ಎಲ್ಲಿಹೋದೆ ಜೀವನೀನು ಮತ್ತೆ ಬರದೆ ಮರಳಿ ಮನೆಗೆ ಮೌನದ ಮುಸುಕುಹಾಕಿ ಕಣ್ಣುಮುಚ್ಚಿ ಭದ್ರವಾಗಿ ಎಲ್ಲರನ್ನು ಬಿಟ್ಟುನೀನು ಒಂಟಿಯಾಗಿ ಹೊರಟುಹೋದೆ..... ಮತ್ತೆ ಬರದೆ ಮರಳಿ ಮನೆಗೆ ಚುಕ್ಕೆಚಂದ್ರ ಅಲ್ಲೇಇವೆ ನೆಲಜಲ ಇಲ್ಲೇಇವೆ ರಾತ್ರಿಹಗಲಿನ ಸರಧಿಯಲ್ಲೀ ಕಾಲನ ಪರಧಿಯಲ್ಲಿ ಹಕ್ಕಿಯಂತೆ ಹಾರಿಹೋದೆ .......... ಮತ್ತೆ ಬರದೆ ಮರಳಿ ಮನೆಗೆ ಕಣ್ಣಂಚಿನನೀರು ಕಣ್ಣಲ್ಲೇ ಹೆಪ್ಪುಕಟ್ಟಿ ದುಖಃದೀಕಾಮೋ೯ಡ ಕತ್ತಲೆ ಕವಿದಿರಲು ಮಾತೆಲ್ಲ ಮೂಕವಾಗಿ ನೂಕುತಿರುವ ದಿನಗಳು ಹೋದೆ ದೂರ ದೂರಕೇ ಎಲ್ಲರನ್ನು ಬಿಟ್ಟುನೀನು.
ಮತ್ತೆ ಬರದೆ ಮರಳಿ ಮನೆಗೆ
ಮಂದಸ್ಮಿತ ಮುಗುಳ್ನಗೆಗೆ ಮನ ಸೋತು ನಿಂತಿಹೆನು,
ನನ್ನ ಮನಸ್ಸಿಗ ಕಳುವಾಯಿತು ನಿನಗೆ ಕಾಣದೆನು....? ಕಂಡಿಹೆನು ನನ್ನ ಮನಸ್ಸಾ ನಿನ್ನ ಹೃದಯ ಸೆರೆಯಲ್ಲಿ, ನನಗಲ್ಲಿಂದ ಬಿಡುಗಡೆಯೇ ಇಲ್ಲವೇನು...? ಬಿಡುಗಡೆಯು ಎಕೆನಗೆ ಇರಲು ಸುಖ ಸೆರೆಯಲ್ಲಿ,
ಅದರಲ್ಲಿಯೇ ಇರಗೊಡು ನನಗೆ ನಿನ್ನ ಮನಸಲಿ,
ಸೆರೆಯಲ್ಲ ತುಂಬಿರಲು ಪ್ರೀತಿ ಸುಮದ ಸೌಗಂಧ,
ಆ ಸೌಗಂಧವನು ಹೀರುತಿಹೆ ಹೃದಯ ಅಂತರಾಳದಿಂದ..
ಎಂದು ನೋಡುವೆನು ಮರಳಿ ನಿನ್ನ
ನೊಂದು ಹೋಗಿಹುದು ಮನವು ಚಿನ್ನ
ದೂರದೂರಿನಲಿ ಇದ್ದರೂ ನಾನು
ಮುತ್ತುವುದು ನಿನ ನೆನಪು ಸಿಡಿದಂತೆ ಜೇನು.
ಚುಚ್ಚಿದರೂ, ಕಚ್ಚಿದರೂ ಹಿತವುಂಟು ನೋವಲ್ಲಿ
ಜೇನ ಹುಟ್ಟಿನ ಸಿಹಿಯ ಸವಿದಂತೆ ಬಾಯಲ್ಲಿ
ಒಂದು ಕ್ಷಣ ಬಿಡುವಿಲ್ಲ,
ನನ್ನೆದೆಯು ದಣಿದಿಲ್ಲ
ನಿನ್ನ ಸವಿ ನೆನಪುಗಳ ಬಾರವನು ಹೊತ್ತು,
ನಡೆಯುವೆನು ಎಲೆ ಹುಡುಗಿ ಆದಷ್ಟು ಹೊತ್ತು
ನಾನೇನೋ ತಾಳುವೆನು ಒತ್ತರಿಸಿ ಬರುವ
ನಿನ್ನೊಲವ ನೆನಪುಗಳ ಪ್ರೀತಿ ಒದೆತ,
ತಾಳುತ್ತಿಲ್ಲ ಹುಡುಗಿ ಕಣ್ಣೀರ ಹನಿಗಳು
ಒತ್ತರಿಸಿ ಜಿನುಗುತ್ತಿಹವು ಸತತ ಒರೆತ.
ಮರೆಯಲಾರೆನು ಚೆಲುವಿ
ನಾನೆಲ್ಲಿದ್ದರೂ ಕೂಡ ನಿನ್ನ ಪ್ರೀತಿಯ,
ನನ್ನ ಹೊಸ ಲೋಕಕೆ ದೂಡಿದ
ನಿನ್ನೊಲವ ಪ್ರೀತಿಯ ಮೋಡಿಯ.
ಭಾವ ಪತಂಗವವ
ಅಲೆದಾಡಲು ಬಿಟ್ಟೆ
ಕೂಡಿಹಾಕಿದ್ದೆ ಕತ್ತಲಲ್ಲಿ
ಕಣ್ಣೀರು ಬರುವುತನಕ
ಕೊನೆಗೆ ಕಾಡಿ ಬೇಡಿದಾಗ
ಮನ ಕರಗಿ ಬಿಟ್ಟು ಬಿಟ್ಟೆ
ಅಲೆದಾಟ ನಂಗಿಷ್ಟವೆಂದಲ್ಲ
ಆದರೆ ತೋರಿಕೆಯ ಜನರ
ನಡುವಿನ ಬಾಳು ಸಹ್ಯ ಎನಿಸುವುದಿಲ್ಲ
ಆಗೇ ನೋಡಿದರೆ ನಾನು ಅಲೆಮಾರಿಯೇ
ಇಲ್ಲಿಯವರೆಗೂ ಕಳೆದಿದ್ದೆ ನನ್ನ ಹುಡುಕುತಾ
ಮನದ ಉದ್ದಂಗಲಕು ಹುಚ್ಚನಂತೆ ಅಲೆದಾಡಿದ್ದೆ
ಅರಸುತ ಉತ್ತರವ,ಆದರೆ ದೊರೆತಿದ್ದಿಲ್ಲ
ವರ್ಷಗಳು ಉರುಳುತಿದ್ದರು
ನಿಂತಿದ್ದೆ ನಾನು ಕಲ್ಲು ಬಂಡೆಯಂತೆ
ಯಾವುದುಕು ಸ್ಪಂದಿಸದೆ,ಉತ್ತರಿಸದೆ
ಅಭ್ಯಾಸವಾಗಿತ್ತು ಆ ಒಂಟಿ ಸಹವಾಸ
ಭಾವ ಬಂಧವನ್ನು ಕಟ್ಟಿಹಾಕಿದ್ದೆ
ಅದು ಕಿರುಚಿ ಗದ್ದಲೆಬ್ಬಿಸಿದಾಗ
ಕೋಣೆಗೆ ಚಿಲಕ ಹಾಕಿ ಹೊರಬಂದಿದ್ದೆ
ವಿಕೃತನಾಗಿದ್ದೆ ಕಟುಕನಾಗಿದ್ದೆ
ಭಾವ ದುಃಖದಿಂದ ಅಳುತಿದಿದ್ದರೆ
ಗಹಗಹಸಿ ನಗುತಿದ್ದೆ ಕಾರಣವಿಲ್ಲದೆ
ಮರುಕ್ಷಣವೇ ಅಳುತಿದ್ದೆ ಏನು ಗೊತ್ತಾಗದೆ
ಖುಷಿಯೆಂಬ ಪದವು ನನ್ನ ಮರೆತಂತಿತ್ತು
ಅದಕೇನು ಗೊತ್ತು,ದುಃಖವೊಂದೇ ನನ್ನ ಸ್ವತ್ತು
ಕಣ್ಣೀರಿಗೂ ನನ್ನ ಕಂಡರೆ ಭಯವು
ಎಂಥ ಕಷ್ಟದಲ್ಲಿಯೂ ನನ್ನ ಬಳಿ ಸುಳಿದಿದ್ದಿಲ್ಲ
ಆದರೆ ಕತ್ತಲಲಿ ಕೊರಗಿ ಸೊರಗಿದ್ದ
ನನ್ನ ಭಾವವನು ನೋಡಿ ಸುರಿಯತೊಡಗಿತು
ಕಣ್ಣು ಆ ಕಣ್ಣೀರ ಮಳೆಯಲಿ ನೆನದು ನಗುತಿತ್ತು
ಕರಗಿಬಿಟ್ಟೆ ಕೊನೆಗೆ ಆ ದೃಶ್ಯ ವೈಭವಕೆ
ಅಲೆದಾಡಲು ಬಿಟ್ಟೆ, ಭಾವವೆಂಬ ಬಣ್ಣದ ಚಿಟ್ಟೆ ..
ಗಾದೆಪ್ಪ