Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮೌನ ಕವಿತೆ

ಕಾಗದದ ಮೇಲೆ ಬರೆದೇನು ಮೌನದ ಕವಿತೆ

ಸ್ವರ್ಶ ಇಲ್ಲದ ನೋಟದಿಂದ ಮಾಯವಾದ ನಿನ್ನ ಕಿರುನಗೆಗಾಗಿ
ಬರೆದೇನು ಮೌನದ ಕವಿತೆ

ಜಾರಿ ಹೋದ ಕಣ್ಣ ಹನಿಗಳ
ಮರೆತು ಹೋದ ನೆನಪುಗಳ
ಕೂಡಿಸಿ ಇಟ್ಟು ಬರೆದೇನು ಮೌನದ ಕವಿತೆ

ಪದ ಪುಂಜ ಸಿಗದೇ ಪುಳಕಿನಾಗದೇ
ಬರೆದೇನು ಮೌನದ ಕವಿತೆ

ಆಸೆಗಳು ಮಂಕಾಗಿ
ಕನಸ್ಸುಗಳು ಕಮರಿ
ಉತ್ಸಾಹ ಬರಿದಾದ ಮನದಿಂದ
ಬರೆದೇನು ಮೌನದ ಕವಿತೆ

ಪ್ರೇಮದ ನಿವೇದನೆ
ಮನದ ವೇದನೆ ಸರಿದೂಗಿಸಲಾಗದೇ ಬರೆದೇನು ಮೌನದ ಕವಿತೆ .
ಎ ಜಿ ಶರಣ್

- ಎ ಜಿ ಶರಣ್

01 Dec 2017, 04:42 pm

ನೋವಿನ ಸಾಗರ......

ನೋವಿನ ಸಾಗರದಲ್ಲಿ
ಒದ್ದಾಡುತ್ತಿರುವ ಮನವೆ
ಏಕೆ ಯಾರಿಗಾಗಿ ಕೊರಗುವೆ
ನೀ ಯಾರಿಗಾಗಿ ಈ ಒದ್ದಾಟ
ಯಾರಿಗಾಗಿ ಈ ನೋವು
ಕೇಳುವವರು ಯಾರಿಲ್ಲ
ಕೈ ಹಿಡಿದು ಕಾಪಾಡಿ ದಡ
ಸೆರಿಸುವ ಮನಸು ಯಾರಿಗು ಇಲ್ಲ
ಬರಿ ಸ್ವಾರ್ಥ ತುಂಬಿದವರೆ ಯಲ್ಲ
ತಿಳಿ ನೀರ ದಡವು ನಿನಗೆ ಕಾಣುತ್ತಿಲ್ಲ
ಇಲ್ಲಿ ಬದುಕುವುದಾದರು ಹೇಗೆ ನೀನು
ನಗುವಿನ ಮನೆಯೆ ಕಾಣತ್ತಿಲ್ಲ
ಎತ್ತ ನೋಡಿದರೂ ಬರಿ ನೋವಿನ
ಅಲೆಗಳೆ ಬರುತ್ತಿವೆ ಅವುಗಳ
ಎದುರಿಸಿ ಹೋರಾಡುವ ಬದಲು
ಉಸಿರು ಕಟ್ಟಿ ಒಂದೆ ಸಲ
ಪ್ರಾಣ ಬಿಟ್ಟು ಬಿಡು
ಮನವೆ...........

- ರಾಗಸಿರಿ....

01 Dec 2017, 03:12 pm

ಉಸಿರನ್ನು ಹುಡುಕಿ

ಕಣ್ಮರೆಯಾದ ಉಸಿರನ್ನು
ಹುಡುಕಿ ತರೋಣವೇ ಮನಸನ್ನು
ಕಳುಹಿಸಿ ಈ ಕ್ಷಣ.

ನಗುವ ಪರದೆಯ ಹಿಂದಿರುವ ಚೆಲುವೆಯ
ಕರೆತರೋಣವೇ ಕೊಂಚ ಮಾತಾಡಲು
ಸಂಕೋಚ ತೊರೆದು ನಮ್ಮೊಡನೆ.

ಬಿಗುಮಾನ ಬಿಟ್ಟು ಮನ ಬಿಚ್ಚಿ ಮಾತಾಡು
ಒಲವೇ ಬಹುಮಾನ ಕೊಡುವೆ ನನ್ನಲ್ಲಿನ
ಕಿರುನಗೆ ನಿನಗಾಗಿ ಮೀಸಲಿಟ್ಟು
ಕೊನೆಯುಸಿರವರೆಗೂ.

- ಚುಕ್ಕಿ

01 Dec 2017, 02:51 pm

ಹನಿ

ಕಣ್ಣ ಅಂಚಲಿ ನಿಂತು ಮೆಲ್ಲ ಮೆಲ್ಲನೆ
ಬಿಕ್ಕಿ ಅಳುವೆಯೇತಕೆ ಕಣ್ಣೀರ ಹನಿಯೇ,
ನೀ ಸತ್ತರು ನಿನ್ನ ನೆರಳು ಕೂಡ
ಬೀಳುವುದಿಲ್ಲ ನಿನ್ನ ನೋವಿಗೆ
ಕಾರಣವಾದವರ ಕಣ್ಣಿಗೆ.

- ಚುಕ್ಕಿ

01 Dec 2017, 02:49 pm

ಅವನ ನೆನಪು

ವಿಧೀಗೇಕೆ ಇಂತ ಕೋಪ
ಆರಿಸುತಿರುವ ಒಲವ ಪ್ರೇಮ ‌ದೀಪ
ಅವನ ಸವಿನೆನಪುಗಳ ಸಲ್ಲಾಪ
ಇಂದೆನಗೆ ನೋವುಗಳ ಪ್ರಲಾಪದ ಶಾಪ

ಕಿರುಬೆರಳ ಹಿಡಿದು ನಡೆದ ಹಾದಿ
ತರುತಿದೆ ಎದೆಯೊಳಗೆ ಕೊನೆಯಿರದ ಬೇಗುದಿ
ಜೊತೆಯಾದ ಹೆಜ್ಜೆಗಳು ತುಳಿದ ಸಪ್ತಪದಿ
ಮತ್ತೆ ತಿರುತಿರುಗಿ ನೋಡಿದಂತಾಗಿದೆ ಮರುಕದಿ

ಜಾರಿದ ಮುಂಗುರುಳ ಸೇರುವ ಕೈಯಿಗೆ
ತೆರೆದು ನೋಡುವಾಸೆ ಪ್ರೀತಿಯ ನೆನಪುಗಳ ಮಳಿಗೆ
ಅವನ ಕಣ್ಣ ಕಡಲಲಿ ಕುಣಿದ ತೇಲಿದ ಕಣ್ಣಿಗೆ
ಕಂಬನಿಯ ಸಾಗರ ಜೊತೆಯಾಗಿದೆ ತಿಳಿಯದ ಹಾಗೆ

ಬಾಳ ದಾರಿಯಲಿ ಪ್ರೀತಿಯ ಹೆಜ್ಜೆ ಗುರುತು
ಅಳಿಸಿ ಹೋಗುವುದಂತು ಕನಸಿಗೂ ದೂರದ ಮಾತು
ನೆನಪುಗಳು ಮಾಸಿ ಮಬ್ಬು ಆವರಿಸದ ಹೊರತು
ಬದುಕಬಹುದೆ, ಹೋಗದಿದ್ದರೆ ಕಳೆದ ಕ್ಷಣವೆಲ್ಲ ಮರೆತು

- ಶ್ರೀಕಾವ್ಯ

01 Dec 2017, 01:53 pm

ಓ ಗೆಳೆಯ ನಿನಗಾಗಿ.......

ಈ ಬದುಕು ನಿನಾಗಾಗಿ ಮೀಸಲಿಡುವೆ
ಮುತ್ತಿನಂಗಳದಲ್ಲಿ ಇಟ್ಟು ಜೋಪಾನ
ಮಾಡುವೆಯ ಈ ಬದುಕನ್ನ......

ಈ ಉಸಿರು ನಿನ್ನೋಳಗೆ ಬೆರೆಸಿಡುವೆ
ನಿನ್ನ ಉಸಿರಿರುವ ವರೆಗು ಬೇರೆಯಾಗದಂತೆ
ಕಾಪಾಡಿಕೋಳ್ಳುವೆಯ ಈ ಉಸಿರನ್ನ......

ಈ ಮನಸ್ಸು ನಿನ್ನ ಮನಸಿಗೆ ಸಂಗಾತಿಯಾಗಿ
ಕೋಟ್ಟು ಬಿಡುವೆ ಅಂಬರದರಮನೆಯಲ್ಲಿ ಇಟ್ಟು
ಎಂದು ಮುರಿಯದ ಹಾಗೆ ಉಳಿಸಿ ಕೋಳ್ಳುವೆಯ ಈ ಮನಸ್ಸನ್ನ...........

ಈ ಹೃದಯ ನಿನ್ನೂಳಗೆ ಇಟ್ಟುಬಿಡುವೆ
ನಿನ್ನೆದೆಯ ಬಡಿತದ ಜೊತೆಗೆ ಬೆರೆಸಿಕೋಂಡು
ಎಂದು ನಿಲ್ಲದ ಹಾಗೆ ನೋಡಿಕೋಳ್ಳುವೆಯ
ಈ ಹೃದಯವನ್ನ...........

ಈ ಒಡಲೆ ನಿನಗಾಗಿ ಗೆಳೆಯ
ಎಂದು ದೂರಾಗದ ಹಾಗೆ ಕಾಪಾಡಿಕೋ ಓ ಗೆಳೆಯ.............

- ರಾಗಸಿರಿ....

01 Dec 2017, 01:16 pm

ಈರುಳ್ಳಿ - ಒಲವು

ಒಲವೆಂಬ ಈರುಳ್ಳಿನಾ ಕುಯಿವಾಗ ಕಣ್ಣೀರು
ಕುಯ್ಲಿಗೆ ಬಂದ ಈರುಳ್ಳಿನ ನೆಲದಿಂದಾನೆ ಅಗಿಯೊದು
ಒಲವನ್ನು ಮುಚ್ಚಿ ಇಡದೆ ಹೆಚ್ಚಿ ಮಾಡು
ಅಡುಗೆನಾ
ಬದುಕಲ್ಲಿ ಒಲವೆ ಇರದೆ ರುಚಿಯೆ ಬರದು
ಚಿತ್ರನ್ನಾ
ಕಣೀರು ಕಡಿಮೇಯಾದರು ಪ್ರೀತಿ ಮಾಡೊಣಾ
ಕೈ ಸಾಲಾನು ಮಾಡಿಯಾದರು ಕಣ್ಣಿರ ಸುರಿಸೊಣಾ
ಒಲವೆಂದರೆ ಹಿಂಗೆತಾನೆ ಉಪ್ಪುಕಾರದ ಒಗ್ಗರಣೆ••••••••••

(ನಿಮ್ಮ ಪುಟ್ಟ)

- ಕೌರವ

30 Nov 2017, 10:46 pm

ಅವಳು

ಮಳಲು ಬಂಗಾರ
ಅಳಿಲ ಸಿಂಗಾರ
ನೊಡವಳ ವೈಯಾರ
ತಳಕು ಬಳುಕಲಿ
ಅಳಕು ಭಯವಿಲ್ಲ
ಅಂಜುವಳಲ್ಲ ಅಳುಕುವಳಲ್ಲ
ನಲಿಯುವಳು ದಿನವೇಲ್ಲ

- ಕೌರವ

30 Nov 2017, 10:15 pm

ಬಯಲು ಹೊಂಗನಸಿನಲ್ಲಿ

ಬಯಲು ಹೊಂಗನಸಿನಲ್ಲಿ
ದೀಪ ಆರಿಹುದು ಅಲ್ಲಿ!!
ನಾನು ಒಬ್ಬಂಟಿಯಾಗಿ
ನಿಂತು ಕಾದಿರುವೆನು ಅಲ್ಲಿ!!

ಬದುಕು ಹೀಗೆಯೇ ಎಂಬ
ಮಂತ್ರವು ಮನಸಿನ ತುಂಬ!!
ಇರುಳ ಹೊದಿಕೆಯ ಹೊದ್ದು
ನಿದ್ರಿಸಿತೇ ನನ್ನಯ ಸ್ವತ್ತು!!

ಬಳಲಿ ಬೆಂಡಾದ ಮೇಲೆ
ಬದುಕಿಗೆ ಯಾವ ಬೇಲಿ!!
ಏಕಾಂತದ ತಾಪದ ಒಳಗೆ
ಬಿದ್ದು ಏಳಲು ಇಹುದೇ ದಾರಿ!!

- ಪಿ.ಜಿ.ಜ್ಯೋತಿ

30 Nov 2017, 09:47 pm

ನನ್ನ ಪ್ರೀತಿಯು ನೀ...

ನನಗಾರು ಇಲ್ಲದಿರುವಾಗ,
ಬರೀ ಕಷ್ಟಗಳೇ,ತುಂಬಿರುವಾಗ,
ಭಯದಲ್ಲಿ ನಡುಗುತ್ತೀರುವಾಗ,
ಆಸರೆಯಾದೆ ನೀ ನನಗಾಗ.

ನನ್ನ ಕಣ್ಣೀರ ಓರಸಿ,
ಸಮಾಧಾನ ಪಡಿಸಿ,
ಮಗುವಂತೆ ನನ್ನ ಓಲೖೆಸಿ,
ಸಂತೋಷ ಪಡುವೇ ನೀ, ನನ್ನ ನಗಿಸಿ.

ನಿನ್ನ ನಾ ಏನೇಂದು ಕರೆಯಲಿ...
ಬದುಕಿನ ಹಾದಿಯ ಪಯಣದಲಿ,
ಈ ದೇಹದ ಉಸಿರ ಗತಿಯಲ್ಲಿ,
ಬೆರೆತಿರುವೇ,ನೀ ನನ್ನ ಅಣು ಅಣುವಲ್ಲಿ..
ನಾ ಹೇಗೆ ಏಳಲಿ,ನಿನ್ನಲ್ಲಿ...
ಈಡೀ ಪ್ರಪಂಚವೇ ಕುಳಿತಿದೆ, ನನ್ನ...ಕಣ್ಣೇದುರಲ್ಲಿ.....
ನೀನ್ನ ಪ್ರೀತಿಯ ಬಯಸಿ ಮನದಲ್ಲಿ....

- Bhagya Girish

30 Nov 2017, 09:37 pm