Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬೆಳಕಾಗು ನೀ

ನನ್ನೆದೆಯಲಿ ದೀಪವ ಬೆಳಗಿದ ಸಮಯ
ಕಗ್ಗತ್ತಲು ಮಾಯವಾಯಿತು
ಆರದ ದೀಪವಾಗಿರಲಿ ನೀ ಹಚ್ಚಿದ ದೀಪ
ದಿನ ನಿತ್ಯ ಪ್ರೀತಿಯ ಎಣ್ಣೆ ಸುರಿಯುತಿರು
ಹೃದಯದ ಗೂಡಿನಲ್ಲಿ ಗಾಳಿಗೂ ಪ್ರವೇಶವಿಲ್ಲ.
ನಿನ್ನುಸಿರಿಗೂ ಆರದಂತೆ ಮೆದುವಾಗಿ ಉಸಿರಾಡು

ಆ ಸೂರ್ಯ ಚಂದ್ರನು,ಮಿನುಗೊ ತಾರೆಯು ನಾಚಬೇಕು
ನೀ ಬೆಳಗಿದ ದೀಪದ ಬೆಳಕಿಗೆ ,
ಜಗವೆಲ್ಲ ಕತ್ತಲಾದರೂ
ನೀ ನನ್ನ ಜೊತೆಗಿರಬೇಕು ಬೆಳಕಿನಂತೆ

ಈ ಜನುಮದಲ್ಲದಿದ್ದರು ಮರು ಜನ್ಮದಲ್ಲಿ
ನೀ ನನ್ನ ಮನೆಯ ದೀಪ ಬೆಳಗಬೇಕು
ಪ್ರತಿವರ್ಷದ ದೀಪಾವಳಿಯ ದೀಪ ನೀನಾಗಬೇಕು
ಈ ಜಗದಲ್ಲಿ ನನ್ನದೆನ್ನುವುದು ಏನು ಇಲ್ಲ
ಇಂದು ನನ್ನದು ನಾಳೆ ಇನ್ಯಾರದ್ದೋ
ಈ ಜನ್ಮದಲ್ಲಿ ನೀ ದೂರವಾದೆ
ಮರುಜನ್ಮದಲ್ಲಿ ಜೊತೆಯಾಗು
ಎಂದೆಂದೂ ನನ್ನ ಬಾಳಿನ ಬೆಳಕಾಗು

- ನಾಗರಾಜ್

06 Nov 2017, 08:36 am

ಕೈ ತುತ್ತು

ಮಾಡಿ ಬಡಿಸಿದಳು ಚೆಲುವಿ
ಅಮೃತ ತುಂಬಿದ ಒಲವ
ಹಾಲಿನ ಬಿಸಿ ಬಿಸಿ ಪಾಯಸ
ಸವಿದರೆ ಮುಗಿಯದ ಸಂತಸ.
ಅನ್ನ ಸಾರು ಉಪ್ಪಿನಕಾಯಿ
ಚಪ್ಪರಿಸಲನುವಾಯ್ತು ಬಾಯಿ

ಜೊತೆಗೆ ಇತ್ತು ಮೃದು ಉದ್ದಿನ ವಡೆ
ಕುಡಿ ನೋಟ ಬಿರುತಿದ್ದಳು
ಹಾಕಿ ಜೋಡಿ ಜಡೆ
ನೀಡಿದಳು ಅಮ್ಮನಂತೆ ಕೈ ತುತ್ತು
ಸವಿದವರಿಗೇ ಅದರ ರುಚಿ ಗೊತ್ತು.

ಮಾಡಿ ಕೊಟ್ಟಳೆನ್ನ ಮುದ್ದು
ಹಬೆಯಾಡುವ ಕಾಫಿಯ ಖುದ್ದು
ಬಿಸಿಯ ತಣಿಸಿ ಕೊಂಚ ನಗಿಸಿ
ಮುಸಿ ನಗುವಿನ ಸಿಹಿಯ ಉಣಿಸಿ.

ಕೊನೆಗೆ ಕೈಯ ಮೇಲೆ ಕೈಯನಿತ್ತು
ಕೆನ್ನೆಗೆ ಕೊಟ್ಟಳೊಂದು ಸಿಹಿ ಮುತ್ತು
ಅವಳ ಹೂವ ದೇಹ ನನಗೊರಗಿತ್ತು
ನನ್ನ ಕಣ್ಣಲ್ಲಿ ಹನಿಯೊಂದು ತುಂಬಿತ್ತು !

ಎಂತು ವರ್ಣಿಸಲಿ ಮುದ್ದು ಹುಡುಗಿಯ
ಪ್ರೀತಿ ವಾತ್ಸಲ್ಯ ಮಮತೆ ಮೂರ್ತಿಯ
ನಿನ್ನ ದೊಡ್ಡ ಪ್ರಪಂಚದೊಳು ಇರುವೆನು ನಾನು,
ನನಗೋ ದೊಡ್ಡ ಪ್ರಪಂಚವೇ ನೀನು !

- ಶ್ರೀಗೋ.

06 Nov 2017, 06:21 am

ಇಬ್ಬನಿ

ಕವಿದ ಕತ್ತಲು ಸರಿಯುತಿರಲು
ಮುತ್ತಂತೆ ಇಬ್ಬನಿ ಧರೆಗೆ ಸುರಿಯಲು
ಭೂ ತಾಯ ಮೈಯು ಹೊಳೆಯತಿರಲು
ಸ್ವರ್ಗವೆ ಇಳಿದಂತಿದೆ ಇಳೆಯ ನೋಡಲು

ಮಾಡಿ ಬೆಟ್ಟಗುಡ್ಡಗಳ ನಡುವೆ ಚಾರಣ
ರವಿ ಉಡುಗೊರೆಯಂತೆ ತಂದ ಹೊನ್ನ ಕಿರಣ
ಸವಿಯಲು ಭೂರಮೆಯ ಸೊಬಗಿನ ಹೂರಣ
ಕಳುಹಿಸಿದ ಚಂದ್ರನ ಕೊಟ್ಟು ನಿತ್ಯ ಕೆಲಸದ ಕಾರಣ

ರವಿಯಾಗಮನವ ಹೇಳಿದೆ ಹಕ್ಕಿ ಹಾಡಿ
ಹೂಗಳರಳಿ ನಕ್ಕಿವೆ ಅವನ ಪ್ರೇಮವ ನೋಡಿ
ತೂಗಿ, ಬಾಗಿ, ಗಿಡ, ಮರ ಚಾಮರವ ಬೀಸಿವೆ
ಉದಯ ರವಿಗೆ ಸಂತಸದಿ ಸ್ವಾಗತವ ಕೋರಿವೆ

ಕಂಡು ಹಸಿರೆಲೆಗಳ‌ ತುದಿಯಲಿ ಇಬ್ಬನಿಯ ಮಾಲೆ
ರವಿಗೆ ನೋಡಬೇಕು ಅನಿಸಿತೇನೊ ಪ್ರೀತಿಯ ಲೀಲೆ
ನೇಸರ ಪ್ರೀತಿಯಲಿ ಮುತ್ತಿಕ್ಕುವನು ಭೂರಮೆಯ
ಹೊತ್ತು ಹೋಗುವ ಅವಳ ನೆನಪಿಗೆ ಮುತ್ತಿನ ಮಂಜಿನ ಹನಿಯ

- ಶ್ರೀಕಾವ್ಯ

06 Nov 2017, 06:14 am

ಪತಂಗ

ಸುಡುವ ಬೆಂಕಿಯ ಮುಟ್ಟಿ
ರೆಕ್ಕೆ ಸುಟ್ಟರು ಬಿಡದೆ
ಮತ್ತೆ ತುಡಿವ ಪತಂಗವ
ನೀ ಹಿಡಿದಿಡಲು ಉಂಟೇ ?

ಸುರಿವ ಮಳೆ ಸುಂದರವೆಂದು ನಂಬಿ
ರೆಕ್ಕೆ ಬಿಚ್ಚಿ ಹಾರುವ ಮಳೆ ಹುಳವ
ಮಳೆಯಿಂದ ರಕ್ಷಿಸಲು ರಹದಾರಿಯುಂಟೆ ?

ಕೂಗಿ ಕರೆವುದು ಕಪ್ಪೆ
ಹಿಡಿದುಣ್ಣುವ ಹಾವಿನದು ತಪ್ಪೇ ?
ಬರಿದೇ ಬಸವಳಿಯದಿರು
ಸಕಲವನು ಸರಿಪಡಿಸುವೆನೆಂದು ಬೆಪ್ಪೆ.

ತನ್ನ ತಾನರಿಯದ ಮನಕೆ
ಸುಮ್ಮನೆ ಚುಚ್ಚುವುದು ಸ್ವಾರ್ಥದ ಗರಿಕೆ,
ಎಡವಿದ ಕಲ್ಲು ನೂರಿರಲು
ಅಡವಿಯ ಬಂಡೆಗೆ ತಲೆ
ಚಚ್ಚಿಕೊಂಡರೆ ಎಂತಯ್ಯ ?

- ಶ್ರೀಗೋ.

05 Nov 2017, 09:25 pm

ಪಂಜರದ ಪಕ್ಷಿ...

ನಾನೊಂದು ಪಂಜರದ ಪಕ್ಷಿ
ಕೇಳುವವರ್ಯಾರಿಲ್ಲ ನನ್ನ ಕಥೆಯ
ಅಸೂಯೆಪಟ್ಟ ನನ್ನ ಗೆಳತಿಯರೆ
ತಿಳಿಯಲಾಗದು ನನ್ನೊಡಲಿನ ವ್ಯಥೆಯ!

ನನ್ನ ಚೆಲುವಿಗೆ ಮಾರುಹೋಗಿ
ಬಲೆ ಬೀಸಿದರು ದುಷ್ಟ ಮನುಜರು
ಸ್ವಚ್ಚಂದವಾಗಿ ಹಾರಾಡುತ್ತಿದ್ದ ನನ್ನನು
ಪಂಜರದಲಿ ನೂಕಿದ ಕಟುಕರಿವರು!

ಹೊತ್ತು ಹೊತ್ತಿಗೂ ಉಪಚಾರ ಮಾಡಿ
ಅವರ ಭಾಷೆಯನು ಕಲಿಸಿಬಿಟ್ಟರಲ್ಲಾ..
ಅರ್ಥವಾಗದ ಈ ಮನುಜರ ಎದುರು
ಕಣ್ಣುಮಿಟುಕಿಸಿ ಮಾತಾಡಬೇಕಲ್ಲಾ...

ನೋವಿನ ಕಣ್ಣೀರ ಬಿಂದುಗಳ ಜೊತೆ
ಚೆಲ್ಲಾಟ ಆಡಿ ನಗುವರಿವರು
ಭಾವನೆಗಳ ಜೊತೆ ಕನಸುಗಳ ಕೊಂದು
ಹಣ ಸಂಪಾದಿಸುವ ದುರುಳರಿವರು!

ಪ್ರಿಯಾಂಕ✍

- ಪ್ರಿಯಾಂಕ

05 Nov 2017, 08:55 pm

ನೀನೆ ಕಣೆ ನನ್ನ ಹಾರ್ಟ್ ಅಂತರಲ ಅದು

ಸಾವಿರ ತರಹದ ನೋವೇ ಬರಲಿ
ನಗುವೇ ಇಲ್ಲದ ಲೋಕವೆ ಇರಲಿ
ಸಾವು ಕೈ ಬೀಸಿ ಬಳಿ ಕರೆಯಲಿ
ಜನರೆಲ್ಲಾ ನನ್ನ ಹುಚ್ಚರನ್ನಲಿ

ನಾ ಎಂದಿಗೂ ನಿನ್ನೆ ಪ್ರೀತಿಸುವೆ
ನೂರು ಜನ್ಮಕ್ಕೂ ಕಾಯುವೆ
ಆಕಾಶ ಮೇಲಿಂದ ಬಿದ್ದರೂ
ಭೂಮಿ ತನ್ನಯ ಬಾಯಿ ತೆರೆದರೂ

ಪ್ರೀತಿಯ ಮಂತ್ರವೇ ಹೇಳುವೆ
ಅದರ ಸಾರವ ಸಾರುವೆ
ಉಸಿರಿಗೂ ಹೇಳಿರುವೆ
ಇವಳೆ ನನ್ನ ಹೃದಯವೆಂದು..

- ಮೈಸೂರ್ ಚೇತನ್

05 Nov 2017, 06:36 pm

ನೀ ನಡೆಯುವ ಹಂಸ್ಮ ನಡಿಗೆ

ನೀ ನಡೆಯುವ ಹಂಸ್ಮ ನಡಿಗೆ
ಹೂ ಹಾಸುವೆ ನಿನ್ನಯ ಅಡಿಗೆ
ನಾ ನಿನ್ನ ಪಡೆದ ಗಳಿಗೆ
ಕೈ ಮುಗಿಯುವೆ ಆ ದೇವರಿಗೆ

⚔ರಾಜಾಹುಲಿ ಯಲಗೂರ

- ರಾಜಾಹುಲಿಯಲಗೂರ

05 Nov 2017, 05:52 pm

ನಿವೇದನೆ..!

ಪ್ರೀತಿಯೆಂದರೆ..
ಕೇಳು ಗೆಳತಿ.....
ಹೆಜ್ಜೆ-ಹೆಜ್ಜೆಗೂ
ಕಾಲು ಕಟ್ಟುವ
ಬಂಧನವಲ್ಲ.!

ಪ್ರತಿ ಪಯಣಕೂ
ಉತ್ಸಾಹ ತುಂಬುವ
ಸ್ಫೂರ್ತಿಯ ಇಂಧನ.!
ಪ್ರತಿ ನಡಿಗೆಗೂ
ಉಲ್ಲಾಸ ನೀಡುವ
ಒಲವ ಸಿಂಚನ.!

ಕ್ಷಣ-ಕ್ಷಣವೂ
ಕನಸುಗಳಲ್ಲೇ..
ಕಳೆದು ಹೋಗುವ
ಸುಖಾನುಭವವಲ್ಲ.!

ಅನುಕ್ಷಣವೂ..
ಪುಳಕಗೊಳಿಸುತ
ಗುರಿ-ಗಮ್ಯದೆಡೆಗೆ
ನಡೆಸುವ ದಿವ್ಯ
ಮಧುರಾನುಭಾವ.!

ದೂರದಿಂದಲೇ
ಸದಾ ಮಿಡಿಯುವ,
ನೂರು ನುಡಿಯುವ
ಆಂತರ್ಯದೊಳಗಿನ
ಸುಪ್ತ ಗುಪ್ತಗಾಮಿನಿ.!
ನಿತ್ಯ ಚೈತನ್ಯದಾಯಿನಿ.!!

- ನಾಗರಾಜ್

05 Nov 2017, 02:47 pm

ಬಂದೆ ಬರುವೆ

ಕಾಡುಮೇಡು,ಬೆಟ್ಟಗುಡ್ಡಗಳ ನಡುವೆ
ನಾ‌ ದೇಶಕಾಯೊ ಕಾಯಕದ ಮೇಲಿರುವೆ
ಕ್ಷಣ ಕ್ಷಣವೂ ನಿನ್ನ ನೆನಪಲೆ ಬೇಯುವೆ
ನನ್ನೊಲವಿನ ಹೂವೆ ಪ್ರೀತಿಯ ಚೆಲುವೆ

ಅಪರೂಪಕೆ ಬರುವ ನಿನ್ನ ಪ್ರೇಮಪತ್ರ
ನೀನೆನೆ ಬಂದು ನಿಂತಂತೆ ಮಾಡುವುದು ಹತ್ರ
ನನ್ನೆತ್ತವರಿಗೆ ನೀನಲ್ಲ ಬರಿ ಸೊಸೆ ಮಾತ್ರ
ತುಂಬುಬಿಡು ಅವರಿಗೆ ಮಗ ಮಗಳ ಪಾತ್ರ

ಕರುಳಕುಡಿಳಿಗೆ ಅಪ್ಪ ಅಮ್ಮ ಎರಡು ನೀನೆ
ಅಲ್ಲಿ ಎಲ್ಲರೂ ಸೌಖ್ಯದಿಂದಿರುವರು ತಾನೆ?
ನಾನು ನೆನಪಾಗಿ ನಿಮಗೆಲ್ಲ ಕಾಡುವೆನೇನೆ?
ಕ್ಷಣಕ್ಷಣ ಕಾಯುವೆ ನಾ ಮುಂಬರುವ ರಜೆಗೇನೆ.

ನಿಂತಲ್ಲು, ಕುಳಿತಲ್ಲೂ ನನಗೆ ನಿಮದೇ ನೆನಪು
ನೆನಪು ಕದ್ದು ಬಿಡುವುದು ನನ್ನ ಕಣ್ಣ ಹೊಳಪು
ಜೀವ ಪಣವಿಟ್ಟು ಎನ್ನಮ್ಮನ ಕಾಯುತಿರುವೆನು
ಕಾಪಾಡೊ ದೈವವಿದೆ ಕಾಯುತಿರಿ ನಾ ಬಂದೆ‌ ಬರುವೆನು

- ಶ್ರೀಕಾವ್ಯ

05 Nov 2017, 02:39 pm

ಹೆಣ್ಣು

ವರ್ಣಿಸಲಾಗದ ಕಲ್ಪಿತ ಸುಂದರಿ ಹೆಣ್ಣು.
ಮನೆಯ ಕತ್ತಲಿನ ದೀಪ ಬೆಳಗಿಸುವ ಕಣ್ಣು..
ಮೊಳಕೆಯೋಡಸಿ,ನೀರುಣಿಸಿ ಜೀವ ಕೊಡುವ ಮಣ್ಣು...
ತಾಳ್ಮೆಯ-ಬಾಳ್ವೆಯ ಕಲಿಸುವ ಸಿಹಿಯಾದ ಹಣ್ಣು....
ಒಲುಮೆಯ-ಚಿಲುಮೆಯ ಪಲವತ್ತತೆಯ ಕೆಮ್ಮಣ್ಣು.....

ಒಂದೂರಲ್ಲಿ ಹುಟ್ಟಿ ಮತ್ತೊಂದುರಲಿ ಜೀವ ಕೊಡುವ ಭೋಗಿ.
ಸೌಂದರ್ಯ ಧಾರೆಯರೆದು ಸುಖವ ಕೊಡುವ ತ್ಯಾಗಿ..
ಜೀವನದ ಮೊದಲ ಪಾಠ ಕಲಿಸುವ ಗುರುವಿನಂತಿರುವ ಯೋಗಿ..
ಪುರುಷ -ಪ್ರಪಂಚಕೆ ತಗ್ಗಿ ಅಂಜಿ ನೆಡೆಯುವವಳು ಭಾಗಿ..
ನೋವು-ನಲಿವು ನುಂಗಿ ಜೀವ ಕೊಡುವಳು ಕೂಗಿ...

ಉಂಗುರ,ತಾಳೆ,ಬಳೆ ತೊಟ್ಟು ಪತಿಗೆ ಸತಿಯಾಗಿರುವವಳು..
ಸೀರೆ ,ಕುಬಸ ಉಟ್ಟು ದೇಹ ಮುಚ್ಚಿ ರತಿಯಾಗಿರುವವಳು..
ಕಠಿಣ ಪರಸ್ಥಿತಿಯಲ್ಲೂ ಧೈರ್ಯ ತುಂಬಿ ಜೊತೆಯಾಗಿರುವವಳು..
ಸ್ನೇಹ,ಪ್ರೀತಿ,ವಾತ್ಸಲ್ಯಕೆ ಸುಸಂಸ್ಕೃತ ಕಥೆಯಾಗಿರುವವಳು..
ಇಷ್ಟಿದ್ದರೂ ಒಮ್ಮೆಮ್ಮೆ ಕುತ್ತಿಗಿಗೆ ಹಗ್ಗ ತರುಲು ಮತಿಗೆಟ್ಟಿತಿರುವವಳು!

- ಆರ್. ಎಸ್ .ಸುಗ್ಗಿ

05 Nov 2017, 11:27 am