Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಎರಡೂ ಕಾಲಿಲ್ಲದ ಅವಳ ಅಂದವ
ಕಂಡು ಆ ಕಾಲ್ಗೆಜ್ಜೆಯು ನಿಟ್ಟುಸಿರುಬಿಟ್ಟಿತಂತೆ
ದೇವರ ಪಾದವ ಸೇರಲಾಗದ
ಬೇಲಿ ಹೂವಂತೆ ನಾನಾದೆನೆಂದು
ಹುಣ್ಣಿಮೆ ರಾತ್ರಿಯಲಿ ನನ್ನವಳ ಗೆಜ್ಜೆ ಸದ್ದು
ದೇವತೆ ಕೆಳಗಿಳಿದು ಭೂರಮೆಗೆ ಬಂದಂತೆ
ಆದರೆ ಅಮಾವಾಸ್ಯೆ ರಾತ್ರಿಯಲಿ ಅವಳು ನಡೆದರೆ
ಅದೇ ಘಲ್ ಘಲ್ ಮೋಹಿನಿಯು ಕಾಡಿದಂತೆ
ಗೆಜ್ಜೆ ಕಟ್ಟಿ ಅವಳು ಕುಣಿವಾಗ
ಗರಿ ಗೆದರಿ ಕುಣಿವ ನವಿಲು ಕೂಡ
ಕೊಂಚ ನಾಚಿ ದೂರ ನಿಂತು
ಮರೆಯಲಿ ನೋಡುತ ಅಸೂಯೆಯಲಿ
ಆ ಕುಣಿವ ಹೆಣ್ಣು ನಾನಾಗಬಾರದೆ ಎಂದಿತಂತೆ
- ಶ್ರೀಕಾವ್ಯ
08 Dec 2017, 11:56 pm
ಮನಸೊಳಗೆ ನೆನಪುಗಳ ಮಳಿಗೆ ತೆರೆದಿದೆ ಗೆಳತಿ
ಹೃದಯವು ಕತ್ತಲಲಿ ಅಳುವ ತಬ್ಬಿ ಕುಳಿತಿದೆ ಗೆಳತಿ
ನಮ್ಮಿಬ್ಬರ ಸಂಗಮ ಜಾಗ ಹುಡುಕಿ ಬಂದ ನನಗೆ
ನಿನ್ನ ಜಾರುವ ಮುಂಗುರುಳ ನೋಡುವ ಕಾತುರವಾಗಿದೆ ಗೆಳತಿ
ನಮ್ಮ ಕಣ್ಣ ಭಾಷೆಗೆ ಅಂದು ಮೌನವೇ ಮಾತಿನ ಪ್ರತಿರೂಪ
ನಿನ್ನ ಕಣ್ಣ ಸೆಳೆತವಿರದೆ ಇಂದು ಮಾತು ಮೌನವಾಗಿದೆ ಗೆಳತಿ
ನಿನ್ನ ಅಧರದ ಚೆಲುವು, ಮಡಿಲಿನ ಒಲವು ಇಲ್ಲವಾದ ಮೇಲೆ
ಕನಸುಗಳೆಲ್ಲ ಮಸಣದಲಿ ಮಣ್ಣ ಸೇರಿದಂತಾಗಿದೆ ಗೆಳತಿ
ನೀನೆ ನನ್ನ ಬದುಕಿಗೆ ಒಡತಿ, ನೀನಿರದೆ ನನಗೆ ಉಳಿವಾದರು ಎಲ್ಲಿ
ನೀನು ಈ ಉಸಿರ ಉಳಿಸಲಾದರು ಒಮ್ಮೆ ತಿರುಗಿ ಬರಲಾಗದೆ ಗೆಳತಿ
- ಶ್ರೀಕಾವ್ಯ
08 Dec 2017, 11:55 pm
ಎನ್ನ ಮನೆಯಂಗಳದರಳಿದ ಸುಮವಿಂದು
ಸೇರುತಿದೆ ಇನ್ನೊಂದು ಮನೆಯ ಪೂಜೆಗೆಂದು
ಬಾಡದಿರಲಿ ಆ ಹೂವಿನ ನಗುವು ಎಂದೆಂದೂ
ಬೇಡುವೆ ಆ ದೇವರ ಅನುದಿನ ಕಾಪಾಡೆಂದು
ಹೆತ್ತವರಿರದ ಮುದ್ದು ಹೆಣ್ಣು ಕೂಸಿಗೆ
ನನ್ನ ಮಡಿಲೇ ಬೆಚ್ಚನೆಯ ಹಾಸಿಗೆ
ಸಾಕಿದೆನವಳ ತೆಕ್ಕೆಲಿಟ್ಟು ತಾಯಿಯ ಹಾಗೆ
ಅವಳೇ ಬೆಳಕು ಈ ಅಣ್ಣನ ಕತ್ತಲ ಬಾಳಿಗೆ
ನನ್ನ ಕೈ ಹಿಡಿದು ನಡೆಯುತ್ತಿದ್ದ ಕೂಸಿಂದು
ಹೊರಟಿದೆ ಇನ್ನೊಂದು ಮನೆಯ ಬೆಳಗಲೆಂದು
ಕಣ್ಣೀರ ಕಡಲೆ ಸ್ವಂತವಾಗಿದೆ ನನಗಿಂದು
ಅವಳ ನಗುವಿರದ ಮನೆಯ ನೆನೆನೆನೆದು
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆಂದು
ನೊಂದು ದೂರಾಗಬೇಡ ಕಂದ ನೀನೆಂದು
ನೀ ಕರೆದ ಮರ ಘಳಿಗೆ ನಾನಿರುವೆ ನಿನ್ನ ಮುಂದೆ
ನಿನ್ನ ಸುಖ ದುಃಖಗಳಿಗೆ ನಾನಾಗಿ ಬರುವೆ ತಂದೆ
- ಶ್ರೀಕಾವ್ಯ
08 Dec 2017, 11:53 pm
ಸದಾ ನನ್ನ ಕಣ್ಣ ತುಂಬಾ
ಕಂದ ಇರಲಿ ನಿನ್ನದೆ ಬಿಂಬ
ಕೊಡುವೆ ನನ್ನ ಅಪ್ಪುಗೆ ಆಸರೆ
ಬಿಡಿಸಲು ನಿನ್ನೆಲ್ಲ ಬಾಳಿನ ಸೆರೆ
ನೀ ಬಯಸಿದ್ದೆಲ್ಲ ಕೊಡಿಸುವಾಸೆ ಚಿನ್ನ
ಅದಾಗದಿದ್ದರೆ ಮನ್ನಿಸಿ ಬಿಡು ಎನ್ನ
ನೋಡಬೇಡ ಸೋತೋದ ನನ್ನ ಕಣ್ಣೀರನ್ನ
ಕಸಿದು ಬಿಡಬಹುದು ಅದು ನಿನ್ನ ನಗುವನ್ನ
ಸಿಂಗರಿಸುವೆ ನಿನ್ನ ಇಟ್ಟು ಕಾಡಿಗೆ ದೃಷ್ಟಿಬೊಟ್ಟು
ಕಲಿಸುವೆ ನಿನಗೆ ಜೀವನದ ಎಲ್ಲ ಒಳಗುಟ್ಟು
ನೀ ಏರಬೇಕು ಬಾಳಿನ ಉತ್ತುಂಗದ ಶಿಖರ
ಯಾರ ಮುಂದೆಯೇ ಬಾಗಿಸದೆ ನಿನ್ನ ಶಿರ
ಪುಟ್ಟ ಪುಟ್ಟ ಕಾಲಿಗೆ ಹಾಕುವೆ ಗೆಜ್ಜೆ
ಇಡಲಿ ಎಂದು ದಿಟ್ಟ ಮಾದರಿ ಹೆಜ್ಜೆ
ಸಂತಸದೊನಲ ಹರಿಸಲಿ ಅಳಿಸಿ ಒಡಕು
ನೀನಾಗದಿರಲೆಂದು ಲೋಕಕೆ ಕೆಡುಕು
- ಶ್ರೀಕಾವ್ಯ
08 Dec 2017, 11:53 pm
ಅಪ್ಪನ ಸಿಹಿ ಮುತ್ತು
ಗುರುವಿನ ಗೌರವದ ಗತ್ತು
ಮಣ್ಣ ಸೇರಿ ಹೋಗಿವೆ ಸತ್ತು
ಯಾರ ನಂಬುವುದೆಂದು ತಿಳಿಯದಾಗದ ಹೊತ್ತು
ಸಿಲುಕಿದರೆ ಕಾಯುವ ಕೈಯೆ ಕಾಮದ ಮಾಯೆಗೆ
ಯಾವ ಸ್ಪರ್ಶವೂ ಹಿತವಿರದು ಮೈಯಿಗೆ
ಏನು ಅರಿಯದ ಎಳೆ ಕಂದನ ಬಿಡರು
ಅರಳುವ ಮುನ್ನವೆ ಕತ್ತಲಿಗೆ ನೂಕುತಿರುವರು
ಕಾಪಾಡ ಬೇಕಿರುವಣ್ಣನೆ ಕಾಡುವ
ದೇಹದಾಸೆಗೆ ಗೆಳೆಯನೆ ಸೋತುಬಿಡುವ
ಗುರಿ ತೋರಿ ಬುದ್ಧಿ ಕಲಿಸ ಬೇಕಿರುವವ
ಕೂಸೆಂದು ನೋಡದೆ ಕಾಮಣ್ಣನಾಗುತಿರುವ
ಎತ್ತಪ್ಪನ ಕಂಡರೆ ಎದುರುವ ಸ್ಥಿತಿ
ಮುದ್ದು ಮಾಡುವಣ್ಣನೆಂದರೆ ಭೀತಿ
ಗೆಳೆಯನಿಗೂ ತೋರಲಾಗದೆ ಪ್ರೀತಿ
ಅವಳ ಮನದೊಳಗುಟ್ಟುವ ನೋವ ಹೇಳುವುದಾವ ರೀತಿ
ಎಳೆಯ ಕಂದನಲೂ ಕಾಣುವುದಾದರೆ ಕಾಮ
ಅವನಾಗಲಾರ ಕಾಡು ಪ್ರಾಣಿಗೂ ಸಮ
ಕರುಳ ಕುಡಿ, ಬಗಲಿಗೆ ಬಿದ್ದವಳೆಂದು ತಿಳಿಯಲಾಗದ ಮೇಲೆ
ಅವನಿಗಿರಬಾರದು ಈ ಭೂಮಿಯ ಮೇಲೆಯೆ ನೆಲೆ
ಅಂತವರ ಚಿತ್ರಹಿಂಸೆ ಕೊಟ್ಟು ಕೊಂದರು ಬರದು ಪಾಪ
ನರಕ ಯಾತನೆ ತೋರಿದರೆ ಎಚ್ಚರಿಸಿಕೊಳ್ಳುವರೇನೊ ಸ್ವಲ್ಪ
ಆ ಹೆಣ್ಣೆ ಈ ಜಗದ ಜನನಕೆ ನೋವನುಂಗಾದಳು ಆದಿ
ಈಗ ಅವಳ ಮಾಡಬೇಡಿ ಈ ಜಗದಂತ್ಯಕಾಡುವಂತೆ ನಾಂದಿ
- ಶ್ರೀಕಾವ್ಯ
08 Dec 2017, 11:25 pm
ದುಂಬಿ ಜೇನ ಹೀರಿತೆಂದು
ಹುವಿನ ಮದ್ಯೆ ಕಟ್ಟಿ ಹಾಕಿದರೆ ಅದು ಉಳಿಯುವುದೆ ಅದು ಹಾರಿ ಹೋಗಿ ಜೇನು ಗೂಡ ಕಟ್ಟಿದರೆನೆ ಚೆಂದ.....
ಕುಣಿವ ನವಿಲು ಅಂದ ಎಂದು
ಅದರ ಕಾಲು ಮುರಿಯುವುದೆ
ಅದು ಕುಣಿಯುತ್ತಿದ್ದರೆನೆ ಚಂದ.....
ಅರಳೂ ಮಲ್ಲಿಗೆ ಅಂದ ಎಂದು
ಗಿಡದಲ್ಲೇ ಒಣಗಿಸುವುದೆ
ಅದು ಮುಡಿಗೇರಿದರೇನೆ ಅಂದ....
ಹರಿವ ನದಿ ನೋಡಲು ಸೋಬಗೆಂದು
ಅಡ್ಡಲಾಕಿದರೆ ಹೇಗೆ ಅದು
ನದಿಯಾಗಿ ಹರಿದರೇನೆ ಚೆಂದ....
ನೋಡಲು ಅಂದ ಎಂದು ಗಿಳಿಯ
ಬಾಂಗಾರದ ಪಂಚರದಲ್ಲಿ ಇಟ್ಟರೇನು
ಅದು ರೆಕ್ಕೆ ಬಿಚ್ಚಿ ಹಾರಾಡಿದರೇನೆ ಅಂದ....
ಹಾಡುವ ಕೋಗಿಲೆಯ ಧ್ವನಿ ಕಟ್ಟಿದರೆನು
ಅದು ಹಾಡಿದರೇನೆ ಅಂದ....
- ರಾಗಸಿರಿ....
08 Dec 2017, 09:48 pm
ನಾಕಂಡ ಕನಸು ಅಂದು
ತುಸು ನನಸಾಗಿದೆ ಇಂದು.
ಪಿಸು ಮಾತಾಗಿ. ಮಾತು ಮಧುರವಾಗಿ.
ಮನಸು ಮಗುವಾಗಿರಲಿ ಎಂದೆಂದೂ
- Nagaraj
08 Dec 2017, 09:21 pm
ದೊಡ್ಡವರ ತಪ್ಪು ದೊಡ್ಡದಾಗಿ ಪ್ರಕಟವಾಗುತ್ತದೆ
ಅದೇ ತಪ್ಪು ನಾವು ಮಾಡಿದರೆ ಲೆಕ್ಕಕ್ಕಿಲ್ಲ
ತಪ್ಪಿಗೂ ದೊಡ್ಡಮನುಷ್ಯರು ಸಾಮಾನ್ಯರು ಎಂಬ ಬೇದ
ದೊಡ್ಡವರ ಚಿಕ್ಕ ಒಳ್ಳೆತನ ದೊಡ್ಡದಾಗಿ ಪ್ರಕಟ
ನಮ್ಮ ದೊಡ್ಡ ಒಳ್ಳೆಯತನ ಕಾಲಿಗೆ ಕಸ
ಒಳ್ಳೆಯದಕ್ಕೂ ದೊಡ್ಡಮನುಷ್ಯರು ಸಾಮಾನ್ಯರು ಎಂಬ ಬೇದ
ತಪ್ಪಿಗೂ ದೊಡ್ಡವರೇ ಬೇಕು ಒಳ್ಳೆಯದಕ್ಕೂ ದೊಡ್ಡವರೇ ಬೇಕು
- ನಾಗರಾಜ್
08 Dec 2017, 08:21 pm
ಹುಸಿಯಲ್ಲ ನಿಜವಾಗ್ಲು
ನೀ ನನ್ನ ಸ್ವಪ್ನನದಲಿ
ಬಂದಿದ್ದೆ ಕಳೆದ ರಾತ್ರಿ
ಚಂದಿತ್ತು ಒಲವ ಜಾತ್ರಿ.
ನೀ ಬೇಕು ಎಂದೆನ್ನ
ಹಿತವಾಗಿ ಕೇಳಿದೆ
ಬಣ್ಣಾದ ನವಿಲೂಗರಿ
ಕೈ ಚಾಚಿ ಬೆರಳು ತೋರಿ.
ನಾ ನಿನ್ನ ರೇಗಿಸಲು
ಅದು ಬೇಡ ಎಂದೆನಲು
ನೀ ಮುನಿದೆ ನನ್ನ ಮೇಲೆ.
ನೋಡಲದು
ಸೊಗಸು ಕೇಳೆ.
ಮುನಿಸಲ್ಲು ನೀ ಚಂದ
ಅದಕಾಗಿ ನಾ ನಿನ್ನ
ಆಥರ ಸತಾಯಿಸಿದೆನು
ನಿನ್ನೊರತು ಯಾರತ್ರ
ನಾ ಹೀಗೆ ಆಡುವೆನು
ತಪ್ಪಿದ್ರೆ ಕ್ಷಮಿಸೆ ನೀನು.
ಎಂದು ನಾ ಕೇಳಲು
ಅಳುವೊಡನೆ ನೀ ನಗಲು
ಅಪ್ಪಿದೆ ನನ್ನನಲ್ಲೆ
ನನ್ನ ನೀ ಒಬ್ಳೆ ಬಲ್ಲೆ
ಈ ರೀತಿ ಸಾಗುತಿಹ
ಕನಸಿನಲಿ ಮಜವಿತ್ತು
ಅಷ್ಟರಲಿ ಸೂರ್ಯ ಬಂದ.
ಕಣ್ಬಿಟ್ಟಿ ಕೋಳಿಗಳ ಕೂಗಿನಿಂದ.
- ಮಧುಕೇಶವ್
08 Dec 2017, 05:09 pm
ಕಲ್ಪನೆಯ ತವರುರು ನಮ್ಮನೆ
ಕನಸುಗಳ ಮರೆಯೋರು ನಮ್ಮನೆ
ಅರಿಯೋರು ಯಾರಿಲ್ಲ ನಮ್ಮನೆ
ಮರೆತು ದೂರಾದರೆ ನಮ್ಮನೆ
ನಗುವ ಹೋ ಮಾಲೆ ನಮ್ಮನೆ
ಹರಿವ ಸಿರಿಯುರು ನಮ್ಮನೆ
ಮುಗಿಲ ಮಳೆಯುರು ನಮ್ಮನೆ
ಹೋಳೆವ ಮುಂಗಾರು ನಮ್ಮನೆ
ಹಸಿರ ದಿಬ್ಬಣ ನಮ್ಮನೆ
ಹಕ್ಕಿಗಳ ತವರುರು ನಮ್ಮನೆ
ಪ್ರಾಣಿಗಳ ಗಣಿಯುರು ನಮ್ಮನೆ
ಮುತ್ತಿನಂಗಳ ನಮ್ಮನೆ
ಕಾಣದ ಕಡಲುರು ನಮ್ಮನೆ
ಚೆಂದುಳ್ಳಿ ತೋಟ ನಮ್ಮನೆ
ಬಂದುಗಳ ನೆಲೆಯುರು ನಮ್ಮನೆ
ಅರಸಿ ಬಂದವರು ನಮ್ಮನೆ.......
ಮರೆಯದೆ ಇರುವರೆ ಸುಮ್ಮನೆ
ನಮ್ಮನೆ ನಮ್ಮನೆ ನಮ್ಮನೆ.......
- ರಾಗಸಿರಿ....
08 Dec 2017, 04:21 pm