Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅವಳ ನೆನಪು(ಕವನ)

ತಿಳಿದರೂ ತಿಳಿಯಲಾದೆನೂ
ನಿನ್ನ ದೂರವ ಸಹಿಸಲಾರೆನೂ
ಕ್ಷಣವೂ ನೆಪಕೆ ಬಂದು ಹೋಗು
ನಿನ್ನ ಮೊಗವ ತೋರಿ ಹೋಗು||೧||

ನಿನ್ನ ಒಲವೇ ಸ್ಪೂರ್ತಿ ಚಿಲುಮೆ
ಬದುಕು ಬಂಡಿಯ ನಡೆಸಲು
ಹಳೆಯ ಕ್ಷಣಗಳು ಮರಳಿ ಬೇಕು
ಕಳೆದ ದಾರಿಯ ನೆನೆಯಲು||೨||

ಮನವೇ ನೀನು ಏಕೆ ಹೀಗೆ
ಎದುರು ಇದ್ದರು ಇಲ್ಲದ್ಹಂಗೆ
ಕನಸುಗಳಿಗೆ ಜೀವ ತುಂಬು
ಒಲವ ಸುಧೆಯ ಚೆಲ್ಲುವವು||೩||

ಮರಳಿ ಬಾ ಎನ್ನ ಮನವೇ
ದೂರ ಸಾಗದೇ ಎಲ್ಲಿಯೂ
ಕಾಣುತಿರುವೆ ನಿನ್ನ ಕನಸೇ
ನನ್ನ ಬೊಗಸೆ ಕಣ್ಣಲ್ಲಿಯೂ.||೪||

- ಅನಿಲ್ ಕುಲಕರ್ಣಿ

28 Nov 2017, 10:10 am

ಒಲವಿನ ವಿಸ್ಮಯ ಜಗತ್ತು

ಸ್ವಾತಿ ಮಳೆಯ ಹನಿ.....
ಮುತ್ತಾಗುವುದು ಕಪ್ಪೆ ಚಿಪ್ಪಿನಲಿ,
ಬೆಚ್ಚನೆ ಅಪ್ಪುಗೆಯ ಸ್ಪಷ೯ದಲಿ....
ಸಾಗರದಾಳದ ತಡಿಯಲಿ....

ಮೊಗ್ಗೊಂದು ಅರಳಿ,
ಹೂವಾಗುವುದು ಇಲ್ಲಿ....
ಸೂಯ೯ ರಶ್ಮಿ ತಾಗಿ....
ನಸು ನಗೆ ಬೀರುತ ನಿಂತಿದೆ
ಹೂ ತಾ ತಲೆ ಬಾಗಿ.....

ವಿರಹವಿರುವುದು ಪ್ರೀತಿಯಲಿ,
ಮಧುರ ಸ್ಪಷ೯ದ ಮಿಲನದಲಿ....
ಪ್ರೀತಿ ತುಂಬಿದ ಮನದಲಿ,
ಒಂದಾಗಿ ಬದುಕುವ ಜೋತೆಯಲಿ....

ಈ ವಿಸ್ಮಯ ಲೋಕದ ಸೃಷ್ಠಿಯಲಿ.....
ಪ್ರತಿಯೊಂದು ಅಚ್ಚರಿ,ಈ ಲೋಕದಲಿ,
ಪ್ರೀತಿ ಜಾದುವಿನ ಮೋಡಿಯಲಿ,
ಜಗ ನಿಂತಿದೆ ನೋಡುತ ಒಲವಿನಲಿ.....

- Bhagya Girish

27 Nov 2017, 11:33 pm

ನನ್ನೆಜಮಾನ !!

ಚೆಲುವಾಂತ ಚೆನ್ನ ನನ್ನ ಯಜಮಾನ
ಎಷ್ಟು ಹಾಡಿದರೂ ಸಾಲದವನ ಗುಣಗಾನ
ಹೊಗಳಿಕೆಗೆ ಏರುವುದವನ ಬಿಗುಮಾನ,
ಅಪ್ಪಿ ಮುತ್ತು ಕೊಟ್ಟರದುವೆ ಸನ್ಮಾನ !

ನಿನ್ನೊಲುಮೆಯ ಕೊಳದಲ್ಲಿ
ಆಡುತ್ತಿರುವ ಹಂಸ ನಾನು,
ಅರೆ ಗಳಿಗೆಯೂ ನಿನ್ನನಗಲಿ
ಇರಲಾರದ ಕೂಸು ನಾನು.

ತೊರೆಯಲಾರೆ ಚೆಲುವ ನಿನ್ನ
ಅರಿಯಲಾರೆ ನೀನು ನನ್ನ,
ತೋರು ಬೆರಳನಿಡಿದುಕೊಂಡು
ತೋಳ ಬಳಸಿ ನಡೆದುಕೊಂಡು
ಬರುವೆ ನಿನ್ನನೊಡಗೂಡಿ
ನಿನ್ನೆದೆಯೆನಗೆ ಗಂಧದ ಗುಡಿ.

ಸೂರ್ಯನೆಲ್ಲಿ ಹೋದರೂನು
ಬರಲೇ ಬೇಕು ಸಂಧ್ಯಾ ನಾನು
ತರಲೆ ಬೇಕು ಪ್ರೀತಿ ಜೇನು
ತರಳೆ ನಾನು ಕಾದಿರುವೆನು.

- ಶ್ರೀಗೋ.

27 Nov 2017, 01:04 pm

ಭಾವ ಬಾಳ್ವೆ

ಜೀವ ಜೀವಗಳ ಬೆಸುಗೆ
ಹೊಸ ಹೊಸ ಭಾವಗಳ ಜೋತೆಗೆ
ಹೋರಟಿದೆ ನೋಡು ಪ್ರೀತಿ ಪ್ರೇಮದ ಒಸಗೆ
ಹೊಸ ಪಲ್ಲವಿಯ ನೂತನ ಬಾಳ್ವೆಗೆ|

ರಂಗು ರಂಗಿನ ಕನಸ್ಸಿಗೆ
ಪ್ರೀತಿ ತುಂಬಿದ ಮನಸ್ಸಿಗೆ
ಮುದ ನೀಡುವ ವಯಸ್ಸಿಗೆ
ಹಾತೋರೆದು ಹೋರಟಿದೆ
ಹೊಸ ರಾಗದ ಅನುಪಲ್ಲವಿಗೆ|

ಸುಖ ದುಃಖಗಳ ಮಿಲನ
ಬಾಳಿನ ನವೀರಾದ ಈ ಪಯಣ
ಸಿಹಿ ಕಹಿಗಳ ಸಮ್ಮಿಲನ
ಬದುಕಿನ ಪಥದ ಈ ಹೊಸ ಯಾನ

ಕಲೆತು ಕೂಡಿದರೇ ಸುಖ
ಮರೆತು ಕಲಹ ಮಾಡಿದರೆ ದುಃಖ
ಇಬ್ಬರು ಹೋರಬೇಕು ಕುಟುಂಬದ
ಪ್ರೀತಿಯ ನೋಗ....
ಆಗ ತಾನೆ ಸಿಗುವುದು ಜೀವನದಲ್ಲಿ
ಹೊಸ ಜಗದ ಸುಖಮಯ ಬಳಗ

- Bhagya Girish

27 Nov 2017, 12:05 pm

ಹುಟ್ಟುವ ಸೂರ್ಯ

ಕಂಡು ಕಾಣದಂತೆ
ಹುಟ್ಟಿ ಮುಳುಗುವ ಸೂರ್ಯನೇ
ನಿನಗೇ ವಂದನೆ....
ಕಂಡು ಅರಿಯದೆ ಇರುವ
ನಿನ್ನ ಛಾಯೆ ಬೆರಗಾಗುವಂತಿದೆ...
ಮತ್ತೆ ಹುಟ್ಟಿ ಬಾ ಕಗ್ಗತ್ತಲು
ಕರಗುವಂತೆ ...
ನೋಡುತ್ತಲೇ ಹೋದೀತು
ಹಗಲು ಇರುಳು ...
ಕಾಲಮೆಯ ಹುರುಳಿ ಹುರುಳಿ...
ಚಂದ್ರನ ಆಕೃತಿ ಬದಲಾದಂತೆ
ಹುಟ್ಟುವುದೇ ಹುಣ್ಣಿಮೆ ಅಮವಾಸ್ಸೆ...
ಆಕಾಶದಲ್ಲಿ ಹೊರಟಿದೆ ಚಿತ್ತಾರದ
ಸೊಗಸು...

- pavan gowda

27 Nov 2017, 06:25 am

ಪತಿಯೇ ನನ್ನುಸಿರು

ನೀ ನಿಲ್ಲದ ಈ ಕ್ಷಣ
ಮನದಲ್ಲೇನೋ ತಲ್ಲಣ
ನೀ ಇರದ ಪ್ರತೀಕ್ಷಣ
ಗುರಿಯಿಲ್ಲದ ಪಯಣ

ಜೋತೆಗಿರೆ ನೀನು
ಸಾಧಿಸುವೆ ನಾನು
ಜಗವನೆ ಗೆಲ್ಲುವೆನು
ಬಳಿಯಿರಲು ನೀನು

ನೀನಿಲ್ಲದೆ ನನಗೇನಿದೆ
ಜೀವನವೇ ಸಾಕಾಗಿದೆ
ಉಸಿರಿರದ ಬದುಕೆಲ್ಲಿದೆ
ನನ್ನುಸಿರಲಿ ನಿನ್ನ ಹೆಸರೇ ಅಚ್ಚಾಗಿದೆ

ಸ್ನೇಹದ ಜೋತೆಯಲಿ
ಪ್ರೀತಿಯ ಒಲವಿದೆ
ಒಲವಿನ ಜೋತೆಯಲಿ
ನಲ್ಮೆಯ ಬದುಕಿದೆ
ನನ್ನ ಪತಿಯ ಮನದಲಿ
ನಂಬಿಕೆಯ ಸೆಲೆಯಿದೆ
ಆ ನಂಬಿಕೆಯ ಸೆಲೆಯಲಿ
ನನ್ನಯ ಉಸಿರಿದೆ....

- Bhagya Girish

26 Nov 2017, 11:07 pm

ಲಾಲಿ ಹಾಡು ಹೇಳಲೇನೆ

ಲಾಲಿ ಹಾಡು ಹೇಳಲೇನು ಗೆಳತಿ
ನಿನ್ನ ನೊಂದ ಕಣ್ಣಿಗೆ..
ಎಲ್ಲ ಮರೆತು ಮಲಗು ಒಡತಿ
ನಾನು ಇರುವೆ ಒಂದಿಗೆ.

ಸ್ನೇಹವೊಂದು ಹೂವಿನಂತೆ
ಕಾಯಬೇಕು ಬಾಡದಂತೆ,
ಪ್ರೀತಿ ನೀರ ಉಣಿಸಬೇಕು,
ಮನದ ಭಾರ ತಣಿಸಬೇಕು,
ಜೊತೆಗೆ ದೂರ ಕ್ರಮಿಸಬೇಕು
ಬದುಕ ಪೂರ ಸವೆಸಬೇಕು,
ಮಲಗು ಮುದ್ದು ಮಲ್ಲಿಗೆ
ನಾ ಹಾಡುತಿರುವೆ ಮೆಲ್ಲಗೆ ||

ಅರಳಿ ನಿಂತ ಹೂವ ಕಂಡು
ಬರಲು ಬಹುದು ದುಂಬಿ ಹಿಂಡು
ಸೋಲದಿರಲಿ ಮನವು ನಿಂದು,
ಆತ್ಮರತಿಯ ನಂಬಿಕೊಂಡು..
ನಾಳೆ ನಮಗೆ ಒಲಿವುದಂತೆ
ಹರುಷ ಹೊನಲು ಹರಿವುದಂತೆ,
ಮಲಗು ಮುದ್ದು ಮಲ್ಲಿಗೆ
ನಾ ಹಾಡುತಿರುವೆ ಮೆಲ್ಲಗೆ ||

- ಶ್ರೀಗೋ.

26 Nov 2017, 07:57 pm

ನಗುತ್ತಿರು ಗೆಳತಿ...

ನಗುತ್ತಿರು ಗೆಳತಿ
ಎಲ್ಲೇ ಇದ್ದರೂ ಹೇಗಿದ್ದರೂ
ನನ್ನೆಲ್ಲಾ ಆಸೆಗಳಿಗೆ ಕಡಿವಾಣ
ಹಾಕುವೆನು ನಿನ್ನೊಂದು ನಗುವಿಗಾಗಿ
ಬೇರೆಯವರ ಖುಷಿಗಾಗಿ
ಪ್ರೀತಿಯನ್ನೇ ಕಳೆದುಕೊಂಡ ತ್ಯಾಗಿ ನೀನು
ದೇವರ ಆಟಕೆ ನಾ ಏನೆಂದು ಹೇಳಲಿ
ನೊಂದು ಕೇಳುತಿರುವೆನು
ಕೋರಿಕೆಯ ಈಡೇರಿಸೆಂದು ದೇವರ ಬಳಿ
ಪ್ರೀತಿಸುವ ಜೀವಗಳನು ಒಂದುಮಾಡು..

- ಪ್ರಿಯಾಂಕ

26 Nov 2017, 06:41 pm

ಉದ್ರೀ ವ್ಯಾಪಾರಾ....

ಬೆಲೆ ಕಟ್ಟುವದೆಲ್ಲ ಸಿಗುವದೆ ಅತೀ ವಿರಳ,
ಇರಬಹುದೇ? ಅದಕೆ ನಾನು ಹೆಸರಿಗಷ್ಟೇ ಪತ್ತಾರ.

ತೊರು ಬೆರಳಿನ ತುದಿಯೆ ಅವಳು ಕುರುವ ಜಾಗ,
ಹೊರಟ ಅವಳನೆ ಕರೆದು ಕಾರಣ ಕೇಳಬಹುದಾ.

ಮುಚ್ಚಿಟ್ಟ ಪುಸ್ತಕದಲಿನ ಅವಿತಿದ್ದ ಪದ ಕದ್ದು ,
ತಂದಿದ್ದರೆ ನಾ ಅವಳನು ಹೊಗಳಬಹುದಿತ್ತಾ.

ಕಿವಿ ಚುಚ್ಚುವನ ಕಣ್ಣಲಿ ಪ್ರಿತಿ ಕಸವಾದದ್ದು ಕಚಿತ,
ರೆಪ್ಪೆ ಮುಚ್ಚೊಗದಂತೆ ಕಣ್ಣಿರಿನ ಕಾವಲಿಡಲಾ?.

ಕತ್ತಲ ಬೆನ್ನಿಗೆ ಬೆಳಕ ಬಳೆವ ಚಂದ್ರನ ಕರೆದು,
ಒಬ್ಬಂಟಿ ತಂತಿಗೆ ಜೊತೆಯಾಗಿ ಮಾಡಬಹುದಾ?.

ಹಗಲೂ ರಾತ್ರಿಗಳೆನದೆ ಜೊರಾಗಿ ನಡೆದಿದೆ ನನ್ನ,
ಹರಿದ ಮುಗಿಲಿನ ಉದ್ರೀ ವ್ಯಾಪಾರಾ.......

ರಚನೆ,,ಸಚಿನ್ ಪತ್ತಾರ..

- Sachin Pattar

26 Nov 2017, 03:32 pm

ಗಳೀರ್ ಅಂದವೋ ಗೆಜ್ಜೆ

ಮೆಲ್ಲ ಮೆಲ್ಲ ನೀನಿಟ್ಟು ಬಂದಾಗ
ಒಂದೊಂದೇ ಮೃದು ಹೆಜ್ಜೆ,
ಗಳೀರ್ ಎಂದವೋ ಚೆಲುವೆ
ನಿನ್ನ ಕಾಲ ಬೆಳ್ಳಿ ಗೆಜ್ಜೆ.

ಬಿಳಿಯ ಹೊದ್ದ ಬೆಳ್ಳಿ ಮೋಡ
ತೊಳೆದು ಕಳಿಸಿದ ಪಾದ ನೋಡ,
ಎಳೆಯ ಹೂವ ಎಸಳ ಪುಳಕ
ಇಳೆಯ ತೊಳೆದ ಇಬ್ಬನಿ ಜಳಕ.

ತೊಳೆದು ಇಟ್ಟ ಶುಂಠಿ ಕೊಂಬು,
ಹೊಳೆವ ಕಾಲ ಬೆರಳ ಇಂಬು.
ಜಗದ ಅಂದವೆಲ್ಲ ಜಾರಿ
ಸೇರಿತೇನೋ ಹೇಗೋ ಸೋರಿ.

ಬಾಳೆ ದಿಂಡಿನಂತ ನುಣುಪು,
ಗಂಧ ತೀಡಿದಂತ ಒನಪು,
ಪಾದರಸದಿ ತೋಯ್ದ ಪಾದ
ಜೊತೆಗೆ ಗೆಜ್ಜೆ ದಿವ್ಯ ನಾದ !

- ಶ್ರೀಗೋ.

26 Nov 2017, 03:21 pm