ಮನದಲ್ಲಿ, ಏನೋ ಹುಚ್ಚು ತುಡಿತ|
ಹೆಚ್ಚಾಗಿದೆ ನನ್ನ ಹೃದಯದ ಬಡಿತ|
ನನ್ನ ನೋಡಿ ನಗುತ್ತಿದೆ ದಿಗಂತ|
ಮತ್ತೇ ಬರಬಾರದೇ ವಸಂತ..
ನನ್ನ ಇನಿಯನ ಕೂಗಿ ಕರೆಯುತಾ..|
ತಂಗಾಳಿಯಲಿ...ಕುಳಿತು.. ಹಾಗೆ..
ಪಿಸು ಮಾತಲಿ ಹೇಳಲೇ ಒಮ್ಮೆ..
ಚಿಲಿಪಿಲಿ ಗುಟ್ಟುವ..ಹಕ್ಕಿಯ ...ಹಾಗೆ..
ನಿನ್ನ ಹೆಸರನ್ನ ಕೂಗಲೇ ಒಮ್ಮೆ..
ಸಮುದ್ರವ ಸೇರುವ ನದಿಯ ಹಾಗೆ..
ನಿನ್ನ ಬಂದು ಸೇರುವೇ.. ಒಮ್ಮೆ..
ಇನಿಯಾ...ಮನ ಬಯಸಿದೆ....ಈಗೇ..
ಇಬ್ಬರು ಸೇರಿ,ಹಾಡಲು.....
ಅರುಣಾ ರಾಗವ ಒಮ್ಮೆ....
ಅದುವೇ,ಒಲವಿನ........ಮಹಿಮೆ
ನನ್ನ ಪ್ರೀತಿಗೆ.... ಹಿರಿಮೆ...
ಓ ಇರುಳೆ ಕಣ್ಣಾ ಮುಚ್ಚಾಲೆ
ಆಡುವೆಯೇನೆ ಬೆಳಕಲ್ಲೆ ಕಾಣದ
ಮೋಸಗಳು ನಿನ್ನ ಇರುಳಲ್ಲಿ ಹೇಗೆ
ತಾನೆ ಕಂಡವು ಓ ಇರುಳೆ
ಸಾಕು ಈ ಕಣ್ಣಾ ಮುಚ್ಚಾಲೆ
ಅಲೆದು ಅಲೆದು ಸಾಕಾಗಿದೆ
ಕಣ್ಣಿಗೆ ಕಾಣದ ಕಪಟಗಳು
ಎಷ್ಟೋ ಇದ್ದರೂ ನಾ ಎಡವಿ ಬಿಳುವ
ಮುನ್ನ ನಿಲ್ಲಿಸಿ ಬಿಡೇ ಈ ಕಣ್ಣಾಮುಚ್ಚಾಲೆ ಆಟವನ್ನ.....
ಕಂಡರು ಕಾಣದಂತೆ ಅವಿತು
ಕೋಂಡಿರುವವು ಮೋಸದ
ಬುತಗಳು ನಾ ಎಲ್ಲಿ ಹುಡುಕಲಿ
ಬೇಳಕನ್ನ ನಿನ್ನ ಇರುಳಲ್ಲಿ ......
ಆ ಬುತಗಳು ನನ್ನ ಹಿಡಿದು
ನುಂಗುವ ಮುನ್ನ ನಿಲ್ಲಿಸೆ
ಈ ಕಣ್ಣಾಮುಚ್ಚಾಲೆಯನ್ನ......
ಕಣ್ಣೀರೆ ಬಿಟ್ಟು ಬದುಕೇ ನನ್ನ ,
ನಿನ್ನ ಒಲವಿನ ಸುರಿ ಮಳಯಲ್ಲಿ ಪ್ರತಿಕ್ಷಣ
ನನ್ನ ಕಟ್ಟಿ ಹಾಕುತ್ತಿರುವೆ ಬಂಧನದ ಮಗ್ಗುಲಲ್ಲಿ.
ಸ್ವಾರ್ಥಿ ಆಗದಿರು ಇನ್ನು ಚುರು
ನೀನು ನನ್ನ ಆಂಟಿ ಬದುಕಬೇಕೆಂದು.
ನನಗೆ ತಿಳಿಯದ ಹಾಗೆ ಬಂದಿಸಿರುವೆ ನನ್ನ ನಗೆಯನ್ನು ಅವುಡಿನ ಹಿಂದೆ.
ಮಂದಹಾಸ ನನ್ನ ನೋಡುವ ಆಸೆಯಾಗಿ
ನಿನ್ನ ಕಣ್ಣ ತಪ್ಪಿಸಿ ನನ್ನೊಳಗೆ ನುಗ್ಗಿ ಬಂತು, ಅರೆಕ್ಷಣ ಹಾಯಾಗಿರಲು ನನ್ನಲ್ಲಿ ಅಷ್ಟರಲ್ಲೇ ನಿನ್ನ ಕಣ್ಣು ಕುಗ್ಗಿ ಹೋಯಿತೆ ,
ನಿನ್ನ ಮುನಿಸು ಕೊಂದು ಹಾಕಿದೆ ಅದರ ಕನಸು.
ಅದೆಷ್ಟು ಉಸಿರು ಬಿಗಿ ಹಿಡಿದು
ಮಾತು ತಡೆಹಿಡಿದು ಬದುಕಲಿ
ವ್ಯವಸ್ಥೆಯ ಎದರು ನನ್ನ ಹಠ
ಉಣ್ಣುವನಿಗೆ ಅನ್ನವಿಲ್ಲ
ಉಣ್ಣದ ದೇವರಿಗೆ ಹಾಲನ್ನ ನೈವೇದ್ಯ
ದುಡಿಮೆಗೆ ಫಲವಿಲ್ಲ
ತಲೆ ಒಡೆದು ತಿರುಗುವನಿಗೆ ಎಲ್ಲ
ರಾಮ ಕೃಷ್ಣ ಅಲ್ಲಾ ಯೇಸು
ಬಡವರ ಪಾಲಿಗೆ ದೇವರೆ ಅಲ್ಲ
ಹಾಡಿಗೂ ಪಾಡಿಗೂ ಸಂಬಂಧವೆ ಇಲ್ಲ
ಕಾಸಿಗೆ ಹಾಸಿಗೆ ವ್ಯಾಪಾರ
ಸುಮ್ಮನೆ ಕುಂತನೆ ಯುವ ನೇತಾರ
ದುಳ್ಳರು ದುಷ್ಟರ ಹುನ್ನಾರಾ
ಸೀಡಿದೆಳುವುದೆಂದು ನೆತ್ತಾರ
ಭಿತ್ತಲಿ ಭತ್ತಲಿ ಕ್ರಾಂತಿಯ ದೀವಿಗೆ
ಸರಿ ಹೊತ್ತಲಿ ಮೊಳಗಲಿ ಏಳಿಗೆ ಬೆಸುಗೆ
ಕಿಡಿ ಹಬ್ಬುವದೆಂದು ಹೊಸ ಸತ್ಕಾರ
ಆ ಸೂರ್ಯನೆದ್ದು ಬಂದಾನ
ಜಗದ ಅಂದಕಾವರ ತೊಳೆದು
ತನ್ನ ಬೆಳಕನ್ನ ಚೆಲ್ಲುತ್ತಾ.....
ಹಾಲಿನ ಕಡಲಲ್ಲಿ ಮಿಂದು
ಎದ್ದು ಬರುತಿರವ ಅವ
ಬಂದು ಪಳ ಪಳನೆ
ಕಣ್ಣು ಹೋಡೆಯುವ ಮನ್ನ
ಎದ್ದು ಬಿಡಿರೆ ಮುದ್ದು ಮನಸುಗಳೆ...
ಮುಂಜಾನೆಯಲಿ ಕನಸೊಂದು
ಬಂದಿರಲು ನನಸ ಮಾಡಲೆಂದೆ
ಬರುವ ಅವನೋಬ್ಬ ಸಮಯ ಪಾಲಕ
ನೋಡಿ.............
ಅವನೋಬ್ಬ ಇದ್ದರೆ
ಜಗವೆ ಎಚ್ಚೆತ್ತು ಕೋಳ್ಳುವುದು ನೋಡಿ...
ಓ ಮನಸ್ಸೇ ಅತ್ತು ಬಿಡು
ಒಮ್ಮೆ ಜೋರಾಗಿ
ಮನದಲ್ಲಿರುವ ನೋವೆಲ್ಲ
ಕಣ್ಣಿರಂತೆ ಹೊರಹಾಕಿ ಬಿಡು....
ಏಕೆ ನೋವಿನಿಂದ ಮರುಗುವೆ
ನಿನ್ನ ನೊಂದ ಮಾತು
ಪ್ರೀತಿಸುವ ಮನಕೇ ಉಸಿರು
ಕಟ್ಟಿ ದಂತಾಗಿದೆ......
ನಿನ್ನ ಒಂದು ನಗುವಿಗಾಗಿ ಕಾಯುತ್ತಿದೆ
ಈ ನಿನ್ನ ಮನಸ್ಸು ಒರಟು ಮಾತಿನಿಂದ
ನನ್ನ ಕೊಲ್ಲವ ಬದಲು ಮೌನವಾಗಿ
ಇದ್ದು ಬಿಡು ಸುಮ್ಮನೇ ಮೌನದಿಂದಲೇ
ಉತ್ತರಿಸು ಒಮ್ಮೆಲೇ ಅತ್ತು ಬಿಡು ಮನಸ್ಸೇ....