ಕನಸುಗಳು ಸಾಗುತ್ತಿವೆ
ನಾ ಕಾಣದ ಹಾದಿಯಲ್ಲಿ..
ವಿವಿಧ ವೇಷಧಾರಿಗಳು
ನಿಂತಿಹರು ಸುತ್ತುವರೆದು
ಭಯದಿಂದ ನಡುಗುತ್ತಿದೆ ದೇಹ...
ಯಾರಿಲ್ಲ ನನ್ನವರು ಇಲ್ಲಿ
ಯಾರೆಂದು ತಿಳಿಯುತ್ತಿಲ್ಲ ಇವರೆಲ್ಲ....
ನನಗ್ಯಾವ ಶಿಕ್ಷೆಯ ಕೊಡುವರು
ತಪ್ಪು ಮಾಡದ ನನಗಿಂದು..
ಯಾರಲ್ಲಿ ಪ್ರಶ್ನಿಸಲಿ ನಾನು
ಕರುಣೆಯಿಲ್ಲದ ಈ ಜನರ ಮಧ್ಯೆ...
ಕತ್ತಲು ಮತ್ತಷ್ಟು ಸಮೀಪಿಸಿದೆ
ಯಾರೋ ಹೊತ್ಯೊತ್ತಿದ್ದಾರೆ ನನ್ನನು...
ಕಣ್ತೆರೆಯಲು ಭಯ ನನಗೆ
ಎಲ್ಲರ ಜೊತೆ ಸೆಣಸಾಡಿ
ಬಂಧನವ ಬಿಡಿಸಲು
ಬಂದುಬಿಡು ನೀನೊಮ್ಮೆ!
ನಿನ್ನ ಮುದ್ದು ಕಣ್ಗಳ ನೋಟಕೆ
ಬೆರಗಾಗಿಹೋದೆನಲ್ಲಾ
ಮನಸ್ಯಾಕೋ ಹಠವ ಮಾಡುತ್ತಿದೆ
ನಿನ್ನ ಸನಿಹವ ಬೇಡುತ್ತಿವೆ
ನನ್ನ ಮನದಿಂಗಿತವ ಕೇಳೊಮ್ಮೆ
ಮೌನವ ಸರಿಸಿಬಿಡು ಒಮ್ಮೆ
ಹುಚ್ಚು ಹೃದಯದ ತುಂಬೆಲ್ಲ
ನೀನೇ ತುಂಬಿಕೊಂಡಿರುವೆಯಲ್ಲ
ನೀ ನನ್ನ ಮರೆತರೂ
ಮರೆತೂ ನಾ ಮರೆಯಲ್ಲ
ನಿನ್ನ ಆ ಮುಗ್ಧ ನೋಟವನ್ನ!
ಜಿವನದ ಹಾದಿಯಲ್ಲಿ
ಬರಿ ಹೂವಿನ ರಾಶಿ ಬೇಕೆಂದರೆ ಹೇಗೆ
ಕಲ್ಲು ಮುಳ್ಳುಗಳು ಎನು ಪಾಪ ಮಾಡಿವೆ
ಅವುಗಳು ಸಿಗಲಿ ಬಿಡಿ ಅವುಗಳಿಗು ಆಸೆ
ಜೀವನದ ಜೂತೆಯಾಗಿ ಬರೂಕೆ
ನಗು ಅಳುವಿನ ಈ ಬದುಕಲ್ಲಿ
ಕಷ್ಟ ಸುಖಗಳು ಹಾಗೆ ಇರುತ್ತವೆ.....
ಏಳೂ ಬೀಳಿನ ಬದುಕಿನಲಿ ಎಲ್ಲರ ಪರಿಚಯವು ಹಾಗಬೇಕೂ ಅದರಲ್ಲಿ ಬಂದದ್ದೇಲ
ಅನುಬವಿಸಲೆ ಬೇಕು ಒಳ್ಳೆಯ ದಾರಿ ಒಳ್ಳೆಯ ಗೆಳತನ ಒಳ್ಳೆಯ ಸಂಬದ
ಎಲ್ಲರೂ ನಮಗಾಗಿ ಅಲ್ಲ ಏಳು ಬೀಳಿನ ಬದುಕು......