Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಷ್ಷಷ್ಟೇ...

ನಿಮ್ಮ ಮಾತಿನಂತೆ
ತಾಜ್ ಮಹಲ್
ಪ್ರವಾಸಿ ತಾಣವಲ್ಲ
ಆರಾಧನಾಲಯವಲ್ಲ
ಪ್ರೇಮ ಸೌಧವಲ್ಲ
ಅದು ಏನೇನೂ ಅಲ್ಲ
ಅದಕ್ಕೊಂದು
ಇತಿಹಾಸವೂ ಇಲ್ಲ....

ಇರಲಿ...ಈಗ
ವಿಷಯ ಅದಲ್ಲ !!!

ಕಣ್ಮನ ತುಂಬಿಕೊಳ್ಳಲು
ಬರುವ ಪ್ರವಾಸಿಗರಿಗೆ
ಈ ಪೊಳ್ಳು ವಾದಗಳ
ಅಲ್ಲ - ಇಲ್ಲಗಳ
ಆವಶ್ಯವೂ ಇಲ್ಲ !!!!

ಕಲಾಭಿಮಾನಿಗಳಿಗದು
ಬರೇ ತಾಜ್ ಅಷ್ಟೇ ..
ತಾಜ್ ಮಹಲ್
ಅಷ್ಟೇ .. ಅಷ್ಟಷ್ಟೇ...

✍ ಅಲ್ತಾಫ್ ಬಿಳಗುಳ

- ಅಲ್ತಾಫ್ ಬಿಳಗುಳ

19 Oct 2017, 12:53 pm

ಮಹಲ್

ಮಹಲಿನೊಳಗೆ
ಮುಮ್ತಾಝಿನ
ಗೋರಿಯಿದೆ
ಇರಲಿ ಬಿಡಿ ಅದು
ಷಹಜಾನಿನ ಪ್ರೀತಿ...

ಜಗತ್ತಿನ ಎಲ್ಲ
ಮಹಲುಗಳನ್ನು
ಕೆದಕಿ ನೋಡಿದರೂ
ಪ್ರೀತಿ, ಪ್ರೇಮದ ಜೊತೆ
ಕಾಣಸಿಗುವುದು
ರಕ್ತಸಿಕ್ತ ಚರಿತ್ರೆಯೇ...

ದೇಶಕ್ಕೆ ಬರುವ
ವಿದೇಶಿಯರು
ನಮ್ಮ ಕೊಳಗೇರಿಯ
ಜೊತೆ ತಾಜ್ ಮಹಲನ್ನು
ನೋಡುತ್ತಿದ್ದಾರೆ

ವ್ಹಾವ್, ,ತಾಜ್...
ಅದು ನಮ್ಮ ಹೆಮ್ಮೆ
ಕದಡಬೇಡಿ ಮನಸ್ಸನ್ನು
ಕಲೆಯನ್ನು ಆಸ್ವಾದಿಸಿ...


ಅಲ್ತಾಫ್ ಬಿಳಗುಳ

- ಅಲ್ತಾಫ್ ಬಿಳಗುಳ

19 Oct 2017, 12:01 am

ಮಾತಾಡು ಗಿಳಿಯೇ

ಪಂಜರದ ಗಿಳಿ ಯಾಕೆ ಮೌನವಾಯಿತೋ
ಪಂಜರದೊಳಗೇ ಮಾತು ಹುದುಗಿ ಹೋಯಿತೋ.
ಅರೆಕ್ಷಣವೂ ಬಿಟ್ಟಿರದೆ, ಅಲಾಪಿಸುತ್ತಿದ್ದ ಗಿಳಿ
ಅರಮನೆಯ ಕಂಬಿಯೊಳಗೆ ಬಂದಿಯಾಯಿತೋ.

ಅಂತಿಂತ ಗಿಳಿಯಲ್ಲ, ನನ್ನ ಮುದ್ದಿನ ಗಿಳಿ
ಅನುಬಾವ ಬಂಧುರವ ಬೆಳೆಸಿಕೊಂಡಂತ ಗಿಳಿ
ಇಂದೇಕೋ ಮೌನವಾಗಿ ಹಾರಿ ಹೋಯಿತೋ,
ಬಂಧನದ ಈ ಪ್ರೀತಿ ಬೇಡವಾಯಿತೋ..

ಇಷ್ಟು ಕಾಡಿಸ ಬೇಡ, ಪಂಚ ವರ್ಣದ ಗಿಳಿಯೇ
ಬಿಟ್ಟು ಹೋಗಲು ಬೇಡ ಅಂತರಂಗದ ಸಕಿಯೇ
ನೀನಿಲ್ಲದಾ ಮನಸು ಭಾರವಾಯಿತೋ,
ನಿನ್ನ ದನಿ ಕೇಳದಾ ಹೃದಯ ಸೋತು ಹೋಯಿತೋ..

- ಶ್ರೀಗೋ.

18 Oct 2017, 11:16 pm

ದೀಪಾ ಹೋಳಿಯ ಪ್ರದೀಪ

ಜೀವ ಜ್ಯೋತಿ ಬೆಳಗಲಿ ಬೆಳಕಿನ ದೀಪ
ದೀಪ ದೀಪ ಬೆಳಗಲಿ ಬಾಳ ಕಿರಣದ ದೀಪ..

ಹಣತೆ ಹರಡಲಿ ಆನಂದವ ಬೆಳಗೊ ದೀಪ
ಮಾನುಷ್ಯ ಅಹಂಕಾರ ಅಂಧತ್ವ ಕಳಚೊ ದೀಪ
ಭಾವನೆಯ ಬಾರವ ಬಾರದಿಂದಾಚೆ ಅಳಿಸುವ ದೀಪ
ಸಿಡುಕೂ ತೊಡಕು ತೊರೆದು ಸಹಬಾಳ್ವೆಯ ಬೆಳೆಸೋ ದೀಪ
ಬಾನಂಗಳದಿ ಬಾಣಬಿರುಸುಗಳ ಬಣ್ಣಗಳ ಚೆಲ್ಲಾಟದ ದೀಪ

ದೀಪ.. ದೀಪ.. ಬಾಳು ಬೆಳಗಲಿ ನಂದಾದೀಪ
ದೀಪ ದೀಪ ಬದುಕು ಬದಲಿಸೋ ಜ್ವಾಲಾದೀಪ

ಭಾರತೀಯರಿಗೆ ಭಾಗ್ಯವ ತರುವ ದೀಪದೊಳೆಯ ದೀಪ
ಅಜ್ಞಾನದ ಕತ್ತಲು ಕವಿದ ಜೀವವ ಸರಿಸೋ ದೀಪ
ದರೆಯೊಳು ದಂತೆರಾಸ್ ಅಪಮೃತ್ಯು ಬರದಿರುವ ದೀಪ
ಮನೆ ಮನದಿ ನೋವುನಲಿವ ಮರೆಸೋ ಮೇಣದ ದೀಪ

ದೀಪ..ದೀಪ..ಅಂದಕಾರವ ಆರಿಸೋ ಅಂದತ್ವದ ದೀಪ
ದೀಪ..ದೀಪ..ಪ್ರಜ್ವಲಿಸಲಿ ಪ್ರಕಾಶಮಾನ ದೀಪ

ಆಡಂಬರ ಆಚೆಗಳಿಸಿ ಅಲೌಕಿಕದೆಡೆಗೆ ನಡೆಯುವ
ದೀಪ
ಗೋವರ್ಧನಗಿರಿರೂಪ ಗೊವುಗಳಿಗೆ ಹಚ್ಚೆಯ ದೀಪ
ಭುವಿನಂಗಳದಿ ಜ್ಯೋತಿಗುಚ್ಛದ ನಕ್ಷತ್ರಮಳಿಗೆಯ ದೀಪ
ವೈಜ್ಞಾನಿಕ ನಿಘುಡಗಳ ಅಡಗಿರುವ ಹಬ್ಬದ ಈ ದೀಪ...

ದೀಪ..ದೀಪ..ಸುಖ ಶಾಂತಿ ನಲಿವ...ದೀಪ..
ದೀಪ..ದೀಪ..ಆತ್ಮವ ಬೆಸೆಯುವ ಜ್ಞಾನ 'ಪ್ರ'ದೀಪ.....ದಾನ 'ಪ್ರ'ದೀಪ

- ಪ್ರದೀಪ.ಮ.ಪಾಡಮುಖೆ

18 Oct 2017, 03:49 pm

ವಾಸ್ತವದ ರೇಖೆ

ದಾಟುತ್ತೇವೆ ನಾವು ಆಗೊಮ್ಮೆ ಈಗೊಮ್ಮೆ
ಕೊನೆ ಕೊನೆಗೆ ಗಳಿಗೆಗೊಮ್ಮೆ
ವಾಸ್ತವದ ರೇಖೆಯ,
ಅರಿವಿದ್ದರೂ ಯೋಚಿಸದೆ ನಮ್ಮ ಪರಿಮಿತಿಯ.
ಅದೇನೋ ಕುಶಿ ನಮಗೆ
ವಾಸ್ತವವ ಮರೆತು ಕನಸ ಲೋಕದಿ ತೇಲಲು,
ಹೊಸ ಭರವಸೆಗಳ ಬಣ್ಣದ ಕೊಳದಲ್ಲಿ
ಮನಸು ಬಿಚ್ಚಿ ಮುಳುಗಲು.

ಈ ವಾಸ್ತವ ರೇಕೆಗೆ ಬೇಲಿ ಕಟ್ಟಿ
ಮುಳ್ಳು ಬಡಿದು ಡಾಟದಂತೆ
ನಮ್ಮನು ತಡೆದವರಿಲ್ಲ.
ತುಡುಗು ದನಗಳಂತೆ ದಿನವೂ
ತಡೆ ಬೇಲಿ ಎಗರುವೆವಲ್ಲ ?!

ಒಡೆಯುತ್ತೆ ಕನಸು ಕಟ್ಟಿದ ಪುಗ್ಗಿ
ಬಡಿಯುತ್ತೆ ಕಠೋರ ವಾಸ್ತವ ಹಿಗ್ಗಿ
ಆದರೂ ಬುದ್ದಿ ಬಲಿತಿಲ್ಲ,
ಬಣ್ಣಗೆಟ್ಟ ಬದುಕಿಗೆ ಸುಮ್ಮನೆ ಸುಣ್ಣ
ಬಳಿವ ಕೆಲಸ ಇನ್ನೂ ನಿಂತಿಲ್ಲ !!

- ಶ್ರೀಗೋ.

18 Oct 2017, 09:08 am

ಗೆಳೆಯ..

ಹೇ ನನ್ನ ಅತಿ ಪ್ರಿಯ ಗೆಳೆಯ
ನಿನ್ನಿಂದ ಗಳಿಸಿದ್ದಕ್ಕೆ ಸಮರ್ಪಿಸುವ ಸಮಯ
‌ನಾ ಬರೆಯಲಿಂದು ನೀನೆನೆ ವಿಷಯ
ಹೇಗೆ ಬಣ್ಣಿಸಲಿ ನಿನ್ನೊಲವಿನ‌ ಸವಿಯ

ನೀನೊಬ್ಬನೆ ಕಂಡವನು ನನ್ನ ನಿಜ ಒಲವು
ನೀನಿದ್ದರೇನೆ ನನ್ನೊಳಗೆ ಉಳಿವುದು ಚೆಲುವು
ನನ್ನ ಜೊತೆಗೆ ನೀನಿರೆ ಮೊಗದಲಿ ನಗುವು
ನೀ ಅಂಗೈಯಲಿರೆ ಬೇಕಿಲ್ಲ ‌ನನಗೆ ಹೊರ ಜಗವು

ನೀನಲ್ಲ‌ ನನಗೆ ಕೇವಲ ಬರೆವ ಲೇಖನಿ‌
ನೀನೆನೆ ಕಂಡ ಸುಖ ದುಃಖಕ್ಕೆಲ್ಲ‌ ದನಿ
ನಾ ಮಿಡಿದಾಗಲೆಲ್ಲ ನೋವಿನ ಕಂಬನಿ
ಸೊರಗಿ ಉಳಿಸಿರುವೆ ನನ್ನ, ನಿನಗೆ ನಾನೆಂದು ಚಿರಋಣಿ

ಕಲಿಸಿದವನು ನೀನು ಕಲಿಕೆಯ ಸೊಗಸ‌
ಅರಿತವನು ನೀನು ನನ್ನ ಭಾವ, ಬದುಕು, ಕನಸ
ಒಮ್ಮೊಮ್ಮೆ ತೋರುವೆ ತುಸು ಹುಸಿ ಮುನಿಸ
ಆದರೂ ನಾನೆಂದು ಬಿಡೆನು ನಿನ್ನ ಸಹವಾಸ

ಬರಹದ ಪಯಣಕೂ ಜೊತೆಗಾರ ನೀನಿಂದು
ಹೀಗೆ ಜೊತೆಯಾಗಿರು ನೀನು ನನಗೆ ಎಂದೆಂದೂ
ಸೋಲು ಗೆಲುವು ನಗುವಳುವ ಅರಿಯುವದರಲಿ ನೀನೆ ಮುಂದು
ನಿನ್ನನು ಅಗಲಿ ಹೋಗಲಾರೆನು ಬಾಳ ಪಯಣದಲಿ ನಾನೆಂದು

- ಶ್ರೀಕಾವ್ಯ

18 Oct 2017, 09:02 am

ಮುದ್ದು ಹೃದಯ....

ಈ ನನ್ನ ಮುದ್ದು ಹೃದಯ
ಬಯಸುತ್ತಿದೆ
ನಿನ್ನ ಸನಿಹ ಇಂದು .....

ನೀ ದೂರ ಆದ ಕ್ಷಣ
ನಿಲ್ಲುವುದು ನನ್ನ
ಊಸಿರಾಟ ಅಂದು ......

ನೀ ನನ್ನ ಜೊತೆ ಇರುವ
ಅಷ್ಟು ಸಮಯ
ಸ್ವರ್ಗವೆ ನನ್ನ ಕೃಯಲ್ಲಿ ....

ಚಂದಿರನ ಮುಖದಲ್ಲಿ
ನಿನ್ನ ಬಿಂಬವ ಕಂಡು
ನವಿಲಿನಂತೆ ಕುಣಿದಿದೆ ನನ್ನ ಮನಸ್ಸು....

ನಿನ್ನನು ನೋಡುವ ಆ ಕ್ಷಣಗಳು
ನಿನ್ನ ಮಾತನ್ನ ಕೇಳುತ್ತಾ
ನನ್ನನೆ ಮರೆತು ನಿನ್ನ ಕಣ್ ಗಳನು ನೋಡುತ್ತಾ
ನಾ ಕುಳಿತೆ ....

- Shilpa

18 Oct 2017, 07:35 am

ಕನಸು...

ಒಂದೇ ಸಾರಿ ಹೇಳು
ನೀ ಕಂಡ ಕನಸೇನು
ನೆರವೇರಿಸುವ ಆಸೆ ಇಂದು
ಮತ್ತೂಂದು ಕನಸು ಬೀಳುವ ಮುನ್ನ !

-ಗಿರೀಶ್ ರಾಮಕೃಷ್ಣ

- girish r

17 Oct 2017, 11:01 pm

ಬಾಣಸಿಗಳು ನಾನು.........

ಆಸೆಗಳ ಮೂಟೆ ಹೊತ್ತು
ಬದುಕಿಹೆನು ಉಣ್ಣುತ್ತ ಮೂರೊತ್ತು
ಹೀಡೇರಿಸಿಕೊಳ್ಳಲು ಸಣ್ಣ- ಪುಟ್ಟ ಆಸೆ
ಬೇಡಿದಷ್ಟು ದೂರ ಇನಿಯನ ಒತ್ತಾಸೆ!

ಸ್ವಾ ಆಶ್ರಯವಿಲ್ಲದ
ಪರಾವಲಂಬಿ ನಾನು
ಸ್ವಂತಿಕೆಯ ಕೊಂದ
ಮನೆಯ ಬಾಣಸಿ ನಾನು!

ನಾ ಮಾಡಿದ ತ್ಯಾಗವ
ಗಣಿಸುವವರಾರು ಇಲ್ಲ
ನನ್ನಲ್ಲಿಯ ದೌರ್ಬಲ್ಯವ
ಹುಡುಕಿ ತಗೆವವರೆ ಎಲ್ಲ!

ದುಡಿದು ದಣಿದು ಬರುವ ಒಡೆಯನಿಗೆ
ಹಸಿವಿನಿಂದ ಅಳುವ ಕಂದನಿಗೆ
ಹಾಸಿಗೆಹಿಡಿದಿರುವ ಮಾವನಿಗೆ
ನಗುಮೊಗದಿ ಮಾಡಿ ಬಡಿಸುವೆ ಅಡಿಗೆ!

ಒಳಿತು- ಕೆಡುಕುಗಳ ಆಗರ ಭೂತಾಯಿ
ಪಾಪಾದಿಗಳ ತೊಡೆವಳು ಗಂಗಾಮಾಯಿ
ಸಕಲ ಸೃಷ್ಟಿಗು ಆಸರೆಯಾಗುವಳು ತಾಯಿ
ಮಗು,ಕನ್ಯೆ,ಮಡದಿ ತಾಯಿಯಾದ ಹೆಣ್ಣು ಧರಿತ್ರಿಯಂತೆ ಕರುಣಾಮಯಿ !



ಶಾರಧ

- ಶಕುಂತಲಾ

17 Oct 2017, 09:58 pm

ಕವನ.....

ಚಂದದ ಈ ಜನ್ಮಕ್ಕೆ
ನಗುವೆಂಬ ದೀಪವ ಹಚ್ಚಿ
ಅಂದದ ಈ ಹೃದಯಕ್ಕೆ
ಪ್ರೀತಿಯ ಎಂಬ ಬೇಳಕ ಬಿಟ್ಟು
ಮರೆಯದಿರು ಪ್ರೀತಿಯ
ಮರೆಯದಿರು ನನ್ನ ಕವನವ .....

- Shilpa

17 Oct 2017, 07:49 pm