ಸುತ್ತಲೂ ಆವರಿಸಿದೆ
ಮಂಜಿನ ಇಬ್ಬನಿ
ನನ್ನ ಮನದಲ್ಲಿ ಅಡಗಿದೆ
ಕಳೆದುಹೋದ ನೆನಪುಗಳ ಕಹಾನಿ
ಮಳೆಹನಿಗಳಂತೆ
ಜಿನುಗುತ್ತಿದೆ ಕಣ್ಣೀರ ಹನಿ
ಸುಮ್ಮನಿದ್ದರೂ ಕಾಡುತ್ತಿರುವಳು
ನನ್ನ ಹೃದಯದ ಅರಗಿಣಿ!
ಮುದ್ದು ಮುದ್ದಾದ ಪದಗಳಿಷ್ಟು
ನಿನ್ನ ಒಲವಿನ ಸವಿ ನನ್ನಲ್ಲಿ ಕದ್ದು ಕದ್ದು
ಕಣ್ಣಲ್ಲಿ ಬಚ್ಚಿಟ್ಟಿವೆ ಒಂದೊಂದು ಹೊಸತಾದ
ಭಾವ ನಿನ್ನ ಹೊಳೆಯುವಂತ ನಯನಕೆ
ಬಂಗಾರದ ಬಣ್ಣ ಹಚ್ಚಿ ನಿನ್ನುಸಿರ ಬೆಚ್ಚನೆಯ
ಗಾಳಿಗೆ ಸೋಕಿ ಸುಗಂಧ ಭರಿತ ಪ್ರೀತಿ
ಶಾಯಿಯಲ್ಲಿ ಮಿಂದು ನನ್ನ ಮನಸ ಹಾಳೆಯ
ಮೇಲೆ ಕಚುಗುಳಿ ಹಿಡುತ ಗೀಚಾಲೆಂದು.
ಮುಗುತಿಯ ಮುಂಬಾರಕೆ ನೀ ನಸು
ನಕ್ಕು ತಲೆ ಬಾಗಿಸುತಿರೆ ಹುಣ್ಣಿಮೆಯ
ಚಂದ್ರನು ನಿನ್ನ ಮೂಗನೇರಿ ಕುಳಿತಂತಿದೆ..
ಕಡಲಾಳದಲಿ ಹೆಕ್ಕಿ ತಂದ ಅಪರೂಪದ
ಮುತ್ತೊಂದನು ನಿನ್ನ ಮೂಗಿನ ತುದಿಗೆ
ಹೇಳಿ ಮಾಡಿಸಿ ಇಟ್ಟಂತಿದೆ...
ಎಳೆ ಕೆಂಪು ಕೆನ್ನೆಯ ಮೇಲೆ ಕೊಂಚ
ಕಪ್ಪು ಚುಕ್ಕೆ ಇಡಬಾರದೇ..
ಮುದ್ದಾದ ಮೂಗುತಿಯ ಸೌಂದರ್ಯಕ್ಕೆ
ನನ್ನ ಕಣ್ಣೆ ತಾಗುವಂತಿದೆ...
ನನ್ನ ಎದೆಯೊಳಗೆ ಯಾವುದೋ ಹೇಳತೀರದ
ಅಮಲು.
ಅದು ಕಾಮವೋ,ಪ್ರೇಮವೋ ನಾ ಕಾಣೆ
ಹಾದರವೆಂದು ಮಾತ್ರ ಜರಿಯದಿರು.
ಪ್ರೇಮ ಹರಿಯದಿರಲೆಂದು ಒಂದೊಂದು ಹೂವುಗಳನ್ನು
ಜೋಪಾಣವಾಗಿ ಪೋಣಿಸಿರುವೆನು.
ನಿನಗೆ ತಿಳಿದಿರಲಿ ನನ್ನ ಎದೆಯ ದಾರದ ಗಟ್ಟಿತನ.
ಕೊಳ್ಳುಬಾಕ ನಾನಲ್ಲ,
ಸವಿದು ಸವಿದು ನಿನ್ನ ಆತ್ಮ ತನಿಸಲು ಜೋಪಾನವಾಗಿ ಆಯ್ದ ಮುತ್ತುಗಳ ನಿನಗಾಗಿ
ಎತ್ತಿ ಇಟ್ಟಿರುವೆ ನನ್ನ ಎದೆಯ ಬಟ್ಟಲೊಳಗೆ.
ಒಂದು ಬಾರಿಯಾದರೂ ಹೃದಯ ಹಣತೆಯ
ಬೆಳಕಿನಲ್ಲಿ ನನ್ನ ಮುಖದ ಛಾಯೆಯನ್ನಾದರೂ ನೋಡು.
ಅಲ್ಲಿ ಕಂಡರೂ ಕಾಣಿಸಬಹುದು ನಿನಗೆ
ನನ್ನ ಆತ್ಮ ಸಂಗಾತಿಯ ರೂಪ.
--- ಸುರೇಶ ಜಕಾತಿ. ಜಮಖಂಡಿ
8746086672