Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಡುಗೆಮನೆ

 ................ಅಡುಗೆಮನೆ


ಅಂಬೆಗಾಲಿಕ್ಕುತಲಿ ಅಲೆದಾಡುತಲಿದ್ದಾಗ  ನಾ ಕಂಡದ್ದು ನೆನಪಿನಲಿದೆ ಅಂಬಲಿಯ ಕಾಯಿಸುತ ನೀನಿದ್ದೆ ಅಡುಗೆಮನೆಯಲಿ;


ಮೊದಲಬಾರಿಗೆ ಹೊಸಲುದಾಟಿದ  ಸಂಭ್ರಮಕೆ   ಅಪ್ಪಿ ಮುದ್ದಾಡಿಸಿ  ಹೋಳಿಗೆಯ ಮಾಡಿದ್ದೆ ಓಡಿಬಂದು, ನೀನಿದ್ದದ್ದು  ಅಡುಗೆಮನೆಯಲಿ;


ಆಟವಾಡಲು ಹೊರಹೋಗುತ್ತಿದ್ದವನಿಗೆ ಅನುಮತಿ ನೀಡಿದಾಗ ಆಪದೋಸೆ ಮಾಡುತ್ತಾ ನೀನಿದ್ದದ್ದು ಅಡುಗೆಮನೆಯಲಿ;


ಸ್ಲೇಟಿನಮೇಲೆ ಅಕ್ಷರಾಬ್ಯಾಸ ಮಾಡಿಸಿದ್ದೂ ಅನ್ನಬಸಿಯುತ್ತಾ ಅಡುಗೆಮನೆಯಲಿ;


ಪದ್ಯ ಹೇಳಿಕೊಟ್ಟದ್ದೂ ಪಲ್ಯ ಮಾಡುತ್ತಾ ಅಡುಗೆಮನೆಯಲಿ;


ನಯ, ನಾಜೂಕು ಕಲಿಸಿದ್ದೂ ನೀರುದೋಸೆ ಮಾಡುತ್ತಾ ಇದೇ  ಅಡುಗೆಮನೆಯಲಿ;


ರೀತಿ, ರಿವಾಜು  ಕಲುಸಿದ್ದೂ ರೊಟ್ಟಿ ತಟ್ಟುತ್ತಾ ಇದೇ ಅಡುಗೆಮನೆಯಲಿ;


ಏಟು ತಿಂದು ಗಾಯ ಮಾಡಿಕೊಂಡು ಬಂದಾಗ ಮಜ್ಜಿಗೆ ಹುಳಿಯನ್ನು ಅರ್ದಕ್ಕೇ  ಬಿಟ್ಟು ಮುಲಾಮು ಹಚ್ಚಿ ಮಸಾಜು ಮಾಡಿದ್ದು  ಇದೇ ಅಡುಗೆಮನೆಯಲಿ;


ಆಟದಲಿ ಸೋತು ಸುಣ್ಣವಾಗಿ ಅವಮಾನಿಸಿ ಸಣ್ಣವನೆನಿಸಿದಾಗ ಹುರಿಗಡಲೆ ತಿನ್ನಿಸಿ ಧೈರ್ಯವನು ತುಂಬಿ ಹುರಿದುಂಬಿಸಿದುದು ಇದೇ ಅಡುಗೆಮನೆಯಲಿ;


ನಯವಂಚಕರಿಂದ ನಷ್ಟವನನುಭವಿಸಿದಾಗ ತಲೆಸವರಿ ಸಾಂತ್ವನ ಹೇಳಿ ಸಾಗು, ಪೂರಿ ಮಾಡುತ್ತಲೇ ಸಮಾಧಾನ ಹೇಳಿದ್ದು ಇದೇ ಅಡುಗೆಮನೆಯಲಿ;


ನನಗೆ ಈ ಪ್ರಪಂಚವನ್ನೇ  ಪರಿಚಯಿಸಿದೆ ಇದೇ ಅಡುಗೆಮನೆಯಿಂದಲೆ;


ಸಮಾಜದ ದೃಷ್ಟಿಯಲಿ ನಾನೆಷ್ಟೇ ಎತ್ತರಕ್ಕೇರಿದ್ದರೂ  ನಿನ್ನ ಆಶೀರ್ವಾದ ನನಗೆ ಅಡುಗೆಮನೆಯಿಂದಲೆ;


ಅಕ್ಷರವ ತಿದ್ದಿಸಿ ಅದಿ ಗುರುವಾದೆ,
ಶಿಷ್ಟಾಚಾರವ ಕಲಿಸಿ ಆತ್ಮೀಯಳಾದೆ,
ಕಷ್ಟಗಳ ಕೇಳುತ್ತ ಕಣ್ಣೀರನೊರೆಸಿ ಸ್ನೇಹಿತಳಾದೆ ಇದೇ ಅಡುಗೆಮನೆಯಲಿ;


ನಾ ಹುಟ್ಟುವ ಮೊದಲೇ ನನ್ನನ್ನು ಪ್ರೀತಿಸುತ ನಿಜವಾದ ಪ್ರೇಯಸಿ ನೀನಾದೆ,
ಇಷ್ಟು ಪಾತ್ರಗಳನು ನಿರ್ವಹಿಸಿದ ಮಿನುಗು ತಾರೆಯು ನೀನಾದೆ ಅಡುಗೆಮನೆಯಲಿದ್ದುಕೊಂಡೇ:


ಈಗಲೂ ಈ ಕ್ಷಣವೂ ನಿನ್ನಿರುವು ನನ್ನನ್ನು ಕಾಡು(ಣು)ತ್ತಿದೆ ಈ ಅಡುಗೆಮನೆಯಲಿ.

ಡಾ!ಸಿ.ಮುರಳೀಧರ   ಆಗಷ್ಟ್, 2017

- ಡಾ!ಸಿ.ಮುರಳೀಧರ

27 Sep 2017, 10:12 pm

ಕನಸು....

ಅಂದು....
ಕನಸುಕಾಣುತ್ತಿದ್ದೆ ನಾನು
ಆ ಕನಸಿನಲ್ಲಿ
ನನ್ನೆಲ್ಲಾ ಮಾತುಗಳಿಗೆ
ಬೆಲೆಕೊಡುತ್ತಿದ್ದ
ಹೃದಯದರಸಿ ಅವಳು..

ಇಂದು...
ಅವಳ ಕನಸಿನಂತೆಯೇ
ನಡೆಯಬೇಕಿದೆ ನಾನು
ಅವಳು ಹೇಳಿದ ಹಾಗೆ
ಕೇಳುವ ಗುಲಾಮನಂತೆ
ನನ್ನ ಬದುಕು....

ಪ್ರಿಯಾಂಕ✍

- ಪ್ರಿಯಾಂಕ

27 Sep 2017, 06:56 pm

ಸಿಂಗಾರದ ಗೊಂಬೆ

ಸಿಂಗಾರಕೆ ಬಂಗಾರದ ಹೊಳಪುತಂದ ವನಿತೆಯವಳು ನನ್ನ ಪೊಗರಿನ ಹಂಗು
ಮುರಿದು ನಾಚಿಕೆಯ ಪಾಠ ಕಲಿಸಿದ ಮನೋಹರಿಯವಳು..........

ಅವಳ ಅಂದ ಬಣ್ಣಿಸಲು ನಿಂತ ಧೀಮಂತ ಲೇಖನಿ ತಿಳಿಯದೇನೆ ಮನಸೋತು ಕುಳಿತಿತ್ತು ಅವಳ ಒಂದು ನೋಟಕ್ಕೆ ಕರಗಿ ನನ್ನೆದೆಯ ನೆನಪಿನ ಗ್ರಂಥದಲ್ಲಿ............

ಯಾವ ಕುಂಚದಿ ನಿನ್ನ ಬಿಡಿಸಿದರು ನಾಚುತಿವೆ ಬಣ್ಣಗಳು ನಿನ್ನ ರೂಪವು ನಾವಾಗಲಾರೆವು ಎಂದು..............

ಗುಂಗುರಾದ ನಿನ್ನ ಮುಂಗುರುಳು ಮುದ್ದಿಸುತ್ತಿವೆ ಪ್ರತಿಕ್ಷಣ ಕೆನ್ನೆಗೆ ತಾವಿರುವವರೆಗೂ ಈ ಅದೃಷ್ಟ ಇತರರಿಗೆ ಸಿಗಬಾರದೆಂದು ಚೆಲುವೆ..............

ಆ ಕೋಮಲ ತುಟಿಯಮೇಲಿನ ಕಿರು ಮಚ್ಚೆ ನಿನ್ನ ಸೊಗಸಿಗೆ ದೃಷ್ಟಿತಗೆದು ದೇವರಿಟ್ಟ ನನ್ನ ಕಣ್ಣಿನ ನಗೆಯ ಚಿಹ್ನೆ ನಿನ್ನ ಕಂಡಕ್ಷಣ ನನ್ನಲ್ಲಿ..........

ಕಿನ್ನರಿ ನಿನ್ನ ಕಿರುಗಾಲಿನ ಗೆಜ್ಜೆ ಸದ್ದು ನನ್ನೆದೆಯ ಅಡಿಯಲ್ಲಿ ಉಸಿರಂತೆ ಬಚ್ಚಿಡುವೆ ಬೆಚ್ಚಗೆ ಬಚ್ಚಿಡಲೆಂದು.............

ಕೊಂಚ ನೀ ಉಟ್ಟ ಸೀರೆಯ ಸೆರಗಾಗುವ ಅವಕಾಶ ನೀಡುವೆಯಾ ನಿನ್ನಲ್ಲಿನ ಸುಗುಣಗಳ ಸಾಲವಾದರು ಪಡೆದುಕೊಳ್ಳುವೆ ನನ್ನ ಕವನದ ಪದಗಳಿಗೆ ನಿನ್ನ ಅದ್ವಿತೀಯ ರೂಪ ತುಂಬಲು...........

ಯಾವ ಸೊಗಸೀನ ಸೂಜಿಗಾತಿ ನೀನು ನನ್ನಲ್ಲಿ ಅಡಗಿರುವೆ ಮಧುರ ಸುವಾಸನೆಯಂತೆ.........

- ಚುಕ್ಕಿ

27 Sep 2017, 06:32 pm

ಏಕಾಂತ

ಏಕಾಂತದ ಆಳ ಅಗಲ
ದಿಗಂತದಷ್ಟು ವಿಸ್ತಾರ
ತಿಳುವುವವರಾರು ಅದರ ಆಕಾರ
ನಮ್ಮ ಮನಸುಗಳು ಆಗಾಗ
ಎದರು ಬಂದು ನಿಲ್ಲುತವೇ ಅಬ್ಬಾ
ನೋಡಲವೇಷ್ಟು ವಿಕಾರ
ಏಕಾಂತವ ಮೀರಿ ಒಂದೊಮ್ಮೆ
ಮಾಡಬೇಕು ಪ್ರೀತಿಯ ಸ್ವೀಕಾರ
ಪ್ರೀತಿ ಇದ್ದಿರಬಹುದು ನಿರಾಕಾರ
ಅದರದು ಬಹುಶಃ ಇರಲಾರದು ವಿಕಾರ
ಮಾಡುವೆಯ ನನ್ನ ಪ್ರೀತಿಯ ಅಂಗೀಕಾರ


~ ಹರ್ಷ ಹೆಚ್ ಎಲ್

- HarshaHL

27 Sep 2017, 09:25 am

ಹೊಸ ದಾರಿ

ಈ ರಾತ್ರಿ ಏಕೋ ಆಗುತ್ತಿದೆ ಮನದಲ್ಲಿ ಭೀತಿ
ಇದೆ ಮೊದಲ ಬಾರಿ ಈ ರೀತಿ
ಗಾಳಿಗೆ ತೂರಿ ಬದುಕಬೇಕೆಂದಿದ್ದೇನೆ
ಈ ಸಮಾಜದ ರೀತಿ ನೀತಿ
ನಿದ್ದೆ ಕಾಣದ ಕಣ್ಣುಗಳು
ತಿನ್ನಲು ಹೋದರೆ ಹುಳ ಹಿಡಿದ ಹಣ್ಣುಗಳು
ಯಾವುದೊಂದು ಸರಿಯಿರದ ಉರಿನವನು ನಾನು
ಕಿತ್ತಾಡುವರು ಜನ ಕಾಣದ ದೇವರುಗಳಿಗಾಗಿ
ಇದ್ದರೆ ಆ ದೇವರೇ ಕ್ಷಮಿಸಬೇಕು
ಯಾರದೋ ರಕ್ತ ದಾಹಕ್ಕೆ ಸಾಯುವ ಮುಗ್ದರ ನೋಡಿ,
ಹಿಂದೆ ಆಡುತ್ತಿದ್ದರು ಬಣ್ಣದ ಹೋಳಿ
ಇಂದು ಹರಿಸುತ್ತಿದ್ದಾರೆ ರಕ್ತದ ಓಕಲಿ
ಬಣ ಕಟ್ಟಿಕೊಂಡ ಜನ
ಹಣದ ಆಸೆಗೆ ಮರೆತರು ಹೋರಾಟ
ಇನ್ನು ಕೇಳುವವರಾರು ಶೋಷಿತರ ನರಳಾಟ
ನನ್ನ ರೆಪ್ಪೆಗಳ ಕಣ್ಣು ತಪ್ಪಿಸಿ ನಿದ್ದೆಯ ಕದ್ದೊಯಿದಿದ್ದಾರೆ
ಅವರ ನೀತಿ ರಿವಾಜುಗಳು ನನ್ನನ್ನು ಬಂದಿಯಾಗಿಸಿವೆ
ಆ ಸಂಕೋಲೆಯ ಕಿತ್ತೆಸೆದು ಬದುಕಲು ನಿರ್ಧರಿಸಿದ್ದೇನೆ
ಭೀತಿಯ ಬಲೆಯ ಬಿಡಿಸಿಕೊಂಡು
ಸಹಸ್ರಮಾನದಿಂದ ಅನುಭವಿಸುತ್ತಿರುವ ಅವಮಾನಗಳಿಗೆ ಪರಿಹಾರ ಕಂಡುಕೊಳ್ಳಲು
ಹೊರನಡೆಯುತ್ತಿದ್ದೇನೆ
ನೀವು ಬಯುವಿರಾದರೆ ನನ್ನನ್ನು ಹಿಂಬಾಲಿಸಬೇಡಿ
ಬನ್ನಿ ಜೊತೆಯಾಗಿ ಸಾಗೋಣ
ಹೊಸ ಊರೊಂದ ಕಟ್ಟೋಣ
ಹೊಸ ಕನಸೊಂದ ಹೆಣೆಯೋಣ...


~ ಹರ್ಷ ಹೆಚ್ ಎಲ್

- HarshaHL

27 Sep 2017, 08:34 am

ಬರಿಗನ್ನಡಿ

ಕಾಲೇಜ್ ದಿನಗಳಲ್ಲಿ ರೂಪದರ್ಶಿಯಾಗಿ ಮೆರೆದಿದ್ದೆ.......
ನೀನೆ ಅತೀ ಸುಂದರಿಯೇ ಏಂದು ಹೇಳಿತ್ತು......
ಬರೀಗನ್ನಡಿ
ಬೆಡಗು ಬಿನ್ನಾಣಗಳು ನಡು ಸೊಂಟವ ಕಂಡು.....
ಸ್ನೋ ಪೈಡರ್ ಲಿಪ್ ಸ್ಟಿಕ್ ಕಾಡಿಗೆ ಉಗುರು ಬಣ್ಣಗಳ ಕಂಡು....
ವಿಶ್ವಸುಂದರಿಯೇ ನೀನು ಎಂದು ಬಾವಿಸಿತ್ತು....
ಪ್ಯಾಶನ್ ಟಿ ವಿ ಗೆ ನನ್ನ ಪ್ರೋತ್ಸಾಯಿಸಿದ್ದು ಈ.....
ಬರೀಗನ್ನಡಿ
ಚೂಡಿದಾರ ವೇಲು ಕೆನಿಟಿಕ್ ವಾಂಡನೇರಿ....
ಟೈಪಿಂಗ್ ಗೆ ಹೋಗುತಿದ್ದ ನನ್ನನೇ ಐಶ್ವರ್ಯ ರೈ ಏಂದಿತ್ತು...
ಬರೀಗನ್ನಡಿ
ಅಹಾ ಏಂದರೂ ಸರಿಯೇ ದಿಷ್ಟಿಸಿ ನೋಡುತಿದ್ದ ಪಡ್ಡೆಹುಡುಗರು....
ಯಾರಿಗೂ ಎದರಲಿಲ್ಲ ನಾಚುತ್ತಿದ್ದೆ ನಾನು....
ನಾ ನಾಜೋಕ್ ಕುಮಾರಿ ಹೌದು ನಾಚುತ್ತಿದ್ದೆ
ಬರಿಗನ್ನಡಿ
ಇಂದು ನಾನು ಹಣ್ಣು ಹಣ್ಣು ಮುದುಕಿ ನನಗೆ ಇಯಾಳಿಸತಲಿದೆ ...
ನೀನಗೆ ಯಾಕೆ ಬೇಕು ಸಿಂಗಾರ ಬಂಗಾರ ಏಂದು...
ಬರಿಗನ್ನಡಿ

- madhusudhanagowda@gmail.com

27 Sep 2017, 07:37 am

*ನೆನಪುಗಳ ಜೊತೆಯಲ್ಲಿ*

ಮೌನ ತುಂಬಿದ ಕಂಗಳಿಂದ
ಕಾದಿರುವೆ ನಲ್ಲ ನಿನಗಾಗಿ...
ನಿನ್ನೊಲವಿನ ನುಡಿಗಾಗಿ
ಹೃದಯ ಬಯಸಿದೆ ಮಗುವಾಗಿ...
ನೆನಪಿನ ಪುಟಗಳ ನಡುವೆ
ಅವಿತು ಕುಳಿತಿರುವೆಯಲ್ಲ..
ನೆನಪುಗಳ ನೆನಪಿನ ಜೊತೆಯಲ್ಲಿ
ದಿನ ಕಳೆದಿರುವೆನು ನಾನಿಲ್ಲಿ..
ನೆನಪಾದರೆ ಬಂದುಬಿಡು ಒಮ್ಮೆ...
ನಿನ್ನ ನೆನಪಿನ ಕ್ಷಣಗಳನ್ನು
ಜೋಪಾನಮಾಡಿ
ಬಚ್ಚಿಟ್ಟಿರುವೆನು...
ನಿನ್ನ ನೆನಪಿನಂಗಳದಿಂದ
ನನ್ನ ನೆನಪುಗಳು
ಮರೆಯಾಗುವ ಮುನ್ನ
ಸೇರಬಾರದೇ ನನ್ನ...

ಪ್ರಿಯಾಂಕ✍

- ಪ್ರಿಯಾಂಕ

26 Sep 2017, 02:53 pm

ಕರಿ ನೆರಳು......

ಚಿಗುರುವ ಪೈರಿಗೆ........
ಬರಬಿಸಿಲು ಬಡಿದಿರಲು
ಮಳೆಯೇ ಕರಿ ನೆರಳಾಗಿ ಕಾಡಿದೆಯ
ಬೆಳೆವ ಪೈರಿಗೆ .........

ನಮ್ಮ ಪ್ರಾಚೀನ ಸಂಸ್ಕೃತಿಯು
ಅವನತಿಯೆಡೆಗೆ ತಲುಪಿರಲು
ಆಧುನಿಕತೆಯ ಕರಿನೆರಳೆ ತಳ್ಳಿದೆಯ
ಸಂಸ್ಕೃತಿಯ ಅವನತಿಗೆ.......

ಅಗಾಧ ಅರಣ್ಯ ಸಂಪತ್ತು.......
ಕ್ಷೀಣಿಸುತ್ತಿರಲು ಮಾನವನ
ಆಸೆ ದೂರಸೆಗಳ ಕರಿನೆರಳೆ ಕಾರಣವಾಗಿದೆಯ
ಅರಣ್ಯ ಸಂಪತ್ತಿನ ನಾಶಕ್ಕೆ...........

ಅನ್ನದಾತನ ಸಾವು...........
ನೋವುಗಳಿಗೆ ಪ್ರಕೃತಿಯ ವಿಕೋಪವೋ
ದುರುಳರ ಕಪಟಳವೇ ಕರಿನೆರಳಾಗಿ ಬಾದಿಸಿದೆಯ
ಅನ್ನ ನೀಡುವ ದೇವರಿಗೆ. .....

ವೈದರಿಗೆ ಸವಾಲೊಡ್ಡುವ.....
ಕಾಯಿಲೆಗಳು ಹುಟ್ಟಿಕೊಂಡಿರಲು
ಮನುಶ್ಯನ ಚಟಗಳ ಕರಿನೆರಳೆ ಕಂಟಕವಾಗಿದೆಯ
ವೈದ್ಯರ ಲೋಕಕ್ಕೆ..........

ನಮ್ಮ ಹೆಮ್ಮೆಯ ಕನ್ನಡಕ್ಕೆ.......
ಕನ್ನಡಿಗರಿಗೆ ಸಂತುಷ್ಟ ನ್ಯಾಯ ದೊರಕದಿರಲು
ಪರಭಾಷಿಗರ ಅನ್ಯಭಾಷೆಗಳ ದಬ್ಬಾಳಿಕೆಯ
ಕರಿನೆರಳೇ ಕ್ಯಾನ್ಸರ್ ನಂತಾಗಿದೆಯ...
ನಮ್ಮ ನೆಲದಲ್ಲಿ ನಮ್ಮವರಿಗೆ..............


:-------- ಮಂಜು

- ಮಂಜು

26 Sep 2017, 09:14 am

ತರ ತರ

ಎಷ್ಟೋ ದಿನಗಳ ನಂತರ
ಮತ್ತೆ ಬಂದಿರುವೆ
ಏತಕ್ಕಾಗಿ ಈ ಅಂತರ
ಸೇರಲು ಮನಸಲ್ಲಿ ಕಾತರ
ಆತರ ಇತರ ತರ ತರ
ಬಂದಿರುವೆ ಗೆಳತಿ
ಕೊಡಲು ನಿನ್ನೆಲ್ಲ ಪ್ರಶ್ನೆಗಳಿಗೆ ಉತ್ತರ
ಇನ್ನಾದರೂ ಬರುವೆಯ ಹತ್ತಿರ

~ ಹರ್ಷ ಹೆಚ್ ಎಲ್

- HarshaHL

26 Sep 2017, 09:10 am

ನೆಪಕೆ ಬಲಿಯಾದ ಬದುಕಿನ ಧ್ಯೇಯ!

ಬದುಕಿನ ಬಯಲಲಿ
ಬದುಕುವ ತವಕದಲಿ
ಗುರಿಯ ಹಿಂಬಾಲಿಸುತಲಿ
ಕಟ್ಟಿದೆನು,ಹೀಗೆ ಬಾಳಬೇಕೆಂಬ
ಕನಸೊಂದನು ನಾನಂದು!

ಸವಿಸಿದ ಬಾಳ ಬಟ್ಟೆಯ
ತಿರುವುಗಳದೆಷ್ಟೊ ಅರಿಯೆ
ಕಲ್ಪನೆಗಳಲ್ಲೆ ಕಳೆದೆನೆಷ್ಟೊ ಸಮಯ
ಮೂಕ ದೇವರ ಮುಂದೆ ಕೂತು ಮಾಡಿದೆ
ಅರ್ಥವಿಲ್ಲದ ವ್ಯರ್ಥವಚನಗಳ ನಾನಂದು!

ಬಯಸಿದಂತೆ ನಡೆಯುವುದೆಲ್ಲ
ಜಗವ ಬದಲಿಸುವ ಯುಕ್ತಿ ನನಗಿದೆಯಲ್ಲ
ಜಂಬದಿ ಭವಿಷ್ಯವ ಕಲ್ಪಿಸಿಕೊಂಡೆನಲ್ಲ
ಸಮಯ ಜಾರಿದಂತೆಲ್ಲ,ಕಲ್ಪನೆಗಳು ಜಾರಿ ನೆಪಹೊಡ್ಡಿ ಗುರಿಯಿಂದ ಜಾರುತಿಹೆನಿಂದು!

ಸಮಾಜ ಬದಲಿಸುವ ಛಲ ಅಂದು
ನವಸಮಾಜದ ಹರಿಕಾರಳ ಕನಸೊಂದು
ಚಿಗುರಿ-ಒತ್ತಡಗಳಿಗೆ ಮಣಿದು ನಶಿಸಿತಿಂದು
ಹೀಗೆ ಸಾಗಬೇಕೆಂಬ ನಿಯಮಗಳ ಮುರಿದು
ಹೇಗೋ ಬಾಳಿದರೆ ಸಾಕೆಂಬ ಸಂಕಲ್ಪ
ತೊಟ್ಟು ಸಾಗುತಿಹೆನಿಂದು!



ಶಾರಧ

- ಶಕುಂತಲಾ

26 Sep 2017, 02:33 am