Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಎದ್ದೇಳು ಚೆಲುವಿ

ಮಲಗಿಹಳಿನ್ನು ಚೆಲುವಿ
ಮಂದಹಾಸವ ಚೆಲ್ಲಿ
ಕಾಣುತಿಹಳೊ ಏನೋ
ಹೊಂಗನಸು ನಿದ್ರೆಯಲ್ಲಿ..

ಮೂಡಣದಿ ನೇಸರನು ಬಂದ
ಮದನಿಕೆಗೆ ಬಿಸಿಲ್ ಕೋಲು ತಂದ
ಬೆಳಗಾಯ್ತು ಏಳು ಚೆಲುವೆ
ಹೊಸ ದಿನವ ನೋಡು ಅಂದ.

ಎಳೆ ಬಿಸಿಲು ಮುತ್ತಿಟ್ಟು ಹೊಳೆದ ಕೆನ್ನೆ
ಸೆಳೆದಿಹಳು ನಿದ್ರೆಯಲು ಕನಸ ಕನ್ಯೆ
ಹಣೆಗೆ ತುಟಿಯೊತ್ತಿ ಕೋರುವೆನು ಶುಭವ
ನೀನೆದ್ದು ನೋಡೋಮ್ಮೆ ಈ ಸುಂದರ ಜಗವ.

- ಶ್ರೀಗೋ.

27 Oct 2017, 07:50 am

ಗಾಂಧೀಜಿಯ ನಗು

ಗಾಂಧಿಯನ್ನು ಕೊಂದರು
ಶಾಶ್ವತವಾಗಿ ಅವರ ಹೆಸರು
ಮರೆತುಬಿಡಲಿ ಎಂದು !!

ಮರೆಯಲಿಲ್ಲ ಯಾರೂ
ಮೆರೆಸಿದರು ,ಗೌರವಿಸಿದರು
ಪೂಜಿಸಿದರು, ವಂದಿಸಿದರು !!

ಗಾಂಧಿ ಸದಾ ನಗುತಲೇ ಇದ್ದಾರೆ
ನಾನಿಲ್ಲದಿರೇ ನೀವಿಲ್ಲ ಎಂಬಂತೆ..

ಜನರ ಜೇಬಿನಲ್ಲಿ
ನೋಟಿನ ರೂಪದಲ್ಲಿ....

- ಅಲ್ತಾಫ್ ಬಿಳಗುಳ

27 Oct 2017, 12:33 am

ಭಾಗ್ಯ

ಸರಕಾರದ ಯಾವ
ಭಾಗ್ಯಗಳು ಜನರ
ಬದುಕನ್ನು
ಬದಲಾಯಿಸದು !!

ಯೋಜನೆಗಳು ಜನರನ್ನು
ತಲುಪುವವರೆಗೂ !!

ಸರಕಾರದ ಯಾವ
ಯೋಜನೆಗಳು
ಜನರಿಗೆ
ತಲುಪದು !!

ಭ್ರಷ್ಟ ರಾಜಕಾರಣಿಗಳು
ಇರುವವರೆಗೂ !!

- ಅಲ್ತಾಫ್ ಬಿಳಗುಳ

26 Oct 2017, 11:50 pm

ಸಾವಿನ ಹೆಜ್ಜೆ

ಸಂತಸದ ಕ್ಷಣಗಳು
ಕನಸಿನೊಳಗೆ ಹುದುಗಿಗೊಂಡಿವೆ
ಮರೆಯಬೇಕೆನ್ನುವ ನೆನಪುಗಳು
ಮತ್ತೆ ಮತ್ತೆ ಕಾಡುತ್ತಿವೆ
ಬಹುದೂರದಲ್ಲಿನ ಸಾವಿನ ಹೆಜ್ಜೆಗಳು
ನನ್ನತ್ತ ಕೈಬೀಸಿ ಕರೆದಂತಿದೆ!

- ಪ್ರಿಯಾಂಕ

26 Oct 2017, 08:54 pm

ಸೋಲು

ಕಣ್ಣಿಗೆ ಕಟ್ಟಿದ ಈ ಅಂಧಕಾರ
ಕಳಚಬೇಕಿದೆ ನಾನೀಗ
ತನ್ನಿಂದಲೇ ಎನ್ನುವ ಅಹಂಕಾರ
ದೂರಸರಿದಂತಿದೆ ನನಗೀಗ
ದೇವರೊಬ್ಬನೇ ಜಾದುಗಾರ
ಅರಿತೆನು ಸೋತ ನಂತರ!

- ಪ್ರಿಯಾಂಕ

26 Oct 2017, 08:53 pm

ಮಂಜಿನ ಹನಿ

ಮುಂಜಾನೆಯ ಮಂಜು ಹನಿ
ನೀನೆಕೆ ಹೀಗೆ ಎಲ್ಲಿಂದ ಬಂದೆ
ಬಂದು ಇಲ್ಲಿ ಏಕೆ ನಿಂತೆ
ಆಗಸದಿಂದ ಭೂಮಿಗೆ ಮಳೆಯಂತೆ ಬಂದು
ಇಬ್ಬನಿಯಾಗಿ ಕರಗಿ ಬಂದು ನಿಂತಿರುವೆ
ಹೂಗಳ ಮೇಲೆ ಕೂತಿರುವ ನಿನ್ನ ಚುಬಿಸಲು
ಬಲುಚಂದ.......
ಹಸಿರು ಮರಗಳ ಮೇಲೆ ಅಡಗಿರುವ ನಿನ್ನ
ಬಡಿದೆಬಿಸಿ ನಿನೋಂದಿಗೆ ನೆನೆಯುವ
ಆಸೆ ಅತಿ ಸುಂದರ ..........
ಗಿಡ ಮರಗಳ ಮೇಲೆ ಕುಳಿತು ಯಾರಿಗಾಗಿ ಕಾಯುತಿರುವೆ ನೀನು ನಿನ್ನ ಆ ಕಾಯುವಿಕೆ
ನೂಡಲೆ ಬೇಕು ನಾನೀಗ......
ಓ ಮುಜಾನೆಯ ಮಂಜಿನ ಹನಿಯೆ ಸುರಿವ ಮಳೆ ನಿಂತರು ನಾನಿರುವೆ ಎಂದು ದಿನ ಬೆಳಗೆ ಎಲ್ಲರ ಸ್ವಾಗತಿಸುವ ಹನಿಯೇ......
ನಿನಗೆ ಶುಬಾಷಯ.....
ಮಂಜಿನ ಹನಿಯೆ......

- ರಾಗಸಿರಿ....

26 Oct 2017, 08:24 pm

ಅವಳೆಂದರೆ

"ಅವಳೆಂದರೆ..."

ಅವಳ ರೂಪ ಇರುಳ ಬಾನ ಬೆಳಗುವ ಪೂರ್ಣ ಚಂದಿರ .
ಅವಳ ಹೃದಯ ನನ್ನ ಜೀವನ ಕಷ್ಟಗಳ ಮರೆಸೊ ಮಂದಿರ//

ಅವಳ ಗುಣಗಳು ಸುತ್ತಲರಡಿ
ಕಂಪ ಸೂಸುವ ಚಂದನ
ಅವಳ ನಿಷ್ಕಲ್ಮಶ ನಗು
ತೇಯ್ದಷ್ಟು ಘಮಿಸೊ ಚಂದನ/

ಅವಳನಪ್ಪಿರೆ ಮೈಮರೆಸುವ
ಮೈಗಂಧವು ಕಂಪಿನ ಚಂದನ
ಅವಳಿಂದಲೇ ನನ್ನ ಬಾಳಾಗಿದೆ ಹೂಗಳು ತುಂಬಿದ ನಂದನ//

- sailent

26 Oct 2017, 07:13 pm

ನಾನೂ ನನ್ನ ಅಕ್ಷರಗಳು

ಗೀಚಿದೆ ನಾನು ಕೆಲವು ಸಾಲುಗಳ,
ಹಾಗೆಯೆ ಸುಮ್ಮನೆ ವಿನೋದಕ್ಕೆ.
ಹುಚ್ಚು ಹಿಡಿಸಿ ಬಿಡಬೇಕೆ ಅದು
ನಿತ್ಯವೂ ನಾನು ಬರೆವಂತೆ...

ಹೇಳಿದೆನು ಆ ಅಕ್ಷರಗಳಿಗೆ,
ಬೇಡಪ್ಪಾ ನಿಮ್ಮ ಸಹವಾಸ
ನಿಮ್ಮಿಂದ ಇಹುದು ಹಲವು ತಂಟೆ.
ಕ್ಯಾಕರಿಸಿ ಉಗಿದವೆನಗೆ ಪದಗಳು,
ಕೇಳಿದವು, ನಿನಗೆ ತಲೆ ಸರಿ ಉಂಟೆ ?
ನಾವರಳುವೆವು ನೀ ಅರಳಿಸಿದಂತೆ.

ಹೇಳಿದೆ ನಾ, ಮತ್ತೆ ಮೆಲ್ಲನೆ...
ಕೇಳಿ ನನ್ನ ನುಡಿ ಮುತ್ತುಗಳೆ,
ಒಬ್ಬೊಬ್ಬರ ಮನ ಒಂದೊಂದು ಥರ.
ನನಗೂ ನೂರೆಂಟು ವಿಚಾರ..
ಹೇಗೆ ನಿಮ್ಮ ಸಿಂಗರಿಸಿ ನೀಡಲಿ ಉಪಚಾರ?

ತಿಳಿ ಹೇಳಿತೊಂದು ಸುಂದರ ಪದ,
ಎಸೆದು ಬಿಡು ಅಂತೆ ಕಂತೆಗಳ ದೂರ,
ನಾವು ಬಯಸೊಲ್ಲ ಸಿರಿ ಸಡಗರ.
*"ಪ್ರೀತಿಸು ಸಾಕು ನಮ್ಮನು ಮನಸಾರ"*,
ತೊಡಿಸುವೆವು ನಿನಗೆ ಗೆಲುವಿನ ಹಾರ.
ಸಂತಸವೆ ನಿನಗಾಗ ನಿತ್ಯ ನಿರಂತರ...

- sailent

26 Oct 2017, 06:23 pm

ನೀ ಏಕೆ ನೆನಪಾದೆ

ಒಲವೇ ಒಲವೇ
ನೀ ಏಕೆ ನೆನಪಾದೆ
ಕಾಲನ ಅರಸುವ
ನದಿಯಂತೆ ನಾ ಸಾಗಿರುವೆ..!!ಪಲ್ಲವಿ!!

ಎಂದೋ ಮುಗಿದ ಸಂಜೆಯಲಿ!
ನಿರವ ಮೌನದ ಈ ರಾತ್ರಿಯಲಿ!
ಕನಸುಗಳೆ ಇಲ್ಲದ ಸಮಯದಲಿ!
ಕ್ಷಣ ಮಾತ್ರ ಬಂದು ಹೋಗುವ
ಪ್ರೇಮಕ್ಕೆ ನಾ ಬೇಡವಾಗಿರಲು
ನೀ ಏಕೆ ನೆನಪಾದೆ!!
!!ಒಲವೇ ಒಲವೇ!!

ಜೋಡಿಯು ಹುಡುಕುವ ಭರದಲಿ
ಅರಳು ಮರಳು ನಿನಾಗಿರಲು
ಪ್ರೇಮದ ಅರಮನೆಯಲಿ
ಬಿಡಿಸದ ಬಂಧದಲಿ ನಾನಿದ್ದರೂ
ವಿಧಿ ಸಾಗಿದ ಬಂಡಿಯಲಿ
ನೀ ದೂರವಾಗಿರಲು
ನೀ ಏಕೆ ನೆನಪಾದೆ!!
!!ಒಲವೇ ಒಲವೇ!!

ನಿನ್ನಯ ನೆನಪಲಿ ಕಳೆದಿರೋ
ಬದುಕನು ಹುಡುಕುತ ಸಾಗಿರಲು
ತೊರೆದಿರುವ ದಿನಗಳು ಮರಳಿ
ಪಡೆಯುವ ಕಾತೂರದಿ ನಾನಿರಲು
ನೀ ಏಕೆ ನೆನಪಾದೆ!!
!!ಒಲವೇ ಒಲವೇ!!

- sailent

26 Oct 2017, 06:20 pm

ಪ್ರೀತಿಯ ಭೇಟಿ

ಕನಸಿನ ಭೇಟಿ ಮನಸಿಗಾಯಿತು
ಮುಗುಳ್ನಗೆಯ ಮುಖಾಂತರದಿ.

ಗಮ್ಯ ತಿಳಿಯದೇ ಹೃದಯದ ಕದ
ತೆರೆದು ಅಲೆದಾಡುತ್ತಿದ್ದ ಮನಸ್ಸಿಗಿಂದು
ಪ್ರೀತಿಯ ಪರಿಚಯವಾಯಿತು ನಿನ್ನ ಸಾನ್ನಿಧ್ಯದಲ್ಲಿ.

ತಂಗಾಳಿಯ ಜೊತೆಗೂಡಿದ ಮುಂಗಾರು
ಮಳೆಯೊಂದು ಶುಭ ಶಕುನದಂತೆ ಎಡಬಿಡದೆ
ಸುರುಯುತಿದೆ ಬೆಂದಕಾಳೂರಿನ ನೊಂದ
ಮನಗಳ ಮಧ್ಯದಲ್ಲಿ.

ಸವಿಮಾತುಗಳ ಶುರುವಾತು ಸಿಹಿಹಂಚಿಕೆಯ
ರುಜುವಾತು ಕ್ಷಣಗಳಿಗೆ ನಿನ್ನೊಡನೆ ಕಳೆದರೂ
ಎಂದೂ ಮರೆಯದ ಭಾವನೆಗಳ ಬುತ್ತಿ ಕಟ್ಟಾಯ್ತು.

- ಚುಕ್ಕಿ

26 Oct 2017, 06:19 pm