ಹೆದರಿ ಏಕೆ ಕುರಿವೆ ಹಳ್ಳಿಯ ಹುಡುಗನೆಂದು ಈ ಮುಖವಾಡದ ಪಟ್ಟಣದ ಪ್ರಬುದ್ಧರ ಮುಂದೆ.
ಐಷಾರಾಮಿ ಜೀವನದಲ್ಲಿ ಪಾಲುಗಾರಿಕೆ ಪಡೆಯುವಾಸೆ ಇದ್ದಾಗ ನಿನ್ನಲ್ಲಿ ಇವರ ಜೊತೆಗೂಡಿ ,
ಸ್ವಾಭಿಮಾನವನ್ನು ಮೂಲೆ ತಳ್ಳಿ ತಲೆ ಭಾಗಿ ನಿಲ್ಲು, ಇವರ ದುಡ್ಡಿನ ಅಹಂಕಾರದ ಮುಂದೆ ಬಡವನಂತೆ ವಿದ್ಯೆ ಇದ್ದು.
ನಿನ್ನ ಮೂಲ ತಾಯಿಯ ಹೊಟ್ಟೆಯಲ್ಲಿ ,
ನಿನ್ನ ಅಂತ್ಯ ಭೂತಾಯಿಯ ಮಡಿಲಲ್ಲಿ ,
ಮಧ್ಯದಲ್ಲಿ ಭಯವೇತಕೆ ಈ ಜನರ
ಯಾಂತ್ರಿಕ ಜೀವನದಲ್ಲಿ.
ಮುರುಕು ಹಳ್ಳಿಯಿಂದ ಬಂದರೆನು?
ಮರುಕ ಮನಸ ನಿನ್ನ ಎದೆಯಿಂದೆ ತೊಟ್ಟರೇನು? ಬಾಳು ನೀನು ಧೈರ್ಯವಾಗಿ ಈ ಖಾದಿಮರ ಗುಂಪಿಗೆ ದೂರವಾಗಿ.
ನೀ ಹುಟ್ಟಿದ ಉದರದಲಿ
ಹುಟ್ಟಿದ ಕುಡಿ ಇವಳು
ನೀ ಕುಡಿದು ಬಿಟ್ಟ
ಎದೆ ಹಾಲು ಕುಡಿದವಳು
ನೀ ತೋಟ್ಟುಬಿಟ್ಟ
ಅಂಗಿಯ ತೋಟ್ಟವಳು
ಬೆಂಬಿಡದೆ ನಿನ್ನ ಬೆನ್ನ ಹಿಂದೆ ಬರುವ
ನಾ ನಿನ್ನ ಒಡಹುಟ್ಟಿದವಳು
ಚಿಕ್ಕಂದಿನಲ್ಲಿ,ಆಡಿದ ದಿನಗಳ
ಮರೆಯಲಿ ಹೇಗೆ ನಿನ್ನ ಮಮತೆಯ ಮಡಿಲ
ಕೂಸುಮರಿ ಮಾಡಿ
ಕೈ ತುತ್ತು ನೀಡಿ
ಕೈ ಹಿಡಿದು ನೆಡೆಸಿದೆ
ಬಿಳದಂತೆ ನನಗೆ ಆಸರೆಯಾದೆ
ಅಣ್ಣಾ ನನ್ನ ಬಾಳಿನ ಬೆಳಕು ನೀನಾದೆ
ನಾ ನಿನ್ನ ಮಡಿಲಲಿ ಮಗುವಾದೆ
ನನ್ನ ಚಿಕ್ಕ ಚಿಕ್ಕ ಜಯಗಳನು
ನೋಡಿ ವಿಜೃಂಬಿಸಿದೆ ನೀನು
ನನ್ನ ಸಂತೋಷವ ಕಂಡು
ಕುಣಿದಾಡಿದವನು
ತಂದೆಗಿಂತ ಹೆಚ್ಚು ಮಮತೆಯ ನೀಡಿದವನು
ಕಣ್ಣೀರು ಬರದಂತೆ ನೋಡಿ ಕೊಂಡವನು
ನನ್ನ ತವರಿನ ಐಸಿರಿಯು ಇವನು
ಅವನೇ ನನ್ನ ಒಡಹುಟ್ಟಿದವನು....
ನನ್ನನ್ನು ಹೇಗೆ,ಬಿಟ್ಟಿರುವೇಯೋ ನಾ ಕಾಣೆ
ನಿನ್ನ ಕಣ್ಣಲ್ಲಿ ಕಣ್ಣೀರು ಬಂದರೇ ನನ್ನಾಣೆ
ಮರೆಯದಿರು ಅಣ್ಣನ ತವರಿದೆ ನಿನಗೆ
ಎಂಬ ಮಾತಿನ ನೋವು ತಿಳಿದಿದೆ ನನಗೆ
ನಿನ್ನ ಪ್ರೀತಿಯ ಗೂಡು ಬಿಟ್ಟು ಹೋರಟಿರುವೆ..
ಮನದಲ್ಲಿ ನಿನ್ನ ಮಮತೆಯ ಹೋತ್ತು,ಮದುವೆ ಎಂಬ
ಮೂರಕ್ಷರದ ಜೋತೆಗೆ
ಹರಸಿ ನಲಿವಿರಲೆಂದು ನನ್ನ ತವರು ಮನೆಗೆ..
ನಿನ್ನ ಆಶಿವಾ೯ದ ಇರಲಿ ನನಗೆ,ನನ್ನ ಕಡೆವರೆಗೆ
ಹಬ್ಬದ ಹೊಸತನ ಸಖ ಸಂತೋಷದ ಸಡಗರ
ಅನ್ನ ನೀಡಿ ಹಾರೈಸುವವರ ಜೊತೆ
ಸಂಬಂಧದ ಬಂಧಗಳು,ನೋವು ನಲಿವುಗಳು
ದೇಶದ ನವ ಪೀಳಿಗೆಯಾ ಜೊತೆ
ದೇಶದ ಏಳಿಗೆಯಲೀ, ಕಾಯಕವೇ ಕೈಲಾಸ ನಮ ಧರ್ಮ
ಚಾಲಕರು ಅಣ್ಣಾ ನಾವೇ ಚಲಿಕರು