Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

  ಬರ - ಪರಿಹಾರ

ಕರುನಾಡಿನ ರೈತರಿಗೆ ಕುಡಿಯಲು ನೀರಿಲ್ಲ,
ತಿನ್ನಲು ಅನ್ನವಿಲ್ಲ,
ರಾಸುಗಳಿಗೆ ಮೇವಿಲ್ಲ,
ರೆಟ್ಟೆಯಲಿ ಕಸುವಿಲ್ಲ,
ಮಾಡಲು ಉದ್ಯೋಗವಿಲ್ಲ,
ಗುಳೆ ಹೊರಟ ಜನರಿಗೆ ಸಾಂತ್ವನ ಹೇಳುವವರಿಲ್ಲ, ಕೇಳುವವರಿಲ್ಲ!


ಅಭಿವೃದ್ದಿಯ ಹೆಸರಿನಲಿ ಮರಗಳನು ಕಡಿದರು, ಗಣಿಗಾರಿಕೆಗಾಗಿ ವಸುಂಧರೆಯ ಒಡಲನ್ನು ಬಗೆದರು,
ಕೆರೆ ಕಟ್ಟೆಗಳನ್ನು ನಿವೇಶನಗಳನ್ನಾಗಿಸಿದ ಭೂ ಒತ್ತುವರಿದಾರರನ್ನು,
ಕಾಡುಗಳ್ಳರನ್ನು ಹಿಡಿಯುವವರಿಲ್ಲ, ಕೇಳುವವರಿಲ್ಲ!

ನೀರಿಗಿಲ್ಲ ತತ್ವಾರ, ಸಹಜ ಬಿಸಿಲು ಇದು ಬರವಲ್ಲ ಎಂದೊಬ್ಬ ಮಂತ್ರಿಯ ವ್ಯಾಖ್ಯಾನ,
ಬರವಲ್ಲವಿದು ಬರಿಯ ಬಿಸಿಲದಿಕವಷ್ಟೇ ಎಂದು ಮತ್ತೊಬ್ಬ ಬೃಹಸ್ಪತಿಯ ಸಾಂತ್ವನ, ಬರಪರಿವೀಕ್ಷಣೆಗೆ ಬರುವ ಮುಖಂಡರನ್ನು  ಸ್ವಾಗತಿಸಲು, ಇದ್ದ ಬದ್ದ ನೀರನ್ನೂ ರಸ್ತೆಗೆ ಚೆಲ್ಲುತ್ತಿರುವವರನ್ನು ತಡೆಯುವವರಿಲ್ಲ  ಕೇಳುವವರಿಲ್ಲ!

ಅನುದಾನ ಬಿಡುಗಡೆಯಲ್ಲಿ ಕೇಂದ್ರದ ಪಕ್ಷಪಾತವೆಂದು ಆಡಳಿತ ಪಕ್ಷದವರ ಆರೋಪ,
ಕೊಟ್ಟ ಹಣ ಸರಿಯಾಗಿ ವಿನಿಯೋಗಿಸಲಿಲ್ಲವೆಂದು ವಿರೋಧ ಪಕ್ಷದವರ ಪ್ರತ್ಯಾರೋಪ,
ಇದರ ಮದ್ಯೆ, ತಮ್ಮ ಹೊಗಳು ಭಟ್ಟರು, ವಂದಿಮಾಗದರಿಗೆ ಕೈ ತುಂಬಾ, ಹೊಟ್ಟೆ ತುಂಬಾ ಅನುದಾನದ ಹಣ ಹಂಚಿಕೊಳ್ಳುತ್ತಿರುವುದನ್ನು ತಡೆಯುವವರಿಲ್ಲ,
ಕೇಳುವವರಿಲ್ಲ!

ಹುಚ್ಚುಮುಂಡೆ ಮಧುವೆಯಲ್ಲಿ ಉಂಡವನೇ ಜಾಣ, ಬರಪರಿಹಾರದ ನೆಪದಲ್ಲಿ ಬಾಚಿಕೊಂಡವನೇ ಜಾಣ,
ಜನಸಾಮಾನ್ಯರಿಗೆ ಕುಡಿಯಲು ನೀರಿಲ್ಲ, ರಾಸುಗಳಿಗೆ ತಿನ್ನಲು ಮೇವಿಲ್ಲ, ಗುಳೆಹೊರಟ ಜನರನ್ನು ತಡೆಯುವವರಿಲ್ಲ,
ಸಾಂತ್ವನ ಹೇಳುವವರಿಲ್ಲ!

ಡಾ!ಸಿ.ಮುರಳೀಧರ. ಏಪ್ರಿಲ್, 2016

- ಡಾ!ಸಿ.ಮುರಳೀಧರ

27 Sep 2017, 10:43 pm

ಹೊಸ ವರುಷ 2017

ನೃತ್ಯ ನಾಟ್ಯ ಡಿಸ್ಕೋಗಳಿಗೆ ಹೆಜ್ಜೆಹಾಕುವುದಷ್ಟಕ್ಕೆ ಸೀಮಿತವಾಗಿ ಹೋಗದಿರಲಿ ಹೊಸವರುಷ ! ಸಂಗಾತಿ ಸ್ನೇಹಿತರು, ನೆರೆಹೊರೆಯವರ ಮನವನು ಅರ್ಥೈಸಿಕೊಂಡು ಅವರೊಂದಿಗೆ ಹೆಜ್ಜೆಹಾಕುವಂತಾಗಲಿ ಈ ಹೊಸವರುಷ !! 1 !!

ತುಂಡು ಮಾಂಸ ಬಾಡೂಟ ಕುರುಕಲು ಸವಿಯಲಷ್ಟಕ್ಕೇ ಸೀಮಿತವಾಗಿ ಹೋಗದಿರಲಿ ಹೊಸವರುಷ ! ಪರರ ಕಷ್ಟ ನಷ್ಟಗಳಿಗೆ ಸ್ಪಂದಿಸುವ, ನಮ್ಮ ನೋವುಗಳನ್ನೂ ನಗು ನಗುತ ಸವಿಯುವಂತಾಗಲಿ ಈ ಹೊಸವರುಷ !! 2 !!

ಗಾಂಜಾ ಬೀಡಿ, ಗುಂಗುರು ಉಂಗುರಗಳ ಧೂಮ್ರಪಾನಗಳಿಗೆ ದಾಸನಾಗಿ ಹೋಗುವುದಷ್ಟಕ್ಕೇ ಸೀಮಿತವಾಗಿ ಹೋಗದಿರಲಿ ಹೊಸವರುಷ ! ಇಷ್ಟು ಕೊಟ್ಟ ದೇವರಿಗೆ ಧನ್ಯವಾದವನೇಳಿ ಮಧ ಮತ್ಸರ, ರಾಗ ದ್ವೇಷ ವ್ಯಸನಗಳಿಂದ ಹೊರಬರಲು ಸಂಕಲ್ಪ ಮಾಡಲನುಕೂಲವಾಗಲಿ ಈ ಹೊಸವರುಷ !! 3 !!

ಮಧು ಮಧ್ಯ ಮಧಿರೆಗಳ ಮತ್ತಿನಲಿ ಬರಿ ತೂರಾಡುವುದಕ್ಕೇ ಸೀಮಿತವಾಗಿ ಹೋಗದಿರಲಿ ಹೊಸವರುಷ ! ಮತ್ತು ನೆತ್ತಿಗೇರಿ ಮತ್ಯಾರಿಗೋ ನೋವುಂಟು ಮಾಡದೆ ಮುತ್ತಿನಂತಹ ಮಾತುಗಳಿಂದ ಎಲ್ಲರ ಮನವನು ಗೆಲ್ಲಲು ಮುಡಿಪಾಗಲಿ ಈ ಹೊಸ ವರುಷ !! 4 !!

ವಾಸ್ತು ಪೂಜೆ ಪುನಸ್ಕಾರಗಳನು ಮಾಡಿ, ಲಕ್ಷ ಕೋಟಿ ಆಸ್ತಿ ಕೋರಿ, ಅವನಿಗಷ್ಟು ಪಾಲು ಕೊಟ್ಟು ಇನ್ನಷ್ಟು ಲೋಭಿಗಳಾಗಲು ಸೀಮಿತವಾಗಿ ಹೋಗದಿರಲಿ ಹೊಸವರುಷ ! ಬಾಳಿಗೊಂದು ಅರ್ಥ, ಬದುಕಿಗೊಂದು ಗುರಿಯನಿತ್ತು 'ನಗದು ರಹಿತ ವಹಿವಾಟಿ'ನ ನಡವಳಿಕೆಯಂತೆ ನಡೆಯುವಂತಾಗಲಿ ಈ ಹೊಸವರುಷ !!5 !!

ಡಾ! ಸಿ. ಮುರಳೀಧರ 31 / 12 /2016

- ಡಾ!ಸಿ.ಮುರಳೀಧರ

27 Sep 2017, 10:39 pm

ಮಧುಪಾನ

ಮಧುರ  ಮಧುರವೀ ಮಧುವಿನ ಪಾನ
ಮನವನು ತಣಿಸುವ ಮಧುಪಾನ !!

ಬಣ್ಣ-ಬುದ್ದಿಯ ವೃದ್ದಿ, ಸ್ವರ- ಆರೋಗ್ಯದ ಸಿದ್ದಿ
ಸ್ರೋತೋಮಾರ್ಗಗಳ ಶುದ್ದಿ, ಸಮಾಜದಲಿ ಗೌರವವೂ ವೃದ್ದಿ,
ಕೃಶ - ಸ್ಥೂಲರಿಗೂ ಹಿತ, ಬಡವ-ಬಲ್ಲಿದರಿಗೂ ಹಿತ, ಕನಿಷ್ಟ ಕಾಸಿನಲಿ ಸುಖ ಅಪರಿಮಿತ  
ಬಡವನ ಕೈಗೂ ಎಟಕುವ
ಅಮೃತ ಈ ಮಧುಪಾನ!!1!!

ಅತಿ ನಿದ್ರೆಯವನಿಗೂ ಇದು ಮದ್ದು
ನಿದ್ರಾಹೀನನಿಗೂ ಇದೆ ಇದರಲ್ಲೇ ಮದ್ದು
ಚಿಂತಾಕ್ರಾಂತನಿಗೆ  ಸಾಂತ್ವನದ ಮದ್ದು
ಚಿಂತೆ ಇಲ್ಲದವನಿಗೋ ಇದು
ಸಮಯ ಕಳೆವ ಮದ್ದು
ಧಾತುಗಳವೃದ್ದಿ,
ಸರ್ವರೋಗಹರ
ಭೂಲೋಕದ ಸಂಜೀವಿನಿ ಈ ಮಧುಪಾನ!!2!!

ವಾತ ಶ್ಲೇಷ್ಮಹರ,
ರೂಕ್ಷ-ಸೂಕ್ಶ್ಮ-ಸರ
ಒಗರು ಮಿಶ್ರಿತರಸ ಮಧುರ-ಕಹಿ-ಖಾರ
ವಿಪಾಕ ಹುಳಿಯಾದರೂ,
ಇದು ಚಿತ್ರ-ವಿಚಿತ್ರ ರುಚಿಯ ಉಷ್ಣವೀರ್ಯ
ಮನಸಿಗೆ ತುಷ್ಠಿಯು, ದೇಹಕೆ ಪುಷ್ಟಿಯು
ಇಳೆಯಲೆ ಸ್ವರ್ಗವ ಸೃಷ್ಠಿಸಬಲ್ಲ  
ರುಚಿಕರ ಪೇಯ ಈ ಮಧುಪಾನ!!3!!

ಸುರಲೋಕದ ಅಪ್ಸರೆಯರನು
ಇಳೆಯಲೆ ದಕ್ಕಿಸಬಲ್ಲುದೀ ಮಧುಪಾನ
ಸುರ-ಅಸುರರನು ಧರೆಯಲೇ
ಸೃಷ್ಥಿಸಬಲ್ಲುದೀ  ಸುರಪಾನ  
ಹಿತವೆಂದು ಮಿತಿ ಮೀರಿದೊಡೆ
ಅದೋಗತಿಗೆ ಇದುವೇ ಸೋಪಾನ
ಇತಿ ಮಿತಿಯನರಿತವನಿಗೆ ಇದುವೇ
ವಸುದೆಯೊಳಗಿನ ಸುಧಾಪಾನ!!4!!

ಡಾ!ಸಿ.ಮುರಳೀಧರ. ಮಾರ್ಚ್ 2016

- ಡಾ!ಸಿ.ಮುರಳೀಧರ

27 Sep 2017, 10:37 pm

ನೀನಿಲ್ಲದೇ ನನಗೇನಿದೆ

ಬಸ್ಸಿನಲಿ ತಿರುಗಾಡಲು ಚಿಲ್ಲರೆಕಾಸೂ ಇರಲಿಲ್ಲ ನೀನಿದ್ದೆ ಅಂದು, ವಿಮಾನಯಾನದ ಸೌಕರ್ಯವಿರುವಾಗ ತಾನ ಯಾನದಲಿ ಜೊತೆಯಾಗೆ ನೀನಿಲ್ಲ ಇಂದು !1!

ಸುತ್ತಾಡಲು ನನ್ನ ಬಳಿ ಸೈಕಲ್ಲೂ ಇರಲಿಲ್ಲ ನೀನಿದ್ದೆ ಅಂದು, ಐಷಾರಾಮಿ ಕಾರುಗಳ ಒಡೆಯ ನಾನಾದಾಗ ಜೊತೆಯಾಗಿ  ಸುತ್ತಾಡಲು ನೀನಿಲ್ಲ ಇಂದು !2!

ದೋಸೆ, ಕಾಫಿಗೂ ದುಡ್ಡಿರಲಿಲ್ಲ ಜೇಬಿನಲಿ ನೀನಿದ್ದೆ ಅಂದು, ಭೂರಿ ಭೋಜನಕೂಟಗಳ ಆಹ್ವಾನಗಳನು ಜೊತೆಯಲ್ಲಿ ಆಸ್ವಾದಿಸಲು ನೀನಿಲ್ಲ ಇಂದು !3!

ವಾಸದ ಮನೆಗೆ ಬಾಡಿಗೆ ಕಟ್ಟಲು ಹಣವಿಲ್ಲದಿದ್ದರೂ ನೀನಿದ್ದೆ ಅಂದು, ಹಲವಾರು ಬಂಗಲೆಗಳ ಒಡೆಯನಾನಾಗಿರುವೆ, ವಾಸಿಸಲು ಜೊತೆಯಲ್ಲಿ ನೀನಿಲ್ಲ ಇಂದು !4!

ಹಳೆಯ ಅಂಗಿ-ಮೆಟ್ಟನ್ನು ಬದಲಿಸಲೂ ಶಕ್ತನಿರಲಿಲ್ಲ ನೀನಿದ್ದೆ ಅಂದು, ಕಪಾಟಿನಲಿ ತುಂಬಿರುವ ವಿದೇಶೀ ಸೂಟು, ಬೂಟುಗಳ, ನೋಟಿನ ಕಂತೆಗಳ ನೋಡಿ ಆನಂದಿಸಲು ನೀನಿಲ್ಲ ಇಂದು !5!

ಇವೆಲ್ಲಾ ಕೊರತೆಗಳೆಂದು ನನಗೆ ಅನ್ನಿಸಿರಲೇ ಇಲ್ಲ ನೀನಿದ್ದ ಅಂದು, ಸುಖದ ಸುಪ್ಪತ್ತಿಗೆಯಲ್ಲಿರುವ ನನಗೆ ಈಗ ಇರುವುದೊಂದೇ ಕೊರತೆ. ನನ್ನೊಂದಿಗೆ ನೀನಿಲ್ಲವಲ್ಲಾ ಎಂದು !6!

ಡಾ!ಸಿ.ಮುರಳೀಧರ ಮೇ, 2016.   

- ಡಾ!ಸಿ.ಮುರಳೀಧರ

27 Sep 2017, 10:31 pm

ನೀನಿಲ್ಲದೇ ನನಗೇನಿದೆ

ಬಸ್ಸಿನಲಿ ತಿರುಗಾಡಲು ಚಿಲ್ಲರೆಕಾಸೂ ಇರಲಿಲ್ಲ ನೀನಿದ್ದೆ ಅಂದು, ವಿಮಾನಯಾನದ ಸೌಕರ್ಯವಿರುವಾಗ ತಾನ ಯಾನದಲಿ ಜೊತೆಯಾಗೆ ನೀನಿಲ್ಲ ಇಂದು !1!

ಸುತ್ತಾಡಲು ನನ್ನ ಬಳಿ ಸೈಕಲ್ಲೂ ಇರಲಿಲ್ಲ ನೀನಿದ್ದೆ ಅಂದು, ಐಷಾರಾಮಿ ಕಾರುಗಳ ಒಡೆಯ ನಾನಾದಾಗ ಜೊತೆಯಾಗಿ  ಸುತ್ತಾಡಲು ನೀನಿಲ್ಲ ಇಂದು !2!

ದೋಸೆ, ಕಾಫಿಗೂ ದುಡ್ಡಿರಲಿಲ್ಲ ಜೇಬಿನಲಿ ನೀನಿದ್ದೆ ಅಂದು, ಭೂರಿ ಭೋಜನಕೂಟಗಳ ಆಹ್ವಾನಗಳನು ಜೊತೆಯಲ್ಲಿ ಆಸ್ವಾದಿಸಲು ನೀನಿಲ್ಲ ಇಂದು !3!

ವಾಸದ ಮನೆಗೆ ಬಾಡಿಗೆ ಕಟ್ಟಲು ಹಣವಿಲ್ಲದಿದ್ದರೂ ನೀನಿದ್ದೆ ಅಂದು, ಹಲವಾರು ಬಂಗಲೆಗಳ ಒಡೆಯನಾನಾಗಿರುವೆ, ವಾಸಿಸಲು ಜೊತೆಯಲ್ಲಿ ನೀನಿಲ್ಲ ಇಂದು !4!

ಹಳೆಯ ಅಂಗಿ-ಮೆಟ್ಟನ್ನು ಬದಲಿಸಲೂ ಶಕ್ತನಿರಲಿಲ್ಲ ನೀನಿದ್ದೆ ಅಂದು, ಕಪಾಟಿನಲಿ ತುಂಬಿರುವ ವಿದೇಶೀ ಸೂಟು, ಬೂಟುಗಳ, ನೋಟಿನ ಕಂತೆಗಳ ನೋಡಿ ಆನಂದಿಸಲು ನೀನಿಲ್ಲ ಇಂದು !5!

ಇವೆಲ್ಲಾ ಕೊರತೆಗಳೆಂದು ನನಗೆ ಅನ್ನಿಸಿರಲೇ ಇಲ್ಲ ನೀನಿದ್ದ ಅಂದು, ಸುಖದ ಸುಪ್ಪತ್ತಿಗೆಯಲ್ಲಿರುವ ನನಗೆ ಈಗ ಇರುವುದೊಂದೇ ಕೊರತೆ. ನನ್ನೊಂದಿಗೆ ನೀನಿಲ್ಲವಲ್ಲಾ ಎಂದು !6!

ಡಾ!ಸಿ.ಮುರಳೀಧರ ಮೇ, 2016.   

- ಡಾ!ಸಿ.ಮುರಳೀಧರ

27 Sep 2017, 10:29 pm

ಕಹಿ(ರಿ)ಗುಳಿಗೆ

ಕಹಿ(ರಿ)ಗುಳಿಗೆ ಹೃದಯವಂತರು ಸ್ಪುರದ್ರೂಪಿಗಳೇ ಆಗಿರಬೇಕೆಂದೇನಿಲ್ಲ
ಕಪ್ಪಾಗಿರುವ ಮಾತ್ರಕ್ಕೇ ಕೆಟ್ಟವರಾಗಿರಬೇಕಿಲ್ಲ ಬೆಳ್ಳಗಿರುವುದೆಲ್ಲ ಹಾಲೇನಲ್ಲ
ಸಿಹಿಯಿದ್ದ ಮಾತ್ರಕ್ಕೇ ಸಕ್ಕರೆಯಂಶವಿರಬೇಕಿಲ್ಲ ವಿದೇಶದ ಮೇಕಡೋನಲ್ಡ್, ಕೆಯಫ್ ಸಿ ಶ್ರೇಷ್ಟವೇನಲ್ಲ
ಕೋಕ, ಪೆಪ್ಸಿಯ ದುಷ್ಪರಿಣಾಮ ಕಡಿಮೆಯೇನಲ್ಲ
ಮಾಂಸಾಹಾರಿಗಳೆಲ್ಲ ಮತಿಹೀನರಲ್ಲ
ಮಧ್ಯ ಸೇವಿಸದವರ ಮಾತೂ ಹದ್ದುಬಸ್ತಿನಲ್ಲಿ ಇರಬೇಕೆಂದೇನೂ ಇಲ್ಲ
ಹಿಮಾಲಯದಲ್ಲೇ ಎಲ್ಲವೂ ಸಿಗಬೇಕಾಗಿಲ್ಲ ಹಿತ್ತಲಗಿಡದಲ್ಲೂ ಮದ್ದಿನಂಶವಿಲ್ಲದಿಲ್ಲ
ನವೀನ ಪದ್ಧತಿಗಳೂ ಪೂರ್ತಿ ಅಮೃತವೇನಲ್ಲ
ಸ್ವದೇಶದ ಕಹಿ(ರಿ)ಗುಳಿಗೆ ಕೀಳೇನಲ್ಲ.

ಡಾ!ಸಿ.ಮುರಳೀಧರ ಮಾರ್ಚ್,2017

- ಡಾ!ಸಿ.ಮುರಳೀಧರ

27 Sep 2017, 10:26 pm

ಕುಳಿತರೆ

ಕುಳಿತರೆ, ಆಸನವು ಸದ್ದುಮಾಡದಂತಿರಬೇಕು; ಕುಳಿತರೆ,  ಅಸನವೂ ಅಲುಗಾಡದಂತಿರಬೇಕು; ಕುಳಿತರೆ, ಆಸನದ ಮೇಲ್ ಹೊದಿಕೆಯೂ ಸುಕ್ಕಾಗದಂತಿರಬೇಕು; ಕುಳಿತರೆ, ಕುಳಿತವನ ಆಸನದಲ್ಲಿರುವ ಅರ್ಶಸ್ಸಿಗೂ ಅರಿವಾಗದಂತಿರಬೇಕು; ಕುಳ್ಳಿರೆಂದು ಹೇಳಿದೊಡನೆಯೆ ಆಸನವನಲ್ಲಾಡಿಸುತ, , ಬಡಬಡಿಸಿ, ಸದ್ದುಮಾಡಿ, ಮೇಲ್ ಹೊದಿಕೆಯೂ ಸುಕ್ಕಾಗುವಂತೆ ಆಸೀನನಾದವನ ಮತ್ತೊಮ್ಮೆ ಆಹ್ವಾನಿಸಿ ಆದರಿಸುವುದೆಂತಯ್ಯಾ?

ಡಾ!ಸಿ.ಮುರಳೀಧರ 03/03/2017

- ಡಾ!ಸಿ.ಮುರಳೀಧರ

27 Sep 2017, 10:21 pm

ಗುಲಾಬಿ ಕನ್ಯೆ

ಗುಲಾಬಿ ಕನ್ಯೆ

ಹೆಣ್ಣು ಗಂಡೆಂಬ ತಾರತಮ್ಯವಿಲ್ಲದೆ ಕುತೂಹಲದಿಂದ ಕಾತರಿಸಿ ಕಾಯುತ್ತಿರುವ ಬಡವ ಬಲ್ಲಿದ ಬಾಲ ಬಲಾಡ್ಯ ವಯೋವೃದ್ದರೆಲ್ಲರದು ವೇದಿಕೆಯೆಡೆಗೇ ಗಮನ!


ಗುಲಾಬಿ ನೇರಳೆಯ ನಿರಿಗೆಯುಟ್ಟ  ನವತರುಣಿ ಮಂದಗಮನೆಯಾಗಿ  ಎರಡು ಸಾವಿರದ ಕಿರೀಟವ ತೊಟ್ಟು ನಗದಿನ ಲೋಕಕೆ ಆಗಮನ!


ಅಲ್ಲೋಲಕಲ್ಲೋಲ ಗೊಂಡ ಸಮಾಜದ ಮೂಕಪ್ರೇಕ್ಷಕರ ಮುಂದೆ 'ನಗದುರಹಿತ ವಹಿವಾಟಿ'ನ ಸಂದೇಶದೊಂದಿಗೆ ಆಕೆಯ ನರ್ತನ !


ರಾಜಕಾರಣಿ ಕಾಳಧನಿಕರ ಕನಸಿನ ಕನ್ಯೆಯಾಗಿದ್ದ  ಐನೂರು, ಸಾವಿರ  ಕಿರೀಟದಾರಿಗಳು ಗುಲಾಬಿಯ ರಂಗಪ್ರವೇಶದಿಂದ ಕಂಗೆಟ್ಟು ಏಕಾಏಕಿ ನೇಪಥ್ಯಕ್ಕೆ ನಿರ್ಗಮನ!


ಲಲ್ಲೂ, ದೀಧಿ, ಕೇಜ್ರಿ, ಮಾಯಾ, ಎಡಚ, ಕಾಂಗಿ, ಮುಲಾಯಮೆಲ್ಲರೂ ಮೌನ ಈ ದೇವದಾಸಿಯರೊಂದಿಗೆ ತಳಕುಹಾಕಿಕೊಂಡಿದ್ದವರೆಲ್ಲರಿಗೂ ಈಗ ಉಳಿದಿರುವುದೊಂದೇ ದಾರಿ- ಸಹಗಮನ!!


ಡಾ!ಸಿ. ಮುರಳೀಧರ

ನವೆಂಬರ, 2016

- ಡಾ!ಸಿ.ಮುರಳೀಧರ

27 Sep 2017, 10:19 pm

ಬೇಡವೆನಗೆ ಈ ನಿಖಾಬು-ಬುರಕಾ

ಬೇಡವೆನಗೆ ಈ ನಿಖಾಬು-ಬುರಕಾ

ಬೇಡವೆನಗೆ ಈ ನಿಖಾಬು-ಬುರಕಾ, ನಾನು ವಿದ್ಯಾವಂತಳಾಗುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ನಾನು ಸ್ವಾವಲಂಬಿಯಾಗುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ,
ನನ್ನ ಸಂಗೀತ ಸುಧೆಯನ್ನು  ನೀ ಸಾರ್ವಜನಿಕವಾಗಿ ಆಸ್ವಾದಿಸುವ ತನಕ; ಬೇಡವೆನಗೆ ಈ ನಿಖಾಬು-ಬುರಕಾ, ನನ್ನ ಭವಿಷ್ಯವನ್ನು ನಾನೇ ಬರೆದುಕೊಳ್ಳಲು ಶಕ್ತಳಾಗುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ,
ನನ್ನ ಪ್ರತಿಭೆಯನ್ನು ನೀ ಗೌರವಿಸುವ ತನಕ; ಬೇಡವೆನಗೆ ಈ ನಿಖಾಬು-ಬುರಕಾ,
ನನ್ನ ಏಳಿಗೆಯನ್ನು ನೀವು ಸಹಿಸಿಕೊಳ್ಳುವ ತನಕ; ಬೇಡವೆನಗೆ ಈ ನಿಖಾಬು-ಬುರಕಾ,
ನನ್ನ ಚಿಕ್ಕ ಪುಟ್ಟ ಬೇಡಿಕೆಗಳಿಗೂ ಪಾಲಕರೆದುರು ಅಂಗಲಾಚುವ ಕೂಸಾಗಿರುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ,
ಒಡಹುಟ್ಟಿದ ಸಹೋದರರಿಗಿಂತ ನನ್ನನ್ನು ಕೀಳಾಗಿಕಾಣುವ ತಂದೆ ತಾಯಿಯರ ಮನಃ ಪರಿವರ್ತನೆಯಾಗುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಪುರುಷಪ್ರಧಾನ ಸಮಾಜದ ದಬ್ಬಾಳಿಕೆಯಿಂದ ನಾನು ಹೊರಬರುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಸಾಮೂಹಿಕ ಪ್ರಾರ್ಥನೆಗಳಿಗೆ ನನ್ನನ್ನು ನಿಷೇದಿಸುವ ಮುಲ್ಲಾಗಳಿರುವ  ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಬಾಲ್ಯ ವಿವಾಹ ಮಾಡುವ ಮತ್ತು ಮುದುಕರಿಗೆ ಕಟ್ಟಿ ಸಾಗಹಾಕುವ ಅಪ್ಪಂದಿರಿರುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಸ್ತ್ರೀ ಭ್ರೂಣ ಹತ್ಯೆಗೆ ಒಪ್ಪಿಗೆಕೊಡುವ ಸ್ತ್ರೀ ನನ್ನಮ್ಮನಾಗಿರುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಪರಪುರುಷರೊಂದಿಗೆ ಸಲಿಗೆಯಿಂದಿರುವ ಹೆಂಗಸರೆಲ್ಲರನ್ನೂ ವೇಷ್ಯೆಯೆಂದು ಅನುಮಾನಿಸುವ ತಮ್ಮಂದಿರಿರುವ ತನಕ; ಬೇಡವೆನಗೆ ಈ ನಿಖಾಬು-ಬುರಕಾ,
ಕಂಡ ಕಂಡ ಹೆಂಗಸರನ್ನು ಕದ್ದು ನೋಡುತ್ತಾ ನನ್ನನ್ನು ಪರದೆಯಲ್ಲಿರಿಸುವ ಅಣ್ಣಂದಿರಿರುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಬಹು ಪತ್ನಿತ್ವದ ಕಾನೂನು ಬಂದ್ ಆಗುವ ತನಕ; ಬೇಡವೆನಗೆ ಈ ನಿಖಾಬು-ಬುರಕಾ, ತ್ರಿವಳಿ ತಲಾಖ್ ಪದ್ಧತಿ ನಿಷೇದಿಸುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಯನ್ನು ಹುಟ್ಟುಹಾಕುವ ಧರ್ಮಾಂಧರಿರುವ ತನಕ; ಬೇಡವೆನಗೆ ಈ ನಿಖಾಬು-ಬುರಕಾ,
ನನ್ನ ಕಲೆಯನ್ನು ಪೋಷಿಸಿ, ಹುರಿದುಂಬಿಸಿ  ನನ್ನನ್ನು ಪ್ರೋತ್ಸಾಹಿಸುವ ಸಂಗಾತಿ ಸಿಗುವ ತನಕ.

ಡಾ!ಸಿ.ಮುರಳೀಧರ ಮಾರ್ಚ್, 2017 ಏರ್ಕಾಡ್

- ಡಾ!ಸಿ.ಮುರಳೀಧರ

27 Sep 2017, 10:18 pm

ಮಂಚೂರಿನ ಗೋಬಿ

ಮಂಚೂರಿನ ಗೋಬಿ

ಘಮ ಘಮ ಕಂಪಿನ ಗುಲಾಬಿ ಕೆಂಪಿನ

ಬಾಯಿ ಚಪ್ಪರಿಸುವಂತಹ ರುಚಿಯುಳ್ಳ

ಷಡ್ರಸ ಬರಿತ ಗೋಬಿ
ಈ ಮಂಚೂರಿನ ಗೋಬಿ ! 1 !

ಸೋಯ-ಟೊಮ್ಯಾಟೊ-ಮೆಣಸಿನಕಾಯಿಯ ಸಾಸಿನಲಿ ಸಕ್ಕರೆ,  ವಿನೆಗರವನೂ ಸುರಿದು

ಚೆನ್ನಾಗಿ ಕರಿದ ಗುಲಾಬಿ ಕೆಂಪಿನ ಗೋಬಿ
ಈ ಮಂಚೂರಿನ ಗೋಬಿ ! 2 !

ಶುಂಠಿ, ಸಣಮೆಣಸಿನಕಾಯಿ

ಬೆಳ್ಳುಳ್ಳಿ, ದೊಣಮೆಣಸಿನಕಾಯಿ

ಸೇರಿಸಿ ಕರಿದ ಘಮ ಘಮ ಘಾಟಿನ ಗೋಬಿ
ಈ ಮಂಚೂರಿನ ಗೋಬಿ ! 3 !

ಅಕ್ಕಿ- ಜೋಳದ ಹಿಟ್ಟುಗಳೊಂದಿಗೆ ಉಪ್ಪನೂ ಸೇರಿಸಿದ ಲೇಪನದಲಿ ಹೊರಳಿಸಿದ ಹೂಕೋಸನು

ಕರಿದು ಒಗ್ಗರಿಸಿದ ಗರಿಗರಿ ಗೋಬಿ  
ಈ ಮಂಚೂರಿನ ಗೋಬಿ !4 !

ಹಚ್ಚಿದ ಕೊತ್ತಂಬರಿ, ಈರುಳ್ಳಿಯ ಹೂಬಳ್ಳಿಯೊಂದಿಗೆ ಸಿಂಗರಿಸಿದ, ಕಣ್ಮನ ತಣಿಸುವ

ಲಾಲಾರಸ ಸುರಿಸುವ ಘಮ ಘಮ ಗೋಬಿ
ಈ ಮಂಚೂರಿನ ಗೋಬಿ ! 5 !

ಡಾ!ಸಿ. ಮುರಳೀಧರ, 2017

- ಡಾ!ಸಿ.ಮುರಳೀಧರ

27 Sep 2017, 10:14 pm