Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಣ್ಣಿದ್ದೂ ಕುರುಡರು

ಕಣ್ಣಿಹುದು ಮುಖದಲ್ಲಿ
ಜಗದ ಅಂದವನ್ನು ಕಾಣಲು!!
ಅಂಧಕಾರವೇ ತುಂಬಿರುವಾಗ
ಕಣ್ಣಿದ್ದು ಕುರುಡರಿಲ್ಲಿ!!

ಅಂಧರಿಗೂ ಕಾಣುವುದು
ಅಂತರಂಗದ ಆರಾಧನೆಯಲ್ಲಿ!!
ಕಣ್ಣದ್ದೂ ಕಾಣದವರೇ
ಹೆಚ್ಚು ಈ ಲೋಕದಲ್ಲಿ!!

ಇರುಳಿನಲ್ಲಿ ಹಣತೆ ಹಚ್ಚಿ
ಬೆಳಕನ್ನು ಕಾಣುತಿಹರು!!
ಮತಿಯು ಅಂಧಕಾರದಿ
ಮುತ್ತಿರುವಾಗ ಕಣ್ಣಿದ್ದೂ ಕುರುಡರಿಲ್ಲಿ!!

- ಪಿ.ಜಿ.ಜ್ಯೋತಿ

05 Oct 2017, 08:29 pm

ನನ್ನ ರಾಜಕುಮಾರ.....

ನಿನ್ನ ಕನಸುಗಳಿಲ್ಲದೆ ದಿನ ರಾತ್ರಿ ಪೂರ್ತಿ ಆಗುತ್ತಿಲ್ಲ ......
ನಿನ್ನ ನೆನಪುಗಳಿಲ್ಲದೆ ದಿನ ಆರಂಭವಾಗುತ್ತಿಲ್ಲ.....
ಕಣ್ಣುಮುಚ್ಚಿ ಕಣ್ಣ ತೆರೆಯುವ ಮುನ್ನ......
ಕಲ್ಪನೆಗಳಾಗಿ ಬಳಿ ಸುಳಿದು.....
ಕವಿತೆಗಳ ಬರೆಸುವ ನನ್ನವನೇ....
ನೀ ನನ್ನೇದುರು ಬರದೆ ಕವಿತೆಯಲ್ಲೆಕೆ ಅಡಗಿ ಕುಳಿತೆ......!!!!

ಯಾವಾಗ ನನ್ನ ಬಳಿ ಬರುವೆ ....
ನಿನಗಾಗಿ ಕಾಯುತಿರುವೆ ......

ನಿನ್ನ ರಾಜಕುಮಾರಿ .......

- Shilpa

05 Oct 2017, 07:42 pm

ನನ್ನವಳ ನೇನಪು

ನೀಲಕಡಲಿನ ಬೆಳ್ನೊರೆ ಅಲೆ ನೀನು
ತೀರದಲಿ ಅಷ್ಟಷ್ಟೇ ಕರಗುವ
ಮರಳು ನಾನು..
ದೂರವೆಷ್ಟು ಕ್ರಮಿಸಲಿ
ಮರಳಿ ಮರಳಿ ನನಗೆ ನೀನು
ನಿನಗೆ ನಾನು...

- ಮಳೆಯಲ್ಲಿ ಜೋತೆಯಲ್ಲಿ

05 Oct 2017, 07:32 pm

ಜಗಕ್ಕೆಲ್ಲ ತಳಿರ‌‌ ತೋರಣ

ಹಬ್ಬವಂತೆ ಅಲಂಕಾರವಂತೆ
ಮನೆಯ ಬಾಗಿಲಿಗೆ ತಳಿರ ತೋರಣವಂತೆ
ತಳಿರ‌‌ ತೋರಣ‌ ಕಟ್ಟಿ ದುಷ್ಟ ಶಕ್ತಿ‌ ತಡೆಯುವರಂತೆ
ನೆಮ್ಮದಿಯ ಸುಖವದರಲಿ ಅರಸುವರಂತೆ

ಜಗದೊಳಗೆ ಮನಸೊಳಗಿರಲು ದುಷ್ಟ ಮಹಾ ಮಾರಿ
ಹುಡುಕಾಡಿದರೇನು ಒಳ್ಳೆಯ ಫಲಕ್ಕಾಗಿ ಪರಿಪರಿ
ಕೊಡಬಹುದು ಕೊಂಚ ನೆಮ್ಮದಿ ದುಷ್ಟತನದ ಸವಾರಿ
ಅದೆಂದೂ ಮನ, ಮಾನವನಿಗೆಂದು ಅಪಾಯಕಾರಿ

ಮನಸೊಳಗಿದ್ದರೆ ಪ್ರೀತಿ ಪ್ರೇಮದ ಹೂರಣ
ಜಗಕ್ಕಂಚಿ ಆಗ ನೇ ಕಿ ದೆ ‌ನೆಮ್ಮದಿಯ‌ ಸಾರಲು ಕಾರಣ
ಆದರೆ ಜಗದೊಳಗಿನ‌ ಈ ನೋವುಗಳ ಮಾರಣ
ಅದೇ ಅಲ್ಲವೆ ಮನೆ ಮನ ಜಗಕ್ಕೆಲ್ಲ ಕಟ್ಟಿದ ತಳಿರ ತೋರಣ

- ಶ್ರೀಕಾವ್ಯ

05 Oct 2017, 06:22 pm

*ಪ್ರೀತಿ*

ಈ ಸುಂದರ ಜಗದಲ್ಲಿ
ನಿನಗಿಂತ ಯಾರೂ ಸುಂದರಿಯಿಲ್ಲ.
ನಾನಂತೂ ನಿನ್ನ ಆರಾಧಕ
ನಿನ್ನ ಮೇಲಿನ ಸೌಂದರ್ಯಕ್ಕಲ್ಲ!..

ನೀ ಬರುವ ದಾರಿಯಲ್ಲಿ
ಕಾದಿರುವೆ ಪ್ರತಿದಿನ
ನೀ ಬಾರದೇ ಹೋದಾಗ
ನೊಂದು ಅಳುವುದು ನನ್ನ ಮನ!

ಕಣ್ಣರೆಪ್ಪೆಯ ಮುಚ್ಚದೇ
ನಿನ್ನನೇ ನೋಡುವುದು ಈ ನಯನ.
ನೀ ಕಾಣದೇ ಹೋದಾಗ
ಪರಿತಪಿಸುವುದು ನನ್ನೀ ಹೃದಯ!

ನಿನ್ನ ಪ್ರೀತಿಯ ಬಂಧನದಲ್ಲಿ
ನಾ ತೇಲಿಹೋದಂತೆ,
ನಿನ್ನೊಲುಮೆಯ ಮಾತು ಕೇಳಿದಂತೆ
ಕನಸು ಕಾಣುತ್ತಿರುವೆ ನಾನಿಲ್ಲಿ!

ಓ ನನ್ನ ಪ್ರೀತಿಯ ಸಖಿ
ನೀನಾಗ ಬಯಸುವೆಯ ಬಾಳಸಂಗಾತಿ
ನೀ ಜೊತೆಗಿದ್ದರೆ ನಾನು ಸುಖಿ
ನೀ ದೂರವಾದರೆ ಸಾವೇ ಗತಿ!

- ಪ್ರಿಯಾಂಕ

05 Oct 2017, 05:59 pm

ಬಣ್ಣದ ಸೋಗಲ್ಲಿ ಮರೆಯಾದ ಮಾನವೀಯತೆ ...

ಬದುಕೆಂಬ ರಂಗಿನಾಟದಲ್ಲಿ
ಬಣ್ಣ ಬಳಿದುಕೊಂಡವರೇ ಬೆಳಿದಿರುವರು
ಬಣ್ಣ ಬೇಡವೆಂದು ತಲೆ ಎತ್ತಿ ನಡೆದೇವರೆಲ್ಲ
ನೆರಳಿಗೂ ಗುರುತು ಸಿಗದೇ
ಕತ್ತಲಲ್ಲೇ ಮರೆಯಾಗಿ ಹೋದರು
ಕುಡಿಯದೆಯೇ ಕುಡಿದ ಹಾಗೇ
ಖುಷಿಯಲ್ಲಿಯೇ ಅಳುವಿನ ಸೋಗು
ಎಲ್ಲರು ತಮ್ಮದಲ್ಲದ ಪಾತ್ರದಲ್ಲಿ ತಲ್ಲೀನರಾಗಿರಲು
ಸೂತ್ರದಾರನಿಗೆ ಮರೆತೇ ಹೋಗಿದೆ
ತಾ ಕೊಟ್ಟ ಪಾತ್ರಗಳು

ಕುಲವೆಂಬ ಕಪ್ಪು ಬಣ್ಣ
ಆಸ್ತಿಯೆಂಬ ಕೆಂಪು ಬಣ್ಣ
ಸ್ವಾರ್ಥವೆಂಬ ನೀಲಿ ಬಣ್ಣ
ಅಧಿಕಾರವೆಂಬ ಕೇಸರಿ ಬಣ್ಣ
ಅನೀತಿಯೆಂಬ ಹಳದಿ ಬಣ್ಣ
ಎಲ್ಲ ಬಣ್ಣ ಒಟ್ಟಿಗೆ ರಾಚಿರಲು
ಮನುಷ್ಯತ್ವವೆಂಬ ಮೂಲ ಬಣ್ಣವೇ
ಆಕಾಶದಲ್ಲಿ ಮಾಯವಾಗಿತ್ತು
ಗಾದೆಪ್ಪ

- ಗಾದೆಪ್ಪ

05 Oct 2017, 05:34 pm

ನಾ ಒಬ್ಬ ಕವಿಯಾಗಬಾರದಿತ್ತೇ..?

ನಿನ್ನ ತುಟಿಯಲ್ಲಿ
ಅಡಗಿ ಕುಳಿತಿಹೆನು
ಕಾಣುವೆ ಒಮ್ಮೆ ನೀ ನಕ್ಕರೆ
ಹಾಗೆಂದು ನೀನು
ತುಂಬಾನೇ ನಗಬೇಡ
ಬಂದಾರು ಬೇರೆಯವರು ನನ್ನ ಜಾಗಕೆ

ತುಂಬಾನೆ ಒಳ್ಳೆಯವ್ನು
ಅನ್ಕೊಂಡಿದ್ದೆ ನನ್ನ ನಾನು
ನಿನ್ನನ್ನು ಕಾಣೋ ಮೊದಲು ..
ಆಮೇಲೆ ತಿಳಿಯಿತು
ನಾ ಒಬ್ಬ ನರಮನುಷ
ಬಿಳುತಿಹುದು ಪೋಲಿ ಕನಸು..

ಕೆಂದಾವರೆ ತುಟಿಯು
ನೀಳ ನಿನ್ನ ಜಡೆಯೂ
ಉಯ್ಯಾಲೆ ಆಡೂತೈತಿ ಗಾಳಿಗೆ
ಬಿಗುಮಾನದ ನಡೆಯು
ನಗು ತುಂಬಿದ ಮೊಗವು
ಚೆಲ್ಲೈತಿ ಹುಣ್ಣಿಮೆಯ ಬೆಳಕು

ಯಾವ್ದುಕ್ಕು ನಿನ್ಮೇಲೆ
ಕೇಸ್ ಅನ್ನು ಹಾಕಿಬಿಡಲೇ
ಕೊಲ್ತಿಯ ನನ್ನ ಕ್ಷಣ ಬಿಡದೆ
ಹೃದಯಾನೇ ಜೈಲು
ಅಲ್ಲಿ ಸಿಗಲ್ಲ ಬೈಲು
ಇರಬೇಕು ಕೊನೆಯವರೆಗೆ....

ಹೊಗಳಿಕೆಯ ಹೂಮಾಲೆ
ಕಟ್ತಾನೇ ಇರುವೆನು
ನಿನೀಗೇ ನಗ್ತಾನೇ ಇದ್ರೆ
ಪದಗಳೇ ಸಾಲ್ತಿಲ್ಲ
ಯಾರನ್ನು ಬೇಡ್ಲಿ
ನಾ ಒಬ್ಬ ಕವಿಯಾಗಬಾರದಿತ್ತೇ
ಗಾದೆಪ್ಪ

- ಗಾದೆಪ್ಪ

05 Oct 2017, 05:19 pm

.......

ಬಾನಂಗಳದ್ಯಾಗೆ ಬಿಡಿಸ್ಯಾನೆ
ಸೂರ್ಯನು ಬಣ್ಣದ ಚಿತ್ತಾರವನ್ನ
ರವಿವರ್ಮ ನೋಡಿ ನಾಚವ್ನೆ ನಗುತ್ತಾ ಹೊಗಳುತ್ತಾನಿಸರ್ಗದ ಮೈ ಮಾಟವನ್ನ

ತೆಲ್ಯಾವೆ ಮೋಡಗಳು ಗಾಳಿಲಿ ತೂರಾಡತ
ಬಿದ್ದಾವೇ ಜಗಳಕ್ಕೆ ಒಂದಕ್ಕೊಂದು ಗುದ್ದುತ್ತ
ಮರತಾವೇ ಮರುಕ್ಷಣವೇ ತಮ್ಮೆಲ್ಲ ಜಗಳನ
ಸುರಿಸುತ್ತ ಮಳೆಹನಿಯ ಭೂದೇವಿ ಮಡಲಿಗೆ

ಮರಗವ್ನೆ ಸೂರ್ಯನು ಧರೆಯನ್ನು ನೋಡುತ್ತಾ
ಹೇಳವ್ನೆ ನಿಲ್ಸೋಕೆ ತಿರುಗೋದುತನ್ನ ಸುತ್ತ
ನಗ್ತಾನೇ ನುಡಿದವಳೇ ಭೂದೇವಿ ತಿರುಗುತ್ತ
ನನ್ನ ಮಕ್ಳ ಕಾಯೋಕೆ ನಾ ಎಲದಕ್ಕೂ ಸಿದ್ದ.

ಹುಟ್ಟುತ್ತಾ ಕೆಂಪು,ಮುಳುಗುತ್ತ ಕೆಂಪು
ನಡುವೆ ಹುರಿಯುತ್ತ ಬೆಳಗವ್ನೆ ಲೋಕನಾ
ಇರುವರೆಗೂ ನಂದು ಒಂದೇನೆ ಬಣ್ಣವು
ಸಾರವ್ನೆ ನೇಸರನು ಬದುಕಿನ ಮರ್ಮ

ನಗ್ತವ್ನೆ ಚಂದ್ರನು ನೀರಲ್ಲಿ ನೋಡುತ್ತಾ ಪ್ರತಿಬಿಂಬ
ಆ ನಗುವೇ ಬೆಳಕಾಗಿ ಹರಡೈತಿ ಭೂಮಿಮ್ಯಾಗ
ನಳಿದಾವೆ ನಕ್ಷತ್ರ ಬಾನನ್ನು ಚುಂಬಿಸುತಾ
ಅಂಧಕಾರಕ್ಕೂ ಅಲಂಕರಿಸಿ ಒಳಿತನ್ನೇ ಬಯಸುತ್ತ

- ಗಾದೆಪ್ಪ

05 Oct 2017, 05:16 pm

ಇರಬೇಕು ಹೇಗೆ ನೀನಿಲ್ಲದೆ?

ಕನಸೆಲ್ಲವಾ ಕರೆದೊಯ್ಯುವೆ
ಕಣ್ಣೀರಿನ ಜೊತೆಯಲ್ಲಿಯೇ
ತಿಳಿದು ಕೂಡ ಬಯಸುವೆಯ
ಮಸಣದ ಗೂಡು ಈ ಹೃದಯ

ಮರೆತೋಗಿರೋ ಮಾತೆಲ್ಲವ
ಮತ್ತೆತೇಕೆ ನೀ ನೆನಪಿಸುವೆ
ಎಂಥ ಕಲ್ಲು ಹೃದಯವು
ಕರಗಲೇಬೇಕು ಈ ಕಥೆಗೆ

ಬಳಿ ಬಂದರೆ ನೀ ಕೊರುಗುವೆ
ದೂರ ತಾಳದೆ ನಾ ಸಾಯುತಿರುವೆ
ಬೇಕೇ ಹೇಳು ಈ ಅಗ್ನಿಪರೀಕ್ಷೆ
ವಿರಹ ವೇದನೆಯ ತಾಳುವುದೇಗೆ

ನಿಜವಾಗಿಯೂ ನಾ ಸತ್ತರೂ
ನೆನಪಾಗಿಯೇ ನಿನ್ನ ಜೊತೆಯಿರುವೆನು
ಬಿಟ್ಟು ಬಿಡು ನೀ ಆತಂಕ
ಪ್ರೀತಿಗೇ ಗೆಲುವುಂಟು ಕೊನೆತನಕ

ಹುಸಿರಾಟವ ನಾ ಮರೆತರೆ
ಜ್ಞಾಪಿಸುವುದು ನಿನ್ನ ಕೆಲಸವು
ಸವಿಯುತ್ತ ನಿನ್ನ ಸೌಂದರ್ಯ
ಮರೆತೋಗ್ತಿದೆ ನನ್ನ ಸಾಹಿತ್ಯ.
ಗಾದೆಪ್ಪ

- ಗಾದೆಪ್ಪ

05 Oct 2017, 05:14 pm

ಭಯ

ಏನಕ್ಕೂ ಭಯವಿಲ್ಲವಂತೆ
ನನ್ನ ಮುದ್ದು ಹುಡುಗಿಗೆ.
ಬಂದು ಅವಿತುಕೊಂಡಳು
ನನ್ನೆದೆಯಲಿ, ಒಂದೇ ಗುಡುಗಿಗೆ !!

- ಶ್ರೀಗೋ.

05 Oct 2017, 02:30 pm