ನಾ ಕಂಡ ಅಂದಿನ ಕನಸು
ಮಿಂಚಿನಾತಾಯಿತು ಇಂದಿನ ನೆನಪು
ನೆನಪುಗಳ ನಾವೆಯಲಿ ಬದುಕಿದೆನು ನಾನು
ಆದರೆ ವಿದಿ ಬರೆಯಿತೋ ಒಂದು ಕಥೆ ಯ
ಆ ಕಥೆಯಲ್ಲಿ ಸಿಡಿಲೋಂದು ಬಡಿದಿತು
ಆ ಸಿಡಿಲೆಂಬ ಅಬ್ಬರಕೆ ಮರೆಯಾಗಿ ಹೂಯಿತು
ನನ್ನ ನೆನಪುಗಳ ನಾವೆ
ಜೀವನದ ಕಥೆಯೆ ಮುರಿದು ಬಿಟ್ಟಿದೆ
ಅದನ್ನು ಸರಿ ಮಾಡುವ ಸೂನೆ ಮಳೆ ಸುರಿಯುವುದಾದರು ಯಾವಗ ನೆನಪುಗಳ ನಾವೆಯಲಿ ಬದುಕುತಿರುವೆ ನಾನು.....
ಮಾನವ ಹೊತ್ತು ಉರಿಯುತಿದೆ ಧರೆ
ಇದು ನಿನ್ನ ಜೀವಕ್ಕಿದ್ದ ಮೂಲ ಆಸರೆ
ಕಳಚು ಇಂದೇ ನಿನ್ನ ಬುದ್ದಿಗಂಟಿರುವ ಪೊರೆ
ನೀನಿಡುವ ಮುನ್ನ ಬದುಕಿಗಾಗಿ ಸಹಾಯದ ಮೊರೆ
ತಲೆಗೇರಿದೆ ಆಧುನಿಕ ಐಷಾರಾಮಿ ಜೀವನದ ನಿಶಾ
ಮಾಡುತಿದೆ ಅದು ಇಡೀ ಮಾನವ ಸಂಕುಲವ ನಾಶ
ನಿನ್ನ ದುರ್ಮಾರ್ಗವಾಗಿದೆ ಇತರೆ ಜೀವಿಗಳಿಗೂ ಪಾಶ
ಎಚ್ಚೆತ್ತುಕೊ ಭೂ ಸಂಕುಲವೇ ತಲುಪುವ ಮುನ್ನ ವಿನಾಶ
ನಾಡು ಕಟ್ಟುವೆನೆಂದು ಮಾಡಿರುವೆ ಕಾಡುಗಳ ಹರಣ
ಕಡಿದ ಕಾಡು ಜೊತೆಗೆ ಸೆಳೆದು ಹೋಯ್ತು ಜೀವಿಗಳ ಪ್ರಾಣ
ಹಿಂದೆ ನಿಂತು ಕಾಪಾಡಿದ್ದ ಜೀವಿಗಳ ಸಾವು ಮಾಡಿದೆ ನಿನ್ನ ನಿತ್ರಾಣ
ಉಳಿಸವುಗಳ ನೀನು ಕೂಡ ಹೊಂದುವ ಮೊದಲೆ ಮರಣ
ಎಷ್ಟು ತುಂಬಿಟ್ಟಿದ್ದರೂ ನೀನು ಧನ ಕನಕ
ತಂದುಕೊಡುವುದಿಲ್ಲ ಉಸಿರಾಡಲು ಆಮ್ಲಜನಕ
ಎಲ್ಲಿ ನೋಡಿದರು ತಲೆ ಎತ್ತಿದೆ ಕಾಂಕ್ರೀಟ್ ಕಾಡು
ಮುಂದೆ ನಿನಗಿದೆ ನರಕ್ಕಿಂತಲೂ ಕೆಟ್ಟದಾದ ಪಾಡು
ಹನಿ ನೀರಿರದೆ ಒಡಲ ಬಿರಿದು ಭುವಿ ತಬ್ಬಿರುವಳು ನೋವ
ಇನ್ನೆಲ್ಲೋ ನಿಲ್ಲದೆ ಧೋ ಎಂದು ಸುರಿದು ಮಳೆ ತಂದಿದೆ ಸಾವ
ಅತ್ತೆಲ್ಲೋ ಜೀವ ಹೊತ್ತೊಯ್ಯುವ ರವಿ ಬೀಸಿ ಬಿಸಿಲ ಚಾಟಿ
ಈ ನೋವು ಸಾವಿನ ಕೃತ್ಯಕ್ಕೆಲ್ಲ ನೀನೇನೆ ಮೂಲ ಮೇಟಿ
ಕರಗುತ್ತಿದೆ ಮಂಜು ಹನಿಯ ರೂಪ ತಾಳಿ
ಹನಿ ಸೇರಿದೆ ಕಡಲ ಕೊಲ್ಲಲು ನಿನ್ನ, ಅಹಂಕಾರವ ಸೀಳಿ
ನಿಸರ್ಗ ವಿಕೋಪಗಳು ತೋರುವ ಮುನ್ನ ತಮ್ಮ ಪ್ರತಾಪ
ತಣಿಸು ನೀನು ಈ ಧರೆಯ ವಾತಾವರಣದ ಬಿಸಿಯ ತಾಪ
ನಿನಗಿಲ್ಲ ಉಳಿವು ನೀನೊಬ್ಬನೆ ಬದುಕಿದರೆ ಭೂಮಿ ಮೇಲೆ
ನಿನಗುಳಿವು ಇರವುದು ಉಳಿದರೇನೆ ಎಲ್ಲ ಜೀವ ಸೆಲೆ
ನಿನ್ನ ಸಾವಿನ ಮನೆಗೆ ನೀನೆ ತೋಡುತ್ತಿರುವೆ ಹಳ್ಳ
ತಿಳಿ ನೀನಂಬಿ ಹೊರಟ ಬಾಳ ದಾರಿಯಲಿ ತುಂಬಿರೋ ಜೊಳ್ಳ
ನೀನೇನೆ ಸೃಷ್ಟಿಸೂ ಪ್ರಕೃತಿಯ ವಿರುದ್ಧ ಅದೆಂದಿಗೂ ಕೃತಕ
ನಿನ್ನುಳಿಸಲು ಅವುಗಳ ಉಳಿವು ಅತೀ ಕ್ಷಣಿಕ
ಕೊಡಲಾರವು ಪ್ರಾಕೃತಿಕ ಸಮತೋಲನಕ್ಕೆ ಬೇಕಿರುವ ತೂಕ
ಈಗಲಾದರೂ ನಿನ್ನ ನೀನು ಕಾಪಾಡಿಕೋ ಕಾಡ ಬೆಳೆಸಿ ಉಳಿಸುವ ಮೂಲಕ
ಮರೆತು ಹೋದ ಸಾಲೊಂದು ನೆನಪಾಗಿದೆ
ಆ ಕವಿತೆಯ ಸಾಲಲ್ಲಿ ಬಂದ ಕನವರಿಕೆ ನಿನ್ನದಾಗಿದೆ.
ಖಾಲಿ ಕಾಗದ ಮೇಲೆ ಏನೆಂದು ಗೀಚಲಿ ನಿನ್ನೀ ನೆನಪಲಿ,
ನನ್ನ ಖಾಲಿ ತಲೆಯಲ್ಲಿ ಕವನ ಸಾಲೊಂದು ಬಂತು
ಅದರಲಿ ಮೊದಲು ನೆನಪಾಯಿತು ಆ ನಿನ್ನ ತೊದಲ ಮಾತು.
ಆ ನಿನ್ನ ಸ್ನೇಹದ ಬಿಗಿದಪ್ಪಿದ ಅಪ್ಪುಗೆಯ ಬಿಸಿ ಗಾಳಿಯಲಿ
ನನ್ನ ಮನಸಲಿ ನಿನ್ನ ನೆನಪು ಕದಲಿಸಿತು ತುಸು ತಾಳಿ.
ನನ್ನ ಮನವೆಂಬ ಮರ್ಕಟಕ್ಕೆ ನಿನ್ನ ನೆನಪೇ ಲಗಾಮು,
ನನಗೆ ಯಾಕೋ ಗೊತ್ತಿಲ್ಲ ಈ ನಿನ್ನ ನೆನಪಿನ ತಾಲೀಮು.
ಬಿಸಿಲ ಮರೆತ ಮನಕೆ
ಚಳಿಯ ಕೊರೆತ ಶುರುವಾಗಿದೆ
ನೆನ್ನೆಯೆಂಬ ಚಿಂತೆಗೆ
ನಾಳೆಯೆಂಬ ಚಿತೆ ಜೊತೆಯಾಗಿದೆ
ವಿರಹದಿ ಹರಿದ ಹೃದಯಕೆ
ಒಲವ ನೂಲಿನ ಕೊರತೆ ಇದೆ
ಕಡಲ ದಡದ ಉಸುಕಿಗೆ
ಅಲೆಯ ಕಣ್ಣೀರು ತಿಳಿದಿದೆ |೧|
ಮೋಡವ ಮರೆತ ಹನಿಗಳಿಗೆ
ಸೂರ್ಯನ ಸೆಳೆತ ಶುರುವಾಗಿದೆ
ಮಾತನು ತೊರೆದ ಮನಸಲಿ
ಮೌನದ ಮೊರೆತ ಮಾರ್ಧನಿಸುತ್ತಿದೆ
ಕೆಲವು ದಿನಗಳ ಸಂತೋಷವು
ಹಲವು ದಿನಗಳ ಸಂತಾಪವ ಬಯಸಿದೆ
ದಾರಿ ಕಾಣದೆ ಕಂಗಾಲಾದ ಹಡಗಿಗೆ
ಕಡಲ ಸುಳಿಯ ಒಡಲು ಆಹ್ವಾನ ನೀಡಿದೆ |೨|
ಕಂಗಳ ಅಂಗಳ ತೋಯ್ದಿರಲು
ನೋವಿನ ಮೋಡದಿ ಇಳಿದ ಕಣ್ಣೀರೇ ಕಾರಣವಾಗಿದೆ
ಸಾವಿರ ಸ್ವಪ್ನಗಳ ಸೆರೆಯೊಳಗೆ
ಜೀವವು ಜೀವಾವಧಿ ಸಜೆಯ ಅನುಭವಿಸಬೇಕಿದೆ
ನೆನಪ ನಾವೆಯ ನಾವಿಕ ನಾನಾಗಲು
ಕಾಲದ ಕಡಲು ನನ್ನ ಸಾವ ಸವಿಯಲು ಸಜ್ಜಾಗಿದೆ
ಅಲೆಯ ರಭಸಕೆ ದಡ ಸೇರಿದ ಮೀನಿಗೆ
ಕಡಲಿನ ಕುಟಿಲತೆ ಈಗಷ್ಟೇ ತಿಳಿಯಬೇಕಿದೆ |೩|
ನಾನಿನ್ನು ಅರಿತಿಲ್ಲ ಈ ಜಗತ್ತನ್ನು
ನಾಲ್ಕು ಗೋಡೆಗಳ ಮದ್ಯೆ ಮುಸುಕು ಹಾಕಿ ಕೂರಿಸಿರುವೆ ನನ್ನ ಮನಸ್ಸನ್ನು ಹೊರಗಿನ ಪ್ರಪಂಚದ ಪರಿವೆಯೇ ಇಲ್ಲದಂತೆ.
ಹಾರು ಹಕ್ಕಿಯಾಗುವಾಸೆ ನನ್ನ ಕೊರೆದು ಕಾಡುತ್ತಿದ್ದರು ಕೇಳಲಿಲ್ಲವೆಂದು ಅದರ ಕೂಗು
ಮರೆತಂತೆ ಮರಳಿ ಬಯಸುತಿರುವೆ ಮತ್ತೆ
ನಾನು ಸ್ವಾತಂತ್ರ್ಯಳಾಗಬೇಕೆಂದು ಬಂಧಿಯಾಗಿ ಸ್ವಾರ್ಥಿಗಳ ಬಂಧನದಲ್ಲಿ.
ದಿನೇ ದಿನೇ ಓಡುತ್ತಿದೆ ಕಾಲ ಚಕ್ರ ನೂತನ
ಅಂಶಗಳನ್ನು ಅಳವಡಿಕೊಂಡು ನಿಂತ ನಿರಂತೆ ಮುಂದೊಗಳು ಜಾಗವಿಲ್ಲವೆಂದು ನನ್ನಲ್ಲಿ ನಾನೇ ಹಾಕಿಕೊಳ್ಳುತ್ತಿರುವೆ ಸೀಮಿತ ತಿಳುವಳಿಕೆಯ ಮನಸಿನ ಬಾಗಿಲನ್ನು ಮೌನವೆಂಬೆ ಬೀಗದಿಂದ.
ನೆಡಿಯೇ ಹೆಜ್ಜೆ ನಿನ್ನ ನೆರಳ ತೊರೆದು ಬೆಳಕಿನೆಡೆಗೆ
ಸಂಕುಚಿತ ಮನೋಭಾವದಿ ಕುಂಟಿತವಾದ ಕನಸುಗಳನ್ನು ಕಂಡಿದ್ದು ಸಾಕು ಈ ಕ್ಷಣಕೆ ಮಾತೇಲುವ ಮಂದಿ ಮುಂದಿನ ನಿನ್ನ ನೋವು ನಲಿವಿನಲ್ಲಿ ಭಾಗಿಯಾಗರೆಂದು ತಿಳಿದು.