Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುಗುಳುನಗೆ

ಅವಳ ಮುಗುಳುನಗೆ
ಒಂಟಿತನದ ಮಡಿಲಿನಲ್ಲಿ
ಮಲಗುವುದು ಮಗುವಾಗಿ
ಅವಳು ಮುಗುಳುನಗೆ
ಅವನ ಬದುಕಿನ ಗೋರಿ ಮೇಲೆ
ಅರಳಿರುವ ಹೂವು
ಅವಳ ಮುಗುಳುನಗೆ
ನೆನಪಿನಲ್ಲಿ ಬರೋ ಕಣ್ಣ ಹನಿಗಳಿಗೆ
ಅವಳ ಕೈ ಬೆರೆಳು ಮುಗುಳುನಗೆ
ಒಟ್ಟಾರೆ ಅವನ ಬದುಕಿಗೊಂದು ಕಾರಣ ಅವಳ ಮುಗುಳುನಗೆ
ಅವಳೇ ಮುಗುಳು ನಗೆ ಹುಡುಗಿ
ಸುಮ್ನೆ ಕವನ ಅಷ್ಟೇ ಹುಡುಗಿ ಇದು

- Nagesh M

25 Nov 2017, 09:41 am

ಪರಿಮಳ

ಎಲ್ಲಿಂದಲೋ ಬಂದ ತಂಪಾದ ಗಾಳಿ ಮಲ್ಲಿಗೆಯ
ಪರಿಮಳವ ತಂದು ಚೆಲ್ಲಿತು ಒಂಟಿಯಾಗಿ
ಅಲೆದಾಡದೆ ಜಂಟಿ ಹೂಗಳ ಜೊತೆಗೂಡಿ
ಬಾಳೆಂದು ಹಾರೈಸಿದೆ ಗಿಡದಲ್ಲಿ ಜೀವವಿರುವರೆಗೂ.

ನನ್ನ ಗೋಳು ಕೇಳದೇನೆ ಮಲ್ಲಿಗೆ
ಕಣ್ಮರೆಯಾಯಿತು ಸುಗಂಧ
ಕಳೆದು ಹೋಗುವಷ್ಟರಲ್ಲಿ ಬಾಡಿ ಹೋಯಿತು.

ಗಿಡದಲ್ಲಿನ ಸಿರಿಮಲ್ಲಿಗೆಯು ಮೊಗ್ಗಾಗಿ ಜನಿಸಿ
ಹೂವಾಗಿ ಬೆಳೆದು ಮಂದಹಾಸದಿ ಅರಳಿತು
ಸಂಗಡಿಗರೊಡನೆ ಬಣ್ಣ ಕಳೆದು ಕೊಂಡರು ಸುವಾಸನೆ ಬಿರದಿದ್ದರು ಬದುಕಿರುವ
ಕೊನೆಯವರೆಗೂ ಜೊತೆಗೂಡಿ ಬಾಳಿತು
ತೃಪ್ತಿಯಿಂದ ಕೊನೆಯುಸಿರೆಳೆಯಿತು
ಜೀವನದ ಸ್ವಾಧ ಸವಿದು.

- ಚುಕ್ಕಿ

25 Nov 2017, 08:36 am

ವಿಚಾರದಾರೆ

ನಡೆವ ,ನುಡಿವ ದಾರಿಯಲ್ಲಿ
ಕಷ್ಟ ಇರಲಿ ನಿತ್ಯ ನೂರು
ಒಳಿತೆ ಜೀವನದ ಚೈತನ್ಯವಾಗಿ
ಬೆಳಕು ಬಾಳ ಬೆಳಗಲಿ

ಅಂತರಂಗದಂತರವನು
ಸರಿಸಿ ಒಂದುಗೂಡಲಿ
ಮನುಜ ಕುಲದ ಏಳ್ಗೆಯೊಂದೇ
ಧ್ಯೇಯ ಘೋಷಣೆಯಾಗಲಿ

ಎದೆಯ ಬಲವ ಮೆರೆಸುವಲ್ಲಿ
ಧೈರ್ಯ ಶಕ್ತಿ ಹೆಚ್ಚಲಿ
ಭಕ್ತಿ ಭಾವ ಕರುಣೆಯಿಂದ
ವಿಚಾರಧಾರೆ ಹರಿಯಲಿ

- ನಾಗರಾಜ್

25 Nov 2017, 07:47 am

ಮುಂಜಾನೆಯ ತೇರು....

ಕತ್ತಲು ಸರಿಸಿ ಬೆಳಕಿನೆಡೆಗೆ
ಸಾಗುತಿದೆ ಈ ಮುಂಜಾನೆಯ ತೇರು
ಸಾಲು ಸಾಲು ಬರುತಿದೆ ಇಬ್ಬನಿಯ ಬಳಗ
ಮುದ್ದು ಮನಸುಗಳು ಎದ್ದು ಬರಲಿ
ಸಡಗರವ ತರಲಿ.....
ನಗುಮುಖದ ಅಂಗಡಿಗಳೆ ತುಂಬಿರಲಿ
ಈ ಜಾತ್ರೆಯಲ್ಲಿ .....
ಸಡಗರವೆ ತುಂಬಿದೆ ಈ ತೇರಲ್ಲಿ
ಹಸಿರೆಲೆಯ ತೋರಣವು ಹೋಳೆಯುತಿದೆ
ಈ ಅಂಗಳದಲ್ಲಿ
ಬನ್ನಿ ಎಲ್ಲರು ಸಂತಸದಿ ಎಳೆಯೋಣ
ಈ ಮುಂಜಾನೆಯ ತೇರನ್ನ......

- ರಾಗಸಿರಿ....

25 Nov 2017, 07:42 am

ವಿಚಾರದಾರೆ

ನಡೆವ ,ನುಡಿವ ದಾರಿಯಲ್ಲಿ
ಕಷ್ಟ ಇರಲಿ ನಿತ್ಯ ನೂರು
ಒಳಿತೆ ಜೀವನದ ಚೈತನ್ಯವಾಗಿ
ಬೆಳಕು ಬಾಳ ಬೆಳಗಲಿ

ಅಂತರಂಗದಂತರವನು
ಸರಿಸಿ ಒಂದುಗೂಡಲಿ
ಮನುಜ ಕುಲದ ಏಳ್ಗೆಯೊಂದೇ
ಧ್ಯೇಯ ಘೋಷಣೆಯಾಗಲಿ

ಎದೆಯ ಬಲವ ಮೆರೆಸುವಲ್ಲಿ
ಧೈರ್ಯ ಶಕ್ತಿ ಹೆಚ್ಚಲಿ
ಭಕ್ತಿ ಭಾವ ಕರುಣೆಯಿಂದ
ವಿಚಾರಧಾರೆ ಹರಿಯಲಿ

- ನಾಗರಾಜ್

24 Nov 2017, 09:04 pm

ಒಂದು ದಿನ

ಒಂದು ದಿನ
ನನ್ನ ಮನ
ಕಾಡುತ್ತಿತ್ತು ಕ್ಷಣ ಕ್ಷಣ
ಅಂದಿನಿಂದ ಹಿಂಬಾಲಿಸಿದೆ ನಿನ್ನ
ಆದರೂ ನೀ ಸಿಗಲಿಲ್ಲ ಒಂದೂ ದಿನ
ಅಂದೇ ತೀರ್ಮಾನಿಸಿದೇ ಅದೇ ನನ್ನ ಮರಣ.....!

- ಶಿವು ಬಿ ಎಸ್

24 Nov 2017, 08:05 pm

ದಾಹ

ಚಂದಿರನ ನೋಡಿ ತಣಿಯಿತು ಕಣ್ಣಿನ ದಾಹ
ಮಲ್ಲಿಗೆಯ ಸುವಾಸನೆಯು ತಣಿಸಿತು ನಾಸಿಕದ ದಾಹ
ಕಾವೇರಿಯ ಹನಿಗಳು ನೀಗಿಸಲು ಬಾಯಾರಿಕೆ
ನಿನ್ನ ತಬ್ಬಿ ನಸುನಕ್ಕಾಗ ತಣಿಯಿತು ಈ ಹೃದಯದ ದಾಹ

- ಕನ್ನಡ ನಾಡು ಚಿನ್ನದ ಬೀಡು

24 Nov 2017, 07:41 pm

ಎಲ್ಲಿರುವೆ ನೀನೆಲ್ಲಿರುವೆ.....?

ಹೇ ತಾಯೆ .......
ಹೆ ದೇವನೆ.......
ಹೆ ಭಗವಾನ್......
ಎಲ್ಲಿಹೆ ನೀ ನುಡಿ ಮೆಲ್ಲನೆ !

ಕಾಲುಹಾದಿಯಲ್ಲಿ
ಕಾಲಿಗೆ ಅಡ್ಡಿ ಒಡ್ಡಿದ
ಕಲ್ಲನೊಯ್ದು ಇಲ್ಲಿ
ಮೂರ್ತಿ ಮಾಡಿದ
ಶಿಲ್ಪಿಯಲ್ಲಿ ನೀನಿರುವೆಯ!

ನಿರಾಶ್ರಿತರಾದ ನಿಮಗೆ
ಆಶ್ರಯ ನೀಡಲೋಸುಗ
ಹಗಲು- ಇರುಳು ದುಡಿದು
ಮಂದಿರದ ನಿಮ್ರಾತೃಗಳಾದ
ಕೂಲಿಕಾರರ ಮನದಲ್ಲಿ ನೆಲೆಸಿರುವೆಯ!

ಮಂತ್ರಗಳ ಮಳೆಗರೆಯುತ್ತ
ಘಂಟೆಯ ಗರ್ಜನೆ ಮಾಡುತ್ತ
ದೀಪದಿ ಲೋಕಬೆಳಗುವೆನೆನುತ್ತ
ಅಜ್ಞಾನ ಕೂಪಕ್ಕೆ ಭಕ್ತರ ತಳ್ಳುತ್ತ
ಉದರ ಹೊರೆಯುತಿಹ ಹಾರವರಲ್ಲಿರುವೆಯ!

ಅರಿಷಡ್ ವರ್ಗಗಳ ತವರಾಗಿ
ಸನ್ಯಾಸಿಗಳ ನಾಯಕರಾಗಿ
ಕಪಟತನದಲಿ ಕಾವಿಯ ವೇಷಧಾರಿಗಳಾಗಿ
ಸೋಗಿನ ವಿದ್ವಾಂಸಕರಾಗಿ
ಮೆರೆವ ಮಾಯಾವಂತರಲ್ಲಿ ನೀನಿರುವೆಯ!

ಸಂಪ್ರದಾಯಗಳ ಶಿರದಲ್ಲಿ ಹೊತ್ತು
ಮಾನವೀಯತೆಯ ಮಣ್ಣಲ್ಲಿ ಹೂತು
ವಿಧ- ವಿಧದ ಉಡುಗೊರೆಗಳನಿತ್ತು
ಬಹು ವಿಧಗಳ ವ್ರತಗಳ ಮಾಡುತ್ತ‍
ಗುಡಿ- ಗೋಪುರಗಳ ಸುತ್ತುವ ಭಕ್ತರಲ್ಲಿರುವೆಯ!

ಎಲ್ಲಿರುವೆ ನೀ.......
ಕಾಣದ ಕಡಲಾಳದಲ್ಲವಿತಿರುವೆಯ
ತಂಪು ಸೂಸುವ ತಂಗಾಳಿಯಲ್ಲಿರುವೆಯ
ಎಲ್ಲೆ ಮೀರಿ ಹಾರುವ ಬಾನಾಡಿಯಲ್ಲಿರುವೆಯ
ಎಲ್ಲಿರುವೆ ನೀ........?
ನುಡಿ ಬಾ ಮೆಲ್ಲನೆ........!




ಶಾರಧ

- ಶಕುಂತಲಾ

24 Nov 2017, 05:00 pm

ಕವಿ ಕವಿತೆ

ವಣಿ೯ಸಲಾಗದು ಕವಿ ಕವಿತೆಯ ಸಂಭಂದ|
ಕವಿ ಕವಿತೆಯ ಭಾವನೆಯ ಅನುಭಂದ
ಕವಿಗೆ,ಕವಿತೆಯೇ ಜೀವ...
ಕವಿತೆಗೆ,ಕವಿ ನೀಡುವ ಭಾವ....

ಎಂಥಾ..,ನೋವಿನಲೂ ಕವಿ ರಚಿಸುವ
ಕವಿತೆ
|
ಕವಿಗೆ ಕವಿತೆ,ಸಂತೋಷವ ನೀಡುವ ದೇವತೆ...|
ವಸಂತ ಕಾಲವ ಕಾಯುವ ಕೋಗಿಲೆಯಂತೆ,
ಕವಿಯ ಮನಸ್ಸನು ಕಾಡುವುದು ಕವಿತೆ
|
ತನಗೆ ತನ್ನದೆ ಆದ ರೂಪ ನಿಡುವಂತೆ
.....|

ಕವಿತೆಯಲಿ,ಕವಿ ಕಾಣುವ...
ಸೌಂಧಯ೯ದ ಮಮ೯ವ
,
ಪ್ರಕೃತಿಯ ತಕ೯ವ
,
ವಿಕೃತಿಯ ನಾಕವ
,
ಪ್ರೀತಿಯ ಲೋಕವ...

ಏಕೆಂದರೇ,ಕವಿತೆ ಕವಿಯ ಕೈಗನ್ನಡಿಯಂತೆ,
ಕವಿಯ ಮನಸ್ಸಿನ ಬಿಂಬದಂತೆ
....
ಕವಿಯ ಕನಸ್ಸಿನ ಕೂಸಂತೆ,
ಕವಿಗೆ ಕವಿತೆಯೇ,ಅಮೃತದ ಸುಧೇಯಂತೆ,
ಬಿಗಿದಪ್ಪಿ ಸಂತೈಸುವ ತಾಯೀಯಂತೆ...

- Bhagya Girish

24 Nov 2017, 04:09 pm

ತಿರುಗಿ ನೋಡಿಬಿಡು

ಜಾತ್ರೆಯಲಿ ನಿನ್ನ ಕಂಡೆ
ನಿನ್ನ ಮುದ್ದು ಮುಖವ ನೋಡಿ
ನನ್ನ ಮನಸು ನಿನ್ನ ಕೂಗಿ ಕರೆಯಿತು
ನೀ ಏಕೆ ತಿರುಗಿ ನೋಡಲಿಲ್ಲ........

ಜನ ಜಂಗುಳಿಯಲ್ಲಿ ನನ್ನ ಕಣ್ಣು
ನಿನ್ನನ್ನೆ ಹುಡುಕಿ ಹುಡುಕಿ ಸನ್ನೆ
ಮಾಡಿ ಕರೆದರು ನನ್ನ ಕಣ್ಣ ನೋಟ ಅರ್ಥ
ವಾಗದೆ ನೀ ಎಕೆ ತಿರುಗಿ ನೋಡಲೆ ಇಲ್ಲ.....

ನಿನ್ನ ಅಂಗಡಿಯ ಬಳಿ ಬಂದು
ನಿನ್ನನ್ನೆ ನೋಡುತ ಮನಸು ಕೂಗಿ ಕೂಗಿ ಕರೆದರು
ನೀ ಎಕೆ ತಿರುಗಿ ನೋಡಲಿಲ್ಲ.......

ನಿನ್ನ ಮನೆಯ ಅಂಗಳದಲ್ಲಿ ನಿಂತು
ಎಲ್ಲರ ಕಣ್ತಪ್ಪಿಸಿ ನನ್ನ ಮನಸು ಕೂಗಿದರು
ನೀ ಎಕೆ ತಿರುಗಿ ನೋಡಲಿಲ್ಲ‌......

ನೀ ಹೋಗುವ ದಾರಿಯಲ್ಲಿ ಕಾದು ಕುಳಿತು
ನಿನ್ನನ್ನೆ ಎದುರು ನೋಡುತ್ತ ನಿನ್ನನ್ನೆ ಕರೆಯುತಿದೆ
ಈ ಮನಸು ನೀ ಎಕೆ ಬರುತ್ತಿಲ್ಲ.....

ತಿರುಗಿ ನೋಡಿಬಿಡು ಒಮ್ಮೆ
ಕಾಯಿಸಬೆಡ ಈ ಮನಸ್ಸ........

- ರಾಗಸಿರಿ....

24 Nov 2017, 04:09 pm