Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬದುಕು ಬಯಲಿಗಿಟ್ಟು ಕಾಯುತ್ತಿದ್ದೇವೆ
ಬಿಡ್ಡುದಾರರ ಮನದಿಚ್ಛೆಗೆ
ಕನಸುಗಳ ಪಣಕ್ಕೊಡ್ಡಿ
ಮಾಗುವ ಮುನ್ನ
ಮಾರಾಟವಾಗಬೇಕು ಹಣ್ಣು
ಇಲ್ಲವಾದರೆ ಅನುಮಾನಿಸುತ್ತವೆ
ಕೊಳ್ಳುವ ಕಣ್ಣು
ದಲ್ಲಾಳಿಗಳ ಆಸೆ ಬುರಕತನ
ಕೊಳ್ಳು ವರ ಆತಾರ್ಕಿಕ ನಿಲುವು
ಹೊಣೆಗಾರರ ಹೊಣೆಗೇಡಿತನ
ಬೆಚ್ಚಿದರೂ ಕಿಚ್ಚು ಕಾರುವ
ಎದೆಗಾರಿಕೆ ಇಲ್ಲ
ಕೊಂಡವರ ಕೈಗೊಂಬೆ
ಬೆಳಕಿಗೋ ಬೆಂಕಿಗೋ
ಬದುಕು ಭವಿತವ್ಯ
- ಯು.ರಾಮು ಸಿರಿಗೆರೆ
01 Dec 2017, 09:10 pm
ಪುಟ್ಟ ಮುದ್ದು ಮಗು
ಕನಸ್ಸಿನಲ್ಲಿ ದಿನ ರಾತ್ರಿ ಬರುವ ಮುದ್ದು ಮಗು
ನೀ ಯಾರ ಎಂದು ತಿಳಿಯಾದ ಮುದ್ದು ಮಗು
ಕನಸ್ಸಿನಲ್ಲಿ ಏಕೆ ಬರುವೆ ಒಂದು ಎರಡು ದಿನ ಅಲ್ಲ
ನಾನು ನಿನ್ನ ಅಮ್ಮನ ಆದರೆ ನೀ ಯಾಕೆ ನನ್ನ ಜೊತೆ ಯಲ್ಲಿ ಇಲ್ಲ
ಬರೀ ಕನಸ್ಸಿನಲ್ಲಿ ಮಾತ್ರ ನಿಂಗೆ ನಾ ಅಮ್ಮ ನ
ಯಾವಾಗ ಬಂದು ಹೇಳುವೆ ನನ್ನ ಪ್ರಶ್ನೆಗೆ ಉತ್ತರ
ಕನಸ್ಸಿನಲ್ಲಿ ನನ್ನ ಜೊತೆ ಆಡುವೆ ಆಟ
ನೀ ಯಾರು ಎಂದ ತಿಳಯದೇ ಅದೇ ನಾನು
ಮುದ್ದು ಮಗು ಒಮ್ಮೆ ಹೇಳಿ ಬೇಡು
ನಿನ್ನ ಅಮ್ಮನಿಗೆ
ನನ್ನ ಕೂಗು ಕೇಳಿ ಈ ದಿನ ನನ್ನ ಕನಸ್ಸಿನಲ್ಲಿ ಬಂದು
ನಾ ಕಾಯುತಿರುವೆ ನಿನಗಾಗಿ ನನ್ನ ಮುದ್ದು ಮಗು
ಇಂತಿ
ನಿನ್ನ ಅಮ್ಮ......
- sparsha surya
01 Dec 2017, 05:05 pm
ಬಾಲ್ಯದಿಂದಲೂ ನೀರೆದವಳು ಕನ್ನಡತಿ
ಯವ್ವನದಲ್ಲಿ ಯಾಕೆ ಆಗುತ್ತೀಯ ಆಂಗ್ಲದ ಒಡೆತಿ
ದುಡಿಯುವ ತವಕದಲ್ಲಿ ತರದಿರು ಕನ್ನಡಕ್ಕೇ ದುರ್ಗತಿ
ಮೆರೆಸು ಮನ ಮನದಲ್ಲಿ ಕನ್ನಡದ ವೈಭವ
ಹಸಿರಾಗಲಿ ಕನ್ನಡ
ಉಸಿರಾಗಲಿ ಕನ್ನಡ
ಅಳಿಸದೆ ಉಳಿಸಿ ಪೋಷಿಸು ಕನ್ನಡಿಗ
- ಎ ಜಿ ಶರಣ್
01 Dec 2017, 04:45 pm
ಕಾಗದದ ಮೇಲೆ ಬರೆದೇನು ಮೌನದ ಕವಿತೆ
ಸ್ವರ್ಶ ಇಲ್ಲದ ನೋಟದಿಂದ ಮಾಯವಾದ ನಿನ್ನ ಕಿರುನಗೆಗಾಗಿ
ಬರೆದೇನು ಮೌನದ ಕವಿತೆ
ಜಾರಿ ಹೋದ ಕಣ್ಣ ಹನಿಗಳ
ಮರೆತು ಹೋದ ನೆನಪುಗಳ
ಕೂಡಿಸಿ ಇಟ್ಟು ಬರೆದೇನು ಮೌನದ ಕವಿತೆ
ಪದ ಪುಂಜ ಸಿಗದೇ ಪುಳಕಿನಾಗದೇ
ಬರೆದೇನು ಮೌನದ ಕವಿತೆ
ಆಸೆಗಳು ಮಂಕಾಗಿ
ಕನಸ್ಸುಗಳು ಕಮರಿ
ಉತ್ಸಾಹ ಬರಿದಾದ ಮನದಿಂದ
ಬರೆದೇನು ಮೌನದ ಕವಿತೆ
ಪ್ರೇಮದ ನಿವೇದನೆ
ಮನದ ವೇದನೆ ಸರಿದೂಗಿಸಲಾಗದೇ ಬರೆದೇನು ಮೌನದ ಕವಿತೆ .
ಎ ಜಿ ಶರಣ್
- ಎ ಜಿ ಶರಣ್
01 Dec 2017, 04:42 pm
ನೋವಿನ ಸಾಗರದಲ್ಲಿ
ಒದ್ದಾಡುತ್ತಿರುವ ಮನವೆ
ಏಕೆ ಯಾರಿಗಾಗಿ ಕೊರಗುವೆ
ನೀ ಯಾರಿಗಾಗಿ ಈ ಒದ್ದಾಟ
ಯಾರಿಗಾಗಿ ಈ ನೋವು
ಕೇಳುವವರು ಯಾರಿಲ್ಲ
ಕೈ ಹಿಡಿದು ಕಾಪಾಡಿ ದಡ
ಸೆರಿಸುವ ಮನಸು ಯಾರಿಗು ಇಲ್ಲ
ಬರಿ ಸ್ವಾರ್ಥ ತುಂಬಿದವರೆ ಯಲ್ಲ
ತಿಳಿ ನೀರ ದಡವು ನಿನಗೆ ಕಾಣುತ್ತಿಲ್ಲ
ಇಲ್ಲಿ ಬದುಕುವುದಾದರು ಹೇಗೆ ನೀನು
ನಗುವಿನ ಮನೆಯೆ ಕಾಣತ್ತಿಲ್ಲ
ಎತ್ತ ನೋಡಿದರೂ ಬರಿ ನೋವಿನ
ಅಲೆಗಳೆ ಬರುತ್ತಿವೆ ಅವುಗಳ
ಎದುರಿಸಿ ಹೋರಾಡುವ ಬದಲು
ಉಸಿರು ಕಟ್ಟಿ ಒಂದೆ ಸಲ
ಪ್ರಾಣ ಬಿಟ್ಟು ಬಿಡು
ಮನವೆ...........
- ರಾಗಸಿರಿ....
01 Dec 2017, 03:12 pm
ಕಣ್ಮರೆಯಾದ ಉಸಿರನ್ನು
ಹುಡುಕಿ ತರೋಣವೇ ಮನಸನ್ನು
ಕಳುಹಿಸಿ ಈ ಕ್ಷಣ.
ನಗುವ ಪರದೆಯ ಹಿಂದಿರುವ ಚೆಲುವೆಯ
ಕರೆತರೋಣವೇ ಕೊಂಚ ಮಾತಾಡಲು
ಸಂಕೋಚ ತೊರೆದು ನಮ್ಮೊಡನೆ.
ಬಿಗುಮಾನ ಬಿಟ್ಟು ಮನ ಬಿಚ್ಚಿ ಮಾತಾಡು
ಒಲವೇ ಬಹುಮಾನ ಕೊಡುವೆ ನನ್ನಲ್ಲಿನ
ಕಿರುನಗೆ ನಿನಗಾಗಿ ಮೀಸಲಿಟ್ಟು
ಕೊನೆಯುಸಿರವರೆಗೂ.
- ಚುಕ್ಕಿ
01 Dec 2017, 02:51 pm
ಕಣ್ಣ ಅಂಚಲಿ ನಿಂತು ಮೆಲ್ಲ ಮೆಲ್ಲನೆ
ಬಿಕ್ಕಿ ಅಳುವೆಯೇತಕೆ ಕಣ್ಣೀರ ಹನಿಯೇ,
ನೀ ಸತ್ತರು ನಿನ್ನ ನೆರಳು ಕೂಡ
ಬೀಳುವುದಿಲ್ಲ ನಿನ್ನ ನೋವಿಗೆ
ಕಾರಣವಾದವರ ಕಣ್ಣಿಗೆ.
- ಚುಕ್ಕಿ
01 Dec 2017, 02:49 pm
ವಿಧೀಗೇಕೆ ಇಂತ ಕೋಪ
ಆರಿಸುತಿರುವ ಒಲವ ಪ್ರೇಮ ದೀಪ
ಅವನ ಸವಿನೆನಪುಗಳ ಸಲ್ಲಾಪ
ಇಂದೆನಗೆ ನೋವುಗಳ ಪ್ರಲಾಪದ ಶಾಪ
ಕಿರುಬೆರಳ ಹಿಡಿದು ನಡೆದ ಹಾದಿ
ತರುತಿದೆ ಎದೆಯೊಳಗೆ ಕೊನೆಯಿರದ ಬೇಗುದಿ
ಜೊತೆಯಾದ ಹೆಜ್ಜೆಗಳು ತುಳಿದ ಸಪ್ತಪದಿ
ಮತ್ತೆ ತಿರುತಿರುಗಿ ನೋಡಿದಂತಾಗಿದೆ ಮರುಕದಿ
ಜಾರಿದ ಮುಂಗುರುಳ ಸೇರುವ ಕೈಯಿಗೆ
ತೆರೆದು ನೋಡುವಾಸೆ ಪ್ರೀತಿಯ ನೆನಪುಗಳ ಮಳಿಗೆ
ಅವನ ಕಣ್ಣ ಕಡಲಲಿ ಕುಣಿದ ತೇಲಿದ ಕಣ್ಣಿಗೆ
ಕಂಬನಿಯ ಸಾಗರ ಜೊತೆಯಾಗಿದೆ ತಿಳಿಯದ ಹಾಗೆ
ಬಾಳ ದಾರಿಯಲಿ ಪ್ರೀತಿಯ ಹೆಜ್ಜೆ ಗುರುತು
ಅಳಿಸಿ ಹೋಗುವುದಂತು ಕನಸಿಗೂ ದೂರದ ಮಾತು
ನೆನಪುಗಳು ಮಾಸಿ ಮಬ್ಬು ಆವರಿಸದ ಹೊರತು
ಬದುಕಬಹುದೆ, ಹೋಗದಿದ್ದರೆ ಕಳೆದ ಕ್ಷಣವೆಲ್ಲ ಮರೆತು
- ಶ್ರೀಕಾವ್ಯ
01 Dec 2017, 01:53 pm
ಈ ಬದುಕು ನಿನಾಗಾಗಿ ಮೀಸಲಿಡುವೆ
ಮುತ್ತಿನಂಗಳದಲ್ಲಿ ಇಟ್ಟು ಜೋಪಾನ
ಮಾಡುವೆಯ ಈ ಬದುಕನ್ನ......
ಈ ಉಸಿರು ನಿನ್ನೋಳಗೆ ಬೆರೆಸಿಡುವೆ
ನಿನ್ನ ಉಸಿರಿರುವ ವರೆಗು ಬೇರೆಯಾಗದಂತೆ
ಕಾಪಾಡಿಕೋಳ್ಳುವೆಯ ಈ ಉಸಿರನ್ನ......
ಈ ಮನಸ್ಸು ನಿನ್ನ ಮನಸಿಗೆ ಸಂಗಾತಿಯಾಗಿ
ಕೋಟ್ಟು ಬಿಡುವೆ ಅಂಬರದರಮನೆಯಲ್ಲಿ ಇಟ್ಟು
ಎಂದು ಮುರಿಯದ ಹಾಗೆ ಉಳಿಸಿ ಕೋಳ್ಳುವೆಯ ಈ ಮನಸ್ಸನ್ನ...........
ಈ ಹೃದಯ ನಿನ್ನೂಳಗೆ ಇಟ್ಟುಬಿಡುವೆ
ನಿನ್ನೆದೆಯ ಬಡಿತದ ಜೊತೆಗೆ ಬೆರೆಸಿಕೋಂಡು
ಎಂದು ನಿಲ್ಲದ ಹಾಗೆ ನೋಡಿಕೋಳ್ಳುವೆಯ
ಈ ಹೃದಯವನ್ನ...........
ಈ ಒಡಲೆ ನಿನಗಾಗಿ ಗೆಳೆಯ
ಎಂದು ದೂರಾಗದ ಹಾಗೆ ಕಾಪಾಡಿಕೋ ಓ ಗೆಳೆಯ.............
- ರಾಗಸಿರಿ....
01 Dec 2017, 01:16 pm
ಒಲವೆಂಬ ಈರುಳ್ಳಿನಾ ಕುಯಿವಾಗ ಕಣ್ಣೀರು
ಕುಯ್ಲಿಗೆ ಬಂದ ಈರುಳ್ಳಿನ ನೆಲದಿಂದಾನೆ ಅಗಿಯೊದು
ಒಲವನ್ನು ಮುಚ್ಚಿ ಇಡದೆ ಹೆಚ್ಚಿ ಮಾಡು
ಅಡುಗೆನಾ
ಬದುಕಲ್ಲಿ ಒಲವೆ ಇರದೆ ರುಚಿಯೆ ಬರದು
ಚಿತ್ರನ್ನಾ
ಕಣೀರು ಕಡಿಮೇಯಾದರು ಪ್ರೀತಿ ಮಾಡೊಣಾ
ಕೈ ಸಾಲಾನು ಮಾಡಿಯಾದರು ಕಣ್ಣಿರ ಸುರಿಸೊಣಾ
ಒಲವೆಂದರೆ ಹಿಂಗೆತಾನೆ ಉಪ್ಪುಕಾರದ ಒಗ್ಗರಣೆ••••••••••
(ನಿಮ್ಮ ಪುಟ್ಟ)
- ಕೌರವ
30 Nov 2017, 10:46 pm