ಬೆಟ್ಟದ ಮೇಲಿರಿ ಮೂಡಿ ತುಂಬಾ
ಮಲ್ಲಿಗೆ ಮುಡಿದು ಕೋಂಡು
ನಾ ಬರುವ ದಾರಿಯನ್ನೇ ಕಾಯುತ
ಕುಳಿತಿರುವೆಯಾ ನೀನಲ್ಲಿ,,,?
ನಿನ್ನ ಬೇಟಿಯಾಗುವ
ವಿಷಯ ತಿಳಿದು ಆಯುಧ
ಹಿಡಿದು ಕೋಂಡು ನಿಂತಿರುವನು
ನಿಮ್ಮಪ್ಪ ನನಗಿಲ್ಲಿ...?
ಎಮ್.ಎಸ್.ಭೋವಿ...✍️
.
.
.
.
.
.
.
ಆಕಸ್ಮಿಕವಾಗಿ ಪರಿಚಯವಾದವಳು.
ನನ್ನ ಹೃದಯದ ಗೂಡಲ್ಲಿ ಹೆಜ್ಜೆಯನ್ನಿಟ್ಟಿರುವಳು .
ಅವಳ ಪ್ರೀತಿಗಾಗಿ ವರ್ಷವಿಡೀ ಕಾಯಿಸಿದವಳು.
ಕಾಯಿಸಿ ಕಾಯಿಸಿ ಹೃದಯಡಿಯಲ್ಲಿ ಸಿಲುಕಿಕೊಂಡಳು.
ಅವಳ ಪ್ರೀತಿಯಲ್ಲಿ ಮರೆಯಲಾಗದ ನೆನಪುಗಳನ್ನು ಕೊಟ್ಟು ,
ತಂದೆ ತಾಯಿಗೆ ಮಾತಿಗೆ ಬದ್ಧಳಾಗಿ ತಂದೆ ತಾಯಿಗೆ ಒಳ್ಳೆಯ ಮಗಳಾದವಳು.
ಆಕಸ್ಮಿಕವಾಗಿ ಬಂದು ಅವಳ ನೆನಪಿನ ಬಾರವನ್ನು ಒರೆಸಿ
ಹೇಳದೇನೆ ನನ್ನ ಕಣ್ಣಿಂದ ಮರೆ ಮಾಚಿದಳು.......
ಅವಳು ನನ್ನವಳು..........
ತಾಯಿಗೆ ತ್ರಾಸ ಕೊಡಬೇಡ ಮಗ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು...
ನಿನ್ನ ಸ್ವಾರ್ಥಗೋಸ್ಕರ ತಾಯಿಗೆ ತ್ರಾಸ ಕೊಟ್ಟು ಜಾಲಿ ಆಗಿ ಇರಬೇಡ ಮಗ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು...
ತಾಯಿಗೆ ಪ್ರೀತಿ ತೋರಿಸ ಬದಲು ತ್ರಾಸ ಕೊಟ್ಟರೆ ಆ ಜೀವಿ ನೊಂದಬಿಡುತ್ತದೆ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು...
ಅಮ್ಮ ಅಂತ ಪ್ರೀತಿ ತೋರಿಸು ತಾಯಿಗೆ ಕಷ್ಟ ಸುಖ ಕೇಳು ಅದರ ಬದಲಿಗೆ ಕಿರಿ ಕಿರಿ ಮಾಡಬೇಡ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು...
ತಾಯಿ ತೀರಿದರೇ ಯಾವ ಹಳ್ಳಿ ನಾಯಿಯು ಕೇಳಲ್ಲ ನಿನಗೆ ತಾಯಿ ಇರಷ್ಟ ದಿವಸ ಚೆನ್ನಾಗಿ ನೋಡ್ಕೋ ಮಗ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು....
ತಾಯಿಗೆ ಜೋರಾಗಿ ಬಾಯಿ ಬಂದಾಗೇ ಬೈಯಬೇಡ
ಯಾರು ಜೊತಿಗೆ ಇರದೇ ತಾಯಿ ನಿನ್ನ ಜೊತೆ ಇದ್ದಳು ಅಂತ ಮರೀಬೇಡ ಮಗ ತ್ರಾಸ ಕೊಡಬೇಡ ಮಗ
ತಡ್ಕೋ ಶಕ್ತಿ ಇಲ್ಲದ ಜೀವಿ ಅದು....
ಪ್ರೀತಿ ಮಾಡು ಅನಲಿಲ್ಲ ಬಾಯಿಬಿಚ್ಚಿ
ನನ್ನ ನಡವಳಿಕೆಯಲ್ಲಿ, ಕಣ್ಣಿಂದ ತೋರಿಸಿದೆ ನನ್ನ ಪ್ರೀತಿ....
ಪ್ರೀತಿ ಅರ್ಥವಾದರೂ ಆಗದಂತೆ ನಟಿಸಿ
ನನ್ನ ಮರೀತಿಯಲ್ಲ...
ಕಣ್ಮುಚ್ಚಿದರೆ ಸಾಕು ಕಣ್ಣಲ್ಲಿ ಬರುವೆ ನೀ...
ಈ ತರ ಎಂದು ಅರಿಯದ ಭಾವನೆಗಳು ನನ್ನಲ್ಲಿ ತುಂಬಿ ಬರುತ್ತಿವೆ....
ನಾನೆ ನನ್ನ ಅರಿಯಷ್ಟು ನಿನ್ನ ಅರಿತಿರುವೆ ಎಂದು ಜಂಬ ಜಾಸ್ತಿ...
ಈಗೀಗ ನೀನೆಂಬ ಕನಸು ಹೆಚ್ಚಾಗಿದೆ.
ಆಲದ ಮರದ ಕೊಂಬೆ ಕೊಂಬೆ ಬೇರು ಬೇರು
ಕೊಳೆತಿದೆ ಭ್ರಷ್ಟರ ಹುಳ ಹಿಡಿದು
ಎಲೆಗಳು ಕೊಳೆತು ನಾರುತ್ತಿದೆ
ಕಶ್ಮಲ ಗಾಳಿ ಬೀಸಿದೆ
ಜೀವಕಿಲ್ಲ ಪರಿಶುದ್ಧ ನಿರ್ಮಲ ಗಾಳಿ
ಪರಿಹಾರವಿಲ್ಲದ ಬದುಕು ಬರೀ ಕೊಳಕು
ಗೊತ್ತೇ ನಿಮಗೆ ಚಾಮಯ್ಯ ಮೇಷ್ಟ್ರು
ಕರಿನಾಗರ ರಾಮಾಚಾರಿಯ ತಿದ್ದಿದವರು
ಆಗಿ ಮೇಷ್ಟ್ರೇ middle school ಟೀಚರ್
ಭ್ರಷ್ಟರ ಮಕ್ಕಳಿಗೆ ಆಗಿ ಚಾಮಯ್ಯ
ತಯಾರಿಸಿ ಅವರನ್ನು ಭ್ರಷ್ಟ ತಂದೆ ಬಗ್ಗಿಸಿ
ಹರಡ ದಿರಲಿ ಭ್ರಷ್ಟ ಚಾಳಿ ಮಗನ ಪಾತ್ರದಲ್ಲಿ
ಉರುಳಿಸಿ ಕೊಳೆತ ಕೊಂಬೆ ಕೊಂಬೆ ಧರೆಗೆ
ಮತ್ತೆ ಹೊಸ ಬಿ ಳಲು ಬಿಟ್ಟಿರಿ ಉಳಿಸಿರಿ
ಭಾರತದ ಹಸಿರು ಆಲದ ಮರ ವಿಶ್ವಶಾಂತಿ