ಹಕ್ಕಿಗಳೆಲ್ಲ ಜಿಲಿಪಿಲಿ ಸದ್ದು
ಮಾಡುತ್ತ ಕಾಳು ಕಡಿಗಾಗಿ
ಗೂಡು ಬಿಟ್ಟು ಹೋರಟಾಯ್ತು.........
ಗಿಡಮರಗಳೆಲ್ಲ ನಮಗಾಗಿ
ಮುಂಜಾನೆಯೆ ಎಂದ್ದು ತಂಪಾದ
ಗಾಳಿ ಬಿಸಲು ಎದ್ದು ಸದ್ದು ಮಾಡಲು
ಬಂದಯ್ತು.........
ದೇವತೆಗಳೆಲ್ಲ ಮನೆಯ ಮುಂದೆ ರಂಗೋಲಿ
ನೋಡಿ ಬಂದು ಬಾಗಿಲಲ್ಲಿ ನಿಂತಿಹರು
ಎದ್ದು ಸ್ವಾಗತಿಸಿ ಅವರನ್ನೆಲ್ಲ
ಬಂದು ಮನೆಬಾಗಿಲಲ್ಲಿ ನಿಂತಾಯ್ತು.......
......ಶುಭೋದಯದ ಸವಿ ನುಡಿಗಳು.........
ನನ್ನ ಮನದ ಬಂಗಾರಿ ನೀನೆ
````````````````````````````````````
ನನ್ನ ಹ್ರುದಯ ಗೆದ್ದ ಮದನಾರಿ.
ನಾನೆ ನಿನ್ನ ಪ್ರೇಮ ಪೂಜಾರಿ.
ನಿನ್ನ ಕನಸ್ಸುಗಳಿಗೆ ನಾನೆ ರುವಾರಿ.
ನಿನಗಾಗಿ ತಂದಿರುವೆ ನಾನೆ ನಿರ್ಮಿಸಿದ
ಅಂಬಾರಿ .
ನಾವಿಬ್ಬರು ಸೇರಿ ಹೊಗೋಣ. ಪ್ರಣಯ ಪಕ್ಷಿಗಳಂತೆ ಹಾರಿ
ನಾವಿಬ್ಬರು ಸೇರಿ.ಉಯ್ಯಾಲೆ ಅಡೋಣವೇ ಕಾಮನ ಬಿಲ್ಲನ್ನು ಏರಿ.
ಇ ಜಗಕೆ ಪ್ರೀತಿ ಎಂಬ ಬೆಳಕ ಚೆಲ್ಲೊಣ ಚಂದಿರನನ್ನು ಮೀರಿ.
ಮುದ್ದು ಮನಸ್ಸಿನ ಪ್ರಿಯ ಹುಡುಗಿ
ಕದ್ದು ನೊಡುವ ನಿನಗಾಗಿ, ಎದ್ದು ಬಿದ್ದು
ಬರುವೆ ದಿನವೂ ನಿನ್ನ ಮನೆಯ ಅಂಗಳಕೆ
ಅಂಗಳಕೆ ಬಿಡುವ ರಂಗೋಲಿ ನನ್ನೆದೆಗೆ ಬಿಡು ನೀನೊಮ್ಮೆ ಅಳಿಸದೆ ಉಳಿಸವೆ
ನನ್ನುಸಿರಿರುವವರೆಗೂ ನನ್ನೊಲವಿನ ಆಣೆ
ಈ ಕಣ್ಣಲಿ ನಿನ್ನದೇ ಛಾಯೆ
ಈ ಮನಸಿಗೂ ಮಾಡಿದೆ ನೀ ಏನೂ ಮಾಯೆ
ಅರಿವಿಲ್ಲದೆ ಶುರುವಾಗಿದೆ ನನಗೂ ಒಲವು
ತೋರೆ ನೀ ಕಿರು ಬೆರಳನು
ಹಿಡಿಯುವೆ ನಾ ಪ್ರತಿ ಜನ್ಮಕೂ
ಶುರುವಾಗಿದೆ ಒಲವ ಜ್ವರ
ಯಾವುದೇ ಸೂಚನೆ ಕೊಡದೆನೆ
ಸರಿ ಹೋಗಬಹುದು ನೋಡು
ಸನಿಹ ನೀ ಬಂದರೆ ಮುತ್ತಿನ ಔಷಧಿ ಕೊಟ್ಟರೆ
ಓ ಮುಗಿಲೆ ನೀನೆಕೆ ಹೋದೆ
ಅಷ್ಟು ದೂರ ಕೈಗೆಟುಕದ ಹಾಗೆ
ನಿನ್ನ ಅಲ್ಲಿ ಇಟ್ಟವರಾದರು ಯಾರು
ನನಗು ಹೇಳುವೆಯ....
ಓ ಕಾಣದ ಕಡಲೆ ನಿಹೇಗೆ
ಬಂದೆ ಇಲ್ಲಿಗೆ ಎಲ್ಲಿಂದ ಬಂದೆ
ನಿನ್ನ ಸಾಗರ ಮಾಡಿದವರು ಯಾರು
ನನಗು ಹೇಳುವೆಯ........
ಓ ಹಿಮಗಳ ರಾಣಿಯೆ
ನೀನೆಷ್ಟು ಸುಂದರ ನೀ
ಯಾರ ಮಗಳೆ ಎಲ್ಲಿಂದೆ ಬಂದೆ
ನನಗು ಹೆಳುವೆಯ......
ಓ ಹಸಿರಿನ ತವರೆ ನೀ
ಹೇಗೆ ಇಷ್ಟು ಹಬ್ಬಿನಿಂತಿರುವೆ
ನಿನ್ನ ಇಲ್ಲಿ ಕಳಿಸಿದವರಾದರು ಯಾರು
ನನಗು ಹೇಳುವೆಯ......
ಓ ಸುಂದರ ನದಿಗಳೆ
ಎಲ್ಲಿಂದ ಹರಿದು ಬಂದಿರೆ ಭೂಮಿಗೆ
ನಿಮ್ಮನ್ನು ಇಲ್ಲಿಗೆ ಕರೆದವರಾದರು ಯಾರು
ನನಗು ಹೇಳುವಿರ......
ಯಾರಿಗು ತಿಳಿಯದೆ ಯಾವಾಗ
ಹುಟ್ಟಿರಿ ಎಲ್ಲಿಂದ ಬಂದಿರೆ ಎಲ್ಲ
ನನಗು ಹೇಳುವಿರೆನೆ ಸ್ವಲ್ಪ....