Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮತ್ತೆ ಕಾಣಾದಿರು
ಮತ್ತೆ ಕಾಡದಿರು
ಒಡಲ ಮಡಿಲಿಗೆ ಮತ್ತೆ
ನೋವು ತರದಿರು
ನೆನಪಿದೆ ಕಡಲ ತಡಿಯಲ್ಲಿ
ಅಂದು ಅಲೆಯಂತೆ
ಕೊಚ್ಚಿ ಹೋದ ಮನದ ಮಾತು
ಎಂದೂ ಮಾಸದು..
- ಎಸ್ಕೆ
- ಎಸ್ಕೆ
08 Nov 2017, 10:02 pm
ದೇವತೆ ನನ್ನ ಸಂಗಾತಿ ಜೀವಕ್ಕೆ
ಹೆಸರಾದ ಸೊಗಸಾದ ಜೊತೆಗಾರ್ತಿ
ತಾಯಿಯಂತೆ ಮಮತೆ ತೋರುವಳು
ಗೆಳತಿಯಂತೆ ಆರೈಕೆ ಮಾಡುವಳು.
ಪ್ರತಿನಿತ್ಯ ಮನತಣಿಸುವಳು
ಮುದ್ದಾದ ಮಾತುಗಳಿಂದ ನನ್ನೊಡತಿ.
ನಂಬಿಕೆಗೆ ಇನ್ನೊಂದು ಹೆಸರಾಕೆ
ಪ್ರೀತಿಗೆ ಪ್ರತ್ಯೇಕ್ಷ ರೂಪವಾಕೆ.
ನನ್ನ ಹೃದಯದ ಗುಡಿಯಲ್ಲಿ
ಪ್ರೀತಿಯ ಹಣತೆ ಹಚ್ಚಿ
ದಿನನಿತ್ಯ ನನ್ನ ನಗುವನ್ನು ಕಾಯುವವಳು
ನೀನೇ ಚೆಲುವೆ ನನ್ನ ಒಲವಿನ ಮನವೇ.
ಸಮಯದ ಪರಿವೆಯೇತಕೆ ಸಂಗಾತಿ
ನಿನ್ನೆದುರು ಕುಂತಾಗ
ನನಗೆ ನಿನ್ನ ಕಣ್ಣಲ್ಲಿನ ನನ್ನ ರೂಪ
ಸಾಲದೆ ಜೀವನದಾದ್ಯಂತ ನಿನ್ನೊಡನೆ ನಾ ಬಾಳಲು
ತಂಪಾದ ನಿನ್ನ ಚುರುಕು ನೋಟಕ್ಕೆ ಸಿಲುಕಿ
ಬಿಡಿಸಲಾಗದ ನಂಟು ಇರುವಾಗ.
- ಚುಕ್ಕಿ
08 Nov 2017, 08:00 pm
ದೂರಾದ ನನ್ನವರು
ತಿರುಗಿ ನನ್ನ ಬಳಿ ಬರಲು
ಹೃದಯ ಮತ್ತೆ ಖುಷಿಪಡಲು
ದೇವರಿಗ್ಯಾಕೋ ನನ್ನ ಮೇಲೆ
ಮುನಿಸಿರಲು,
ನನ್ನವರನು ತನ್ನತ್ತ ಕರೆಸಿಕೊಂಡನು
ಮತ್ತೆ ನನ್ನ ಒಬ್ಬಂಟಿಯಾಗಿ ಮಾಡಿ!
- ಪ್ರಿಯಾಂಕ
08 Nov 2017, 04:11 pm
ಆರನಿಲ್ಲಿ ನೆನೆಯಲಮ್ಮ
ನಿನ್ನೊಡಲಲಿ ಬೆಳೆದವರನ
ನಿನ್ನಡಿಯಲಿ ತಣಿದವರನ
ನಿನ್ನೆಸರಲಿ ಬೆರೆತವರನ
ಆರನಿಲ್ಲಿ ಪೊಗಳಲಮ್ಮ
ನಿನ್ನೇಳ್ಗೆಯಲಿ ದುಡಿದವರನ
ನಿನ್ ಪೊಗಳಿ ಕೊಂಡಾಡಿದವರನ
ನಿನ್ ಇರುವಿಕೆಯ ಜಗಕೆ ಸಾರಿದವರನ
ಎಲ್ಲರೂ ನಿನಗೊಂದೆಯಮ್ಮಾ
ವಟವೃಕ್ಷದಂತೆ ಹಬ್ಬಿ
ನೆರಳನಿತ್ತು ನಮ್ಮ ತಣಿಸುತಿಹರು
ನಿನ್ನೇಳ್ಗೆಯಲಿ ನಡೆಯಲೆಂದು........ಡಿ.ಸಿ..
- ಡಿ.ಸಿ.ನಾಗೇಶ್
08 Nov 2017, 12:09 pm
ಹುಡುಕಿ ಕೊಡೆ ನೀನು
ಕಳೆದೋದೆ ನಾನು
ಕತ್ತಲಲೀ ನಿನು ನಾನು
ಮಿಂಚಂತೆ ಬಾರದಿರೇ
ಆ ಪಿಸುಮಾತು ಆಡದಿರೇ
ಕೈಹಿಡಿದು ನಡೆಸದಿರೇ
ಈ ತುಸು ಪ್ರೀತಿ ತೋರದಿರೇ
ಕೊನೆಗೋ ಕತ್ತಲಲೀ ನೀನೆ ನಾನು
- ಡಿ.ಸಿ.ನಾಗೇಶ್
08 Nov 2017, 09:39 am
ನನ್ನೀ ಬರಹದಲ್ಲೀ, ಪ್ರಾಸಗಳಿಲ್ಲ
ನಗೆಸುವ ಹಾಸ್ಯವಿಲ್ಲ
ಷಟ್ಪದಿ,ಛಂದಸ್ಸಾನುಸಾರ
ಸಾಲ್ಗಳಿಲ್ಲ, ಇಹುದೊಂದೇ.......
ದಾರಿಹೋಕರಂತೆ ಅಲೆದು
ನಾಡ ಕೋಟೆ ಕಟ್ಟಿದರು
ಸ್ವ-ಸ್ತಿರತೆ ಒಳಗಿನ್ನೂ
ಹರಿದ ಹೆಂಚ ಮನೆಯಲ್ಲೇ
ತನ್ ತಾಯ್ನ ಬೆತ್ತಲ ಮಾಡುತ್ತ
ಪರರವ್ವನ ಸಿಂಗರಿಸುತ್ತಿಹರು
ಸಿಂಹವ ಸಿಂಹಾಸನದಿಂ ತಳ್ಳಿ
ಗ್ರಾಮ ಸಿಂಗವ ಕೂರಿಸ ಹೊರಟಿಹರು
ಒಗ್ಗೂಡಿಸಿದಿರಿ ನಾಡ ಯೇಳ್ಗೆಗಾಗಿ
ಕಿಚ್ಚಲೇ ಉರಿಯುತಿದೆ ಬಾಳ್ಗೇ
ನಾಡ ಹಿತಕೆ ನಿಮ್ಮ ಧನಿಯು
ಒಲ್ಲೆಯೆನ್ನುತಿಹರು ಬೇವಂತೆ ನೆನೆದು.......ಡಿ.ಸಿ
- ಡಿ.ಸಿ.ನಾಗೇಶ್
08 Nov 2017, 09:30 am
ಕಾರ್ಮೋಡ ಕವಿದಿದೆ
ಸೋನೆಯಾಗಿ ಸುರಿದಿದೇ
ಹರುಶದಿ ಮನ ತುಂಬೀ ತಣಿದಿದೆ
ಎಲೆ ಚಿಗುರು ಬಯಕೆಯ ತೀರಿ ನಲಿದಿದೆ
ಮಳೆ ಬಂದಿದೇ, ಮಳೆ ಬಂದಿದೆ
ಭೂರಮೆಯ ಚುಂಬಿಸಿ ಹರಿದಿದೇ
ತಕಥೈ,ತಕಥೈ ಕುಣಿದಿದೇ
ಮಯೂರ ಮನವು ತಣಿದಿದೆ
ಮಾಮರದಲಿ ಕುಳಿತು ನಲಿದ
ಕೋಗಿಲೆಯೋ ಯದೆತುಂಬೀ
ಹಾಡಿದೆ, ಕವಿ ಮನವ ಕೆಣಕಿದೆ.....ಡಿ.ಸಿ....
- ಡಿ.ಸಿ.ನಾಗೇಶ್
08 Nov 2017, 09:17 am
ನಂಬಿಕೆ ಮರಾಟಕ್ಕಿದೆ
ಕೊಳ್ಳುವವರಿಲ್ಲದೆ ಕೊಚ್ಚೆಯಲ್ಲಿ ಬಿದ್ದಿದೆ
ಯಾರಿಗೂ ಬೇಕಿಲ್ಲದೆ
ಬಣ್ಣ ಕಳೆದುಕೊಂಡು ಬಡವಾಗಿದೆ.
ಸುಳ್ಳುಕೋರರ ಸಂತೆಯಲ್ಲಿ,
ಬೋರಲು ಬಿದ್ದು ಹೆಣವಾಗಿದೆ.
ಹೆಣ ಹೊರುವ ಬುಜಗಳಿಗೆ
ಹೊರಲಾರದಷ್ಟು ಮಣ ಭಾರವಾಗಿದೆ.
ಸ್ನೇಹಿತರ ನಡುವೆ ನೀತಿಗೆಟ್ಟು
ನಯವಂಚನೆಯ ಮಂಚದಲ್ಲಿ ಮತಿಗೆಟ್ಟು
ಹೊರಳಾಡಿದೆ,
ದುಷ್ಟ ದುರುಳರ ಸಂಗವ ಮಾಡಿ
ದಾರಿ ತಪ್ಪಿ ಎಲ್ಲೆಲ್ಲೋ ನರಳಾಡಿದೆ.
ಬೆಲೆ ಕಳೆದುಕೊಂಡ ನಂಬಿಕೆ
ನೆಲೆ ಇಲ್ಲದೆ ಅಲೆಯುತ್ತಿದೆ ಚೆಂದಕೆ
ಬೇಕಿಲ್ಲ ಯಾರಿಗೂ, ಉಳಿಸಿಕೊಳ್ಳುವ ಹಂಗಿಲ್ಲ
ಅದಕ್ಕಾಗಿಯೇ ನಂಬಿಕೆ ಯಾರಲ್ಲೂ
ಇದುವರೆಗೂ ತಂಗಿಲ್ಲ !
- ಶ್ರೀಗೋ.
07 Nov 2017, 09:47 pm
ಬಾ ನೋಡು ಗೆಳತಿ
ನಿನ್ನ ಕನಸಲಿ ಇನ್ಮೇಲೆ ಬರುವುದು ನನ್ನದೇ ಸರತಿ.
ಇರುಳಲಿ ಇರುವ ಚಂದಿರನಿಗೂ ಹೊಟ್ಟೆಕಿಚ್ಚು
ನಿನ್ನ ಕಂಗಳಲಿ ಬರಲು ಮಾಡುತಿರುವನು ಸಂಚು.
ಕರಿ ಮೋಡಗಳ ಮರೆಯಲ್ಲಿ ಮರೆಯಾಗುವ ತಾರೆಯಂತೆ ನಾ
ಸುರಿವ ಸೋನೆಯ ಹನಿಯಂತೆ ಇರಲೆ ನಾ.
ನಿನ್ನ ಕಿವಿಯಲಿ ಹೇಳಲೆ ನನ್ನ ಒಂದು ಆಸೆಯ ಪಿಸುಮಾತು
ನಿನ್ನ ಸನಿಹದಲಿ ಹೇಳಬೇಕು ಮೌನದ ಮಾತೊಂದು ತುಸು ಕೂತು.
ನಿನ್ನ ಕಾಲ್ಗೆಜ್ಜೆಯ ಜತೆ ಹೆಜ್ಜೆ ಹಾಕುವ ಹುಚ್ಚು ಬಯಕೆ ನನ್ನದು
ನಡುದಾರಿಯಲಿ ಮಂಡಿಯೂರಿ ಹೇಳುವೆ ನನ್ನ ಮನದ ಕೋರಿಕೆ ಇಂದು.
- ಉಮೇಶ್.
- Umesh
07 Nov 2017, 08:14 pm
ನೆನಪುಗಳ ದಾರಿಯಲ್ಲಿ ನೋವುಗಳ
ಜಾರಿಬಿಟ್ಟು ಏಕೆ ನಡೆದಿರುವೆ ಸುಮ್ಮನೆ...?
ನಗುವಿನ ಛಯೆ ನಿನ್ನಲ್ಲಿಟ್ಟು
ಬೆಳದಿಂಗಳ ಸೊಬಗು ಅಕಾಶಕ್ಕಿಟ್ಟು ಏಕೆ ನೀ ಮೌನಿಯಾಗಿರುವೆ ಆ ಮಾತಿಲ್ಲದ ಮೌನಕ್ಕೆ ಸ್ನೇಹಿತನಾಗಿ...?
- ಚುಕ್ಕಿ
07 Nov 2017, 06:57 pm