Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿನಗೆ ಒಪ್ಪಿಗೆಯಿದಿಯಾ...?

ನಮ್ಮಿಬ್ಬರ ಪ್ರೀ ವೆಡ್ಡಿಂಗ್
ಶೂಟ್ ಗೆ ದೊಡ್ಡ ಕ್ಯಾಮೆರಾನೇ
ಬೇಕು ಅಂತೇನಿಲ್ಲ,
ನನ್ನ ಹತ್ರನೇ "ಐಕ್ಯೂ ಜಡ್ ನೈನ್"
ಮೊಬೈಲ್ ಇದೆ ಮುಖ
ಕಾಣಿಸುವಷ್ಟು ಶೂಟ್ ಆದ್ರೆ
ಸಾಕು ಅಲ್ವ..
ಏನಂತೀಯಾ ನಿನಗೆ ಒಪ್ಪಿಗೇನಾ..??
ಎಮ್.ಎಸ್.ಭೋವಿ...✍️
.
.
.
.
.

- mani_s_bhovi

21 Dec 2024, 12:13 am

ಅಮ್ಮೋರೆ ‌ನಿಮ್ಮಪ್ಪ ಬಿಡ್ತಿಲ್ಲ ನನಗಿಲ್ಲಿ...?

ಬೆಟ್ಟದ ಮೇಲಿರಿ ಮೂಡಿ ತುಂಬಾ
ಮಲ್ಲಿಗೆ ಮುಡಿದು ಕೋಂಡು
ನಾ ಬರುವ ದಾರಿಯನ್ನೇ ಕಾಯುತ
ಕುಳಿತಿರುವೆಯಾ ನೀನಲ್ಲಿ,,,?
ನಿನ್ನ ಬೇಟಿಯಾಗುವ
ವಿಷಯ ತಿಳಿದು ಆಯುಧ
ಹಿಡಿದು ಕೋಂಡು ನಿಂತಿರುವನು
ನಿಮ್ಮಪ್ಪ ನನಗಿಲ್ಲಿ...?
ಎಮ್.ಎಸ್.ಭೋವಿ...✍️
.
.
.
.
.
.
.

- mani_s_bhovi

19 Dec 2024, 10:42 pm

ನೆನಪಿನ ಬಾರ ?

ಆಕಸ್ಮಿಕವಾಗಿ ಪರಿಚಯವಾದವಳು.
ನನ್ನ ಹೃದಯದ ಗೂಡಲ್ಲಿ ಹೆಜ್ಜೆಯನ್ನಿಟ್ಟಿರುವಳು .
ಅವಳ ಪ್ರೀತಿಗಾಗಿ ವರ್ಷವಿಡೀ ಕಾಯಿಸಿದವಳು.
ಕಾಯಿಸಿ ಕಾಯಿಸಿ  ಹೃದಯಡಿಯಲ್ಲಿ  ಸಿಲುಕಿಕೊಂಡಳು.
ಅವಳ ಪ್ರೀತಿಯಲ್ಲಿ ಮರೆಯಲಾಗದ ನೆನಪುಗಳನ್ನು ಕೊಟ್ಟು ,
ತಂದೆ ತಾಯಿಗೆ ಮಾತಿಗೆ ಬದ್ಧಳಾಗಿ ತಂದೆ ತಾಯಿಗೆ ಒಳ್ಳೆಯ ಮಗಳಾದವಳು.
ಆಕಸ್ಮಿಕವಾಗಿ ಬಂದು ಅವಳ ನೆನಪಿನ ಬಾರವನ್ನು ಒರೆಸಿ
ಹೇಳದೇನೆ ನನ್ನ ಕಣ್ಣಿಂದ ಮರೆ ಮಾಚಿದಳು.......
  ಅವಳು ನನ್ನವಳು..........

                                              ✍️✍️ Ravan edit ✍️✍️

- kavanagala rashi❤️

17 Dec 2024, 01:44 pm

ಕಲ್ಪನೆಯ ಸಾಲುಗಳು...

ಕಾಡಿಗೆಯ ಕಣ್ಣವಳೇ,
ಕಾಶ್ಮೀರದ ಕೇಸರಿ ಯಂತವಳೇ,
ಕಾವೇರಿಯ ಮನದವಳೇ,
ಕಾಮನ ಬಿಲ್ಲಿನಂತವಳೇ,
ಕಾಯುತಿರುವೆ ನಿನ್ನ ಬರುವಿಕೆಗೇ,
ಕಾಲಿಡುವೆಯಾ ನನ್ನ ಈ ಮನಕೆ,
ಕಾಲಿಡುವೆಯಾ ನನ್ನ ಈ ಹೃದಯಕ್ಕೆ...
ಎಮ್.ಎಸ್.ಭೋವಿ...✍️
.
.
.
.
.
.
.
.
.
.

- mani_s_bhovi

16 Dec 2024, 11:52 pm

ಪುಟ್ಟ ಲೋಕ

ನನ್ನ ಹೃದಯದ ನಾಯಕ
ನೀನು ನಿನಗಾಗಿ ಕಾಯುತ
ಕುಳಿತಿರುವೆ ನಾನು
ಹೋಗದಿರು ಬಿಟ್ಟು
ಈ ಜೀವ ಹಂಬಲಿಸಿದೆ

ನಿನ್ನ ಪ್ರೀತಿಯ..
ಓ... ಪ್ರಿಯಾ
ನಿನ್ ಪ್ರೀತಿ ಇಲ್ಲದೇ
ತಬ್ಬಲಿ ನಾನು

ಬರುವೆಯಾ ಮರಳಿ
ಕಾದಿರುವೆ ನಿನಗಾಗಿ
ಹೇಗಿರುವೆ ನನ್ನ ಬಿಟ್ಟು ನೀ
ಚಂದ್ರನ ಹಾಗೆ ಹೊಳೆಯುವ
ನಿನ್ನ ಕಣ್ಣುಗಳಿಗೆ ಸೋತಿರುವೆ
ನಾ

ಪ್ರೀತಿಯ ಊರಲಿ ನಾಯಕ
ನೀನು
ಅ ಊರಿನ ನಾಯಕಿ ನಾನು
ನಿನ್ನ ಕೂಡಿ ಬಾಳುವಸೆ
ಈ ಜೀವಕೆ ?☺️

ಕಾದು ಸಾಕಾಗಿರುವ
ಬಾ ಜೀವವೇ

- Radha Radhe

16 Dec 2024, 10:24 pm

ನಿಮ್ಮಗೆ. ಎಂತಾ. ಹುಡ್ಗಿ. ಬೇಕು. ಅಂತ. ಕೇಳವರಿಗೆ ...???



ಮದುವೆಗೂ. ಮುಂಚೆ. ನಮ್ಮ. ಈ. ಮುಖನ
ಎಷ್ಟ್. ಜನ. ಹುಡ್ಗೀರು. ನೋಡಿದ್ರೂ ಅನ್ನೋದೂ
ಮುಖ್ಯ ಅಲ್ಲ. ಮದ್ವೆ. ಆದಮೇಲೆ ಇದೆ. ಮುಖನ
ಸವರ. ಸಲ. ನೋಡಿದ್ರೂ ಮತ್ತೆ. ಮತ್ತೆ. ನೋಡ್ಬೇಕು
ಅಂತ ಆಸೆ ಪಡೋ. ಹುಡ್ಗಿ. ಬೇಕು ,,,
ಸುನೀಲ್ ಬಿಜಿಎಂ ಕನ್ನಡ

- Sunil Bgm kannada

13 Dec 2024, 08:22 am

ನೊಂದ ತಾಯಿ

ತಾಯಿಗೆ ತ್ರಾಸ ಕೊಡಬೇಡ ಮಗ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು...
ನಿನ್ನ ಸ್ವಾರ್ಥಗೋಸ್ಕರ ತಾಯಿಗೆ ತ್ರಾಸ ಕೊಟ್ಟು ಜಾಲಿ ಆಗಿ ಇರಬೇಡ ಮಗ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು...
ತಾಯಿಗೆ ಪ್ರೀತಿ ತೋರಿಸ ಬದಲು ತ್ರಾಸ ಕೊಟ್ಟರೆ ಆ ಜೀವಿ ನೊಂದಬಿಡುತ್ತದೆ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು...
ಅಮ್ಮ ಅಂತ ಪ್ರೀತಿ ತೋರಿಸು ತಾಯಿಗೆ ಕಷ್ಟ ಸುಖ ಕೇಳು ಅದರ ಬದಲಿಗೆ ಕಿರಿ ಕಿರಿ ಮಾಡಬೇಡ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು...
ತಾಯಿ ತೀರಿದರೇ ಯಾವ ಹಳ್ಳಿ ನಾಯಿಯು ಕೇಳಲ್ಲ ನಿನಗೆ ತಾಯಿ ಇರಷ್ಟ ದಿವಸ ಚೆನ್ನಾಗಿ ನೋಡ್ಕೋ ಮಗ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು....
ತಾಯಿಗೆ ಜೋರಾಗಿ ಬಾಯಿ ಬಂದಾಗೇ ಬೈಯಬೇಡ
ಯಾರು ಜೊತಿಗೆ ಇರದೇ ತಾಯಿ ನಿನ್ನ ಜೊತೆ ಇದ್ದಳು ಅಂತ ಮರೀಬೇಡ ಮಗ ತ್ರಾಸ ಕೊಡಬೇಡ ಮಗ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು....



-ಅಂಬಿಕಾ ಕುಲಕರ್ಣಿ

- Ambika Kulkarni

12 Dec 2024, 11:30 pm

ಮರೀಬೇಡ ನನ್ನ ಪ್ರೀತಿ,


ಪ್ರೀತಿ ಮಾಡು ಅನಲಿಲ್ಲ ಬಾಯಿಬಿಚ್ಚಿ
ನನ್ನ ನಡವಳಿಕೆಯಲ್ಲಿ, ಕಣ್ಣಿಂದ ತೋರಿಸಿದೆ ನನ್ನ ಪ್ರೀತಿ....
ಪ್ರೀತಿ ಅರ್ಥವಾದರೂ ಆಗದಂತೆ ನಟಿಸಿ
ನನ್ನ ಮರೀತಿಯಲ್ಲ...
ಕಣ್ಮುಚ್ಚಿದರೆ ಸಾಕು ಕಣ್ಣಲ್ಲಿ ಬರುವೆ ನೀ...
ಈ ತರ ಎಂದು ಅರಿಯದ ಭಾವನೆಗಳು ನನ್ನಲ್ಲಿ ತುಂಬಿ ಬರುತ್ತಿವೆ....
ನಾನೆ ನನ್ನ ಅರಿಯಷ್ಟು ನಿನ್ನ ಅರಿತಿರುವೆ ಎಂದು ಜಂಬ ಜಾಸ್ತಿ...
ಈಗೀಗ ನೀನೆಂಬ ಕನಸು ಹೆಚ್ಚಾಗಿದೆ.




-ಅಂಬಿಕಾ ಜಿ ಕುಲಕರ್ಣಿ

- Ambika Kulkarni

12 Dec 2024, 04:29 pm

ಸುಸ್ಥಿರ ಭವಿಷ್ಯ



ಖುಷಿ ಕೊಡದು ಕುಟುಂಬಕ್ಕೆ ವಿಶೇಷ ಚೇತನರ ಜನನ,
ಹೆತ್ತ ತಾಯಿ ಉತ್ತರಿಸಲಾಗದೆ ಅನುಭವಿಸುವರು ನೋವನ್ನ.

ಮುಜುಗರದೀ ಶಾಲೆಗೆ ಸೇರುವ ಮಕ್ಕಳು,
ಮಿಂಚಂತೆ ಬೆಳೆಯಲು ಕವಿಯುವುದು ನಿರುದ್ಸಾಹದ ಕಾರಿರುಳು.

ಹಿಂಜರಿಯದೆ ಮುಂದಾಗಿರಿ ಮರೆತು ನ್ಯೂನತೆಯ,
ಸಂಘ ಜೀವಿಯಾಗಿ ಅರಿಯಬಹುದಾಗ ಸಮಾಜದ ಪ್ರಸ್ತುತತೆಯ.

ಹಳೆ ಬೇರು ಹೊಸ ಚಿಗುರ ಸಮ್ಮಿಶ್ರ ಸಾಲುಗಳ ಸಂಹಿತೆ,
ತರುಣರ ನವ ಶೋಧನೆಗೆ ಮೂಡಣದ ಮುನ್ನೋಟದಂತೆ.

ದುರ್ವಾಸರ ನುಡಿಗಳಿಗೆ ಕುಪಿತರಾಗದೆ,
ಸಂಯಮದಿ ನಡೆಯಲಿ ಸಮರ್ಥತೆಯ ಸಂಚಾರ.

ಸುಸ್ಥಿರ ಭವಿಷ್ಯಕ್ಕೆ ಬೇಕು ವಿಶ್ವಜ್ಞಾನ,
ಬಾನಾಡಿ ವಿಹರಿಸಲು ಸಹಕರಿಸುತ್ತಿದೆ ತಂತ್ರಜ್ಞಾನ.

ವಿಕಲಾಂಗರು ಸಮಾನರೆಂಬ ಜಾಗೃತಿಯ ಜಾಗಟೆ ಮೊಳಗಿಸಿ,
ವಿಶ್ವ ಸಂಸ್ಥೆ ಉತ್ತೇಜಿಸಿರೆಂದಿದೆ ಹಕ್ಕುಗಳ ರಕ್ಷಿಸಿ.

ರಚನೆ ಶ್ರೀಮತಿ ನಾಗಮಣಿ h b
ಸಹಶಿಕ್ಷಕಿ g h p s ಧರ್ಮಪುರ್.

- nagamani Kanaka

04 Dec 2024, 07:23 am

ಭ್ರಷ್ಟರ ವಿರುದ್ಧ ಸಮರ ಸಾರೋಣವೇ

ಆಲದ ಮರದ ಕೊಂಬೆ ಕೊಂಬೆ ಬೇರು ಬೇರು
ಕೊಳೆತಿದೆ ಭ್ರಷ್ಟರ ಹುಳ ಹಿಡಿದು
ಎಲೆಗಳು ಕೊಳೆತು ನಾರುತ್ತಿದೆ
ಕಶ್ಮಲ ಗಾಳಿ ಬೀಸಿದೆ
ಜೀವಕಿಲ್ಲ ಪರಿಶುದ್ಧ ನಿರ್ಮಲ ಗಾಳಿ
ಪರಿಹಾರವಿಲ್ಲದ ಬದುಕು ಬರೀ ಕೊಳಕು
ಗೊತ್ತೇ ನಿಮಗೆ ಚಾಮಯ್ಯ ಮೇಷ್ಟ್ರು
ಕರಿನಾಗರ ರಾಮಾಚಾರಿಯ ತಿದ್ದಿದವರು
ಆಗಿ ಮೇಷ್ಟ್ರೇ middle school ಟೀಚರ್
ಭ್ರಷ್ಟರ ಮಕ್ಕಳಿಗೆ ಆಗಿ ಚಾಮಯ್ಯ
ತಯಾರಿಸಿ ಅವರನ್ನು ಭ್ರಷ್ಟ ತಂದೆ ಬಗ್ಗಿಸಿ
ಹರಡ ದಿರಲಿ ಭ್ರಷ್ಟ ಚಾಳಿ ಮಗನ ಪಾತ್ರದಲ್ಲಿ
ಉರುಳಿಸಿ ಕೊಳೆತ ಕೊಂಬೆ ಕೊಂಬೆ ಧರೆಗೆ
ಮತ್ತೆ ಹೊಸ ಬಿ ಳಲು ಬಿಟ್ಟಿರಿ ಉಳಿಸಿರಿ
ಭಾರತದ ಹಸಿರು ಆಲದ ಮರ ವಿಶ್ವಶಾಂತಿ

- Jayakumar S

29 Nov 2024, 06:48 pm