Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹಾಲಾಯಿತೆ- ಹಾಲಾಹಲ!

ಹೆಗಲೇರಿ ಕುಣಿದು
ಮಡಿಲಲ್ಲಿ ಬೆಳೆದ ಮಗು
ಮಸಣದ ಹಾದಿ ತೋರುವಂತಾಯಿತೆ ಇಂದು!

ಕಮಜದ ಗೂಡು
ಸಿಹಿಯಾಯಿತು ನೋಡು
ದೇವಾನ್ನವು ನಂಜಾಯಿತೆ ಇಂದು!

ಹಸುಗೂಸನು ಹೊರನೂಕದಾದೆ
ರೆಕ್ಕೆಯುಳ್ಳ ಹಕ್ಕಿಯ ಬಂದಿಸಲೋದೆ
ನೀ ಪಟ್ಟ ಶ್ರಮವ ಯಾರು ಲೆಕ್ಕಿಸುವರಿಂದು!

ಒಡಹುಟ್ಟಿದವರ ದಡ ಸೇರಿಸಿದೆ
ತಾಯಿಗಾಗಿ,ತ್ಯಾಗದ ಮೇರೆ ಮೀರಿದೆ
ಸರ್ವಸ್ವವನ್ನೂ ತ್ಯಜಿಸಿ ನೀ ಒಂಟಿಯಾದೆ!

ನಿನ್ನ ಗಡಸುತನವ ಎತ್ತಿ ಹಿಡಿದರು
ನಿನ್ನ ನಿಷ್ಕಲ್ಮಶ ಪ್ರೀತಿಯ ಮರೆತರು
ನಿನ್ನವರ ದೃಷ್ಟಿಯಲ್ಲಿ ನೀನಾದೆ ಕಡುವೈರಿ!

ಮೂರು ದಶಕಗಳ ಕಾಲ
ಹೊತ್ತೆ ನೀ ಸಂಸಾರದ ಭಾರ
ಮಾಡಿದೆಲ್ಲ ,ಮೂರು ತಾಸಿನಲ್ಲಾಯಿತು ಸಂಹಾರ!

ನೀ ಮಾಡಿಟ್ಟ ಆಸ್ತಿಯ ನೀ ಹಾಕಿಕೊ
ನಿನ್ನ ಎದೆಯ ಮೇಲೆ, ಆಸಿಕೋ
ಎಂದರೆ, ನೀ ಸಲಹಿದ ಕಂದಮ್ಮರಿಂದು!

ಮೌನ ಆವರಿಸಿತು
ಮೌಲ್ಯ ಮರೆಯಾಯಿತು
ನಂದಾದೀಪವಾಗಿ ಬೆಳಗಿದ ಜ್ಯೋತಿ ನಂದಿತು!




ಶಾರಧ

- ಶಕುಂತಲಾ

31 Oct 2017, 04:24 pm

ದೂರ ದೂರ....

ಮುಗಿಲ ಒಳಗೆ ನಾನು
ನೀನು ಜೂತೆಯಾಗಿ
ಆ ಕಡಲಾಚೆ ಯಲ್ಲು
ನೀನು ನನ್ನ ಜೂತೆಯಾಗಿ.....

ಪ್ರೀತಿ ಇಲ್ಲದ ಭೂಮಿ ಯಲ್ಲಿ
ನಾನು ನೀನು ದೂರ ದೂರ
ಯಾರು ಇಲ್ಲದ ಆ ಊರಲ್ಲಿ
ನಾನು ನೀನೆ ರಾಜ ರಾಣಿ ಯಾಗಿ
ಸೇರಿ ಹೂಗುವ ಜೂತೆಯಾಗಿ...

ನಮ್ಮ ಪ್ರೀತಿ ಯುಗದಾಚೆಗು
ಸಾಗಿ ಹೂಗಲಿ ಅಲೆಯಾಗಿ
ಅಲ್ಲಿ ನಿನಗೆ ನಾನು ನನಗೆ ನೀನು
ಜೂತೆಯಾಗಿ ಹೂಗುವ ದೂರ ದೂರ .......

ಅರ್ಥ ವಾಗದ ಲೋಕಾದಲ್ಲಿ
ನಮ್ಮ ಪ್ರೀತಿ ಅರ್ಥ ವಾಗದ
ರೀತಿ ಊಳಿದು ಬಿಡಲಿ......

- ರಾಗಸಿರಿ....

31 Oct 2017, 03:42 pm

ಹ್ರದಯದ ವ್ಯೆಥೆ.

ಅವಳ ಪ್ರೀತಿಸತೊಡಗಿದೆ ನಾ ಒಂದು ದಿನ,
ಅದು ಅವಳಿಗೆ ತಿಳಿಯಿತು ಮುಂದೊಂದು ದಿನ.
ಆಕೆ ಹೇಳಿದಳು ನಿನ್ನನೆಂದು ಪ್ರೀತಿಸೆನು ನಾ,
ಆದರು ಬಿಡಲಿಲ್ಲ ಅವಳ ಪ್ರೀತಿಸುವುದ ನಾ.

ದಿನ ಕಳೆಯುತ್ತಾ ಬಂದಂತೆ ಒಂದುದಿನ!
ಸ್ನೇಹಿತರಿಗೆಲ್ಲ ತಿಳಿಯಿತು ನನ್ನ ಪ್ರೀತಿಕಥನ,
ಅಂದೇ ಎದುರಾದಳು ನನ್ನ ಪ್ರೀತಿಯ ಸುಮನ,
ಶುರುಮಾಡಿದಳು ನಮ್ಮ ಮೊದಲ ಕದನ.

ಕಂಡಳು ನೇರವಾಗಿ ನನ್ನ ಹೆತ್ತವರನ್ನಾ!
ತಿಳಿಸಿಬಿಟ್ಟಳು ನಡೆದ ಎಲ್ಲ ವಿಷಯವನ್ನಾ,
ಹೆತ್ತವರ ಪ್ರೀತಿ! ಬೈಯಲಿಲ್ಲ ಮನೆಯಲಿ ಆ ದಿನ,
ಮುಂದುವರಿಸಿದೆ ಅರಿಯದೆ ನಾ ಪ್ರೀತಿಯನ್ನ.

ಒಂದೆರಡು ವರುಷ ಕಳೆದ ಮೇಲೆ,
ನೊಡಿದೆ ಆಕೆಯ ನಾ!, ಬೈಕಿನಮೇಲೆ.
ತಿಳಿಯಿತು ಮುಂದೆ ಕುಳಿತವ ಅವಳ ಪತಿ,
ಏನಾಗಿರಬೇಕು ಆಗ ನನ್ನ ಹ್ರದಯದ ಸ್ಥಿತಿ?.

- ಚಿರು

31 Oct 2017, 03:37 pm

ಮಿಡಿವ ಹ್ರದಯ ಕನ್ನಡ

ಬಂದು ನೋಡು ಕರುನಾಡ,
ಕಲಿತು ನೋಡು ಕನ್ನಡ.
ಸುತ್ತಿನೋಡು ಮಲೆನಾಡ,
ಆಗುವೆ ನೀ ಗಡಗಡ.

ಹುಲಿಯಂತೆ ಅಬ್ಬರಿಸುವ
ಕನ್ನಡಿಗರ ನಾಡಿದು.
ನಾಡಿಗಾಗಿ ಜೀವಕೊಟ್ಚ
ವೀರಜನರ ಬೀಡಿದು.

ಹಲವು ರೀತಿ ಸಂಸ್ಕ್ರತಿ
ಅದುವೆ ಇದರ ಕೀರುತಿ.
ಶಿಲ್ಪ ಕಲೆಯ ಗೂಡಿದು
ಇದುವೆ ನಮ್ಮ ನಾಡಿದು.

ಹಾವಿನಂತೆ ಹರಿದಾಡುವ
ಹಲವಾರು ನದಿಗಳು.
ಗಾಳಿಯಂತೆ ಹಬ್ಬಿರುವ
ನೊರಾರು ಕವಿಗಳು.

ಕಣ-ಕಣವು ಕರುಣಾಮಯ
ಕನ್ನಡಿಗನ ಮನವದು.
ಎಲ್ಲ ಜನರು ಓಂದೆ ಎಂಬ
ಏಕತೆಯ ಗೂಡದು.

- ಚಿರು

31 Oct 2017, 03:14 pm

ಚುಟುಕು

೧. ನೋಟ

ತಿಳಿಗಾಳಿಯ ರಭಸಕ್ಕೆ
ನನ್ನವಳು ಮುಂಗುರುಳು
ಸರಿಸಿದಾಗ|
ಅವಳ ಆ ಕುಡಿ ನೋಟಕ್ಕೆ ನನ್ನ
ಹೃದಯ ಹಿತವಾಗಿ ಅವಳ ಪಾಲಾಯಿತು||


ಅನಿಲ್ ಕುಲಕರ್ಣಿ(ಎನ್ಆರ್ಕೆ)

- ಅನಿಲ್ ಕುಲಕರ್ಣಿ

31 Oct 2017, 03:00 pm

ಹಾಗೇ ಸುಮ್ಮನೆ..

ನೀ ಬಂದೆ ನನ್ನ ಬಾಳಲ್ಲಿ
ಕಾರಣವೇ ತಿಳಿದಿಲ್ಲ,
ಇರಬಹುದೇನೋ ಕಾರಣ
ಹಾಗೇ ಸುಮ್ಮನೆ...

ನೀ ಕಾಣಲಿಲ್ಲ ಎಂದೂ
ನಿಜದ ಹೃದಯದ ಪ್ರೀತಿ,
ನನಗಾದೆ ನೀನೇ ಒಲವ
ಜೀವನ ಜ್ಯೋತಿ,
ಯಾಕೆಂದು ತಿಳಿದಿಲ್ಲ
ಹಾಗೇ ಸುಮ್ಮನೆ...

ನೋವುಂಡ ಬಳ್ಳಿಗೆ
ನಾನು ಆಸರೆಯಾದೆ,
ನೀ ಹಬ್ಬಿ ನನ್ನಲ್ಲಿ ಗೆಲುವ ಮಲ್ಲಿಗೆಯಾದೆ,
ಈ ಘಮವು ಮನವೆಲ್ಲ ತುಂಬಿರಲಿ ಎಂದೆಂದೂ
ಹಾಗೇ ಸುಮ್ಮನೆ...

ನೀನೊಂದು ಹೂವು
ನಾನೊಂದು ಒಲವು
ಸೇರಿರಲು ನಮ್ಮಲ್ಲಿ ಎಂದೆಂದೂ ಗೆಲುವು
ಬಾಳೋಣ ಹುಡುಗಿ ಎಂದೆಂದೂ ಹೀಗೆಯೇ
ಕಾರಣವೇ ಬೇಕಿಲ್ಲ,
ಹಾಗೇ ಸುಮ್ಮನೆ...

- ಶ್ರೀಗೋ.

31 Oct 2017, 11:12 am

ಕನ್ನಡವೇ ಸತ್ಯ, ಕನ್ನಡವೇ ನಿತ್ಯ.

ಭಾರತಾಂಬೆಯ ಮಡಿಲಲ್ಲಿ,
ಕನ್ನಡಾಂಬೆಯ ತೊಟ್ಟಿಲಲ್ಲಿ,
ಎದ್ದುಬಂದ ಕನ್ನಡಿಗನೇ...
ಕನ್ನಡವೇ ಸತ್ಯ, ಕನ್ನಡವೇ ನಿತ್ಯ.

ಕಂಗು-ತೆಂಗುಗಳ ನಾಡಲ್ಲಿ,
ಹಸಿರು ಹಾಸಿಗೆಯ ಮದ್ಯದಲಿ,
ಹರಿಯುತಿಹಳು ಕಾವೇರಿ ಇಲ್ಲಿ,
ಕನ್ನಡವೇ ಸತ್ಯ, ಕನ್ನಡವೇ ನಿತ್ಯ.

ಕಣ-ಕಣದಿ ತುಂಬಿರಲಿ ಸವಿಗನ್ನಡ,
ಎಲ್ಲೆಲ್ಲೊ ಹರಡು ನೀ ಈ ಕನ್ನಡ.
ಗರ್ಜಿಸುತ್ತಿರು ನಿನೊಬ್ಬ ಕನ್ನಡಿಗನೆಂದು,
ಮರೆಯದಿರು ಕನ್ನಡವ ನೀ ಇನ್ನೆಂದು.

- ಚಿರು

31 Oct 2017, 09:36 am

ಹೇಳು ನಾನೆನು ಮಾಡಲಿ?

ಕಗ್ಗತ್ತಲಲಿ
ಕಣ್ಣ ಹೊಳಪಿಸುತ
ನನ್ನೆದುರು ನಿಂತೆಯಾ?
ಹ್ರದಯ ದೊಳಗೆ
ಬಿರುಗಾಳಿ ಎಬ್ಬಿಸುತ
ಕಣ್ಣೆದುರು
ಬಂದೆಯಾ?

ನಿನ್ನ ನೋಡಿದ ಕ್ಷಣ
ನಿಂತೆ ನಾ, ನಿಂತಲ್ಲೆ.
ನಿನ್ನ ನೋಡಿದ ಮೇಲೆ
ಹೇಳು ನಾನೇನ ಮಾಡಲಿ!!

ನಿನ್ನೆದುರು ಓಡುತ,
ನೀ ನನ್ನ ಹಿಂಬಾಲಿಸುವಂತೆ
ಮಾಡಲೇ??
ನಿನ್ನ ಬಯಕೆ
ಇಡೇರುವ ತನಕ
ನಿನ್ನೆದುರು ನಿಲ್ಲಲೇ??
ಹೇಳು ಹೇಳೆಲೆ!!
ನರಭಕ್ಷಕ ಹುಲಿಯೇ??!

- ಚಿರು

31 Oct 2017, 09:34 am

ಅಮ್ಮ

ಒಂಬತ್ತು ತಿಂಗಳು ಹೊಟ್ಟೆಯಲಿ ಹೊತ್ತೆ,
ನನ್ನಲಿ ಬೆಳಗಿಸಿದೆ ಪ್ರೀತಿಯ ಹಣತೆ,
ನನ್ನ ತಿದ್ದಿ ಸಲಹಿದಾತೆ,
ನೀನೆ ನನ್ನಯ ಪ್ರೀತಿಯ ದೇವತೆ.

ನಿನ್ನೀಂದ ನಾ ಕಂಡೆ ಈ ಜಗವ,
ನಿನ್ನೀಂದ ನಾ ಕಲಿತೆ ಆ ನಗುವ,
ನೀನೊಂದು ರೀತಿಯ ಕನ್ನಡಿ,
ನಿನ್ನ ಕುರಿತು ಬರೆಯಲು ಕಷ್ಟ ಮುನ್ನುಡಿ.

ನಾ ಜಾರಿದರೆ ನಿನ್ನ ಕಣ್ಣಲ್ಲಿ ನೀರಹನಿ,
ನಕ್ಕರೆ ನಾ ನಿನ್ನ ಬಾಯಲ್ಲಿ ಜೇನಹನಿ.
ನನ್ನ ನೋವಿನಲಿ ನಿನ್ನ ನೋವು ಅಡಗಿದೆ,
ನೀಡಿದೆ ಕಷ್ಟ ಅದ ನಾ ಅರಿಯದೆ.

ಅಂದು ನೀ ನೀಡದಿದ್ದರೆ ಜನನ,
ನಾ ಬರೆಯುತ್ತಿರಲಿಲ್ಲ,ಈ ಪುಟ್ಟ ಕವನ.
ನನ್ನ ಪ್ರತಿ ಹೆಜ್ಜೆಗು ನೀನೆ ದಾರಿ.
ನೀನಿದ್ದರೆ ಜೀವನ ಬಲು ದುಬಾರಿ.

- ಚಿರು

31 Oct 2017, 09:34 am

ಜಾತಿಯುದ್ಧ

ಮಾಡೊಣ ಬನ್ನಿ ಎಲ್ಲರು ಸೇರಿ ಯುದ್ಧ,
ಜಾತಿ ಎಂಬ ಎರಡಕ್ಷರದ ವಿರುದ್ಧ.
ಪುಟ್ಟದಾದ ಹ್ರುದಯ ನೊಡಲು ಸುಂದರ,
ಜಾತಿಎಂಬ ಪದದಿಂದ ಇದಾಗಿದೆ ವಿಕಾರ.

ಎಲ್ಲರಲಿ ಹರಿಯುವುದು ಒಂದೆ ರಕ್ತ,
ಆಗೋಣ ಬನ್ನಿ ಜಾತಿಮತದಿಂದ ಮುಕ್ತ.
ಯಾಕಾಗಿ ನಮ್ಮಲ್ಲಿ ಆ ಜಾತಿ, ಈ ಜಾತಿ,
ಹರಡೋಣ ಎಲ್ಲ ಸೇರಿ ಮನುಜ ಪ್ರೀತಿ.

ಬೀಸುವ ತಂಗಾಳಿಗಿಲ್ಲ,
ಹರಿಯುವ ತಿಳಿನಿರೀನೊಳಿಲ್ಲ,
ತಿನ್ನುವ ಅನ್ನದೊಳಗಿಲ್ಲ,
ಇದ ಅರಿತವ ಎಲ್ಲೆಲ್ಲೂ ಪ್ರೀತಿಗಳಿಸಬಲ್ಲ.

ಮನೆಯೊಳಗೆ ಕಾಲನಿಕ್ಕಲು ಬಿಡದ!
ಕುಡಿವ ನೀರ ಮುಟ್ಟಲೂ ಬಿಡದ!!
ಪಕ್ಕದಲಿ ಕುಳಿತು ಮಾತನಾಡಲು ಬಿಡದ!
ಯಾವುದೀ ಜಾತಿ ಸಮಾನತೆಯೇ ಇಲ್ಲದ?

ಎಲ್ಲರು ಹುಟ್ಟುವುದು ತಾಯಹೊಟ್ಟೆಯಲಿ,
ಮಕ್ಕಳೆಲ್ಲ ಬೆಳೆಯುವುದು ಒಟ್ಟಾಗಿ ಆಡುತಲಿ,
ಎಲ್ಲ ಜನರು ಇರುವುದು ಒಂದೆ ಸಮಾಜದಲ್ಲಿ,
ಆದರು ಜಗಳ ಈ ಜಾತಿಎಂಬ ಪದದಲ್ಲಿ!?.

- ಚಿರು

31 Oct 2017, 09:32 am