Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬದುಕುವಾಸೆ

ನನಗೂ ಬದುಕುವಾಸೆ
ಏಕೆ ತಡೆಯುವೆ ಮನಸೆ
ನೀ ಏತಕೊ ನೊಂದು ನರಳುವೆ
ಅದರಲಿ ನನ್ನನೂ ಏಕೆ ಸಾಯಿಸುವೆ

ನೀನು ಕೂಡಿಟ್ಟ ಭಾವಗಳ‌ ನೋವುಗಳಿಗೆ
ನನಗೇಕೆ ತರುವೆ ಸಂಕಟದ ವಿಷ ಗಳಿಗೆ
ನಿನ್ನ ನೋವುಗಳಿಗೆ ಆಗಬೇಕು ನೀನೆ ಹೊಣೆ
ಆದರೆ ನನಗೇಕೆ ಕೊಡುತಿರುವೆ ಇಂತ ಶಿಕ್ಷೆಯ ನಾಕಾಣೆ

ಅರಿಯದೆ ನಂಬಿ ನೀನು ಬಿದ್ದ ಕನಸು ಭಾವಗಳ ಬಾವಿಗೆ
ಎದ್ದುಬರಲಾಗದೆ ಶರಣಾಗಬೇಕೆ ಈ ದೇಹ ಸಾವಿಗೆ
ಕಣ್ಣಲ್ಲಿ‌ ಜಾರಿದರು ಕಣ್ಣೀರ ಕಡಲು ಯಾರಿಲ್ಲ ನೋಡಲು
ಕಾಲಿಯಿದ್ದರೂ ಒಡಲು ಬೇಕೆನಿವುದಿಲ್ಲ ಏನು ಉಣ್ಣಲು

ಸಾವಲ್ಲಾದರು ಸಿಗಬಹುದೆ ನೆಮ್ಮದಿಯ ನಿಟ್ಟುಸಿರು
ಹೇಗಿರುವುದೋ ಏನೋ ಕಾಣದ ಆ ಸಾವಿನೂರು‌
ತಿಳಿಸಿ ಹೇಳಲು ಹೋದವರು ಹಿಂದಿರುಗಿ ಬಂದಿಲ್ಲ ಯಾರು
ಹೋಗಿ ನೋಡಿ ಬರಲೇ ಒಮ್ಮೆ ಹೇಗಿರಬಹುದು ಆ ಊರು

- ಶ್ರೀಕಾವ್ಯ

26 Nov 2017, 09:47 am

ಅಭಿಯಾನದ ದಾರಿ...

ಪರಿಣಿತಿಯು ಶರಣಾಗಿ
ಉಸಿರಾಟ ಬಿಗಿಯಾಗಿ
ನೆರಳಿರದ ನೆಲೆಯಾಗಿ
ವಿಧಿಯಾಟ ಶುರುವಾಗಿ,
ಮನಮೋಹಕವಾಗುವ, ಹೊಸ ರೋಚಕ ನೀಡುವ,
ಅಭಿಯಾನಕೆ ದಾರಿ ನೀ ತೋರಿದೆ ಇಂದು...

- Spb...@#

26 Nov 2017, 09:38 am

ಕಾಲ

ಹೇಳಬೇಕಾದವರಿಗೆ
ಹೇಳಬೇಕಾದದ್ದು
ಹೇಳೋದಕ್ಕೆ ತುಂಬಾ
ಇದೆ ಮನದಲ್ಲಿ

ಕಾಲ ಕೂಡಿ
ಬರಬೇಕಷ್ಟೇ

ಧೃಡ ವಿಶ್ವಾಸವಿದೆ
ಬಂದೇ ಬರುತ್ತದೆ
ಆ ಕಾಲ ಮತ್ತೊಮ್ಮೆ
ನನಗಾಗಿ,

ಕೇಳಿಸಿಕೊಳ್ಳುವ
ತಾಳ್ಮೆಯುಳ್ಳ
ಮನಸ್ಸುಗಳಿಗಾಗಿ...

- ಅಲ್ತಾಫ್ ಬಿಳಗುಳ

26 Nov 2017, 12:18 am

ಪ್ರೀತಿ

ಪ್ರೀತಿ ಇಲ್ಲದ ಮೇಲೆ
ಹೂವು ಅರಳಿದರೇನು?
ತಾರೆಗಳು ಮಿನುಗಿದರೇನು?
ಗಾಳಿ ಕಂಪು ಸೂಸಿದರೇನು?
ಎಲ್ಲವೂ ಸಂತೆಯಲ್ಲಿನ ಪಿಸುಮಾತಂತೆ
ಬರಡು ಭೂಮಿಯಂತೆ

- ಮಹೇಶ್ ಗೌಡ

25 Nov 2017, 08:58 pm

ಗೆಳತಿ

ಗೆಳತಿ ....
ನಿನ್ನ ನೆನಪಿನಲ್ಲಿ ಒದ್ದಾಡುತ್ತಿರುವೆನು ನಾನಿಲ್ಲಿ
ಒಂದು ಸಾರಿ ಬಳಿಬಂದು
ಎದುರು ನಿಲ್ಲಬೇಕಿದೆ ನೀನಿಂದು
ಬರೆದಿರುವ ಸುಂದರ ಕವಿತೆಗಳಿಗೆ
ಜೀವ ತುಂಬಬೇಕಿದೆ ನೀನಿಂದು
ಹೇಳದೆ ಕೇಳದೇ ಹೃದಯದಲ್ಲಿ
ಅವಿತು ಕುಳಿತಿರುವೆಯಲ್ಲ
ಒಮ್ಮೆಯಾದರೂ ತಿರುಗಿ ಬಂದುಬಿಡು
ಬೊಗಸೆಯಷ್ಟು ಪ್ರೀತಿಯನ್ನಾದರೂ ನೀಡಿಹೋಗು
ಆ ನಿನ್ನ ಪ್ರೀತಿಯಲ್ಲಿ
ಕಾಲ ಕಳೆಯುವೆನು ಗೆಳತಿ.....

- ಪ್ರಿಯಾಂಕ

25 Nov 2017, 07:28 pm

ಓ ನನ್ನ ಮನಸೇ

ಓ ನನ್ನ ಮನಸೇ
ನೀನಾಗು ಬಾ
ನನ್ನ ಕನಸ ನನಸುಗಾರ


ಒಮ್ಮೆ ಮಡಿದುಹುಟ್ಟಿ ಬಾ
ಹಳೆಯ ಕೊಳೆಯ ಬಿಟ್ಟು ಬಾ
ಹೊಸ ಛಲವ ತೊಟ್ಟು ಬಾ
ಅವತಾರ ಪುರುಷನ ಕುಡಿಯಾಗಿ ಬಾ


ಭೂತ ಭವಿಷ್ಯಗಳ ಕಟ್ಟಿ ಹಾಕಿ
ಋಣ ಶೇಷಗಳ ಸುಟ್ಟು ಹಾಕಿ
ಪಂಚ ಭೂತಗಳ ಬಲವಾಗಿ
ದೇವನ ಚರಣ ಕಮಲಗಳ ಧೂಳಿಂದ ಎದ್ದು ಬಾ


ಭವದ ಬೆನ್ನ ಹರಿದು
ಇಹದ ಮೋಹವ ತೊರೆದು
ತಾಳ್ಮೆಯ ಶಿಖರವಾಗಿ
ನಿನ್ನಾತ್ಮನ, ಪರಮಾತ್ಮನ ಶಿರದಿಂದ ಇಳಿದು ಬಾ


ಚೇತನಗಳ ಪರಮಚೇತನವಾಗಿ
ಸಂಕೋಲೆಗಳ ಕೀಲಿಯಾಗಿ
ಬುದ್ಧಿಯ, ಪ್ರಬುದ್ಧ ಸರಧಿಯಾಗಿ
ಮಳೆಯಾಗಿ ಇಳೆಗೆ ಕಳೆಯಾಗಿ ಬಾ

- ನಟರಾಜ ಕೆ

25 Nov 2017, 07:23 pm

ಮುತ್ತು

ಕಡಲ ತೆರೆಯೊಂದು
ದಡಕ್ಕಪ್ಪಳಿಸುವಾಗ
ಕಂಡ ಅಪೂರ್ವ
ಮುತ್ತೊಂದನ್ನು
ನಾ ಹೆಕ್ಕಲು
ಕೈ ಚಾಚಿದಷ್ಟೇ !!

ಮತ್ತೊಂದು ಧೈತ್ಯ
ತೆರೆ ಬಂದು
ಮುತ್ತನ್ನೆಳೆದೊಯ್ಯಿತು !!

ಹೋಗಲಿ ಅದು
ನನ್ನ ದುರಾದೃಷ್ಟ !!

ಚಿಂತಿಸಿ ಫಲವಿಲ್ಲ ...

ಬೇಸರ ಕಳೆಯಲು
ಕಡಲ ಶಿಕಾರಿಗಿಳಿದ
ಎನಗೆ ದಕ್ಕಿದ
ಸಣ್ಣದರೊಂದಿಗೆ ದೊಡ್ಡ
ಮೀನೊಂದ
ಹೊತ್ತು ತಂದೆ..

ಏನಾಶ್ಚರ್ಯ !!!
ನಂಬಲಸಾಧ್ಯ..

ಮೀನಿನ ಹೊಟ್ಟೆಯಲ್ಲಿ
ನಾ ದಡದಲ್ಲಿ ಕಂಡ
ಮುತ್ತು !!!

ಇನ್ಮುಂದೆ ಆ ಮುತ್ತು
ನನ್ನದೇ, ಎಂದಿಗೂ
ಕಳೆದು ಕೊಳ್ಳಲಾರೆ..
ನನ್ನಾಣೆ, ನನಗೆ
ದಕ್ಕಿದ ಮುತ್ತಿನಾಣೆ....

- ಅಲ್ತಾಫ್ ಬಿಳಗುಳ

25 Nov 2017, 03:11 pm

ನೀನು ನಿನಗೆ ಅಥ೯ವಾದಾಗ

ನಾನು ನಿನಗೆ ಅಥ೯ವಾಗಿಲ್ಲವೆಂದರೆ
ತಪ್ಪು ನನ್ನದಲ್ಲ
ಏಕೆಂದರೆ...
ನೀನು ನಿನಗೇ ಅಥ೯ವಾಗಿಲ್ಲ
ನಿನ್ನನ್ನೇ ಅಥೈ೯ಸಿಕೊಳ್ಳದ ನೀ
ನನ್ನ ಹೇಗೆ ಅಥೈ೯ಸಿಕೊಳ್ಳುವೆ???
ಮೊದಲು ನಿನ್ನ ನೀ ಅಥೈ೯ಸಿಕೋ
ಆಗಲಾದರೂ ನಿನಗೆ ನಾನು
ಅಥ೯ವಾದರೂ ಆಗಬಹುದು...

- ಶಂಭು

25 Nov 2017, 10:25 am

ಹೊಸ ಬೆಳಕು

ನಾನಿಲ್ಲವೆಂಬ ಬೇಸರ ಬೇಡ
ಇಂದು ನಾನಿರದಿರಬಹುದು
ನಾಳೆ ಮತ್ತಿನ್ನ್ಯಾರೋ ಬರಬಹುದು
ಕಳೆದುದರ ಬಗೆಗೆ ಚಿಂತಿಸದೊಬೇಡ
ಚಿಂತಿಸುತ...
ನಾಳೆ ಸಿಗುವುದ ಕಳೆದುಕೊಳ್ಳಬೇಡ
ಜೀವನ ಮಾಯೆ ಹೀಗೇನೇ
ಬಯಸುವುದೇನೋ...
ಸಿಗುವುದು ಮತ್ತಿನ್ನೇನೋ...

- ಶಂಭು

25 Nov 2017, 10:16 am

ಹೆಣ್ಣು

ಹೆಣ್ಣು ಒಂದು ಪ್ರಜ್ವಲಿಸುವ ಸೂರ್ಯನಂತೆ
ಅವಳು ತಂಪಾದ ಗಾಳಿಯಂತೆ
ಆಕೆಯ ತ್ಯಾಗ ಜೀವಿ
ಕಾಳಜಿವುಳ್ಳ ವ್ಯಕ್ತಿತ್ವವನ್ನು ಹೊಂದಿದವಳು
ಅವಳ ಮನಸು ನೋಯಿಸಿದರೆ ಅವಳ ಕಣ್ಣಲ್ಲಿ ಕಣ್ಣಿರು ತರಿಸಿದರೆ
ಅವಳ ಶಾಪವೇ ಗಂಡಿನ ಅಂತ್ಯ

- ನೆನಪಿನ ನಾವಿಕ

25 Nov 2017, 10:02 am