ಭಾವ ಪತಂಗವವ
ಅಲೆದಾಡಲು ಬಿಟ್ಟೆ
ಕೂಡಿಹಾಕಿದ್ದೆ ಕತ್ತಲಲ್ಲಿ
ಕಣ್ಣೀರು ಬರುವುತನಕ
ಕೊನೆಗೆ ಕಾಡಿ ಬೇಡಿದಾಗ
ಮನ ಕರಗಿ ಬಿಟ್ಟು ಬಿಟ್ಟೆ
ಅಲೆದಾಟ ನಂಗಿಷ್ಟವೆಂದಲ್ಲ
ಆದರೆ ತೋರಿಕೆಯ ಜನರ
ನಡುವಿನ ಬಾಳು ಸಹ್ಯ ಎನಿಸುವುದಿಲ್ಲ
ಆಗೇ ನೋಡಿದರೆ ನಾನು ಅಲೆಮಾರಿಯೇ
ಇಲ್ಲಿಯವರೆಗೂ ಕಳೆದಿದ್ದೆ ನನ್ನ ಹುಡುಕುತಾ
ಮನದ ಉದ್ದಂಗಲಕು ಹುಚ್ಚನಂತೆ ಅಲೆದಾಡಿದ್ದೆ
ಅರಸುತ ಉತ್ತರವ,ಆದರೆ ದೊರೆತಿದ್ದಿಲ್ಲ
ವರ್ಷಗಳು ಉರುಳುತಿದ್ದರು
ನಿಂತಿದ್ದೆ ನಾನು ಕಲ್ಲು ಬಂಡೆಯಂತೆ
ಯಾವುದುಕು ಸ್ಪಂದಿಸದೆ,ಉತ್ತರಿಸದೆ
ಅಭ್ಯಾಸವಾಗಿತ್ತು ಆ ಒಂಟಿ ಸಹವಾಸ
ಭಾವ ಬಂಧವನ್ನು ಕಟ್ಟಿಹಾಕಿದ್ದೆ
ಅದು ಕಿರುಚಿ ಗದ್ದಲೆಬ್ಬಿಸಿದಾಗ
ಕೋಣೆಗೆ ಚಿಲಕ ಹಾಕಿ ಹೊರಬಂದಿದ್ದೆ
ವಿಕೃತನಾಗಿದ್ದೆ ಕಟುಕನಾಗಿದ್ದೆ
ಭಾವ ದುಃಖದಿಂದ ಅಳುತಿದಿದ್ದರೆ
ಗಹಗಹಸಿ ನಗುತಿದ್ದೆ ಕಾರಣವಿಲ್ಲದೆ
ಮರುಕ್ಷಣವೇ ಅಳುತಿದ್ದೆ ಏನು ಗೊತ್ತಾಗದೆ
ಖುಷಿಯೆಂಬ ಪದವು ನನ್ನ ಮರೆತಂತಿತ್ತು
ಅದಕೇನು ಗೊತ್ತು,ದುಃಖವೊಂದೇ ನನ್ನ ಸ್ವತ್ತು
ಕಣ್ಣೀರಿಗೂ ನನ್ನ ಕಂಡರೆ ಭಯವು
ಎಂಥ ಕಷ್ಟದಲ್ಲಿಯೂ ನನ್ನ ಬಳಿ ಸುಳಿದಿದ್ದಿಲ್ಲ
ಆದರೆ ಕತ್ತಲಲಿ ಕೊರಗಿ ಸೊರಗಿದ್ದ
ನನ್ನ ಭಾವವನು ನೋಡಿ ಸುರಿಯತೊಡಗಿತು
ಕಣ್ಣು ಆ ಕಣ್ಣೀರ ಮಳೆಯಲಿ ನೆನದು ನಗುತಿತ್ತು
ಕರಗಿಬಿಟ್ಟೆ ಕೊನೆಗೆ ಆ ದೃಶ್ಯ ವೈಭವಕೆ
ಅಲೆದಾಡಲು ಬಿಟ್ಟೆ, ಭಾವವೆಂಬ ಬಣ್ಣದ ಚಿಟ್ಟೆ ..
ಗಾದೆಪ್ಪ
ನೀನೆನೆ ಜ್ಞಾನದ ಊರಿನ ಹೆಬ್ಬಾಗಿಲಲಿಟ್ಟ ಕದ
ನಿನ್ನರಿಯದೆ ತಲುಪಲಾಗದು ಆ ಊರ ಸೀದಾ
ನಿನಗಿಲ್ಲ ಬಡವ ಬಲ್ಲಿದನೆಂಬ ಯಾವ ಭೇದ
ನಿನ್ನಿಡಿದವರ್ಯಾರಾದರು ನೀ ತೋರುವುದಿಲ್ಲ ಮದ
ಅದಕೆ ಮನೆ ಮನಗಳಲ್ಲಿ ನೀ ಪೂಜನೀಯ ಸದಾ
ನೀನಲ್ಲ ಕೇವಲ ಮಸಿ ತುಂಬಿದ ಲೇಖನಿ
ನಿನ್ನೊಳಗುಂಟು ಶಕ್ತಿಯು ಒರೆಸಲು ಕಂಬನಿ
ನೀನಿದ್ದರೆ ಅಲ್ಲುಂಟು ಹತ್ತು ಹಲವು ಕಹಾನಿ
ಕೆಲವೊಂದು ನಗು ಪ್ರೀತಿಯ ತುಂತುರು ಹನಿ
ಮತ್ತಷ್ಟು ನೋವು ಕಣ್ಣೀರಿನಿಂದಾದ ಗಣಿ
ನೀನು ಆ ಖಡ್ಗಕ್ಕಿಂತ ಹರಿತ
ಕಂಡಾಗ ಜನಸಾಮಾನ್ಯರ ಮೇಲೆ ತುಳಿತ
ಬರೆಯುವೆ ಬಯಸಿ ಆ ಜನರಿಗೆ ಒಳಿತ
ಏರುಪೇರಾಗಿಸಿರುವೆ ತುಳಿವವರ ಎದೆಯ ಬಡಿತ
ಸೋತವರ ಪಾಲಿಗೆ ತೋರಿ ಪ್ರೇಮದ ಮಿಡಿತ
ನಿನ್ನ ಹಿಡಿದವನ ಮನಸಾದರೆ ದುಷ್ಟ
ಅದು ಈ ಸಮಾಜಕ್ಕೇನೆ ದುರಾದೃಷ್ಟ
ಅವನು ಹೇಳಿದಂತೆಯೆ ನೀ ಬರೆಯುವುದು ಸ್ಪಷ್ಟ
ಅದರಿಂದಾಗುವ ಒಳಿತು ಕೆಡುಕುಗಳಂತು ಅಸ್ಪಷ್ಟ
ಹಾಗೆ ಸಿಕ್ಕಿದನ್ನೆಲ್ಲ ಬರೆಯುವಾಗ ನಿನಗೆಷ್ಟಾಗಿರಬೇಕು ಕಷ್ಟ