Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನೊಡತಿ...

ಸುಂದರ ಹಳ್ಳಿಯ ಸುಂದರ
ಸೊಬಗಲ್ಲಿ ಹುಟ್ಟಿಹಳು ನನ್ನೊಡತಿ
ಹಸಿರಿನ ಸಂಕೇತವಾಗಿ ಹಸಿರು ಸಿರೆಯನ್ನುಟು
ಹೊಳೆವ ತೊರೆಗಳ ಕಣ್ಣಲ್ಲಿ ತುಂಬಿಕೊಂಡು
ಬೆಳದಿಂಗಳ ಚಂದ್ರನ್ನ ಮುಗುತಿಯಾಗಿ ಧರಿಸಿ
ಸಂಸ್ಕೃತಿಯನ್ನು ಬೋಟ್ಟಾಗಿ ಇಟ್ಟುಕೊಂಡು
ಕಪ್ಪುನೇಲದ ಕುರುಹಾಗಿ ಕಾಡಿಗೆ ಇಟ್ಟು
ಯಾವ ಪೇಟೆಯ ಬಣ್ಣಭಿನ್ನಾಣಗಲಿಲ್ಲದೇ
ನಾಟಕೀಯ ಪ್ರೀತಿಯ ಅರಿವಿಲ್ಲದವಳು
ನನ್ನೊಡತಿ ನನ್ನ ಮನದೊಡತಿ..........


........ಮಂಜು

- ಮಂಜು

03 Oct 2017, 12:46 pm

ಪ್ರಿಯತಮೆ

ಅವಳು ಮರೆಯಾಗೆ ಅಮವಾಸ್ಯೆಯ ಸಹವಾಸ
ಅವಳ ಕಣ್ಬೆಳಕಿನ ಪ್ರೇಮವಿರದೆ ಎದೆಗೆ ಉಪವಾಸ
ಅವಳ‌ ಮುನಿಸೆ ‌ಕರಾಳತೆಯ ಕಡಲು
ಅವಳ ನಗುವೆ ತುಂಬಿಸುವುದು ‌ನನ್ನೊಡಲು
ಅವಳದು ತಲ್ಲಣ ‌ತರುವ ಮೌನ‌
ಅವಳ‌ ಮಾತು ಹಕ್ಕಿಯ‌‌‌ ಇಂಪಿನ ಗಾನ
ಅವಳೆದುರಿದ್ದರೆ ಬೆಳದಿಂಗಳ ಹುಣ್ಣಿಮೆ
ಅವಳೇ ಹೃದಯದರಸಿ ನನ್ನ ಪ್ರಿಯತಮೆ

- ಶ್ರೀಕಾವ್ಯ

03 Oct 2017, 12:06 pm

ಕಂಬನಿ

ಕಾಣದ ನೋವು ಕೈ ಬಿಡದೆ ನನ್ನ ಕಾಡುತ್ತಿದೆ
ಕಣ್ಣೀರ ಸುರಿಸೆಂದು ಪ್ರತಿಕ್ಷಣ.........

ಸದ್ದಿಲ್ಲದೆ ಕಣ್ಣೀರ ಹನಿಯು ಎದೆಯ ಮೀಟಿ
ಕೊರೆದು ತಗೆಯುತ್ತಿದೆ ಬೇಸರದ ಭಾವನೆಗಳನ್ನು ಮತ್ತೆ ಕಣ್ಣ ಬದಿಗೆ ಕಂಬನಿಯಾಗಲೆಂದು..........

ಇಬ್ಬನಿಯ ಮುಸುಕಲ್ಲೂ ಮರೆಯಾಗದ ಮನದ ನೋವು ಕಾಣಿಸಿಕೊಳ್ಳುತ್ತದೆ ಕನಸಲ್ಲೂ ಬೆಂಬಿಡದೇ ಹೊಸದಾದ ಅರೆ ಮುಗಿದ ಕಣ್ಣೀರ ಕಥೆಯ ಆದಿಯಂತೆ..................

- ಚುಕ್ಕಿ

02 Oct 2017, 11:29 pm

ವಿಗ್ರಹದ ವೇದನೆ..

ಊರಾಚೆ ಬಿದ್ದಿದ್ದ ಕಲ್ಲೊಂದು ಖುಷಿಪಟ್ಟಿತ್ತು
ದೊಡ್ಡ ದೇವಸ್ಥಾನದ ವಿಗ್ರಹ ತಾನಾಗುತ್ತೇನೆಂದು
ನೆರೆಹೊರೆಯ ಕಲ್ಲುಗಳಿಗೆಲ್ಲ ನಗುತ್ತ ವಿದಾಯ ಹೇಳಿ
ಸಂಭ್ರಮದ ಮೆರೆವಣಿಗೆಯ ಜೊತೆ ಆಲಯ ಸೇರಿತ್ತು
ಹಾಲು-ತುಪ್ಪದ ಅಭಿಷೇಕ,ಬಗೆ ಬಗೆಯ ಅಡುಗೆಯ ನೈವೈದ್ಯ
ಎಲ್ಲ ಮನಸಲೆ ಯೋಚಿಸಿ ಹಿರಿ ಹಿರಿ ಹಿಗ್ಗಿತ್ತು
ಎಲ್ಲ ತನ್ನಿಚ್ಚೆಯಂತೆ ನಡೆತಿರಲು
ಸಂತೋಷಕೆ ಪಾರವೇ ಇಲ್ಲದಾಗಿತ್ತು
ಯಾರಿಗಿರದ ಅದೃಷ್ಟ ತನಗಷ್ಟೆ ಒಲಿದಿದೆಯೆಂದು
ಸಂಭ್ರಮದ ಕೂಗು ಮುಗಿಲು ಮುಟ್ಟಿತ್ತು

ಬರು ಬರುತ ವಿಗ್ರಹಕು ಬೇಸರ ಮೂಡತೊಡಗಿತ್ತು
ಭಕ್ತಿ ಇರದ ಬರಿ ಸ್ವಾರ್ಥ ಬೇಡಿಕೆಗಳ ಕೇಳಿ ಸಾಕಾಗಿಹೋಗಿತ್ತು
ಜನರ ಪಾಪವೆಲ್ಲವು ದಕ್ಷಿಣೆಯ ರೂಪದಲ್ಲಿ
ತನ್ನ ಓಡಲಾಳ ಸೇರುತಿರಲು ಬೇಡವೆನ್ನಲಾರದೆ
ಮೂಕವಾಗಿ ಎಲ್ಲ ಸಹಿಸಿಕೊಳ್ಳುತಿತ್ತು
ಬೆಳಗಾದರೆ ಶುರುವಾಗುವ ಜನರ ನಾಟಕವ
ನೋಡಲಾರದೆ ಕಣ್ಣು ಮುಚ್ಚಲೆತ್ನಿಸಿತ್ತು

ಅದೆಲ್ಲ ನೋಡಿ ಕಲ್ಲು ಸ್ವಲ್ಪ ಸ್ವಲ್ಪವೇ ಕರುಗುತಿತ್ತು
ಅದ್ಯವುದರ ಪರಿವೆ ಇಲ್ಲದೆ ಜನರ
ಡೊಂಬರಾಟ ಮುಂದುವರೆದಿತ್ತು
ಕೋಣೆಯ ಒಳಗೆ ಯಾರಿಗೂ
ಕಾಣದೆ ಕಣ್ಣೀರು ಸುರಿಸುತಿತ್ತು
ವಿಗ್ರಹದ ಮನಸಲ್ಲಿ ಅಂಧಕಾರ ತುಂಬಿರಲು
ದೀಪವು ಅದ ಕೊನೆಗಾಣಿಸಲು
ಒಂಟಿ ಹೋರಾಟ ನಡೆಸಿ ಸೋತಿದಂತಿತ್ತು
ಒಂದು ದಿನ ವಿಗ್ರಹ ಸಂಪೂರ್ಣ ಕರಗಿಹೋಗಿತ್ತು
ವಿಗ್ರಹದ ಜಾಗದಲ್ಲಿ ಕಲ್ಲು ಪುಡಿಯಾಗಿ ಬಿದ್ದಿತ್ತು
ಕಾರಣ ತಿಳಿಲಾರದೆ ಜನ ಯೋಚನೆಯಲ್ಲಿ ಮುಳುಗಿತ್ತು.

- ಗಾದೆಪ್ಪ

02 Oct 2017, 07:32 pm

ನಿನಗಾಗಿ.......

ಜೂತೆಯಲಿ ಇರುವೆ ಎಂದು
ಹುಗದಿರು ನಾ ನಿರುವುದು ನಿನಗಾಗಿ...
ನೂವಿದೆ ಎಂದು ಕಣ್ಣಿರು ಹಾಕದಿರು
ಆ ನೂವು ನನಗಾಗಿ........
ಪ್ರೀತಿ ಇದೆ ಎಂದು ತೂರಿಸದಿರು
ಆ ಪ್ರೀತಿ ನನಗಾಗಿ.......
ಬದುಕು ಇದೆ ಎಂದು ಕೂರಗದಿರು
ಆ ಬದುಕು ನಿನಗಾಗಿ.......

- ರಾಗಸಿರಿ....

02 Oct 2017, 07:20 pm

ಯಾರು ಸರಿ?ಯಾರು ತಪ್ಪು?

ಯಾರು ಸರಿ,ಯಾರು ತಪ್ಪು
ಯೋಚಿಸುತ ಕುಳಿತರೀಗ
ನನ್ನೆದೆಲ್ಲ ಸರಿಯೂ,ಅವಳದೆಲ್ಲ ತಪ್ಪು
ಒಪ್ಪಲು ಅವಳು ಸಿದ್ದವಿಲ್ಲ
ತನ್ನ ತಪ್ಪು,ಅಹಂಕಾರದ ಬೆನ್ನು ಹತ್ತಿ

ಅರಳಿದ ಹೂವ ನೋಡಿ
ನೀರಾಕಿ ಬೆಳಸು ಅಂದೆ ನಾನು
ಹೂವು ಕಿತ್ತಿ ಮುಡಿಯಲ್ಲಿಟ್ಟು
ಚಂದ ನೋಡು ಅಂದಳು ಅವಳು
ಯಾರು ಸರಿ?ಯಾರು ತಪ್ಪು?

ಇರುಳಿನಲ್ಲಿ ಶಶಿಯ ನೋಡಿ
ಹುಣ್ಣಿಮೆಯ ಹೊಗಳಿದೆ ನಾನು
ಸುತ್ತಲಿದ್ದ ಕತ್ತಲು ನೋಡಿ
ರಾತ್ರಿಯನ್ನೇ ಶಪಿಸತೊಡಗಿದಳು
ಯಾರು ಸರಿ?ಯಾರು ತಪ್ಪು?


ಸುರಿವ ಮಳೆಯ ಸೊಬಗು ಕಂಡು
ವರುಣ ದೇವನಿಗೆ ವಂದಿಸಿದೆ ನಾನು
ಹಾಳು ಮಳೆಯು ಈಗಲೇ ಬರಬೇಕೆ
ಬಟ್ಟೆಯೆಲ್ಲ ಹಾಳು ಎಂದು ಕೊರಗಿದಳು
ಯಾರು ಸರಿ?ಯಾರು ತಪ್ಪು?

ಬದುಕನು ಇದ್ದಂತೆ ಸವಿಯುವ
ಸವೆಸುವ ಆಸೆಯು ನನ್ನದು
ಭಾವೆನೆಗೂ ಬಣ್ಣ ಹಚ್ಚಿ
ನಟನೆ ಮಾಡಿಸುವ ಕನಸು ಅವಳದು
ಯಾರು ಸರಿ ? ಯಾರು ತಪ್ಪು?

ಸರಿ ತಪ್ಪನು ವಿಮರ್ಶಿಸುವ
ಸಂಯಮ ನನಗಿನ್ನೂ ಉಳಿದಿಲ್ಲ
ಆಕಾಶ-ಭುವಿಯ ನಡುವಿನ ಅಂತರವ
ಕಡಿಮೆ ಮಾಡಲು ಸಾಧ್ಯವಿಲ್ಲ
ಅವಳೇ ಸರಿ,ನಂದೇ ತಪ್ಪು.......
ಗಾದೆಪ್ಪ

- ಗಾದೆಪ್ಪ

02 Oct 2017, 06:45 pm

ಗುಲಾಬಿಯೇ......

ಸಂಜೆಗೆ ಸಾಯುವ
ಭಯವಿಲ್ಲದೆ ಸುಮ್ಮನೆ ನಿಂತಿರುವ
ನಿನ್ನ ಬದುಕಿನ
ಬಗೆಯನ್ನು ನನಗೂ
ಕಲಿಸಿಕೊಡು ಗುಲಾಬಿಯೇ.......

- Shilpa

02 Oct 2017, 06:38 pm

ಏಕಾಂಗಿ ನಾನಲ್ಲ.....!

ಪದಗಳಲಿ ಸೋಲಬಹುದು ,
ಭಾವನೆಗಳಲ್ಲಿ ?

ಆಸೆಗಳು ಸೋಲಬಹುದು ,
ಬದುಕು ಸೋಲುವುದೆಲ್ಲಿ ?

ನನ್ನೊಲವು ನೀನಾಗಿರಲು ,
ಒಬ್ಬಂಟಿ ನಾನಲ್ಲ.....!

ನನ್ನೊಳಗೆ ನೀನಿರಲು
ಏಕಾಂಗಿ ನಾನಲ್ಲ......!

- Shilpa

02 Oct 2017, 06:28 pm

ಹಂಬಲ

ಮೌನದಿ ನಾನು ನೋಡುತಳಿದ್ದೆ
ಮುಳುಗುವ ಭಾನು,

ಕಡಲ ಒಡಲು ಹಂಬಲಿಸುತ್ತಿತ್ತು ವಶಮಾಡಿಕೊಳ್ಳಲು
ಹುಣ್ಣಿಮೆ ಚಂದಿರನ ತಾನು...

~ಹರ್ಷ ಹೆಚ್ ಎಲ್

- HarshaHL

02 Oct 2017, 04:39 pm

ಪುಸ್ತಕ

ಸರ್ವರ ಏಳ್ಗೆ-ಬಾಳ್ಗೆಗೆ ಬೆಳಕು ಈ ಪುಸ್ತಕ
ಅದು ಸಂಗಾತಿಯಾದರೆ ಅರಳುವುದು ಮಸ್ತಕ
ಭೂತ ವರ್ತಮಾನ ಭವಿಷ್ಯ ಉಂಟು ಇಲ್ಲಿ
ವಿಷಯದೊಳಗೆ ರಸಧಾರೆ ಹರಿಯುವುದು ಅಲ್ಲಲ್ಲಿ

- Kumara.C

02 Oct 2017, 04:17 pm