ಎಲ್ಲಿ ಹುಡಕಲಿ
ಎಷ್ಟು ಹುಡಕಲಿ
ಎಲ್ಲಿ ಅಡಗಿದ್ದಿಯಾ
ಆಳದಿಂದ ಅಗೆದು ತಂದೆ
ಸಾಕಷ್ಟು ಪ್ರೀತಿ ಹೊತ್ತ ಕನಸುಗಳ
ಕಣ್ಮುಂದೆ ಬಂದು ಇಳಿಸಬಾರದೆ
ಕಣ್ಣಿಗೆ ಕಾಣದ ಲೆಕ್ಕಸಿಗದ ತೂಕದಿ
ನಾ ಹೊತ್ತು ತಂದಿರುವ ಪ್ರೀತಿಯ
ಸುರಿಯಲು ನೀರಲ್ಲ
ತಿನ್ನಿಸಲು ಸಿಹಿಯಲ್ಲ
ಅಲಂಕರಿಸಲು ಓಡವೆಯು ಅಲ್ಲ
ಮನದಾಳದಲ್ಲೆ ಉಣಬಡಿಸುವೆ
ನಿನಗಾಗಿ ಹುಡುಕಾಟ ನೆಡೆಸುತ್ತಿರುವೆ
ಬರಬಾರದೆ ಬಳಿಗೆ ಒಮ್ಮೆಯಾದರೂ..
ಬದುಕೆನ್ನುವ ಭೂಮಿ ಯಲ್ಲಿ
ಪ್ರೀತಿ ಎನ್ನುವ ಸಾಗರದಲ್ಲಿ
ನಂಬಿಕೆ ಎನ್ನುವ ದೋಣಿಯಲ್ಲಿ
ಸಾಗುತಿರುವ ಅಂಬಿಗ ನಾನು
ಈ ಸಾಗರದ ಅಲೆಗೆ ಸಿಲುಕಿ
ದಾರಿ ತಪ್ಪಿಸದೆ ಈ ದೋಣಿ
ಒಡೆದು ಮುಳುಗುವ ಮುನ್ನ
ದಡ ಸೆರಿಸು ನನ್ನ.....
ಇಷ್ಟು ದೊಡ್ಡ ಸಾಗರದಲ್ಲಿ
ನಾನು ಸಾಗಿ ನನ್ನ ದಾರಿಯಲ್ಲಿ
ಹೂಗಿ ದಡವಸೆರುವೆನೆ ನಾನು
ನನ್ನ ಜೀವನದ ದಡ ಸೇರುವೇನೆ
ಈ ದೂಣಿ ಮುಳುಗುವ ಮುನ್ನ
ದಡ ಸೆರಿಸಿಯೆ ಬಿಡು ಅಲೆಯೆ ನನ್ನ
ಬದುಕಿ ಬಿಡುವೇನು ಹೇಗೂ...
ನಿನ್ನ ನಂಬಿ ನಿನೋಂದಿಗೆ ನನ್ನ
ಪಯಣ ಮುಳುಗಿಸಬೇಡ ನನ್ನ
ಜೊತೆಯಾಗಿ ಕರೆದೂಗಿ ದಡ ಸೇರಿಸು ನನ್ನ
ಎ ನಂಬಿಕೆಯ ದೂಣಿಯೆ ನೀ ಮುಳುಗದೆ
ನನ್ನ ಮುಳುಗಿಸದೆ ದಡವ
ಸೆರಿಸಿ ಬಿಡು.........
ಮುಳುಗುವ ಹೆದರಿಕೆ
ಏಕೋ ಕಾಡಿದೆ ನನ್ನ ದಡ ಸೆರಿಸು.....
ನಂಬಿಕೆಯ ದೋಣಿ.......
ನೇತ್ರಾವತಿ ಶರಾವತಿ ಕೃಷ್ಣೇಕಾವೇರಿ
ನದಿಗಳ ಮಡಿಲು ತಾಯಿ ಭುವನೇಶ್ವರಿ
ಮಲೆನಾಡ ಮಣ್ಣ ಹಸಿರ ಚೆಲುವ ಮೈಸಿರಿ
ಕನ್ನಡಮ್ಮನ ಸೌಂದರ್ಯಕೆ ಸೊಬಗ ಗರಿ
ಪಶ್ಚಿಮಘಟ್ಟದಲಿ ಭವ್ಯ ಜೀವಸಂಕುಲದಾಟ
ಗಿರಿ ಶಿಖರಗಳೆ ಅವಳಿಗೆ ತೊಡಿಸಿದ ಕಿರೀಟ
ಧುಮ್ಮಿಕ್ಕುವ ಜಲಪಾತಗಳ ವೈಭವದ ಮಾಟ
ಉತ್ತರದಿ ದಕ್ಷಿಣವರೆಗೂ ವೈವಿಧ್ಯ ನೋಟ
ಆದಿಕವಿಗಳು ಪಂಪ ರನ್ನ ಜನ್ನ ಪೊನ್ನ
ಕನಕ ಪುರಂದರ ಅಕ್ಕ ಮಹಾದೇವಿ ಬಸವಣ್ಣ
ಮಹಾ ಕಾವ್ಯವ ಹರಿಸಿ ಸವೆಸಿದರು ಬಾಳ ಯಾನ
ಜೢಾನಪೀಠ ಪುರಸ್ಕೃತರಿಗೂ ಕನ್ನಡಮ್ಮನೇ ತಾಣ
ಚಿನ್ನದ ನಾಡು ಗಂಧದ ಬೀಡು ಚೆಲುವ ಕರುನಾಡು
ಸಾಹಿತ್ಯ ಸಂಗೀತ ಸಾರುತಿವೆ ಅವಳೊಡಲ ಹಾಡು
ನಾಟ್ಯ ನೃತ್ಯ ಯಕ್ಷಗಾನ ಸಿರಿಯೂ ಅವಳಲಿದೆ ನೋಡು
ಅವಳ್ವೈಭವಕೆ ಸಾಕ್ಷಿ ಹಂಪೆ ಐಹೊಳೆ ಹಾಸನ ಹಳೆಬೀಡು
ಸಾಗರ ರಾಜನಿಗೂ ನೆಲೆಯಾಗಿದೆ ಕರುನಾಡ ಕರಾವಳಿ
ರಾಜರಾಣಿಯರು ಮಣ್ಣಾದರು ಈ ನೆಲದಿ ವೈಭವದಿ ಆಳಿ
ಕನ್ನಡಮ್ಮ ಕಂಡರೂ ಲೆಕ್ಕವಿಲ್ಲದಷ್ಟು ಹಾವಳಿ
ಜಗದಗಲ ಹರಡಿರುವಳ ಅವಳ ಬಲದ ಪ್ರಭಾವಳಿ
ಕನ್ನಡನುಡಿಯೇ ಕರುನಾಡಿಗೆ ಅರಿಶಿಣ ಕುಂಕುಮ
ಎಲ್ಲೆಡೆ ಜೇಂಕರಿಸಲಿ ಸವಿ ನುಡಿಯ ಡಿಂಡಿಮ
ಅವಳಿಗಲಂಕಾರ ಕರುಣೆ ಪ್ರೀತಿ ತ್ಯಾಗಗಳ ಸಂಗಮ
ನೆಲ ಜಲ ಭಾಷೆಗೆ ಮುಡಿಪಾದವನೆ ಇಲ್ಲಿ ನಿಜ ಜಂಗಮ
ಹಲ್ಮಿಡಿಯಾದಿ ನೂರು ಹಲವು ಶಾಸನ
ಸಾರಿವೆ ಅವಳೊಡಲ ಭಾಷೆಯ ಇತಿಹಾಸಾನ
ಯಾರದರೇನು ಹಿಂದೂ ಕ್ರೈಸ್ತ ಮುಸಲ್ಮಾನ
ಅವಳ ತಾಯ ಮಡಿಲಲಿ ಎಲ್ಲರೂ ಸಮಾನ
ನಾಡು ಬಿಟ್ಟರೇನು?
ನರ ನಾಡಿಗಳಲ್ಲಿ ಉಂಟು
ಕನ್ನಡ ನಂಟು
ಆಡು ಭಾಷೆ ದೂರಾದರೇನು?
ರಕ್ತಗತವಾಗಿದೆ ಅಭಿಮಾನದ ಗಂಟು.
ಕೂಡಿ ನಲಿದಾಡವ ಅದೃಷ್ಟವಿಲ್ಲ ದಿದ್ದರೇನು ?
ನಡೆಯಲ್ಲಿದೆ ಕನ್ನಡ
ನುಡಿಯಲ್ಲಿದೆ ಕನ್ನಡ
ಅಲೆಗಳಲ್ಲಿ ಮೂಡದ ತಂಪಾದ ಇಬ್ಬನಿ ಎಲ್ಲಿಂದಲೋ ಬಂದು ಇಂದು ಮನತಣಿಸಿದೆ ನಿನ್ನಂತೆ ನನ್ನಲ್ಲಿ.
ಭ್ರಮೆಯಲ್ಲಿ ಬದುಕುತಿರುವೆ ನನ್ನೆದುರು ಇಲ್ಲದಿರುವ ನಿನ್ನ ರೂಪ ನಾನೆಂದು ನೆನೆದು ನನ್ನಲ್ಲಿ.
ನನ್ನ ಹೆಸರ ಕರೆದಂತೆ ನೀನು ಪ್ರತಿಕ್ಷಣವೂ ಆಚೀಚೆ ನೋಡುವುದು ಅಭ್ಯಾಸವಾಗೋಯ್ತು ನಿನ್ನ ಸ್ಪರ್ಶ ಮನದ ಬಳಿ ಕಾಣದೆ ನುಗ್ಗಿ ಬಂದಾಗ.
ಮೆಲ್ಲಾ ಮೆಲ್ಲನೆ ಕಚ್ಚಿ ನಿನ್ನ ಉಸಿರು ಬೆಸುಗೆಯಾಕಿದೆ ಭಾನಂಚಿನ ನಿರಂತೆ ನನ್ನ ಹೃದಯದಲ್ಲಿ ರುದಿರದಂತೆ ಬದಲಾಗಿ.
ನಿನ್ನ ನೋಡಲು ಕಾದು ಕಾದು ನನ್ನ ಕಣ್ಣುಗಳು
ಬೆವರು ಸುರಿಸುತ ನನ್ನೊಳಗಿನ ಭಾವಸರದಿಯ
ಕಾಡಿ ಇಂದು ನನ್ನ ಜವಾಬು ಬೇಡುತಿವೆ ನನ್ನ ಪ್ರೀತಿಯ ರೂಪ ಬಚ್ಚಿಡಲು ನೀನ್ಯಾರು ಹೇಳೆಂದು ಸರ್ವಾಧಿಕಾರದಿ.