Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕುರುಡು ಮನಸ್ಸು.....

ಎಲ್ಲವನ್ನು ಅರಿಯುವ ಮನಕೆ
ಅಂದಕಾರವೆ ತುಂಬಿದೆ
ಮನಸೆ ಕತ್ತಲಿನೆಡೆಗೆ ನಡೆಯುವಾಗ
ಬೆಳಕ ತರುವವರು ಯಾರು
ಮನಸ್ಸಿಗೆ ಕಣ್ಣಿಲ್ಲವಾದರೆ
ಮನಕ್ಕೆ ಕಣ್ಣಾಗಿ
ಬೆಳಕಿನೆಡೆಗೆ ದಾರಿ ತೂರುವ ಮನವ
ನೀ ಎಲ್ಲಿರುವ..........

- ರಾಗಸಿರಿ....

16 Oct 2017, 01:30 pm

ಬಣ್ಣದ ಲೇಖನಿ

ಚೆಂದದ ಲೇಖನಿ ಕೈಯಲ್ಲಿದ್ದರೂ
ನೋವಿನ ಗುರುತುಗಳು ಮನಸ್ಸಲಿತ್ತು.
ಉಡುಗೊರೆಯಾಗಿ ನೀ ಕೊಟ್ಟ ಪುಸ್ತಕ
ನನ್ನತ್ತಲೇ ಕೈಬೀಸಿ ಕರೆದಿತ್ತು!

ಒಲ್ಲದ ಮನಸಿನಿಂದ ಬರೆದ ಸಾಲುಗಳು
ಕಣ್ಣೀರಿನಲಿ ಕರಗಿ ಹೋಗಿರಲು
ನನ್ನ ಕನಸುಗಳೆಲ್ಲ ಚೂರಾದ ಹಾಗೆ
ಉಂಡೆಯಾಗಿ ಕಸದ ಮೂಲೆ ಸೇರಿದ್ದವು!

ಮತ್ತದೇ ಲೇಖನಿಯ ಹಿಡಿದು
ಹೊಸದಾದ ಹಾಳೆಯಲ್ಲಿ ಗೀಚಿದ್ದೆ
ಹೃದಯದ ಭಾವನೆಗಳ ಸೇರಿಸಿ
ಮುದ್ದಾದ ಕವನವ ರಚಿಸಿದ್ದೆ!

ಬಣ್ಣಬಣ್ಣದ ಲೇಖನಿ ನನ್ನಲಿದ್ದರೂ
ಬದುಕಿನ ಬಣ್ಣ ಮಾಸಿಹೋಗಿತ್ತು.
ಪ್ರೀತಿಸುವ ಮನಸುಗಳು ದೂರಾಗಿದ್ದರೂ
ದಪ್ಪ ಪುಸ್ತಕದ ಮತ್ತಷ್ಟು ಪುಟಗಳು
ನನಗಾಗಿ ಕಾಯುತಲಿತ್ತು!

ಪ್ರಿಯಾಂಕ✍

- ಪ್ರಿಯಾಂಕ

16 Oct 2017, 01:26 pm

ಉಸಿರು ನಿಂತ ಮೇಲೆ....

ಎಂದು ಕಾಣದ ನೂವು
ನನಗೆ ಇಂದು
ನಿನ್ನ ಯ ಪ್ರೀತಿ ಯ ಮಾತು
ಮಂಜಿನಂತೆ ಕರಗಿ ಹೂಯಿತೆ
ನಿನ್ನ ಆ ಮುದ್ದು ಮನಸು
ಮಾಯ ವಾಗಿ ಹೂಯಾತೆ
ನನ್ನ ಮಾತು ಬೇಡವೆನಿಸಿತೆ
ನಿನ್ನ ನೀನೆ ಮರೆತು ಬಿಟ್ಟರೆ
ಉಳಿಯುವುದಾದರು ಹೆಗೆ
ಅಂದಿನ ಮನಸ್ಸು ಇಂದು
ಬಾಡಿದ ಹೂ ಆಯಿತೆ
ತಿಳಿಯುವುದಾದರು ಹೇಗೆ
ತಿಳಿಸುವೆಯ ಗೆಳೆಯ
ನನ್ನ ಪ್ರೀತಿ ಕಷ್ಟ ವಾಗಿ ಹೂಯಿತೆ
ತಿಳಿಸಿ ಬಿಡು ಒಮ್ಮೆ
ಮೌನದಿ ಕೂಲ್ಲುವ ಬದಲು
ತಿಳಿಸಿ ಬಿಡು ನಿನ್ನ ಮನದ ಅನುಮಾನವ
ನಾನೆ ನಿನ್ನ ಮಡಿಲಿನಲ್ಲಿ ಬಿಟ್ಟು ಬಿಡುವೆ
ಈ ಜೀವವ..............
ತಿಳಿಸಿ ಬಿಡು ಒಮ್ಮೆ ಈ ಜೀವದ ಹಕ್ಕಿ ಹಾರಿ ಹೂಗುವ ಮುನ್ನ.......
ನಿನ್ನ ಮನದ ಕಲಹವ.........
ಈ ಉಸಿರು ನಿಂತ ಮೇಲೆ
ಅರ್ಥವಾಗ ಬಹುದೆ ನನ್ನ ಮನಸ್ಸು........
ಈ ಜೀವದ ಜೀವವೆ ನೀನು ...........

- ರಾಗಸಿರಿ....

16 Oct 2017, 01:00 pm

........

ಕಣ್ಣ ಕಣ್ಣ ಹೋಸ ಭಾಷೆಯ ಅರಿತು
ಸಣ್ಣ ಸಣ್ಣ ಪ್ರೇಮ ಪಾಠವ ಕಲಿತು
ಹಾಲು ಜೇನಿನಂತೆ ಬೇರೆತು
ಪ್ರೀತಿಸೋಣ ಜಗವ ಮರೆತು

- Shilpa

16 Oct 2017, 08:58 am

ಭಯ

ಯಾವ ಪುರುಷಾರ್ಥಕ್ಕೆ ಈ ಕುಲಗೇಡಿ
ಹುಚ್ಚು ಭಯ ಅವಿತು ಕುತಿದೆ ನನ್ನಲ್ಲಿ ನನ್ನ ಮನಸ್ಸನ್ನೇ ತವರಂತೆ ಮಾಡಿಕೊಂಡು¿?

ಸ್ವಾರ್ಥಿಗಳ ಕೈಹಿಡಿದು ಕರೆತರುವುದು ನನ್ನೆಡೆಗೆ ತಾನಿರುವೆನೆಂದು ಪ್ರತಿಕ್ಷಣವು ನನ್ನ ಕೊಂದು ಹೆದರಿಕೆಯಿಂದ ಸ್ವಾರ್ಥಕ್ಕೆ ದುರಾಸೆಗೆ ಉಸಿರು ನೀಡಲೆಂದು ನನ್ನ ಹಿಂಸಿಸಲೆಂದು¿?

ಕೂಗಿ ಕೂಗಿ ಹೇಳುತ್ತಿದೆ ನನ್ನ ಮನ ನಿನ್ನ ಸ್ವಾತಂತ್ರ್ಯ ಅರಿಸುತ್ತಿದೆ ಈ ಭಯಾನಕ ಭಯವೆಂದು ದೂರ ತಲ್ಲಿ ನಿನ್ನ ನಗುವು ಕಳೆದೊಗದಂತೆ ಕಾಪಾಡಿಕೊ ಎಂದು¿?

ಸ್ನೇಹ ಪ್ರೀತಿ ಬಂಧನಗಳು ನಿನಗೆ
ಕೊಡಬೇಕಾದ್ದು ಸಂತೋಷ ಕರುಣೆ ಇಲ್ಲದ ಕಠೋರ ನರಕವಲ್ಲ ಬಿಟ್ಟು ಬದುಕು ನಿನ್ನಲ್ಲಿನ ತಾಳ್ಮೆ ತಂದಿಟ್ಟಿಕೊ ನಿನ್ನ ಸ್ವಾರ್ಥಕ್ಕೂ ಒಂದು ರೂಪ ಅವರಂತೆ ಎಂದು¿?

ಭಯ ಹುಟ್ಟಿಸುವ ಯೋಚನೆಗಳು ನಿನ್ನೊಳಗಿನ
ಕಣ್ಣೀರಿನ ಮೂಲಕ ಹಾದು ಹೋಗುವ ಮುನ್ನ ಅಡ್ಡಿಯಾಕು ನಿನ್ನಲ್ಲಿನ ಧೈಯವನ್ನು.
ಕಿತ್ತೆಸೆಯಾಲು ವಿಷಪೂರಿತ ಭಯವೆಂಬ ಪಾಷಣವನ್ನು ರೂಪವಿಲ್ಲದೆ ಸಾಯಿಸಾಕಲೆಂದು¿?

- ಚುಕ್ಕಿ

15 Oct 2017, 11:22 pm

ಯಾರವಳು.....

ತುಂಟ ನಗೆಯನ್ನು ಚೆಲ್ಲಿ
ಕಣ್ಣಲ್ಲೇ ನನ್ನ ಸೆರೆಯಾಗಿಸಿ
ನನ್ನ ಇರುವಿಕೆಯನ್ನು ಮರೆಸಿ
ಮರೆಯಾಗಿಬಿಟ್ಟಳಲ್ಲ, ಯಾರವಳು!

ಅವಳ ಏಕಾಂತವ ಬಯಸಿ ಮನವಿಂದು
ಹುಚ್ಚನಂತೆ ಅಲೆಯುತ್ತಿದೆ,
ಸಮಯದ ಅರಿವು ಇಲ್ಲದಂತೆ
ನನ್ನ ಕೊಲ್ಲುತ್ತಿದ್ದಳಲ್ಲ, ಯಾರವಳು!

ಬೀಸುವ ತಂಗಾಳಿಯ ಜೊತೆಯಲ್ಲಿ
ತನ್ನುಸಿರನು ಸೇರಿಸಿ
ಸದ್ದಿಲ್ಲದೆ ನನ್ನುಸಿರಿನಲಿ ಬೆರೆತು
ಹೃದಯವ ಕದ್ದಳಲ್ಲ, ಯಾರವಳು!

ಕಣ್ಣರೆಪ್ಪೆಯೊಳಗೆ ಅಡಗಿ ಕುಳಿತವಳು
ಕಣ್ತೆರೆದರೆ ಕಾಣಿಸದವಳು
ಕನಸಲ್ಲೂ ಕಾಡುತಿಹಳು
ಹುಡುಕಿದರೆ ಸಿಗದವಳು, ಯಾರವಳು!

- ಮಳೆಯಲ್ಲಿ ಜೋತೆಯಲ್ಲಿ

15 Oct 2017, 09:07 pm

ನನ್ನವಳು

ನಾನೊಂದು ಕೊಂಡಿದ್ದೆ
ಅವಳು ನನ್ನ ಬಾಳ ಉಸಿರಿನ
ಮೆಡಿಸಿನ್

ಹೆಚ್ಚು ಸಮಯ ಬೇಕಾಗಿರಲಿಲ್ಲ
ಅವಳು ಬಿಸಿ ಉಸಿರು ನಿಲ್ಲಿಸೋ
ಪಾಯಿಸಿನ್

-ಎಸ್ಕೆ

- ಎಸ್ಕೆ

15 Oct 2017, 08:47 pm

ನಾನು.............

ಯೋಧನ ಗುಂಡಿಗೆಯಲ್ಲಿ ಕುಂತು ನಾನು
ದೇಶ ಕಾಯುವೆನು ..... ನಾನು
ದೇಶದ ಒಳಿತಿಗಾಗಿ ಪ್ರಾಣವನ್ನು
ಅರ್ಪಿಸುವೆನು ನಾನು

ತಾಯಿಯ ಮನದಲ್ಲಿ ನಿಂತು ನಾನು
ಪ್ರೀತಿಯನು ದಾರೆಯೆರೆಯುವೆನು. ನಾನು
ಕೊನೆಯವರೆವಿಗೂ ಬೆರೆಯವರಿಗಾಗಿ
ಬಾಳುವೆನು. ನಾನು

ರೈತನ ಬೆವರಿನಲ್ಲೂ ನಾನು
ನೇಗಿಲ ಬದಿ ನಿಂತು ಉಳುವೆನು ನಾನು
ಭೂಮಿಯಲ್ಲಿ ಫಲ ತೆಗೆಯಲು
ಅನ್ಯರ ಹಸಿವಿಗಾಗಿ ನಾನು

ಕಾರ್ಮಿಕರ ಭುಜ ಬಲದಲ್ಲೂ ನಾನು
ಹಗಲು ಇರುಳು ದುಡಿವೆನು ನಾನು
ದೇಶದ ಆರ್ಥಿಕತೆಯ ಉದ್ಧಾರಕ್ಕಾಗಿ
ಏಳಿಗೆಗಾಗಿ............. ನಾನು

ಕವಿಗಳ ಕನಸುಗಳಲ್ಲಿಯೂ ನಾನು
ಕನಸುಗಳನ್ನ ಕವಿತೆಗಳಾಗಿ ರೂಪಿಸಲು ನಾನು
ಸಾಹಿತ್ಯದ ಬೆಳವಣಿಗಾಗಿ
ಶ್ರಮಿಸುವೆನು ......... ನಾನು

ಸಮಾಜ ಕಂಟಕರಲ್ಲೂ ನಾನಿರುವೆನು
ಪ್ರಪಂಚದಲ್ಲಿಅಶಾಂತಿ ಉಂಟುಮಾಡುವ ನಾನು
ಕೊನೆಗೆ ಬಲಿಯಾಗುವೇನು........ನೀನು
ಎಂಬುವ ವೀರನಿಂದ ನಾನು

ನೀವು ಬಳಸಿಕೊಂಡಂತೆ ...............ನಾನು



------- ಮಂಜು

- ಮಂಜು

15 Oct 2017, 06:16 pm

ಕಣ್ಣು

ಕಣ್ಣು ಮನುಷ್ಯನ ಇನ್ನೊಂದು ಮುಖ .....
ನಮ್ಮ ಮನಸ್ಸಿನಲ್ಲಿರೊ ನೋವಿಗೆ ಸ್ಷಂದಿಸುವ ಇನ್ನೊಂದು ಜೀವ .....

ಮನಸ್ಸಿಗೆ ನೋವಾದ ತಕ್ಷಣ ಕಣ್ಣಿರಾಗಿ ಹೋರ ಬಂದು ಸಮದಾನ ಮಾಡುವ ಸ್ನೇಹಿತ ......
ಮನಸ್ಸಿಗೆ ತುಂಬ ಹತ್ತಿರವಾಗಿರುವ
ಮೋಸ ಮಾಡದೆ ಇರುವ ಒಂದು ಜೀವ ...

ಕಣ್ಣಿನ ಭಾಷೆ ತಿಳಿದವರು ಯಾರು ???
ಕಣ್ಣಲ್ಲಿ ಕಾಣೊ ಖುಷಿ ನೋಡುತ್ತಾರೆ ಆದರೆ
ಮನಸ್ಸಿನಲ್ಲಿರೋ ನೋವನ್ನು ತಿಳಿಯುವವರು ಯಾರು???

- Shilpa

15 Oct 2017, 11:56 am

ಒಲವಿನ ಭೇಟಿ !

ನಿನ್ನನು ನೋಡುವ ಹಂಬಲವೇನೋ
ತುಂಬಲಾರದ ಹೃದಯದೊಳು,
ನನ್ನೊಳ ಬೇಗುದಿ ಕುದಿಯುತಲಿಹುದು
ತನ್ನೊಳ ತಾನೇ ಹಗಲಿರುಳು.

ಇಂದಿನ ಮಿಲನ, ಸ್ನೇಹದ ತನನ
ಎಲ್ಲಾ ಆ ಕ್ಷಣ ಸಂಪದವು,
ಒಬ್ಬರನೊಬ್ಬರು ಅರಿಯುತಲಿದ್ದರೆ
ಬಲ್ಲೆವು ನಮ್ಮನು ಅನುಕ್ಷಣವು.

ಬುಜಕೆ ತಲೆಯನು ಆನಿಸಿ ಚೆಲುವಿ
ಕೊಟ್ಟಳು ಮುಗುಳ್ನಗೆ ಮನ ಪಟಕೆ,
ಪಟ್ಟಳು ನೆಮ್ಮದಿ, ಇತ್ತಳು ಹೊನ್ನುಡಿ
ಮನಸು ಜಾರಿತು ಸಂಭ್ರಮಕೆ..

ಮೃದು ಮಲ್ಲಿಗೆ ಹೂ, ಕರಗಳ ಪಿಡಿದು
ಪಟ್ಟೆನೋ ನಾನು ಚಡಪಡಿಕೆ,
ಕೊಟ್ಟೆನೋ ಮುತ್ತ, ಕೆನ್ನೆಯ ಸುತ್ತ
ಪಡೆದಳೋ ಚಂದ್ರಿಕೆ ನಸು ನಾಚುತ್ತ..

ನನ್ನದು ಬಡತನ, ನಿನ್ನದೋ ಬಂಧನ
ಎರಡೂ ಮೀರುವ ಬಾ ಗೆಳತಿ,
ದುಡಿಯುತ ಹಾರುವ, ಎತ್ತರಕೇರುವ
ಎಲ್ಲವ ಮರೆತೂ ಬಾನಬಕೆ...

- ಶ್ರೀಗೋ.

15 Oct 2017, 12:35 am