Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸಾಗರದಂತೆ ತಿಳಿಯಾದ ನನ್ನ ಎದೆಯಲ್ಲಿ
ನೀ ಬಂದೆ ಪೂರ್ಣ ಚಂದಿರನ ಬಿಂಬದಂತೆ!!
ಸ್ವಚ್ಛಂದ ಮನಸಿನ ಕಾಗದದಲ್ಲಿ
ನೀ ಬರೆದೆ ಪ್ರೇಮ ಕವಿತೆ!!
ಈ ನನ್ನ ಎದೆಯ ಹೃದಯ ಮೃದಂಗ
ನುಡಿಸಿದ ವಾದ್ಯಗಾರ ನೀನು!!
ನನ್ನೊಳಗಿನ ಹೊಸ ಭಾವಕ್ಕೆ
ಜೀವ ತಳೆದ ಸಂಗೀತ ಲಹರಿಯು ನೀನು!!
ಅಂದು ಕಣ್ಣಲ್ಲೇ ನನ್ನ ಸೆಳೆದು
ಹೃದಯದ ಬಾಗಿಲು ಬಡಿದ ಪೋರ!!
ಸದ್ದಿಲ್ಲದೇ ಹೃದಯಕ್ಕೆ ಪ್ರವೇಶ ಮಾಡಿ
ಪ್ರೀತಿಯನ್ನು ಆಳುತ್ತಿರುವ ಹೃದಯ ಚೋರ!!
ಮುನಿಸು ಸಂಶಯ ಎಂಬ ಗಾಳಿಯೂ
ಸನಿಹ ಸುಳಿಯದಂತೆ ಜೊತೆಯಾದೆ ನೀನು!!
ನಿನಗಾಗಿಯೇ ಮಿಡಿಯುವ ಈ ನನ್ನ
ಹೃದಯದ ಪ್ರತಿ ಮಿಡಿತವೂ ನೀನೇ!!
ಸಾವಿರ ಬಯಕೆಗಳ ಕೂಡಿ ಹೆಣೆದಿರುವ
ಬದುಕಿನ ಸೂತ್ರ ಹಿಡಿದಿರುವವನು ನೀನು!!
ಈ ಜನುಮಕೆ ನನ್ನ ಜೊತೆಯಾದ
ಸಂಗಾತಿಯೇ ನಿನಗೆ ನನ್ನ ಕೋಟಿ ವಂದನೆ!!
- ಪಿ.ಜಿ.ಜ್ಯೋತಿ
07 Oct 2017, 09:20 pm
ಒಂದು ಮುಂಜಾನೆ
ಬೆಳದಿಂಗಳ ಚೆಲುವು!!
ನಿನ್ನ ಕಂಡ ಮೇಲೆ
ಕಣ್ಣು ಮಂಜಾಯಿತೇ ನನಗೆ!!
ಆ ಬೆಳಕಿನಲ್ಲಿ
ಸೂರ್ಯನ ಸುಳಿವು ಎಲ್ಲಿ!!
ನೀ ಬರಲು ಅಲ್ಲಿ
ಚಂದಿರನ ನಗು ಚೆಲ್ಲಿ!!
ಕಾರ್ಮೋಡ ಕವಿಯಿತೇ
ಕಣ್ಣು ಕತ್ತಲು ಕಟ್ಟಿತೇ!!
ಸುತ್ತಲೂ ಏನೂ ಕಾಣಲಿಲ್ಲ
ನೀ ಎದುರು ಬರುವಾಗ!!
- ಪಿ.ಜಿ.ಜ್ಯೋತಿ
07 Oct 2017, 09:19 pm
ಮುಟ್ಟಬೇಡ ಮುಟ್ಟಬೇಡ ಮೆಲ್ಲಗೆ
ನೀ ಮುಟ್ಟಿ ಚುಚ್ಚಬೇಡ ಸೂಜಿ ಮಲ್ಲಿಗೆ!!
ನಿನ್ನ ಅಂದ ಕಂಡು ಮರುಳಾಗೇ ನಾನು
ನಿನ್ನ ಬಣ್ಣ ಕಂಡು ಮೈ ಮರೆಯೇ ನಾನು
ನಿನ್ನ ಹೆಸರೇ ನುಡಿದಿಹುದು ಸೂಜಿ ಮಲ್ಲಿಗೆ!!
ಮುಟ್ಟಬೇಡ ಮುಟ್ಟಬೇಡ ಮೆಲ್ಲಗೆ
ನೀ ಮುಟ್ಟಿ ಚುಚ್ಚಬೇಡ ಸೂಜಿ ಮಲ್ಲಿಗೆ!!
ನಿನ್ನ ಘಮಕಕ್ಕೆಂದು ಮಾರು ಹೋಗೆ ನಾನು
ನಿನ್ನ ಸಲಿಗೆಗೆ ನನ್ನ ಸುಲಿಗೆ ಸಲ್ಲದು
ನಿನ್ನ ಸರಸಕ್ಕೆ ನನ್ನ ಮೋಹ ನಿಲುಕದು!!
ಮುಟ್ಟಬೇಡ ಮುಟ್ಟಬೇಡ ಮೆಲ್ಲಗೆ
ನೀ ಮುಟ್ಟಿ ಚುಚ್ಚಬೇಡ ಸೂಜು ಮಲ್ಲಿಗೆ!!
ನಿನ್ನ ಸ್ನೇಹವ ಬಯಸಿ ನಾ ಬಾರೆನು ಸನಿಹ
ನಿನ್ನ ಪ್ರೇಮದ ವರಸೆ ನೀ ದೂರಕೆ ಸರಿಸು
ನಿನ್ನ ಹೆಸರೇ ನುಡಿದಿಹುದು ಸೂಜಿ ಮಲ್ಲಿಗೆ!!
- ಪಿ.ಜಿ.ಜ್ಯೋತಿ
07 Oct 2017, 09:18 pm
ಮುದ್ದು ಮನಸಿನ ಪೆದ್ದು ಹುಡುಗಿಯು
ಕದ್ದು ಬಿಟ್ಟಳು ನನ್ನ ಮನಸನು!!
ಸದ್ದು ಮಾಡದೇ ಎದೆಗೆ ನುಗ್ಗಿ ತಾ
ಸೇರಿ ಬಿಟ್ಟಳು ನನ್ನ ಹೃದಯವ!!
ಈ ಹರೆಯದ ಬೇಲಿಯೊಳಗೆ
ನಾನು ಅವಳ ಕೈ ಗೊಂಬೆಯಾದೆ!!
ನನ್ನ ನಿದಿರೆಯ ಕನಸಿನಲ್ಲೂ
ಅವಳದೇ ರಾಜ್ಯಭಾರದ ಗುರುತು!!
ಹೆಚ್ಚೇನೂ ನಾ ಹೇಳದಾದೆ
ಅವಳ ಎದುರು ನಾ ಮೌನಿಯಾದೆ!!
ಪ್ರೀತಿ ಎಂಬ ಸೆರೆಯಲ್ಲಿ
ನಾ ಅವಳು ಮೆಚ್ಚಿದ ಪ್ರೇಮಿಯಾದೆ!!
- ಪಿ.ಜಿ.ಜ್ಯೋತಿ
07 Oct 2017, 09:17 pm
ಸಾವಿರ ಕಿರಣಗಳಿಂದ
ಹೊಳೆಯುವ ಬೆಳಕಿನ ಪುತ್ತಳಿ!!
ಸಾಗರದ ಅಲೆಗಳ ಮೇಲೆ
ನರ್ತಿಸುವ ಈ ಪರಿ!!
ಸಂಜೆಗೆಂಪಿನ ಸೊಗಸಾದ
ಬಣ್ಣದ ಓಕುಳಿ!!
ಚೆಲ್ಲಿರುವ ನೇಸರನು
ಪಡುವಣ ಕಡಲಿನಲಿ!!
ಕತ್ತಲು ಆಗುವ ಮುನ್ನ
ಸುತ್ತಲೂ ಕೆಂಬಣ್ಣ!!
ಮುಸ್ಸಂಜೆ ಹೊತ್ತಿನಲ್ಲಿ
ನೇಸರನ ಆ ವರ್ಣ!!
ಮುಗಿಲಿನಿಂದ ತಾ ಜಾರಿ
ಕಡಲಿನಲ್ಲಿ ಇಳಿದಿರುವ!!
ಇರುಳಿನಲ್ಲಿ ತಾ ಆರಿ
ಅಸ್ತಂಗತನು ಆಗಿರುವ!!
- ಪಿ.ಜಿ.ಜ್ಯೋತಿ
07 Oct 2017, 09:16 pm
ನನ್ನಮ್ಮ ಲಂಕೇಶರ 'ಅವ್ವ' ನಂತಲ್ಲ
ಕಾದಾಡಿ ಎಲ್ಲರೊಡನೆ ಗುದ್ದಾಡಿ ಗೆಲ್ಲುವುದ ತಿಳಿದವಳಲ್ಲ
ಫಲವತ್ತಾದ ಕಪ್ಪು ನೆಲ , ಬಿಳಿಯ ಹೂವಿನ ಹಬ್ಬವ ಕಂಡವಳಲ್ಲ
ಅಪ್ಪನ ಮೆಚ್ಚಿಸಿ ತೋಳ ಬಂದಿಯ ಗೆಲ್ಲುವ ಕನಸು ಆಕೆಗೆ ದಕ್ಕಲಿಲ್ಲ
ಮುಗ್ಧ ಪ್ರೇಮ ತುಂಬಿದ ನವಿರು ತನದ ಜೀವ
ಯಾರ ಕಂಡರು ಅವಳಿಗೆ ಪ್ರೀತಿ ಭಕ್ತಿ ಭಾವ
ಸಹನಾ ಮೂರ್ತಿ, ಕರಣೆಯಲಿ ಆ ಕಡಲ ರೀತಿ
ನೊಂದರು ಬೆಂದರು ಬರಡಾಗದ ವ್ಯಕ್ತಿತ್ವವೇ ಅವಳ ನೀತಿ
ಯಾರಾದರು ನೋಡೇನಾದರು ಅಂದರೆಂದು ಮನೆಯಿಂದ ಹೊರಗೆಜ್ಜೆ ಇಡಲು ಅಂಜಿಕೆ
ತನ್ನಾಸೆ ಕನಸ ಯಾರಾದರು ಕಂಡಾರೆಂದು ಹೊದಿಸಿದಳು ಹೊದಿಕೆ
ನೋವುಂಡರು ನಕ್ಕಳು, ನಗುವಿದ್ದಾಗಲು ಒಮ್ಮೊಮ್ಮೆ ಅತ್ತಳು
ಅಳುವವರ ಕಂಡಾಗ ಕಣ್ಣೀರ ಒರೆಸಿದಳು, ಹಸಿದವರ ಕಂಡಾಗ ಉಣ್ಣಲು ಬಡಿಸಿದಳು
ಗಂಡನ ದಬ್ಬಾಳಿಕೆ ಕಂಡ ನೋವನು ಪ್ರೀತಿಯಲಿ ಕರಗಿಸಿದವಳು
ತನ್ನವರೇ ಕೇಡ ಬಯಸಿದಾಗಲು ನಗುನಗುತಲೆ ಹರಸಿದವಳು
ಕಡು ಕಷ್ಟ ಕಂಡಾಗಲು ಕೂಗಾಡಲಾಗದೆ ಮೌನದಲೆ ಗೆದ್ದವಳು
ತನ್ನೊಳಗಿನ ಮಾತೆ ಗೌಣವಾದರು ತನ್ನೊಡಲ ಜೀವದಾಸೆಗೆ ಮಾತಾದವಳು
ಬಂದ ನೋವು ಕಷ್ಟವ ಸಹಿಸಿ ಜೀವನ ಪಾಠ, ಅಕ್ಷರದ ಬೆಳಕ ತೋರಿದವಳು
ಒಂದೊತ್ತು ಹಸಿದರು ಸ್ವಾಭಿಮಾನವ ತುಂಬಿದವಳು
ಕಥೆಯಾಗಿ ಮಹಾ ವ್ಯಕ್ತಿಗಳ ಚರಿತ್ರೆಯ, ಪಂಚತಂತ್ರದ ನೀತಿಯ ಕಲಿಸಿದಳು
ಬದುಕಿಗೆ ಕನಸ , ಆ ಕನಸುಗಳಿಗೆ ಗಟ್ಟಿ, ಶುದ್ಧತನವ ತೋರಿದವಳು
ತನ್ನೆದೆಯೇ ಸುಟ್ಟರು ಮಕ್ಕಳಿಗೆ ಕನಸುಗಳ ಬಿತ್ತಿದಳು
ದುಡಿದಳು,ಕೂಡಿಟ್ಟಳು, ಮನ ಮನೆಯ ಸಂಭಾಳಿಸಿದಳು
ತಾ ಕಾಣದೆ ದೂರಾದ ವಿಚಾರ,ಜ್ಞಾನ, ವಿಜ್ಞಾನ, ಸುಜ್ಞಾನವ ಮಕ್ಕಳೊಳಗೆ ಬೆಳೆಸಿದಳು
ತನ್ನೆಲ್ಲ ಬದುಕ ಮನೆ ಮಕ್ಕಳಿಗಾಗಿಯೆ ಧಾರೆ ಎರೆದವಳು
ಈ ನನ್ನಮ್ಮನಿಗೆ ಏನನು ಅರ್ಪಿಸುವುದು
ಜೀವವೊ, ಜೀವನವೊ, ನಗುವೋ ನನ್ನಳುವೋ
ಎಲ್ಲವೂ ಅವಳಿಂದಲೆ ಪಡೆದ್ದದ್ದು
ಅವಳ ಬಿಟ್ಟು ಏನಿಲ್ಲ ನನದೆಂದೂ ಉಳಿದದ್ದು
ಏನೆ ಅರ್ಪಿಸಿ ಸಮರ್ಪಿಸಿದರು ಅವಳ ಋಣವೆಂದು ತೀರದ್ದು
- ಶ್ರೀಕಾವ್ಯ
07 Oct 2017, 05:43 pm
ಹಿಮಾಲಯದಸ್ಟು ಎತ್ತರ ನಮ್ಮ ಸ್ನೇಹ,
ಬರಡಾದ ಬದುಕಿಗೆ ಭಾವನೆಗಳ ಚಿಲುಮೆ ಈ ಸ್ನೇಹ,
ಸೋತ ಮನಸಿಗೆ ಸ್ಪೂರ್ತಿ ಈ ಸ್ನೇಹ,
ನಡೆದಸ್ಟು ದೂರ ಜೊತೆಗಿರುವುದೀ ಸ್ನೇಹ,
ಕೊನೆಯೆಂಬುದ ಕಾಣದ ಈ ಸ್ನೇಹ,
ಪದಗಳಲಿ ಬರೆಯಲಾಗದ, ಮಾತಿನಲ್ಲಿ ಹೇಳಲಾಗದ ಈ ಸ್ನೇಹ,
ತನಗಾಗಿ, ತನ್ನವರಿಗಾಗಿ, ತನು ಮನವ ಧಾರೆಯೆರೆಯುವ ಸ್ನೇಹ,
ಅಡೆ ತಡೆ ಇಲ್ಲದೆ, ಕೊನೆ ಮೊದಲಿಲ್ಲದೆ, ಹಸ್ತ ಚಾಚಿದೆ ಈ ಸ್ನೇಹ,
ಆದಿಯನ್ನು ಮಾತ್ರ ಕಂಡು ಅಂತ್ಯವನ್ನೇ ಕಾಣದ ಈ ಸ್ನೇಹ,
ಎಂದೆಂದೂ ಶಾಶ್ವತವಾಗಿರಲು ಈ ಸ್ನೇಹ.....
- ರಾಜೇಶಕಿಚ್ಚ
07 Oct 2017, 04:55 pm
ಸುಮ್ಮನೆ ಗುನುಗುತ್ತಿದೆ.
ಸರಿಗಮ ಸಂಗೀತ.
ನನ್ನೆದೆಯ ಏಕಾಂತದಲಿ...
ನೀ ನಿರದ ನೀರವದಲಿ
ನಿನ್ನ ನೆನಪಿನ ಕಲರವ.
ಸದ್ದಿಲ್ಲದೆ ಪಿಸುಗುಡುವ
ನನ್ನ ಮೌನದಲಿ
ಹಾಡಾಗು ಬಾ ನೀ ಹುಡುಗಿ...!
. . . . . .
- ರಾಜೇಶಕಿಚ್ಚ
07 Oct 2017, 04:53 pm
ಅಪರಿಚಿತರಾಗಿಹ ನಮ್ಮನ್ನು ಪರಿಚಿತರಾಗಿಸಿ
ಎಲ್ಲರನ್ನು ಒಂದಾಗಿಸಿದೆ ಕಲರವ
ಸುಃಖ ದುಃಖಗಳನ್ನು ಹಂಚಿಕೊಂಡು
ಮರೆಯುತ್ತೇವೆ ನಮ್ಮ ನೋವ!
ತಮ್ಮ ನೋವುಗಳ ಹಂಚಿಕೊಂಡರೆ
ಸಮಧಾನದ ನುಡಿಗಳನ್ನು ಹೇಳುತ್ತ
ನೋವಿನ ಮನಸುಗಳಿಗೆ
ಮುಲಾಮು ಹಾಕುವರು ನಗಿಸುತ್ತ!
ಜಾತಿ ಮತ, ಮೇಲು -ಕೀಳು ಎನ್ನುವ
ಭೇದ ಬಾವವಿಲ್ಲದ ನಮ್ಮ ಕುಟುಂಬ.
ಅಕ್ಕ-ತಂಗಿ, ಅಣ್ಣ-ತಮ್ಮ
ಸ್ನೇಹಿತರಿರುವರೆಲ್ಲ ತುಂಬ ತುಂಬ!
ಕವಿ ಮನಸುಗಳಿಗೆ ವೇದಿಕೆಯಾದರೆ
ಓದುವ ಖುಷಿ ಸಿಹಿಮನಸುಗಳಿಗೆ.
ಎಷ್ಟೇ ವರುಷಗಳು ಕಳೆದರೂ
ನಮ್ಮ ನಿಮ್ಮ ಕಲರವದಲಿ
ಬಾಂಧವ್ಯದ ನಂಟು ಹೀಗೆ ಇರಲಿ!
- ಪ್ರಿಯಾಂಕ
06 Oct 2017, 09:43 pm
ಮದುರ ಮದುರ ನಿನ್ನ ಗಾನ
ಆ ಗಾನದೂಳಗೆ ಇಹುದು
ಸುಂದರ ತಾಣ.......
ಸುಂದರ ಸುಂದರ ನಿನ್ನ ನಗು
ಆ ನಗುವಿನಲಿ ಇರುವುದು
ಪ್ರೀತಿಯ ಬಾಣ.....
ಯಾರಿಗೂ ಕಾಣದ
ಸುಂದರ ದೆವತೆ ನೀನು
ನಿನಗಾಗಿ ಕಾಯುತಿರುವೆ ನಾನು......
ನಿನ್ನ ಮನ ನನ್ನ ಮಾತು
ನಿನ್ನ ನುಡಿ ನನ್ನ ಕನಸು
ನಿನು ಇರದೆ ನಾನು ಇಲ್ಲ
ಎಲ್ಲಿರುವೆ ನೀನು........
ಕಾಣದ ಮನಸೆ.........
- ರಾಗಸಿರಿ....
06 Oct 2017, 09:30 pm