Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೊಸ ಪ್ರಯೋಗ ಹೊಸಬನ ಪ್ರಯೋಗ

ಅಂ
ದಿಂ
ದೆಂ
ದೊ
ರೆ
ಗೊಂದದೆನಗೆ
ಕನ್ನಡ.......................ಡಿ.ಸಿ...

- ಡಿ.ಸಿ.ನಾಗೇಶ್

09 Nov 2017, 02:19 pm

ಪಯಣ....

ಪ್ರತಿ ದಿನ ಹೂಸದೂಂದು
ದಿನ ಹೂಸ ಪಯಣದ
ಕಡೆಗೆ ಸಾಗಲಿ ಜಿವನ

ಹೂಸ ಅಸೆಗಳ ಕಡೆಗೆ
ಸಾಗುತಿದೆ ನನ್ನ ಈ ಪಯಣ
ಸುಂದರ ಲೋಕದಲಿ
ಹಸಿರು ತವರಲಿನಲಿ
ಹಿಮಗಳ ನಡುವಲ್ಲಿ
ನದಿಗಳ ಸುಳಿಯಲ್ಲಿ
ಹೂಸ ಆಸರೆಯ ಹುಡುಕುತ
ಸಾಗಲಿ ನನ್ನ ಈ ಪಯಣ

ಹೂಸ ಕನಸು ಹೂಸ ನಗು
ಹೂಸ ಜೀವನದ ಕಡೆಗೆ ಸಾಗುತಿದೆ
ಎಂದು ನಿಲ್ಲದೆ ಸಾಗಲಿ ಈ ಬದುಕಿನ ಪಯಣ

- ರಾಗಸಿರಿ....

09 Nov 2017, 12:49 pm

ಕೊನೆಯ ಹನಿ.....

ಮುಚ್ಚಿದಾ ಗಾಜಿನ ಮೇಲೆ
ಈಗಲೂ ಜಾರುತಿವೆ
ಮುತ್ತಿನ ಮಣಿಗಳು,
ಹಸಿ ಮಣ್ಣ ಸಿಹಿ ಗಂಧ
ಬೆರೆತು ಹಾರುತಿದೆ
ತಂಗಾಳಿಯಲ್ಲೂ,

ಎಲೆ ತುದಿಯ ಕೊನೆಯ ಹನಿ
ಧರೆ ಸೇರಲು
ಕಾದಿದೆ ವಿರಹದೊಳು,
ಸುರಿದ ಮಳೆ ಮಾಯವಾದರೂ
ಬಿಟ್ಟು ಹೋಗಿದೆ
ಕುರುಹುಗಳ ಸಾಲು.

- ಮಳೆಯಲ್ಲಿ ಜೋತೆಯಲ್ಲಿ

09 Nov 2017, 11:21 am

ನಾಚುತಿಹಳು....

ಆಗಸದ ಚುಕ್ಕಿ ರಾಜ್ಯಕೆ
ಒಡೆಯ ನೀನು ಚಂದ್ರಮನೋ
ಜಗದ ಜನದ ಮನ ಮಿಡಿವ
ಚುಕ್ಕಿ ಚಂದ್ರಮನೋ

ಭೂರಮೆಯು ನಿನ್ನ ಚೆಲುವೆಗೆ
ನಾಚುತ್ತಿಹಳು
ಕಡಲಲೆಗಳ ಭೋರ್ಗರೆತವ
ಹೆಚ್ಚಿಸುತ್ತಿಹಳು
ನಿನ್ನ ಬರುವಿಗಾಗಿ ಸದಾ ಕಾಯುತ್ತಿರುವಳು...ಡಿ.ಸಿ

- ಡಿ.ಸಿ.ನಾಗೇಶ್

09 Nov 2017, 11:10 am

ಕೂಡದಿರು ಮನಸೇ......

ಕೂಡದಿರು ಮನಸೇ ನೀ ಕೈಯನ್ನ ಕಟ್ಟಿಕೊಂಡು,
ಸುಮ್ಮನಾಗದಿರು ಎಂದೂ ನೀ ಸೋಲನ್ನ ನೆಚ್ಚಿಕೊಂಡು,
ನಿನ್ನ ಬಳಿ ಓಡಿಬರುವುದು ಗೆಲುವು, ನಿನ್ನ ಪರಿಶ್ರಮನ ಮೆಚ್ಚಿಕೊಂಡು.

ಸುಮ್ಮನೆ ಮುನ್ನುಗ್ಗುವುದೊಂದೇ ನಿನ್ನ ಕಾಯಕ,
ಏನೇ ಆದರೂ ಕಾಪಾಡ್ತಾನೆ ಆ ವಿನಾಯಕ,
ಸೋಲೇ ಗೆಲುವಿನ ದಾರಿಸೂಚಕ,
ಗೆದ್ದಾಗ ಇಡೀ ಲೋಕವೇ ಆಗುವುದು ನಿನ್ನ ಸೇವಕ.

ಪ್ರಯತ್ನಿಸುವುದೊಂದೇ ಆಗಲಿ ನಿನ್ನ ಮಂತ್ರ,
ನಿನಗೇನೂ ಮಾಡಲಾಗದು ಬೇರೆಯವರ ಕುತಂತ್ರ!

ಮುಳ್ಳಿಲ್ಲದ ಗುಲಾಬಿ ಸಿಗುವುದೆಲ್ಲಿ?
ನೋವಿಲ್ಲದ ನಲಿವು ಬರುವುದೆಲ್ಲಿ???

ಸಣ್ಣವನಾಗಿದ್ರೂ ದೊಡ್ಡದಾಗಿ ಯೋಚಿಸು,
ನೀನಾರೆಂಬುದನ್ನ ಕೆಲಸದಲ್ಲಿ ತೋರಿಸು.

ನಂಬದಿರು ಎಂದೂ ನೀ ಅವರಿವರು ಹೇಳುವ ಜ್ಯೋತಿಷ್ಯವನ್ನ,
ನಿನ್ನಿಷ್ಟದಂತೆ ರೂಪಿಸುಕೋ ನಿನ್ನ ಭವ್ಯ ಭವಿಷ್ಯವನ್ನ!!!

- ರಜತ

09 Nov 2017, 11:10 am

ಅವತಾರ ಪುರುಷ

ಇಳೆಗಿಳಿದು ಬಾರನೇನು
ಧರೆಯೊಡೆಯನು
ದಾಸಾನು ದಾಸರಿದ್ದರೂ
ಮೊರೆ ಕೇಳನು

ಅವತಾರ ಪುರುಷನು
ಅವತಾರಗಳ ಮರೆತನೇನು
ಜಡದಂತೆ ಕೂತು
ಜಪ ಮಾಡುತಿಹನೇನು

ಕೋಟ್ಯಾಂತರ ಮಂದಿಯೆಲ್ಲ
ಕರೋಡ್ ಪತಿಗಳೇನಲ್ಲ
ಸ್ವಾತಂತ್ರ್ಯ ದೀಪ ಬೆಳಗಿದರು
ದಾಸ್ಯದ ಮಾಯೆ ಮಾಸಿಲ್ಲ

ತುತ್ತಿಲ್ಲ, ಅಮ್ಮನ ಪ್ರೀತಿ ಮುತ್ತಿಲ್ಲ
ನೆರಳಿಲ್ಲ, ನೋವೇಳಲು ಜಗವಿಲ್ಲ
ಗುರುವಿಲ್ಲ, ಗುರಿಯಮಗೆ ತಿಳಿದಿಲ್ಲ
ನಲಿವಿಲ್ಲ, ನಾಖದಪಾಡೆ ಜಾಡೆಲ್ಲ

ಬಡವನ ಬೇನೆಗೆಂದು ಕೊನೆಯು
ಕಣ್ಣೀರೇ ತುಂಬಿದೆ ಕನಸಲ್ಲೇ ನಲಿದಿದೆ
ಆಸೆಗಳ ಭಾವಕೆರಳಿ ಮಂಕಾಗಿ ಮುಖಾಗಿದೆ

ಧರೆಗಿಳಿದು ಬಂದರೇನು, ಇಳೆಯೊಡೆಯನು
ದಾಸಾನು ದಾಸರಿದ್ದರೂ ಹಿಂತಿರುಗಿ ನೋಡನು

..................ವಂದನೆಗಳು...................ಡಿ.ಸಿ

- ಡಿ.ಸಿ.ನಾಗೇಶ್

09 Nov 2017, 10:54 am

ಆಸೆಗಳು

ಎಷ್ಟೆಷ್ಟೋ ಆಸೆಗಳು ಈಡೇರಿಸಿಕೊಳ್ಳಲು ದಾರಿಯಿಲ್ಲದೆ ಮುಗಿ ಬಿದ್ದಿವೆ ಇಷ್ಟಿಷ್ಟೇ ನಿನ್ನ
ಜೀವನ ಎಂದು ನಮ್ಮ ಕಣ್ಣಲ್ಲಿ ಕನಸುಗಳಾಗಿ.

ಬನದಲ್ಲಿನ ಬಾಗು ಚಂದಿರ ಹುಣ್ಣಿಮೆಯ ದಿನಕೆಂದು ಕಾದು ನೋಡಿ ಸೋತಂತೆ
ನಾವಿನ್ನೂ ಕಾಯುತ್ತೀವಿ ನಾಳೊಂದು ದಿನ
ಬರುವುದೆಂದು ನಮ್ಮ ಕಲ್ಪನೆಗಳ ಬುಟ್ಟಿ ನನಸಾಗಿ
ತುಂಬುವುದೆಂದು.

ತಂಗಾಳಿಯ ಬೆನ್ನೇರಿ ಇಬ್ಬನಿಯು ಮಳೆಯಾಗಳು
ಕಾದಂತೆ ನಾವು ಇಲ್ಲಿ ನೋವುಗಳ ಮರೆವಿಗಾಗಿ ನಲಿವುಗಳ ಬೆಳವಣಿಗೆಗಾಗಿ ಇಲ್ಲದ ಮಂದಹಾಸವನ್ನು ಮಂದಿ ಮುಂದೆಲ್ಲಾ ಎತ್ತಿಡಿದು
ತಿರುಗುತ್ತಿವಿ ಬಯಕೆಗಳ ಬಾಯಾರಿಕೆ ತೀರಿಸಿಕೊಳ್ಳುವುದಕ್ಕಾಗಿ.

ಪಟ್ಟ ಶ್ರಮ ಬೆಂಕಿಯಲ್ಲಿ ಬೂದಿಯಾಗದೆ ಚಿನ್ನದಂತೆ ಹೊಳಪು ಪಡೆದು ನಮ್ಮ ಕೈಯಲ್ಲಿನ
ಅದೃಷ್ಟ ರೇಖೆಯಾಗಳೆಂದು ಮುಖಾಮುಕಿ ಸಂದಿಸುತ್ತೀವಿ ಸವಿಮಾತುಗಳ ಪ್ರಹರಿಯನ್ನು
ಆಸೆಗಳ ಹಿಡಿರಿಕೆಗಾಗಿ.

- ಚುಕ್ಕಿ

08 Nov 2017, 11:21 pm

ಬರೀ ನೆನಪೆ.....

ವಿಷಯವಿರದ ಆ ಪಿಸುಮಾತು
ಮತ್ತೆಲಿಂದಲೋ ಎದ್ದ
ಒಂದು ಕ್ಷಣದ ಮೌನ ,
ಆ ಹುಸಿ ಕೋಪ,
ಮತ್ತೆ ನಿಸ್ವಾರ್ಥತೆಯ ನಿಗೂಡ ಪ್ರೀತಿ
ಇದೀಗ ಎಲ್ಲವೂ ಬರೀ ನೆನಪಷ್ಟೇ........

- Shilpa

08 Nov 2017, 10:55 pm

ಆತ್ಮ ನಿವೇದನೆ ......

ಕೆಲವೊಮ್ಮೆ ನನ್ನೋಡನೆ ನಾನೆ
ಮಾತಿಗಿಳಿಯುತ್ತೇನೆ
ನನ್ನೊಳಗೆ ನೀನಿರುವೆಯೆಂಬ
ಸುಳ್ಳು ಸತ್ಯವನ್ನು
ಆತ್ಮಕ್ಕೆ ನಿವೇದಿಸುತ್ತಾ .....

- Shilpa

08 Nov 2017, 10:55 pm

ನನ್ನವಳ ನೇನಪೂ.....

ಕಡಲ ಅಲೆಯಲಿ ಮುಳುಗುತಿದೆ ಚಂದ್ರಬಿಂಬ.
ಮನದ ಕಡಲಲಿ ಸುಳಿಯುತಿದೆ ನಿನ್ನದೆ ಬಿಂಬ,
ಸೋಲಲಾರದ ಭಾವದಲ್ಲಿ ಮರೆಯಾಗಿದೆ
ಒಲವಿಲ್ಲಿ,,,,ನೀ ರಾಜಿಯಾಗದ ಕನಸುಗಳು
ಕಾಡಿವೆ ದಿನವೂ ನನ್ನಲ್ಲಿ....

- ಮಳೆಯಲ್ಲಿ ಜೋತೆಯಲ್ಲಿ

08 Nov 2017, 10:09 pm