Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನ್ನಡ

ಮನದಲ್ಲಿ ಮೂಡಿದ ಸೊಗಸಾದ
ಭಾಷೆ ಕನ್ನಡವಾಯಿತು.

ಪ್ರತಿಯೊಬ್ಬ ಕನ್ನಡಿಗನ ಮನಸೇರಿ
ಈ ಭಾವ ಕವನವಾಯಿತು.

ನಮ್ಮೆಲ್ಲರ ಭಾವ ಭಾಷೆಗಳ ಬಿಡಿಸಿಲಾಗದ
ಬಂಧನ ಕನ್ನಡ ಕವನವಾಯಿತು.

- ಚುಕ್ಕಿ

01 Nov 2017, 11:25 pm

ಎಂದೂ ಕನ್ನಡ

ನಾಡು ಬಿಟ್ಟರೇನು?
ನರ ನಾಡಿಗಳಲ್ಲಿ ಉಂಟು
ಕನ್ನಡ ನಂಟು
ಆಡು ಭಾಷೆ ದೂರಾದರೇನು?
ರಕ್ತಗತವಾಗಿದೆ ಅಭಿಮಾನದ ಗಂಟು.
ಕೂಡಿ ನಲಿದಾಡವ ಅದೃಷ್ಟವಿಲ್ಲ ದಿದ್ದರೇನು ?
ನಡೆಯಲ್ಲಿದೆ ಕನ್ನಡ
ನುಡಿಯಲ್ಲಿದೆ ಕನ್ನಡ

- ಎಸ್ಕೆ

01 Nov 2017, 11:07 pm

ಅಲೆಗಳ ಹಾವಳಿ

ಅಲೆಗಳಲ್ಲಿ ಮೂಡದ ತಂಪಾದ ಇಬ್ಬನಿ ಎಲ್ಲಿಂದಲೋ ಬಂದು ಇಂದು ಮನತಣಿಸಿದೆ ನಿನ್ನಂತೆ ನನ್ನಲ್ಲಿ.

ಭ್ರಮೆಯಲ್ಲಿ ಬದುಕುತಿರುವೆ ನನ್ನೆದುರು ಇಲ್ಲದಿರುವ ನಿನ್ನ ರೂಪ ನಾನೆಂದು ನೆನೆದು ನನ್ನಲ್ಲಿ.

ನನ್ನ ಹೆಸರ ಕರೆದಂತೆ ನೀನು ಪ್ರತಿಕ್ಷಣವೂ ಆಚೀಚೆ ನೋಡುವುದು ಅಭ್ಯಾಸವಾಗೋಯ್ತು ನಿನ್ನ ಸ್ಪರ್ಶ ಮನದ ಬಳಿ ಕಾಣದೆ ನುಗ್ಗಿ ಬಂದಾಗ.

ಮೆಲ್ಲಾ ಮೆಲ್ಲನೆ ಕಚ್ಚಿ ನಿನ್ನ ಉಸಿರು ಬೆಸುಗೆಯಾಕಿದೆ ಭಾನಂಚಿನ ನಿರಂತೆ ನನ್ನ ಹೃದಯದಲ್ಲಿ ರುದಿರದಂತೆ ಬದಲಾಗಿ.

ನಿನ್ನ ನೋಡಲು ಕಾದು ಕಾದು ನನ್ನ ಕಣ್ಣುಗಳು
ಬೆವರು ಸುರಿಸುತ ನನ್ನೊಳಗಿನ ಭಾವಸರದಿಯ
ಕಾಡಿ ಇಂದು ನನ್ನ ಜವಾಬು ಬೇಡುತಿವೆ ನನ್ನ ಪ್ರೀತಿಯ ರೂಪ ಬಚ್ಚಿಡಲು ನೀನ್ಯಾರು ಹೇಳೆಂದು ಸರ್ವಾಧಿಕಾರದಿ.

- ಚುಕ್ಕಿ

01 Nov 2017, 11:00 pm

ನಿರ್ಧರಿಸುವವರೆಗೂ

ಬಯಕೆ ಎಂಬ ಸುಕುಮಾರಿ ಸ್ವಾರ್ಥ ಪುಟದಲಿ
ಪ್ರೀತಿ ಎಂಬ ಕಂಬಳಿಯೊದ್ದು ಲೇಖನಿಯ ಗಡಿಬಿಡಿ ಇಲ್ಲದೆ ಮಲಗಿದೆ ನಾನಿಂದು ಎಚ್ಚೆತ್ತು ನನ್ನಲ್ಲಿ ನಾನಿರಳು ನಿರ್ಧರಿಸುವವರೆಗೂ!!!!

- ಚುಕ್ಕಿ

01 Nov 2017, 10:52 pm

ರಾಜ್ಯೋತ್ಸವ

ವಜ್ರಮಹೋತ್ಸವದ ಸಡಗರದಲಿ
ಜನ್ಮದಿನದ ಸವಿನೆನಪಲಿ,ನಿನ್ನ
ಮೆರೆಸುತಿಹರು ನಿನ್ನ ಮಕ್ಕಳು
ಮದದೊಳಗಿನ ಮುದದಲಿ!

ನಿನ್ನಲ್ಲಿನ ಕೊರತೆಯ ಮರೆತು
ರಂಜನೆಯಲಿ ಮೈಮರೆತು
ಮತದಾರನ ತಲೆಸವರಿ
ಕೂರುವರು ಅಶಾಶ್ವತದ ಕುರ್ಚಿಯೇರಿ!

ಬಹುದಿನಗಳು ಪರಿತಪಿಸಿ
ಬಹು ಪ್ರಯಾಸದಿ,ಹಲವರು
ನಿನ್ನ ಕರುಳಕುಡಿಗಳ ಒಗ್ಗೂಡಿಸಿ
ಸ್ವತಂತ್ರ ನಾಡೆಂದು ಘೋಷಿಸಿದರು!

ಸಾಗಿಬಂದ ಸನ್ಮಾರ್ಗವ ಮರೆತಿಹರು
ಆರ್ಜನೆಯ ಮಾರ್ಗವ ಅರಸುತಿಹರು
ಆಪಾದಕರೆ ನಮ್ಮನಾಳುತಿಹರು
ಸಾಚಾತನವ ಎಲ್ಲಿ ಕಾಣುವರು!






ಶಾರಧ

- ಶಕುಂತಲಾ

01 Nov 2017, 09:39 pm

ಪಾತಾಳಕೆ ತಳ್ಳಿದೆ

ಕಡಲಿನ ತೀರವು ಇಂದು
ಮೌನ ರಾಗ ಹಾಡಿದೆ!!
ಪಾತಾಳಕೆ ಕರೆದೊಯ್ಯಲು
ಅಲೆಯು ಬಲೆಯ ಬೀಸಿದೆ!!

ಸುಮ್ಮನಿರದೇ ತಂಪು ಗಾಳಿ
ನನ್ನ ಎಳೆದು ತಂದಿದೆ!!
ಅಲೆಗಳೊಡನೆ ತೇಲುವ ಆಟ
ಆಡಿ ಗೆಲ್ಲು ಎಂದಿದೆ!!

ಮುಗ್ಧವಾದ ಮನಸಿನಲ್ಲಿ
ಬಿರುಗಾಳಿಯು ಎದ್ದಿದೆ!!
ಅಬ್ಬರದ ಏರಿಳಿತಕ್ಕೆ
ನನ್ನ ನೂಕಿ ನಗುತಲಿದೆ!!

ಅಲೆಗಳೊಡನೆ ಯುದ್ಧ ಸಾರಿ
ಮನವು ತೇಲಿ ಬಂದಿದೆ!!
ಮಳೆಯ ರೂಪದಿ ಬಂದು ನೀ
ನನ್ನ ಪಾತಾಳಕೆ ತಳ್ಳಿದೆ!!

- ಪಿ.ಜಿ.ಜ್ಯೋತಿ

01 Nov 2017, 08:41 pm

ಗಿಣಿ ರಾಮ

ಹಸಿರಾದ ಮರದಲ್ಲಿ
ಹಸಿರು ಗಿಣಿಯ ಗಾನ!!
ಹೆಸರೇನು ಕೇಳಲು ನಾನು
ನೀ ನುಡಿದೆ ರಾಮ ರಾಮ!!

ಕೆಂಪು ಕೊಕ್ಕಿನಿಂದ ನೀನು
ಇಂಪು ಮಾತನಾಡು ರಾಮ!!
ಕಣ್ಣು ಮಿಟುಕಿ ನೋಡುವುದೇಕೆ
ಅಯ್ಯೋ ರಾಮ ರಾಮ!!

ರೆಕ್ಕೆ ಬಿಚ್ಚಿ ಹಾರುವ ಮೊದಲು
ನೀ ಮುತ್ತ ನೀಡು ರಾಮ!!
ದೂರದಿಂದ ಬಂದೆ ನಾನು
ಮುದ್ದಿಸಲು ನಿನ್ನ ಗಿಣಿ ರಾಮ!!

- ಪಿ.ಜಿ.ಜ್ಯೋತಿ

01 Nov 2017, 08:24 pm

ಕಂದನಿಗಾಗಿ ತಾಯ ಹಂಬಲ

ಮೊಟ್ಟೆಯಿಂದ ಹೊರ ಬಂದ ಪುಟ್ಟ ಹಕ್ಕಿಗೆ
ಗುಟುಕು ನೀಡೋ ತಾಯಿ ಆಗೋ ಆಸೆ ಮನಸಿಗೆ!!
ರೆಕ್ಕೆ ಬರದೇ ಮುದುರಿ ಕುಳಿತ ಪುಟ್ಟ ಹಕ್ಕಿಗೆ
ರೆಕ್ಕೆ ಬಡಿದು ಹಾರ ಕಲಿಸೋ ಆಸೆ ಮನಸಿಗೆ!!

ಮಕ್ಕಳಿಲ್ಲ ಎಂದು ಕೊರಗೋ ತಾಯ ಮನಸಲಿ
ಮಮತೆ ತುಂಬಿ ಹರಿದಿದೆ ಕೂಸು ಕಾಣದೇ!!
ಮಡಿಲು ಬರಿದಾದರೂ ಮಮತೆ ಬರಿದಾಗದು
ಕಂದ ನೀ ಬಾ ಇಲ್ಲಿ ತಾಯಿ ಮಡಿಲು ಕಾದಿದೆ!!

ಬರಡು ಮರಕೆ ಚಿಗುರುವಂತಹ ಆಸೆ ಮನದಲಿ
ಎಲೆಗಳೇ ಇರದೇ ಆ ವಸಂತ ಹೇಗೆ ಕಾಣಲಿ!!
ಬರಡು ಮಡಿಲು ನಗುವ ಮಗುವ ಬೇಡಿ ಕಾದಿದೆ
ಬಾರದಿರುವ ಮಗುವ ನಾ ಹೇಗೆ ಕಾಣಲಿ!!

- ಪಿ.ಜಿ.ಜ್ಯೋತಿ

01 Nov 2017, 08:17 pm

ಬಿರಿದ ಹೂವಿನ ಮೇಲೆ

ಬಿರಿದ ಹೂವಿನ ಮೇಲೆ
ಬರೆದೆ ನಿನ್ನಯ ಹೆಸರು!!
ಅರಳಿ ನಗುತಿರೆ ನೀನು
ಸಂತಸದ ಸವಿ ಜೇನು!!

ನಿದಿರೆಯಲ್ಲಿ ಕಂಗೆಟ್ಟ
ಕನಸಿನಲ್ಲಿ ನೀ ಬಂದೆ!!
ನೀ ನಿಂತು ನಗುತಿರೆ
ಸಂತಸದ ಹೂ ಮಳೆ!!

ಅಳಬೇಕು ಎಂದು ಎನಗೆ
ಅನಿಸಿದರೂ ಅಳಲಾರೆ!!
ಜೊತೆಯಾಗಿ ನೀ ಇರಲು
ಸಂತಸದ ಸವಿಗಡಲು!!

- ಪಿ.ಜಿ.ಜ್ಯೋತಿ

01 Nov 2017, 08:07 pm

ನೋಂದ ಮನಸ್ಸಿನ ಮುಗ್ದ ಮನಸ್ಸು

ನನ್ನತ್ತ ನಾ ಹೋರಟಾಗ
ಅರಳಿದ ಗುಲಾಬಿ ಹೂ ಒಂದ ಕಂಡೆ
ಆದರೆ ಅದರ ಸುತ್ತಲೂ ಮುಳ್ಳಿರುವುದನ್ನ
ಲೆಕ್ಕಿಸದೆ ಮನಸೋತೆ
ಪ್ರತಿ ಕ್ಷಣ ಕ್ಷಣಕ್ಕೂ ಮುಳ್ಳು ಚುಚ್ಚಿದಾಗಲೋಮ್ಮೆ ಯವ್ವನ ಪ್ರಶ್ನಿಸುತ್ತಿದೆ ಉತ್ತರಿಸದೆ ಸುಮ್ಮನೆ ಮೂಕನಾಗಿ ಕುಳಿತಿರುವೆ ಮೂಕನಾಗಿ ಕುಳಿತಿರುವೆ

- ಬಾಲು ಶಿರಗುಂಪಿ

01 Nov 2017, 07:07 pm