Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಲಾಲಿಹಾಡು

ಅಮ್ಮ ಮತ್ತೆ ಮತ್ತೆ ಏಕೋ ನೆನಪಾಗುತಿದೆ ಲಾಲಿಹಾಡು
ನಿನ್ನ ಮಡಿಲಲಿ‌ ಮಲಗಿ ಕೇಳಬೇಕೆನಿಸುತಿದೆ ಲಾಲಿಹಾಡು

ಸ್ವರ ಅಪಸ್ವರ ಏನನ್ನೂ ತಿಳಿಯದೆ ನೀ ಹಾಡಿದರೂ ಹಾಡು
ಅದಕ್ಕೆ ಸಾಟಿ ಯಾವುದೂ ಸಿಗದೆ ಮನಸ ಕಾಡುತಿದೆ ಲಾಲಿಹಾಡು

ಚಡಪಡಿಸಲು ಸಾವಿರ ನೋವುಗಳೇ ಇದ್ದರು ಮನಸಲಿ
ನೀ ತಲೆ ಸವರಿ ಹಾಡಿದರೆ ನೋವು ಕೂಡ ಮರೆಸುತದೆ ಲಾಲಿಹಾಡು

ಕಂದನಾಗುವಾಸೆಯಾಗಿ ಎನಗೆ ಮತ್ತೊಮ್ಮೆ ನಿನ್ನ ಮಡಿಲೊಳಗೆ
ಬೇಕು ಬೇಡಗಳ ಅರಿವಿರದೆ ನಗುವಾಸೆಯಾಗಿ ನೆನಪಾಗಿದೆ ಲಾಲಿಹಾಡು

ಪ್ರಪಂಚದಲೇ ತಾಯಿ ಮಡಿಲು, ಲಾಲಿಹಾಡಿಗಿಂತ ಸುಖವಿರಬಹುದೇನೊ
ಆದರೆ ಬೇರೇನು ಬೇಡವಾಗಿದೆ, ಮನಸು ಗುನುಗುತ್ತಿದೆ ಲಾಲಿಹಾಡು

ಮತ್ತೆ ಸೇರುವೆ ಮಗುವಂತೆ ನಿನ್ನ ಪುಟ್ಟ ಮಡಿಲೊಳಗೆ
ಈ ಕಾವ್ಯಳ ಮುದ್ದಿಸಿ, ನಗಿಸಿ ನೀನು ಹಾಡಲಾಗುವುದೆ ಲಾಲಿಹಾಡು

- ಶ್ರೀಕಾವ್ಯ

22 Dec 2017, 01:19 am

ಜನ್ಮ ದೇವತೆ

"ನನ್ನ ಮುದ್ದು ಅಮ್ಮ
ನಿನ್ನ ಮಮತೆಯ ಮರೆಯಲ್ಲಿ ಸಾಗುತ್ತಿರುವೆ
ನಿನ್ನ ಕಂದ ನಾ ಅಮ್ಮ

"ನಿನ್ನ ಪ್ರೀತಿಯ ಪ್ರಣತೆಯಲಿ
ಬೆಳೆಯುತ್ತಿರುವ ಚಂದಿರ
ನಿನ್ನ ಕಂದ ನಾ ಅಮ್ಮ

"ನಿನ್ನ ಕರುಣೆಯ ಕೈಗನ್ನಡಿಯಲ್ಲಿ
ಹೊಳೆಯುತ್ತಿರುವ ನಕ್ಷತ್ರ
ನಿನ್ನ ಕಂದ ನಾ ಅಮ್ಮ

"ನೀ ಕಾಡಿಸಬೇಡ, ನೋಯಿಸಬೇಡ,
ನನ್ನ ಒಬ್ಬಂಟಿ ಮಾಡಿ ದೂರ ಹೋಗುವೆಯ
ನಿನ್ನ ಕಂದ ನಾ ಅಮ್ಮ

ನೀ ಕೊರಗಬೇಡ, ಮರುಗಬೇಡ
ಕಣ್ಣೀರಡಬೇಡ, ನಾ ನಿನೊಂದಿಗಿರುವೆನು ಅನುಗಾಲ
ನಿನ್ನ ಕಂದ ನಾ ಅಮ್ಮ.......

- ರಾಜು ಹಾಸನ

21 Dec 2017, 10:42 pm

ನೋವು

ಮನುಜನೆಂಬ‌ ಪ್ರಾಣಿಯೊಂದು
ಹ್ರುದಯ ಓಡೆದು‌.
ಗೀಜುಗನ ಗೂಡಲ್ಲಿ ಸಿಲುಕಿದಂತೆ‌.
ನುಸುಳಿ‌ ಹೆಸಳನ್ನು ಕಿತ್ತೊಗೆದು
ಮುಗಿಲೆತ್ತರಕ್ಕೆ ಹಾರಲಾರಂಬಿಸಿದ ಕ್ಷಣ.
ರೆಕ್ಕೆ ಮುರಿದು ಪಕ್ಕೆಯೊಡೆದು .
ಪುಕ್ಕ ಎಡೆದು‌ .ಬಿರುಗಾಳಿಗೆ ಸಿಲುಕಿ.
ಧರೆಗೆ ಕಸವಾಗಿ.ಹಸಿದ ಪ್ರಾಣಿಗಳಿಗೆ ಆಹಾರವಾಗಿ.
ಮಡಿದ‌ ಹ್ರುದಯದ ವ್ಯತೆಯ ಹೇಳುತಿರುವೆ ನಾನಿಂದು .

( ನೆನಪಿನ ನಾವಿಕ ಸಂತೋಷ್ )

- ಸಂತೋಷ್//ಜೀತು

21 Dec 2017, 09:16 pm

ನಮ್ಮುರ ಚೆಲುವೆ......

ನಮ್ಮುರ ಚೆಲುವೆ
ಇವಳು ನಡೆದರೆ
ಹುಡುಗರೆಲ್ಲ ಇವಳಿಂದೆ
ಇವಳು ನಕ್ಕರೆ ಮುದುಕರೆಲ್ಲ
ಇವಳ ಮುಂದೆ
ಇವಳು ಕಾಲ್ಗೆಜ್ಜೆ ಸದ್ದಿಗೆ
ಎಲ್ಲರೆದೆಯಲ್ಲ ಡವಡವ
ಇವಳ ನಡುವು ಕಂಡರೆ
ಮನಸೆಲ್ಲ ವಿಲವಿಲ
ಇವಳ ಕಣ್ಣ ನೋಟಕ್ಕೆ
ಪಡ್ಡೆ ಹೈದರೆಲ್ಲ ಬಿದ್ದರಲ್ಲೆ
ಇವಳಾಡೋ ಮಾತಿಗೆ
ಯುವಕರೆಲ್ಲ ಮರುಳಾದರಲ್ಲೆ
ಕೋನೆಗೆ ಎಲ್ಲರ ಪಾಳು
ಬಾವಿಗೆ ನೂಕಿ
ಸಿಟಿ ಹುಡುಗನ ಕೈ
ಹಿಡಿದು ಉರು ಬಿಟ್ಟ ನಲ್ಲೆ.....
ನಮ್ಮುರ ಚೆಲುವೆ....

- ರಾಗಸಿರಿ....

21 Dec 2017, 08:37 pm

ಕೊಲ್ಲುವುದಾದರೆ ಕೊಂದುಬಿಡು

"ಕುಡಿ ನೋಟಕ್ಕೆ ನಾಚಿ
ನಾಚಿಕೆಯ ಪ್ರೀತಿಯ
ಮುತ್ತು ಸುರಿಸಿ
ಅಂಜಿಕೆಯ ನುಡಿ ನುಡಿದು
ನನ್ನ ಹೃದಯದಲ್ಲಿ
ಪ್ರೀತಿಯ ಬೀಡು ಬಿಟ್ಟು
ನನ್ನ ಮನಸಲ್ಲಿ
ಪ್ರೀತಿಯ ರಂಗೋಲಿ ಇಟ್ಟವಳೇ ನೀ ಗೆಳತಿ.

"ಏಕೆ......
ನನ್ನ ಮುದ್ದುಗೆಳತಿ ಆಡುತ್ತಿರುವೆ
ಹೃದಯಾದ ಬಡಿತ ನಿಲ್ಲಿಸೋ
ಚುಚ್ಚು ಮಾತುಗಳನಾ,

"ಚುಚ್ಚು ಮಾತುಗಳಿಂದ
ಚುಚ್ಚಿ ಚುಚ್ಚಿ...........
ಕೊಲುತ್ತಿರುವೇ ಏಕೆ... ಹೇಳೇ
ನನ್ನ ಹೃದಯಾದ ದೇವತೆ,

"ಕೋಲುವೆಯಾ
ಕೊಂದುಬಿಡು ಗೆಳತಿ ನಿನ್ನ ಕೈಯಾರೇ
ನಿನ್ನ ಮನಸಾರೆ ಪ್ರೀತಿಸಿದ
ನನ್ನ ಹೃದಯನಾ,

"ಕೋಲುವಾ ಮುನ್ನ ತಿಳಿಯೇ
ನಾ ಮನಸಾರೆ ಪ್ರೀತಿಸುತ್ತಿರುವೆ
ನಿನ್ನ ಕೈ ಹಿಡಿದು ಹಸೆಮಣೆ ಏರಿ
ಸಪ್ತಪದಿ ತುಳಿಯುವಾ ಘಳಿಗೆಗಾಗಿ,

"ನಾ ಸತ್ತರು ಚಿಂತೆಯಿಲ್ಲ
ನೀ ಇಲ್ಲದ ಈ ಲೋಕದಲ್ಲಿ
ಏಕೆ ಮೌನವಾಗಿರುವೇ
ನನ್ನ ಪ್ರತಿಯ ದೇವತೆ...............ಹೇಳು.

***ರಾಜು ಗುಡಿ***ಹಾಸನ

- ರಾಜು ಹಾಸನ

21 Dec 2017, 03:48 pm

ಮರೆತಿದ್ದೆವೆ ನಾವು

ಮರೆತ್ತಿದ್ದೆವೆ ನಾವು ಹಳೆಯ ಪದ್ದತಿಗಳನ್ನು

ಬಿಸುವ ಕಲ್ಲಿನ ರಬಸವನ್ನು
ಒನಕೆಯ ಮಿಡಿತದಲ್ಲಿರುವ ಗಟ್ಟಿತನವನ್ನು
ರಂಟೆ ಕುಂಟೆಗಳ ನಂಟನ್ನು
ಮರೆತ್ತಿದ್ದೆವೇ ನಾವು ಮರೆತ್ತಿದ್ದೆವೆ

ಮಂಜಿನ ಹನಿಗಳ ನಡುವೆ ಕೆಲಸಕ್ಕೆ ಹೋಗುವ ಜನರನ್ನು
ಗರತಿಯರ ಬಾಯಲ್ಲಿ ಬರುವ ಜನಪದ ಹಾಡುಗಳನ್ನು
ಡೊಳ್ಳು ಕುಣಿತ ವೀರಗಾಸೆಯಂತಹ ಕಲೆಗಳನ್ನು
ಮರೆತ್ತಿದ್ದೆವೆನಾವು ಮರೆತ್ತಿದ್ದೆವೆ

ಗೌರಿ ಹಬ್ಬದಲ್ಲಿ ರೇಷ್ಮೆಯ ಸೀರೆ ಉಟ್ಟು ಬರುವ ಚಲುವೆಯರನ್ನು
ಅದನ್ನು ನೋಡಲು ಕುಳಿತ ಹುಡುಗರ ಗುಂಪನ್ನು ಕಣ್ಸನ್ನೆ ಮೂಲಕ ಉಂಟಾಗುವ ತುಂಟ ಪ್ರೀತಿಯನ್ನು
ಮಾತು ಕತೆಗಳೊಲಿಲ್ಲದೆ ಅನುಭವಿಸುವ ವಿರಹ ವೇದನೆಯನ್ನು
ಮರೆತ್ತಿದ್ದೆವೆ ನಾವು ಮರೆತ್ತಿದ್ದೆವೆ.

ಅಜ್ಜ ಅಜ್ಜಿಯರು ಕತೆ ಹೇಳುವ ರೀತಿಗಳು
ಹಬ್ಬ ಹರಿದಿನಗಳಲ್ಲಿನ ಆಟೋಟಗಳು
ದೊಡ್ಡಾಟ ಬಯಲಾಟ ನಾಟಕಗಳು ಅಳಿವಿನಂಚಿನಲ್ಲಿ ಇವೆ ಇವು ಅಳಿವಿನಂಚಿನಲ್ಲಿವೆ..


.ಅಮರ್ತ್ಯ ಮಾರುತಿ ಯಾದವ್..

- ಅಮರ್ತ್ಯ ಮಾರುತಿ

21 Dec 2017, 02:06 pm

ಒಳ್ಳೆಯವರು ನಮ್ಮ ಜನ

ತುಂಬ ಒಳ್ಳೆಯವರು ನಮ್ಮ ಜನ ತುಂಬ ಒಳ್ಳೆಯವರು

ತನ್ನ ಪಕ್ಕದಲ್ಲೆ ಸತ್ತರು ತಿರುಗಿ ನೋಡದವರು
ನಮಗೆ ಯಾಕೆ ಬೇಕೆಂದು ಸುಮ್ನೆ ಹೋರಡುವರು
ತಮಗೆ ಅದೇ ರೀತಿಯಾದಗ ಅಳುಕಿ ಅಂಜುವರು
ಒಳ್ಳೆಯವರು ಜನ ಒಳ್ಳೆಯವರು....

ಪುಕಸಟ್ಟೆ ದುಡ್ಡಿಗೆ ಬಾಯ್ ಬೀಟ್ಟು ಕೂರುವರು
ಆದರೂ ದಾನ ಮಾಡದ ಮನಸ್ಸೇ ಇಲ್ಲದವರು
ಕಾಗೆಗೂ ಕೂಡ ಅನ್ನ ಹಾಕದವರು..
ಸಿಕ್ಕಪಟ್ಟೆ ಅನ್ನವನ್ನು ಎಲ್ಲಿಯಂದರಲ್ಲಿ ಚೆಲ್ಲುವರು
ಒಳ್ಳೆಯವರು ಜನ ತುಂಬ ಒಳ್ಳೆಯವರು..

ಕಾಲಕ್ಕೆ ತಕ್ಕಂತೆ ವೇಷವನು ಹಾಕುವರು
ಬಾಯ್ತುಂಬ ಸುಂದರ ಮಾತುಗಳನ್ನು ಹಾಡುವರು
ಏನು ಅರಿಯದ ಜನರ ತಲೆಯನ್ನು ಕೇಡಿಸುವರು
ತಮ್ಮ ಕೆಲಸ ವಾಗುವ ವರೆಗೂ ಪಾಪ ಪುಣ್ಯ ಅನ್ನುವರು
ಒಳ್ಳೆಯವರು ಜನ ತುಂಬ ಒಳ್ಳೆಯವರು




.ಅಮರ್ತ್ಯ ಮಾರುತಿಯಾದವ್..

- ಅಮರ್ತ್ಯ ಮಾರುತಿ

21 Dec 2017, 01:41 pm

""ಚಿಲಿ ಪಿಲಿ""

"ಸುಂದರವಾದ
ಬೆಳ್ಳಿ ಮೋಡಗಳ,ಬೆಟ್ಟ ಗುಡ್ಡಗಳ ನಡುವೆ
ಕಾವೇರಿ ತಾಯಿಯ ಮಡಿಲಲ್ಲಿ
ಸಿರಿ ಉಡುಗೆ ತೊಟ್ಟು ನಿಂತ್ತಿದೆ
ನನ್ನ ಜ್ಞಾನ ದೇಗುಲ,

"ಮುಂಜಾನೆಯ ಮಂಜಲಿ
ತಂಗಾಳಿಯ ಸುಳಿಯಲ್ಲಿ
ಸೂರ್ಯನ ಹೊಂಗಿರಣದಂತೆ
ಪ್ರಜ್ವಲಿಸುತ್ತಿದೆ ಜ್ಞಾನ ಮಂಟಪ
ನನ್ನ ಜ್ಞಾನ ದೇಗುಲ,

"ಒಂದಾನೊಂದು ಕಾಲದಲ್ಲಿ
ರೆಕ್ಕೆ ತೆರೆದು ಚಿಲಿ ಪಿಲಿ ಎಂದು
ಸ್ವಚಂದವಾಗಿ ಹಾರಡಿದೆವು
ಮಮತೆಯ ಮಂದಿರ ಜ್ಞಾನ ಬಂಡಾರದಿ,

***ರಾಜು ಗುಡಿ***ಹಾಸನ

- ರಾಜು ಹಾಸನ

21 Dec 2017, 12:16 pm

ಅಪ್ಪನೆನಿಸಿಕೊಂಡ ಆ ಕ್ಷಣ

ಹೇಗೆಂದು ವರ್ಣಿಸಲಿ ಅಪ್ಪನೆನಿಸಿಕೊಂಡ ಆ ಕ್ಷಣವನು
ಬಹು ಕಾಲದ ಆಸೆಯ ನೆರವೇರಿಸಿ
ಅಂದು ನೀ ಕೊಟ್ಟೆ ಸಹಿ ಸುದ್ಧಿಯ
ಜೇನಿಗಿಂತಲು ಮಿಗಿಲಾದ ಮನಸ್ಸಿಗೆ ಹಿತವಾದ ಖುಶಿಯನು
ನಮ್ಮಿಬ್ಬರ ಪ್ರೀತಿ ತುಂಬಿರಲು ನಿನ್ನುಧರದಲಿ
ನಾನೆ ಧನ್ಯನು ಇಂದು
ಎದೆಬಡಿತ ಕೇಳಿದ ಆ ಕ್ಷಣ ಮೈಯ್ಯಲೇನೋ ರೋಮಾಂಚನ
ಕಂಡು ಮಗುವಿನ ಚಲನವಲನ ತುಂಬಿತ್ತು ಎನ್ನ ಮನ
ಮರೆಯಲಾರೆ ಎಂದೆಂದಿಗೂ ಈ ನೀನಿತ್ತ ಉಡುಗರೆಯ
ಧನ್ಯವಾದಗಳು ನಿನಗೆ ಓ ನನ್ನ ನಲ್ಲೆ

- ರಘು

21 Dec 2017, 11:55 am

ಮುಂಜಾನೆ ಮಂಜಿನಲಿ

ಕನಸಿನಲಿ ಕಂಡ ನಿನ್ನ ಮೊಗವ
ಕಂಡೆ ನಾ ಮುಂಜಾನೆಯ ಮಂಜಿನಲಿ
ಏನೆಂದು ಹೇಳುವುದು ಚೆಲುವೆ
ನಕ್ಷತ್ರದ ಹೊಳಪು ಮೀರುವಂದದಿ
ಬಾನ ಬೆಳದಿಂಗಳ ಚಂದಿರನ ನಾಚುವಂದದಿ

ರಘು

- ರಘು

21 Dec 2017, 11:14 am