Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿಯ ಮೊಳಕೆಮುರಿದಾಗ

ಪ್ರೀತಿಯ ಮೊಳಕೆಮುರಿದಾಗ
°°°°°°°°°°°°°°°°°°°°°°°°°°°°°°°°
ಅವಳು ನನ್ನ ಜೀವನದಲ್ಲಿ ನಶ್ವರವಾದ ಕ್ಷಣ
ಧರೆಗೆ ಎರೆಯಾಗಿ
ಗಿಡಕ್ಕೆ ಗೊಬ್ಬರವಾಗಿ
ಕಣ್ಣಿಗೆ ಕಾಣದ‌ ಸಸಿಗೆ ಉಸಿರಾಗಿ
ಪ್ರಕ್ರುತಿಯಲ್ಲಿ ಲೀನ ವಾಗುವ‌ ಜೀವ
ನಾನಾಗಿ.
ಸದಾ ನನ್ನವಳ ನೆನಪಲ್ಲಿ
ಹಸಿರೆಂಬ ಉಸಿರನ್ನ ನನ್ನ ನೆರಳನ್ನು
ಬಯಸುವ ಪ್ರೇಮಿಗಳಿಗೆ ಧಾರೆಯಾಗಿ
ಪ್ರೀತಿಯೆಂಬ ಮೊಳಕೆಯನ್ನು ಪುನಃ ಅವರ ಮನದಲ್ಲಿ ನಾ ಚೆಲ್ಲಿ ಅವರೊಂದಿಗೆ ಸದಾ ಅವರ ಪ್ರೀತಿಯ ಯಶಸ್ಸಿಗೆ ನಾ ಜೊತೆಯಾಗಿ ಇರುವೆ ....

ನನ್ನವಳು ನಶ್ವರ ಅದರೆ ನನ್ನ ಪ್ರೀತಿ ಶಾಶ್ವತ

( ನೆನಪಿನ ನಾವಿಕ ಸಂತೋಷ್ )

- ಸಂತೋಷ್//ಜೀತು

06 Oct 2017, 07:41 pm

ಪ್ರೀತಿ‌ಯಮೊಳಕೆ

ಪ್ರೀತಿ‌ಯ ಮೊಳಕೆ
°°°°°°°°°°°°°°°°°°°°°°°°°°°°
ಮರೆಯದ ಮಾಣಿಕ್ಯ ಅವಳು
ಕಡಲ ಅಲೆಯಲ್ಲಿ ತೇಲಿ ಬಂದ ಅಪರೂಪದ ಮುತ್ತು ಅವಳ ಅವಳು.
ನನ್ನ ಕಣ್ಣಿನ ಪಾಪೆಯಲ್ಲಿ ರಶ್ಮಿಯಾಗಿ ಹೊಳೆಯುತಿರುವಳು.
ನನ್ನ ನಯನದ‌ ದ್ವಾರಬಾಗಿಲಿಗೆ ಕಾಡಿಗೆ ಎಂಬ ಬೀಗ ವಾದವಳು ನನ್ನವಳು.

ಪ್ರತಿ ದಿನ ನಾ ನೊಡುವ ದರ್ಪಣದಲ್ಲಿ ನನ್ನ ಪ್ರತಿಬಿಂಬವಾಗಿ ಬಂದವಳು ಅವಳು.
ನಾ ಜೀವನದಲ್ಲಿ ಬಿದ್ದಾಗ ನನ್ನ ಕೈ ಹಿಡಿದು ಎತ್ತಿ ನನ್ನ ಸರಿದಾರಿಗೆ ತರುವವಳು .
ನನ್ನ ತೊಳಿಗೆ ತೊಳ್ಕೊಟ್ಟು ನಿಲ್ಲುವಳು.
ಅವಳೇ‌ನನ್ನ ದೇಹಕ್ಕೆ ಉಸಿರಾಗಿ ಕಲೆತವಳು ನನ್ನ ಮನದಲ್ಲಿ ಬೆರೆತವಳು‌.
ಸದಾ ನನ್ನ ಜೀವನದಲ್ಲಿ ಜೊತೆಯಾಗಿ ನಡೆಯುವವಳು.

ನನ್ನವಳು ಶಾಶ್ವತ ನನ್ನನ್ನು ತೊರೆದು ಹೋಗಳು ಕಂಡಿತ.

( ನೆನಪಿನ ನಾವಿಕ ಸಂತೋಷ್ )

- ಸಂತೋಷ್//ಜೀತು

06 Oct 2017, 07:36 pm

*ಜೊತೆಯಾದವಳು*

ಶಶಿಯು ಮೂಡಿದ ಹೊತ್ತು
ಜೊತೆಯಾಗಿ ನೀ ಬಳಿಯಿರಲು
ನನ್ನ ಕಣ್ಣಲಿ ತುಂಬಿಕೊಂಡೆನು
ಚಂದ್ರನ ಬೆಳಕಲ್ಲಿ ನಿನ್ನ ಮೊಗವನು!

ಆಗಸದಿಂದ ಬಿದ್ದ ಮಳೆಗೆ
ಹಚ್ಚಹಸಿರಾಯಿತು ಭೂಮಿ
ನಿನ್ನೊಂದು ನಗುವಿಗೆ
ತಂಪಾಯಿತು ಹೃದಯದ ಮರುಭೂಮಿ!

ಆಸೆಗಳೆಲ್ಲ ಬತ್ತಿಹೋದ ಜೀವಕೆ
ಹೊಸ ಕನಸುಗಳನ್ನು ಮೂಡಿಸಿದೆ.
ಪ್ರೀತಿ ಕಾಣದ ಬರಡು ಹೃದಯದಲಿ
ಪ್ರೀತಿಯ ಮಳೆಯನ್ನು ಸುರಿಸಿದೆ!

ನೀನೆ ನನ್ನ ಚಂದನದ ಗೊಂಬೆ
ನನ್ನೀ ಬಾಳಿನಲ್ಲಿ ಬೆಳಕನ್ನು ತಂದೆ
ನೀ ಜೊತೆಗಿದ್ದರೆ ಸಾಕು
ಬೇರೆನು ಬೇಕಿಲ್ಲ ಈ ಹೃದಯಕೆ!

ಪ್ರಿಯಾಂಕ✍

- ಪ್ರಿಯಾಂಕ

06 Oct 2017, 11:38 am

ಹಾರೈಕೆ........

ಹೂಸಬದುಕಿನ ಹಾದಿಯಲ್ಲಿ
ಕಿರು ನಗುವಿನ ಮುಖದಲ್ಲಿ
ಪ್ರೀತಿ ತುಂಬಿದ ಒಲವಲಿ
ಒಲವು ತುಂಬಿದ ಆಸರೆ ಯಲ್ಲಿ
ಹೂಸ ಪುಟಗಳ ತಿರುವಿ ಹಾಕುತ
ಹೂಸ ಹೆಜ್ಜೆ ಜೊತೆಗೆ ಹೆಜ್ಜೆ ಹಾಕುತ
ಸಾದನೆಯ ಹಾದಿಯಲ್ಲಿ
ಎಲ್ಲ ರ ಸುಖ ಬಯಸುತ
ನಿಮ್ಮ ಹೂಸ ಬದುಕು ಶುರುವಾಗಲಿ........
ಶುಬಾಷಯಗಳು................
ಹೂಸ ಬದುಕಿಗೆ............

- ರಾಗಸಿರಿ....

06 Oct 2017, 11:06 am

ನನ್ನವನು ಹೇಳಿದನು....

"ನನ್ನವನು ಹೇಳಿದನು
ನಾನು ಖುಷಿಯಾಗಿರಲು
ನೀ ನನ್ನ ಮರೆಯಬೇಕು
ನನಗೆ ನೀ ಕರೆ ಮಾಡುವುದು ಬಿಡಬೇಕು"
ಆದರೆ ನನ್ನನೆಂದು ಕೇಳಲಿಲ್ಲ
ನೀ ಖುಷಿಯಾಗಿರಲು ನಾ
ಎನು ಮಾಡಬೇಕೆಂದು
ಅವನೆಂದು ಯೋಚಿಸಲಿಲ್ಲ
ಅವನ ಮರೆತ ಈ ಹೃದಯ
ಬದುಕುವುದು ಹೇಗೆಂದು ...?

- Shilpa

06 Oct 2017, 10:07 am

ಕನ್ನಡ ನಾಡು

ಕನ್ನಡನಾಡಿಗೆ ಸ್ವಾಗತ ....... ಸುಸ್ವಾಗತ .......
ಅಂದದ ಬೀಡಿಗೆ ಸ್ವಾಗತ....ಸುಸ್ವಾಗತ .......||ಪ ||

ತಮಿಳು ಇಲ್ಲಿದೆ ......
ತೆಲುಗು ಇಲ್ಲಿದೆ ......
ಎಲ್ಲರು ಒಂದೇ ಎನ್ನುವ ಸೌಹಾರ್ದ ಇಲ್ಲಿದೆ
ತುಳುವಿನ ತಲುಕಿದೆ ...... ಕೊಂಕಣಿ ಮಾತಿದೆ

ಉರ್ದು ಇಲ್ಲಿದೆ ...ಮರಾಟಿ ಬೆರೆತಿದೆ ......
ಅಂದದ ನಾಡಿದು ವೈವಿದ್ಯದ ಗೂಡಿದು ........

ಮಲಯಾಳಿ ಮಾತಿದೆ , ಲಂಬಾಣಿ ಸೊಗಸಿದೆ ...
ಎಲ್ಲರು ಕೂಡಿ ಹಾಡುವ ಕನ್ನಡ ಮನಸಿದೆ ....

ಯಾರನು ಜರಿಯದ ನನ್ನ ಸುಂದರ ಗುಡಿಯಿದು
ನೀರನು ಬೇಡಲು , ಪಾನಕ ಸಿಗುವುದು
ಪರಿಚಯ ಬಯಸಲು ಸ್ನೇಹವು ಸಿಗುವುದು..

ವಿಶಾಲ ಮನಸಿನ ನಾಡಿದು , ವಿಶೇಷವಾದ ನೆಲವಿದು ....

- ಮಳೆಯಲ್ಲಿ ಜೋತೆಯಲ್ಲಿ

05 Oct 2017, 11:06 pm

ಸ್ವಾರ್ಥ

ಮೌನ ತುಂಬಿದ ಮನಕೆ
ಜೀವನ ಬರಿ ಕತ್ತಲು.....

ಪ್ರೀತಿ ತುಂಬಿದ ಮನಕ್ಕೆ
ಬದುಕೆಲ ಬರಿ ನರಕ.....

ಮಮತೆ ತುಂಬಿದ ಮಡಿಲಿಗೆ
ಕರುಣೆ ಇಲ್ಲ ದ ತವಕ......

ಯಾರು ಇಲ್ಲದ ಜಿವಕೆ
ಆಸರೆ ಸಿಗದ ಬದುಕು.....

ಒಳ್ಳೆಯ ಮನಸ್ಸಿಗೆ ಎಂದಿಗು
ಬೆಲೆ ಸಿಗದ ಕುರುಡು ಲೋಕ.......

- ರಾಗಸಿರಿ....

05 Oct 2017, 09:24 pm

ಕೊರವಂಜಿ

ನಾನೊಬ್ಬಳು ಕೊರವಂಜಿ
ನನ್ನ ಹೆಸರು ಸಿರಿವಂಜಿ!!
ನನ್ನ ನುಡಿಯು ಅಪರಂಜಿ
ನೀ ಕೇಳು ಗುಲಗಂಜಿ!!

ಕಣ ಕಣದಲ್ಲೂ ಕಣಿಯ
ನುಡಿಯುವುದು ನನ್ನ ಕಾಯ!!
ನೀ ಕೇಳಲು ನನ್ನ ದನಿಯ
ನಾ ನುಡಿಯುವೆ ಮರು ದನಿಯ!!

ಊರೂರು ಅಲೆಯುತಲಿ
ತಿರುಗುವ ನಾ ಕೊರವಂಜಿ!!
ನೀ ಹೋಗದಿರು ಅಂಜಿ
ನನ್ನ ನುಡಿಯು ಅಪರಂಜಿ!!

ಅಂಗೈಯಲ್ಲಿನ ಬರಹ
ತಿಳಿಸುವುದು ನಿನ್ನ ಕುರುಹ!!
ಮುಖ ಲಕ್ಷಣ ನೋಡಿದರೆ
ನಾ ನುಡಿಯುವೆ ನಿನ್ನ ಕಥೆಯ!!

- ಪಿ.ಜಿ.ಜ್ಯೋತಿ

05 Oct 2017, 08:31 pm

ಮನೆಗೆ ಬಾ ಶ್ರೀ ಮಹಾಲಕ್ಷ್ಮಿ

ಲಕ್ಷ್ಮಿ ದೇವಿ ಮನೆಗೆ ಬಂದು
ಹರಸಮ್ಮ ತಾಯಿ ನಮ್ಮನು ಇಂದು!!
ಧನ ಕನಕಗಳ ಒಡತಿ ಕರುಣಿಸಿ ಬಾರೆ
ಸಕಲ ಸೌಭಾಗ್ಯವನ್ನು ನೀ ಹೊತ್ತು ತಾರೆ!!

ಆ ತಂದೆ ಕುಬೇರನ ಸೌಭಾಗ್ಯ ಕುವರಿ
ಚಂದಿರನ ಸಹೋದರಿ ನೀ ಹರಸಮ್ಮ ತಾಯಿ!!
ಕ್ಷೀರ ಸಾಗರದಿ ಶ್ರೀ ಹರಿಯ ಸೇರಿ
ನೆಲೆಸಿರುವ ದೇವಿ ನೀ ಸಲಹಮ್ಮ ತಾಯಿ!!

ಕೃಪೆ ತೋರಿ ನೀ ಬರಲು ಕಾದಿಹುದು ಈ ಮನೆಯು ಕರುಣಿಸು ಬಾ ಮ್ಮಾ ಶ್ರೀ ಮಹಾಲಕ್ಷ್ಮಿ!!
ನಿನ್ನ ಆರಾಧನೆಗೆ ಸಂಭ್ರಮದಿ ಕಾದಿಹೆವು
ದಯೆ ತೋರಿ ಬಾ ಮ್ಮಾ ಶ್ರೀ ಮಹಾಲಕ್ಷ್ಮಿ!!

- ಪಿ.ಜಿ.ಜ್ಯೋತಿ

05 Oct 2017, 08:31 pm

ಮನದ ಮನೆಯಲ್ಲಿ

ಮನದೊಳಗಿನ ಮನೆಯಲ್ಲಿ
ಪರಿಚಯದ ನಗು ಚೆಲ್ಲಿ!!
ಬಂದಿರುವ ಗೆಳೆಯ ನೀನು
ನಾ ಅರಿಯದ ಪರಿಚಿತನು!!

ಮರಳಿ ಮರಳಿ ಮನದ ಮನೆಗೆ
ಬಂದೆ ನೀನು ಬಯಸುತ ಸಲಿಗೆ!!
ದಿನ ಹೀಗೆ ನನ್ನಯ ಒಳಗೆ
ತಂದೆ ಹೂ ನಗೆ ನೀ ಬಂದು ಮೆಲ್ಲಗೆ!!

ಕಾದು ಕಾದು ಕಾಡುವ ಪರಿಗೆ
ನಿನ್ನಯ ಹೆಸರ ನಾನು ಬರೆದೆ!!
ಏಕೆ ಈ ತರ ನೀ ಬಂದು ಕಾಡುವೆ
ಹೊಸತಾದ ಈ ಬಗೆ ನೀ ತಂದೆ ಇಲ್ಲಿಗೆ!!

ಬೆರೆತ ಸನಿಹದಲ್ಲಿ ಕಲಹ
ಬಾರದಿರಲಿ ಎಂದಿಗೂ ಚೆಲುವ!!
ದಿನವೂ ಹೀಗೆಯೇ ಮನವು
ನಿನ್ನಯ ಒಲವ ಬೇಡಿದೆ!!

- ಪಿ.ಜಿ.ಜ್ಯೋತಿ

05 Oct 2017, 08:30 pm