Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೆನಪುಗಳ ನಾವೆ

ನಾ ಕಂಡ ಅಂದಿನ ಕನಸು
ಮಿಂಚಿನಾತಾಯಿತು ಇಂದಿನ ನೆನಪು
ನೆನಪುಗಳ ನಾವೆಯಲಿ ಬದುಕಿದೆನು ನಾನು
ಆದರೆ ವಿದಿ ಬರೆಯಿತೋ ಒಂದು ಕಥೆ ಯ
ಆ ಕಥೆಯಲ್ಲಿ ಸಿಡಿಲೋಂದು ಬಡಿದಿತು
ಆ ಸಿಡಿಲೆಂಬ ಅಬ್ಬರಕೆ ಮರೆಯಾಗಿ ಹೂಯಿತು
ನನ್ನ ನೆನಪುಗಳ ನಾವೆ
ಜೀವನದ ಕಥೆಯೆ ಮುರಿದು ಬಿಟ್ಟಿದೆ
ಅದನ್ನು ಸರಿ ಮಾಡುವ ಸೂನೆ ಮಳೆ ಸುರಿಯುವುದಾದರು ಯಾವಗ ನೆನಪುಗಳ ನಾವೆಯಲಿ ಬದುಕುತಿರುವೆ ನಾನು.....

- ರಾಗಸಿರಿ....

30 Oct 2017, 04:38 pm

ನಿಸರ್ಗಾಲಾಪ

-- ನಿಸರ್ಗಾಲಾಪ --

ಮಾನವ...!
ಸೃಷ್ಟಿ ನಾನು ಪವಿತ್ರೆ ನಾನು
ಕೇಳಬೇಕಿದೆ ನಿನ್ನನು
ನಾ ಮಾಡಿದ ತಪ್ಪೇನು?

ಜಗತ್ತನ್ನಾಳಲೆಂದು
ಪಣವಿಟ್ಟದ್ದು ನನ್ನನ್ನೇನು!?
ಎಷ್ಟು ನಂಬಿದ್ದೆನಲ್ಲ...
ಕಣ್ಣಲ್ಲಿ ಕಣ್ಣಿಟ್ಟು ಕಾದಿದ್ದೇ...!

ವನ ಮಹೋತ್ಸವದಲಿ ಕಂಡ
ಅಪಾರ ಪ್ರೀತಿಗೆ ಮನಸ್ಸೋತಿದ್ದೆ,
ವನ ಮೃಗಗಳಿಂದ ಕೇಳಿ ನಿನ್ನ
ಗುಣಗಾನ; ನನ್ನನ್ನೇ ನಾ ಮರೆತಿದ್ದೆ,

ದುರ್ಮತಿಯ ಮಾತುಕೇಳಿ
ಕೊಡಲಿ ಹಾಕಿದೆಯಲ್ಲವೇ ನನಗೆ!
ನಿನ್ನ ಕಂಡು ಎಷ್ಟು ದುಃಖಿಸಿದೆ ಗೊತ್ತೇ;
ನನಗಾಗಿ ಅಲ್ಲ, ನಿನಗಾಗಿ!

ಬೇಡುವ ಮೊದಲೇ ಜೀವನೀಡಿದೆ,
ಗಳಿಸಿದ ಸಿರಿಯನೆಲ್ಲ ನಿನಗೇ ಧಾರೆಯೆರೆದೆ,
ರಕ್ಷಿಸೆನ್ನಲು ಕೈ ಹಿಡಿದೆ,
ಎಷ್ಟೋ ಕಷ್ಟಗಳಿಂದ ಪಾರುಮಾಡಿದೆ

ನೀ ಬದುಕಲು ನಾ ಬದುಕಬೇಕು,
ನಾ ಸಾಯಲು ನೀ ಸಾಯಲೇಬೇಕು,
ನನಗಾಗಿ ಅಲ್ಲವಾದರೂ,
ನಿನಗಾಗಿ ನನ್ನನು ಉಳಿಸಿಕೊ!

ಕಾಡಲಿಲ್ಲ,
ಬೇಡಲಿಲ್ಲ,
ಇನ್ನೂ ಏನನ್ನೂ ಕೇಳುವುದಿಲ್ಲ,
ಒತ್ತಾಯವೂ ಮಾಡುವುದಿಲ್ಲ!

-- ಕೊಟ್ರೇಶ ಭೂತಿ

- Kotresh Bhuti

30 Oct 2017, 02:36 pm

ತಾಯಿ

ತಾಯ ಮಡಿಲು ಪ್ರೀತಿ ಕಡಲು
ಉಣಿಸಿ ಎದೆಯ ಹಾಲು
ತಣಿಸಿದಳು ಕಂದನ ಒಡಲು
ಅದುವೇ ಅಮೃತಕೂ ಮಿಗಿಲು

ಅವಳು‌ ಕೊಟ್ಟ ತುತ್ತು ಮುತ್ತು
ಭರವಸೆ ತುಂಬುವ ಪ್ರೀತಿ ಮಾತು
ಬೆಲೆ ಕಟ್ಟಲಾಗದ ಸ್ವಾತಿ ಮುತ್ತು
ಬಾಳಲಿ ಎಲ್ಲಕೂ ಮಿಗಿಲಾದ ಸ್ವತ್ತು

ಹೊತ್ತು ಹೆತ್ತಳು ಕುಡಿಯ ನವಮಾಸ
ಕಂದನ ಬಿಟ್ಟು ಬೇಡ ಇನ್ಯಾರ ಸಹವಾಸ
ಅವಳ ಒಡಲೇ ಇದ್ದರೂ ಉಪವಾಸ
ಕೊಡುವಳು ಕೂಸಿಗೆ ಇನ್ನಿಲ್ಲದ ಹರುಷ

ಅವಳೇ ಬಾಳಿನ‌ ನಿಜ ಅರಿವು
ದಾರಿ ತೋರೊ ಮೊದಲ ಗುರುವು
ಬೆಳಗುವಳು ಕಂದನ ಬಾಳ ದಾರಿ
ಜೢಾನದ‌ ದೀವಿಗೆಯ ಹಚ್ಚಿ ಬೆಳಕ ತೋರಿ

ಸ್ವಾರ್ಥವಿರದ ತಾಯ ಜೀವ
ಕಂಡರೂ ತನ್ನ ನಗುವಿನದೇ ‌ಸಾವ
ಬಯಸಳು ಕರುಳ ಕುಡಿಗೆ ನೋವ
ಅವಳೆ ಈ ಲೋಕದಲಿ ನಿಜ‌ ದೈವ

- ಶ್ರೀಕಾವ್ಯ

30 Oct 2017, 02:20 pm

ಕಾಡು ಮತ್ತು ಮಾನವ

ಮಾನವ ಹೊತ್ತು ಉರಿಯುತಿದೆ ಧರೆ
ಇದು ನಿನ್ನ ಜೀವಕ್ಕಿದ್ದ ಮೂಲ ಆಸರೆ
ಕಳಚು ಇಂದೇ ನಿನ್ನ ಬುದ್ದಿಗಂಟಿರುವ ಪೊರೆ
ನೀನಿಡುವ ಮುನ್ನ ಬದುಕಿಗಾಗಿ ಸಹಾಯದ ಮೊರೆ

ತಲೆಗೇರಿದೆ ಆಧುನಿಕ ಐಷಾರಾಮಿ ಜೀವನದ ನಿಶಾ
ಮಾಡುತಿದೆ ಅದು ಇಡೀ ಮಾನವ ಸಂಕುಲವ ನಾಶ
ನಿನ್ನ ದುರ್ಮಾರ್ಗವಾಗಿದೆ ಇತರೆ ಜೀವಿಗಳಿಗೂ ಪಾಶ
ಎಚ್ಚೆತ್ತುಕೊ ಭೂ‌ ಸಂಕುಲವೇ ತಲುಪುವ ಮುನ್ನ ವಿನಾಶ

ನಾಡು ಕಟ್ಟುವೆನೆಂದು ಮಾಡಿರುವೆ ಕಾಡುಗಳ‌‌ ಹರಣ
ಕಡಿದ ಕಾಡು ಜೊತೆಗೆ ಸೆಳೆದು ಹೋಯ್ತು ಜೀವಿಗಳ ಪ್ರಾಣ
ಹಿಂದೆ ನಿಂತು ಕಾಪಾಡಿದ್ದ ಜೀವಿಗಳ ಸಾವು ಮಾಡಿದೆ ನಿನ್ನ ನಿತ್ರಾಣ
ಉಳಿಸವುಗಳ ನೀನು ಕೂಡ ಹೊಂದುವ ಮೊದಲೆ ಮರಣ

ಎಷ್ಟು ತುಂಬಿಟ್ಟಿದ್ದರೂ ನೀನು ಧನ ಕನಕ
ತಂದುಕೊಡುವುದಿಲ್ಲ ಉಸಿರಾಡಲು ಆಮ್ಲಜನಕ
ಎಲ್ಲಿ ನೋಡಿದರು ತಲೆ ಎತ್ತಿದೆ ಕಾಂಕ್ರೀಟ್ ಕಾಡು
ಮುಂದೆ ನಿನಗಿದೆ ನರಕ್ಕಿಂತಲೂ ಕೆಟ್ಟದಾದ ಪಾಡು

ಹನಿ ನೀರಿರದೆ ಒಡಲ ಬಿರಿದು ಭುವಿ ತಬ್ಬಿರುವಳು ನೋವ
ಇನ್ನೆಲ್ಲೋ ನಿಲ್ಲದೆ ಧೋ ಎಂದು ಸುರಿದು ಮಳೆ ತಂದಿದೆ ಸಾವ
ಅತ್ತೆಲ್ಲೋ ಜೀವ ಹೊತ್ತೊಯ್ಯುವ ರವಿ ಬೀಸಿ ಬಿಸಿಲ ಚಾಟಿ
ಈ ನೋವು ಸಾವಿನ ಕೃತ್ಯಕ್ಕೆಲ್ಲ ನೀನೇನೆ ಮೂಲ ಮೇಟಿ

ಕರಗುತ್ತಿದೆ ಮಂಜು ಹನಿಯ ರೂಪ ತಾಳಿ
ಹನಿ ಸೇರಿದೆ ಕಡಲ ಕೊಲ್ಲಲು ನಿನ್ನ, ಅಹಂಕಾರವ ಸೀಳಿ
ನಿಸರ್ಗ ವಿಕೋಪಗಳು ತೋರುವ ಮುನ್ನ ತಮ್ಮ ಪ್ರತಾಪ
ತಣಿಸು ನೀನು ಈ ಧರೆಯ ವಾತಾವರಣದ ಬಿಸಿಯ ತಾಪ

ನಿನಗಿಲ್ಲ ಉಳಿವು ನೀನೊಬ್ಬನೆ ಬದುಕಿದರೆ ಭೂಮಿ‌ ಮೇಲೆ
ನಿನಗುಳಿವು ಇರವುದು ಉಳಿದರೇನೆ ಎಲ್ಲ ಜೀವ ಸೆಲೆ
ನಿನ್ನ ಸಾವಿನ ಮನೆಗೆ ನೀನೆ ತೋಡುತ್ತಿರುವೆ ಹಳ್ಳ
ತಿಳಿ ನೀ‌ನಂಬಿ ಹೊರಟ ಬಾಳ ದಾರಿಯಲಿ ತುಂಬಿರೋ ಜೊಳ್ಳ

ನೀನೇನೆ ಸೃಷ್ಟಿಸೂ ಪ್ರಕೃತಿಯ ವಿರುದ್ಧ ಅದೆಂದಿಗೂ ಕೃತಕ
ನಿನ್ನುಳಿಸಲು ಅವುಗಳ ಉಳಿವು ಅತೀ ಕ್ಷಣಿಕ
ಕೊಡಲಾರವು ಪ್ರಾಕೃತಿಕ ಸಮತೋಲನಕ್ಕೆ ಬೇಕಿರುವ ತೂಕ‌
ಈಗಲಾದರೂ ನಿನ್ನ ನೀನು ಕಾಪಾಡಿಕೋ‌ ಕಾಡ ಬೆಳೆಸಿ ಉಳಿಸುವ ಮೂಲಕ

- ಶ್ರೀಕಾವ್ಯ

29 Oct 2017, 10:50 pm

ನಿದ್ರಾದೇವಿ

ಕತ್ತಲು ಕವಿಯುತ್ತಿದ್ದಂತೆ ಕುಂಟು
ನೆಪವ ತೋರಿ ಕಣ್ತುಂಬಿಕೊಂಡ
ನಿದ್ರಾದೇವಿಯು ತನ್ನ ಕಿಸೆಯಿಂದ
ಸವಿಗನಸ ನೀಡುವಳೋ ಕಹಿಗನಸ
ನೀಡುವಳೋ ಕಂಡವರಾರು ಇಲ್ಲಿ
ಕನಸ ಮರೆಸಿ ಮರೆಯಾಗುವಳು
ಕಣ್ತೆರೆಯುವಷ್ಟರಲ್ಲಿ
ಮೆಚ್ಚುತ ಮತ್ತೇ ಮುಚ್ಚಿದರೆ ಕಣ್ಣಾಲಿ
ಅವಳೇ ಇರುವುದಿಲ್ಲವಲ್ಲಿ.

- ಅಕವಿ

29 Oct 2017, 08:50 pm

ಖಾಲಿ ಕಾಗದ

ಮರೆತು ಹೋದ ಸಾಲೊಂದು ನೆನಪಾಗಿದೆ
ಆ ಕವಿತೆಯ ಸಾಲಲ್ಲಿ ಬಂದ ಕನವರಿಕೆ ನಿನ್ನದಾಗಿದೆ.
ಖಾಲಿ ಕಾಗದ ಮೇಲೆ ಏನೆಂದು ಗೀಚಲಿ ನಿನ್ನೀ ನೆನಪಲಿ,
ನನ್ನ ಖಾಲಿ ತಲೆಯಲ್ಲಿ ಕವನ ಸಾಲೊಂದು ಬಂತು
ಅದರಲಿ ಮೊದಲು ನೆನಪಾಯಿತು ಆ ನಿನ್ನ ತೊದಲ ಮಾತು.
ಆ ನಿನ್ನ ಸ್ನೇಹದ ಬಿಗಿದಪ್ಪಿದ ಅಪ್ಪುಗೆಯ ಬಿಸಿ ಗಾಳಿಯಲಿ
ನನ್ನ ಮನಸಲಿ ನಿನ್ನ ನೆನಪು ಕದಲಿಸಿತು ತುಸು ತಾಳಿ.
ನನ್ನ ಮನವೆಂಬ ಮರ್ಕಟಕ್ಕೆ ನಿನ್ನ ನೆನಪೇ ಲಗಾಮು,
ನನಗೆ ಯಾಕೋ ಗೊತ್ತಿಲ್ಲ ಈ ನಿನ್ನ ನೆನಪಿನ ತಾಲೀಮು.

- ಉಮೇಶ್.

- Umesh

29 Oct 2017, 08:46 pm

ಇಂತಿ ಚಿರವಿರಹಿ

ಬಿಸಿಲ ಮರೆತ ಮನಕೆ
ಚಳಿಯ ಕೊರೆತ ಶುರುವಾಗಿದೆ
ನೆನ್ನೆಯೆಂಬ ಚಿಂತೆಗೆ
ನಾಳೆಯೆಂಬ ಚಿತೆ ಜೊತೆಯಾಗಿದೆ
ವಿರಹದಿ ಹರಿದ ಹೃದಯಕೆ
ಒಲವ ನೂಲಿನ ಕೊರತೆ ಇದೆ
ಕಡಲ ದಡದ ಉಸುಕಿಗೆ
ಅಲೆಯ ಕಣ್ಣೀರು ತಿಳಿದಿದೆ |೧|

ಮೋಡವ ಮರೆತ ಹನಿಗಳಿಗೆ
ಸೂರ್ಯನ ಸೆಳೆತ ಶುರುವಾಗಿದೆ
ಮಾತನು ತೊರೆದ ಮನಸಲಿ
ಮೌನದ ಮೊರೆತ ಮಾರ್ಧನಿಸುತ್ತಿದೆ
ಕೆಲವು ದಿನಗಳ ಸಂತೋಷವು
ಹಲವು ದಿನಗಳ ಸಂತಾಪವ ಬಯಸಿದೆ
ದಾರಿ ಕಾಣದೆ ಕಂಗಾಲಾದ ಹಡಗಿಗೆ
ಕಡಲ ಸುಳಿಯ ಒಡಲು ಆಹ್ವಾನ ನೀಡಿದೆ |೨|

ಕಂಗಳ ಅಂಗಳ ತೋಯ್ದಿರಲು
ನೋವಿನ ಮೋಡದಿ ಇಳಿದ ಕಣ್ಣೀರೇ ಕಾರಣವಾಗಿದೆ
ಸಾವಿರ ಸ್ವಪ್ನಗಳ ಸೆರೆಯೊಳಗೆ
ಜೀವವು ಜೀವಾವಧಿ ಸಜೆಯ ಅನುಭವಿಸಬೇಕಿದೆ
ನೆನಪ ನಾವೆಯ ನಾವಿಕ ನಾನಾಗಲು
ಕಾಲದ ಕಡಲು ನನ್ನ ಸಾವ ಸವಿಯಲು ಸಜ್ಜಾಗಿದೆ
ಅಲೆಯ ರಭಸಕೆ ದಡ ಸೇರಿದ ಮೀನಿಗೆ
ಕಡಲಿನ ಕುಟಿಲತೆ ಈಗಷ್ಟೇ ತಿಳಿಯಬೇಕಿದೆ |೩|

- ಅಕವಿ

29 Oct 2017, 08:39 pm

ಕಿನ್ನರಿ

ಅಂತರಂಗದ ಹೃದಯ ಮೃದಂಗ
ತಿಳಿಯದೇ ನುಡಿಸಿದೆ ಮನಸೇ ಮಂಗ?
ಅರಿಯದ ಬಯಕೆ
ತಿಳಿಯದ ವಿಷಯಕೆ
ಪರಿತಪಿಸುತಲಿದೆ ವಯಸ್ಸೆ ಹಂಗಾ?
ತಾಳದ ಕನಸು
ಆಗದ ನನಸು
ಕಸಿಕಟ್ಟುತಲಿದೆ ನನಸಿಗೆ ಕನಸು

ಹುಚ್ಚು ಮನಸಿನಲಿ
ಕಿಚ್ಚನು ಹಚ್ಚಿ
ಹೆಚ್ಚೆಚ್ಚಾಯಿತು ಹಚ್ಚೆಯ ರೀತಿ
ಬಡಬಡಿಸಿದೆನು
ತಿಳಿಯದೆ ನಾನು
ಮನಸೆದ್ದೇಳಿತು ಅದುವೇ ಪ್ರೀತಿ
ಎಲ್ಲಿದೇ ಹೃದಯಾ
ಕನಸಿನ ವಿಷಯಾ
ಕಲ್ಪನೆಗೆ ಸಿಕ್ಕಳೋ ಅವಳೇ...! ಆಶಯ

ಅವಳೋ ಸುಂದರಿ
ಕಿರುನಗೆ ಕಿನ್ನರಿ
ಮಂದ ನಗುವಿನಲಿ ಸೆಳೆದ ನಾರಿ
ನಿರ್ಧರಿಸಿದೆನು
ಬದುಕಲಿ ನಾನು
ಪಡೆದುಕೊಳ್ಳುವೆನು ಅವಳನು ನಾನು
-ದೇವ.ಕೆ

- Dev

29 Oct 2017, 08:17 pm

ನಾನಿನ್ನು ಅರಿತಿಲ್ಲ

ನಾನಿನ್ನು ಅರಿತಿಲ್ಲ ಈ ಜಗತ್ತನ್ನು
ನಾಲ್ಕು ಗೋಡೆಗಳ ಮದ್ಯೆ ಮುಸುಕು ಹಾಕಿ ಕೂರಿಸಿರುವೆ ನನ್ನ ಮನಸ್ಸನ್ನು ಹೊರಗಿನ ಪ್ರಪಂಚದ ಪರಿವೆಯೇ ಇಲ್ಲದಂತೆ.

ಹಾರು ಹಕ್ಕಿಯಾಗುವಾಸೆ ನನ್ನ ಕೊರೆದು ಕಾಡುತ್ತಿದ್ದರು ಕೇಳಲಿಲ್ಲವೆಂದು ಅದರ ಕೂಗು
ಮರೆತಂತೆ ಮರಳಿ ಬಯಸುತಿರುವೆ ಮತ್ತೆ
ನಾನು ಸ್ವಾತಂತ್ರ್ಯಳಾಗಬೇಕೆಂದು ಬಂಧಿಯಾಗಿ ಸ್ವಾರ್ಥಿಗಳ ಬಂಧನದಲ್ಲಿ.

ದಿನೇ ದಿನೇ ಓಡುತ್ತಿದೆ ಕಾಲ ಚಕ್ರ ನೂತನ
ಅಂಶಗಳನ್ನು ಅಳವಡಿಕೊಂಡು ನಿಂತ ನಿರಂತೆ ಮುಂದೊಗಳು ಜಾಗವಿಲ್ಲವೆಂದು ನನ್ನಲ್ಲಿ ನಾನೇ ಹಾಕಿಕೊಳ್ಳುತ್ತಿರುವೆ ಸೀಮಿತ ತಿಳುವಳಿಕೆಯ ಮನಸಿನ ಬಾಗಿಲನ್ನು ಮೌನವೆಂಬೆ ಬೀಗದಿಂದ.

ನೆಡಿಯೇ ಹೆಜ್ಜೆ ನಿನ್ನ ನೆರಳ ತೊರೆದು ಬೆಳಕಿನೆಡೆಗೆ
ಸಂಕುಚಿತ ಮನೋಭಾವದಿ ಕುಂಟಿತವಾದ ಕನಸುಗಳನ್ನು ಕಂಡಿದ್ದು ಸಾಕು ಈ ಕ್ಷಣಕೆ ಮಾತೇಲುವ ಮಂದಿ ಮುಂದಿನ ನಿನ್ನ ನೋವು ನಲಿವಿನಲ್ಲಿ ಭಾಗಿಯಾಗರೆಂದು ತಿಳಿದು.

- ಚುಕ್ಕಿ

29 Oct 2017, 07:21 pm

ನನ್ನವಳು

---ನನ್ನವಳು ಚಂದ

ಸ್ವಾತಿಯ ಮಳೆ ಚೆಂದ
ಹೊಳೆದಂಡಿಯ ಹೊಲ ಚಂದ
ಹರೆಯದ ಹೆಣ್ಣು ಬಲು ಅಂದ
ನನ್ನವಳ ಕೆಂದುಟಿಯ ಮೇಲಿನ ನಗಿ ಚಂದ
ತಂದಾನ ತಾನ ತಂದಾನ....!!

ದೇವರಿಗೆ ಹೂ ಚಂದ
ಬಡವನ ಮನ ಚಂದ
ದುಡಿದು ಉಣ್ಣುವ ಅನ್ನ ಬಲು ಅಂದ
ನನ್ನವಳ ಸಿರೆಯ ಅಂಚು ಚಂದ
ತಂದಾನ ತಾನ ತಂದಾನ...!!

ಮಾವಿನ ಗಿಡ ಚಂದ
ಕೋಗಿಲೆಯ ನುಡಿ ಚಂದ
ಗೋವಿನ ಪದವು ಬಲು ಅಂದ
ನನ್ನವಳ ಕಾಲ್ಗೇಜ್ಜೆ ಸದ್ದು ಚಂದ
ತಂದಾನ ತಾನ ತಂದಾನ...!!

ಬಾಳೆಯ ಗೊನೆ ಚಂದ
ಮಲ್ಲಿಗೆ ಪರಿಮಳ ಚಂದ
ಬಸುರಿಗೆ ಹುಣಸೆಯ ಹುಳಿ ಅಂದ
ನನ್ನವಳ ಮುಂಗುರುಳೆ ಚಂದ
ತಂದಾನ ತಾನ ತಂದಾನ...!!

ಕಾಮನಬಿಲ್ಲಿನ ಬಣ್ಣ ಚಂದ
ಅಂಭಾರಿ ಹೊತ್ತ ಆನೆ ಚಂದ
ಕೂಸೊಂದು ಇದ್ದರೆ ಮನ ಮನೆಯೆ ಅಂದ
ನನ್ನವಳ ಕಣ್ಣಿಗೆ ಕಾಡಿಗೆಯೆ ಚಂದ
ತಂದಾನ ತಾನ ತಂದಾನ...!!

ಹುಣ್ಣುಮೆಯ ಚಂದಿರ ಚಂದ
ಅಮವಾಸೆಗೆ ಚುಕ್ಕಿಗಳು ಚಂದ
ಎನ್ನ ಕವಿತೆಗೆ ನಿಮ್ಮ ಪ್ರೀತಿಯೇ ಅಂದ
ನನ್ನವಳಿಗೆ ನಾನಂದ್ರೆ ಬಲು ಚಂದ
ತಂದಾನ ತಾನ ತಂದಾನ...!!
ರವಿಕುಮಾರ್

- ರವಿಕುಮಾರ್

29 Oct 2017, 04:02 pm