ನನ್ನತ್ತ ನಾ ಹೋರಟಾಗ
ಅರಳಿದ ಗುಲಾಬಿ ಹೂ ಒಂದ ಕಂಡೆ
ಆದರೆ ಅದರ ಸುತ್ತಲೂ ಮುಳ್ಳಿರುವುದನ್ನ
ಲೆಕ್ಕಿಸದೆ ಮನಸೋತೆ
ಪ್ರತಿ ಕ್ಷಣ ಕ್ಷಣಕ್ಕೂ ಮುಳ್ಳು ಚುಚ್ಚಿದಾಗಲೋಮ್ಮೆ ಯವ್ವನ ಪ್ರಶ್ನಿಸುತ್ತಿದೆ ಉತ್ತರಿಸದೆ ಸುಮ್ಮನೆ ಮೂಕನಾಗಿ ಕುಳಿತಿರುವೆ ಮೂಕನಾಗಿ ಕುಳಿತಿರುವೆ
ಭಾವನೆಗಳ ಮೆಲುಕು
ನೈಜ್ಯ ದೃಶ್ಯಗಳ ತುಣುಕು
ಕಳೆದ ಜೀವನದ ಚಿತ್ರಣ
ಮರುಕಳಿಸುವ ಮನದಂಕಣ
ಸಿಹಿ ಕ್ಷಣಗಳ ಸವಿ ಸಿಂಚನ
ಕಹಿ ಕ್ಷಣಗಳ ಕಟು ಚಿಂತನ
ಜೀವನದ ಅನುಭವಗಳ ಬುತ್ತಿ
ಭಾವನಾ ಲೋಕದ ಮಳೆಬಿಲ್ಲು
ನೆನಪೇ....ನೀ...ನೆನಪಿಸುತ್ತಾ...
ನೆನಪಿನಲ್ಲಿರು........
ಕನ್ನಡಾಂಭೆಯ ಕೀರ್ತಿಯ ಕಳಶವು ಕನ್ನಡ
ಶರಣರ ಜ್ಞಾನ ದೀಪವು ಕನ್ನಡ
ಕವಿಗಳ ಕಲ್ಪನಾ ಲೋಕವು ಕನ್ನಡ
ವಚನಾಕಾರರ ದಿವ್ಯ ಸಾಹಿತ್ಯವು ಕನ್ನಡ
ದಾಸರ ಸಾತ್ವೀಕ ಸವಿ ನುಡಿಯು ಕನ್ನಡ
ಸಾಹಿತಿಯ ಸಿರಿವಂತಿಕೆಯು ಕನ್ನಡ
ವೀರ ಕಲಿಗಳ ಅಮರ ಜ್ಯೋತಿಯು ಕನ್ನಡ
ಜನಪದ ಶೈಲಿಯ ಸೊಗಡು ಕನ್ನಡ
ಕಲೆಗಾರರ ಅದ್ವಿತೀಯ ಕೌಶಲ್ಯವು ಕನ್ನಡ
ಗಿರಿವನಗಳ ಸಮೃದ್ಧಿಯ ಸಂಪತ್ತು ಕನ್ನಡ
ಗಾನ ಕೋಗಿಲೆಗಳ ಸುಮಧುರ ಸ್ವರವು ಕನ್ನಡ
ನದಿಝರಿಗಳ ಸಡಗರದ ಸೊಬಗು ಕನ್ನಡ
ಕನ್ನಡಿಗರ ಹೃದಯ ಮಿಡಿತವು ಕನ್ನಡ
ಕನ್ನಡ....ಸವಿಗನ್ನಡ......
ನೋಡಿದೆನು ಮೊದಲನೆಯ ದಿನ
ಇಷ್ಟಪಟ್ಟೆನು ಎರಡನೆ ದಿನ
ಮಾತನಾಡಿಸಬೇಕೆನಿಸಿತು ಮರುದಿನ
ನೀನು ಸಿಗುವೆ ಯಾವದಿನ ......
ಕನಸು ತುಂಬಾ ಕರುಣೆಇರಲಿ
ಮನಸು ತುಂಬಾ ಮಮತೆ ಇರಲಿ
ತುಟಿತುಂಭಾ ನಗುಇರಲಿ
ನೀನು ಖಂಡಾಗ ನನ್ನ ನೆನಪಿರಲಿ
ಕುಂತರು ನಿಂತರು ನಿನ್ನದೆ ನೆನಪು ಗೆಳತಿ ......
ಹಕ್ಕಿ ಇದರೆ ಹಾರಿ ಭಾ
ನದಿ ಇದ್ದರೆ ಹರಿದು ಭಾ
ನನ್ನ ಮೇಲೆ ಪ್ರೀತಿ ವಿಶ್ವಾಸ
ಇದ್ದರೆ ನಾ ಕರೆದಲಿ ಬರುವೆಯಾ.........
ಆಕಾಶದ ತುಂಬಾ ನಕ್ಷತ್ರಗಳು ಕಂಡೆ
ಅದರಲ್ಲಿ ಒಂದನ್ನು ಮಾತ್ರ ಆರಿಸಿಕೊಂಡೆ
ಆ ನಕ್ಷತ್ರದ ಅಮೂಲ್ಯವಾದ ಸ್ನೇಹ ಬೆಳಸಿಕೊಂಡೆ
ಆ ನಕ್ಷತ್ರ ನಿನಾಗಿರುವೇ ಎಂದು ಕೊಂಡೆ ಗೆಳತಿ...
ಇಂತಿ ನಿಮ್ಮ ಪ್ರೀತಿಯ (ಹುಚ್ಚಲಿಂಗೇಶ ಭಾವಿಕಟಿ)