Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೇಳು ನಾನೆನು ಮಾಡಲಿ?

ಕಗ್ಗತ್ತಲಲಿ
ಕಣ್ಣ ಹೊಳಪಿಸುತ
ನನ್ನೆದುರು ನಿಂತೆಯಾ?
ಹ್ರದಯ ದೊಳಗೆ
ಬಿರುಗಾಳಿ ಎಬ್ಬಿಸುತ
ಕಣ್ಣೆದುರು
ಬಂದೆಯಾ?

ನಿನ್ನ ನೋಡಿದ ಕ್ಷಣ
ನಿಂತೆ ನಾ, ನಿಂತಲ್ಲೆ.
ನಿನ್ನ ನೋಡಿದ ಮೇಲೆ
ಹೇಳು ನಾನೇನ ಮಾಡಲಿ!!

ನಿನ್ನೆದುರು ಓಡುತ,
ನೀ ನನ್ನ ಹಿಂಬಾಲಿಸುವಂತೆ
ಮಾಡಲೇ??
ನಿನ್ನ ಬಯಕೆ
ಇಡೇರುವ ತನಕ
ನಿನ್ನೆದುರು ನಿಲ್ಲಲೇ??
ಹೇಳು ಹೇಳೆಲೆ!!
ನರಭಕ್ಷಕ ಹುಲಿಯೇ??!

- ಚಿರು

31 Oct 2017, 09:34 am

ಅಮ್ಮ

ಒಂಬತ್ತು ತಿಂಗಳು ಹೊಟ್ಟೆಯಲಿ ಹೊತ್ತೆ,
ನನ್ನಲಿ ಬೆಳಗಿಸಿದೆ ಪ್ರೀತಿಯ ಹಣತೆ,
ನನ್ನ ತಿದ್ದಿ ಸಲಹಿದಾತೆ,
ನೀನೆ ನನ್ನಯ ಪ್ರೀತಿಯ ದೇವತೆ.

ನಿನ್ನೀಂದ ನಾ ಕಂಡೆ ಈ ಜಗವ,
ನಿನ್ನೀಂದ ನಾ ಕಲಿತೆ ಆ ನಗುವ,
ನೀನೊಂದು ರೀತಿಯ ಕನ್ನಡಿ,
ನಿನ್ನ ಕುರಿತು ಬರೆಯಲು ಕಷ್ಟ ಮುನ್ನುಡಿ.

ನಾ ಜಾರಿದರೆ ನಿನ್ನ ಕಣ್ಣಲ್ಲಿ ನೀರಹನಿ,
ನಕ್ಕರೆ ನಾ ನಿನ್ನ ಬಾಯಲ್ಲಿ ಜೇನಹನಿ.
ನನ್ನ ನೋವಿನಲಿ ನಿನ್ನ ನೋವು ಅಡಗಿದೆ,
ನೀಡಿದೆ ಕಷ್ಟ ಅದ ನಾ ಅರಿಯದೆ.

ಅಂದು ನೀ ನೀಡದಿದ್ದರೆ ಜನನ,
ನಾ ಬರೆಯುತ್ತಿರಲಿಲ್ಲ,ಈ ಪುಟ್ಟ ಕವನ.
ನನ್ನ ಪ್ರತಿ ಹೆಜ್ಜೆಗು ನೀನೆ ದಾರಿ.
ನೀನಿದ್ದರೆ ಜೀವನ ಬಲು ದುಬಾರಿ.

- ಚಿರು

31 Oct 2017, 09:34 am

ಜಾತಿಯುದ್ಧ

ಮಾಡೊಣ ಬನ್ನಿ ಎಲ್ಲರು ಸೇರಿ ಯುದ್ಧ,
ಜಾತಿ ಎಂಬ ಎರಡಕ್ಷರದ ವಿರುದ್ಧ.
ಪುಟ್ಟದಾದ ಹ್ರುದಯ ನೊಡಲು ಸುಂದರ,
ಜಾತಿಎಂಬ ಪದದಿಂದ ಇದಾಗಿದೆ ವಿಕಾರ.

ಎಲ್ಲರಲಿ ಹರಿಯುವುದು ಒಂದೆ ರಕ್ತ,
ಆಗೋಣ ಬನ್ನಿ ಜಾತಿಮತದಿಂದ ಮುಕ್ತ.
ಯಾಕಾಗಿ ನಮ್ಮಲ್ಲಿ ಆ ಜಾತಿ, ಈ ಜಾತಿ,
ಹರಡೋಣ ಎಲ್ಲ ಸೇರಿ ಮನುಜ ಪ್ರೀತಿ.

ಬೀಸುವ ತಂಗಾಳಿಗಿಲ್ಲ,
ಹರಿಯುವ ತಿಳಿನಿರೀನೊಳಿಲ್ಲ,
ತಿನ್ನುವ ಅನ್ನದೊಳಗಿಲ್ಲ,
ಇದ ಅರಿತವ ಎಲ್ಲೆಲ್ಲೂ ಪ್ರೀತಿಗಳಿಸಬಲ್ಲ.

ಮನೆಯೊಳಗೆ ಕಾಲನಿಕ್ಕಲು ಬಿಡದ!
ಕುಡಿವ ನೀರ ಮುಟ್ಟಲೂ ಬಿಡದ!!
ಪಕ್ಕದಲಿ ಕುಳಿತು ಮಾತನಾಡಲು ಬಿಡದ!
ಯಾವುದೀ ಜಾತಿ ಸಮಾನತೆಯೇ ಇಲ್ಲದ?

ಎಲ್ಲರು ಹುಟ್ಟುವುದು ತಾಯಹೊಟ್ಟೆಯಲಿ,
ಮಕ್ಕಳೆಲ್ಲ ಬೆಳೆಯುವುದು ಒಟ್ಟಾಗಿ ಆಡುತಲಿ,
ಎಲ್ಲ ಜನರು ಇರುವುದು ಒಂದೆ ಸಮಾಜದಲ್ಲಿ,
ಆದರು ಜಗಳ ಈ ಜಾತಿಎಂಬ ಪದದಲ್ಲಿ!?.

- ಚಿರು

31 Oct 2017, 09:32 am

ಕನ್ನಡದ ಕಂಪು

ಹಕ್ಕಿಗಳ ಕಲರವದಿ
ಕನ್ನಡದ ಕಂಪು,
ಅದನೆನೆಯುತ್ತಲಿದ್ದೊಡೆ
ನನ್ನ ಮನವಾಗುವುದು ತಂಪು.

ಇಂಪು ಇಂಪಾಗಿರುವ ಕನ್ನಡ
ಅದ ಬಿಟ್ಚು ಏಕಯ್ಯ? ಎನ್ನಡ! ಎಕ್ಕಡ!
ನಾವಾಗಬೇಕು ಕನ್ನಡದ ಕಣ್ಮಣಿಗಳು
ನಾವು ತಾನೆ ಉಳಿಸಬೇಕು ಕನ್ನಡ ಪದಗಳು.

ತಂಪಾದ ಗಾಳಿಯಲಿ, ಇಂಪಾದ ಇರುಳಿನಲಿ,
ಕನ್ನಡಾಂಬೆಯ ಮುದ್ದು ಕಂದನೇ,
ನಮಿಸಿ ನಲಿ ನೀ ಭುವನೇಶ್ವರಿಗೆ,
ಕನ್ನಡ ತಾಯಿ ರಾಜರಾಜೆಶ್ವರಿಗೆ.

- ಚಿರು

31 Oct 2017, 09:31 am

ಹೇ ಹೃದಯ....

ಶುರುವಾಯಿತು ನಿನ್ನ ಪ್ರೀತಿ ಹುಡುಕಾಟ
ಎದೆಯಲ್ಲಿ ಪ್ರತಿಕ್ಷಣ ಪರದಾಟ,
ಮನಸಿನ ಒಳಗೂ,ಕನಸಿನ ಒಳಗೂ
ಪ್ರತಿ ಕ್ಷಣವೂ ಸೆಳೆದಿದೆ ನಿನ್ನ ಕುಡಿನೋಟ...

ನನ್ನ ಮನಸ್ಸು ಬಯಸುತಿದೆ ಪ್ರತಿಕ್ಷಣ
ನಿನ್ನ ಸವಿ ಮಾತು ಕೇಳಲು ಅನುಕ್ಷಣ,
ಹೇ ಹುಡುಗ ನನ್ನ ಮನಸ್ಸು ಹೇಳುತ್ತಿದೆ ನಿನ್ನೇ ಪ್ರೀತಿಸುವೆನೆಂದು,
ನನ್ನ ಹೃದಯ ಹೇಳುತ್ತಿದೆ ನಿನ್ನೇ ಪ್ರೀತಿಸುವೆನೆಂದು.......!



*ಖುಷಿ*.......

- ಖುಷಿ...

31 Oct 2017, 08:58 am

ಭುವನೇಶ್ವರಿ

ವಂದಿಪೆ ನಾ ಕನ್ನಡಾಂಬೆಗೆ
ಮೊದಲೊಂದಿಪೆ ನಾ ಭುವನೇಶ್ವರಿಗೆ

ಭಾರತಾಂಬೆಯ ವರಪುತ್ರಿಗೆ
ಚರಿತ್ರೆಯೊಳ್ ಮೆರೆದ ತಾಯ್ನಾಡಿಗೆ


ಶ್ರೇಷ್ಟರಂ ಪೊತ್ತ ಭವ್ಯ ಜನನಿಗೆ
ಧೀರರಂ ಪೆತ್ತ ವೀರಮಾತೆಗೆ
ಅನರ್ಘ್ಯ ರತ್ನಗಳೆನಿಸಿದ ಕವಿವಾಣಿಗೆ
ಶರಣರಂ ಪೊರೆದ ಜನ್ಮದಾತೆಗೆ

ವಂದಿಪೆ ನಾ ಜಗದಾಂಬೆಗೆ
ಮೊದಲೊಂದಿಪೆ ನಾ ಭಾರತಾಂಬೆಗೆ
ವಂದಿಪೆನು ನಾ ಭುವನೇಶ್ವರಿಗೆ

ಶ್ರೀ ಭಾರತಾಂಬೆಯ ವರಪುತ್ರಿಗೆ
ಚರಿತ್ರೆಯೊಳ್ ಮೆರೆದ ತಾಯ್ನಾಡಿಗೆ
ಚಕ್ರವರ್ತಿಗಳಾಳಿದ ಚೆಲುವ ನಾಡಿಗೆ
ಅನ್ಯರಂ ಪೊರೆದ ದಾತಾರರ ಬೀಡಿಗೆ

ಧೀರರಂ ಪೆತ್ತ ವೀರಮಾತೆಗೆ
ಶ್ರೇಷ್ಟರಂ ಪೊತ್ತ ಭವ್ಯ ಜನನಿಗೆ
ವೈಭವದಿ ಜಸಂ ಪಡೆದ ಮುದವೀಡಿಗೆ
ಮಹೋದಯರುದಿಸಿದ ಈ ಮಣ್ಣಿಗೆ


ಅನರ್ಘ್ಯ ಕಬ್ಬಿಗರ ಸೃಜಿಸಿದ ಸರಸತಿಗೆ
ಶರಣರಂ ಪೊರೆದ ಜನ್ಮದಾತೆಗೆ
ದಾಸರಂ ನುಡಿಯಿಸಿದ ಧರಿತ್ರಿಗೆ
ಸಿದ್ಧರವತರಿಸಿದ ಶಾಂತಿಧಾಮಕೆ

ಭವ್ಯ ಆಲಯಗಳ ತವರೂರಿಗೆ
ಸಹ್ಯಾದ್ರಿ ಗಿರಿಪಂಕ್ತಿಯ ಸೌಂದರ್ಯಕೆ
ಎಲ್ಲೆಲ್ಲಿಯೂ ತುಂಬಿರಲು ಸಿರಿಸಂಪಿಗೆ
ನದ-ನದಿಗಳೊಡಗೂಡಿದ ನಂದನವನಕೆ

ಬಸವನಂ ಕೊಟ್ಟ ಕ್ರಾಂತಿಭೂಮಿಗೆ
ಮಾತೆಯರ್ ಭವಿಸಿದ ಮಲೆನಾಡಿಗೆ
ಕರುನಾಡ ಕಾವೇರಿಗೆ ಅಡಿದಾವರೆಗೆ
ಶ್ರೀ ಚಾಮುಂಡಿಯ ಪಾದ ಕಮಲಕೆ

ವಂದಿಪೆ ವಂದಿಪೆ ವಂದಿಪೆ

- Kumara.C

30 Oct 2017, 10:18 pm

ಇನಿಯ.....

ಇನಿಯ ನೀನೆಕೆ ಇಷ್ಟು ದೂರ
ಬರಬಾರದೆ ನಿನ್ನ ಜೀವದ ಕಡೆಗೆ
ಹಗಲು ರಾತ್ರಿ ಕಾಯುತಿದೆ ಈ ಜೀವ ನಿನಗಾಗಿ
ನಿನ್ನ ಅಗಲಿ ಅರೆ ಷಣವು ಇರಲಾರೆ ಇನಿಯ
ಒಬ್ಬಳೆ ನಾನು ಇಲ್ಲಿ ಬಯವಾಗಿದೆ ಏಕೂ
ಏನು ಮಾಡಲಿ ಎಲ್ಲಿ ನೂಡಲಿ ಅಲ್ಲಿಯು
ನಿನ್ನ ದೆ ನೆನಪು......
ಕಣ್ಣು ಮುಚ್ಚಿ ದರು ನಿನ್ನ ನಗು
ನನ್ನ ನು ಬಡಿದೆಸಿದೆ......
ಒಬ್ಬಳೆ ಕೂತು ನಿನ್ನ ಮಾತು ಕೆಳಬೇಕಿದೆ
ಬಳಿ ಬಾರೆಏನು.....
ನಿನ್ನ ಮಡಿಲಲ್ಲಿ ಮಗುವಾಗಿ ಮಲಗಬೇಕಿದೆ
ಬಂದು ಬಿಡು ಬೇಗನೆ ....
ನಿನಗಾಗಿ ಕಾಯುತಿಹೆನು ಓ ಇನಿಯ.....

- ರಾಗಸಿರಿ....

30 Oct 2017, 09:53 pm

ಹಿಂತಿರುಗಿ ಬರಲಾರೆಯ

ನೆನಪಲ್ಲಿ ನೋಯುತಿದೆ ಈ‌ ಹೃದಯ
ನೋವಲ್ಲಿಯೇ ಅಳಿಯುತಿದೆ ಹರೆಯ
ನೀನು‌‌ ಕಾಣದಾದೆಯ ಇನಿಯ
ಒಮ್ಮೆ ಹಿಂತಿರುಗಿ ಬರಲಾರೆಯ

ನಿನ್ನಲಿನ್ನೂ ಮನ್ನಿಸಲಾಗದ ಮುನಿಸಿದೆ
ನನ್ನೊಳಗೆ ಇನ್ನೂ ಪ್ರೀತಿಯು ಉಳಿದಿದೆ
ಕಣ್ಣ ನೀರು ಕೆನ್ನೆ ಸೋಕಿ ಮುತ್ತಿಕ್ಕಿದೆ
ಈ‌ ಹೃದಯ ನಿನಗಾಗೆ ಕಾಯುತಿದೆ

ಸುತ್ತಲೂ ಇದ್ದರು ನನಗಾಗಿ ಜೊತೆಗೆ ಎಲ್ಲರೂ
ಬೇಕೆನಿಸುತ್ತಿಲ್ಲ ನಿನ್ನ ಹೊರತು ಇನ್ಯಾರು
ನಿನ್ನ ನೆನಪುಗಳಿಗೆ ಮನಸಾಗಿದೆ ತವರೂರು
ಕೊನೆಯಿಲ್ಲದಾಗಿದೆ ಮರುಗುತಿದೆ ಹೃದಯದೂರು

ಕಳೆದೋಗಲಿ ಇನ್ನೂ ಹತ್ತಾರು ವರುಷ
ಇಲ್ಲದಾಗಲಿ ‌ನನಗೆ ಅಳಿದುಳಿದ ಹರುಷ
ಕಾಯುವೆನು ನಾ‌ ನಿನಗಾಗಿಯೇ ಪ್ರತಿ ನಿಮಿಷ
ಬರುವೆಯಾ ನೀನು ನನ್ನ ಪ್ರೀತಿಯರಿತು ಎನ್ನರಸ

ಕನಸುಗಳು ದಾರಿ‌ ಕಾಣದೆ ಕಳೆದೋಗುವ ಮುನ್ನ
ಕಣ್ಣ ಒಡಲಲಿ ಕಡಲೇ ಹರಿದು ನೀರು ಬತ್ತುವ ಮುನ್ನ
ನಿನಗಾಗಿಯೇ ಕಾದು ನನ್ನುಸಿರು ಹಾರಿ ಹೋಗುವ ಮುನ್ನ
ನೀ ಒಮ್ಮೆ ಹಿಂತಿರುಗಿ ಬಂದು ಸೇರಿಬಿಡು ‌ನನ್ನ

- ಶ್ರೀಕಾವ್ಯ

30 Oct 2017, 09:07 pm

........

ಒಡಲ ನೋವಿಗೆ ಸಂತೆೃಕೆಯೇ ಇರದೆ
ನಾ ಸೋತು ಹೋಗುವ ಮುನ್ನ .....

ಕನಸು ಕಲ್ಪನೆಗಳ ನಡುವೆ
ನಾ ಬೆಂದು ಹೋಗುವ ಮುನ್ನ.....

ಸಾವಿರಾರು ನೊಂದ ಪ್ರೇಮಿಗಳಲ್ಲಿ
ನಾನೋಬ್ಬಳಾಗುವ ಮುನ್ನ .....

ನೀನಿಲ್ಲದೆ ಬರುವ ನಾಳೆಗಳ ನೆನೆದು
ಅತ್ತು ಅತ್ತು ನಿದ್ದೆ ಬರುವ ಮುನ್ನ .....

ನೀನೊಮ್ಮೆ ಬರಬಾರದೆ ???
ನಿನಗಾಗಿ ಸಾಯುವವರೆಗು ಕಾಯುವೆ .....

- Shilpa

30 Oct 2017, 06:23 pm

ನಿನ್ನ ನೆನಪು.....

ಕಣ್ಣ ಹನಿಗಳು ಮರೆತರು ನಿನ್ನ
ಈ ಹೃದಯವು ಮರೆಯಲಾಗದು
ಕಣ್ಣ ಹನಿಗೇನು ಗೊತ್ತು
ಹೃದಯಕ್ಕೆ ಆದ ನೋವು
ನಾನತ್ತರೂ , ನಕ್ಕರೂ
ಕಣ್ಣೀರಿನ ಬಣ್ಣ ಬದಲಾಗದು
ನೀ ಜೊತೆಯಲ್ಲಿದ್ದರೂ ಇಲ್ಲದಿದ್ದರೂ
ನಿನ್ನ ನೆನಪನ್ನೆಂದು ಅಳಿಸಲಾಗದು.....

- Shilpa

30 Oct 2017, 06:23 pm