ಹೃದಯ ಹೊತ್ತ ಪ್ರೀತಿ
ಪಯಣಿಸಿದ್ದು ಆಕಾಶದ ಹಾದಿಯಲ್ಲಿ
ನಿನ್ನ ಸೇರಲು ನಿಂತಿದೆ
ನಿನ್ನೆದೆಯ ಬಾಗಿಲಲ್ಲಿ.
ನೆನಪ ಹೊತ್ತ ಕನಸು
ಮೂಡಿದ್ದು ರಾತ್ರಿಯ ವೇಳೆಯಲ್ಲಿ
ಈ ಕನಸ ತಲುಪಿಸಲು
ಬಂದಿರುವನು ಚಂದಿರನಲ್ಲಿ.
ಹಕ್ಕಿಗಳು ಕೂಗುತಿದೆ ನೋಡು
ನಿನ್ನ ಹೆಸರನ್ನು ಅದರದೇ ಭಾಷೆಯಲ್ಲಿ
ಆ ಹಕ್ಕಿಗಳಿಗೆ ನಿನ್ನ ಹೆಸರ ಕಲಿಸಿದ್ದು
ನಾನೆಂಬ ಹೆಮ್ಮೆಯಲ್ಲಿ
ಕಾಯುತಿರುವೆ ಆ ಹಕ್ಕಿಗಳಿಗೆ
ನೀ ಏನು ಹೇಳುವೆ ಎಂಬ ಕುತೂಹಲದಲ್ಲಿ
ನಂಬಿರುವೆ ನಾನಿರುವೆನೆಂದು
ನೀ ಹಕ್ಕಿಗೆ ಹೇಳುವ ಪ್ರತೀ ಮಾತಲಿ.
ಎಂಥಾ ಮೋಸಗಾರ ಪ್ರೀತಿ
ಯಾರ ಮುಂದೆನು ತೋರದೆ
ಒಬ್ಬಬ್ಬೊರೆ ಇದ್ದಾಗ ಮಾತಾಡುತ್ತದೆ
ಅದು ಕಣ್ಣಿರ ಹಾಕಿಸುತ್ತ ಈ ಪ್ರೀತಿ
ಎದುರಿಗೆ ಅಳಲಾಗದೆ ಬರಿ ನಗೆಯ
ಬಗೆ ಬಗೆಯಾಗಿ ಬೀರುತ್ತಲೆ ತನ್ನ
ನೋವಿನ ಸಾಲುಗಳ ಮುಚ್ಚಿಟ್ಟು
ಒಬ್ಬರೊಬ್ಬರನ್ನೆ ಕಂಬಿನೆ ಇಲ್ಲದಿರೊ
ಕಾರಾಗೃಹದಿ ಶಿಕ್ಷೆಗೆ ಗುರಿ ಮಾಡುತ್ತೆ,
ನೆನಪುಗಳು ನೆಪ ಹೇಳುತ್ತಲೆ
ಕಾಲು ಮುರಿದು ಮೂಲೆಗೆ ತಳ್ಳಿ
ಕನಸುಗಳ ರೆಕ್ಕೆಗೆ ಹೊಲಿಗೆ ಹಾಕುತ್ತವೆ
ಹಾರುವ ಶಕ್ತಿಯನ್ನು ಕಳೆದುಕೊಂಡು
ಹಳೆ ನೆನಪುಗಳ ಒಡೆದ ಪರದೆಯಲ್ಲಿ
ತನ್ನದೆ ಆದ ನಿರ್ದೇಶನದಿ ಪ್ರದರ್ಶಿಸುತ್ತ
ಜೀವನವ ಸಾಗಿಸುತ್ತಿರುತ್ತೆವೆ...
ವಿರಾಮ ಎಂಬುದು ಇಲ್ಲಿ
ಮಧ್ಯೆ ಎಲ್ಲೂ ಬರಲ್ಲ ಯಾಕೆಂದರೆ
ನಮ್ಮ ನಮ್ಮ ಸಿನಿಮಾಗೆ ಜಾಹಿರಾತು
ನೀಡುವ ಹುಚ್ಚರು ಯಾರ್ ಆಗುವರು
ನೀವೇ ಹೇಳಿ ಏನಿದ್ದರೂ ವಿರಾಮ
ಬರುವುದು ಕೊನೆಗೆ ಅದೇ ಶುಭಂ..
ಎಲ್ಲಿ ಹುಡಕಲಿ
ಎಷ್ಟು ಹುಡಕಲಿ
ಎಲ್ಲಿ ಅಡಗಿದ್ದಿಯಾ
ಆಳದಿಂದ ಅಗೆದು ತಂದೆ
ಸಾಕಷ್ಟು ಪ್ರೀತಿ ಹೊತ್ತ ಕನಸುಗಳ
ಕಣ್ಮುಂದೆ ಬಂದು ಇಳಿಸಬಾರದೆ
ಕಣ್ಣಿಗೆ ಕಾಣದ ಲೆಕ್ಕಸಿಗದ ತೂಕದಿ
ನಾ ಹೊತ್ತು ತಂದಿರುವ ಪ್ರೀತಿಯ
ಸುರಿಯಲು ನೀರಲ್ಲ
ತಿನ್ನಿಸಲು ಸಿಹಿಯಲ್ಲ
ಅಲಂಕರಿಸಲು ಓಡವೆಯು ಅಲ್ಲ
ಮನದಾಳದಲ್ಲೆ ಉಣಬಡಿಸುವೆ
ನಿನಗಾಗಿ ಹುಡುಕಾಟ ನೆಡೆಸುತ್ತಿರುವೆ
ಬರಬಾರದೆ ಬಳಿಗೆ ಒಮ್ಮೆಯಾದರೂ..
ಬದುಕೆನ್ನುವ ಭೂಮಿ ಯಲ್ಲಿ
ಪ್ರೀತಿ ಎನ್ನುವ ಸಾಗರದಲ್ಲಿ
ನಂಬಿಕೆ ಎನ್ನುವ ದೋಣಿಯಲ್ಲಿ
ಸಾಗುತಿರುವ ಅಂಬಿಗ ನಾನು
ಈ ಸಾಗರದ ಅಲೆಗೆ ಸಿಲುಕಿ
ದಾರಿ ತಪ್ಪಿಸದೆ ಈ ದೋಣಿ
ಒಡೆದು ಮುಳುಗುವ ಮುನ್ನ
ದಡ ಸೆರಿಸು ನನ್ನ.....
ಇಷ್ಟು ದೊಡ್ಡ ಸಾಗರದಲ್ಲಿ
ನಾನು ಸಾಗಿ ನನ್ನ ದಾರಿಯಲ್ಲಿ
ಹೂಗಿ ದಡವಸೆರುವೆನೆ ನಾನು
ನನ್ನ ಜೀವನದ ದಡ ಸೇರುವೇನೆ
ಈ ದೂಣಿ ಮುಳುಗುವ ಮುನ್ನ
ದಡ ಸೆರಿಸಿಯೆ ಬಿಡು ಅಲೆಯೆ ನನ್ನ
ಬದುಕಿ ಬಿಡುವೇನು ಹೇಗೂ...
ನಿನ್ನ ನಂಬಿ ನಿನೋಂದಿಗೆ ನನ್ನ
ಪಯಣ ಮುಳುಗಿಸಬೇಡ ನನ್ನ
ಜೊತೆಯಾಗಿ ಕರೆದೂಗಿ ದಡ ಸೇರಿಸು ನನ್ನ
ಎ ನಂಬಿಕೆಯ ದೂಣಿಯೆ ನೀ ಮುಳುಗದೆ
ನನ್ನ ಮುಳುಗಿಸದೆ ದಡವ
ಸೆರಿಸಿ ಬಿಡು.........
ಮುಳುಗುವ ಹೆದರಿಕೆ
ಏಕೋ ಕಾಡಿದೆ ನನ್ನ ದಡ ಸೆರಿಸು.....
ನಂಬಿಕೆಯ ದೋಣಿ.......
ನೇತ್ರಾವತಿ ಶರಾವತಿ ಕೃಷ್ಣೇಕಾವೇರಿ
ನದಿಗಳ ಮಡಿಲು ತಾಯಿ ಭುವನೇಶ್ವರಿ
ಮಲೆನಾಡ ಮಣ್ಣ ಹಸಿರ ಚೆಲುವ ಮೈಸಿರಿ
ಕನ್ನಡಮ್ಮನ ಸೌಂದರ್ಯಕೆ ಸೊಬಗ ಗರಿ
ಪಶ್ಚಿಮಘಟ್ಟದಲಿ ಭವ್ಯ ಜೀವಸಂಕುಲದಾಟ
ಗಿರಿ ಶಿಖರಗಳೆ ಅವಳಿಗೆ ತೊಡಿಸಿದ ಕಿರೀಟ
ಧುಮ್ಮಿಕ್ಕುವ ಜಲಪಾತಗಳ ವೈಭವದ ಮಾಟ
ಉತ್ತರದಿ ದಕ್ಷಿಣವರೆಗೂ ವೈವಿಧ್ಯ ನೋಟ
ಆದಿಕವಿಗಳು ಪಂಪ ರನ್ನ ಜನ್ನ ಪೊನ್ನ
ಕನಕ ಪುರಂದರ ಅಕ್ಕ ಮಹಾದೇವಿ ಬಸವಣ್ಣ
ಮಹಾ ಕಾವ್ಯವ ಹರಿಸಿ ಸವೆಸಿದರು ಬಾಳ ಯಾನ
ಜೢಾನಪೀಠ ಪುರಸ್ಕೃತರಿಗೂ ಕನ್ನಡಮ್ಮನೇ ತಾಣ
ಚಿನ್ನದ ನಾಡು ಗಂಧದ ಬೀಡು ಚೆಲುವ ಕರುನಾಡು
ಸಾಹಿತ್ಯ ಸಂಗೀತ ಸಾರುತಿವೆ ಅವಳೊಡಲ ಹಾಡು
ನಾಟ್ಯ ನೃತ್ಯ ಯಕ್ಷಗಾನ ಸಿರಿಯೂ ಅವಳಲಿದೆ ನೋಡು
ಅವಳ್ವೈಭವಕೆ ಸಾಕ್ಷಿ ಹಂಪೆ ಐಹೊಳೆ ಹಾಸನ ಹಳೆಬೀಡು
ಸಾಗರ ರಾಜನಿಗೂ ನೆಲೆಯಾಗಿದೆ ಕರುನಾಡ ಕರಾವಳಿ
ರಾಜರಾಣಿಯರು ಮಣ್ಣಾದರು ಈ ನೆಲದಿ ವೈಭವದಿ ಆಳಿ
ಕನ್ನಡಮ್ಮ ಕಂಡರೂ ಲೆಕ್ಕವಿಲ್ಲದಷ್ಟು ಹಾವಳಿ
ಜಗದಗಲ ಹರಡಿರುವಳ ಅವಳ ಬಲದ ಪ್ರಭಾವಳಿ
ಕನ್ನಡನುಡಿಯೇ ಕರುನಾಡಿಗೆ ಅರಿಶಿಣ ಕುಂಕುಮ
ಎಲ್ಲೆಡೆ ಜೇಂಕರಿಸಲಿ ಸವಿ ನುಡಿಯ ಡಿಂಡಿಮ
ಅವಳಿಗಲಂಕಾರ ಕರುಣೆ ಪ್ರೀತಿ ತ್ಯಾಗಗಳ ಸಂಗಮ
ನೆಲ ಜಲ ಭಾಷೆಗೆ ಮುಡಿಪಾದವನೆ ಇಲ್ಲಿ ನಿಜ ಜಂಗಮ
ಹಲ್ಮಿಡಿಯಾದಿ ನೂರು ಹಲವು ಶಾಸನ
ಸಾರಿವೆ ಅವಳೊಡಲ ಭಾಷೆಯ ಇತಿಹಾಸಾನ
ಯಾರದರೇನು ಹಿಂದೂ ಕ್ರೈಸ್ತ ಮುಸಲ್ಮಾನ
ಅವಳ ತಾಯ ಮಡಿಲಲಿ ಎಲ್ಲರೂ ಸಮಾನ