Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಭಾವ ಬಂಧನ

ಭಾವ ಪತಂಗವವ
ಅಲೆದಾಡಲು ಬಿಟ್ಟೆ
ಕೂಡಿಹಾಕಿದ್ದೆ ಕತ್ತಲಲ್ಲಿ
ಕಣ್ಣೀರು ಬರುವುತನಕ
ಕೊನೆಗೆ ಕಾಡಿ ಬೇಡಿದಾಗ
ಮನ ಕರಗಿ ಬಿಟ್ಟು ಬಿಟ್ಟೆ

ಅಲೆದಾಟ ನಂಗಿಷ್ಟವೆಂದಲ್ಲ
ಆದರೆ ತೋರಿಕೆಯ ಜನರ
ನಡುವಿನ ಬಾಳು ಸಹ್ಯ ಎನಿಸುವುದಿಲ್ಲ
ಆಗೇ ನೋಡಿದರೆ ನಾನು ಅಲೆಮಾರಿಯೇ
ಇಲ್ಲಿಯವರೆಗೂ ಕಳೆದಿದ್ದೆ ನನ್ನ ಹುಡುಕುತಾ
ಮನದ ಉದ್ದಂಗಲಕು ಹುಚ್ಚನಂತೆ ಅಲೆದಾಡಿದ್ದೆ
ಅರಸುತ ಉತ್ತರವ,ಆದರೆ ದೊರೆತಿದ್ದಿಲ್ಲ

ವರ್ಷಗಳು ಉರುಳುತಿದ್ದರು
ನಿಂತಿದ್ದೆ ನಾನು ಕಲ್ಲು ಬಂಡೆಯಂತೆ
ಯಾವುದುಕು ಸ್ಪಂದಿಸದೆ,ಉತ್ತರಿಸದೆ
ಅಭ್ಯಾಸವಾಗಿತ್ತು ಆ ಒಂಟಿ ಸಹವಾಸ
ಭಾವ ಬಂಧವನ್ನು ಕಟ್ಟಿಹಾಕಿದ್ದೆ
ಅದು ಕಿರುಚಿ ಗದ್ದಲೆಬ್ಬಿಸಿದಾಗ
ಕೋಣೆಗೆ ಚಿಲಕ ಹಾಕಿ ಹೊರಬಂದಿದ್ದೆ

ವಿಕೃತನಾಗಿದ್ದೆ ಕಟುಕನಾಗಿದ್ದೆ
ಭಾವ ದುಃಖದಿಂದ ಅಳುತಿದಿದ್ದರೆ
ಗಹಗಹಸಿ ನಗುತಿದ್ದೆ ಕಾರಣವಿಲ್ಲದೆ
ಮರುಕ್ಷಣವೇ ಅಳುತಿದ್ದೆ ಏನು ಗೊತ್ತಾಗದೆ
ಖುಷಿಯೆಂಬ ಪದವು ನನ್ನ ಮರೆತಂತಿತ್ತು
ಅದಕೇನು ಗೊತ್ತು,ದುಃಖವೊಂದೇ ನನ್ನ ಸ್ವತ್ತು

ಕಣ್ಣೀರಿಗೂ ನನ್ನ ಕಂಡರೆ ಭಯವು
ಎಂಥ ಕಷ್ಟದಲ್ಲಿಯೂ ನನ್ನ ಬಳಿ ಸುಳಿದಿದ್ದಿಲ್ಲ
ಆದರೆ ಕತ್ತಲಲಿ ಕೊರಗಿ ಸೊರಗಿದ್ದ
ನನ್ನ ಭಾವವನು ನೋಡಿ ಸುರಿಯತೊಡಗಿತು
ಕಣ್ಣು ಆ ಕಣ್ಣೀರ ಮಳೆಯಲಿ ನೆನದು ನಗುತಿತ್ತು
ಕರಗಿಬಿಟ್ಟೆ ಕೊನೆಗೆ ಆ ದೃಶ್ಯ ವೈಭವಕೆ
ಅಲೆದಾಡಲು ಬಿಟ್ಟೆ, ಭಾವವೆಂಬ ಬಣ್ಣದ ಚಿಟ್ಟೆ ..
ಗಾದೆಪ್ಪ

- ಗಾದೆಪ್ಪ

20 Oct 2017, 09:24 pm

..

ಎಲ್ಲಕ್ಕೂ ಉಂಟು
ಇಲ್ಲಿ ಮೀಸಲಾತಿ
ಸತ್ತಮೇಲೆ ಸ್ವರ್ಗದಲ್ಲೂ
ದುಡ್ಡು ಕೊಟ್ಟರೆ
ಪಾಪಿಗಳಿಗು ಸಿಗಬಹುದೇ
ಪುಣ್ಯದ ವಿನಾಯಿತಿ

ಕೊನೆಗೂ ಶುರುವಾಯಿತು
ಬಿಗ್ಗ್ಬಾಸ್ ಸೀಸನ್ ಫೈವ್
17 ಕೋತಿಗಳ ಮಂಗಾಟ
ಅದ ನೋಡಲು
ಮನೆಯಲಿ ರಿಮೋಟ್ ಗಾಗಿ
ಬುದ್ದಿಜೀವಿಗಳ ಕಿತ್ತಾಟ



ಪ್ರಪಾತಕ್ಕೆ ಬಿದ್ದರು ಸಾಯಲಿಲ್ಲ
ಹಾವು ಕಡಿಯಲಿಲ್ಲ
ಹುಲಿಯು ತಿನ್ನಲ್ಲಿಲ್ಲ
ದೈವ ಮಾನವಳೇ
ನಮ್ಮ ಪುಟ್ಟಗೌರಿ
ಡೈರೆಕ್ಟರ್ರೇ ಸ್ವಲ್ಪ ಉತ್ತರ ಹೇಳಿ

ಕತ್ತಲು ನೀಗಿಸಿ
ಬದುಕನು ಬೆಳಗಿಸಿ
ಆಚರಿಸೋಣ ಈ ದೀಪಾವಳಿ
ಪಟಾಕಿಯೇ ಬೇಕೇ
ನಿಸರ್ಗವ ಕೆಡಿಸಿ
ಆಚರಿಸಲು ಬೆಳಕಿನ ರಂಗೋಲಿ ..



ಹುಟ್ಟಿಗೊಂದು ಜಾತಿ
ಗುಂಪಿಗೊಂದು ಪಾರ್ಟಿ
ನೋಟಿಗೊಂದು ಓಟು
ಇರುವವರೆಗೆ ಮೋದಿ ಅಲ್ಲ
ದೇವರೇ ಬಂದರು ಕೂಡ
ದೇಶವಾಗದು ಅಭಿವೃದ್ಧಿ

ಒಳ್ಳೆಯವರಾರು ಕೆಟ್ಟವರಾರು
ಯೋಚಿಸಲು ಸಮಯವಿಲ್ಲ
ನೋಟು ಕೊಡಿ ಓಟು ತಗೊಳ್ಳಿ
ನೀವು ಸತ್ತರೆಷ್ಟು ಇದ್ದರೆಷ್ಟು
ಇನ್ನು ಐದು ವರ್ಷ
ತೆಪ್ಪಗೆ ಇರೋದ್ ಕಲ್ತ್ಕೊಳ್ಳಿ..



ಸೀರೆ ತೊಟ್ಟ ಪ್ರತಿಬಾರಿಯೂ
ನನ್ನವಳದೊಂದು ಪ್ರಶ್ನೆ
ರೀ ನಾ ಹೇಗೆ ಕಾಣುವೆನೆಂದು ..
ಅಯ್ಯೋ ನಿನಗೇನು ಚಿನ್ನ
ಅಮವ್ಯಾಸೆಯ ಚಂದ್ರನ ಬಣ್ಣ
ಇನ್ನೆಗೆ ಹೇಳಲಿ ಅವಳ ಅಂದವನ್ನ..
ಗಾದೆಪ್ಪ

- ಗಾದೆಪ್ಪ

20 Oct 2017, 07:25 pm

..

ಪ್ರಶ್ನಿಸುವ ಹುಚ್ಚೇಕೆ ಮನಸೇ ?

ಪ್ರಶ್ನೆ ಕೇಳಿದ ಪ್ರತಿಬಾರಿಯೂ
ನನಗೆ ಉತ್ತರದ ಚಿಂತೆ
ಜೀವನವೇ ಪ್ರಶ್ನೆಯಾದರೆ
ಉತ್ತರ ಹುಡುಕಲೆಗೇ ಎನ್ನುವ ಭೀತಿ

ಕಂಡ ಕಂಡದೆಲ್ಲವು
ಪ್ರಶ್ನಿಸುವ ಚಟವು ಈ ಮನಕೆ
ತನಗೆ ಸಂಬಂಧವೇ ಇರದಿದ್ದರೂ
ಉತ್ತರ ಹುಡುಕಲು ಬಲವಂತವ ಮಾಡುವುದೇಕೆ

ಹರಿವ ನದಿಯ ಕಂಡು
ನಿನ್ನ ಮೂಲ ಏನೆಂದು ಕೇಳಿದರೆ
ಉತ್ತರಿಸಬಲ್ಲದೇ ಆ ನದಿ?
ಅದೇಕೆ ತಿಳಿಯುತ್ತಿಲ್ಲ ನನ್ನ ಮನಕೆ


ಅವಳ ಕಂಡಾಗಲು ಹೇಳಿದ್ದೆ
ಪ್ರಶ್ನಿಸದಿರು ನನ್ನ ಏನೊಂದು
ಆದರೆ ಬಿಡದೆ ಪ್ರಶ್ನಿಸಲು
ಶರಣಾಯಿತು ಹೃದಯ ಮರುಮಾತಾಡದೆ

ಪ್ರಶ್ನೆಯ ಹುಚ್ಚು ಅಷ್ಟಿಷ್ಟಲ್ಲ
ಕೆಲವೊಮ್ಮೆ ಕೇಳುವುದು ನನ್ನನ್ನೇ
ನಿನ್ನ ಹುಟ್ಟಿನ ಉದ್ದೇಶವೇನು ?
ನಿನ್ನೆಲ್ಲ ಪ್ರಶ್ನೆಗೆ ಉತ್ತರ ಹುಡುಕುವುದೇ?

ಅತಿರೇಕದ ನಡುವಳಿಕೆ
ಪ್ರಶ್ನಿಸುವ ಹುಚ್ಚು ಈ ಮನಕೆ
ಅದರ ಕೆಲವೊಂದು ಪ್ರಶ್ನೆಗೆ ಉತ್ತರ
ತಿಳಿಯುತ್ತಿಲ್ಲ,ಆದರೂ ನನ್ನ ಬಿಡುತ್ತಿಲ್ಲ


ಕತ್ತಲ ಕೋಣೆಯಲಿ ಕಣ್ಣೀರ
ಜೊತೆಗೂಡಿ ಬೇಡಿಕೊಂಡೆ
ಮತ್ತೆಂದೂ ಕೆಳದಿರು ಪ್ರಶ್ನೆಯನ್ನು
ಉತ್ತರ ಹೇಳಲಿಲ್ಲ,ಪ್ರಶ್ನೆ ನಿಲ್ಲಲಿಲ್ಲ

ಇನ್ನೆಷ್ಟು ಕಾಡುವೆ ನನ್ನ ಪ್ರಶ್ನೆಗಳಿಂದ
ಉತ್ತರಿಸಲು ನಾನೇನು ಮೇಧಾವಿ ಅಲ್ಲ
ಬಿಟ್ಟುಬಿಡು ನನ್ನನ್ನು ಶಾಶ್ವತವಾಗಿ
ಪ್ರಶ್ನೆಯ ಸುಳಿಯಲ್ಲೇ ಮುಳುಗಿಹೋದೇನೂ..

ಉತ್ತರವ ಬೆನ್ನಟ್ಟಿ ಹೋದ
ಪ್ರತಿಬಾರಿಯೂ ಪ್ರಶ್ನೆಗಳ ಸಾಲು
ಕೆಲವು ನನ್ನ ಕೆಣುಕುವವು
ಕೆಲವು ನನ್ನ ಸೋಲಿಸಿ ಸಾಯಿಸುವವು

ಒಂಟಿಗನ ಪ್ರಶ್ನೆಗಳಿಗೆ
ಉತ್ತರ ಹುಡುಕುವರಾರು
ನಿನ್ನ ಬಿಡನೆಂದರೆ ಬಿಡೆನು
ಉತ್ತರ ಹುಡುಕುವುದೇ ಮೋಕ್ಷವು ನಿನಗೆ

ಕೊನೆಗೆ ಅರಿವಾದ ಸತ್ಯ
ಪ್ರಶ್ನೆಗಳು ಬೇಕು ಮನುಜನಿಗೆ
ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಲು
ತಪ್ಪುಗಳ ತಿದ್ದಿ ಬದುಕು ರೂಪಿಸಿಕೊಳ್ಳಲು
ಗಾದೆಪ್ಪ

- ಗಾದೆಪ್ಪ

20 Oct 2017, 07:21 pm

ದೀಪಾವಳಿ

ಮನದ ಕತ್ತಲೆಯ ಕೊನೆಗಾಣಿಸಲು
ಇಡುವ ಪ್ರೀತಿಯ ಹಣತೆ
ಒಂದಿಷ್ಟು ಖುಷಿಯ ಎಣ್ಣೆ ಸುರಿದು
ಅದಕೆ ಬಾಂಧ್ಯವದ ಬತ್ತಿ ಇಟ್ಟು
ಬೆಳಗುವ ಬದುಕೆಂಬ ದೀಪವ
ದೀಪಾವಳಿ ಹಬ್ಬದ ಶುಭಾಶಯಗಳು

- ಗಾದೆಪ್ಪ

20 Oct 2017, 07:18 pm

*ಬೇಕಿದೆ ಗೆಲುವು*

ನನ್ನ ನಿನ್ನ ಪ್ರೀತಿಗೆ ಸಿಗಲಿ
ಮನೆಯವರ ಹಾರೈಕೆ
ಕನಸು ಮನಸಲೂ ಸದಾ
ನಿನ್ನದೇ ಕನವರಿಕೆ!

ತಂದೆ-ತಾಯಿಯರ ಆಸರೆಯಲಿ
ಬೆಳೆದುಬಂದಿಹೆನು ನಾನು
ನಿನ್ನೊಲವಿನ ಪ್ರೀತಿಗೆ
ಸೋತಿಹುವುದು ಮನವು!

ಒಮ್ಮೊಮ್ಮೆ ನೀ ಮುನಿಸಿಕೊಂಡರೆ
ಚಡಪಡಿಸುವುದು ಹೃದಯ
ನೀ ನನ್ನಿಂದ ದೂರಾದರೆ
ಈ ಜೀವಕೆ ಹೇಳುವೆನು ವಿದಾಯ!

ಪ್ರೀತಿಸುವ ಮನಸುಗಳಿಗೆ
ದೂರಾಗುವ ಭಯ
ಎಲ್ಲರ ಮನಸು ಒಂದಾದರೆ
ಪ್ರೀತಿಗೆ ಸಿಗುವುದು ಜಯ!

ಪ್ರಿಯಾಂಕ✍

- ಪ್ರಿಯಾಂಕ

20 Oct 2017, 06:41 pm

ದೀಪಾವಳಿ☄

ಕೋಟಿ ದೀಪಗಳು ಹಚ್ಚಿ ಹಾಡಿದೆವು
ದೀಪಾವಳಿ ಹಬ್ಬ ಇಂದೆಂದು ದೇವರ ಮುಂದೆ
ಕಾಣಲಿಲ್ಲ ನನಗೆ ದಲಿತರ ಕಣ್ಣಲ್ಲಿ ಸಂತಸದ ಕ್ಷಣವೊಂದು ಈ ದೀಪಗಳ ಕಾಂತಿಗಿಂದು.

ಮುಗಿಲೆತ್ತರಕ್ಕೆ ಹಾರಿ ನಗೆಚೆಲ್ಲಿ ಮಯಾವಾಗುವ ಪಾಟಕಿಯ ಸದ್ದನ್ನು ಕಿವಿಯೊಡೆದೋಗುವಷ್ಟು ರಭಸವಾಗಿ ಹೊಡೆದು ನಕ್ಕೆವು ಹಸಿವಿನಿಂದ ಬಳಲುತ್ತಿರುವ ಒಂದು ಜೀವಿಯ ಹೊಟ್ಟೆ ತುಂಬಿ ಮನಸು ನಗುವು ಕಾಣಲಿಲ್ಲ ನನಗಲ್ಲಿ.

ಕೋಟಿ ಕನಸುಗಳು ಹೊತ್ತು ಐಶ್ವರ್ಯವಿಲ್ಲದ ಕಾರಣಕ್ಕೆ ಮೂರೋತ್ತು ಕಣ್ಣೀರಲ್ಲಿ ಮುಳುಗೇಳುತ್ತಿರುವ ಒಂದು ಮುಗ್ದವಾದ ಮಗುವಿನ ನಗೆಯನ್ನು ನೋಡಬಯಸೋಣ.

- ಚುಕ್ಕಿ

20 Oct 2017, 06:18 pm

ನಿಂಗೆ ನಾನು, ನಂಗೆ‌ ನೀನು

ನಮ್ಮ ಬಾಳ ಬೆಳಗೊ ದೀಪ ಹಾರಿ ಹೋಯ್ತು‌
ಜವರಾಯನ ಪಾಶ ಆ ಬೆಳಕ ಕದ್ದು ಹೋಯ್ತು
ಬಾಳ‌ ಬೆಳಗೋ ಬೆಳಕ‌ ಹೊತ್ತು ಹೋಯ್ತು

ನಮ್ಗೆ ಹೆತ್ತ ಅಪ್ಪ ಅವ್ವನ ನೆರಳು ಇಲ್ಲ
ಇನ್ನೂ ಒಡಹುಟ್ಟಿದ ನಾನೆ ನಿಂಗೆ ಅಪ್ಪ ಅವ್ವ ಎಲ್ಲ
ತಮ್ಮ ಇನ್ನೂ ನಾನೇ ನಿಂಗೆ ಎಲ್ಲ

ಅಪ್ಪನ ಶಿಸ್ತು ಗತ್ತು,ಅವ್ವನ ಮುತ್ತು ತುತ್ತು ನಿಂಗ ಸಿಗದಾಯ್ತಲ್ಲ
ಚೆಂದದ ಬಟ್ಟೆ ಉಟ್ಟು‌ ಊರ್ತುಂಬಾ ಕೈ ಕೈ‌ಹಿಡಿದು ಸುತ್ತೋ ಆಸೆ ಮಣ್ಣಾಯ್ತಲ್ಲ
ಅವ್ವ ನಮ್ಮಿಬ್ರ ಕಾಣದೆ ಹೆದ್ರಿ ಊರಲೆಲ್ಲ ಹುಡ್ಕೋದು ಕನಸಾಯ್ತಲ್ಲ

ಅಪ್ಪ,‌‌ಅವ್ವ‌, ದೇವನ‌ ಹರಸೆಂದು ಕೇಳುವೆ ಎಂದೂ ನಿಂಗೆ
ನಂಗೆ ನೀನು, ನಿಂಗೆ ನಾನು ಎಂದು ಬದುಕುವ ಹಿಂಗೆ
ನೀನಿರದೆ ಬದುಕೇ ಬರಿದು ನಂಗೆ

ನಿನ್ನ ಬಾಳ ಕತ್ತಲ ಬೆಳಗುವೆ ಕರಗಿಯಾದರು ಹುಣ್ಣಿಮೆ ಚಂದ್ರನಂಗೆ
ನೊಂದವರ ಬದುಕಿಗೆ ಭೂಮಿಯ ಬೆಳಗೊ ಸೂರ್ಯನಂಗೆ ನೀನಾದರೆ ಹೆಂಗೆ
ಆ ಸೌಭಾಗ್ಯವ ನೋಡೊ ಸುಖವಿರಲಿ ನಂಗೆ

ಗುಟುಕನಿಟ್ಟು ಕಾಪಾಡುವೆ ನಿನ್ನ ಮಡಿಲಲಿಟ್ಟು ಗುಬ್ಬಿಯ ಹಂಗೆ
ಕಷ್ಟ ನಷ್ಟಗಳೆಂದು ನಿನ್ನ ಬಾಳಲಿ ಸುಳಿಯದ ಹಂಗೆ
ಆ ದೇವರ ಬೇಡುವೆ ಸುಡುದಿರಲಿ ನಿನ್ನ ನೋವಿನ ಬೇಗೆ

- ಶ್ರೀಕಾವ್ಯ

20 Oct 2017, 03:47 pm

ದೀಪಾವಳಿ

ಬತ್ತುತ್ತಿರುವ ಬದುಕಿನ
ಬವಣೆಯಲ್ಲಿ
ಬತ್ತಿ ಇಲ್ಲದ ಕತ್ತಲೆ ಎಂಬ
ಕೆತ್ತನೆಯಲ್ಲಿನ ಕಳೆಯ
ಕೊಳೆಯನ್ನು ತೊಳೆಯುವ
ಕಳಾಕಳಿ..

ಆತ್ಮವಿಶ್ವಾಸದ ಕಡ್ಡಿಕೀರಿ
ಅಂತರಂಗದೀ ಅಡಗಿರುವ
ಅಂಧಕಾರಕ್ಕೆ ಅರಿವು
ಮೂಡಿಸುವ ದಿವ್ಯ ದೀವಿಗೆ
ದೀಪಾವಳಿ.

- ಎಸ್ಕೆ

- ಎಸ್ಕೆ

19 Oct 2017, 08:36 pm

ಲೇಖನಿ

ನೀನೆನೆ‌ ಜ್ಞಾನದ ಊರಿನ ಹೆಬ್ಬಾಗಿಲಲಿಟ್ಟ ಕದ
ನಿನ್ನರಿಯದೆ ತಲುಪಲಾಗದು ಆ ಊರ ಸೀದಾ
ನಿನಗಿಲ್ಲ ಬಡವ ಬಲ್ಲಿದನೆಂಬ ಯಾವ ಭೇದ
ನಿನ್ನಿಡಿದವರ್ಯಾರಾದರು ನೀ ತೋರುವುದಿಲ್ಲ ಮದ
ಅದಕೆ ಮನೆ ಮನಗಳಲ್ಲಿ ನೀ ಪೂಜನೀಯ ಸದಾ

ನೀನಲ್ಲ‌ ಕೇವಲ ಮಸಿ ತುಂಬಿದ ಲೇಖನಿ
ನಿನ್ನೊಳಗುಂಟು ಶಕ್ತಿಯು ಒರೆಸಲು ‌ಕಂಬನಿ
ನೀ‌ನಿದ್ದರೆ‌ ಅಲ್ಲುಂಟು ಹತ್ತು ಹಲವು ಕಹಾನಿ‌
ಕೆಲವೊಂದು ನಗು‌ ಪ್ರೀತಿಯ ತುಂತುರು‌ ಹನಿ
ಮತ್ತಷ್ಟು ನೋವು ಕಣ್ಣೀರಿನಿಂದಾದ ಗಣಿ‌

ನೀನು‌ ಆ‌‌ ಖಡ್ಗಕ್ಕಿಂತ ‌ಹರಿತ
ಕಂಡಾಗ ಜನಸಾಮಾನ್ಯರ ಮೇಲೆ‌‌ ತುಳಿತ
ಬರೆಯುವೆ ಬಯಸಿ ಆ ಜನರಿಗೆ ಒಳಿತ
ಏರುಪೇರಾಗಿಸಿರುವೆ ತುಳಿವವರ ಎದೆಯ ಬಡಿತ
ಸೋತವರ ಪಾಲಿಗೆ ತೋರಿ ಪ್ರೇಮದ ಮಿಡಿತ‌

ನಿನ್ನ ಹಿಡಿದವನ ಮನಸಾದರೆ ದುಷ್ಟ
ಅದು ಈ ಸಮಾಜಕ್ಕೇನೆ ದುರಾದೃಷ್ಟ
ಅವನು‌ ಹೇಳಿದಂತೆಯೆ ‌ನೀ ಬರೆಯುವುದು ಸ್ಪಷ್ಟ
ಅದರಿಂದಾಗುವ ‌ಒಳಿತು ಕೆಡುಕುಗಳಂತು ಅಸ್ಪಷ್ಟ
ಹಾಗೆ ಸಿಕ್ಕಿದನ್ನೆಲ್ಲ ಬರೆಯುವಾಗ ನಿನಗೆಷ್ಟಾಗಿರಬೇಕು ಕಷ್ಟ

- ಶ್ರೀಕಾವ್ಯ

19 Oct 2017, 05:59 pm

*ಪ್ರೀತಿ ಇಲ್ಲದ ಮೇಲೆ*

ಕಣ್ಣಿಂದ ಜಾರಿದ ಹನಿಗಳು
ನೆಮ್ಮದಿ ಹುಡುಕುತ್ತ ಸಾಗಿವೆ.
ಮನಸಿಗಾದ ವೇದನೆ
ಹೃದಯದಲಿ ಗಾಯವ ಮಾಡುತ್ತಿವೆ!

ಬಂಧು-ಬಳಗ, ಅಕ್ಕ-ಪಕ್ಕದವರ
ಚುಚ್ಚು ನುಡಿಗಳೇ ಸಾಂತ್ವಾನ
ಅವರಿವರ ಬಾಯಿ ಮುಚ್ಚಿಸಲು
ಎಸೆಯಬೇಕಂತೆ ಕಾಂಚಾಣ!

ಅರಳುವ ಮುನ್ನವೇ ಮುದುಡಿಹೋದೆ
ಆಸೆಗಳೆಲ್ಲಾ ಕರಗಿ ನೀರಾಗಿವೆ
ತಪ್ಪು ಮಾಡದೇ ಈ ಜನರ ಮಧ್ಯೆ
ನೋವಿನ ಬದುಕೇತಕೆ ನನಗೆ!

ಏನೆಂದು ಕಾರಣ ತಿಳಿಯದೆ
ಆಹುತಿಯಾದೆನಲ್ಲಾ ನನ್ನೆಲ್ಲಾ ಕನಸುಗಳನೊಂದಿಗೆ
ನನ್ನನೇಕೆ ಹುಟ್ಟಿಸಿದೆ ನೀನು?
ಕೇಳುವೆನು ದೇವಾ ನಿನ್ನಲ್ಲಿಗೆ ಬಂದು!

ಪ್ರಿಯಾಂಕ✍

- ಪ್ರಿಯಾಂಕ

19 Oct 2017, 02:39 pm