Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುದ್ದು ಗಿಳಿ.....

ಓ ನನ್ನ ಮುದ್ದು ಗಿಳಿಯೆ
ನಿ ಎಕೆ ಹಾರುತಿಯೆ
ನನ್ನ ಎದೆಯಂಬ ಪುಟ್ಟ
ಗುಡಿಯ ಮಾಡಿರುವೆ ನಿನಗೆ
ಇದ್ದು ಬಿಡಬಾರದೆ ಅಲ್ಲೆ
ರಾಣಿಯಂತೆ.....
ಹೊತ್ ಹೊತ್ಗೆ ಕಾಳು ಕಡಿ
ತಂದಿಡುವೆ ನಿ ವಲ್ಲೆ ಅಂದರು
ನಿನ ಬಾಯಗೆ ಸುರಿವೆ
ಕತ್ತಲೆಯ ಈ ಲೋಕದಲ್ಲೀ
ಹಾರಿ ಹೋಗಿ ಹೇಗೆ ಬದುಕುವೆ ನೀ
ನನ್ನ ಅಗಲಿ ........
ದುಷ್ಟ ರಣಹದ್ದುಗಳು
ನಿನ್ನನ್ನು ಕೋಂದರೆ
ನನ್ನ ಗತಿ ಎನೆ ಮುದ್ದು ಗಿಳಿ...
ರೆಕ್ಕೆ ಬಂದಿತ್ತೆಂದು ಹಾರಿ ಹೋಗಬೇಡವೆ
ನನ್ನ ಎದೆಯ ಆಸರೆಯ ಅಗಲಿ.....
ಓ ನನ್ನ ಮುದ್ದು ಗಿಳಿಯೆ.....

- ರಾಗಸಿರಿ....

08 Dec 2017, 04:02 pm

"ನಿವೇದನೆ•••••"

ಇಟ್ಟಿದ್ದೆ ಎದೆತುಂಬ ಕನಸುಗಳ ನಕ್ಷತ್ರ
ಪ್ರೀತಿ ಗೆರೆಯನು ಎಳೆದು ಬಿಡಿಸಿದ್ದೆ ನಿನ ಚಿತ್ರ...

ಅಪ್ಪನಾಣತಿಯಂತೆ ನೀನೆತ್ತ ನಡೆದೆ
ಪುಟ್ಟ ಮಗುವಿನ ತೆರದಿ ನಾ ಅತ್ತು ಕರೆದೆ...

ಎಷ್ಟು ಕೂಗಿದರು ನೀ ಕೇಳದೆ ಹೋದೆ
ನಂಬಿದ ಹ್ರುದಯಕೆ ದ್ರೋಹ ಬಗೆದೆ

ಇಂದಿಗೂ ನಿನ್ನ ನೆನಪಲ್ಲೇ ಬದುಕಿದೆ
ನನ್ನ ತೊರೆಯಬೇಡ ಮರಳಿ ಬಾರದೆ...

- Basawaraj

08 Dec 2017, 02:55 pm

ಎದೆಯ ಹಾಲು

ಹೆತ್ತ ತಾಯಿಯ ಎದಯ ಹಾಲು ವಿಷವ
ಚಿಮ್ಮಿತು ಅಹಂಕಾರದ ಕಡು ಸ್ವಾರ್ಥದಲ್ಲಿ.
ಅಡ್ಡಿಯಾಗಿದೆ ಕರುಳ ನಂಟು ಕೊಂದು
ಹಾಕಲು ಕರುಳ ಕುಡಿಯನು.

ಕತ್ತು ಹಿಸುಕಿ ಸಾಯಿಸಿದರೆ ಸತ್ತ ವರದಿ ತಾನೆತ್ತ ಕೇಳುವೇನೋ ಎಂದು ಹೃದಯಕ್ಕೆ ಚೂರಿ ಬಗೆದು ಮಾತಿದಿನಿಂದ ಇಂಚಿಂಚು ಗಾಸಿ ಮಾಡಿ ನರಕ ತೋರುತಿರುವೆಯ ?

ಒಂದೇ ಉಸಿರು ಕಟ್ಟಿ ಸತ್ತುಹೋಗುವಳೆಂದು ಇಂದು!
ಮಲತಾಯಿ ಅಲ್ಲದಿದ್ದರೂ ಮರುಳು ತಾಯಿ ಆಗಿಹೋದೆ ಕಟುಕರಿಗೂ ಕೀಳಾಗಿ ನನ್ನ ಕಾಡಿ ನಕ್ಕು ನಲಿದೆ.

ನಕಲಿ ಮಾಡಿ ನಿನ್ನ ನೀಚ ಬದುಕಿಗೆ ನನ್ನದೇ ಪ್ರತಿಬಿಂಬವನ್ನು ಅಂಟಿಸಿ ನನ್ನ ಭಾವ ಚಿತ್ರದಂತೆ ಲೋಕದೆಲ್ಲೆಡೆ ಸಾರಿ ನನ್ನ ಕಣ್ಣ ಹನಿಯ ಕುಡಿದು ಬದುಕುವೆಯ?

ಮೆಚ್ಚಿ ಬಂದ ಕಂದನಿಂದು ಚುಚ್ಚದೇನೆ ಹೊಂಚು ಹಾಕಿ ಕಟ್ಟ ಕಡೆಗೆ ಕೆಟ್ಟವಳೆಂದು ದೂರಿ ನೀನು ನನಗೆ ದೂರವಾಗುವೆಯ?

ಮಾತೃಮೂರ್ತಿ ಎಂದು ಕೊಂಡಾಡಿದ ಬಾಯಿಯಲ್ಲಿ ನೀನೊಂದು ಕಲ್ಲೆಂದು ಮಾನವತ್ವವಿಲ್ಲದ ರಾಕ್ಷಸಿಯೆಂದು ಕಂಬನಿಯೇ ನುಂಗಿ ಬದುಕುವಂತೆ ಮಾಡಿದೆಯಾ?

- ಚುಕ್ಕಿ

08 Dec 2017, 12:01 pm

ಅತ್ತವರು

ಬಿದ್ದ ಮರಕ ಅತ್ತವರಿಲ್ಲ
ಸೊತವಗ ಹೆಗಲ್ಯಾರು ಇಲ್ಲ
ಗಳಿಸಿದ್ದಕಿಂತ ಕಳಿದಿದ್ದ ಹೆಚ್ಚು ಆಯಸ್ಸ
ಉಸಿರಿನೊಡನೆ ಉರಿಯು ಸೆರಿ
ಸುಡುತಿದೆ ಮನವ ಕೌರವನ ತನವ

- ಕೌರವ

08 Dec 2017, 10:16 am

ಸೈನಿಕ, ಸೈನಿಕ


ನಿನ್ನಿಂದ ಕಲಿತು ಆದೆ ನಾ ಪ್ರಾಮಾಣಿಕ,
ನಿನ್ನಲ್ಲಿರುವ ಒಬ್ಬ ದುಖಿಃತನಾದ ಮೌನಿಕ,
ಆದರು ನೀನು ನಮ್ಮನ್ನು ಸದಾ ಕಾಯುವ ರಕ್ಷಕ,
ನೀನು ಎಂದಿಗೂ ಬಿಡುವುದಿಲ್ಲ ನಿನ್ನ ರಕ್ಷಣೆಯ ಕಾಯಕ,
ನಿನ್ನಲ್ಲು ಇರುವ ಒಬ್ಬ ಆಸೆಯೆಂಬ ಒಳ್ಳೆಯ ಮಾಂತ್ರಿಕ,
ನಮ್ಮೆಲ್ಲರಿಗೆ ಅಭಯ ನೀಡುತ್ತ,ನಮ್ಮಯ ಸುಖಕ್ಕೆ ನಿನ್ನ ಸುಖ ಬಿಟ್ಟು ದುಡಿಯುತ್ತಿರುವ ನೀನೆ ಮಹಾನ್ ಶ್ರಮಿಕ,
ನಿನ್ನ ಪ್ರತಿಯೊಂದು ಕಷ್ಟದ ಹೆಜ್ಜೆಗು ಇದ್ದೆ ಇದೆ ನಮ್ಮ ಬಹುಪರಾಕ,
ನಿನೊಬ್ಬ ಈ ದೇಶದ ಚಿತ್ರಿಕ,
ನಿನ್ನ ಜೊತೆ ಮತ್ತೊಬ್ಬನಿರುವ ರೈತನೆಂಬ ನಾಯಕ,
ನಿಮ್ಮಿಬ್ಬರನ್ನು ಕಡೆಗಣಿಸಿದವನೆ ದೊಡ್ಡ ಮೂರ್ಖ
......(ಮುಂದುವರೆಯುವುದು ಅನಂತದವರೆಗೆ)
"ಯುವಕ ಆಗಲು ಪ್ರಯತ್ನಿಸು ಸೈನಿಕ"

- SHASHI

08 Dec 2017, 10:05 am

ವ್ಯಾಪಾರಿ

ನನ್ನನು ಕನಿಷ್ಠವಾಗಿ ಕಂಡ ಮಾತ್ರಕ್ಕೆ
ನಿಮ್ಮ ಘನತೆ ಹೆಚ್ಚುವುದಿದ್ದರೆ ಅಷ್ಟಾದರು ಬದುಕು ಸಾರ್ಥಕಗೊಂಡಿದ್ದಕ್ಕೆ
ಹರ್ಷಿಸುತ್ತೇನೆಯೇ ಹೊರತು
ವ್ಯಕ್ತಿತ್ವಕ್ಕೆ ಕುಂದಾಯಿತೆಂದು ನಿಂದಿಸಲಾರೆ
ಪೂರ್ವಿಕರ ಗಂಟಾಗಲಿ
ಧನಿಕರ ನಂಟಾಗಲಿ ಇಲ್ಲದೆ
ಅಸ್ತಿತ್ವದುಳಿವಿಗೆ ಆಯ್ದುಕೊಂಡ ಜೀವನ
ನಿಮ್ಮ ದ್ರಷ್ಟಿಯಲ್ಲಿ ಕೇವಲವೆನಿಸಿದರೆ
ಸಂಕುಚಿತ ಮನೋಬಿಂಬವೇ ವಿನಹ
ಆಯ್ಕೆಯ ಅನಾರ್ಹತೆಯಲ್ಲ
ಅರಿವಿನೆಡೆಗೆ ಹರಿಯದ ಜಡ ಚಿತ್ತ
ಸೊಗಸಿಗು ತೆರೆಯದ ಅಂದತ್ವ
ವ್ಯಕ್ತಿ ವೈಕಲ್ಯಕ್ಕೆ ಸೃಷ್ಟಿ ಹೊಣೆಯಲ್ಲ
ಹೇಗೆಯೇ ಇರಲಿ ಆಂತರ್ಯ
ಹಣ ತೆರದಿದ್ದರೆ ಇಲ್ಲ ಔದಾರ್ಯ
ನನ್ನದು ವ್ಯವಹಾರಿಕ ಜಗತ್ತು
ಭಾವನೆಗಳಿಗಿಲ್ಲ ಕಾಸಿನ ಕಿಮ್ಮತ್ತು

- ಯು.ರಾಮು ಸಿರಿಗೆರೆ

08 Dec 2017, 09:52 am

ಸಾವಿನ ಪ್ರೀತಿ ....

ಸಾವನ್ನು ಹೂಡುಕಿಕೊಂಡು ಹೋಗುವ
ಮನಸ್ಸಿಗೆ ಪ್ರೀತಿಯ ಮಾತುಗಳು....

ಕ್ಷಣಗಳಲ್ಲಿ ಕಣ್ಣ ಮರೆಯಾಗುವ ಜೀವಕ್ಕೆ
ಬದುಕ ಬೇಕೆಂಬ ಆಸೆ....

ಗೆಳೆಯ ಈ ಜೀವ ಮಣ್ಣಿಗೆ ಹೋದರು
ನಾನು ನಿನ್ನನೇ ಪ್ರೀತಿಸುವೆ...

ಇಂತಿ ನಿನ್ನ ಪ್ರೀತಿಯ
ದಾಸಿ....

- sparsha surya

08 Dec 2017, 08:49 am

ಅಂಗಂತ್ಕೋಬೇಡಿ

ನಾನಂತು ಓತ್ಲ
ಹೊಡಿತೀವ್ನಿ ಗೊತ್ತ
ಅದ್ಕೆ ಕವನವ ಗೀಚ್ತಿನಿ
ಟೈಮ್ಪಾಸ್ಗೆ
ನಿಮ್ಗೆ ಅದ ಸೆಂಡ್ಮಾಡ್ತಿನಿ ಆಗಾಗ್ಗೆ.

ಅಂದ್ಕೊಂಡ್ರ ಹಾಗಂತ
ಎಲ್ಲಾದ್ರು ನೀವೆಲ್ಲ
ಅದು ತಪ್ಪು ನಿಮ್ಮ ಭ್ರಾಂತಿ
ಭಾವನೆಯ ಲೋಕದಲಿ ಸ್ವರ್ಗ ಐತಿ.

ಆ ನಾಕ ದೊರಕದು
ಅದು ಎಷ್ಟೋ ಹಣ ಕೊಟ್ರು
ಲಭಿಸಿವುದು ನನ್ನ ಪಾಲ್ಗೆ
ವಂದಿಸುವೆ ಸಿರಿಗನ್ನಡಮ್ಮ ಬಾಳ್ಗೆ.

ಜಿ.ಎಂ.ಮಧುಕೇಶವ್
9686617840

- ಮಧುಕೇಶವ್

08 Dec 2017, 05:45 am

ಮನುಜಾ. ... .ನಿನಗೆ....ಕೊನೆ....ಎಂದು

ದ್ವೇಷವೆಂಬ ಬೆಂಕಿಯಲ್ಲಿ....
ಬಿದ್ದು ಒರಳಾಡುವ ಮನುಜ....
ಬರಿದು ಮಾಡುತ್ತೀರುವ....ಉರಿದು ಮುಕ್ಕಿ,
ಭೂದೇವಿಯ ಒಡಲ ಕಣಜ....
ಧಮ೯ದ ಹೆಸರಲ್ಲಿ....
ನಾಶಮಾಡುತ್ತೀರುವ....ಸಮಾಜ..
ಮನುಷತ್ವವನ್ನೇ....ಮೂರುಕಾಸಿಗೆ ಮಾರಿ...
ಮೆರೆಯುತ್ತೀರುವ.....ಅನುಜ....
ನೋಡಿಯೂ ....ಸುಮ್ಮನೆ....
ನಿಂತಿರುವೆಯಲ್ಲಾ....ಅಗ್ರಜ.....
ನಿನ್ನ ಮನದಲ್ಲೂ.... ಕೂತೀದೆಯಾ...
ಜಾತಿಯ ವಿಷ ಬೀಜ....

ನಿನ್ನ...ನೀಚ ಬುದ್ದಿಗೆ ಸಿಲುಕಿ..
ಮರೆಯಾಗಿದೆ..ನಿನ್ನೋಳಗಿನ...ಸ್ನೇಹ....
ನೆನೆದು ....ಸಂಬಂಧಗಳಿಗೆ, ನೀನು.... ಮಾಡಿದ.....ದ್ರೋಹ
ಹುಚ್ಚು....ಮಧದಿಂದ ಹೆಚ್ಚಾಗಿದೆ....ನಿನಗೆ....
ನಾನು...,ನನ್ನದು..ಎಂಬ ಮೋಹ....
ಜೋತೆಗೆ....ಹೆಣ್ಣು,ಹೊನ್ನು,ಮಣ್ಣು,
ಇವುಗಳ ಮೇಲೆ ಹೆಚ್ಚು ದಾಹ....
ನಿನ್ನ ಲೋಭಬುದ್ದಿಯ...ವಂಚನೆಗೆ..ಸಿಕ್ಕಿ,
ರಕ್ತ ಸಿಕ್ತಗೋಂಡಿರುವ ಅವೇಷ್ಟೋ..ವನ್ಯಜೀವಿಗಳ.....
ಅವಶೇಷಗಳ ಸಮ್ಮೂಹ...
ಕಾತರಿಸಿ..ಕಾಯುತ್ತಾ..ಕುಳಿತಿವೆ....
ವಂಚುಹಾಕಿ,ಕುಕ್ಕಿ..ಕುಕ್ಕಿ....ತಿನ್ನಲು...
ನಿನ್ನ....ಈ....ಜೀವಂತ ದೇಹ....
ನೀಜವಾಗಿಯೂ..ನೀನು ಬುದ್ದಿವಂತ ಪ್ರಾಣಿಯೇ.....ಎಂಬುದೆ ಪ್ರಕೃತಿಮಾತೆಯ ಸಂದೇಹ....
.

- Bhagya Girish

07 Dec 2017, 10:47 pm

ಮೊಗ್ಗು ಅರಳಿ ಹೂವಾಗಿ

ಮೊಗ್ಗು ಅರಳಿ ಹೂವಾಗಿ
ಹೂವು ಅರಳಿ ಹೆಣ್ಣಾಗಿ!!
ಹೆಣ್ಣು ಅರಳಿ ತಾಯಾಗಿ
ಆ ತಾಯೇ ಮಮತೆಗೆ ಹೆಸರಾಗಿ!!

ಮಾತಾಡುವ ಆ ತಾಯಿ
ಜೋಗುಳವ ತಾ ಹಾಡಿ!!
ಮಡಿಲಲ್ಲಿನ ತನ್ನ ಮಗುವ
ಮುದ್ದಿಸಲು ನಗು ಮೊಗವು!!

ಸಿರಿ ಸಂಪಿಗೆ ನಿನ್ನ ಕಂಪಿಗೆ
ಹೆಸರೇನೇ ಆ ತಾಯಿ!!
ಮನೆದೇವರೇ ಹರಿಕೆ ಇದೆ
ಆ ತಾಯಿಯ ನೀ ಕಾಯಿ!!

ನೋವನ್ನೇ ಹಡೆದಿರುವಳು
ಎಳೆ ಕಂದನ ತೆರವಾಗಿ!!
ಆ ತಾಯಿಗೆ ನೆರವಾಗಿರು
ಓ ದೇವನೇ ಸುಖವಾಗಿ!!

ಮಣ್ಣನಲ್ಲೂ ಕೂಡ
ಹುಣ್ಣಿಮೆಯನ್ನು ನೋಡ!!
ಆ ತಾಯ ಹೆಜ್ಜೆ ಗುರುತು
ಕಂಗಳಿಸಿ ಹೊಳೆವಾಗ!!

ಕಣ್ಣ ತುಂಬ ಕರುಣೆ ಬಿಂಬ
ತುಂಬಿ ತಂದಳು ಅವಳು!!
ಅವಳಿಗಾಗೇ ಹಗಲು ಇರುಳು
ದೇವನು ಇತ್ತ ನೋಡು!!

- ಪಿ.ಜಿ.ಜ್ಯೋತಿ

07 Dec 2017, 09:46 pm