವಾಗಿಲ್ಲ
ಕೊನೆಯ ಉಸಿರು ನಿರ್ಧರಿಸುವ ಅಧಿಕಾರ ನಿನಗ್ಯಾರು ಕೊಟ್ಟರು ಎಂದು............

- ಚುಕ್ಕಿ

24 Sep 2017, 11:27 pm

ಸ್ನೇಹವೋ ಇಲ್ಲ ಮೊಸವೋ

ಸ್ನೇಹವೋ ಮೊಸವೋ ತಿಳಿದಿಲ್ಲ ನನಗಿನ್ನೂ
ಸ್ನೇಹದ ಮರೆಯಲ್ಲಿ ಮಾಡಿದ ಮೋಸಕ್ಕೆ............

ಕೊರದೇನೆ ಕಾಣಿಕೆಯೊಂದು ಕೊಡು ದೇವರೇ ಕೊಂದು ನನ್ನ ಕಣ್ಣೀರನ್ನು ಇಂದು..............

ಬೇಡವಾಗಿದೆ ನನಗೆ ನೀ ಕೊಟ್ಟ ಕಣ್ಣೀರಿನ
ಜೀವನವೇ ನಿನ್ನಲ್ಲಿ ಶಕ್ತಿ ಇದ್ದರೆ ಹಿಂತೆಗೆದುಕೊ...........

ನಂಬಿಕೆಯೆಂಬ ಪದದ ಮೇಲೆ ನಂಬಿಕೆ ಕಳೆದೊಗುವ ಮುನ್ನ ನನ್ನೊಳಗೆ ಸೇರಿಸೋ ನನ್ನ ನಗುವಿನ ಪ್ರಪಂಚವನ್ನು.........

ಸ್ವಾರ್ಥ ನನಗೂ ನೀಡು ಈ ಸ್ವಾರ್ಥಪರರ ಮಧ್ಯದಲ್ಲಿ ಇನ್ನಾದರೂ ಬದುಕುತ್ತೇನೆ ನಾನೊಂದು ಸ್ವಾರ್ಥಿಯಾಗಿ..........

ಯಾರನ್ನು ನೆನಪಿಸಿಕೊಳ್ಳಲಿ ನನ್ನ ಸಂತೋಷ ಬಯಸುವ ವ್ಯಕ್ತಿಯೆಂದು ಅವರ ಸ್ವಾರ್ಥವಿಲ್ಲದೇ..............

ಯಾರನ್ನು ಕೇಳಲಿ ನನ್ನ ನಗುವಿನ ಬೆಲೆ ತಿಳಿಸಿ ನಿವಾದರೂ ನನ್ನ ಅಳುವಿಗೆ ಎಂದು.................

- ಚುಕ್ಕಿ

24 Sep 2017, 11:23 pm

ಕಣ್ಣೀರಿಗೊಂದು ಲೇಖನ

ಕಣ್ಣೀರಿಗೊಂದು ಲೇಖನ ಬರೆಯುವ ಆಸೆ ನನಗೆ
ಪ್ರತಿದಿನವು ಬರುವ ಕಂಬನಿಯ ಹನಿಗಳನ್ನು ಸೇರಿಸಿ....................

ನೂರಾರು ನೋವುಗಳ ಶಾಯಿಯಲ್ಲಿ ಮುಳುಗಿಸಿ ಕೊನೆಯಲ್ಲಿ ಒಂದೊಂದು ಅಕ್ಷರ ಜಿಗುಪ್ಸೆಯಿಂದ ಬರೆಯುವ ಆಸೆ ಚುಕ್ಕಿಗಳನು ಕೊಂಚ ಕೊರೆದು ಮೌನದಲ್ಲಿ ಮಾತಂತೆ.................

- ಚುಕ್ಕಿ

24 Sep 2017, 11:20 pm

ಕಾಲೇಜಿನ ದಿನಗಳು

ಮೊದಲ ಬಾರಿ ನಿನ್ನನ್ನೇ
ಕಂಡೆ ನಾನು ಕಾಲೇಜಿನಲ್ಲಿ
ಅಂದು ನಿನ್ನ ಹೆಸರೇ ಗೊತ್ತಿಲ್ಲ
ಇಂದು ನಿನ್ನನು ಮರೆಯಲಾಗುತ್ತಿಲ್ಲ.........

ಓದಿನಲ್ಲಿ ಜೊತೆಗಿದ್ದೆ ಊಟವನ್ನು ಹಂಚಿಕೊಂಡಿದ್ದೆ
ಮನದಲ್ಲಿನ ನೋವನ್ನು ಮಂಜಿನಂತೆ ನಿನ್ನ ನಗುವಲ್ಲಿ ಮರೆಸುತ್ತಿದ್ದೆ...........

ಆತ್ಮೀಯಳು ನೀನು ಗಳತನಕೆ ಹೊಸದಾದ
ಚಿಹ್ನೆ ನೀನು ಇಂದಿಗೂ ಎಂದಿಗೂ ನೀನೇ ನನ್ನ ಪ್ರೀತಿಯ ಗೆಳತಿ.........

ಎರಡು ವರ್ಷಗಳು ಈ ವಾತಾವರಣದಲ್ಲಿ ಕಳೆದ ಕ್ಷಣಗಳು ನನ್ನ ನೆನಪಿನ ಪುಸ್ತಗದಲ್ಲಿ ಸವಿಯಾದ ಸಾಲುಗಳು.............

ಈ ಕೊನೆಯ ಕಾಲೇಜಿನ ದಿನಗಳಲ್ಲಿ ಎಲ್ಲರೂ ಓದುತ್ತಿರುವರು ಒಂದು ಘಳಿಗೆಯು ವ್ಯರ್ಥ ಮಾಡದಂತೆ
ಆದರೆ ನಾನು ಮಾತ್ರ ಅಳುತ್ತಿರುವೆನು ನಿನ್ನಿಂದ ದೂರವಾಗಲಾರದೆ...........

- ಚುಕ್ಕಿ

24 Sep 2017, 11:12 pm