Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಒಪ್ಪಿಕೊ ನನ್ನ ನಿನ್ನಿನಿಯನೆಂದು

ಉಂಗುರುಳು ಚಂದಿರನ ನಿಂಗೆ
ಉಡುಗೊರೆಯಾಗಿ ತಂದುಕೊಡುವೆ
ಸೂರ್ಯನ ಶಾಖ ತಾಕದಂತೆ
ನೆರಳಾಗಿ ನಿನ್ನ ನಾ ಕಾಯುವೆ....

ಪೊರ್ಣಮಿಯ ಚಂದಿರನ ಹೊಂಬೆಳಕ..ಓ
ಅಂಗೈಯಲ್ಲಿ ಹಿಡಿದು ನಿನ್ನತ್ತಿರತರುವೆ
ಹಿಮಾಲಯದ ತಂಪು ತಂಗಾಳಿಯ
ನಿನ್ನೆಡೆಗೆ ಕರೆತರುವೆ.........

ನನ್ನೆದೆಯ ಅಂಬಾರಿಯಲ್ಲಿ.......
ನಿನ್ನ ಕೂರಿಸಿ ನಾ ಮೆರೆಸುವೆ
ನಿನಗಾಗಿ ತಪಸ್ಸುಗೈದು ನೀ....
ಕೇಳಿದ ವರವ ನಾ.... ಪಡೆವೆ

ಕಡಲಿನ ಆಳದಲ್ಲಿ ಮುಳುಗಿ
ನಿನಗೋಸ್ಕರ ಮುತ್ತನ್ನ ಹೆಕ್ಕಿ ತರುವೆ
ನನ್ನ ಹೃದಯದಲ್ಲಿ ಗುಡಿ ಕಟ್ಟಿ
ನಿನ್ನ ಪ್ರತಿಷ್ಠಾಪಿಸಿ ಪೂಜಿಸುವೆ
....... ಗೆಳತಿ

ಒಪ್ಪಿಕೊ ನನ್ನ ನಿನ್ನ ಇನಿಯನೆಂದು.....


...ಮಂಜು

- ಮಂಜು

03 Dec 2017, 08:10 am

ಆದರ್ಶದ ಕಟ್ಟೆ

ಹೌದು
ನೀನು ಇದ್ದಿದ್ದೇ ಆಗಿದ್ದರೆ
ನಾನು ಹೀಗಾಗುತ್ತಿರಲಿಲ್ಲ
ನಿನ್ನ ಇರುವಿಕೆ ಅನುಮಾನಗೊಂಡದ್ದು
ನಾನು ನನ್ನಂತೆ ಜೀವಿಸಲಾರದ್ದಕ್ಕೆ
ಬಾಳು ಶುಷ್ಕವೆನಿಸಿ
ಸಾವಿನ ಮನೆ
ಕದ ಮುರಿಯಲೆತ್ನಿಸಿದ್ದು
ನಿನ್ನಲ್ಲಿಯ ನಂಬುಗೆ
ಮರಗಟ್ಟಿದಕ್ಕೆ
ಕಳ್ಳ ಸುಳ್ಳರ ಮನೆ
ಕದ ಕಾಯುವ ನೀನು
ದೀನರೆಡೆ ಕಿಂಚಿತ್
ಕರುಣೆ ಹರಿಸಬೇಕಿತ್ತು
ಇದಕ್ಕೆಲ್ಲ ನಿನ್ನ ಸಮಜಾಯಿಷಿ
ಕರ್ಮ ಸಿದ್ದಾಂತ
ಒಪ್ಪುವುದಿಲ್ಲ ಬಿಡು
ಹಸಿದು ಕಂಗೆಟ್ಟಾಗ
ಮೀರಲೇ ಬೇಕಾಗುತ್ತದೆ
ಆದರ್ಶದ ಕಟ್ಟೆ

- ಯು.ರಾಮು ಸಿರಿಗೆರೆ

02 Dec 2017, 08:40 pm

ಅಲೆಮಾರಿ

ಊರಿಂದ ಊರಿಗೆ ಅಲೆಯುವ ಅಲೆಮಾರಿ
ಯಾವ ಭರವಸೆಯ ನಂಬಿ ನಿನ್ನ ತಯಾರಿ
ಏನ ಕಾತರಿಸಿ ಹೋರಟಿದೆ,ನಿನ್ನ ಸವಾರಿ,
ಯಾವ ಕನಸಿನ ಬೇನ್ನೇರಿ....

ಎಷ್ಟೋ ಜನಗಳ ನೋಡಿರುವೆ.
ಎಷ್ಟೋಂದು ಅನುಭವ ಪಡೆದಿರುವೆ,
ವ್ಯಥೆಗಳ ಕಥೆಯ ಕೇಳಿರುವೆ,
ಜೀವನ ಸತ್ಯವ ಅರಿತಿರುವೆ....

ಯಾರನು ನಂಬದೆ,
ಯಾರನು ಸೇರದೆ,
ಏನನು ಬಯಸದೆ,
ನೀ ಚಿಂತೆಯ ಮಾಡದೆ....
ಚಿತೆಯೆರುವೆ ....ಯಾರ ಮನಸ್ಸನು ನೋಯಿಸದೆ,
ಯಾರಿಗೂ ತಲೆಯ ಬಾಗಿಸದೆ...

- Bhagya Girish

02 Dec 2017, 07:14 pm

ಹರಡು ಆಸೆಗಳು

ಬರಡು ಬದುಕಿನ ಹರಡು ಆಸೆಗಳು ಕೆಣಕಿ ಕಿತ್ತೆಸೆದರೂ ಮಿಕ್ಕಿ ಕಂಬನಿಯಲ್ಲಿ ಮಿಂದು ಮರೆಯಾಗುತ್ತವೆ.

ಹಸಿದ ಹೊಟ್ಟೆಗೆ ಹುಸಿಯ ಮಾತುಗಳು ಹಣ್ಣು ಹಂಪಲುಗಳು ಎತ್ತಲಿಂದಲೋ ತಂದು ಕೊಟ್ಟವು ಸವಿದಂತ ಕಾಲ್ಪನಿಕ ಊಹೆಗಳು.

ಕೆಟ್ಟ ಕೋಪದ ಬಟ್ಟೆ ತೊಡಿಸಿ ನೋವ ನಿನ್ನ ನೇತ್ರದ ವರೆಗೆ ಬಾರದಂತೆ ಮರೆಮಾಚುತಿಹೆನು,
ಚಂಡಮಾರುತ ಚೆಂಡಾಡುತಿರುವುದು ಇಂದು ಮನಸ ಮೂಲೆಯ ಕನಸ ಅಂಗಡಿಯಲ್ಲಿ.

- ಚುಕ್ಕಿ

02 Dec 2017, 06:34 pm

ಅಮ್ಮಾ....

ಓ ಮಮಕಾರದ ಅಕ್ಷಯ ನಿಧಿಯೇ
ನಿನಗೆ ಕೋಟಿ ವಂದನೆ...
ಓ ಸ್ನೇಹದ ಮೂರ್ತ ರೂಪವೇ
ನಿನಗೆ ಕೋಟಿ ವಂದನೆ...

ನಡು ರಾತ್ರಿಯಲಿ ನನ್ನ ಆಳುವಿಗೆ
ಎದೆ ಹಾಲಿನ ಸ್ವಾಂತನ ನೀಡಿ...
ನನ್ನ ಹಟಕ್ಕೇಲ್ಲ ತಲೆಬಾಗಿ ನಿಂತು...
ಅತ್ತಾಗ ಕಣ್ಣೊರಿಸಿ, ನಕ್ಕಾಗ ಕಣ್ಣರಳಿಸಿ...
ಪ್ರೀತಿಯ ಮಳೆ ಸುರಿಸಿ,ಗೆಲುವಿನ ದಾರಿ ತೋರಿಸಿ
ಬೆಳೆಸಿದಳು ನನ್ನ ತಾಯಿ.
ಓ ಜನನೀ... ನಿನಗೆ ಕೋಟಿ ವಂದನೆ...!

ತೆವಲಿ ಬರಲಿ ಕೈ ನೀಡಿದಳು...
ತೊದಲು ನುಡಿಯಲು ತಿದ್ದಿ ಹೇಳಿದಳು...
ಚಂದ ಮಾಮನ ತೋರಿಸಿ ತುತ್ತು ಕೊಟ್ಟು
ಹಸಿವು ನೀಗಿಸಿದಳು...
ತನ್ನ ಬಸಿರೊಳಗೂ ನನಗೆ ಉಸಿರಾದಳು...
ಓ ದಿವ್ಯ ಚೇತನವೇ... ನಿನಗೆ ಕೋಟಿ ವಂದನೆ...!

ಪದಗಳು ಸಾಕಾಗದು ನಿನ್ನ ಬಣ್ಣಿಸಲು...
ಈ ಜನ್ಮವು ಸಾಕಾಗದು ನಿನ್ನ ಋಣವ ತೀರಿಸಲು.
ಅಮ್ಮಾ... ನಿನಗೆ ಕೋಟಿ ಕೋಟಿ ವಂದನೆ.

- ಮೌನೇಶ..ಪಿ

02 Dec 2017, 02:09 pm

ಗೋಸುಂಬೆಗಳು

ಗೋಸುಂಬೆಯ ತೆವಳು ನಿಂತಿಲ್ಲ
ಅದರ ಹೆಸರ ಕೊನೆಗೆ ಕ್ಷಣ ಕ್ಷಣಕ್ಕೂ ಕಣ ಕಣವು
ತನ್ನಲ್ಲೇ ತಾನು ಬದಲಿಸಿ ಹೆಜ್ಜೆ ಇಟ್ಟ ಜಾಗದಲ್ಲೇ
ಹೊಚ್ಚ ಹೊಸ ರೂಪ ಧರಿಸಿ ಮುಂದೆ ಸಾಗುವುದು
ಬಹುರೂಪಿಣಿ ಈ ಊಸರವಳ್ಳಿ.

ಹೊತ್ತಿಗೆ ತಕ್ಕಂತೆ ಗತ್ತು ಬದಲಿಸಿ
ಮಾತನಾಡುವವರನ್ನ ನೋಡಿ ನಾಚಿದೆ
ತಾನಿಂದು ಊಸರವಳ್ಳಿ,
ತನ್ನ ಮೈ ಬಣ್ಣಗಳಿಗಿಂತ ಹೆಚ್ಚು ವರ್ಣಗಳು
ಈ ಕುಲಗೇಡಿಗಳ ಕಲುಷಿತ ಮನಗಳಲ್ಲಿ
ಮುಸುಕು ಹಾಕಿ ಕುಂತಿವೆಯೆಂದು!

ಹಲ್ಲಿಯಾದರೂನು ಕೊಳ್ಳೆ ಹೊಡೆಯುವುದಂತೂ ಕಲಿತಿಲ್ಲ,
ಕ್ಷಣಕ್ಕೊಂದು ಅಂಗಿಯಂತೆ ಬದಲಿಸುವ
ಮಂದಿಯ ಗತಿಗೆಟ್ಟ ಮತಿಗಳಿಗೆ
ಮಾತೊಂದು ಬೇಕೇನು ?
ನಟನೆ ನಿಲ್ಲಿಸೆಂದು ಹೇಳಲಿಂದು!

ಪರಿಸರ ಸ್ನೇಹಿ ಈ ವಿವಿಧ ರೂಪಧಾರಿ
ಕ್ರಿಮಿ ಕೀಟಗಳನು ಉಂಡು ಜೀವಿಸುವುದು,
ಘೋರ ಕಟುಕರು ದುರ್ಜನರು
ತನ್ನೆದುರು ಬದುಕುವ ಮನುಜನ
ಭಾವನೆಗಳ ಸಿಹಿಯನು ಉಂಡು
ಕಠೋರ ವಿಷವನು
ಕಾಣಿಕೆಯಾಗಿ ಕೊಟ್ಟು ಹೋಗುವರು!

ಕುಂತ ಜಾಗದಲ್ಲೇ ಕತ್ತು ತಿರುಗಿಸದೆ
ಪರಿಸರ ಪರಿವೇಕ್ಷಣೆ ನಡೆಸುವುದು ಈ ಸರಿಸೃಪ,
ನೆತ್ತಿ ಹೆತ್ತಿ, ನಾಜೂಕು ಮಾತಾಡಿ
ಕಣ್ಣಲ್ಲಿ ಮಣ್ಣೆಸೆದು ಬೆಕ್ಕಿನಂತೆ ಜಾರುವುದು
ನಕಲಿ ನರರ ಕೈಚಳಕದ ಉಜ್ಜುಗದ ತದ್ರೂಪ ಮೂರು ಬಿಟ್ಟ ಅಪರೂಪ ಮಹಾನುಭಾವರ ಕೀರ್ತಿ ಕಾಣಿರಪ್ಪ!

- ಚುಕ್ಕಿ

02 Dec 2017, 12:47 pm

ಸ್ವಾವಲಂಬಿ

ಕಾಲುವೆಗಳ ಪಥದಲಿ ಹೊರಟುನಿಂತೆ
ಕೌಮುದಿಯ ಜೋಡಿಗೂಡಿ,
ಸಾಗಿ ಸಾಗುತ್ತ ಶಾಂತಿ ಎನ್ನ ಚಿತ್ತ
ಮಬ್ಬು ತೆರೆಯಸರಿಸಿ ಆಶಾವಾದದತ್ತ,
ಹಾಲುಹಕ್ಕಿ, ತೊಯ್ದ ಪಿಕ್ಕಿ,
ಕಾಗೆ, ಗೂಗೆ ಅಲ್ಲೊಂದು ಮುದಿ ಗರುಡ,
ಎನ್ನಮೇಲೆ ಹಾರಾಡಿ ಛಾಯೆ ಬೀರ್ಯಾವೆ,
ನನ್ನ ಪಯಣ ಹಾದಿ ಹಿಡಿದ್ಯಾವೆ...!!!

ನಾನು ಯಾರು ?
ನಾನು ಯಾರು ?
ಬೇಡ ಪರಿಚಯ
ಸಲ್ಲಬೇಕಿಲ್ಲ ಪ್ರಚಾರ
ನಾನು ಮೌನಿ...

ಎಡಕ್ಕೊಂದು ಕಾಲುವೆಯ ಕವಲು
ಮುಂದಿನ್ನೊಂದು ಸಣ್ಣ ಎಡೆ,
ಸಾಗಿದೊಡೆ ಅಲ್ಲೊಂದು ಬಯಲು,
ಒಂದಷ್ಟು ಹೂತಿಟ್ಟ ಬೀಜ,
ನನ್ನ ನಿರೀಕ್ಷಿಣೆಯಲ್ಲಿ ಕಾದು ಕಂಗೆಟ್ಟು
ಕೊನೆಗೂ ನನ್ನ ಹೀರಿ ಮೊಳೆತು,
ದವಸದ ಕಣಜತುಂಬಿರಲ್ಕೆ,
ಇನ್ನೇನು ಬೇಕೆನಗೆ,
ನನ್ನಷ್ಟಕ್ಕೆ ಬಿಟ್ಟುಬಿಡಿನನ್ನ,
ಬೇಡ ನಿಮ್ಮ ಬಿರುದು,
ಬೇಡ ನಿಮ್ಮ ಗರಿಮೆ,
ಸ್ಥಾವರನಾನಲ್ಲ ಸ್ಥಾನಗಳ ಎಣಿಕೆಗಳಿಲ್ಲ
ಜಾರಿ ಹಾದು ನೀರವ ಮೌನದಲಿ ಸಾಗಿ,
ಕೆರೆಗೋ ಸಾಗರಕ್ಕೋ,
ಸೇರುವ ಚುಕ್ಕಾಣಿಯ ಹಿಡಿದಿರುವೆ
ನನ್ನೊಬ್ಬನನ್ನೇ ಬಿಟ್ಟುಬಿಡಿ
ಮಗ್ನನಾಗಿರುವೆ......

ಕನ್ನಡದ ಭಕ್ತ

- ಕನ್ನಡದ ಭಕ್ತ

02 Dec 2017, 11:45 am

ಸಪ್ಪಳ

ಜುಳು ಜುಳು ಹರಿವ ನೀರು ಭೋರ್ಗರಿದು
ಮಿಂಚಿ ಕತ್ತಲಲ್ಲಿ ಮರೆಯಾಗುವ ಬಾನು,
ಇಂಪಾದ ಹಕ್ಕಿಗಳ ನಾದ ಸೊಂಪಾಗಿ
ಬೀಳುತ್ತಿದೆ ಕಿವಿಗಳಿಗೆ ಮನಸಿಗೆ ತನ್ಮಯತೆ
ತರುವಂತೆ.

ಕ್ಷಣ ಗಣನೇಗಿಡಲು ಸ್ಥಗಿತವಾಗುವ
ಮುಂಗಾರು ಮಳೆ,
ಬೀಸುವ ಗಾಳಿಗೆ ಅಂಕು ಡೋಂಕಾಗಿ
ಹೆಜ್ಜೆ ಹಾಕುತ್ತಿದೆ ಪ್ರಕೃತಿಯ ತಾಳಕ್ಕೆ ತಕ್ಕಂತೆ.

ಭುವಿಯೊಳಗಿನ ಕಿರು ಪದರಗಳ ಕಣ್ಮುಚ್ಚಿ
ನಿಂತಿದೆ ತಿಳಿನೀರ ಮಂಜು
ಚಿಗುರೊಡೆದ ಎಲೆಗಳ ಮೇಲಿಂದು.

ಮಣ್ಣಿನ ಘಮಕ್ಕೆ ಸರಿ ಸಾಟಿ ಉಂಟೆನು
ಬೇರೊಂದು ಪರಿಮಳ,
ನನ್ನ ಮುತ್ತಿಕೊಂಡಿವೆ ನಾನಾ ರೀತಿಯ ಸಪ್ಪಳ ಅದೇ ನನಗೆ ನಿವ್ವಳ.

- ಚುಕ್ಕಿ

02 Dec 2017, 09:20 am

ಅವಳು

ಹಕ್ಕಿ ಪುಕ್ಕ ಅವಳು ಕೇಶ
ಕದ್ದದ್ದು ನವಿಲುಗರಿ ಗಿಳಿಗಳಿಂದ
ಕಿವಿಯೊಲೆ ಕೀಲಿ ಕೈ
ಮೂಗನತ್ತು ಸ್ವಲ್ಪ ತಿರುವಿತ್ತು
ಆ ಕಣ್ಣ ಹುಬ್ಬು ತೆವಿದಿಟ್ಟ ಕತ್ತಿ
ಕುತ್ತಿಗೆಗೆ ಅಂದದ ಹಾರಾ
ಅವಳ ಮುದ್ದಿಸಲೆ ಬೇಕೆಂದು
ಬಾಯಿ ತೆರೆದ ಆವಾ
ಬೇಡಾ ಬೇಡಾ ಮಾರಾಯಾ
ಚಂದವನು ಸವಿ ದೂರದಿಂದ
ಸ್ಪರ್ಶಿಸಿ ಸೋಲಬೇಡಾ
ಮುಖವ ಮುದ್ದಿಸಲು
ಮೇತ್ತಿದ ಬಣ್ಣವ ಕದಡಬೇಡಾ
ಎಲ್ಲೂಂಟು ಆ ಸುಂದರಿಯರು
ಅಳುವಿನಂಚಲ್ಲೆ ,ಬಿಂಕದ
ನವಿಲೆಲ್ಲಿ , ಕೆಂಪು ಕೊಕ್ಕಿನ ಗಿಳಿಯಲ್ಲಿ,
ಹಾಲುಣಿಸೊ ಹಸುವೇಲ್ಲಿ ಹಸುವೇಲ್ಲಿ

- ಕೌರವ

01 Dec 2017, 11:13 pm

ಉತ್ತರಿಸು ಗವಿಸಿದ್ದನೆ

ಅರಿಯದ ಮೌನ ಯಾಕೆ ಸಿದ್ದನೇ..
ಅವಸರದಿ ಉತ್ತರಿಸು ಗವಿಸಿದ್ದನೆ......

ಬಾಡುವ ಬಳ್ಳಿಗ್ಯಾಕೋ ಬೇಸರ..!
ಉದುರುವ ಹೂ ಗ್ಯಾಕೋ ನೇಸರ..!!
ಸುವಾಸನೆಯ ದುಂಬಿಯಾಕೋ ಅಸುರ..!!!
ಗಟ್ಟಿ-ಮುಟ್ಟಾದ ಕೊಂಬೆಗ್ಯಾಕೋ ಆಸರ..!!!!

ಕೂಗುವ ಕೋಳಿಗ್ಯಾಕೋ ಕಿಮ್ಮತ್ತಿಲ್ಲ..!
ಬೊಗಳುವ ನಾಯಿಗ್ಯಾಕೋ ಗಮ್ಮತ್ತಿಲ್ಲ..!!
ಹೋದರುವ ನರಿಗ್ಯಾಕೋ ಹಸುವಿಲ್ಲ..!!!
ನುಸುಳುವ ಹಾವಿಗ್ಯಾಕೋ ಹಂಬಲವಿಲ್ಲ..!!!!

ದಟ್ಟಡವಿಯ ಕಾಡಿಗ್ಯಾಕೋ ಕಿಚ್ಚು..!
ಜರಿಯುವ ನೀರಿಗ್ಯಾಕೋ ಹೊಟ್ಟೆಕಿಚ್ಚು..!!
ಆಡವಿಯ ಜಂಬಕೇಕೋ ಹಗುಚ್ಚು???!!!
ತೊರೆಯುವ ಚಿಲುಮೆಗೆಕೋ ಅರಳಚ್ಚು!!!!

ಕೆಂಗೇಡುವ ಮನಸ್ಸಿಗೇಕೋ ಜಂಬ..!
ಪ್ರೀತಿಸುವ ಹೃದಯವೇಕೋ ಬಿಂಬ..!!
ನಲಿಯುವ ಉತ್ಸಾಹವೇಕೋ ಉಂಬ..!!!
ಕಲಿಯುವ ಬುದ್ಧಿಗ್ಯಾಕೋ ಕೊಂಬ..!!!!
ಸುಗ್ಗಿ...

- ಆರ್ ಎಸ್ ಸುಗ್ಗಿ.

01 Dec 2017, 09:23 pm