Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀನೆಂದರೆ...

ನೀನೆಂದರೆ ನನಗೆ
ಮಳೆ ನಿಂತರೂ ತೊಟ್ಟಿಕ್ಕುವ
ಮರದೆಲೆಯ ಪಟಪಟ ನೀರ ಹನಿ,
ಇಂಪಾಗಿ ಅಡರುವುದು ಹೆಣ್ಣೇ
ನಿನ್ನೆದೆಯ ಪ್ರೇಮದ ಮಧುರ ದನಿ.

ಹ್ಯಾಗೆ ಮರೆತೇನೇ ಚೆಲುವಿ..
ನೀನಿತ್ತ ತಾಯಿ ಪ್ರೇಮದ ಕೈ ತುತ್ತ !
ಕೆನ್ನೆಗಿತ್ತ ನಿನ್ನ ಕೆಂದುಟಿಗಳ ಸಿಹಿ ಮುತ್ತ,
ಭುಜಕ್ಕೆ ಒರಗಿ ಕುಳಿತು
ಮಗಳಾಗಿ ನೀ ಕೊಟ್ಟ ಸ್ವಲ್ಪ ಹೊತ್ತ !

ನಮ್ಮ ನಡುವೆ ನಡೆದಾವು
ನೂರಾರು ವಿನಾಕಾರಣದ ಹುಸಿ ಜಗಳ,
ಅದರೂನು ಒಡೆಯಲಾರದು ಎಂದಿಗೂ
ಕೂಡಿರುವ ಎರಡು ಗಟ್ಟಿ ಮನಸುಗಳ.
ತೊರೆದೆಯಾದರೆ ಹುಡುಗಿ ನೀನೆನ್ನ ಸಂಗ,
ಖಾಲಿ ತೊಟ್ಟಿಲಾಗುವುದು ಮನಸು
ಮಗುವು ಇಳಿದು ಹೊರಟು ಹೋದ ಹಾಂಗ!

ಬೇರ್ಪಡಿಸಲಾದೀತೆ ಹೇಳು ಹುಡುಗಿ,
ನೀರಿನಿಂದ ಆಮ್ಲಜನಕ, ಜಲಜನಕ ?
ಅಂತೆಯೇ ಕೂಡಿರುವುದು ನಮ್ಮ ಮನ
ಈ ಜೀವನ ಕಳೆಯುವ ತನಕ !

- ಶ್ರೀಗೋ.

30 Nov 2017, 06:16 am

*೧.ಕಾದಿರುವೆನು ನಿನಗಾಗಿ*

ನಿನ್ನೊಲವಿನ ತುಂಬು ಪ್ರೀತಿಗಾಗಿ ಕಾದಿರುವೆ
ಮತ್ತೊಮ್ಮೆ ಪ್ರೀತಿಸಿಬಿಡು ಇನಿಯ
ಹೃದಯದ ತುಂಬೆಲ್ಲ ನೀನೇ ತುಂಬಿರುವೆ
ಪ್ರೀತಿಯ ಮಳೆಯನು ಸುರಿಸಿಬಿಡು ಇನಿಯ!

ನನ್ನುಸಿರು ತಂಗಾಳಿಯಲಿ ಬೆರೆತು
ನಿನ್ನುಸಿರನು ಹುಡುಕುತಲಿದೆ ಮೌನದಿ
ನನ್ನುಸಿರು ನಿಲ್ಲುವ ಮೊದಲೇ
ಒಂದುಕ್ಷಣ ನನ್ನೆದುರು ಬಂದುಬಿಡು ಇನಿಯ!

ನೀ ತಂದ ಕಾಣಿಕೆಯ ನಾ ಒಡೆದಿರಲು
ಮುನಿಸಿಕೊಂಡು ಜಗಳವಾಡಿ ದೂರಾಗಿರಲು
ಅತ್ತು ಮನಸಲ್ಲುಳಿದ ಆ ಕಹಿನೆನಪುಗಳ
ಆ ಕ್ಷಣಗಳನು ಮರೆತುಬಿಡು ಇನಿಯ!

ಮುಂಜಾನೆ ತಂಪಿನಲಿ,ಹಕ್ಕಿಗಳ ನಾದದಲಿ
ಬೆಳಗುವ ರವಿಯನ್ನೇ ನೋಡುತ್ತ
ನಿನ್ನೆಸರನೆ ಜಪಿಸುವ ಪ್ರಿಯಳ ನೆನೆಯುತ್ತ
ಒಂದೊಳ್ಳೆ ಕವನವ ಗೀಚಿಬಿಡು ಇನಿಯ!

ಪ್ರಿಯಾಂಕ✍

- ಪ್ರಿಯಾಂಕ

29 Nov 2017, 02:57 pm

ರೋಗಿಗಳ ಭಾಗ್ಯಜ್ಯೋತಿ

ಎಲ್ಲೆಲ್ಲೊ ನೋಡಿದರೂ ಇವರದೇ ಕೀತಿ೯
ಸದಾ ಮನದಲ್ಲಿ ತುಂಬಿರುವುದು ಪ್ರೀತಿ
ಎಲ್ಲರಿಗೂ ಮಾದರಿ ಇವರು ಜೀವಿಸುವ ರೀತಿ
ಸರಳತೆಯು ಇವರ ಬಾಳ್ವೆಗೆ ಸ್ಪೂತಿ೯

ರಾತ್ರಿ ಹಗಲೆನ್ನದೇ ರೋಗಿಗಳಿಗೆ
ಆರೖೆಕೆ ಮಾಡುವ ತ್ಯಾಗಮೂತಿ೯ಯೂ
ಸಂಕಷ್ಟ ಪರಿಸ್ಥಿಯಲ್ಲೂ ಆತ್ಮಿಯತೆ ತೋರುವ ಮಮತಾ ಮಯಿಯು
ಅಗಾದವಾದ್ದು ಇವಳು ಸೇವೆ ಸಲ್ಲಿಸುವ ರೀತಿಯು
ಇವರೆಂದು ರೋಗಿಗಳ ಬಾಳಿನ ಭಾಗ್ಯಜ್ಯೋತಿಯು

ಸಹೋದರಿಯಾಗಿ ಕಷ್ಟಗಳಲ್ಲಿ
ಸಹಕರಿಸುವ ಸದ್ಗುಣವಂತಳು
ತಾಯಿಯಾಗಿ ನೋವುಗಳಿಗೆ
ಸ್ಪಂದಿಸುವ ಮಮತೆಯ ನೆಲೆ ಇವಳು
ನಗುವಿನೊಂದಿಗೆ ಎಲ್ಲಾ ರೋಗಿಗಳಿಗೆ
ಔಷದಿ ನೀಡುವ ಅಮೃತದ ಸೆಲೆ ಇವಳು
ಸೇವೆಯಲ್ಲಿ ಸವೊ೯ತ್ತಮಳು
ಇವಳು ದೇವತೆಯಂತೆ ಕಂಗೋಳಿಸುತಹಳು
ದೇವತೆಯೇ ಶೂಶ್ರೂಷಕಿಯಾಗಿ
ಧರೆಗಿಳಿದು ಬಂದಿಹಳು.....

- Bhagya Girish

29 Nov 2017, 12:08 pm

ಆಸೆ

ಆಸೆ ಪದವು
ನೋಡಲದುವೆ ಚಿಕ್ಕದು
ಒಮ್ಮೆಯದರ ಸುಳಿಗೆ ಸಿಲುಕೆ
ಹೊರಗೆ ದಾರಿ ಕಾಣದು

ಹಸಿದ ಜೀವದಲಿ
ಹೊಟ್ಟೆದೊಂದೆ ಚಿಂತೆ
ಉದರ ವ್ಯಥೆ ಕಳೆಯುತಿರೆ
ತಿರುಕನಲೂ ಕನಸಿನಾ ಸಂತೆ

ಚಿಕ್ಕ ಪುಟ್ಟ ಆಸೆಯು
ಬೇಕು ಬಾಳ ನಡೆಸಲು
ಆಸೆ ತಿರುಗಿ ದುರಾಸೆಯಾಗೆ
ನೋವು ಜಗದಿ ಸುರಿವುದು

'ಆಸೆಯೇ ದುಃಖಕ್ಕೆ ಮೂಲ'
ಬುದ್ದನಿತ್ತ ಉಪದೇಶ
ಅರಿತರದುವೆ ಮನುಕುಲ
ಶಾಂತಿಬಾಳ್ವೆಗೆ ಸಂದೇಶ

- ನಾಗರಾಜ್

29 Nov 2017, 10:00 am

ಮಮಕಾರ

ಮಗಳೆಂಬ ಮಮಕಾರ
ಮಡಿಲಿಂದ ಬಹುದೂರ!!
ಪರ ಶಿವನು ನೀಡಿದನೇ
ಇದಕೆಲ್ಲ ಸಹಕಾರ!!

ಯಾರದೋ ಮನೆಯಲ್ಲಿ
ಯಾರದೋ ಅಧಿಕಾರ!!
ನೀಡುವವರು ಯಾರೋ
ಇದಕೆಲ್ಲ ಪರಿಹಾರ!!

ನಾನು ನನ್ನವರನ್ನು
ತೊರೆದು ಬಂದಿಹ ಗಳಿಗೆ!!
ಬೆಸೆದುಕೊಂಡಿತೇ ಬದುಕು
ಹೊಸ ನಂಟಿನ ಜೊತೆಗೆ!!

ನನ್ನವರು ಯಾರಿಲ್ಲ
ಒಂಟಿಯೂ ನಾನಲ್ಲ!!
ಬಾ ಮಗಳೇ ಬಳಿಗೆಂದು
ಕರೆವವರೂ ಯಾರಿಲ್ಲ!!

ಹೊಸತಾದ ಮನೆಗೀಗ
ಅತಿಥಿಯು ನಾನಲ್ಲ!!
ನನ್ನವರು ಎನ್ನುವವರ
ಒಡನಾಟ ನನಗಿಲ್ಲ!!

ಕಣ್ಣ ಅಂಚಿನಲ್ಲಿ ಸಾಲು
ಭಾವನೆಯು ಹೊರಬರಲು!!
ಸೊರಗಿಹುದು ಈ ಮನವು
ತನ್ನವರ ನೆನಪಿನಲ್ಲಿ!!

- ಪಿ.ಜಿ.ಜ್ಯೋತಿ

29 Nov 2017, 08:26 am

ಎಲ್ಲರು ಬಂದಾಯ್ತು

ಬಾನಾಲ್ಲಿ ಎರಿ ಬಂದಾಯ್ತು
ಜಗದ ಅಂದಕಾರವ ಮರೆಮಾಚಿ
ಬೆಳಕ ಕೋಡಲು ಆ ರವಿಯು
ಮುಗಿಲಲ್ಲಿ ಕೂತಾಯ್ತು......

ಹಕ್ಕಿಗಳೆಲ್ಲ ಜಿಲಿಪಿಲಿ ಸದ್ದು
ಮಾಡುತ್ತ ಕಾಳು ಕಡಿಗಾಗಿ
ಗೂಡು ಬಿಟ್ಟು ಹೋರಟಾಯ್ತು.........

ಗಿಡಮರಗಳೆಲ್ಲ ನಮಗಾಗಿ
ಮುಂಜಾನೆಯೆ ಎಂದ್ದು ತಂಪಾದ
ಗಾಳಿ ಬಿಸಲು ಎದ್ದು ಸದ್ದು ಮಾಡಲು
ಬಂದಯ್ತು.........

ದೇವತೆಗಳೆಲ್ಲ ಮನೆಯ ಮುಂದೆ ರಂಗೋಲಿ
ನೋಡಿ ಬಂದು ಬಾಗಿಲಲ್ಲಿ ನಿಂತಿಹರು
ಎದ್ದು ಸ್ವಾಗತಿಸಿ ಅವರನ್ನೆಲ್ಲ
ಬಂದು ಮನೆಬಾಗಿಲಲ್ಲಿ ನಿಂತಾಯ್ತು.......
......ಶುಭೋದಯದ ಸವಿ ನುಡಿಗಳು.........

- ರಾಗಸಿರಿ....

29 Nov 2017, 07:18 am

ಹೆಸರೋಳೆಯದ ಕವಿತೆ

ರೈತನತ್ರ ಮಳೆ-ಬೆಳೆ-ಕಳೆಯ ಚಿಂತೆ..
ರಾಜಕರಣಿಗಳತ್ರ ಓಟು-ನೋಟಿನ ಕಂತೆ..
ಅಧಿಕಾರಿಗಳತ್ರ ದರ್ಪ-ದೌಲತ್ತಿನ ಸಂತೆ
ಪ್ರೇಮಿಗೆ ಒತ್ತು-ಮುತ್ತಿನ ಬ್ರಾಂತಿ ಅಂತೆ...

ಕವಿಗೆ ಪದ-ಪುಂಜದ ಇರಾದೆ..
ಕಾರ್ಮಿಕನಿಗೆ ಮೈ-ಕೈ ನೋವಿನ ಪುರದೆ.
ಹಗಳುಗಳ್ಳನಿಗೀವತ್ತು ಎಲ್ಲಿ-ಇಲ್ಲದ ಮರ್ಯಾದೆ..
ಸೇರುಗು ಬಿಚ್ಚಿವ್ವಳೆ ಇವತ್ತು ರತಿ-ಮತೀಯ ರಾಧೆ...

ಮುದಕನಿಗೆ ಮಕ್ಕಳು-ಮೊಮ್ಮಕ್ಕಳ ಬ್ರಾಂತಿ..
ರೋಗಿಗೆ ಕೆಮ್ಮು-ಧಮ್ಮಿನ ಶೀತದ ವಾಂತಿ..
ಚೆಂದುಳ್ಳಿ ಚೆಲುವೆಗೆ ಮಾಟ-ನೋಟವೇ ಕಾಂತಿ..
ಕೊಲೆಗಡುಕನಿಗೆ ಜಗಳ-ತೆಗಳವೆ ಅವನಿಗೆ ಕ್ರಾಂತಿ..
ಸುಗ್ಗಿ...

- ಆರ್ ಎಸ್ ಸುಗ್ಗಿ.

28 Nov 2017, 08:26 pm

ನನ್ನ ಮನದ ಬಂಗಾರಿ ನೀನು

ನನ್ನ ಮನದ ಬಂಗಾರಿ ನೀನೆ
````````````````````````````````````
ನನ್ನ ಹ್ರುದಯ ಗೆದ್ದ ಮದನಾರಿ.
ನಾನೆ ನಿನ್ನ ಪ್ರೇಮ ಪೂಜಾರಿ.
ನಿನ್ನ ಕನಸ್ಸುಗಳಿಗೆ ನಾನೆ ರುವಾರಿ.
ನಿನಗಾಗಿ ತಂದಿರುವೆ ನಾನೆ ನಿರ್ಮಿಸಿದ
ಅಂಬಾರಿ .
ನಾವಿಬ್ಬರು ಸೇರಿ ಹೊಗೋಣ. ಪ್ರಣಯ ಪಕ್ಷಿಗಳಂತೆ ಹಾರಿ

ನಾವಿಬ್ಬರು ಸೇರಿ.ಉಯ್ಯಾಲೆ ಅಡೋಣವೇ ಕಾಮನ ಬಿಲ್ಲನ್ನು ಏರಿ.
ಇ ಜಗಕೆ ಪ್ರೀತಿ ಎಂಬ ಬೆಳಕ ಚೆಲ್ಲೊಣ ಚಂದಿರನನ್ನು ಮೀರಿ.

- ಸಂತೋಷ್//ಜೀತು

28 Nov 2017, 08:18 pm

""""ಪ್ರಿಯ ಹುಡುಗಿ""""

ಮುದ್ದು ಮನಸ್ಸಿನ ಪ್ರಿಯ ಹುಡುಗಿ
ಕದ್ದು ನೊಡುವ ನಿನಗಾಗಿ, ಎದ್ದು ಬಿದ್ದು
ಬರುವೆ ದಿನವೂ ನಿನ್ನ ಮನೆಯ ಅಂಗಳಕೆ
ಅಂಗಳಕೆ ಬಿಡುವ ರಂಗೋಲಿ ನನ್ನೆದೆಗೆ ಬಿಡು ನೀನೊಮ್ಮೆ ಅಳಿಸದೆ ಉಳಿಸವೆ
ನನ್ನುಸಿರಿರುವವರೆಗೂ ನನ್ನೊಲವಿನ ಆಣೆ

ಈ ಕಣ್ಣಲಿ ನಿನ್ನದೇ ಛಾಯೆ
ಈ ಮನಸಿಗೂ ಮಾಡಿದೆ ನೀ ಏನೂ ಮಾಯೆ
ಅರಿವಿಲ್ಲದೆ ಶುರುವಾಗಿದೆ ನನಗೂ ಒಲವು
ತೋರೆ ನೀ ಕಿರು ಬೆರಳನು
ಹಿಡಿಯುವೆ ನಾ ಪ್ರತಿ ಜನ್ಮಕೂ

ಶುರುವಾಗಿದೆ ಒಲವ ಜ್ವರ
ಯಾವುದೇ ಸೂಚನೆ ಕೊಡದೆನೆ
ಸರಿ ಹೋಗಬಹುದು ನೋಡು
ಸನಿಹ ನೀ ಬಂದರೆ ಮುತ್ತಿನ ಔಷಧಿ ಕೊಟ್ಟರೆ

- uday

28 Nov 2017, 05:01 pm

ಎಲ್ಲಿಂದ ಬಂದವರು........

ಓ ಮುಗಿಲೆ ನೀನೆಕೆ ಹೋದೆ
ಅಷ್ಟು ದೂರ ಕೈಗೆಟುಕದ ಹಾಗೆ
ನಿನ್ನ ಅಲ್ಲಿ ಇಟ್ಟವರಾದರು ಯಾರು
ನನಗು ಹೇಳುವೆಯ....
ಓ ಕಾಣದ ಕಡಲೆ ನಿಹೇಗೆ
ಬಂದೆ ಇಲ್ಲಿಗೆ ಎಲ್ಲಿಂದ ಬಂದೆ
ನಿನ್ನ ಸಾಗರ ಮಾಡಿದವರು ಯಾರು
ನನಗು ಹೇಳುವೆಯ........
ಓ ಹಿಮಗಳ ರಾಣಿಯೆ
ನೀನೆಷ್ಟು ಸುಂದರ ನೀ
ಯಾರ ಮಗಳೆ ಎಲ್ಲಿಂದೆ ಬಂದೆ
ನನಗು ಹೆಳುವೆಯ......
ಓ ಹಸಿರಿನ ತವರೆ ನೀ
ಹೇಗೆ ಇಷ್ಟು ಹಬ್ಬಿನಿಂತಿರುವೆ
ನಿನ್ನ ಇಲ್ಲಿ ಕಳಿಸಿದವರಾದರು ಯಾರು
ನನಗು ಹೇಳುವೆಯ......
ಓ ಸುಂದರ ನದಿಗಳೆ
ಎಲ್ಲಿಂದ ಹರಿದು ಬಂದಿರೆ ಭೂಮಿಗೆ
ನಿಮ್ಮನ್ನು ಇಲ್ಲಿಗೆ ಕರೆದವರಾದರು ಯಾರು
ನನಗು ಹೇಳುವಿರ......
ಯಾರಿಗು ತಿಳಿಯದೆ ಯಾವಾಗ
ಹುಟ್ಟಿರಿ ಎಲ್ಲಿಂದ ಬಂದಿರೆ ಎಲ್ಲ
ನನಗು ಹೇಳುವಿರೆನೆ ಸ್ವಲ್ಪ....

- ರಾಗಸಿರಿ....

28 Nov 2017, 01:52 pm