Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕೊರೆವ ಚಳಿಯಲ್ಲಿ

ಬೆಳಗಿನ ಮಂಜಲ್ಲಿ ಮೈ ಕೊರೆವ ಚಳಿಯಲ್ಲಿ ನಿಂತಿರುವೆ ಏತಕೆ ಮಾತಿಲ್ಲದೆ ಬೆಡಗಿ ಜೀನ್ಸು ಪ್ಯಾಂಟಿನ ಹುಡುಗಿ.

ಮಲ್ಲಿಗೆ ಘಮವಿಲ್ಲ ಸುಗಂಧ ದ್ರವ್ಯ
ವಾಸನೆ ಬಿಡುತ್ತಿಲ್ಲ ,
ಮಾತಿನ ಗಲಭೆ ಇಲ್ಲ ಗುಂಗುರಾದ ಮುಂಗುರುಳು ಕೈಗೆ ಕೈ ಉಜ್ಜಿ ಕೆನ್ನೆಗಂಟುತಿರುವ ಬೆರಳು.

ನೈಲ್ ಪಾಲಿಶ್ ಹಿಂದೆ ಅಡಗಿರುವ ಪಾದಗಳು ಅದನ್ನು ಮುಚ್ಚಿಡುತ್ತಿರುವ ಚಪ್ಪಲಿಗಳು,
ಕಾಜಲ್ ಹಚ್ಚಿದ ಕಣ್ಣು ನೋಡಿ ನಾನಾದೆ ನಿನ್ನ ಹೊಗಳಿ ಬರೆಯುವ ಪೆನ್ನು.

ಕೆನ್ನೆಕುಳಿ ಮುದ್ದಾಗಿ ನಾಚುತ್ತಿದೆ
ಮರಳಿ ಮರಳಿ ಈ ತಂಪಾದ ಗಾಳಿಲಿ,
ಮೊಣಕಾಲು ದಾಟದ ಟಾಪು
ಬಿಳಿಯಾದ ಹೂಗಳಿಂದ ಆಕರ್ಷಿಸುವ ನಿನ್ನ ಶೇಪು.

ಜನರಿಲ್ಲದ ಖಾಲಿ ಖಾಲಿ ರಸ್ತೆ,
ಟಿ ಅಂಗಡಿಯಲ್ಲಿ ರೆಡಿಯಾಗಿದೆ
ಬಿಸಿ ಬಿಸಿ ಕಾಫಿ ಬನ್ನು ನಿನ್ನ ಮೇಲಿಂದ
ಚದರುತ್ತಿಲ್ಲ ನನ್ನ ಕಣ್ಣು,
ಬೇಕೆನೆ ನಿನಗ ತಿನ್ನಲು ಬಗೆ ಬಗೆಯ ಹಣ್ಣು.

- ಚುಕ್ಕಿ

10 Dec 2017, 07:20 pm

ಏನೋ ಒಂಥರ

ಪ್ರತಿ ಬಾರಿಯು ನಿನ್ನನು ನೋಡಿದ ಕ್ಷಣ
ಮನದಲ್ಲಿ ತಿಳಿಯದ ರೋಮಾಂಚನ
ತಂಪಾದ ಗಾಳಿಯು ಬೀಸಿದಾಗಲೆಲ್ಲಾ
ಬರಿ ನಿನ್ನದೆ ಸಿಹಿ ನೆನಪುಗಳು

ದಿನಾಗಲೂ ಸೂರ್ಯ ಮುಳುಗುವಾಗ
ಮನದಲ್ಲಿ ಏನೋ ತಿಳಿಯದ ಭಯ
ಮುಂಜಾನೆ ಸೂರ್ಯ ಹುಟ್ಟಿದಾಗ
ಮೊದಲು ನೀನೆ ಕಾಣಬೇಕೆಂಬ ತವಕ

ಬೇರೆಯವರ ಜೊತೆ ನೀ ಮಾತಾಡಿದಾಗ
ಕೋಪಗೊಂಡಿತ್ತು ನನ್ನ ಮನವಾಗ
ಮನವನ್ನು ಕೇಳಿದೆ ಅದು ಏನೆಂದು?
ಹೇಳಿತ್ತು ಅದು ಪ್ರೀತಿ ಯ ಮೊದಲ ಹಂತವೆಂದು

ರೋಮಿಯೋ ಜೂಲಿಯೆಟ್‌ರಂತೆ
ಇರಬಾರದು ನಮ್ಮ ಪ್ರೀತಿ
ಅವರಿಬ್ಬರಿಗೂ ಇರಲಿಲ್ಲ
ತಾಳ್ಮೆಯೆಂಬ ನೀತಿ

ನಮ್ಮಿಬ್ಬರ ಪ್ರೀತಿ ಕೇಳುವುದಕ್ಕೆ ಹಾಗೂ
ನೋಡಲು ಇರಬೇಕು ಹೊಸದಾಗಿ
ನಮ್ಮ ಪ್ರೀತಿಯು ಮಾಡಬೇಕು
ಆಕಾಶ ಭೂಮಿ ಹತ್ತಿರವಾಗಿ!!!!!

- manu

10 Dec 2017, 07:12 pm

ಅವಳ ಭೇಟಿಗಾಗಿ

ಬಾನಲಿ ಹಾರುವ ಬಣ್ಣದ ಹಕ್ಕಿಗಳೇ.......
ಕಾಯುತಿರುವಳು ನನ್ನವಳು ಈ ಘಳಿಗೆ!....
ರೆಕ್ಕೆ ಪಡೆಯುವ ಆಸೆ ನಿಮ್ಮಂತೆ ನನಗೆ................
ಹೋಗಲು ಹಾರಿಕೊಂಡು ನನ್ನವಳ ಬಳಿಗೆ!.....
ಅವಳ ಹೂ ನಗೆಗೆ......
ಸಾಗುತಿರುವೆ ನಾ ಮುಗಿಲ ಕಡೆಗೆ.
ನಮ್ಮ ಈ ಮೊದಲ ಭೇಟಿಗೆ.......
ಬರಲಿವೆ ಹಕ್ಕಿಗಳು ಮೂಕ ಸಾಕ್ಷಿಗೆ.
ಕಾಡಿಗೆಯೂ ನಾ ನಿನ್ನ ಕಣ್ಣ ರೆಪ್ಪೆಗೆ.....
ಕಂಬನಿ ಸುರಿಸಿ ತಳ್ಳದಿರು ದೂರದ ಅಂಟಿಗೆ.
ಮನದ ಪುಟದಿ ಬರೆದ ಈ ಕವಿತೆಗೆ......
ನಾಚಿ ತಲೆ ಬಾಗಿದೆ ಎಲ್ಲಾ ಹೂ ,ಬಗೆ.
ಈ ನಿನ್ನ ಮರು ಭೇಟಿಗೆ........
ಕಾದು ಕುಳಿತಿರುವೆ ಮನೆಯ ಬಾಗಿಲಿಗೆ.

- ಪೃಥ್ವಿ( ಪಿ.ಕೆ)

10 Dec 2017, 06:35 pm

ಅಂಗುಲೀಮಾಲ-ಕಥನ ಕವನ

ಅವನು ರಾಕ್ಷಸನಿಗೂ‌ ಸವಾಲೆಸುಯುವ ಕ್ರೂರ ನರ
ಕೊರಳಲಿ ಅವನಿಗೆ ಸಿಕ್ಕಿ ಸತ್ತವರ ಬೆರಳುಗಳ ಮಾಲೆ
ತಿಳಿಯದು ಅದು ಅಲಂಕಾರಕ್ಕೊ ಕೊಂದವರ ಲೆಕ್ಕಕ್ಕೊ

ಕಣ್ಣುಗಳಂತು ಬೆಂಕಿಕಾರುವ ಕೆಂಡದುಂಡೆ
ಆ ಅಗ್ನಿಯು ಸುಡದೆ ಉಳಿಸಬಹುದೇನೊ ಅವನಲ್ಲ
ಪ್ರೀತಿ ಪ್ರೇಮದ ಕಿಂಚಿತ್ತು ಅರಿವಿರದ ಕಲ್ಲು ಮನಸು

ನರಬಲಿಗೆಂದು ಕಾಯುವುದೇ ಅವನಿಗೆ ನಿತ್ಯ ಕಾಯಕ
ಕಂಡವರ ಕೊಂದು ಗಹಗಹಿಸಿ ನಗುವುದಷ್ಟೆ ಅವಶ್ಯಕ
ನೆಲಕರಿದ ಬಡಪಾಯಿ ಜನರ ರಕ್ತದ ವಾಸನೆಯೆ ಅವನಿಗೆ ಉಪಾಸನೆ

ಒಮ್ಮೆ ಬಂದನೊಬ್ಬ ಅವನೆದುರು ನಿತ್ಯ ಹಸನ್ಮುಖಿ
ಸಾಧಾರಣ ಅಂಗಿಯವ,‌ ಖಾಲಿ ಖಾಲಿ ಕೈಯವ
ಕಂಡವರೂ ಹಾಗೆ ಧಿಗ್ಬ್ರಾಂತರಾಗಿ ಮುಗುಳ್ನಗುವ ಸೂಸುವಂತವ

ಹಾಗೆ ಬಂದವನ ಬಲಿ ಪಡೆಯುವಾಸೆ ನರ ರಾಕ್ಷಸನಿಗೆ
ಈ ದೇಹವು ಒಂದು ದಿನ ಖಾಲಿಯಾಗಲೆಬೇಕೆಂದರಿತವ ಖಾಲಿ ಕೈಯವ
ಇನ್ನೆಲ್ಲಿ ಬರಬೇಕವನಿಗೆ ಭಯ, ನೋವು, ಜೀವಕ್ಕಾಗಿ ಹೌಹಾರಿ ಪರದಾಟ ಹಾರಾಟ

ಸಾವಿನ‌ೂರಿಗೆ ಜೀವವಟ್ಟುವ ಯಮನ ಧೂತ‌‌ ನಾನೆಂದ ಕ್ರೂರಿ
ಜೀವವಿರದೆ ತಣ್ಣಗಾದ ದೇಹದ ಬೆರಳುಗಳು‌ ಸೇರಲಿ ಎನ್ನ ಕೊರಳ ಇಂದು ಎಂದು ನಕ್ಕ
ನೆಲವೂ ಹೆಪ್ಪುಗಟ್ಟಿದ ರಕ್ತದ ಕಮಟ ವಾಸನೆಯ ನೆನೆದು ಕಂಪಿಸುವಾಗೆ

ಅತ್ತ ನಿಂತ ಖಾಲಿ ಕೈಯ ತುಂಬು ಮನಸಿನವ ‌ಕೇಳುತ್ತಲಿದ್ದ
ಇತ್ತ ಕಡೆ ಸಿಡುಕುತ್ತಲೆ ಇದ್ದ, ಗದರುತ್ತಲೆ ಇದ್ದ ನರ ರಾಕ್ಷಸ
ಅತ್ತ ಅವ ನಗುತ್ತಲೇ ಇದ್ದ ಅಳುಕಲೂ‌ ಇಲ್ಲ ಕದಲಲೂ ಇಲ್ಲ

ಮಿತಿ ಮೀರಿತ್ತು ಎದುರಿಗೆ ನಗುತ ನಿಂತವನ ಕಂಡು ಕೋಪ
ಎತ್ತಿಯೇ ಬಿಟ್ಟ ಆಯುಧ ಬಲಿಯಾಗು ನೀನೆಂದು
ಇವ ನಗುತ್ತಲೆ ಹೇಳಿದ ಸಾಕ ನನ್ನ ಜೀವ ಈ ಹತ್ತು ಬೆರಳು

ಬೀಸಿತ್ತು ಕತ್ತಿ, ಗಾಳಿ ಸೀಳಿ ಕೊರಳತ್ತ ಇನ್ನೇನೊ ನೆರಕ್ಕುರುಳಬೇಕು ಶಿರ
ಹಸನ್ಮುಖಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿಯೇ ಬಿಟ್ಟ ರಾಕ್ಷಸ
ಭಯವಿಲ್ಲ, ನೋವಿಲ್ಲ , ಚೀತ್ಕಾರವಿಲ್ಲ ಹರೇ ನಗುವೂ ಕಿಂಚಿತ್ತು ಮಾಸಿಲ್ಲ

ಸೋತ, ಸೋತು ಹೋಗಿಯೇ ಬಿಟ್ಟಿದ್ದ , ನೆಲಕ್ಕೆ ಮಂಡಿಯೂರಿದ್ದ
ಜೀವಕ್ಕಾಗಿ ಅವನೆದುರು ಬೇಡುವವರ ಕೊಂದು ವಿಕೃತ ಖುಷಿ ಪಟ್ಟವ
ಆಶ್ಯರ್ಯಕ್ಕೊ, ನನ್ನೆದರು ಸಾವಿಗೂ ಹೆದರದವನಿರುವನೆಂದೋ, ಇಲ್ಲ ಜೀವದ ಬೆಲೆ ತಿಳಿದೋ

ಬೆಂಕಿಯುಂಡೆ‌ ಕಣ್ಣು, ಹೊತ್ತಿ‌ ಉರಿಯುತ್ತಿದ್ದ ಮನಸು ತಣ್ಣಗಾಗಿತ್ತು
ಯಾರಿವನು ‌ನನ್ನನ್ನೂ ಮುಟ್ಟದೆಯೂ ನೆಲಕ್ಕುರುಳಿಸಿದವನು
ಕೇವಲ ಪ್ರಶ್ನೆಗಳು, ಇನ್ನೂ ಉಳಿದದ್ದು ಅವರಿಬ್ಬರ ತಣ್ಣನೆಯ ಸಂವಾದ

ಅತ್ತ ಹಸನ್ಮುಖಿ‌ ನಿತ್ಯ ಸುಖಿ ಖಾಲಿ ಕೈಯ ತುಂಬಿದ ಹೃದಯದ ಬುದ್ಧ ನಿಂತಿದ್ದ
ಬುಸುಗುಡುವ ಉಸಿರಿಗೆ ಸುಡುತ್ತಿದ್ದ ಗಾಳಿಯೂ ತಣ್ಣಗೆ ಬೀಸುತ್ತಿದೆ ಎನಿಸತೊಡಗಿತವನಿಗೆ ಈಗ
ಎಂದೂ ಯಾರ ಮಾತನು ಕೇಳದೆ ಸ್ತಬ್ಧವಾಗಿದ್ದ ಕಿವಿಗಳು
ಚೇತರಿಸಿ‌ ನಿಮಿರಿ ನಿಂತಿದ್ದವು ಆಲೀಸಲು

ಶಾಂತಿಪ್ರಿಯ , ನಿತ್ಯ ಸರ್ವಜನ ಪ್ರೇಮಿ ಮಾತಾನಾಡುತ್ತಲಿದ್ದ
ಇವ ಕೇಳುತಲೆ‌ ಇದ್ದ, ಅವನ ಮನಸಿಗಂಟಿದ ದುಷ್ಟತನದ ಪೊರೆಯ ಕಳುಚುತ್ತ ಇದ್ದ
ಮನಸು ಹಗುರವಾದಂತೆನಿಸುತ್ತಿದೆ, ಲೋಕದೊಳಗೆಲ್ಲೊ ದೊರೆಯದ ಹರುಷ ಆವರಿಸಿದಂತಾಗಿ ಪುಳಕಿನಾಗುತ್ತಿದ್ದ

ಬುದ್ಧನೇಳಿದ ಮಾತುಗಳಿಗೆಲ್ಲ ಒಪ್ಪಿ ಶಾಂತಿ ಬಯಸಿ ನಿಂತಿದ್ದ
ಜೀವಗಳ ಕೊಂದು ನಗುತ್ತಿದ್ದವ, ತನ್ನೊಳಗಿನ‌ ರಾಕ್ಷಸನ ಕೊಂದು ನಗುತ್ತಿದ್ದ
ಪ್ರೀತಿ,‌ಪ್ರೇಮ ಕರುಣೆಗಳ ಮನಸೊಳಗೆ ತುಂಬಿಕೊಂಡಿಯೇ ಬಿಟ್ಟಿದ್ದ
ಜಗವೇ ನಿಬ್ಬೆರಗಾಗುವ ಹಾಗೆ ಕೆಂಡದುಂಡೆಯ ಕಣ್ಣಲ್ಲಿ‌ ನಗುವ ತುಂಬಿ ಸುಖಿಯಾಗಿ ನಿಂತೇ ಬಿಟ್ಟಿದ್ದ ಅಂಗುಲೀಮಾಲ.

- ಶ್ರೀಕಾವ್ಯ

10 Dec 2017, 04:22 pm

ಅರೆ ಅರೆ

ಅರೆ ಅರೆ ಅರೆಗಳಿಗೆ ಬಂದು ಹೋದರೆ ಹೋಗುವುದೇನು ನಿನ್ನ ಗಂಟು,
ನನ್ನಲ್ಲಿ ನಿನ್ನ ಉಕ್ಕಿ ಹರಿಯುವಷ್ಟು ಪ್ರೀತಿ ಉಂಟು, ಒಮ್ಮೆ ಕಂಡರೆ ಇನ್ನು ಬಲವಾಗುವುದು ನಮ್ಮ ನಂಟು.

ಮುಂದಿನ ಜನ್ಮದಲ್ಲಿ ಸಿಕ್ಕಿ ಮಾಡುವುದೇನುಂಟು
ಈ ಜನುಮ ಕೊನೆವರೆಗೂ ಜೊತೆಗಿರಸಲು
ಸಾಕು ಮೂರು ಗಂಟು,
ನಿನ್ನನ್ನ ರಾಣಿಯಂತೆ ನೋಡಿಕೊಳ್ಳುವ
ಅರ್ಹತೆ ನನ್ನಲ್ಲುಂಟು.

ಕುಟ್ಟಿ ಪುಡಿ ಮಾಡದಿರಿ ಕಂಡ ಕನಸನಂತು
ನೀ ಕೊಡುವ ಪ್ರೀತಿಗೆ ನಿನಗೊಂದು
ಚೆಲುವಾದ ಬಹುಮಾನ ಉಂಟು,
ಎಂದೆಂದೂ ನಿನ್ನೊಡನೆಯೆ ನನ್ನ ಜೀವನದ
ಮನಸು ಮುನಿಸುಗಳ ಅಂಟು.

- ಚುಕ್ಕಿ

10 Dec 2017, 02:47 pm

ನಮ್ಮೂರ ವನ

ನಮ್ಮೂರ ವನ ಅದೆಲ್ಲಾ ಈಗ ಬನ ಬನ
ಕಾರಣ ಮಳೆರಾಯನ ಕಾಲಹರಣ
ಜನರ ಕಷ್ಟಗಳ ಕದನ
ಮುಟ್ಟುತಿದೆ ಗಗನ
ಮಳೆರಾಯ ಈ ನಿನ್ನ ತುಂಟತನ
ಹಾಳು ಮಾಡುತ್ತಿದೆ ಭಾರತಾಂಬೆಯ ಸೌಂದರ್ಯತನ
ಬಂದರೆ ನೀನು ಸಂತಸ ರೈತರ ಮನ
ಬರದಿದ್ದರೆ ಆಗುವುದು ನಿನ್ನೇ ನಂಬಿ ಕುಳಿತವರ ಮರಣ
ಈ ನಮ್ಮ ಕೂಗು ಮುಟ್ಟಲಿ ನಿನ್ನ ಮನ
ಮುಟ್ಟಿ ಹಸಿರಾಗಲಿ ನಮ್ಮ ವನ
ಕುಣಿದು ನಲಿದಾಡಲಿ ನಮ್ಮ ಜನ.

- ಪೃಥ್ವಿ( ಪಿ.ಕೆ)

10 Dec 2017, 02:14 pm

ಅರಸಿ ಬಾ ನನ್ನ......

ಇನಿಯ ಇನಿಯ
ಎಷ್ಟು ಕಾಡುವೆ
ನೀ ನನ್ನ.....

ಹುಡುಕುತ ಅರಸಿ ಬಾ ಈ
ನಿನ್ನ ಹೃದಯದರಸಿಯನ್ನ....

ಮುತ್ತಿನ ಮನೆಯಲ್ಲಿ
ಮರೆಯಾಗಿರುವೆ ನಗುವಲ್ಲಿ
ಹುಡುಕುತ ಬಾ ನನ್ನ....

ನಿನ್ನೆದೆಯ ಗೂಡಲ್ಲಿ
ಅವಿತು ಕೋಂಡಿರುವೆ
ಜಗವೆಲ್ಲ ಹುಡುಕುತಾ
ಬಾ ನನ್ನ....

ನಿನ್ನುಸಿರ ಉಸಿರೋಳಗೆ
ಮರೆಯಾಗಿರುವೆ
ಮರಗಳ ನಡುವೆ
ಹುಡುಕುತಾ ಬಾ ನನ್ನ......

ನಿನ್ನ ಮನದ ಅರಮನೆಯೊಳಗೆ
ಬಚ್ಚಿಕೋಂಡಿರುವೆ ಅರಮನೆಯಲ್ಲ
ಹುಡುಕುತಾ ಬಾ ನನ್ನ.......

ನಿನ್ನೋಲವ ಪ್ರೀತಿಯಲಿ
ಬಂದಿಯಾಗಿರುವೆ ಬಿಡಿಸಲು
ಬಾ ನನ್ನ ಬಳಿಗೆ.....

ಎಲ್ಲಿ ಹುಡುಕುವೆ ಈ ನೀನ್ನ
ಪ್ರಾಣವನ್ನ ನಿನ್ನೋಳಗೆ
ಬೆರೆತಿರುವೆ ಕಂಡುಕೊ ನನ್ನ.....

ನನ್ನ ಇನಿಯ ಅಲೆದು ಅಲೆದು
ಬಂದು ಸೇರಿಕೊ ನಿನ್ನ ನೀನೆ..........

- ರಾಗಸಿರಿ....

10 Dec 2017, 02:11 pm

ಅರ್ಥವಾಗದ ಬಂಧನ..!!

ತನ್ನೊಳಗಿನ ಭಾವದ ಪರಿಯ ಹಿಡಿಯಲು ಹೋಗಿ ಜಾರಿ ಬಿದ್ದ ಆ ಘಳಿಗೆ‌..
ಮೊಗದ ಹಿಂದಿದೆ ನಾಚಿ ನೀರಾದ ಮನವು
ಸದಾ ನಿನ್ನನ್ನೇ ಪರಿತಪಿಸುವ ಬಯಕೆಯೊಳು ನಾನಿರಲು,
ನಿನ್ನ ಮನದ ಮಾತನ್ನು ‌ನಾ ಹೇಗೆ ತಾನೇ ಕೇಳಲಿ..
ಕೇಳಿದರೂ ಹೇಗೆ ತಾನೇ ವಿವರಿಸಲಿ..!!
ಆ ನಿನ್ನ ವಿಶಾಲ ಮೈಕ್ಕಟ್ಟು,ಗೆದರಿದ ತಲೆ ಕೂದಲು..
ಸದಾ ನಗುವ ಸೂಸುವ ಆ ನಿನ್ನ ಗುಳಿ ಕೆನ್ನೆ..
ಮತ್ತೆ ಮತ್ತೆ ನೋಡ ಬಯಸುವ ಆ ನಿನ್ನ ಸುಂದರ ವದನ..
ಸಾಕಿಷ್ಟು ಅಂತ ಅನಿಸಿದರೂ ಒಳಗೊಳಗೆ ಏನೋ ಕಾಡುವ ಬಯಕೆಗಳು..
ಹೇಳು ನೀನು ಯಾರು..?
ಮನಸ್ಸು ದೋಚಿದ ಇನಿಯನೋ ಅಥವಾ ಹೃದಯಕ್ಕೆ ಹತ್ತಿರವಾದ ಗೆಳೆಯನೋ..!!
ಸ್ನೇಹಕ್ಕೂ ಮಿಗಿಲಾದ ಬಂಧನವಿದೆಯೇ..?ಬಹುಶಃ ಇದ್ದರೂ ಆ ಸಂಬಂಧಕ್ಕೆ ಅರ್ಥವಿದೆಯೇ..??
ತಿಳಿಯದಾಗಿದೆ ನನಗೀಗ ಮುಂದಿನ ಸಾಲುಗಳು..

- ನಮಿತ ಗಟ್ಟಿ

10 Dec 2017, 02:06 pm

ಅಂದದ ಅರಮನೆ...

ಮುಗಿಲಾಚೆ ಹೋಗಿ
ಮಳೇಯ ಹಿಡಿದು ತರಲೆ
ಭುಮಿ ತಾಯಿಯ ಮಡಿಲ
ತಂಪು ಮಾಡೋಕೆ......

ಕಡಲ ಆಳಕ್ಕೆ ಹೋಗಿ
ಮುತ್ತ ಹುಡುಕಿ ತರಲೆ
ಮದನಾರಿಯರಯರ
ಮನವ ಒಲಿಸೋಕೆ.....

ಚಂದ್ರನಂಗಳಕ್ಕೆ ಹೋಗಿ
ತಾರೆಗಳ ಎಣಿಸಿ ತರಲೆ
ನಮ್ಮನೆ ಅಂಗಳ ಸಿಂಗರಿಸೋಕೆ....

ಸ್ಪರ್ಗ ಲೋಕಕ್ಕೆ ಹೋಗಿ
ನಗುವ ಹೋತ್ತು ತರಲೆ
ನಿಮ್ಮಲ್ಲರ ನೋವ ಮರೆಸೋಕೆ......

ನಾಗಲೋಕಕ್ಕೆ ಹೋಗಿ ನಾಗ
ಮಣಿಯ ಕದ್ದು ತರಲೆ
ಜೀವ ಉಳಿಸೋಕೆ.....

ದೇವ ಲೋಕಕ್ಕೆ ಹೋಗಿ
ದೇವರ ಬೇಡಿ ಕರೆತರಲೆ
ಯಲ್ಲರ ಹರಸೋಕೆ.......

ಯಲ್ಲರ ಕರೆತರಲೆ
ಅಂದದ ಅರಮನೆಯ
ಮಾಡಿ ನಲಿಯೋಕೆ ..........

- ರಾಗಸಿರಿ....

10 Dec 2017, 01:18 pm

ದೀಪದ ಬೆಳಕು

ದೀಪದ ಬೆಳಕು
"""""""""" ”"""""""""""'
ಅವಳ ಹಿಂದೆ ಹೋದಾಗ.
ಅವಳು‌ ಕಂಡಳು ತುಪ್ಪದ ದೀಪದಂತೆ.
ಅವಳು ನನ್ನ ಜೀವನದಲ್ಲಿ ಬಂದಾಗ .
ನಾನಾದೆ ಚಂದಿರನ ಬೆಳದಿಂಗಳ ಬೆಳಕಿನಂತೆ .
ಅವಳು‌ ನನ್ನೊಂದಿಗೆ ಇರುವಷ್ಟು ದಿನ
ನಾ ಹೊಳೆದೆ. ರವಿ ಕಿರಣಗಳ ಕಾಂತಿಯಂತೆ.
ಅವಳು‌ ನನ್ನನ್ನು ತೊರೆದು ಹೊದಾಗ
ನಾನಾದೆ ಅಮವಾಸ್ಯೆ ಯ ಕತ್ತಲಿನಂತೆ.

ಜೀವನದಲ್ಲಿ ಬಂದಾಗ ಬೆಳಕನ್ನು
ತಂದವಳು ಅವಳು.
ಬಂದ ದಾರಿಯಲಿ ಪುನಃ ಹಿಂದಿರುಗಿ‌ ಹೊರಟಾಗ .ಅದೇ ದೀಪವನ್ನು ಹಾರಿಸಿ ಹೊಗೆಯನ್ನು ಸ್ರುಷ್ಟಿಸಿ ಹೋದವಳು ಅವಳು.
ಕೊನೆಗೆ ನಾನಾದೆ ಬತ್ತಿಯಿಂದ ಉದುರಿದ ಬೂದಿಯ ತಿರುಳು .

ರಚನೆ = ನೆನಪಿನ ನಾವಿಕ ಸಂತೋಷ್

- ಸಂತೋಷ್//ಜೀತು

10 Dec 2017, 11:13 am