Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಯಾರು..?

ಮಾತನಾಡದ ಮೌನಕೆ
ಮಾತನಾಡಿಸುವವರಾರು..?
ಹಾಡುವ ಹಾಡನ್ನು
ನಿಲ್ಲಿಸುವವರಾರು..?
ಸ್ವರಕೆ ಅಪಸ್ವರ
ನುಡಿಸುವವರಾರು..?
ಹಾರಾಡುವ ಹಕ್ಕಿಯನು
ಬಂಧಿಸುವವರಾರು..?

ಹರಿಯುವ ನದಿಗಳನ್ನು
ಹಿಂಬಾಲಿಸುವವರಾರು..?
ಬೀಸುವ ತಂಗಾಳಿಯನ್ನು
ಹಿಡಿದಿಡುವವರಾರು..?
ರಾತ್ರಿಯ ನಕ್ಷತ್ರಗಳನ್ನು
ಎಣಿಸುವವರಾರು..?
ಚಲಿಸುವ ಮೋಡಗಳನು
ತಡೆಯುವವರಾರು..?

ಬೆಳಕು - ನೆರಳಿನಾಟ
ಬಲ್ಲವರಾರು..?
ಎಲ್ಲಾ ಕಾಲದ ನಿವ೯ಹಣೆ
ಸೃಷ್ಠಿಸುವವರಾರು..?

ಏಕಾಂತಪ್ರಿಯ ಎಂ‌. ಬಿ

- ಏಕಾಂತಪ್ರಿಯ.

10 Nov 2017, 10:03 am

ಕಲ್ಪನೆ

ಕವಿ ಕಲ್ಪನೆಯಿದು ನೋಡು ಮನಸೆ
ಹೃದಯದ ಬಾಗಿಲು ತೆಗದು ನೋಡು ಕನಸೆ

ಕಲ್ಲಲಿ ಶಿಲೆಯನು ಅರಳಿಸಬಲ್ಲ
ಶಿಲೆಯಲಿ ಜೀವವ ತುಂಬಬಲ್ಲ...
ಹೂವಿನಲಿ ಅಂದವ ಅರಳಿಸಬಲ್ಲ
ಅಂದದ ಹೆಣ್ಣಿಗೆ ಹೋಲಿಸಬಲ್ಲ...

ರವಿ ಕೇವಲ ಸುಡುವವನಲ್ಲ.
ಭೂಮಿಗೆ ಬೆಳಕಿನ ಕಿರಣವ ತೂರುವನಲ್ಲ
ಒಲವಿಂದ ಬುವಿಗೆ ಬೆಳಕನು ನೀಡುವನಲ್ಲ...
ಸೂರ್ಯ ರಶ್ಮಿಯು ಇಳೆಯ ತಬ್ಬಲು ಯಾವ ಹೋಲಿಕೆ ಸರಿಸಾಟಿಯಿಲ್ಲ...

ಚಂದಿರ ಕೇವಲ ಗ್ರಹವಲ್ಲ
ಹುಣ್ಣಿಮೆ ಚಂದ್ರನ ಅಂದಕೆ ಹೆಣ್ಣಿನ ನಾಚಿಕೆ ಬೆರಸಿಹನಲ್ಲ
ಚಂದಿರನಂದಕೆ ಕವಿ ಕಾವ್ಯದ ಹೋಲಿಕೆ ಯಾವ ಉಪಮೆಗೂ ಕಡಿಮೆ ಇಲ್ಲ...

ಮರ ಗಿಡಗಳು ಕೇವಲ ಕಾನನವಲ್ಲ
ಹಕ್ಕಿಗಳಿಗದು ಕೇವಲ ರಕ್ಷೆಯ ಗೂಡಲ್ಲ
ವನರಾಶಿಯ ಸೊಬಗಿನ ದೃಶ್ಯಕೆ ಯಾವ ಕಲಾಕಾರನ ಕುಂಚಕೂ ನಿಲುಕದ ಜೀವಂತಿಕೆ ತುಂಬಿಹುದಲ್ಲ‌...

ಹೂವಿನಂದ ದುಂಬಿಗಂದ
ಪ್ರಕೃತಿಯ ನೋಟ ಮನಕಾನಂದ
ಹಕ್ಕಿಯ ಹಾಡು ಕರ್ಣಾನಂದ
ಕವಿ ಮನಸಿನ ಕಲ್ಪನೆಯು
ಭಾವುಕ ಮನಕೆ ಪರಮಾನಂದ...

- ನಾಗರಾಜ್

10 Nov 2017, 08:16 am

ತೃಪ್ತಿ

ತಿಳಿದಿಕೊ ನೀ ಹುಟ್ಟಿದ ಕಾರಣ,
ಬಾಗಿಲ ಬಳಿ ಬರುವ ಮುನ್ನವೇ ಮರಣ,
ಪರರ ಸುದ್ದಿಯಲಿ ಮಾಡಬೇಡ ಕಾಲಹರಣ,
ಎಲ್ಲರ ದಾರಿಯೇ ಬೇರೆ ಅದೊಂದು ತಿಳಿಯದ ಆವರಣ,


ನಿನ್ನ ದಾರಿಯಲಿ ಕಟ್ಟಬೇಡ ಆಸೆಯೆಂಬ ತೋರಣ,
ನೆನಪಿರಲಿ ಬಾಳಿನ ದಾರಿಯಲಿ ತೃಪ್ತಿಯೇ ತಂಗುದಾಣ,
ಮಂಕು ಮಾಡಿದೆ ನಿನ್ನ ಕನಸಲು ಬರುವ ಹಣ,
ದುಷ್ಟತನವ ನಾಟುವಳು ಮಾಯೇ ಕಾಂಚಾಣ,


ಮಾಡಿರುವ ಪಾಪವ ತೊಳೆಯಲು ಹೆದರುವಳು ಗೀರ್ವಾಣ,
ಎಷ್ಟೇ ಹೆಸರಿದ್ದರೂ ಅಹಂ ನೀಗಿಸಿ ಬಾಳು ನೀನಿಲ್ಲೀ ಸಾಧಾರಣ

- Vadiraj Sarvothama

10 Nov 2017, 12:36 am

ವಾದ್ಯ

ನಾನು ನುಡಿಸುವ ವಾದ್ಯಗಳೆಲ್ಲ
ಸುಖಾಸುಮ್ಮನೆ ಕೂರುತ್ತಿದ್ದವು
ಪ್ರಶ್ನಿಸದೆ. ಕಾರಣ - ನನಗೆ
ಅವುಗಳರಿವು ಇಲ್ಲವೆಂದಲ್ಲ,
ಸ್ಪೂತಿ೯ಯಾಗಿ ಬೆನ್ನ ಹಿಂದೆ ಯಾರಿಲ್ಲವೆಂದು:

ನನ್ನ ಹುಡುಗಿಯ ಮುಖವನ್ನು
ನೋಡಿದಾಗಲೆಲ್ಲ ವಾದ್ಯಗಳು
ಸುಂದರವಾಗಿ, ಸೊಗಸು
ತೋರುತ್ತಿದ್ದವು; ಆದರೆ, ಅವುಗಳ
ಭಾವಾಥ೯ ತಿಳಿಸಿಕೊಡಲಿಲ್ಲ ಅವಳು;

ಕಾಲ ನನ್ನ ಬಗ್ಗೆ ಚೂರು ಕೂಡಾ
ಯೋಚಿಸದೆ ಮುನ್ನಡೆಯುತ್ತಿದೆ.
ಬಿಟ್ಟು ಹೋದರೂ ಹಿಂದೆಯೇ
ಹಿಂಬಾಲಿಸುವೆ;

ಅವಳ ಹಿಂದೆ ಒಂದು ಮುಂಜಾವು,
ಸಂಜೆ ಸುಮಧುರವಾಗಿ ಕಳೆದರೆ,
ವಾದ್ಯಗಳ ಅಂತರಾಳಗಳೆಲ್ಲ ಪದೆ
ಪದೆ ಹೀಯಾಳಿಸಿ ಬಿಡುವವು;
ನಾನವುಗಳ ನುಡಿಸದಿದ್ದರೆ.....

- ಏಕಾಂತಪ್ರಿಯ.

10 Nov 2017, 12:16 am

ಸಾವಿತ್ರಿ

ನೀನು ನನ್ನೂರಿನತ್ತ
ಬರುವುದನ್ನು ಕಾಯುತ್ತಿದ್ದೆ.
ಬರುವಾಗ ಒಂಟಿಯಾಗಿ ಬಾರದೆ
ಚೈತನ್ಯ, ಶಾಂತಿ, ತಂಗಾಳಿಯೊಂದಿಗೆ
ನೀ ಬರಲು ನನ್ನೂರಿಗೂ ಅಲಂಕಾರ
ಇರಿಸಿದ್ದೆ;

ಸಂಪೂಣ೯ವಾದ ನಿನ್ನ ನಿಲುವು
ನನ್ನಲ್ಲಿಯೇ ಇರಲೆಂಬ ಆಶಯ.
ನಿನ್ನ ಸ್ನೇಹ ಬೆಳೆಸಲು ಬಳಿಗಿರಿಸಿದ್ದೇನೆ
ನನ್ನ ನಿವೇಧನೆಯನ್ನ;

ಅನಾಥವಾದ ನನ್ನೀ ಹೃದಯಕ್ಕೆ
ನಿನ್ನ ಹೃದಯದಾಗಮನ
ಬಹುಬೇಗ ಅವಶ್ಯವಿದೆ.
ನಮ್ಮಿಬ್ಬರ ಸ್ನೇಹಕ್ಕೆ ಜಗದ
ಅನಂತ ಜೀವಕೋಟಿಗಳು
ವಿಷಾದಪಡಲಿ:

ಒಡಲು ಮತ್ತು ಬೆನ್ನ ಹಿಂದೆ
ಜನಿಸಿದ ಸಹೋದರಿಯರ
ಕಲ್ಪನೆಯಾಗಲಿ, ವಾಸ್ತವವಾಗಲಿ ಇಲ್ಲ;
ನನಗೆ ನೀನೇ ಅನಂತ ಸಹೋದರಿ.

ಏಕಾಂತಪ್ರಿಯ ಎಂ. ಬಿ

- ಏಕಾಂತಪ್ರಿಯ.

09 Nov 2017, 11:54 pm

ಎಷ್ಟೊಂದ ಚೆಂದಿತ್ತು ನಂಬಾಲ್ಯ

ಮಣ್ಣಾಗ ಆಡ್ತಿದ್ವಿ
ಮುಳ್ಳಾಗ ತಿರಗತಿದ್ವಿ
ಬಿಸಲಾಗ ಸುತ್ತಾಡ್ತಿದ್ವಿ
ಉಣ್ಣೂದು ಮರಿತಿದ್ವಿ
ಆದ್ರೂ ಏನೂ ಆಗ್ತಿರ್ಲಿಲ್ಲ
ಎಲ್ರೂ ಚನ್ನಾಗಿರ್ತಿದ್ವಿ
ಎಷ್ಟೊಂದು ಚೆಂದಿತ್ತು...

ಬಾವ್ಯಾಗ ಈಜಾಡ್ತಿದ್ವಿ
ಕೆಸರಾಗ ಉಳ್ಳಾಡ್ತಿದ್ವಿ
ಅಡವ್ಯಾಗ ಅಡ್ಡಾಡ್ತಿದ್ವಿ
ಸಿಕ್ಕಿದ್ದು ಬಾಯಾಡಸ್ತಿದ್ವಿ
ಆದ್ರೂ ಏನೂ ಆಗ್ತಿರ್ಲಿಲ್ಲ
ಎಲ್ರೂ ಚನ್ನಾಗಿರ್ತಿದ್ವಿ
ಎಷ್ಟೊಂದು ಚೆಂದಿತ್ತು...

ಸಾಲೀಗಿ ಹೋಗ್ತಿದ್ವಿ
ಪಾಟಿ ಬಳಪ ಒಯ್ತಿದ್ವಿ
ಪಾಟಿಮ್ಯಾಲ ಬರೀತಿದ್ವಿ
ಬರ್ದಿದ್ದು ಉಗಳ್ಹಚ್ಚಿ ಒರಿಸ್ತಿದ್ವಿ
ಬಳಪಾ ಆಡ್ತದ್ವಿ
ಅದನ್ನ ತಿಂತದ್ವಿ
ಆದ್ರೂ ಏನೂ ಆಗ್ತಿರ್ಲಿಲ್ಲ
ಎಲ್ರೂ ಚನ್ನಾಗಿರ್ತಿದ್ವಿ
ಎಷ್ಟೊಂದು ಚೆಂದಿತ್ತು...

ಒಳಗ ಕಾಲ್ಹಾಕಿ
ಸೈಕಲ್ ಪೆಡಲ್ ತುಳಿತಿದ್ವಿ
ಎತ್ತಿನ ಗಾಡಿ ಜಿಗದ ಹತ್ತಿದ್ವಿ
ಎಮ್ಮಿ ಮ್ಯಾಲ ಕುಂದರ್ತಿದ್ವಿ
ಗಿಡದಾಗ ಜೋತಾಡ್ತಿದ್ವಿ
ಜೇನ ಬಿಡಸ್ತಿದ್ವಿ
ಹುಳಾ ಕಡಸ್ಕೊಳ್ತಿದ್ವಿ
ಆದ್ರೂ ಏನೂ ಆಗ್ತಿರ್ಲಿಲ್ಲ
ಎಲ್ರೂ ಚನ್ನಾಗಿರ್ತಿದ್ವಿ
ಎಷ್ಟೊಂದು ಚೆಂದಿತ್ತು...

ಜಾತಿ ಗೀತಿ ಮಾಡ್ತರ್ಲಿಲ್ಲ
ಹೆಣ್ಣು ಗಂಡು ಅಂತಿರ್ಲಿಲ್ಲ
ಗಂಡಾ ಹೆಂಡ್ತಿ ಆಗ್ತಿದ್ವಿ
ಸಂಸಾರ ಆಟ ಆಡ್ತಿದ್ವಿ
ಹಗಲಾ ರಾತ್ರಿ ಓಡಾಡ್ತಿದ್ವಿ
ಮನಿ ಮಠ ಮರೀತಿದ್ವಿ
ಆದ್ರೂ ಏನೂ ಆಗ್ತಿರ್ಲಿಲ್ಲ
ಎಲ್ರೂ ಚನ್ನಾಗಿರ್ತಿದ್ವಿ
ಎಷ್ಟೊಂದು ಚೆಂದಿತ್ತು...

ಮೊಬೈಲ್ ಕಂಪ್ಯೂಟರ್ ಬಂದಿರ್ಲಿಲ್ಲ
ರೇಡಿಯೋ ಮಾತ್ರ ಕೇಳ್ತಿದ್ವಿ
ಬೇಕ್ರಿ ತಿಂಡಿ ಗೊತ್ತಿರ್ಲಿಲ್ಲ
ಮುಟಗಿ ಥಾಲಿಪಟ್ಟಿ ಸವಿತಿದ್ವಿ
ಹಾಲು ಮಜ್ಗಿ ಕುಡಿತಿದ್ವಿ
ಉಂಡಾಡಿಯಾಗಿ ಅಲಿತಿದ್ವಿ
ಆದ್ರೂ ಏನೂ ಆಗ್ತಿರ್ಲಿಲ್ಲ ಎಲ್ರೂ ಚನ್ನಾಗಿರ್ತಿದ್ವಿ
ಎಷ್ಟೊಂದು ಚೆಂದಿತ್ತು...
ಹಿಂಗ ಹೇಳ್ತಾ ಹೋದ್ರ
ಮುಗಿಯಾಂಗಿಲ್ಲ ನಮ್ ಕತಿ
ಇರ್ಲಿಲ್ಲ ನಮಗ ಯಾವ ಬಂಧ
ಹಕ್ಕಿಯಂಗ ಹಾರಾಡ್ತಿದ್ವಿ
ನಮ್ಮನ್ನ ಕಾಳಜಿ ಮಾಡಾಕ
ಇರ್ಲಿಲ್ಲ ಪುರಸೊತ್ತ ಹಡದವ್ರೀಗಿ
ಆದ್ರೂ ಏನೂ ಆಗ್ತಿರ್ಲಿಲ್ಲ
ಎಲ್ರೂ ಚನ್ನಾಗಿರ್ತಿದ್ವಿ
ಎಷ್ಟೊಂದು ಚೆಂದಿತ್ತು ನಂಬಾಲ್ಯ.

- ravikumar...ravikumar

09 Nov 2017, 11:21 pm

ಮರದ ಕೊರಗು

ಒಂಟಿಯೆಂದೇಕೆ ಕೊರಗುವೆ ಮರವೇ
ನೆಂಟರಿಲ್ಲದಾ ಈ ಜಗದೊಳಗೆ.
ಕುಂಟು ನೆಪಗಳು ಸಾಕಾಗಲಿಲ್ಲವೇ
ನಂಟು ತೊರೆದು ಒಬ್ಬಂಟಿಯಾಗಿರಲು!

ಬಯಲು ಬಿದ್ದ ಭೂಮಿಯನ್ನು
ಬಗೆದು ಬೇರನಿಳಿಸಿ ಕೆಳಗೆ
ಭುವಿಯ ಒಡಲ ನೀರ ಹೀರಿ
ಮೊಳಕೆಯೊಡೆದೆ, ಬರಿದೇ ಬೆಳೆದೆ.

ದಷ್ಟ ಪುಷ್ಟ ಕಾಂಡ ಬೆಳೆದು
ರೆಂಬೆ ಕೊಂಬೆ ಅಗಲವಿಡಿದು
ಹಸಿರು ಎಲೆಗಳ ಕೊಡೆಯನಿಡಿದು
ಹಕ್ಕಿ ಪಕ್ಷಿಗಳಿಗೆ ಹಣ್ಣು ಬೆಳೆದು.

ಮರವೆಂದರೆ ಬಾರದಿರುವವೇ
ಹಕ್ಕಿ ಪಕ್ಷಿ ಬಾನಾಡಿ
ಕಟ್ಟದಿರುವವೇ ಗೂಡು
ಸಂಗಾತಿಯ ಒಡಗೂಡಿ.
ಹಾರದಿರುವವೇ ಮರವ ಮರೆತು,
ತೊರೆಯದಿರುವವೇ ರೆಕ್ಕೆ ಬಲಿತು.

ಬೆಳೆಸಿಕೊಳ್ಳದಿರು ಮರವೇ
ಹಕ್ಕಿಯೊಡನೆ ಬಾಂಧವ್ಯ ಸಲುಗೆ,
ಹಾರಲಾರೆ ನೀನೆಂದಿಗೂ
ಅವುಗಳೊಡನೆ ಬಾನಂಗಳಕೆ.
ನಿಲ್ಲು ಎದೆ ಗಟ್ಟಿ ಮಾಡಿಕೊಂಡು ಮತ್ತೊಮ್ಮೆ
ಬರಬಹುದು ಹಕ್ಕಿ ಹಿಂಡು
ಹುಡುಕಿಕೊಂಡು ನಿನ್ನನ್ನೇ...

- ಶ್ರೀಗೋ.

09 Nov 2017, 10:28 pm

ನಯನ

"ಕತ್ತಲೆಯೇ ಕವಿದ ಈ ನಯನಗಳಿಗೆ
ನಿನ್ನ ಜಿಂಕೆ ಕಣ್ಣಿನ ಮುಗ್ಧ ಸ್ನಿಗ್ಧ ನೋಟ
ಸಿಕ್ಕಾಗಲೆ ಗೆಳತಿ ಬೆಳಕ ಕಂಡಂತೆನಿಸಿ
ಅಮಾವಾಸ್ಯೆಯಂತ ಮನಸಿನ ಅಂಗಳಕೆ
ಬೆಳದಿಂಗಳೇನೆ ಬಂದು ಸುರಿದಂತಾಗಿದ್ದು"


"ತೆರೆದಂಗಳದಿ ನೀ‌ ನಿಂತು
ಚಂದ್ರನ ನೋಡಿ‌ ಚುಕ್ಕಿ ಎಣಿಸಿ
ನಗುವಾಗ ಸಿಗುವ ಆ ಗುಳಿಕೆನ್ನೆ ಅಂದ
ಚಂದ್ರನೇ ಮೈ ಮರೆವ ನಯನಗಳ ಹೊಳಪ
ಕಂಡಾಗ ಅನಿಸದಿರುವುದೇ ಹೇಳು ಗೆಳತಿ
ಏನು‌‌ ಕೊಟ್ಟರು ಸಿಗದ ಹರುಷ ಕೊಡುವ
ಆ ಚಂದ್ರ ಚುಕ್ಕಿಯಾದರು ನಾನಾಗಬಾರದಿತ್ತೆಂದು"

"ನಕ್ಕು ಬಿಡು ಒಮ್ಮೆ
ಮುತ್ತುದುರಿ ಹೋದಂತೆ
ಉದುರಿದ ಮುತ್ತು ಕಣ್ಣ ಕೋರೈಸುವಂತೆ
ಈ ಬಡಪಾಯಿ ನಯನಗಳಿಗೆ
ಅದೇ ಚಿನ್ನಾಭರಣಗಳ ಸಂತೆ
ಮರೆತುಬಿಡುವೆ ನನ್ನೆಲ್ಲ ಅಂತೆ ಕಂತೆ"

- ಶ್ರೀಕಾವ್ಯ

09 Nov 2017, 09:49 pm

ಕಪಟ

ಇಲ್ಲಿ ಬರೀ ಕಪಟತನವನ್ನೇ ನೋಡಿದೆ,
ಇನ್ನಿಲ್ಲಿ ಬರುವುದಿಲ್ಲ ಲೋಕದಲ್ಲಿನ
ಕುತಂತ್ರಿಗಳ ಸೇನೆಯೆಲ್ಲಾ ಒಂದೆಡೆ ಸೇರಿ
ಬೀಗುತಿದೆ ಸ್ವಾರ್ಥದ ಅಟ್ಟಹಾಸದಲ್ಲಿಂದು.

ಕಂಬನಿಯ ಅಭಿಷೇಕಗೈದರು ಕಲ್ಲಿನಂತಹ ಘೋರ ಮನುಷ್ಯರ ನೆರಳಿಗೂ ಅದು ತಾಗುತಿಲ್ಲ ಈ ನರಕದಲ್ಲಿ ನೀವೇ ನೆಲೆಯಾಗಿರಿ ನೊಂದ
ಮನಸುಗಳ ಶಾಪಗಳ ಮೂಟೆಯೊತ್ತು ನಿಮ್ಮ
ಹಾಸಿಗೆಗಳ ಮೇಲೆ ಸುರಿದುಕೊಳ್ಳಿ ಇನ್ನಿಂದ
ರಾಕ್ಷಸ ರಾಜ್ಯವೆಂದು ಈ ವಿಸ್ಮಯ ನಗರಿಯಲ್ಲಿ.

- ಚುಕ್ಕಿ

09 Nov 2017, 07:48 pm

ಬಂದಿಯಾಗಿರು ಮನಸ್ಸು

ಮುಳುಗುತಿರುವೆ ನಾನು
ದುಂಖದ ಕಡಲಿನಲಿ
ಕೂರಗುತಿರುವೆ ನಾನು
ಮೌನದ ಅರಮನೆ ಯಲ್ಲಿ
ಬಂದಿಯಾಗಿರುವೆ ನಾನು
ಎಲ್ಲವು ಇದ್ದರು ಏನು ಇಲ್ಲದ ಬದುಕು
ಬೇಡದ ಮನಸ್ಸು ನಿನೇಕೆ ಹೀಗೆ
ಹೂರಟು ಬಿಡು ನನ್ನ ಬಿಟ್ಟು...
ಬಂದಿಯಾಗಿಯೆ ಇದ್ದು ಬಿಡುವೆ
ಉಸಿರಿರುವ ವರೆಗು....

- ರಾಗಸಿರಿ....

09 Nov 2017, 05:20 pm