ನಾ ದೇಶ ಕಾಯೋ ಯೋಧ ಗೆಳತಿ
ನೀನು ಯಾಕೆ ಹಿಂಗೆ ನನ್ನ ತಡೆಯುತಿ
ನೀನೇನೆ ಎಂದೂ ನನ್ನ ಉಸಿರಿಗೊಡತಿ
ನಾನಿಂದು ಹೋಗದಿದ್ದರೆ ಎಷ್ಟೋ ಮುಗ್ಧ ಜೀವ ಮಣ್ಣಾಗುತೈತಿ
ನೀನಿರಲು ಸನಿಹ ಬರದಿರಬಹುದೇನೊ ನನಗೆ ವಿರಹ
ನಾನಿಂದು ಹೋಗದೆ ಅಳಿಸಿ ಹೋದರೆ ಜೀವಗಳ ಹಣೆಬರಹ
ನಾನಿಲ್ಲಿ ಕೊರಗಿ ಕರಗಿ ಮಣ್ಣ ಸೇರುವೆ ಸೋತವನ ತರಹ
ಆಗ ನೀ ನಗುತ ಬಾಳಲಾಗುವುದೆ ನನ್ನ ಜೊತೆ ಮಾಡಿ ಕಲಹ
ನಿನ್ನೊಲವ ಪ್ರೇಮದ ರಕ್ಷೆ ಇದ್ದರೆ ನನ್ನೀ ಜೀವಕೆ ಚಿನ್ನ
ಹೇಗೆ ಕರೆದೊಯ್ಯುವನೆ ಜವರಾಯ ನಿನ್ನಿಂದ ದೂರ ನನ್ನ
ನಾ ಬಂದು ಮತ್ತೊಮ್ಮೆ ನಿನ್ನ ಸೇರುವ ಮುನ್ನ
ಗೆದ್ದು ಬಾರೊ ಗೆಳೆಯ ನಿನಗಾಗೆ ಕಾದಿರುವೆನೆಂದು ಹಾರೈಸಿ ಕಳಿಸೆ ನನ್ನ
ನಾ ಬಂದೆ ಬರುತೀನಿ ಬಂದು ನಿನ್ನ ಸೇರುತೀನಿ
ಬರದಿದ್ದರೆ ಕೊರಗದಿರು ಕಣ್ಣೀರ ಜಾರಿಸದಿರು
ವೀರ ಮರಣ ನನ್ನವನದೆಂದು ಹೆಮ್ಮಯಲಿ ಬದುಕಿರು
ಗೆದ್ದು ಬರಲಿ ನನ್ನಿನಿಯ ಎಂದು ದೇವರ ಬೇಡುತಿರು ನೀ
ಏನಾದರು ಸಾಧಿಸಬೇಕೆಂಬುದು ಎಲ್ಲರ ಹಂಬೋಣ
ಏನು ಸಾಧಿಸಬೇಕೆಂದು ತಿಳಿಯದೇ ಹೈರಾಣ..!!!
ಭಿತ್ತಿದ ಬೀಜವ ಮೊಳಕೆಯೊಡೆಯಲು ಬಿಡದೇ
ಕಿತ್ತು ಕಿತ್ತು ಬೇರೆಡೆ ಭಿತ್ತುತ್ತ ಹೊದೆಡೆ ಫಸಲು ಬರುವುದೇ!!
ಇಟ್ಟ ಹೆಜ್ಜೆಯ ಬದಲಿಸುತ, ಮರಳಿ ಬದಲಿಸುತ ಸಾಗಿದೊಡೆ
ಹರಿ ಮೆಚ್ಚುವನೆನು..!!!!
ಇಟ್ಟ ಗುರಿಯು ತಪ್ಪಿದರೂ ಚಿಂತೆಯಿಲ್ಲ..
ಗುರಿ ಬದಲಿಸುತ ಚಿಂತೆಯ ಚಿತೆ ಏರಿ
ವೃಥಾ ಕಾಲಹರಣಕ್ಕಿಂತ...
ಪ್ರಯತ್ನನಿಸಿದೆನೆಂಬ ಆತ್ಮ ತೃಪ್ತಿ ಸಾಕು.
ಬದುಕು ಶುರುವಾದಾಗ ಸಾವಿನ ಭಯ
ಸಾವು ಸಮೀಪಿಸಿದಾಗ ಬದುಕಿನ ಆಸೆ
ಇದ್ದಾಗ ಉಣಬೇಕು, ಉಡಬೇಕು ಕಾಯಕ ಮಾಡಬೇಕು
ಇಲ್ಲದಾಗ ಶಿವನಿಚ್ಚೆ ಎಂದು ಮೂಟೆ ಕಟ್ಟುತಿರಬೇಕು
ಆರಂಭದ ಪಯಣ ಹೆತ್ತ ತಾಯಿಯ ಒಡಲಲ್ಲಿ
ಅಂತ್ಯದ ನಿಲುಗಡೆ ಹೊತ್ತ ಭೂ ತಾಯಿಯ ಮಡಿಲಲ್ಲಿ
ಎಲ್ಲರನ್ನು ಮೆಚ್ಚಿಸಲು ಹೊರಟ ನೀ ಮೆಚ್ಚಿಸಿದ್ದೇನು
ನಾನು ನನದೆಂದು ಬಡಿದಾಡಿ ಹೋರಾಡಿದವನಿಗೆ ಸಿಕಿದ್ದೇನು
ನಿನ್ನೆ ಮರೆಯುವರು ಮುಂದೆ ನಿನ್ನ ಪೀಳಿಗೆಯವರು
ಯಾರಿಗಾಗಿ ದುಡಿದೆ ನೀ ನಿದ್ದೆಗೆಟ್ಟು, ಕಷ್ಟಪಟ್ಟು
ಅಳಿಲು ಸೇವೆಯ ಮಾಡು ನೀ ನಿನ್ನವರಿಗೆ, ನೆರೆಹೊರೆಯವರಿಗೆ, ಕುಲಭಾಂಧವರಿಗೆ, ಸಮಾಜಸೇತುವೆಗೆ
ಉಳಿಯುವೆ ನೀನು
ವಿಶ್ವಮಾನವನಾಗಿ, ಮುಂದಿನ ಪೀಳಿಗೆಗಾಗಿ